Saturday, September 24, 2016


ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ಶಿಕ್ಷಣಕ್ಕಾಗಿ  ಹೋರಾಟವಾಗಿತ್ತು
ಚಿಕ್ಕನಾಯಕನಹಳ್ಳಿ,ಸೆ.24: ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸ್ವಾತಂತ್ರ್ಯ ಚಳುವಳಿಯ ಜೊತೆಯಲ್ಲಿ ನೋಡಬೇಕು ಆಗಲೇ ಶಿಕ್ಷಣ ಪಡೆಯಲು ನಡೆದ ಹೋರಾಟ, ಚಳುವಳಿ, ಚಚರ್ೆಗಳು ತಿಳಿಯುವುದು ಎಂದು ಕನರ್ಾಟಕ ಜನಶಕ್ತಿಯ ಡಾ.ವಾಸು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ನಗರ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಆಯ್ದ ಶಿಕ್ಷಕರಿಗಾಗಿ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂವಿಧಾನದ ಆಶಯ ವಿಷಯದ ಕುರಿತು ಮಾತನಾಡಿದರು.
ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ, ಇದನ್ನು ಪಡೆಯಲು ಹಲವರು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಚಳುವಳಿಗಾಗಿ ನಡೆದ ಹೋರಾಟದಂತೆ ಮಧ್ಯಮ ವರ್ಗದ ಜನತೆ, ಶೋಷಿತ ಸಮುದಾಯ ಶಿಕ್ಷಣಕ್ಕಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು, ಬ್ರಿಟೀಷ್ ಸಕರ್ಾರ ಎಲ್ಲರಿಗೂ ಶಿಕ್ಷಣ ನೀಡಲಿಲ್ಲ ಆಗಿನ ಮಿಷನಿರಿಗಳು ಮಾತ್ರ ಶಿಕ್ಷಣ ನೀಡಿದವು, ಬ್ರಿಟೀಷ್ ಗವರ್ನರ್ ಮೆಕಾಲೆ ಗೋಪಾಲಕೃಷ್ಣ, ಗಾಂಧೀಜಿ ಮತ್ತಿತರರು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ಮುಂದಾಗಿದ್ದರು, ಶಿಕ್ಷಣ, ಆರೋಗ್ಯ, ಜನರ ಹಕ್ಕುಗಳಿಗಾಗಿ ಚಚರ್ೆಗಳನ್ನು ನಡೆಸಿದರು ಎಂದ ಅವರು, ಶಿಕ್ಷಣ ಮೂಲಭೂತ ಹಕ್ಕು ಆಗಬೇಕು ಎಂದು ಸಂವಿಧಾನ ರಚನಾ ಸಭೆಯಲ್ಲಿ ನಿಧರ್ಾರವಾಗಿತ್ತು ಆದರೂ ಈ ಬಗ್ಗೆ ಹಲವರು ವಿರೋಧಿಸಿದರು, ದೇಶದಲ್ಲಿ 2006ರ ವರದಿಯಂತೆ 100ಕ್ಕೆ 20ರಷ್ಟು ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ, ಎಸ್.ಎಸ್.ಎಲ್.ಸಿ ನಂತರ ಶೇ.45%ರಷ್ಟು ಪಿ.ಯು.ಸಿ ನಂತರ ಶೇ.8% ಪರಿಶಿಷ್ಠ ಜಾತಿ ಹಾಗೂ ಶೇ.7%ರಷ್ಟು ಪರಿಶಿಷ್ಟ ಪಂಗಡದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಿಲ್ಲ ಎಂದು ವಿಷಾಧಿಸಿದರು.
ಅಸಮಾನತೆ ಹೋಗಲಾಡಿಸಲು ಸಮಾನ ಶಾಲಾ ನೀತಿ ಜಗತ್ತಿನಲ್ಲಿ ಇದೆ, ಆದರೆ ಅಸಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಮಸ್ಯೆ ಹೆಚ್ಚುತ್ತಿದೆ, ಶಿಕ್ಷಕರಿಗೆ ಬೋಧನೆಯ ಜೊತೆಗೆ ಸಕರ್ಾರ ಹೇರುತ್ತಿರುವ ಒತ್ತಡಗಳಿಂದಲೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಹೇಳಿದರು. 
ಮಂಡ್ಯದ ಮಹಿಳಾ ಮುನ್ನಡೆಯ ಮಲ್ಲಿಗೆಯವರು  ಮಾತನಾಡಿ, ಮಕ್ಕಳ ಕಲಿಕಾಮಾದ್ಯಮ ಮಾತೃಭಾಷೆಯಲ್ಲಿರಬೇಕು ನಂತರದಲ್ಲಿ ಅವರಿಗೆ ಅನ್ಯಭಾಷೆಗಳ ಪರಿಚಯವನ್ನು ಮಾಡಬೇಕು ಈ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆ ನಮಗೆ ಭಾಷೆಯಾಗಿ ಬೇಕಾಗಿದೆ ವಿನಃ ಕಲಿಕಾಮಾದ್ಯಮವಾಗಿ ಅಲ್ಲ ಎಂದರು.
ಇಂದು ನಮ್ಮ ದೇಶದ ಒಟ್ಟು ಮಕ್ಕಳಲ್ಲಿ ಶೇಕಡ27ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮದಲ್ಲಿ ವ್ಯಾಸಾಂಗಮಾಡುತ್ತಿದ್ದಾರೆ ಅದರೆ ಕೆಲವೊಂದು ಪ್ರಯೋಗಗಳ ಮೂಲಕ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ, ಖಿನ್ನತೆಗೆ ಒಳಗಾಗುತ್ತಾರೆ, ಬಹುತೇಕ ಆತ್ಮಹತ್ಯಾ ಪ್ರೌವೃತ್ತಿ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ ಹಾಗೂ ಸಾಮಾಜಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುವಂತಹ ಧೈರ್ಯವಾಗಲಿ ಇವರಿಗಿರುವುದಿಲ್ಲ ಹಾಗೂ ಇಂತಹ ಮಕ್ಕಳು ವೃತ್ತಿ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುವುದು ಕಷ್ಟಕರ ಅದ್ದರಿಂದ ನಾವು ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಮಾತೃಭಾಷೆಯ ಅಗತ್ಯತೆ ಹೆಚ್ಚಾಗಿದ್ದು ಅನ್ಯಭಾಷೆಯನ್ನು ಮಾತೃಭಾಷೆಯಮೂಲಕ ಕಲಿಯುವುದು ಸೂಕ್ತ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಂವಿಧಾನದ ಆಶಯವೇ ಶಿಕ್ಷಣವಾಗಿದೆ, ಆಥರ್ಿಕವಾಗಿ, ಸಾಮಾಜಿಕವಾಗಿ ಮುಂದುವರಿಯುವದರ ಜೊತೆಗೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು.
ಕೆ.ಆರ್.ಪೇಟೆಯ ನಾಗೇಶ್.ಎ ಇಲಾಖೆಯ ಒತ್ತಡಗಳ ನಡುವೆ ಶಿಕ್ಷಕ ಎಂಬ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಸಾಪ ನಗರ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪದಾಧಿಕಾರಿಗಳಾದ ರಾಮಕೃಷ್ಣಪ್ಪ, ಕಂಟಲಗೆರೆ ಗುರುಪ್ರಸಾದ್, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.
27ರಂದು ಸಕರ್ಾರಿ ಪಿ.ಯು.ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಗಳ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.24 : ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇದೇ 27ರ ಮಂಗಳವಾರ ನಡೆಯಲಿದೆ.
ಸಮಾರಂಭ ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಕೃಷ್ಣಸ್ವಾಮಿ, ಸಾಹಿತಿ ಹಾಗೂ ಲೋಕೋಪಯೋಗಿ ಎಇಇ ಗಂಗಾಧರ ಕೊಡ್ಲಿಯವರ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿರುವರು.