Thursday, December 29, 2011



ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕ,ಶಿಕ್ಷಕರಿದಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇರಬೇಕು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಡಿ.29 : ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕರು, ಶಿಕ್ಷಕರ ಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಟಿ.ಎಲ್.ಎಂ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಭವಿಷ್ಯದಲ್ಲಿ ಮಕ್ಕಳು ಮಾರುಕಟ್ಟೆ ವ್ಯವಸ್ಥೆ ಹಾಗೂ ಅದರಲ್ಲಿ ನಡೆಯುವ  ವ್ಯವಹಾರಗಳ ಬಗ್ಗೆ ತಿಳಿಯಲು  ಸಂತೆಮೇಳ ಪೂರಕವಾಗಿದೆ ಎಂದರಲ್ಲದೆ, ಟಿ.ಎಲ್.ಎಂ ಮೇಳ, ಮೆಟ್ರಿಕ್ಮೇಳ ವಿದ್ಯಾಥರ್ಿ ಜೀವನದ ಪ್ರಮುಖ ಘಟ್ಟ, ಇಂತಹ ಸ್ಪಧರ್ೆಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ಸಮಾಜದಲ್ಲಿನ ವ್ಯಾಪಾರ ಗುಣಲಕ್ಷಣಗಳನ್ನು ಅರಿಯಬೇಕು ಅದಕ್ಕಾಗಿ ತಂದೆ ತಾಯಿಯರ ಪ್ರೋತ್ಸಾಹ, ಶಿಕ್ಷಕರ ಬೆಂಬಲದೊಂದಿಗೆ ಜನಪ್ರತಿನಿಧಿಗಳು ಪ್ರತಿಭಾನ್ವಿತ ಮಕ್ಕಳನ್ನು ಹೊರಜಗತ್ತಿಗೆ ತರಬೇಕು ಎಂದರು. ಕೇಂದ್ರ ಮತ್ತು  ರಾಜ್ಯ ಸಕರ್ಾರಗಳು  ಸಕರ್ಾರಿ ಶಾಲೆಗಳಲ್ಲಿನ ವಿದ್ಯಾಥರ್ಿಗಳಿಗೆ ವಿದ್ಯಾರ್ಜನೆಯೊಂದಿಗೆ ಹಲವಾರು ಮೂಲಭೂತ ಸೌಲಭ್ಯ ನೀಡುತ್ತಿದೆ ಆದರೂ ಪೋಷಕರು ಸಕರ್ಾರಿ ಶಾಲೆಗಳ ಬಗ್ಗೆ ಹೊಂದಿರುವ ನಿರ್ಲಕ್ಷತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ಸಕರ್ಾರಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ ಮಾತನಾಡಿ ಭೋದನೆ ಮೊದಲ ಶಿಕ್ಷಣವಾದರೆ, ಭೋದನಾ ಸಾಮಗ್ರಿಗಳು ಎರಡನೇಯ ಶಿಕ್ಷಕರಿದ್ದಂತೆ, ಈ ಭೋದನಾ ಸಾಮಗ್ರಿಗಳಿಂದ ಮಕ್ಕಳಿಗೆ  ಸಾಮಗ್ರಿಯ ವಸ್ತುಸ್ಥಿತಿಯನ್ನು ಅರಿತು ಹೆಚ್ಚು ಜ್ಞಾನ ಪಡೆಯುತ್ತಾರೆ ಅಲ್ಲದೆ ಇದು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪ್ರಭಾವ ಬೀರಲಿದೆ ಎಂದರು.
ಸಮಾರಂಭದಲ್ಲಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಸಂಘಟಿಸಲಿದ್ದು, ಇಲ್ಲಿ ಜಯಗಳಿಸಿದ ವಿದ್ಯಾಥರ್ಿಗಳು ನಾವು ಸಂಘಟಿಸುವ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು. 
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರು ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ದಾರಿಯಾಗುವಂತಹ  ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಅಕ್ಷರಜ್ಞಾನದೊಂದಿಗೆ ವ್ಯವಹಾರಿಕ ಜ್ಞಾನ ತಿಳಿಸಬೇಕು, ಚಿಕ್ಕವಯಸ್ಸಿನಲ್ಲೇ ಇಂತಹ ಸ್ಪಧರ್ೆಗಳಲ್ಲಿ ಭಾಗವಹಿಸಿ ತಮಗೆ ಎದುರಾಗುವ ವ್ಯಾಪಾರಿ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ತಿಳಿದುಕೊಳ್ಳಬೇಕು ಎಂದರು. ಕ್ಲಸ್ಟರ್ ಮಟ್ಟದಲ್ಲಿ ನಡೆದ ಮೇಳದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾಗಿದ್ದು, ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು. 
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು. 
ಸಮಾರಂಭದಲ್ಲಿ  ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಪುರಸಭಾ ಸದಸ್ಯ ಕೃಷ್ಣಮೂತರ್ಿ ಉಪಸ್ಥಿತರಿದ್ದರು.



Wednesday, December 28, 2011


ವಿಧಿವಶರಾದ ಬಂಗಾರಪ್ಪನವರಿಗೆ  ಪುರಸಭೆಯ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ
 ಚಿಕ್ಕನಾಯಕನಹಳ್ಳಿ,ಡಿ.27 :  ಮಾಜಿ ಸಿ.ಎಂ.ಬಂಗಾರಪ್ಪನವರು ಹಿಂದುಳಿದ ವರ್ಗಗಳ ನಾಯಕರಾಗಿ ಕಡುಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೀನದಲಿತರ ಪರ ಎಂಬುದನ್ನು ತೋರಿಸಿಕೊಂಡ ಧೀಮಂತ ಮುಖ್ಯಮಂತ್ರಿಯಾಗಿದ್ದರು ಎಂದು ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬಂಗಾರಪ್ಪನವರಿಗೆ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿದ ನಂತರ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮೌನಾಚರಣೆ ಆಚರಿಸಿದರು.  ಆಶ್ರಯ ಯೋಜನೆ, ರೈತರಿಗೆ ಉಚಿತ ಪಂಪ್ಸೆಟ್ಗಳನ್ನು ಹಾಗೂ ಗ್ರಾಮೀಣ ಭಾಗದವರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ  ತಂದವರು ಎಂದು ಗುಣಗಾನಮಾಡಿದರು.
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಿ ಮಾತನಾಡಿ ಬಂಗರಪ್ಪನವರು ಧೀಮಂತ ನಾಯಕ ಅವರು ಎಲ್ಲಾ ಸಮಾಜದ ನೇತಾರರರಾಗಿ ಕಾರ್ಯನಿರ್ವಹಿಸುತ್ತಿದ್ದರು, ಡಿ. ದೇವರಾಜು ಅರಸುರವರನ್ನು ಬಿಟ್ಟರೆ  ಎಸ್. ಬಂಗರಪ್ಪನವರು ರೈತರಿಗಾಗಿ ಹೋರಾಡಿದ ವ್ಯಕ್ತಿ ಅವರ ಅಗಲಿಕೆ ರಾಜ್ಯಕ್ಕೆ ನೋವು ತಂದಿದೆ ಎಂದರು.
ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಮಾತನಾಡಿ ದಲಿತರ ಬಂಧು, ಇವರು ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನ ಕಾರ್ಯಕ್ರಮಗಳನ್ನು ಜಾರಿಗೆ ತಂದು ಯಶಸ್ವಿಯಾದವರು ಎಂದ ಅವರು ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಕೋರಿದರು. 
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ಕವಿತಾಚನ್ನಬಸವಯ್ಯ, ಮೈನ್ಸ್ರವಿ, ರಾಜು, ಕೃಷ್ಣಮೂತರ್ಿ, ಮುಖ್ಯಾಧಿಕಾರಿ ವೆಂಕಟೇಶ್ಶೆಟ್ಟಿ ಉಪಸ್ಥಿತರಿದ್ದರು.

