Thursday, April 14, 2016



ಜ್ಞಾನ, ಬುದ್ದಿವಂತಿಕೆ, ನಾಯಕತ್ವದ ಗುಣ ಕೆಲವೇ ಜಾತಿಗಳ ಸ್ವತ್ತಲ್ಲ : ಉಪನ್ಯಾಸಕ ಡಾ.ಆರ್.ತಿಮ್ಮರಾಯಪ್ಪ
ಚಿಕ್ಕನಾಯಕನಹಳ್ಳಿ: ಜ್ಞಾನ ಬುದ್ದಿವಂತಿಕೆ, ನಾಯಕತ್ವದ ಗುಣ ಕೆಲವೇ ಜಾತಿಗಳ ಸ್ವತ್ತು ಎಂದು  ಬಲಿತ ಜಾತಿಗಳು ಸಮಾಜದಲ್ಲಿ ಭ್ರಮೆ ಸೃಷ್ಠಿಸಿವೆ ಎಂದು ಮೈಸೂರು ಮಹಾರಾಜ ಕಾಲೇಜಿನ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಡಾ|| ಆರ್.ತಿಮ್ಮರಾಯಪ್ಪ ಅಭಿಪ್ರಾಯ ಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಗುರುವಾರ ನಡೆದ ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಂರವರ ಜನ್ಮದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹುಟ್ಟಿನಿಂದ ಯಾರು ಮಹಾನ್ ವ್ಯಕ್ತಿಗಳಾಗುವುದಿಲ್ಲ ಗುಲಾಮರೂ ಆಗುವುದಿಲ್ಲ, ಜ್ಞಾನ ಬುದ್ದಿವಂತಿಕೆ ನಾಯಕತ್ವದಗುಣ ಸಾಧನೆ ಸ್ವತ್ತಲ್ಲಿ ಎಂದು ರುಜುವಾತು ಮಾಡಿದ ಮಹನಿಯರ ಸಾಲಿನಲ್ಲಿ  ಡಾ.ಬಾಬಾ ಸಾಬ್ ಅಂಬೇಡ್ಕರ್ ಪ್ರಮುಖರು ಎಂದರು.
ಅಂಬೇಡ್ಕರ್ ಹೋರಾಟದ ಆಶಯಗಳನ್ನು ನೆನಪಿಸುವ ಹಲವು  ವಿಶ್ವ ಮಟ್ಟದ ಹೋರಾಟಗಳು ನಡೆದಿವೆ.ಅಬ್ರಾಹಂ ಲಿಂಕನ್ ಗುಲಾಮಗಿರಿಯ ವಿರುದ್ದ, ಜೋಸಫ್ ಸ್ಟಾಲೀನ್ ಬಂಡವಾಳ ಶಾಹಿಗಳ ವಿರುದ್ದ ಹಾಗೂ ನೆಲ್ಸನ್ ಮಂಡೇಲಾ ವರ್ಣಬೇಧ ನೀತಿ ವಿರುದ್ದ ಹೋರಾಟ ಮಾಡಿದ್ದಾರೆ ಎಂದರು.
ಡಾ|| ಅಂಬೇಡ್ಕರ್ರವರು ಭಾರತದಲ್ಲಿ ತಾಂಡವವಾಡುತ್ತಿದ್ದ ಆಥರ್ಿಕ, ಸಾಮಾಜಿಕ ಅಸಮಾನತೆಯನ್ನು ಕಂಡುಂಡು ದಲಿತರು ರಾಜಕೀಯವಾಗಿ ಆಥರ್ಿಕವಾಗಿ ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಇನ್ನೂ ನನಸಾಗಿಲ್ಲ ಎಂದರು.
 ಶಾಸಕ ಸಿ.ಬಿ ಸುರೇಶ್ಬಾಬು ಮಾತನಾಡಿ, ಕಳೆದ ವರ್ಷ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ರೂ. 600 ಕೋಟಿ ಖಚರ್ಾಗಿಲ್ಲ.ಅಧಿಕಾರಿಗಳ ಉಧಾಸೀನ ದೋರಣೆಯೇ ಇದಕ್ಕೆ ಕಾರಣ ಎಂದರು.
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನೀಡುತ್ತಿರುವ ಸವಲತ್ತುಗಳನ್ನು  ಬಳಸಿಕೊಂಡು ದಲಿತರು ಹಾಗೂ ಹಿಂದುಳಿದ ವರ್ಗದ ಮಕ್ಕಳು ಉನ್ನತ ವ್ಯಾಸಂಗ ಪಡೆಯಬೇಕು. ಪರಿಶಿಷ್ಠ ಜಾತಿ ಕಾಲೋನಿಗಳಲ್ಲಿ ಅಂಬೇಡ್ಕರ್ ಭವನ ಹಾಗೂ ಪರಿಶಿಷ್ಟ ಪಂಗಡಗಳಿಗೆ ವಾಲ್ಮೀಕಿ ಭವನ ನಿಮರ್ಿಸಲು ತಲಾ ರೂ.25ಲಕ್ಷ ಅನುದಾನ ನೀಡಲಾಗುವುದು ಎಂದರು. 
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿನಿಯರಾದ ಎಂ. ಬಿ ವಿದ್ಯಾ, ಎಲ್,ಹೇಮಾ, ಪ್ರಗತಿ ಪರ ರೈತ ಮಹಿಳೆ ಅರ್ಚನಾಮಂಜುನಾಥ್, ಅಂಗನವಾಡಿ ಕಾರ್ಯಕತರ್ೆ ಎಲ್.ಭಾಗ್ಯಮ್ಮ, ಕಲಾವಿದ ಸಿ.ಎಸ್. ಚಂದ್ರಯ್ಯ, ಮುಂತಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ  ಭಾವಚಿತ್ರ  ಮೆರವಣಿಗೆ ನಡೆಯಿತು. ತಾಲ್ಲೂಕು ಕಛೇರಿಯಿಂದ ಹೊರಟ ಮೆರವಣಿಗೆ ಬಿ.ಹೆಚ್ ರಸ್ತೆಯಲ್ಲಿ ಸಾಗಿ ಬಂತು.ನೆಹರು ಸರ್ಕಲ್ ಮೂಲಕ ವಿವಿಧ ಕಲಾ ತಂಡಗಳು ಕನ್ನಡ ಸಂಘ ವೇದಿಕೆಗೆ ಆಗಮಿಸಿತು, 
ಪುರಸಭೆ ಅಧ್ಯಕ್ಷ ಸಿ.ಟಿ ದಯಾನಂದ್ ಕಾರ್ಯಕ್ರಮ ಉದ್ಘಾಟಿಸಿದರು, ಜಿ.ಪಂ ಸದಸ್ಯರಾದ ರಾಮಚಂದ್ರಯ್ಯ, ಯಳನಡು ಸಿದ್ದರಾಮಯ್ಯ, ಮಹಲಿಂಗಪ್ಪ, ಮಂಜುಳಮ್ಮ, ಕಲ್ಲೇಶ್, ತಾ.ಪಂ ಸದಸ್ಯರಾದ ಹೆಚ್.ಎನ್.ಕುಮಾರ್, ತಿಮ್ಮಯ್ಯ, ಪುರಸಭಾ ಸದಸ್ಯರಾದ ಅಶೋಕ್, ಸಿ.ಡಿ ಚಂದ್ರಶೇಖರ್, ತಹಸಿಲ್ದಾರ್ ಆರ್ ಗಂಗೇಶ್, ಇ.ಓ ಕೃಷ್ಣಮೂತರ್ಿ, ಸಿ.ಡಿ.ಪಿ.ಓ ಅನಿಸ್ ಕೈಸರ್,  ದಲಿತ ಮುಖಂಡರಾದ ಬೇವಿನಹಳ್ಳಿ ಚೆನ್ನಬಸವಯ್ಯ, ತೀರ್ಥಪುರ ಕುಮಾರ್, ಆರ್.ಪರಶಿವಮೂತರ್ಿ, ಬಿಳಿಗೇಹಳ್ಳಿ ರಾಜು, ಮುಂತಾದವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಎಸ್.ಎಂ ಲೋಕೇಶಮೂತರ್ಿ ಸ್ವಾಗತಿಸಿ ಲಿಂಗದೇವರು ನಿರೂಪಿಸಿದರು, ಬಿ.ಇ.ಓ ಕೃಷ್ಣಮೂತರ್ಿ ವಂದಿಸಿದರು, ಗಂಗಾಧರ್ ತಂಡ ಅಂಬೇಡ್ಕರ್ ಕುರಿತ ಕ್ರಾಂತಿಗೀತೆ ಹಾಡಿತು.


ಬಾಲಕಿಯರ ಹಾಸ್ಟಲ್ಗೆ ಪುರಸಭೆ ವತಿಯಿಂದ ಮಂಚ ವಿತರಣೆ
ಚಿಕ್ಕನಾಯಕನಹಳ್ಳಿ,ಏ.14 : ಬಾಲಕಿಯರ ಹಾಸ್ಟಲ್ ಕಟ್ಟಡ ನಿಮರ್ಾಣಕ್ಕೆ ಎರಡು ಕೋಟಿ ಹಣ ಮಂಜೂರಾಗಿದೆ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಮುಂಬರುವ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಪುರಸಭೆ ವತಿಯಿಂದ 2015-16ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯ ಶೇ.7.25ರ ಯೋಜನೆಯಡಿ 40 ಮಂಚಗಳನ್ನು ವಿತರಿಸಿ ಮಾತನಾಡಿ, ಹಾಸ್ಟಲ್ ವಿದ್ಯಾಥರ್ಿಗಳ ಸೌಕರ್ಯಕ್ಕಾಗಿ ಪುರಸಭೆ ವತಿಯಿಂದ ನೀಡುತ್ತಿರುವ ಮಂಚ ಸದ್ಬಳಕೆಯಾಗಲಿ. ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾಭ್ಯಾಸ ಮುಂದುವರೆಸಿ ಎಂದು ಸಲಹೆ ನೀಡಿದರು.
  ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಸಕರ್ಾರ ವಿವಿಧ ರೀತಿಯ ಯೋಜನೆ ರೂಪಿಸಿ ಸೌಕರ್ಯಗಳನ್ನು ಒದಗಿಸುತ್ತಿದೆ. ಪುರಸಭೆ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿ ಎಂದು ಮಂಚಗಳನ್ನು ನೀಡಿದೆ ಎಂದರು.
 ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್, ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಅಶೋಕ್, ನಿಲಯ ಮೇಲ್ವಿಚಾರಕಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಒಳಿತಿಗಾಗಿ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ : ಬಿ.ಇ.ಓ ಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಏ.14 : ದೇಶದ ಎಲ್ಲಾ ಜನಾಂಗದ ಒಳಿತಿಗಾಗಿ ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ಪುರುಷ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಶ್ಲಾಘಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಡಶಾಲೆಯಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ರವರ 125ನೇ  ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಚಿಕ್ಕವಯಸ್ಸಿನಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಮುಂದಿನ ಜನಾಂಗ ಅನುಭವಿಸುವುದು ಬೇಡ ಎಂದು ತುಳಿತಕ್ಕೊಳಗಾದವರು ಹಾಗೂ ಅಂತ್ಯಜರಿಗೆ ಸಂವಿಧಾನದಲ್ಲಿ ವಿಶೇಷ ಸವಲತ್ತು ನೀಡಿದ್ದಾರೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ಸ್ವಸ್ಥ ಸಮಾಜದ ಎರಡು ಕಣ್ಣುಗಳು. ಸಮಾನತೆ ಹರಸುತ್ತ ಸಮಾಜವನ್ನು ಔನತ್ಯಕ್ಕೆ ಕೊಂಡೋಯ್ದರು. ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ಹಸಿರು ಕ್ರಾಂತಿಯ ಹರಿಕಾರರಾಗಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವ ಸಾರಿದರು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರೌಡಶಾಲೆಯ ಗೋ.ನಿ.ವಸಂತ್ಕುಮಾರ್, ನಿವೃತ್ತ ಮುಖ್ಯಶಿಕ್ಷಕ ರಾಮಣ್ಣ, ಶಿಕ್ಷಕ ಪ್ರದೀಪ್, ಸಂಸ್ಥೆಯ ಮಹದೇವಣ್ಣ, ಮುಖ್ಯಶಿಕ್ಷಕ ರಾಮ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

ನಾಲ್ಕನೇ ಬಾರಿ ನೆಹರು ಸರ್ಕಲ್ನಲ್ಲಿ ಲಾರಿ ಮಗುಚಿ ಬಿದ್ದಿರುವುದು
ಚಿಕ್ಕನಾಯಕನಹಳ್ಳಿ,ಏ.14 : ಪಟ್ಟಣದ ನೆಹರು ವೃತ್ತದ ತಿರುವಿನಲ್ಲಿ ಹತ್ತಿ ತುಂಬಿಕೊಂಡಿದ್ದ ಲಾರಿಯೊಂದು ಬುಧವಾರ ರಾತ್ರಿ ಮಗುಚಿ ಬಿದ್ದಿದೆ.
ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 150ಎ ಚಿ.ನಾ.ಹಳ್ಲಿ ಪಟ್ಟಣದ ಮೂಲಕ ಹಾದು ಹೋಗುತ್ತದೆ, ನಿತ್ಯ ಹುಳಿಯಾರು ಚಿಕ್ಕನಾಯಕನಹಳ್ಳಿ, ಮೈಸೂರು ಕಡೆಗೆ ಹೋಗುವಾಗ ಪಟ್ಟಣದ ನೆಹರು ವೃತ್ತದ ಮೂಲಕವೇ ಹಾದು ಹೋಗಬೇಕು, ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ, ರಾತ್ರಿ ವೇಳೆ ನೆಹರು ವೃತ್ತದಲ್ಲಿ ಸರಿಯಾದ ನಾಮಫಲಕವಾಗಲಿ, ರಸ್ತೆಯಲ್ಲಿ ಸಿಗ್ನಲ್ ಇಲ್ಲದೆ ಇರುವುದರಿಂದ ತಿರುವಿದೆ ಎಂಬುದು ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ, ಇದರಿಂದ ವಾಹನ ಚಾಲಕರಿಗೆ ಮಾರ್ಗದರ್ಶನ ಎಲ್ಲಿದೆ, ಎಲ್ಲಿಗೆ ರಸ್ತೆಯ ಮಾರ್ಗ ಸಂಚರಿಸುತ್ತದೆ ತಿಳಿಯುವುದಿಲ್ಲ, ಈಗಾಗಲೇ ಇದೇ ಜಾಗದಲ್ಲಿ ನಾಲ್ಕೈದು ಬಾರಿ ಲಾರಿಗಳು ಮಗುಚಿ ಬಿದ್ದು ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೆಹರು ವೃತ್ತದಲ್ಲಿ ಸರಿಯಾದ ನಾಮಫಲಕ ಹಾಗೂ ಸಿಗ್ನಲ್ ಲೈಟ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

15ವರ್ಷಗಳ ನಂತರ ನಡೆಯಲಿರುವ ಬೆಳಗುಲಿ ಹೊನ್ನಮರಡಿ ರಂಗನಾಥಸ್ವಾಮಿ ಜಾತ್ರೆ
 ಚಿಕ್ಕನಾಯಕನಹಳ್ಳಿ,ಏ.14  : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿ ದೊಡ್ಡ ಜಾತ್ರೆ 15 ವರ್ಷಗಳ ಬಳಿಕ ನಡೆಯುತ್ತಿದೆ.
ಸತತ 11 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 15ರಿಂದ 25ರವರೆಗೆ ನಡೆಯುವ ನಾನಾ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಏ.15 ಬೆಳಗ್ಗೆ ಧ್ವಜಾರೋಹಣ, 16ರಶನಿವಾರ ಪರ್ವತಾರೋಹಣ ಕಳಸ ಸ್ಥಾಪನೆ, 17ರ ಬೆಳಗ್ಗೆ ದಾಸೋಹ, ರಾತ್ರಿ  ಹನುಮಂತೋತ್ಸವ, 18ರಂದು ರಾತ್ರಿ 8ಕ್ಕೆ ಗರುಡೋತ್ಸವ ,19ರಂದು ಮಂಗಳವಾರ ಸಪರ್ೋತ್ಸವ, 20ರ ಬುಧವಾರ ಅಶ್ವಾರೋಹಣ, 21ರ ಧ್ವಜಾರೋಹಣೋತ್ಸವ, ನೂರೆಂದೆಡೆ ಸೇವೆ, ಹೊಸಕೆರೆ ಉಡುಸಲಮ್ಮ ದೇವಿಗೆ 101 ಎಡೆ ಸೇವೆ, 22ರಂದು ಮಧ್ಯಾಹ್ನ 12ರಿಂದ 1.30ರವರೆಗೆ ಅಭಿಜಿನ್ ಮುಹೂರ್ತದಲ್ಲಿ ಬೆಳಗುಲಿ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. 23ರಂದು ರಾತ್ರಿ 8ಕ್ಕೆ ಆಳುಪಲ್ಲಕ್ಕಿ ಉತ್ಸವ, 24ರಂದು ಅಡ್ಡಪಲ್ಲಕ್ಕಿ ಉತ್ಸವ, 25ರಂದು ಬೆಳಗ್ಗೆ 12ರಿಂದ ಗಂಗಾಸ್ನಾನ ಅಗ್ನಿಕುಂಡೋತ್ಸವ ಸಂಜೆ ಅವಾಮೃತ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ದೇವಸ್ಥಾನದ ಸಮಿತಿ ಮುಖಂಡರು ಕೋರಿದ್ದಾರೆ.