Tuesday, December 23, 2014


ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ 


ಚಿಕ್ಕನಾಯಕನಹಳ್ಳಿ,: ಸುಪ್ರಿಂ ಕೋಟರ್್ನ ನೇಮಿಸಿದ ಸಿ.ಇ.ಸಿ.ಶಿಫಾರಸ್ಸಿನಂತೆ, ತಾಲ್ಲೂಕಿನ ಗಣಿ ಭಾದಿತ ಪ್ರದೇಶಗಳಿಗೆ ಕೇಂದ್ರ ಸಕರ್ಾರ 94.77 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಕೃಷಿ ಇಲಾಖೆಗೆ 3.54 ಕೋಟಿ ರೂ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕೃಷಿ ಇಲಾಖಾ ವತಿಯಿಂದಿ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ರೈತರಿಗಾಗಿ ರೈತರಿಂದ ರೈತರಿಗೋಸ್ಕರ 2014ನೇ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಅನುದಾನ ಒಂದು ವರ್ಷದ ಅವಧಿಗೆ ನೀಡಿದ್ದು, ಈ ಹಣದಲ್ಲಿ ಕೃಷಿ ಇಲಾಖೆಯಿಂದ ಚೆಕ್ಡ್ಯಾಂ, ಹಿಂಗುಗುಂಡಿ, ತಡೆಅಣೆ ನಿಮರ್ಿಸುವ ಮೂಲಕ ಬಿದ್ದ ಮಳೆಯನ್ನು  ಹಿಂಗಿಸಲು ಸಹಾಯವಾಗುತ್ತದೆ ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದರು.
ರೈತರು ದೇಶದ ಬೆನ್ನೆಲುಬು ರೈತರಿಲ್ಲದೆ ಬದುಕಲು ಸಾಧ್ಯವಿಲ್ಲ, ಶೇ.80ರಷ್ಟು ರೈತರು ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಡಿಸಿಕೊಂಡಿದ್ದಾರೆ ಸಕರ್ಾರ ರೈತರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಯಂತ್ರೋಪಕರಣ ಹಾಗೂ ಔಷಧಿ, ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಇದರ ಉಪಯೋಗ ಪಡೆಯುವಂತೆ ಸಲಹೆ ನೀಡಿದ ಅವರು, ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಮ್ಮ ಹಿಂದಿನ ಕೃಷಿ ಪದ್ದತಿಯನ್ನು ಅವಲಂಬಿಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು ಸಕರ್ಾರ ರೈತರಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮೂಲಕ ಶೇ.75ರಷ್ಟು ಹಣ ನೀಡುತ್ತಿದೆ ಉಳಿದ ಶೇ.25 ರಷ್ಟು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿನಿಯೋಗಿಸಿ ರೈತರಿಗೆ ಯಂತ್ರೋಪಕರಣವನ್ನು ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ನೀಡುತ್ತಿದೆ, ರೈತರು ಇದರ ಉಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಯುವುದರಿಂದ ಶಟ್ಟಿಕೆರೆ, ಹಂದನಕೆರೆ, ಕಸಬಾ ಹೋಬಳಿಗಳಿಗೆ ಕುಡಿಯುವ ನೀರು ಲಭಿಸಲಿದೆ ಮಹಿಳೆಯರಿಗೆ ಕೃಷಿ ಹಾಗೂ ಡೈರಿ ನಡೆಸಲು ಹಸುಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳಲಾಗುತ್ತದೆ, ಇದರಿಂದ ಮಹಿಳೆಯರು ತಮ್ಮ ಕುಟುಂಬಗಳ ಆಥರ್ಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಕರ್ಾರ ರಾಗಿ, ಭತ್ತಕ್ಕೆ ಬೆಂಬಲ ಬೆಲೆ ನೀಡಲು ತೀಮರ್ಾನಿಸಿದೆ, ಬಿಳಿಗೆರೆ, ದೊಡ್ಡ ಎಣ್ಣೆಗೆರೆ, ಕಾತ್ರಿಕೆಹಲ್ನಲ್ಲಿ ವಿದ್ಯುತ್ ಉಪಸ್ಥಾವರಗಳನ್ನು ನಿಮರ್ಿಸಿ ಕಾಯರ್ಾರಂಭ ಮಾಡಿದ್ದು ಸಾಲ್ಕಟ್ಟೆ ಬಳಿ ವಿದ್ಯುತ್ ಸೆಬ್ ಸ್ಟೇಷನ್ ಮಾಡಲು ಸಕರ್ಾರ ಮಂಜೂರಾತಿ ನೀಡಿದೆ ಇದರಿಂದ ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ಕಡಿಮೆಯಾಗಲಿದೆ ಎಂದರು.
ಕೃಷಿ ತಜ್ಞಾ ಡಾ||ಕೆ.ಜಿ.ಬೋರಯ್ಯ ಮಾತನಾಡಿ ರೈತರು ಬೇಸಾಯ ಮಾಡುವಾಗ ನಾಲ್ಕು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಮಾಗಿ ಉಳುಮೆ ಮಾಡಿ,  ಬಿಜೋಪಚಾರ, ನೀರು ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಬಿಜೋಪಚಾರ ಮಾಡಿದರೆ ಫಸಲಿಗೆ ಮುಂದೆ ಬರುವಂತಹ ರೋಗ ಹಾಗೂ ಮಳೆ ಕಡಿಮೆಯಾದರೂ ಸಹ ಪೈರು ತಡೆಯುತ್ತದೆ. ಮಳೆ ನೀರು ಸಂರಕ್ಷಣೆ ಮಾಡುವುದರಿಂದ ಭೂಮಿಯಲ್ಲಿ ನೀರು ಹಿಂಗಿ ಅಂತರ್ಜಲ ಹೆಚ್ಚುತ್ತದೆ. ರೈತರು ತಮ್ಮ ಹೊಲಗಳಲ್ಲಿ ಬೆಳೆದ ಮಣ್ಣು ಕೊಚ್ಚಿಕೊಂಡು ಹೋಗದಂತೆ ನೋಡಿಕೋಳ್ಳಬೇಕು ಇದಕ್ಕೆ ರೈತರಿಗೆ ಆಸಕ್ತಿ ಇರಬೇಕು ಎಂದರು.
ಕೃಷಿ ತಜ್ಞ ಡಾ.ಪಾಲಣ್ಣ ಮಾತನಾಡಿ ರೈತರು ತಾವು ಬೆಳೆದ ಬೆಳೆಗೆ ರೋಗ ಬಂದಾಗ ಔಷಧಿ ಸಿಂಪಡಿಸುವುದು. ಮುಖ್ಯವಾಗಿ ಅದು ಹೇಗೆ ಬಂದಿದೆ ಇದ್ಕಕೆ ಪರಿಹಾರವೇನು ಎಂದು ಕೃಷಿ ತಜ್ಞರ ಜೊತೆಯಲ್ಲಿ ಚಚರ್ಿಸಿ ಪರಿಹಾರ ಪಡೆದುಕೊಳ್ಳುವಂತೆ ಸೂಚಿಸಿದರು, ರೈತರು ಬೆಳೆ ಬೆಳೆಯುವ ಮುನ್ನ ತಮ್ಮ ಜಮೀನಿನಲ್ಲಿರುವ ಮಣ್ಣನ್ನು ಪರಿಕ್ಷಿಸಿ ಬೆಳೆ ಬೆಳೆಯುವುದರಿಂದ ರೈತರಿಗೆ ಅನೂಕೂಲದ ಜೊತೆಯಲ್ಲಿ ಆಥರ್ಿಕವಾಗಿ ಲಾಭ ಹೊಂದಬಹುದು ಎಂದರಲ್ಲದೆ  ಕೃಷಿ ಭೂಮಿ ಕಡಿಮೆಯಾಗುತ್ತಿದ್ದು ಹೆಚ್ಚು ಹೆಚ್ಚು ಆಹಾರ ಬೆಳೆಯುವ ರಭಸದಲ್ಲಿ ರಸಗೊಬ್ಬರವನ್ನು ಹಾಕುವುದರಿಂದ ಭೂಮಿ ಬರಡಾಗುವುದರ ಜೊತೆಯಲ್ಲಿ ಬೆಳೆಗಳಿಗೆ ರೋಗಗಳು ಹೆಚ್ಚಾಗುತ್ತವೆ ಸಾವಯವ ಗೊಬ್ಬರ ಬಳಕೆ ಕಡಿಮೆಯಾಗುವುದರಿಂದಲೂ ಬೆಳೆಗಳಿಗೆ ಕೀಟಬಾಧೆ ಜಾಸ್ತಿಯಾಗುತ್ತದೆ ಎಂದರು.
     ಸಹಾಯಕ ಕ್ಷéಷಿ ಉಪನಿದರ್ೇಶಕ ಹೆಚ್.ಹೊನ್ನೇದಾಸೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ,  ಚೌದ್ರಿ ಚರಣ್ಸಿಂಗ್ ಭೂ ಸುಧಾರಣೆಯಂತಹ ಕಾರ್ಯಕ್ರಮಗಳನ್ನು ತಂದಿದ್ದಾರೆ,  ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಅನೇಕ ಕೃಷಿಗೆ ಸಂಭಂದಿಸಿದ ಪುಸ್ತಕಗಳನ್ನು ರಚಿಸಿದ್ದಾರೆ, ಇವರ ಜನ್ಮ ದಿನಾಚರಣೆ ಅಂಗವಾಗಿ ಕೃಷಿ ಉತ್ಸವ ಹಾಗೂ ರೈತರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
     ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ ,ಲತಾ ವಿಶ್ವೇಶ್ವರಯ್ಯ, ಕವಿತಾಪ್ರಕಾಶ್, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಟರಾಜ್, ಉಪಾದ್ಯಕ್ಷ ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. 
  ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಕಾಂತರಾಜ್, ಬಿ.ಎನ್.ಲೋಕೇಶ್, ಜಗದಾಂಬ, ಬಸವರಾಜುರವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಎ.ಪಿ.ಎಂ.ಸಿ ಸದಸ್ಯರ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ 

ಚಿಕ್ಕನಾಯಕನಹಳ್ಳಿ,ಡಿ.23 : ತಾಲ್ಲೂಕಿನ ಎ.ಪಿ.ಎಂ.ಸಿ ಸದಸ್ಯರು ಸಕರ್ಾರದ ವತಿಯಿಂದ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ ತೆರಳುವ ಮುನ್ನ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿರವರ ಮಾರ್ಗದರ್ಶನ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದರು. 
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಉತ್ತರ ಭಾರತದಲ್ಲಿನ ಕೃಷಿ ಮಾರುಕಟ್ಟೆಗಳು ಉತ್ತಮವಾಗಿವೆ ಅಲ್ಲಿನ ಸೇವೆಗಳು ಜನರಿಗೆ ಹತ್ತಿರವಾಗಿದ್ದು ಅಲ್ಲಿನ ಸೇವೆಗಳನ್ನು, ಆಡಳಿತವನ್ನು ತಿಳಿದು ಉತ್ತಮವಾಗಿರುವುದನ್ನು ಚಿಕ್ಕನಾಯಕನಹಳ್ಳಿಗೆ ಜನತೆಗೆ ನೀಡುವಂತೆ ಎ.ಪಿ.ಎಂ.ಸಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಎ.ಪಿ.ಎಂ.ಸಿ ಸದಸ್ಯ ಶಿವರಾಜು ಮಾತನಾಡಿ, ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಎರಡು ವರ್ಷಗಳಾಗಿದ್ದು ಜನತೆಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ, ಉತ್ತರ ಭಾರತ ರಾಜ್ಯಗಳಾದ ದೆಹಲಿ, ಚಂಡಿಗಡ, ಜೈಪುರ, ರಿಶಿಕೇಶ, ಆಗ್ರ, ಹರಿದ್ವಾರ, ಅಮೃತಸರ, ಪ್ರದೇಶಗಳ ಕೃಷಿ ಮಾರುಕಟ್ಟೆಗಳ ಅಧ್ಯಯನಕ್ಕಾಗಿ ಹಾಗೂ ಪ್ರವಾಸವಕ್ಕಾಗಿ 15ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು ಈ ಪ್ರವಾಸಕ್ಕಾಗಿ ಮಾಜಿ ಶಾಸಕರು ಹೆಚ್ಚು ಬೆಂಬಲ ವ್ಯಕ್ತಪಡಿಸಿದ್ದರಲ್ಲದೆ ಅವರ ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಸಣ್ಣಯ್ಯ, ದ್ರಾಕ್ಷಾಯಣಮ್ಮ, ಸಿಂಗದಹಳ್ಳಿ ರಾಜ್ಕುಮಾರ್  ಮತ್ತಿತರರು ಉಪಸ್ಥಿತರಿದ್ದರು

Monday, December 22, 2014

ಜಿಲ್ಲೆಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ
ಚಿಕ್ಕನಾಯಕನಹಳ್ಳಿ,ಡಿ.22 :  ಜಿಲ್ಲೆಯ ಮೂರು ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕುಗಳಿಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ ರೂಪಾಯಿ ಬಿ  
ಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
    ಪಟ್ಟಣದ ತಾಲ್ಲೂಕು ಕಛೇರಿಯ ಸಭಾಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ 157.88 ಕೋಟಿ ರೂಪಾಯಿಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಶೇಕಡ 60 ರಷ್ಟು ಅಂದರೆ 95.77ಲಕ್ಷ ರೂಗಳು ಬರಲಿದೆ. ತಿಪಟೂರು ಹಾಗೂ ಗುಬ್ಬಿ ತಾಲ್ಲೂಕುಗಳಿಗೆ ತಲಾ ಶೇಕಡ 20 ರಷ್ಷು ಹಣ ಬಿಡುಗಡೆಯಾಗಿದೆ ಎಂದರು.
ಅಧಿಕಾರಿಗಳು ತಾಲ್ಲೂಕಿನ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುವಂತೆ  ಅಧಿಕಾರಿಗೆ ಸಲಹೆ ನೀಡಿದರಲ್ಲದೆ  ಸಮಯಕ್ಕೆ ಸರಿಯಾಗಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾದ ವರದಿ ನೀಡಿದರೆ ಪ್ರತಿ ವರ್ಷ 400 ರಿಂದ 500 ಕೋಟಿ ರೂ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಗೆ  5 ಕೋಟಿ 74 ಲಕ್ಷ ಬಿಡುಗಡೆಯಾಗಿದ್ದು ಈ ಹಣದಲ್ಲಿ ಹೆಚ್ಚುವರಿ ಶಾಲಾ ಕೊಟ್ಟಡಿ ನಿಮರ್ಾಣಕ್ಕೆ 3ಕೋಟಿ 80 ಲಕ್ಷ ರೂಪಾಯಿ, ಶೌಚಾಲಯ ನಿಮರ್ಾಣಕ್ಕೆ 56.22 ಲಕ್ಷ.ರೂ,  ಶಾಲೆಗಳ ಸುತ್ತ ಮುತ್ತ ಕಾಂಪೌಂಡ್ ನಿಮರ್ಾಣಕ್ಕೆ 78.5.ರೂ ಲಕ್ಷ ಶಾಲಾ ಮಕ್ಕಳ ಶುದ್ದ ಕುಡಿಯುವ ನೀರಿನ ಆರ್.ಓ.ಯೋಜನೆಗೆ  84.ಲಕ್ಷ.ರೂ ಹಾಗೂ ದೊಡ್ಡ ಕೊಠಡಿಗಳ ರಿಪೇರಿಗೆ 58.5 ಲಕ್ಷ.ರೂ ಬಿಡುಗಡೆಯಾಗಿದೆ. 
    ಕೃಷಿ ಇಲಾಖೆಯ ವಿವಿಧ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ 3 ಕೋಟಿ 54 ಲಕ್ಷ ಬಿಡುಗಡೆಯಾಗಿದ್ದು 9 ಗ್ರಾಮ ಪಂಚಾಯ್ತಿಗಳ 17 ಹಳ್ಳಿಗಳ 1565 ಹೆಕ್ಟರ್ ಪ್ರದೇಶಗಳಲ್ಲಿ ಕೃಷಿ ಜಲನಯನ ಅಭಿವೃದ್ದಿ ಕಾಮಗರಿಗಳಾದ ಕೃಷಿ ಜಮೀನುಗಳಲ್ಲಿ ಸ್ಥಳದಲ್ಲೇ ಮಣ್ಣು, ನೀರು ಸಂರಕ್ಷಣೆ, ಕೃಷಿ ಹೊಂಡ, ತಡೆಹಣೆಗಳು, ಹಳೇ ಕಟ್ಟಡಗಳ ದುರಸ್ತಿ, ನಾಲ ಬದು ಕಾಮಗರಿಗಳು ಕೈಗೆತ್ತಿಕೋಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಸಣ್ಣಹೊನ್ನೇಗೌಡ ತಿಳಿಸಿದರು.
    ಪಶು ಸಂಗೋಪನಾ ಇಲಾಖೆಗೆ 81 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದ್ದು ಪಶು ಆರೋಗ್ಯ ಶಿಬಿರಗಳಿಗೆ ಕುರಿ, ಮೇಕೆ, ಜಂತುಹುಳ ನಾಶ ಔಷದಿಗೆ, ಜಾನುವಾರಗಳಿಗೆ ಚಿಕಿತ್ಸೆ ಮಾಡುವ ಪಿಲ್ಟರ್ ಕಟ್ಟಡಗಳ ದುರಸ್ಥಿ ಹಾಗೂ ಕಾಂಪೌಂಡ್ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಶಶಿಕುಮಾರ್ ತಿಳಿಸಿದರು. 
    ಸಾರಿಗೆ ಮತ್ತು ಸಂಪರ್ಕ ರಸ್ತೆ ನಿಮರ್ಾಣಕ್ಕೆ 60 ಕೋಟಿ ಹಣ ಬಿಡುಗಡೆಯಾಗಿದ್ದು ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿಗಳ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದು ಜೋಗಿಹಳ್ಳಿಯಿಂದ ಹೋನ್ನೆಬಾಗಿ, ಬುಳ್ಳೆನಹಳ್ಳಿ ಮೂಲಕ ಗುಡ್ಡದ ಪಾಳ್ಯದ ಗ್ರಾಮದವರೆಗೆ 12 ಕಿ.ಮಿವರೆಗೆ ಕಾಕ್ರೆಟ್ ರಸ್ತೆ,  ಗೋಡೆಕೆರೆ, ಬಾಣದೇವರಹಟ್ಟಿ ಮೂಲಕ ಸೋಂಡೆನಹಳ್ಳಿಗೊಲ್ಲರಹಟ್ಟಿ, ಹಾಗೂ ಸೊಂಡೆನಹಳ್ಳಿಯವರಿಗೆ ಗೋಡೆಕೆರೆ, ರಂಗನಾಥಪುರ, ನಡುವನಹಳ್ಳಿ, ಬಗ್ಗನಹಳ್ಳಿಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಜೋಗಿಹಳ್ಳಿಯಿಂದ ಗೊಲ್ಲರಹಳ್ಳಿ ಮುಖಾಂತರ ಗಣಿಗಾರಿಕೆ ನಡೆಯುವ ಅಬ್ಬಿಗೆ ಗುಡ್ಡ ರಸ್ತೆ ನಿಮರ್ಾಣ. ಹಾಗೂ                  ತೀರ್ಥಪುರ, ದೊಡ್ಡರಾಂಪುರ, ಯರೇಕಟ್ಟೆ ಮೂಲಕ ತೀರ್ಥರಾಮೇಶ್ವರ ದೇವಾಲಯದವರೆಗೆ ಕಾಕ್ರಿಂಟ್ ರಸ್ತೆ, ಬರಸಿಡ್ಲಹಳ್ಳಿಯಿಂದ ಚಿಕ್ಕರಾಂಪುರದ ಮೂಲಕ ಎಲ್.ಎಸ್.ಕೋರೆಯವರೆಗೆ ಕಾಂಕ್ರೇಟ್ ರಸ್ತೆ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರು.. 
    ಪರಿಸರ ಹಾಗೂ ಅರಣ್ಯ ಇಲಾಖೆಗೆ 18 ಕೋಟಿ ಬಿಡುಗಡೆಯಾಗಿದ್ದು ಜಾಣೇಹಾರ್,  ಕಾಮನಹಳ್ಳಿ, ತೀರ್ಥರಾಮೇಶ್ವರ ದೇವಾಲಯ ಭಾಗಗಳ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಸಸಿ ನೆಡುವ ಕಾರ್ಯಕ್ರಮ ಜಾಣೇಹಾರ್ ಬಳಿ ಮಿನಿ ಮೃಗಾಲಯ ಹಾಗೂ ಜಾಣೇಹಾರ್ ಬಳಿ ಇರುವ ಬೆಟ್ಟದ ಮೇಲೆ ಪ್ರವಾಸಿ ಮಂದಿರ ನಿಮರ್ಿಸಲು ರೂಪುರೇಶೆ ರಚಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು. 
ಜಾಣೇಹಾರ್ ಬೆಟ್ಟದ ಮೇಲೆ ಉತ್ತಮ ಪರಿಸರ ಇರುವುದರಿಂದ ಆ ಸ್ಥಳದಲ್ಲಿ ಪ್ರವಾಸಿ ಮಂದಿರ ನಿಮರ್ಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣನಾಯ್ಕ್ ಸೂಚಿಸದ ಶಾಸಕರು ಗಣಿ ಭಾಗ ಗುಡ್ಡ ಪ್ರದೇಶವಾಗಿರುವುದರಿಂದ ಗುಡ್ಡ ಭಾಗಗಳ ಮಧ್ಯೆ ಅಣೆಕಟ್ಟು (ಡ್ಯಾಂ) ನಿಮರ್ಿಸಿದರೆ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿದರೆ ಎರಡು ಹೋಬಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ ಎಂದರು .
ಹಾಗೂ ಹೊಸಹಳ್ಳಿಯಿಂದ ಗೊಲ್ಲರಹಳ್ಳಿ, ದಿಬ್ಬದಹಳ್ಳಿ, ಭಾವನಹಳ್ಳಿ ಮುಖಾಂತರ ಹೊನ್ನೆಬಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗೆ ಸೂಚಿಸಿದ ಅವರು ತಾಲ್ಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆ, ಹೊನ್ನೆಬಾಗಿಯಲ್ಲಿ ನೂತನ ಸಕರ್ಾರಿ ಆಸ್ಪತ್ರೆ  ಹಾಗೂ ಪ್ರಯೋಗ ಶಾಲೆ ಮಾಡಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ರವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಲೇಜು ಹೆಣ್ಣು ಮಕ್ಕಳ ಹಾಸ್ಟಲ್, ನಿವೇಶನ, ಕಟ್ಟಡ ನಿಮರ್ಾಣಕ್ಕೆ ಹಾಗೂ ದುರಸ್ತಿ, ಮೂಲಭೂತ ಸೌಕರ್ಯಗಳಿಗೆ ಮತ್ತು ಕಾತ್ರಿಕೆಹಾಲ್ ಭಾಗದಲ್ಲಿ ಶಾಲೆ ತೆರೆಯಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಕೆಪಿಟಿಸಿಎಲ್ ಅಧಿಕಾರಿ ರಾಜಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Saturday, December 20, 2014

ಪೋಲಿಸರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿಡಿ. : ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಪೋಲಿಸ್ ಇಲಾಖೆ ವತಿಯಿಂದ ತಾಲ್ಲೂಕಿನ ದುಗಡಿಹಳ್ಳಿ ಗ್ರಾಮ ಪಂಚಾಯ್ತಿಯ ಹರಿಜನ ಕಾಲೋನಿಯ ಗ್ರಾಮವನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
   ಚಿಕ್ಕನಾಯಕನಹಳ್ಳಿಯ 23ಮಂದಿ ಪೋಲಿಸ್ ಸಿಬ್ಬಂದಿ, ಗ್ರಾಮದ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮ ಪಂಚಾಯ್ತಿಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮರವರ ನೇತೃತ್ವದಲ್ಲಿ ದುಗಡಿಹಳ್ಳಿ ಗ್ರಾಮವನ್ನು ಪೋಲಿಸ್ ಸಿಬ್ಬಂದಿಗಳು ಸ್ವಪ್ರೇರಿತರಾಗಿ ಸ್ವಚ್ಛಗಳಿಸಿದರು.
  ದುಗಡಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಪೋಲಿಸ್ ಸಿಬ್ಬಂದಿ ಮತ್ತು ಗ್ರಾಮಸ್ಥರೊಂದಿಗೆ ಗ್ರಾಮದ ಚರಂಡಿ, ದೇವಸ್ಥಾನ, ಬೀದಿಗಳಲ್ಲಿದ್ದ ಕಸವನ್ನು ತೆಗೆದು ಸ್ವಚ್ಚಗೊಳಿಸುತ್ತಿದ್ದು ಈ ಬಗ್ಗೆ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿರವರಿಗೂ ತಿಳಿಸಿದ್ದು ಅವರೂ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವದರ ಬಗ್ಗೆ ತಿಳಿಸಿದ್ದಾರೆ ಎಂದರು.
 ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಗಾಯಿತ್ರಿ, ಕಲಾವತಿ, ಮಲ್ಲಿಕಾಜರ್ುನ್, ವೆಂಕಟೇಶ್, ಬಾಲ್ಕುಮಾರ್, ಮಂಜುನಾಥ್, ನರಸಿಂಹಸ್ವಾಮಿ, ಚನ್ನೆಗೌಡ, ಕುಮಾರ್, ರಮೇಶ್, ಹೋಂ ಗಾಡರ್್ ರವಿಕುಮಾರ್, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆ.ಜಿ.ಬಸವೇಗೌಡ, ಸದಸ್ಯೆ ಶಾರದಮ್ಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


ನಿವೃತ್ತ ನೌಕರರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಡಿ.20 ; ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘಟನೆಯು ಬಲಿಷ್ಠವಾಗಿದ್ದು, ಸಂಘಟನೆಯು ಜನಸಾಮಾನ್ಯರ ವಿಶ್ವಾಸ ಗಳಿಸಿ ಜನಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬಾಬಡೆ ಹೇಳಿದರು.
ಪಟ್ಟಣದಲ್ಲಿ ನೆಡೆದ ನಕರ ರವರ ನಿವೃತ್ತ ನೌಕರರ ದಿನಾಚಾರಣೆ ಹಾಗೂ 29ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ಸಂಘಟನೆಗಳನ್ನು ಮಾಡುವುದರ ಜೊತೆಗೆ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು, ನಿವೃತ್ತ ನೌಕರರಲ್ಲಿ ಬಹುಪಾಲು ಮಂದಿ ಶಿಕ್ಷಕರಿದ್ದು ನಿವೃತ್ತ ಶಿಕ್ಷಕರು ಕಮಿಟಿಯೊಂದನ್ನು  ರಚಿಸಿ ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಯ ಜನಕ್ಕೆ ಶಿಕ್ಷಣ, ಮಾರ್ಗದರ್ಶನ, ನೀಡಿ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದರು. ನಕರ ರವರು ನಿವೃತ್ತ ನೌಕರರ ಪಿಂಚಣೆಯ ವಿಷಯವಾಗಿ ಕೇಂದ್ರ ಸಕರ್ಾರದ ವಿರುದ್ದ ಸುಪ್ರೀಂ ಕೋಟರ್್ನಲ್ಲಿ ಹೋರಾಟ ನೆಡಸಿದರ ಪರಿಣಾಮ ನ್ಯಾಯಾಲಯವು ಸಕರ್ಾರಿ ನಿವೃತ್ತರಿಗೆ ಪಿಂಚಣಿ ಒಂದು ಹಕ್ಕು ಇದು ಪ್ರತಿಯೊಬ್ಬರಿಗೂ ಸಿಗಬೇಕೆಂದು ತೀಪರ್ು ನೀಡಿದ್ದು ಈ ತೀಪರ್ಿನ ಕೀತರ್ಿ ನಕರರವರಿಗೆ ಸಲ್ಲುತ್ತದೆ ಎಂದರಲ್ಲದೆ ಈ ಕುರುಹಾಗಿ ನಕರ ಮತ್ತು ನಿವೃತ್ತ ನೌಕರರ ದಿನಾಚಾರಣೆಯನ್ನು ನೆಡಸಲಾಗುತ್ತದೆ ಎಂದರು.
