Saturday, January 22, 2011



ಚಿ.ನಾ.ಹಳ್ಳಿ ಬಂದ್ ಯಶಸ್ವಿ: ಜನ ಸಾಮಾನ್ಯರ ಪರದಾಟ
ಚಿಕ್ಕನಾಯಕನಹಳ್ಳಿ,ಜ.22: ರಾಜ್ಯದ ಬಿ.ಜೆ.ಪಿ ನೀಡಿದ್ದ ದಿಢೀರ್ ಬಂದ್ನಿಂದಾಗಿ ಕಾರ್ಯಕರ್ತರು ರೊಚಿಗೆದ್ದು ಬಸ್ ಒಂದಕ್ಕೆ ಕಲ್ಲು ಹೊಡೆದೆದ್ದಲ್ಲದೆ, ಆರು ಆಟೋಗಳಿಗೆ ಹಾನಿ ಮಾಡಿದ್ದಾರೆ, ವ್ಯಾಪಾರಸ್ಥರಿಗೆ, ಶಾಲಾ-ಕಾಲೇಜು ಮಕ್ಕಳಿಗೆ, ವಿವಿಧ ಕ್ಷೇತ್ರದ ನೌಕರರಿಗೆ ತೊಂದರೆಯಾಗಿರುವುದಲ್ಲದೆ ಬಂದ್ನ ವಿಷಯ ತಿಳಿಯದ ವಾಹನ ಚಾಲಕರು ಜನರನ್ನು ಪ್ರಾಯಣದ ಮಧ್ಯೆದಲ್ಲಿ ಇಳಿಸಿ ಪ್ರಯಾಣಿಕರು ತಿಂಡಿ ಊಟಕ್ಕೆ ಪರದಾಡುವಂತಹ ಸ್ಥಿತಿ ನಿಮರ್ಾಣವಾಯಿತು.
ಮುಂಜಾನೆಯಿಂದ ಆರಂಭಗೊಂಡ ಬಂದ್ನಿಂದ ಬಿ.ಜೆ.ಪಿ. ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಒಂದು ಸುತ್ತು ಪ್ರದಕ್ಷಣೆ ಬಂದು, ಹೊಟೇಲ್, ಪೆಟ್ಟಿಗೆ ಅಂಗಡಿಗಳನ್ನು ಬಂದ್ ಮಾಡಿಸಿದರು. ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ ಮಾಜಿ ಅಧ್ಯಕ್ಷರುಗಳಾದ ರಾಜಣ್ಣ, ಶ್ರೀನಿವಾಸಮೂತರ್ಿ ಹಾಗೂ ಬಿ.ಜೆ.ಪಿ ಮುಖಂಡರುಗಳಾದ ಮೈಸೂರಪ್ಪ, ತಮ್ಮಡಿಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ರಾಜ್ಯ ಪಾಲರು ಸಕರ್ಾರದ ಪ್ರತಿನಿಧಿಯಂತೆ ನಡೆಯಬೇಕಾಗಿತ್ತು ಆದರೆ ದುರಾದೃಷ್ಟವಶಾತ್ ವಿರೋಧ ಪಕ್ಷದ ನಾಯಕರಂತೆ ವತರ್ಿಸುತ್ತಿರುವುದು ಸಂವಿಧಾನಕ್ಕೆ ಅಪಮಾನವೆಸಗಿದಂತೆ ಎಂದರಲ್ಲದೆ, ರಾಜ್ಯಪಾಲರಾದ ಹಂಸರಾಜ್ ಭಾರಧ್ವಜ್ ಹಂಸದ ರೀತಿ ಒಳ್ಳೆಯದನ್ನು ತೆಗೆದುಕೊಳ್ಳಬೇಕು, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ ಎಂದರು.
ಬಂದ್ನಿಂದ ಪರದಾಡಿದ ಜನ ಸಾಮಾನ್ಯರ ಅಳಲು: ಬೆಳಗ್ಗೆ ದಿಡೀರ್ ಬಂದ್ನಿಂದ ಹಲವು ಊರುಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಜನಸಾಮಾನ್ಯರು ವಾಹನಗಳಿಗಾಗಿ ಕಾಯುತ್ತಾ ಬಸ್ಸ್ಟಾಪ್ನಲ್ಲೇ ಕುಳಿತರು. ತಮ್ಮ ಊರುಗಳಿಗೆ ವಾಪಾಸ್ ಆಗಲು ಆಗದೆ ಪರದಾಡುತ್ತಿದ್ದ ಜನರನ್ನು ಪತ್ರಿಕೆ ಸಂದಶರ್ಿಸಿದಾಗ ಇವರ ಕುಚರ್ಿ ಉಳಿಸಿಕೊಳ್ಳುವುದಕ್ಕಾಗಿ ಬಂದ್ನ ನೆಪವೊಡ್ಡಿ ಜನರಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ'. ತಮ್ಮ ಸಂಬಂಧಿಕರೊಬ್ಬರ ತಿಥಿಗಾಗಿ ಧವಸ ದಾನ್ಯಗಳನ್ನು ಬೇರೊಂದು ಸ್ಥಳಕ್ಕೆ ಕೊಂಡೊಯ್ಯಬೇಕಿತ್ತು ಆದರೆ ಬಂದ್ನಿಂದಾಗಿ ಇಲ್ಲೇ ವಾಸ್ತವ್ಯ ಹೂಡಬೇಕಾಗಿದೆ, ಇದರಿಂದ ನನ್ನ ಬರುವಿಕೆಗಾಗಿ ಕಾಯುತ್ತಿರುವ ಸಂಬಂದಿಕರು ತಿಥಿಗಾಗಿ ಪರದಾಡುತ್ತಿದ್ದಾರೆ ಎಂದು ರಂಗನಾಥ್ ಎಂಬ ವ್ಯಕ್ತಿ ಹೇಳಿದರೆ, ಸೊಪ್ಪನ್ನು ಮಾರಲು ಪಟ್ಟಣಕ್ಕೆ ಹೋಗಬೇಕಾಗಿತ್ತು ಆದರೆ ಬಂದ್ ನಿಂದ ಇಲ್ಲೇ ವಾಸ್ತವ್ಯ ಹೂಡಿದ್ದು ಸೊಪ್ಪ ಸಂಜೆ ವೇಳೆಗೆ ಒಣಗುತ್ತದೆ ನಮ್ಮ ಜೀವನ ನಡೆಯುವುದೇ ಈ ಸೊಪ್ಪಿನಿಂದ ಇದಕ್ಕೆಲ್ಲ ಯಾರು ಹೊಣೆಗಾರರೆಂದು ಮೊಹಬೂಬಿರವರು ಪ್ರಶ್ನಿಸಿದರು.
ಇದೇ ಸಮಯದಲ್ಲಿ ಬಂದ್ನ ವಿಷಯ ತಿಳಿಯದ ಆಟೋ ಚಾಲಕನೊಬ್ಬ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕಿಡಿಗೇಡಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಇದರ ವಿರುದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಸಾರ್ವಜನಿಕರಿಗೆ ಬಂದ್ನ ಬಗ್ಗೆ ಮುಂಚಿತವಾಗಿ ಸರಿಯಾದ ಮಾಹಿತಿ ನೀಡದೆ ಏಕಾಏಕಿ ಬಂದ್ ಏರ್ಪಡಿಸಿದ್ದಾರೆ, ಇದರಿಂದ, ಸಾರ್ವಜನಿಕ ಆಸ್ತಿಯ ನಷ್ಠಕ್ಕೆ ಯಾರು ಜವಾಬ್ದಾರಿಯಾಗುತ್ತಾರೆಂದು ಸಕರ್ಾರದ ವಿರುದ್ದ ಕಿಡಿಕಾರಿದರು.

ಮಹಿಳೆಯರು ಕೌಟಂಬಿಕವಾಗಿ ನೆಮ್ಮದಿಯಿಂದಿದ್ದರೆ ಜೀವನ ಮೌಲ್ಯ ಅರ್ಥ ಪೂರ್ಣ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆಯರು ಸಾಮಾಜಿಕವಾಗಿ ಕುಟುಂಬಗಳಲ್ಲಿ ಶಾಂತಿ ಮತ್ತು ನೆಮ್ಮದಿ ಜೀವನ ಹೊಂದಿದಾಗ ಮಾತ್ರ ಜೀವನದ ಮೌಲ್ಯ ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಹೇಳಿದರು.
ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಂಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ಹಿಂಸೆ ತಡೆಯಲು ಮಹಿಳೆಯರು ಕಾನೂನಿನ ಅರಿವು ತಿಳಿಯುವುದು ಒಳಿತು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಹಿಳೆಯರು ಕಾನೂನು ಅರಿವು ಪಡೆಯುವುದು ಬಹುಮುಖ್ಯ ಕುಟುಂಬದಲ್ಲಿ ಮಹಿಳೆಯರ ಪಾತ್ರ ಜವಾಬ್ದಾರಿಯುತವಾಗಿದ್ದು ಸಮಾಜದ ಪಿಡುಗುಗಳಾದ ವರದಕ್ಷಿಣೆ, ಬಾಲ ಕಾಮರ್ಿಕತೆ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಮೂಡನಂಭಿಕೆಯನ್ನು ತೊರೆದು ಕಾನೂನಿನ ಅರಿವು ಪಡೆಯಲು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಕೈಸರ್ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಯಾರು ಸಹಾ ಸಮಸ್ಯೆಗೆ ಹೆದರದೇ ಸಮಸ್ಯೆಯನ್ನು ಹೆದರಿಸಿ ಬದುಕಬೇಕು ಎಂದ ಅವರು ಕಾನೂನಿನ ಅರಿವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತೆ ಹೇಳಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಎನ್.ಶೀಲ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಹೆಚ್.ಎಸ್.ಚಂದ್ರಶೇಖರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ, ಟಿ.ದಯಾನಂದ್, ಕೆ.ಎಲ್.ಭಾಗ್ಯಲಕ್ಷ್ಮೀ, ನಾರಾಯಣರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ,ಕೆ.ಎಂ.ರಾಜಶೇಖರಪ್ಪ ಸ್ವಾಗತಿಸಿ, ಕೆ.ಎಂ.ಷಡಾಕ್ಷರಿ ನಿರೂಪಿಸಿ, ಕೆ.ಸಿ.ವಿಶ್ವನಾಥ್ ವಂದಿಸಿದರು.

ಮಹಿಳೆಯರನ್ನು ಕೆ.ಕೆ.ಜಿ.ಬ್ಯಾಂಕ್ ಆಥರ್ಿಕವಾಗಿ ಸಬಲಗೊಳಿಸುತ್ತಿದೆ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆ ಸಾಮಾಜಿಕ, ಆಥರ್ಿಕ ಹಾಗೂ ರಾಜಕೀಯದ ಎಲ್ಲಾ ಕ್ಷೇತ್ರಗಳಲ್ಲಿ ಪುರಷರಿಗಿಂತ ಮೇಲುಗೈ ಸಾಧಿಸುತ್ತಿದ್ದು ಮಹಿಳೆಯರು ಸಬಲೆಯಾಗಿ ಪ್ರತಿ ಕ್ಷೇತ್ರದಲ್ಲೂ ಮುನ್ನುಗುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿದರ್ೇಶಕರಾದ ಚಿದಾನಂದ್ ತಿಳಿಸಿದರು.
ತಾಲೂಕಿನ ಕಂದಿಕೆರೆಯ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ನೂತನ ಕಟ್ಟಡದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಸಲುವಾಗಿ ನಮ್ಮ ಇಲಾಖೆ ಸ್ತ್ರೀ ಶಕ್ತಿ ಭವನವನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸಲಾಗಿದೆ ಎಂದರು.
ನಬಾಡರ್್ನ ಸಹಾಯಕ ವ್ಯವಸ್ಥಾಪಕ ಜಿ.ಅನಂತಕೃಷ್ಣ ಮಾತನಾಡಿ ಕೋರ್ ಬ್ಯಾಂಕಿಂಗ್ನ ಅನುಕೂಲಗಳ ಬಗ್ಗೆ ಮಾತನಾಡುತ್ತ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸಾಲ ಸೌಲಭ್ಯ ನೀಡುವಲ್ಲಿ ನಮ್ಮ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಲೋಹಿತಬಾಹಿ ಮಾತನಾಡಿ ಬ್ಯಾಂಕ್ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಸಾಕಷ್ಟು ಸಾಲ ಸೌಲಭ್ಯ ನೀಡಿದೆ ಆದರೆ ಖಾತೆದಾರರು ಸರಿಯಾದ ವೇಳೆಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಕೋರಿದರು.
ಕಾವೇರಿ ಕಲ್ಪತರು ಬ್ಯಾಂಕ್ ಮ್ಯಾನೇಜರ್ ಪಿ.ಎನ್.ಸ್ವಾಮಿ ಮಾತನಾಡಿ ಕಂದಿಕೆರೆಯ 180ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ 2.50ಕೋಟಿಗೂ ಹೆಚ್ಚು ಸಾಲ ನೀಡಿದ್ದು ಗ್ರಾಮೀಣ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಉಮಾದೇವಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜಯಣ್ಣ, ತಾ.ಪಂ.ಮೇನೇಜರ್ ನರಸಿಂಹಯ್ಯ, ಪಿಡಿ.ಓ ಶಿವಕುಮಾರ್, ವ್ಯವಸ್ಥಾಪಕ ಆರ್.ಎಮ್.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೆ.ಮಾಧವ್ ಸ್ವಾಗತಿಸಿ, ಕೆ.ಜಿ.ಪ್ರಭಾಕರ್ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.

ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜ.22: ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭವನ್ನು ಇದೇ 24ರ ಸೋಮವಾರ ಬೆಳಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಸಂಘದ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ನ.ಪ.ಸ.ಸಂ.ಅಧ್ಯಕ್ಷ ಸಿ.ಪಿ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿ.ಕೇ.ಸ.ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಬಿ.ಕೆ.ರವಿ ಸಹಾಕರ ಸಂಘಗಳ ಉಪನಿದರ್ೇಶಕ ರಂಗಸ್ವಾಮಿ, ನವಚೇತನ ಪ.ಸ.ಸಂ. ಮಾಜಿ ಅಧ್ಯಕ್ಷರಾದ ಸಿ.ಎಸ್.ರಾಜಣ್ಣ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿರುವರು.