Thursday, June 9, 2011













ಪಂಚಭೂತಗಳಲ್ಲಿ ಲೀನವಾದ ಪ್ರೊ..ಲಿಂಗದೇವರು ಹಳೆಮನೆಚಿಕ್ಕನಾಯಕನಹಳ್ಳಿ,ಜೂ.9: ಸಾಹಿತ್ಯ ಮತ್ತು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠ ಸಾಧನೆಮಾಡಿದ್ದ ರಂಗಾಯಣದ ನಿದರ್ೇಶಕ ಪ್ರೊ.ಲಿಂಗದೇವರು ಹಳೆಮನೆಯವರು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನ ಹೊಂದಿದ್ದು, ಅವರ ಹುಟ್ಟೂರಾದ ಹಾಲುಗೊಣದಲ್ಲಿ ಅವರ ಅಂತ್ಯಸಂಸ್ಕಾರವನ್ನು ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆಸಲಾಯಿತು. ಮೈಸೂರಿನಿಂದ ಹಾಲುಗೊಣಕ್ಕೆ ಗುರುವಾರ ರಾತ್ರಿ ಕರೆತರಲಾಯಿತು, ಗ್ರಾಮದ ಅಂಗನವಾಡಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬೆಳಗ್ಗೆ 7ಕ್ಕೆ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಜೊತೆಯಲ್ಲಿ ಚಿ.ನಾ.ಹಳ್ಳಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ಅಂತಿಮ ದರ್ಶನ ಪಡೆದರು. ಮೈಸೂರಿನ ರಂಗಾಯಣದ ವಿದ್ಯಾಥರ್ಿಗಳ ಭಜನೆಯ ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಮೃತ ದೇಹವನ್ನು ಶವಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಲಿಂಗದೇವರು ಅವರ ಮನೆಯ ಹಿಂಭಾಗದಲ್ಲಿ ನಡೆದ ಹೊಲದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೆಮನೆ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಂಪಾದಕ ಎಸ್.ನಾಗಣ್ಣ, ಸಿ.ಎಚ್.ಮರಿದೇವರು, ಎಂ.ಬಸವಯ್ಯ, ಹಂಪಿ ವಿ.ವಿ.ಯ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಚಲನಚಿತ್ರ ನಿದರ್ೇಶಕ ಬ್ಯಾಲಕೆರೆ ಲಿಂಗದೇವರು, ಗಾಯಕ ಜನ್ನಿ, ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಆರ್.ಬಸವರಾಜು, ಬಿಳಗೆರೆ ಕೃಷ್ಣಮೂತರ್ಿ,ಎನ್.ಇಂದಿರಮ್ಮ, ರಾಮಕೃಷ್ಣಪ್ಪ ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಸಿ.ಪಿ.ಐ.ರವಿ ಪ್ರಸಾದ್, ಪತ್ರಕರ್ತ ಉಜಜ್ಜಿ ರಾಜಣ್ಣ, ಮಲ್ಲಿಕಾರ್ಜನ ಮೇಟಿ, ಪ್ರೊ.ರಮೇಶ್, ಪ್ರೊ.ಎಚ್.ಎಂ.ಉಮೇಶ್, ಶೋಕ ಸಾಗರದಲ್ಲಿ ಅಭಿಮಾನಿಗಳು: ಮೈಸೂರಿನ ರಂಗಾಯಣದ ಕಲಾವಿದರು, ಸಾಹಿತ್ಯಾಸಕ್ತರು, ರಂಗಶಿಕ್ಷಣಕ್ಕೆಂದು ತರಬೇತಿಗೆ ಬಂದಿದ್ದ ಯುವಕರು, ಲಿಂಗದೇವರು ಅವರ ತಾಯಿ ಬೋರಮ್ಮ, ಪತ್ನಿ ಡಿ.ನಂದಾ, ಮಕ್ಕಳಾದ ಭೂಮಿಕಾ, ನಿಹಾರಿಕ, ತಮ್ಮಂದಿರಾದ ಚಿದಾನಂದ ಮೂತರ್ಿ, ನಟರಾಜ್, ಕುಟುಂಬದವರಾದ ಸುರೇಶ್ ಹಳೆಮನೆ, ನವೀನ ಹಳೆಮನೆ ಸೇರಿದಂತೆ ಹಲವರು ಶೋಕ ಸಾಗರದಲ್ಲಿ ಮುಳುಗಿದ್ದರು. ಸಕರ್ಾರಿ ಪ್ರೌಡಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ70ಸಾವಿರ :ಮೋಹನ್ಕುಮಾರ್ಚಿಕ್ಕನಾಯಕನಹಳ್ಳಿ,ಜೂ.09: ಸಕರ್ಾರಿ ಪ್ರೌಢಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಈ ವರ್ಷ ಪ್ರತಿ ಶಾಲೆಗೆ 70ಸಾವಿರವನ್ನು ಶೀಘ್ರವೇ ನೀಡಲಾಗುವುದು ಎಂದು ಡಿ.ಡಿ.ಪಿ.ಐ ಮೋಹನ್ಕುಮಾರ್ ತಿಳಿಸಿದರು. ಪಟ್ಟಣದ ಬಿ.ಆರ್.ಸಿ. ಕಛೇರಿ ಸಭಾಂಗಣದಲ್ಲಿ ನಡೆದ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಕೊಠಡಿ, ಶೌಚಾಲಯ ಇನ್ನಿತರ ಸೌಕರ್ಯಗಳ ಕೊರತೆಯನ್ನು ಹಂತ-ಹಂತವಾಗಿ ನಿವಾರಿಸುವಲ್ಲಿ ಪ್ರಯತ್ನಿಸುತ್ತೇವೆ. ಶಾಲೆಗಳಿಗೆ ಮಕ್ಕಳ ಜ್ಞಾನವೃದ್ದಿಗಾಗಿ ಗ್ರಂಥಾಲಯಕ್ಕಾಗಿ ಕಳೆದ ವರ್ಷ 10ಸಾವಿರ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲು ಶಿಕ್ಷಕರು ಗ್ರಾಮಗಳಲ್ಲಿ ಪೋಷಕರ ಸಭೆ ಕರೆದು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬೇಕು, ಪ್ರತಿ 3ಕಿ.ಮೀಗೆ ಪ್ರೌಢಶಾಲೆ, 1ಕಿ.ಮೀಗೆ ಪ್ರಾಥಮಿಕ ಶಾಲೆಗಳಿದ್ದು , ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜ ಬೆಳವಣಿಗೆ ಕಾಣುವುದು ಶಿಕ್ಷಕರ ಗಮನಾರ್ಹವಾದ ಕಾರ್ಯವೃತ್ತಿಯಿಂದ, ಸಮಾಜ ತಿದ್ದುವುದು ಹೊಣೆಗಾರಿಕೆ ಶಿಕ್ಷಕರದ್ದು, ಶಿಕ್ಷಕರು ಪ್ರತಿ ಹಂತದಲ್ಲೂ ಪ್ರಾಮಾಣಿಕವಾಗಿ ಶ್ರಮಿಸಿ ಗಾಂಧೀಜಿ ಕಂಡಂತಹ ಕನಸು ಈಡೇರಿಸುವಂತೆ ಪ್ರಯತ್ನಿಸಬೇಕು, ಗ್ರಾಮಗಳ ಮಾಪರ್ಾಡಿನಲ್ಲಿ ಶಿಕ್ಷಕರ ಮಹತ್ವ ಹೆಚ್ಚಾಗಿದೆ ಎಂದ ಅವರು, ಕಡಿಮೆ ಅಂಕ ಪಡೆದ ಶಾಲೆಗಳು ಪ್ರಾರಂಭದಿಂದಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ನೀಡಿ ಮಕ್ಕಳಲ್ಲಿ ಕೊನೆಗಳಿಗೆಯಲ್ಲಿ ಒತ್ತಡ ಹೇರುವುದನ್ನು ತಪ್ಪಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಈ ತಾಲ್ಲೂಕಿನಲ್ಲಿ 48 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ರೂಪಗೊಂಡಿದ್ದು, ಇನ್ನೂ 50 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆಯನ್ನು ಶೀಘ್ರವಾಗಿ ನಿಮರ್ಿಸಲಾಗುವುದೆಂದರು. ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಅಂಕಗಳಿಸಲು ದಾರಿ ತೋರಬೇಕು ಎಂದರು.ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.