Thursday, April 22, 2010







  1. 50ನೇ ವರ್ಷದ ತಾತಯ್ಯನ ಉರಸ್ನ ವೈಭವದ ಆಚರಣೆ
  2. ದೆಹಲಿ ಮತ್ತು ಕೊಲ್ಲಾಪುರದ ಪಾಟರ್ಿಗಳಿಂದ ಜಿದ್ದಾಜಿದ್ದಿನ ಖಾವಲಿ
  3. ಗಾಯಕ ಗುರುಕಿರಣ್ ತಂಡದವರಿಂದ ರಸ ಸಂಜೆ
  4. ಐವತ್ತು ಸಾವಿರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ
  5. ಜಗಮಗಿಸುವ ಬಾಣಬಿರುಸುಗಳ ಸಿಡಿ ಮದ್ದು
ಚಿಕ್ಕನಾಯಕನಹಳ್ಳಿ,ಏ.17: ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ 50 ನೇ ವರ್ಷದ ಉರಸ್ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಇದೇ 19 ರಿಂದ 21 ರವರೆಗೆ ನಡೆಯುವ ಈ ಕಾರ್ಯಕ್ರಮವನ್ನು ಸುವರ್ಣ ವಷರ್ಾಚರಣೆಯ ಅಂಗವಾಗಿ ವೈಭವತೆಗೆ ಹೆಚ್ಚು ಒತ್ತು ನೀಡಿರುವ ಉರಸ್ ಕಮಿಟಿ,ಸಂಚಾರಿ ಆಕರ್ೆಸ್ಟ್ರಾ, ದೆಹಲಿ ಮತ್ತು ಕೊಲ್ಲಾಪುರದವರ ಜಿದ್ದಾ ಜಿದ್ದಿನ ಖವ್ವಾಲಿ ಮತ್ತು ಸಂಗೀತ ನಿದರ್ೇಶಕ, ಗಾಯಕ ಗುರು ಕಿರಣ್ ರವರ ಸಂಗೀತ ಸುಧೆ ಮತ್ತು ನೃತ್ಯ ವೈಭವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಇದೇ 19ರ ಸೋಮವಾರ ರಾತ್ರಿ 8ಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತವಾದ ಹೂವಿನ ಮಂಟಪದಲ್ಲಿ ತಾತಯ್ಯನವರ ಉತ್ಸವ, ಗೋರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಲಿದೆ, ಈ ಸಂದರ್ಭದಲ್ಲಿ ನ್ಯೂ ಭಾರತ್ ಬ್ಯಾಂಡ್ ಸಂಚಾರಿ ಆಕರ್ೆಸ್ಟ್ರಾ ಮೆರವಣಿಗೆಗೆ ಸಾಥ್ ನೀಡಲಿದೆ.
ಖಾವಲಿ: ಇದೇ 20ರ ಮಂಗಳವಾರ ಸಂಜೆ 7.30ಕ್ಕೆ ಜಿದ್ದಾಜಿದ್ದಿನ ಖಾವಲಿ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಚಾಂದ್ ಅಪ್ಜಲ್ ಖಾದಿ,್ರ ಪಾಟರ್ಿ ಆಫ್ ದೆಹಲಿ ಮತ್ತು ಚೂಟಿ ತಮ್ಮನ್ನ ಬಾನು, ಪಾಟರ್ಿ ಆಫ್ ಕೊಲ್ಲಾಪುರ ಇವರು ನಡೆಸಿಕೊಡಲಿದ್ದಾರೆ, ಖವ್ವಾಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎಜಾಜುದ್ದೀನ್ ನೆರವೇರಿಸಲಿದ್ದು, ತಾತಯ್ಯ ಗೋರಿ ಕಮಿಟಿಯ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ರಾಜ್ಯ ವಕ್ಪ್ ಬೋಡರ್್ ಆಡಳಿತಾಧಿಕಾರಿ ಎಂ.ಎನ್.ಸಲೀಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಪಿ ಅಹಮದ್, ಜಿಲ್ಲಾ ವಕ್ಪ್ ಬೋಡರ್್ ಅಧ್ಯಕ್ಷ ಮುಷ್ತಾಕ್ ಅಹಮದ್, ಸಾಹಿತಿ ಡಾ. ಅಬ್ದುಲ್ ಹಮೀದ್, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಮಾಜಿ ಶಾಸಕರುಗಳಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಎ.ಸಿ,ಬಸವರಾಜೇಂದ್ರ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಜೆ.ಡಿ.ಎಸ್. ಅಧ್ಯಕ್ಷ ಸಿ.ಪಿ.ಚಂದ್ರಶೇಖರ ಶ್ರೇಷ್ಠಿ, ಭಾ.ಜ.ಪ.ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಿಕಾಡರ್್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕಲ್ಪವೃಕ್ಷ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಾಮಿಯಾ ಮಸೀದಿಯ ಮುತುವಲ್ಲಿ ಉಪಸ್ಥಿತರಿರುವರು.
ಸಂಗೀತ ರಸ ಸಂಜೆ: ಇದೇ 21ರ ಬುಧವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿದರ್ೇಶಕ, ಗಾಯಕ ಗುರುಕಿರಣ್ ಮತ್ತು ಸಂಗಡಿಗರಿಮದ ಸಂಗೀತ ಸುಧೆ ಹಾಗೂ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಡ್ಯ ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕರುಗಳಾದ ಜಮೀರ್ ಅಹಮದ್ ಖಾನ್, ಮಾಗಡಿಯ ಎಚ್.ಸಿ.ಬಾಲಕೃಷ್ಣ, ತುರುವೇಕೆರೆಯ ಎಂ.ಟಿ.ಕೃಷ್ಣಪ್ಪ, ಗುಬ್ಬಿಯ ಎಚ್.ಆರ್.ಶ್ರೀನಿವಾಸ್, ಮಧುಗಿರಿಯ ಅನಿತಾ ಕುಮಾರಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಡಿ.ಸಿ, ಡಾ.ಸಿ.ಸೋಮಶೇಖರ್, ಎಸ್.ಪಿ, ಡಾ.ಪಿ.ಎಸ್.ಹರ್ಷ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ಟಿ.ಕೆ.ರುಕ್ಮಿಣಮ್ಮ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಗೋರಿ ಕಮಿಟಿ ಅಧ್ಯಕ್ಷ ಎಚ್.ಜಿ.ನಾರಾಯಣರಾವ್, ಹಾಸನದ ಗುತ್ತಿಗೆದಾರ ಮಹಮದ್ ಗೌಸ್, ಹಿರಿಯ ನಾಗರೀಕ ಪ್ಯಾರೇಜಾನ್ ಸಾಬ್ರವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾತಯ್ಯನ ಗೋರಿ ಕಮಿಟಿಯ ಪದಾಧಿಕಾರಿಗಳಾದ ಟಿ.ರಾಮಯ್ಯ, ಸಿ.ಎಂ.ರಂಗಸ್ವಾಮಯ್ಯ, ಮಹಮದ್ ಖಲಂದರ್, ಜಾಫರ್ ಖಾನ್, ಕಲ್ಪವೃಕ್ಷ ಕೋ ಅಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜ್ ಹಾಜರಿದ್ದರು.
ಕಂಪ್ಯೂಟರ್ ತೊಂದರೆ ಪಹಣಿಗಾಗಿ ರೈತರ ಪರದಾಟ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನ ಕಂದಾಯ ಇಲಾಖೆಯಲ್ಲಿ ಅಳವಡಿಸಿರುವ ಕಂಪ್ಯೂಟರ್ಗಳು ಕಳಪೆಯಾಗಿದ್ದು ಉಪಯೋಗಕ್ಕೆ ಬರುತ್ತಿಲ್ಲ ಇದರಿಂದ ರೈತರಿಗೆ ಪಹಣೆ ಮುಂತಾದ ದಾಖಲಾತಿಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆಂದು ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಆರೋಪಿಸಿದ್ದಾರೆ.
ರೈತರು ಪಹಣಿ ಮುಂತಾದ ದಾಖಲಾತಿಗಳನ್ನು ಪಡೆಯಲು ದಿನವಿಡಿ 20-30 ಮೈಲಿ ದೂರದೂರುಗಳಿಂದ ಪಟ್ಟಣಕ್ಕೆ ಬಂದು, ದಾಖಲಾತಿಗಾಗಿ ಅಲೆಯುತ್ತಿದ್ದು ಆ ಇಲಾಖೆಯ ನೌಕರರು ನಾಳೆ ಬನ್ನಿ, ಒಂದು ವಾರ ಬಿಟ್ಟು ಬನ್ನಿ ಎಂಬ ಹಾರಿಕೆ ಉತ್ತರಗಳನ್ನು ಕಳೆದ 3-4ತಿಂಗಳಿಂದಲೂ ಹೇಳುತ್ತಿದ್ದಾರೆ, ಇದರ ಬಗ್ಗೆ ಮೇಲಾಧಿಕಾರಿಗಳನ್ನು ವಿಚಾರಿಸಿದರೆ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಉತ್ತರಗಳನ್ನು ಕೇಳಿ ಕೇಳಿ ಸಾಕಾಗಿದೆ ಎಂದಿರುವ ಅವರು, ಬೆಂಗಳೂರಿನ ಬಿ.ಎಂ.ಸಿಯಲ್ಲಿ ವಿಚಾರಿಸಬೇಕು ಎನ್ನುತ್ತಾರೆ, ಅಲ್ಲಿಯ ಅಧಿಕಾರಿ ಗುರುಮೂತರ್ಿ ಎಂಬುವರನ್ನು ವಿಚಾರಿಸಿದರೆ ಇಲಾಖೆಯವರು ಸೂಕ್ತ ಸಮಯದಲ್ಲಿ ಮಾಹಿತಿ ಒದಗಿಸಿಲ್ಲ ಎಂದು ಇಲ್ಲಿಯ ಅಧಿಕಾರಿಗಳ ಮೇಲೆ ದೂರುತ್ತಿದ್ದಾರೆ. ಈ ವಿಷಯಕ್ಕೆ ಸಂಬಂದಿಸಿದ ಮೇಲಧಿಕಾರಿಗಳು ತಕ್ಷಣ ಗಮನ ಹರಿಸಿ ರೈತರಿಗಾಗುತ್ತಿರುವ ತೊಂದರೆ ನಿವಾರಿಸದಿದ್ದರೆ ಇಡೀ ತಾಲೂಕಿನಾದ್ಯಂತ ರೈತರನ್ನು ಸಂಘಟಿಸಿ ಪಕ್ಷ ಉಗ್ರ ಹೋರಾಟ ಮಾಡಬೇಕಾಗುವುದೆಂದು ಎಚ್ಚರಿಸಿದ್ದಾರೆ.

ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉಚಿತ ವಿವಾಹ ಮುಂದೂಡಿಕೆ
ಚಿಕ್ಕನಾಯಕನಹಳ್ಳಿ,ಏ.17: ದುಗರ್ಾ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯ ವಾಷರ್ಿಕೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹವನ್ನು ಮೇ.21ಕ್ಕೆ ಮುಂದೂಡಲಾಗಿದೆ ಎಂದು ಎಂದು ಟ್ರಸ್ಟಿ ತಿಮ್ಮಬೋವಿ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಮೊದಲು ನಿಗದಿ ಪಡಿಸಿದ ಕಾರ್ಯಕ್ರಮವನ್ನು ಮೇ.21ಕ್ಕೆ ಮುಂದೂಡಿದ್ದು ಉಳಿದಂತೆ ಈ ಮೊದಲು ನಿಗದಿ ಪಡಿಸಿದ ಸ್ಥಳವಾದ ನರುವಗಲ್ ಮಜುರೆ ಹುಲಿಕಲ್ ಬೆಟ್ಟ ಪುಣ್ಯಕ್ಷೇತ್ರದ ದುಗರ್ಾಂಬ ದೇವಸ್ಥಾನದಲ್ಲಿ ನಡೆಸಲಾಗುವುದು, ಸಮಾರಂಭದಲ್ಲಿ ಚಿತ್ರದುರ್ಗ ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿ ವಿರಕ್ತಮಠ ಡಾ.ಅಭಿನವ ಮಲ್ಲಿಕಾಜರ್ುನ ಮಹಾಸ್ವಾಮಿ ಆಶೀರ್ವಚನ ನೀಡಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಾಹವಾಗಲಿಚ್ಛಿಸುವವರು ತಮ್ಮ ಹೆಸರನ್ನು ಮೇ 1ರೊಳಗಾಗಿ ದು.ಗ್ರಾ.ಮ.ಶೈ.ಸಂಘದ ಅಧ್ಯಕ್ಷ ಇ.ನಾಗರಾಜು ಮೊ.ನಂ.9880752436 ಅಥವಾ ತಿಮ್ಮಾಬೋವಿ 9535467784 ಇವರನ್ನು ಸಂಪಕರ್ಿಸಲು ಕೋರಿದ್ದಾರೆ.

ಕನಕ ಸೇವಾ ಸಮಿತಿಯ 15 ನೇ ವಾಷರ್ಿಕ ಮಹಾಸಭೆ
ಚಿಕ್ಕನಾಯಕನಹಳ್ಳಿ,ಏ.17: ಕನಕ ಸೇವಾ ಸಮಿತಿಯ ದೈವಾಷರ್ಿಕ ಚುನಾವಣೆ ಮತ್ತು 15ನೇ ವಾಷರ್ಿಕ ಮಹಾಸಭೆಯನ್ನು ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಏಪ್ರಿಲ್ 25ರ ಭಾನುವಾರದಂದು ಪಟ್ಟಣದ ಕನಕ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಸಲು ಸಮಿತಿ ತೀಮರ್ಾನಿಸಲಾಗಿದೆ ಎಂದು ಪ್ರಧಾನ ಕಾರ್ಯದಶರ್ಿ ಶಿವಣ್ಣ(ಮಿಲ್ಟ್ರಿ) ತಿಳಿಸಿದ್ದಾರೆ.
ದೈವಾಷರ್ಿಕ ಚುನಾವಣೆಯ ವೇಳಾಪಟ್ಟಿ: ಈಗಾಗಲೇ ಉಮೇದುವಾರಿಕೆ ಅಜರ್ಿಸಲ್ಲಿಸಿರುವವರು ತಮ್ಮ ಉಮೇದುವಾರಿಕೆ ಹಿಂಪಡೆಯಲು ಏ.18ರಂದು ಕೊನೆಯ ದಿನವಾಗಿರುತ್ತದೆ, ಅಗತ್ಯವಿದ್ದರೆ ಏ. 25ರಂದು ಭಾನುವಾರ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಡಿತರ ಚೀಟಿ ಪಡೆಯಲು ಸೂಚನೆ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನಲ್ಲಿ ಈ ಹಿಂದೆ ಭಾವಚಿತ್ರ ಸೆರೆಹಿಡಿಯಲಾದ ಅಂತ್ಯೋದಯ ಅಕ್ಷಯ, ಎಪಿಎಲ್ ಶಾಶ್ವತ ಗಣಕೀಕೃತ ಪಡಿತರ ಚೀಟಿಗಳನ್ನು ಪಡೆಯಲು ಏಪ್ರಿಲ್ 20ರಂದು ಅಂತಿಮ ದಿನಾಂಕವಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
2009ರ ಏಪ್ರಿಲ್ ತಿಂಗಳ ಮೊದಲು ಭಾವಚಿತ್ರ ತೆಗೆಸಿದ ಶಾಶ್ವತ ಪಡಿತರ ಚೀಟಿಗಳು ಕಛೇರಿಯಲ್ಲಿ ಸುಮಾರು 8ಸಾವಿರವಿದ್ದು ವಿತರಣೆಗಾಗಿ ಜನವರಿ 25ರಿಂದಲೇ ಕೌಂಟರ್ ತೆಗೆಯಲಾಗಿದೆ.
ಶಾಶ್ವತ ಪಡಿತರ ಚೀಟಿ ಪಡೆಯುವ ಮೊದಲು ಭಾವಚಿತ್ರ ತೆಗೆಸಿರುವ ಪಡಿತರ ಚೀಟಿದಾರರು ತಮ್ಮಲ್ಲಿರುವ ಪಡಿತರ ಚೀಟಿಯನ್ನು 18ವರ್ಷ ಮೀರಿದ ಸದಸ್ಯರು 15ರೂ ಅನ್ನು ಕೋಮ್ಯಾಟ್ ಏಜೆನ್ಸಿಯವರಿಗೆ ನೀಡಿದಲ್ಲಿ ತಮ್ಮ ಹೆಬ್ಬೆಟ್ಟಿನ ಗುರುತನ್ನು ಪಡೆದು, ಶಾಶ್ವತ ಪಡಿತರ ಚೀಟಿ ವಿತರಿಸಲಾಗುವುದು ಮತ್ತು ಕುಟುಂಬದ ಯಾರೂ ಭಾವಚಿತ್ರ ತೆಗೆಸಿಕೊಳ್ಳದ ಪಡಿತರ ಚೀಟಿದಾರರು ತಾಲೂಕು ಕಛೇರಿಗೆ ತಮ್ಮ ಕುಟುಂಬದ 12ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರೊಂದಿಗೆ ಹಾಜರಾಗಿ ತಮ್ಮ ಪಡಿತರ ಚೀಟಿಯೊಂದಿಗೆ 45ರೂಗಳನ್ನು ಪಾವತಿಸಿ ಜೀವ ಮಾಪಕ ನೀಡಿ ಬಾವಚಿತ್ರ ತೆಗೆಸಿಕೊಳ್ಳಲು ತಹಶೀಲ್ದಾರ್ ತಿಳಿಸಿದ್ದಾರೆ.
ಶಾಶ್ವತ ಪಡಿತರ ಚೀಟಿಗಳಲ್ಲಿ ಹೆಸರು, ವಯಸ್ಸು, ವಿಳಾಸ ಇತರೆ ತಪ್ಪಾಗಿದ್ದಲ್ಲಿ ಕಾಡರ್್ ಪಡೆದ 1ತಿಂಗಳ ನಂತರ ತಾಲೂಕು ಕಛೇರಿಗೆ ಮನವಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಮತ್ತು ಏಕ ವ್ಯಕ್ತಿ ಭಾವ ಚಿತ್ರ ತೆಗೆಸಿದ ಕುಟುಂಬದ ಇತರೆ ಸದಸ್ಯರೊಂದಿಗೆ ಭಾವಚಿತ್ರ ತೆಗೆಸಲು ಅವಕಾಶ ಒದಗಿಸಲಾಗಿದ್ದು ಸದಸ್ಯರು ತಮ್ಮ ಚುನಾವಣಾ ಗುರುತಿನ ಚೀಟಿ ವಿದ್ಯಾಥರ್ಿಗಳ ವ್ಯಾಸಾಂಗ ದೃಡೀಕರಣ ಹಾಗೂ ಇತರೆ ದಾಖಲೆಗಳನ್ನು ಹಾಜರುಪಡಿಸಿ ತಾಲೂಕು ಕಛೇರಿಯಲ್ಲಿ ಭಾವಚಿತ್ರ ತೆಗೆಸಿ ಜೀವಮಾಪನ ನೀಡಬಹುದಾಗಿದೆ, ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ತಹಶೀಲ್ದಾರ್ ಕೋರಿದ್ದಾರೆ.

ತಾಲೂಕಿನ 28 ಗ್ರಾ.ಪಂ.ಗಳಲ್ಲಿನ ಮತಗಟ್ಟೆ ಹಾಗೂ ಮತದಾರರ ಮಾಹಿತಿ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು ಇವುಗಳಿಗೆ ಮೇ 8ರಂದು ಚುನಾವಣೆ ನಡೆಸಲಾಗುವುದು.
ತಾಲೂಕಿನ ದಸೂಡಿ ಗ್ರಾಮ ಪಂಚಾಯಿತಿಯಲ್ಲಿ 6ಮತಗಟ್ಟೆಗಳನ್ನು ಸ್ಥಾಪಿಸಲಿದ್ದು ಇದರಲ್ಲಿ 2602 ಗಂಡಸರು, 2387 ಹೆಂಗಸರು, ಒಟ್ಟು 4989 ಮತದಾರರಿದ್ದಾರೆ, ಹೊಯ್ಸಳಕಟ್ಟೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 8, ಗಂ.2736, ಹೆಂ.2557 ಒಟ್ಟು 5293, ಗಾಣದಾಳು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2800, ಹೆಂ.2577 ಒಟ್ಟು 5377, ಕೆಂಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2571, ಹೆಂ.2461, ಒಟ್ಟು 5032, ಹುಳಿಯಾರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 13, ಗಂ.4949, ಹೆಂ.4633 ಒಟ್ಟು 9582, ಯಳನಡು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2564, ಹೆಂ.2324 ಒಟ್ಟು 4888, ಕೋರಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2175, ಹೆಂ.2090 ಒಟ್ಟು 4265, ದೊಡ್ಡೆಣ್ಣೆಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 9, ಗಂ.3067, ಹೆಂ.3016 ಒಟ್ಟು 6083, ಹಂದನಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7 ಗಂ.2687, ಹೆಂ.2676, ಒಟ್ಟು 5363, ಚೌಳಕಟ್ಟೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2216, ಹೆಂ.2213 ಒಟ್ಟು 4429, ತಿಮ್ಲಾಪುರ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2441, ಹೆಂ.2353 ಒಟ್ಟು 4794, ದೊಡ್ಡಬಿದರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2477, ಹೆಂ.2372 ಒಟ್ಟು 4849, ಬರಕನಾಳು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2163, ಹೆಂ.2073 ಒಟ್ಟು 4236, ತಿಮ್ಮನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 8, ಗಂ.2905, ಹೆಂ.2917, ಒಟ್ಟು 5822, ರಾಮನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.1966, ಹೆಂ.1890 ಒಟ್ಟು 3856, ಕಂದಿಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ. 2380, ಹೆಂ.2398 ಒಟ್ಟು 4778, ಬೆಳಗುಲಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2037, ಹೆಂ.2000 ಒಟ್ಟು 4037, ಬರಗೂರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2029, ಹೆಂ.1851 ಒಟ್ಟು 3880, ಮತಿಘಟ್ಟ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2085, ಹೆಂ.2067 ಒಟ್ಟು 4152, ಮಲ್ಲಿಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2290, ಹೆಂ.2313 ಒಟ್ಟು 4603, ಕುಪ್ಪೂರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2330, ಹೆಂ.2308 ಒಟ್ಟು 4638, ಶೆಟ್ಟಿಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2264, ಹೆಂ.2281 ಒಟ್ಟು 4545, ದುಗಡಿಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.1691, ಹೆಂ.1676 ಒಟ್ಟು 3367, ಮುದ್ದೇನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 9, ಗಂ.2852, ಹೆಂ.2812 ಒಟ್ಟು 5664, ಹೊನ್ನೆಬಾಗಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.1658, ಹೆಂ.1618 ಒಟ್ಟು 3276, ತೀರ್ಥಪುರ ಗ್ರಾ.ಪಂಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2428, ಹೆಂ.2263 ಒಟ್ಟು 4691, ಗೋಡೆಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2166, ಹೆಂ.2126 ಒಟ್ಟು 4292, ಜೆ.ಸಿ.ಪುರ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2339, ಹೆಂ. 2280 ಒಟ್ಟು 4619 ಮತದಾರಿದ್ದಾರೆ.
ತಾಲೂಕಿನ 28 ಗ್ರಾ.ಪಂ.ಗಳಿಂದ ಒಟ್ಟು 135400 ಮತದಾರರಿದ್ದು ಇದರಲ್ಲಿ ಗಂ.68868, ಹೆಂ.66532 ಇದ್ದಾರೆ, ಈ ಚುನಾವಣೆಗೆ ತಾಲೂಕಿನಲ್ಲಿ ಒಟ್ಟು 187 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
  • ಹಂದನಕೆರೆ ಹೋಬಳಿಯಲ್ಲಿ ಭಾರಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ
  • 30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ
  • ಆಲಿಕಲ್ಲಿನಿಂದಜೀವಹಾನಿ, ಮನೆಗಳ ಮೇಲ್ಚಾವಣಿ ಗಾಳಿಗೆ, ನಿರಾಶ್ರಿತರಿಗೆ ಗಂಜಿಕೇಂದ್ರ

ಚಿಕ್ಕನಾಯಕನಹಳ್ಳಿ,ಏ.17: ಹಂದನೆಕೆರೆ ಹೋಬಳಿಯಲ್ಲಿ ಬಿದ್ದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಹಸುಗೂಸೊಂದು ಸಾವನ್ನಪ್ಪಿದ್ದು, ನೂರಾರು ತೆಂಗಿನ ಮರಗಳು ಬುಡಮೇಲಾಗಿವೆ, ಹತ್ತಾರು ಮಾವಿನ ಮಾರುಗಳು ನೆಲಕ್ಕುರುಳಿವೆ, ಹತ್ತಾರು ಎಕರೆ ಬಾಳೆ ತೋಟಕ್ಕೆ ಭಾರಿ ನಷ್ಟವಾಗಿದ್ದು, 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ, ಮನೆಗಳ ಮೇಲ್ಚಾವಣಿ ಗಾಳಿಗೆ ತೂರಿ ಹೋಗಿದ್ದು, 30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ ಉಂಟಾಗಿದೆ, ತಾಲೂಕು ಆಡಳಿತದ ವತಿಯಿಂದ ನಿರಾಶ್ರಿತರಿಗೆ ಗಂಜಿ ಕೇಂದ್ರವನ್ನು ತೆರಯಲಾಗಿದೆ.
ಶುಕ್ರವಾರ ಸಂಜೆ ಹಂದನಕೆರೆ ಹೋಬಳಿ ಗುಂಗುರಬಾಗಿ, ಚಿಕ್ಕ ಎಣ್ಣೆಗೆರೆ, ಹಳ್ಳಿ ತಿಮ್ಲಾಪುರ, ದೊಡ್ಡ ಎಣ್ಣೆಗೆರೆ, ಯಳ್ಳೇನಹಳ್ಳಿ, ಹುಚ್ಚನಹಳ್ಳಿ, ಸಬ್ಬೇನಹಳ್ಳಿ,ರಂಗೇನಹಳ್ಳಿ, ಚೌಳಕಟ್ಟೆ, ಭೀಮಸಂದ್ರ, ಕಾನ್ಕೆರೆ, ಬಂದ್ರೇಹಳ್ಳಿ, ಕೆಂಗ್ಲಾಪುರ, ರಾಮಘಟ್ಟೆ ಗ್ರಾಮಗಳಲ್ಲಿ ಬಿದ್ದ ಮಳೆ ಹಾಗೂ ಬಿರುಗಾಳಿಯಿಂದ ಸಾವಿರಾರು ಮರಗಳು ಬಿದ್ದಿವೆ. ಗುಂಗುರಬಾಗಿ ಗ್ರಾಮದಲ್ಲಿನ ದಲಿತರ ಮನೆಗಳ ಮೇಲ್ಚಾವಣಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ತಾತ್ಕಾಲಿಕ ನಿರಾಶ್ರಿತರಾಗಿದ್ದಾರೆ, ಆಲಿಕಲ್ಲಿನ ಹೊಡೆತದಿಂದ ಕಿರಣ್ ಎಂಬುವರ ಹಸುಗೂಸು 'ಮಾನ್ಯಶ್ರೀ' ಎಂಬಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಸಾವನ್ನಪ್ಪಿದ್ದಾಳೆ, ಇದೇ ಗ್ರಾಮದ ಪುಟ್ಟಮ್ಮ ಎಂಬಾಕೆ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ನಿತ್ರಾಣಳಾಗಿದ್ದಾಳೆ, ಗುಂಗುರಬಾಗಿ ಕಾಲೋನಿ ಒಂದರಲ್ಲೇ ಸುಮಾರು 10 ರಿಂದ 12 ಲಕ್ಷ ರೂ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ ಸಂಭವಿಸಿದೆ.
ಇಷ್ಟೆಲ್ಲಾ ಸಾವು,ನೋವು ಉಂಟಾಗಿದ್ದರು ತಕ್ಷಣವೇ ಸ್ಪಂದಿಸಲಿಲ್ಲವೆಂಬ ಆವೇಶದಿಂದ ಇಲ್ಲಿನ ಜನರು ಪ್ರತಿಭಟನೆಯನ್ನು ನೆಡೆಸಿದರು.
ಈ ಗ್ರಾಮದ ವೃದ್ದರು,ಹೆಂಗಸರು ಹಾಗೂ ಮಕ್ಕಳ ಯೋಗ ಕ್ಷೇಮದ ದೃಷ್ಠಿಯಿಂದ ಇವರೆಲ್ಲರಿಗೆ ಹಂದನೆಕೆರೆ ಸಕರ್ಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು ಇಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿದೆ.
ಈ ಘಟನೆಯಿಂದ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದರೆ, ನೂರಾರು ಕುಟುಂಬಗಳಿಗೆ ಭಾರಿ ಹೊಡೆತ ಬಿದ್ದಿದೆ. ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ಸಾವನ್ನಪಿರುವ ಮಗುವಿನ ಕುಟುಂಬಕ್ಕೆ ಸಕರ್ಾರದಿಂದ ಒಂದು ಲಕ್ಷ ರೂ ಪರಿಹಾರ ಕೊಡಿಸುವುದಾಗಿ ತಿಳಿಸಿದರಲ್ಲದೆ, ಸದ್ಯದ ಪರಿಹಾರವಾಗಿ ಪ್ರಕೃತಿ ವಿಕೋಪದ ಪರಿಹಾರ ನಿಧಿಯಿಂದ ಸ್ಥಳದಲ್ಲೇ ಒಂದು ಸಾವಿರ ರೂಗಳ ಚೆಕ್ ನೀಡುವುದಾಗಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಬಸವರಾಜೇಂದ್ರ ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸಕರ್ಾರದಿಂದ ಪ್ರಕೃತಿ ವಿಕೋಪ ನಿಧಿಯಲ್ಲಿ ತಕ್ಷಣವೇ ದೊರೆಯುವ ಪರಿಹಾರವನ್ನು ಕೊಡುವುದಲ್ಲದೆ, ಹೆಚ್ಚಿನ ಪರಿಹಾರಕ್ಕೆ ಕಂದಾಯ ಇಲಾಖೆ ಹೋಬಳಿ ಮಟ್ಟದ ಅಧಿಕಾರಿಗಳ ವರದಿ, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯವರ ಪರಿಶೀಲನೆಯ ನಂತರ ಹೆಚ್ಚಿನ ಪರಿಹಾರವನ್ನು ಸಕರ್ಾರ ದಿಂದ ಕೊಡಿಸುವುದಾಗಿ ತಿಳಿಸಿದರು. ಈ ಸಂಬಂಧ ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ದೊರೆಯುವ ಸಹಕಾರವನ್ನು ಕೊಡಿಸುವುದಾಗಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಸಂಸದರ ನಿಧಿಯಲ್ಲಿ ಮನೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದರಲ್ಲದೆ, ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚಚರ್ಿಸಿ ಹೆಚ್ಚಿನ ಅನುಧಾನ ಬಿಡುಗಡೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಜಿ.ಪಂ.ಸದಸ್ಯ ಜಿ.ರಘುನಾಥ್, ತಾ.ಪಂ.ಸದಸ್ಯ ದಾಸೇಗೌಡ, ತಾ.ಪಂ.ಮಾಜಿ ಸದಸ್ಯ ಮೋಹನ್, ಕೆ.ಕೆ.ಹನುಮಂತಪ್ಪ, ಲಚ್ಚಾನಾಯ್ಕ, ಉಪ್ಪಾರಳ್ಳಿ ಬಸವರಾಜು, ಕುದುರೆ ರಾಜಣ್ಣ, ಹೊನ್ನಮ್ಮ, ಸಿ.ಪಿ.ಐ. ರವಿಪ್ರಸಾದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ವೇದಮೂತರ್ಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಮುಂಗಾರು ಅಬ್ಬರಕ್ಕೆ ನಲುಗಿದ ರೈತ
ಚಿಕ್ಕನಾಯಕನಹಳ್ಳಿ,ಏ.19: ತಾಲೂಕಿನ ಹಂದನೆಕೆರೆ ಭಾಗದಲ್ಲಿ ಬಿದ್ದ ಭಾರಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ನೊಂದ ರೈತರನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಭೇಟಿ ಮಾಡಿ ಗ್ರಾಮಸ್ಥರ ಸಂಕಷ್ಟವನ್ನು
ಆಲಿಸಿದರು.
ಈ ಭಾಗದ ಗ್ರಾಮಗಳಾದ ಕೆಂಗಾಲಪುರ, ಕೆಂಗಾಲಪುರ ತಾಂಡ್ಯ, ಹುಚ್ಚಿನಹಳ್ಳಿ, ಕಾನ್ಕೆರೆ, ಗುಂಗರಬಾಗಿ, ಸಬ್ಬೇನಹಳ್ಳಿ ಗ್ರಾಮಸ್ಥರೊಂದಿಗೆ ಮಾತನಾಡಿ, ಸಕರ್ಾರ ದಿಂದ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬರುವ ಸವಲತ್ತುಗಳನ್ನು ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಮೂಲಕ ತಮ್ಮ ಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದರಲ್ಲದೆ, ಗುಂಗುರಬಾಗಿಯ ಕಿರಣ್ ಎಂಬವರ ಮನೆಯ ಮೇಲೆ ಆಲಿಕಲ್ಲು ಬಿದ್ದ ಪರಿಣಾಮ 'ಮಾನ್ಯಶ್ರೀ' ಎಂಬ ಹಸುಗೂಸಿನ ಸಾವಿಗೆ ಮಮ್ಮಲಮರುಗಿದ ಕೆ.ಎಸ್.ಕೆ. ಪ್ರಕೃತಿ ವಿಕೋಪ ನಿಧಿಯಿಂದ ಒಂದು ಲಕ್ಷ ರೂಗಳನ್ನು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಪೋಷಕರಿಗೆ ತಿಳಿಸಿದರು.
ಹಾನಿಗೊಳಗಾದ ತೋಟದ ಮಾಲೀಕರಿಗೆ ಹಾಗೂ ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಸೂರನ್ನು ಒದಗಿಸಿಕೊಡಲು ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದರು. ಈ ಭಾಗದಲ್ಲಿ ತೊಂದರೆಗೆ ಸಿಲುಕಿದ ಇಟ್ಟಿಗೆ ಫ್ಯಾಕ್ಟರಿಗಳ ಮಾಲೀಕರಿಗೂ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮುಂಗಾರಿನ ಅಬ್ಬರಕ್ಕೆ ನಲುಗಿದ ತಾಲೂಕು: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾದಾಗಿನಿಂದ ಕಸಬಾ, ಕಂದಿಕೆರೆ, ಶೆಟ್ಟೀಕೆರೆ ಹಾಗೂ ಹುಳಿಯಾರು ಹೋಬಳಿಗಳಲ್ಲಿ ಸಾಕಷ್ಟು ತೊಂದರೆಗಳಾಗಿದ್ದು ಇದರಿಂದ ರೈತರ ತೆಂಗು,ಅಡಿಕೆ, ಬಾಳೆ ಹಾಗೂ ಮಾವು ಬೆಳೆಗಳಿಗೆ ತೀವ್ರ ಹಾನಿಯಾಗಿದೆ, ಅಲ್ಲದೆ ರಸ್ತೆ ಬದಿಯ ಮರಗಳು ಹಾಗೂ ವಿದ್ಯುತ್ ಕಂಬಗಳು ಹುರಳಿರುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಮಳೆಯಿಂದ ವಿದ್ಯುತ್ ಅಡಚಣೆಯಿಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಗ್ರಾ.ಪಂ.ಗಳು ದಿವ್ಯ ನಿರ್ಲಕ್ಷ್ಯದಿಂದೆ. ಗ್ರಾ.ಪಂ. ಕಛೇರಿ ಸಂಪೂರ್ಣವಾಗಿ ಚುನಾವಣಾ ರಾಜಕಾರಣದಿಂದ ಕೂಡಿದ್ದು, ಜನ ಸಾಮಾನ್ಯರ ಕಷ್ಟವನ್ನು ಕೇಳುವ ತಾಳ್ಮೆ ಸ್ಥಳೀಯ ಅಧಿಕಾರವರ್ಗಕ್ಕೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.