Monday, July 5, 2010





ಬಂದ್ ಸಂಪೂರ್ಣ ಯಶಸ್ವಿ: ಎ.ಟಿ.ಎಂ.ವಹಿವಾಟಿಗಿಲ್ಲ ಅಡ್ಡಿ
ಚಿಕ್ಕನಾಯಕನಹಳ್ಳಿ,ಜು.5: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬಿ.ಜೆ.ಪಿ. ಕರೆನೀಡಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಸ್ವಯಂ ಘೋಷಿತವಾಗಿ ನಡೆಸಿದ್ದರಿಂದ ಶಾಂತರೀತಿಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗಿನಿಂದಲೇ ಆರಂಭಗೊಂಡ ಬಂದ್ ಪ್ರಕ್ರಿಯೆಯಿಂದಾಗಿ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ, ಬಸ್ ಗಳು ರಸ್ತೆಗೆ ಇಳಿಯಲಿಲ್ಲ, ಶಾಲಾ ಕಾಲೇಜ್ಗಳು ಮುಚ್ಚಿದ್ದವು, ಸಕರ್ಾರಿ ಕಛೇರಿಗಳು ಬಹುತೇಕ ಬಾಗಿಲು ಮುಚ್ಚಿದ್ದವು, ವಕೀಲರ ಸಂಘ ಬಂದ್ಗೆ ಬೆಂಬಲ ಘೋಷಿಸಿದ್ದರಿಂದ ಕೋಟರ್್ ಕಲಾಪ ನಡೆಯಲಿಲ್ಲ, ಕೇಂದ್ರ ಸಕರ್ಾರ ಕಛೇರಿಗಳು ಬಾಗಿಲು ಮುಚ್ಚಿದ್ದವು, ಬ್ಯಾಂಕ್ಗಳಲ್ಲಿ ಆರಂಭದಲ್ಲಿ ಸ್ವಲ್ಪ ಮಟ್ಟಿನ ವ್ಯವಹಾರ ನಡೆಯಿತಾದರೂ ಬಿ.ಜೆ.ಪಿ.ಕಾರ್ಯಕರ್ತರು ಬ್ಯಾಂಕ್ಗೆ ತೆರಳಿ ಬಾಗಿಲು ಹಾಕಿಸಿದರು, ಕೆನರಾ ಬ್ಯಾಂಕ್ನ ಎ.ಟಿ.ಎಂ. ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿತು.
ಆರಂಭದಲ್ಲಿ ರಸ್ತೆಗಳಲ್ಲಿ ಟೈರಿಗೆ ಬೆಂಕಿ ಹಚ್ಚುವ ಕೆಲಸ ನೆಡಿಯಿತು, ಹಾಲಿನ ಡೈರಿ, ಮೆಡಿಕಲ್ ಷಾಪ್ಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬೀಗ ಮುದ್ರೆಗೊಂಡಿದ್ದರಿಂದ ರಸ್ತೆ ಎಲ್ಲಾ ಬಿಕೊ ಎನ್ನುತಿದ್ದವು.
ಬಂದ್ನಲ್ಲಿ ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸಮೂತರ್ಿ,ಪುರಸಭಾ ಸದಸ್ಯರುಗಳಾದ ಈಶ್ವರ್ ಭಾಗವತ್, ಎಂ.ಎಸ್.ರವಿಕುಮಾರ್, ಲಕ್ಷ್ಮಯ್ಯ, ವಿ.ಆರ್.ಮೇರುನಾಥ್, ಎಚ್.ಸಿದ್ದರಾಮಯ್ಯ, ನಗರ ಘಟಕ ಅಧ್ಯಕ್ಷ ಚೇತನ ಬಾಳೇಕಾಯಿ, ಎ.ಬಿ.ವಿ.ಪಿ. ಪದಾಧಿಕಾರಿಗಳಾದ ಚೇತನ ಪ್ರಸಾದ್, ಅಣೇಕಟ್ಟೆ ರಾಕೇಶ್, ಆನಂದ್, ಹರ್ಷ, ಮುಂತಾದವರು ಭಾಗವಹಿಸಿದ್ದರು.

ಅಕ್ರಮ ಮರಳು ತಡೆಯಲು ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ ಗ್ರಾಮ ಲೆಕ್ಕಿಗ
ಚಿಕ್ಕನಾಯಕನಹಳ್ಳಿ,ಜು.05: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ್ನು ತಡೆಯಲು ಹೋದ ಇಬ್ಬರು ಗ್ರಾಮ ಲೆಕ್ಕಿಗರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಲು ಯತ್ನಿಸಿದರೆಂದು ಇಬ್ಬರು ಟ್ರ್ಯಾಕ್ಟರ್ ಕಾಮರ್ಿಕರನ್ನು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪೊಲೀಸರ ವಶಕ್ಕೆ ನೀಡಿದರು.
ಪಟ್ಟಣದ ಹೊರವಲಯದ ಮೇಲನಹಳ್ಳಿ ಕೆರೆಯ ಪಕ್ಕದಲ್ಲಿ 4.5 ಕೋಟಿ ರೂ ಅಂದಾಜಿನಲ್ಲಿ ಎ.ಪಿ.ಆರ್.ಪ್ರಾಜೆಕ್ಟ್ ನವರು ನಡೆಸುತ್ತಿರುವ ಮುರಾಜರ್ಿ ವಸತಿ ಶಾಲಾ ಕಾಮಗಾರಿಗೆ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆಯಲು ಹೋದ ಗ್ರಾಮ ಲೆಕ್ಕಿಗರಾದ ನೀಲಕಂಠಪ್ಪ ಹಾಗೂ ಉಮಾಪತಿ ಎಂಬ ಇಬ್ಬರು ಟ್ರ್ಯಾಕ್ಟರ್ಗಳನ್ನು ತಡೆದು ಮರಳನ್ನು ಎಲ್ಲಿಂದ ತಂದಿರುವವರೆಂಬುದರ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಟ್ರ್ಯಾಕ್ಟರ್ ಚಾಲಕ ಸೇರಿದಂತೆ ಇನ್ನಿತರ ಕಾಮರ್ಿಕರು, ಗ್ರಾಮ ಲೆಕ್ಕಿಗರನ್ನು ನೂಕಾಡಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಿಗೂ ಟ್ರ್ಯಾಕ್ಟರ್ ಕಾಮರ್ಿಕರಿಗೂ ಮಾತಿಗೆ ಮಾತು ಬೆಳೆದು ವಿ.ಎ.ನೀಲಕಂಠಪ್ಪ ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ್ದಾರೆ ಈ ಸನ್ನಿವೇಶದಲ್ಲಿ ಗ್ರಾಮಸ್ಥರು ನೀಲಕಂಠಪ್ಪ ಹಾಗೂ ಉಮಾಪತಿಯವರ ರಕ್ಷಣೆಗೆ ನಿಂತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಸಿ.ಕಾಂತರಾಜು 70 ಟ್ರ್ಯಾಕ್ಟರ್ ಮರಳನ್ನು ಜಪ್ತಿ ಮಾಡಿ, ಮರಳು ಹೊಡೆದ ಟ್ರಿಪ್ ಶೀಟ್ನ್ನು ವಶ ಪಡಿಸಿಕೊಂಡು, ಸಕರ್ಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹಾಗೂ ಅಕ್ರಮ ಮರಳು ಸಾಗಣಿಕೆ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿ ಆರೋಪಿಗಳಾದ ರಮೇಶ್ ಹಾಗೂ ಕರಿನಾಯ್ಕ ಎಂಬವವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.