  ತುಮಕೂರಿನ ಸ.ಶಿ.ಇಲಾಖೆಯ ಉಪನಿದರ್ೇಶಕರಾದ ಈಶ್ವರಪ್ಪ ಮಾತನಾಡಿ ವಯಸ್ಸು ದೇಹಕ್ಕೆ ಮತ್ರ ಮನಸಿಗೆ ಅಲ್ಲ, ನಿವೃತ್ತಿ ಹೊದಿದ್ದರು ಸಮಾಜಮುಖಿಯಾಗಿ ಕೆಲಸ ಮಾಡುವ ಹುಮ್ಮುಸ್ಸನ್ನು ನಿವೃತ್ತ ನೌಕರರು ಹೊಂದಿದ್ದಾರೆ, ಗ್ರಾಮೀಣಾ ಭಾಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಆವರಣಗಳು ಸ್ವಚ್ಛತೆಯಿಂದ ದೂರವಿದ್ದು ಆ ಭಾಗದ ಪಿ.ಡಿ.ಒ. ಮತ್ತು ಎಸ್.ಡಿ.ಎಮ್.ಸಿ. ಹಾಗೂ ಶಿಕ್ಷಕರು ಜವಾಬ್ದಾರಿ ವಹಿಸಿ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಸುಂದರ ಪರಿಸರವನ್ನು ರೂಪಿಸಬೇಕು ಎಂದರು. 
ಕಾರ್ಯಕ್ರಮದಲ್ಲಿ 75ವರ್ಷ ತುಂಬಿದ ನಿವೃತ್ತ ಹಿರಿಯ ನೌಕರರಿಗೆ ಮತ್ತು ಎಸ್.ಎಸ್.ಎಲ್.ಸಿ ಹಾಗು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು.
ತಾ.ನಿ.ನೌ.ಸಂಘದ ಅಧ್ಯಕ್ಷ ಸಿ.ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜರಾವ್, ಗುಬ್ಬಿಯ ಸಂಘದ ಅಧ್ಯಕ್ಷ ರಾಮಯ್ಯ, ಸಂಘದ ಉಪಾಧ್ಯಕ್ಷೆ ಶಾರದಮ್ಮ, ಸಹ ಕಾರ್ಯದಶರ್ಿ ರಾಜಪ್ಪ, ಕಾಸಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ , ಜಿ.ಪಂ.ಮಾಜಿ ಅಧ್ಯಕ್ಷೆ ಜಯಮ್ಮದಾನಪ್ಪ, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು. ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಂಗನಾಥ್ ನಿರೂಪಿಸಿದರು. ಸಿ.ಕೆ.ವಿಶ್ವೇಶ್ವರಯ್ಯ ವಂದಿಸಿದರು.


Friday, December 19, 2014


ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ 
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ 28 ಗ್ರಾಮ ಪಂಚಾಯ್ತಿಗಳಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಾದ ಕುರಿಶೆಡ್, ದನದ ಕೊಟ್ಟಿಗೆ, ಕೋಳಿಫಾರಂ ಹಾಗೂ ಶೌಚಾಲಯಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಗೋವಿಂದರಾಜುರವರನ್ನು ಫಲಾನುಭವಿಗಳು ಮನವಿ ಸಲ್ಲಿಸಿದರು.
ಪಟ್ಟಣದ  ತಾ.ಪಂ.ಸಭಾಂಗಣದಲ್ಲಿ ನಡೆದ ತಿಪಟೂರು ಉಪವಿಭಾಗದ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ ಫಲಾನುಭವಿಗಳು, ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಿಮರ್ಿಸಿಕೊಂಡು ಒಂದು ವರ್ಷ ಕಳೆದರೂ ಹಣ ಬಿಡುಗಡೆ ಯಾಗಿಲ್ಲವೆಂದು ಒತ್ತಾಯಿಸಿದರು ಇದಕ್ಕೆ   ಪ್ರತಿಕ್ರಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲೆಯ 82 ಗ್ರಾಮ ಪಂಚಾಯ್ತಿಗಳಲ್ಲಿ ಶೌಚಾಲಯಗಳು ನಿಮರ್ಿಸಿಕೊಳ್ಳಲು ಗುತ್ತಿಗೆದಾರರು ಕೂಲಿ ಕಾಮರ್ಿಕರಿಗೆ ಉದ್ಯೋಗ ಖಾತ್ರಿ ಕಾಡರ್್ನ್ನು ತಮ್ಮ ಬಳಿಯೇ ಇಟ್ಟುಕೊಂಡು ಜೆ.ಸಿ.ಬಿ ಮತ್ತಿತರ ಯಂತ್ರಗಳ ಮೂಲಕ ಕಾಮಗಾರಿಗಳನ್ನು ಮಾಡಿರುವುದರಿಂದ 60 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ವರದಿಯ ಹಿನ್ನಲೆಯಲ್ಲಿ ಸಕರ್ಾರ ಎನ್.ಆರ್.ಇ.ಜಿ ಯೋಜನೆಯಲ್ಲಿ ಕಂಪ್ಯೂಟರ್ನ್ನು ಸ್ಥಗಿತಗೊಳಿಸಿದೆ ಆದ್ದರಿಂದ ಈಗ ವೈಯಕ್ತಿಕವಾಗಿ ನಿಮರ್ಿಸಿಕೊಂಡಿರುವ ಶೌಚಾಲಯಗಳು, ಕುರಿಶೆಡ್, ಕೊಟ್ಟಿಗೆ, ಕೋಳಿಫಾರಂಗಳ ಬಗ್ಗೆ ಪಟ್ಟಿ ನೀಡಿದರೆ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ್, ಮುದ್ದೇನಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸಾಲ್ಕಟ್ಟೆಸ್ವಾಮಿ, ನಾಗರಾಜನಾಯ್ಕ, ಎಂ.ಎಲ್.ಗಂಗಾಧರಯ್ಯ, ದಲಿತ ಮುಖಂಡ ಗೋವಿಂದರಾಜು, ತಾ.ಬಂಜಾರ ಸಮಾಜದ ಸಂಘದ ಕಾರ್ಯದಶರ್ಿ ಶಶಿಧರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.



ಡಿಸಂಬರ್ 23ರಂದು ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : 2014-15 ನೇ ಸಾಲಿನ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮವನ್ನು ಡಿಸಂಬರ್ 23ರಂದು ಬೆಳಗ್ಗೆ 11ಕ್ಕೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಲಾಗಿದೆ ಎಂದು ಕೃಷಿ ಅಧಿಕಾರಿ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾಗೂ ಕೃಷಿ ನಿದರ್ೇಶಕರ ಕಛೇರಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪೆಡದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹ : ಡಾ|| ಜಿ. ಪರಮೇಶ್ವರ್  

ಚಿಕ್ಕನಾಯಕನಹಳ್ಳಿ:  ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹರಾಗಿರುತ್ತೇವೆ ಇಲ್ಲದಿದ್ದರೆ ಏಕಮುಖಿ ಜೀವನ ಅನುಭವಿಸಬೇಕಾಗುತ್ತದೆ ಎಂದು ಹೃದ್ರೋಗ ತಜ್ಞ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಡಾ|| ಜಿ. ಪರಮೇಶ್ವರ್ ಹೇಳಿದರು.
ಪಟ್ಟಣದಲ್ಲಿ ತಾ|| ಒಕ್ಕಲಿಗ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬದುಕಿನ ದಿನನಿತ್ಯದಾಟದಲ್ಲಿ ಕೇವಲ ತಮ್ಮ ಬದುಕಿಗೆ ಒತ್ತು ನೀಡುವ ಜೊತೆಗೆ ಸಮಾಜದಲ್ಲಿನ ನಿರ್ಗತಿಕರಿಗೆ ಸ್ವಲ್ಪ ಮಟ್ಟಿನ ಸೇವೆ ಸಲ್ಲಿಸಿ ಸಮಾಜದ ಏಳಿಗೆಗೆ ಒತ್ತು ನೀಡಬೇಕು ಆಗ ನಮ್ಮನ್ನು ಅನ್ಯ ಸಮಾಜದವರು ಕೂಡ ಗೌರವಿಸುತ್ತಾರೆ ನಮ್ಮನ್ನು ಪುರಸ್ಕಾರ ಭಾವದಿಂದ ನೋಡುತ್ತಾರೆ  ಎಂದರು.
ಕೃಷಿ ಬದುಕನ್ನೇ ಅವಲಂಬಿಸಿಕೊಂಡು ಬಂದಿದ್ದ ಒಕ್ಕಲಿಗ ಸಮಾಜ ಬೇರೆ ಬೇರೆ ಕ್ಷೇತ್ರದಲ್ಲೂ ದುಡಿಯುತ್ತಾ ಬರುತ್ತಿದೆ ಅದಕ್ಕೆ ಸಾಮಾಜಿಕ ಸೇವೆ ಕೃಷಿಕ್ಷೇತ್ರ ಶಿಕ್ಷಣ ಕ್ಷೇತ್ರದ ಈ ಮೂಲಕ ಗುರುತಿಸಿಕೊಂಡಿರುವ ನಮ್ಮ ಸಮಾಜದ ಬಂಧುಗಳನ್ನು ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿನಲ್ಲಿ ನಮ್ಮ ಸಂಘ ಅಸ್ತಿತ್ವಕ್ಕೆ ಬಂದು 1 ವರ್ಷವಾಗಿದ್ದು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಸದಸ್ಯತ್ವದ ನೊಂದಣಿ ಕಾರ್ಯ ಆಗಬೇಕಿದೆ ಮುಂದಿನ ದಿನದಲ್ಲಿ ಕೆಂಪೇಗೌಡ ಬಡಾವಣೆ ಸಮುದಾಯ ಭವನ ನಿಮರ್ಾಣಕಾರ್ಯಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ತಾ|| ಒಕ್ಕಲಿಗ ಸಂಘದ ಕಾರ್ಯದಶರ್ಿ ಬಿ.ಜಿ.ರಾಜಣ್ಣ ಮಾತನಾಡಿ,  ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆವುಳ್ಳ ಸಮಾಜವಾದರೂ ಸಂಘ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಾದ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಬಿ.ಪ್ರಕಾಶ್ , ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಬಿ.ಎನ್.ಲೋಕೇಶ್ ತಾ|| ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಹೆಚ್.ಪ್ರಕಾಶ್ ಇವರುಗಳನ್ನು ಉತ್ತಮ ಸ್ಥಾನಕ್ಕೇರಿಸಲು ಸಹಕರಿಸಿದ ಎಲ್ಲರನ್ನೂ ನಾವು ಸ್ಮರಿಸಬೇಕು ಇವರನ್ನು ನಮ್ಮ ಸಂಘ ಸನ್ಮಾನಿಸುತ್ತಿರುವುದು ಕೂಡ ಇವರುಗಳ ಜವಬ್ದಾರಿಯನ್ನು ಹೆಚ್ಚಿಸುವ ಕರೆ ಗಂಟೆ ಎಂದು ಭಾವಿಸಿ ಇವರಿಂದ ಎಲ್ಲಾ ಸಮಾಜದ ಬಂದುಗಳಿಗೆ ಸೇವೆ ಲಭಿಸಲಿ ಎಂದರು.
ಈ ಸಮಾರಂಭದಲ್ಲಿ ಜಿ.ಶಾಂತ್ರಾಜು, ಪುರಸಭಾ ಸದಸ್ಯ ರಾಜಶೇಖರ್, ವಕೀಲ ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೇಗೌಡ ಮೊದಲಾದವರು ಉಪಸ್ಥಿತರಿದ್ದರು.


Thursday, December 11, 2014

ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿ : ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್

                                
ಚಿಕ್ಕನಾಯಕನಹಳ್ಳಿ,ಡಿ.11 : ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿದರೆ ಅವಸರದಲ್ಲಿ ತಮ್ಮ ವಸ್ತುಗಳನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಹಿಂಪಡೆಯಲು ಸಹಾಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡುವವರು ಡಿ.ಎಲ್, ಇನ್ಸುರೆನ್ಸ್, ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯವಾಗಿದೆ ಇದರಿಂದ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಿದೆ ಎಂದರಲ್ಲದೆ, ವಾಹನ ಚಾಲನೆ ಮಾಡುವವರು ಡಿ.ಎಲ್ ಹೊಂದಿರದಿದ್ದರೆ ಆಕಸ್ಮಿಕವಾಗಿ ಅಪಘಾತವಾದಾಗ ವಾಹನ ಚಾಲನೆ ಮಾಡುತ್ತಿದ್ದವನ ಹಾಗೂ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಾಗುತ್ತದೆ ಹಾಗೂ ವಾಹನಕ್ಕೆ ಇನ್ಸುರೆನ್ಸ್ ಮತ್ತು ರಿಜಿಸ್ಟ್ರೇಷನ್ ಮಾಡಿಸಿದ್ದರೆ ಅಪಘಾತವಾದಾಗ ನೊಂದ ವ್ಯಕ್ತಿಯ ಚಿಕಿತ್ಸೆಗೆ ಇನ್ಸುರೆನ್ಸ್, ರಿಜಿಸ್ಟ್ರೇಷನ್ ಸಹಾಯವಾಗಲಿದೆ ಎಂದರು. 
ಇನ್ಸುರೆನ್ಸ್ ಮಾಡಿಸುವವರು ಪೂತರ್ಿ ಮಾಡಿಸಿದರೆ ವಾಹನವು ಜಖಂಗೊಂಡಾಗ, ಸ್ಪೋಟಗೊಂಡಾಗ  ಚಾಲಕರಿಗೆ ಇನ್ಸುರೆನ್ಸ್ ಪೂತರ್ಿ ಹಣ ದೊರಯಲಿದೆ ಅಲ್ಲದೆ ಎಲ್ಲಾ ರೀತಿಯಲ್ಲೂ  ಅನುಕೂಲವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಶಾಲಾ ಮಕ್ಕಳನ್ನು ಆಟೋದಲ್ಲಿ ಶಾಲೆಗೆ ಕರೆದಯ್ಯುವಾಗ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಒಂದು ಬಾರಿಯಲ್ಲದಿದ್ದರೆ ಎರಡು ಬಾರಿ ಟ್ರಿಪ್ ಮಾಡಿರಿ ಆದರೆ ಮಕ್ಕಳಿಗೆ ತೊಂದರೆ ಮಾಡಬೇಡಿ ಎಂದರು.
ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ಪೈಪೋಟಿ ಮಾಡದೆ ತಮ್ಮ ವಾಹನವನ್ನು ನಿಲುಗಡೆ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಒಬ್ಬರ ನಂತರ ಒಬ್ಬರಂತೆ ಪ್ರಯಾಣಿಕರನ್ನು ಕರೆದಯ್ಯಲು ಸಲಹೆ ನೀಡಿದ ಅವರು ತಾಲ್ಲೂಕು ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ತಾಲ್ಲೂಕಿನ ರಸ್ತೆಯ ಮೂಲಕ ಯಾರು ಸಂಚರಿಸುತ್ತಾರೆ ಎಂಬುದು ನಮಗೆ ತಿಳಿಯುವುದಿಲ್ಲ ಸದಾ ಸಂಚರಿಸುತ್ತಿರುವ ವಾಹನ ಚಾಲಕರು ಶಂಕಿತ ವ್ಯಕ್ತಿಗಳ ಮಾಹಿತಿಯನ್ನು ಪೋಲಿಸರಿಗೆ ನೀಡುವಂತೆ ತಿಳಿಸಿದರು.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರತಿ ಇಲಾಖೆಗಳಿಗೂ ಸಾರ್ವಜನಿಕರ ಸಹಾಯ ಅಗತ್ಯವಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಜೊತೆ ಕೈಜೋಡಿಸುವ ಮೂಲಕ ಅವರ ಕರ್ತವ್ಯಕ್ಕೆ ನೆರವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಸದಸ್ಯ ಸಿ.ರಾಜಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.