ಸುದ್ದಿ: 2
ಚಿಕ್ಕನಾಯಕನಹಳ್ಳಿ,ಡಿ.27: ಪಟ್ಟಣದ ಕಲ್ಪವೃಕ್ಷ ಕೋ ಅಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿ ಬಂಗಾರಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜ್, 1994ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಂಗಾರಪ್ಪನವರು ಚಿ.ನಾ.ಹಳ್ಳಿಗೆ ಬಂದಿದ್ದು, ಬಂಗಾರಪ್ಪನವರು, ಮಾಜಿ ಸಚಿವ ಎನ್.ಬಸವಯ್ಯನವರೊಂದಿಗೆ ಜೊತೆಗೂಡಿ ಚುನಾವಣೆ ನಡೆಸಿದ ಸಂದರ್ಭವನ್ನು ಸ್ಮರಿಸಿಕೊಂಡರು, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ನಮಗೆಲ್ಲಾ ಆದರ್ಶವಾಗಿದೆ ಎಂದರು. 
ಬ್ಯಾಂಕ್ನ ನಿದರ್ೇಶಕರುಗಳಾದ ಸಿ.ಎಂ.ರಂಗಸ್ವಾಮಿ, ರವಿ(ಮೈನ್ಸ್), ಸಿ.ಎಸ್.ರಮೇಶ್, ರಾಜಣ್ಣ, ಕೃಷ್ಣಮೂತರ್ಿ, ದೊಡ್ಡಯ್ಯ,ಶಶಿಕುಮಾರ್ ಮ್ಯಾನೇಜರ್ ಆನಂದ್ ಹಾಜರಿದ್ದರು.



ಶಾಲಾ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.28 : ಶ್ರೀ ರಾಮಲಿಂಗೇಶ್ವರ ಗ್ರಾಮಾಂತರ ಪ್ರೌಡಶಾಲೆಯ ರಜತ ಮಹೋತ್ಸವ ಆಚರಣಾ ಸಮಾರಂಭ ಮತ್ತು 2011-12ನೇ ಸಾಲಿನ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 30ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ರಾಮನಹಳ್ಳಿ ತೀ.ನಂಶ್ರೀ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಭವತರಿಣೀ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯೀ ಆಶೀರ್ವಚನ ನೀಡಲಿದ್ದು ಅರುಣೋದಯ ವಿದ್ಯಾಸಂಸ್ಥೆಯ ಆರ್.ಎಂ.ಸಣ್ಣತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ, ವೈದ್ಯ ಡಾ.ಸಿ.ಶರತ್ಕುಮಾರ್, ತಹಶೀಲ್ದಾರ್ ಉಮೇಶ್ಚಂದ್ರ, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ತಾ.ಪಂ.ಸದಸ್ಯೆ ಲತಾಕೇಶವಮೂತರ್ಿ, ರಾಮನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಯಶೋದಮ್ಮಮಹಾದೇವಯ್ಯ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಕಾರ್ಯದಶರ್ಿ ಬಿ.ಎಸ್.ಕರಿಸಿದ್ದಪ್ಪ ಉಪಸ್ಥಿತರಿರುವರು.
ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳ
ಚಿಕ್ಕನಾಯಕನಹಳ್ಳಿ,ಡಿ.28: ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮೆಟ್ರಿಕ್ ಮೇಳ ಹಾಗೂ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಟಿ.ಎಲ್.ಎಂ.ಮೇಳ ಉದ್ಘಾಟಿಸಲಿದ್ದಾರೆ.
  ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಜಿ.ಪಂ.ಸದಸ್ಯರುಗಳಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭೆ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

Monday, December 26, 2011



ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ 
ಚಿಕ್ಕನಾಯಕನಹಳ್ಳಿ,ಡಿ.26 : ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನೇತಾರ, ಕನರ್ಾಟಕ ಕಂಡ, ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಅಗಲಿಕೆ ಕನರ್ಾಟಕಕ್ಕೆ ತುಂಬಲಾರದ ನಷ್ಟ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಎಂದು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ ಆಚರಿಸಿದರು.
ಬಂಗಾರಪ್ಪನವರು ಬಡವರು, ರೈತರು, ಕೂಲಿ ಕಾಮರ್ಿಕರ ಬಗ್ಗೆ ಅಪಾರ ಕಾಳಜಿ ವಹಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನಾ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಪ್ರಿಯರಾದರು ಎಂದರು.
ತಾ.ಪಂ.ಸದಸ್ಯ ನಿರಂಜನ್ ಮಾತನಾಡಿ ಪ್ರಜಾ ಸೋಷಲಿಷ್ಟ್ ಪಾಟರ್ಿಯಿಂದ ತಮ್ಮ ಜೀವನವನ್ನು  ಆರಂಭಿಸಿದ ಬಂಗಾರಪ್ಪ ಏಳು ಬಾರಿ ಶಾಸಕರಾಗಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ವಿರೋದ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಕಟ್ಟ ಕಡೆಯ ಜನತೆಗೆ ಸಕರ್ಾರಿ ಸೌಲಭ್ಯ ತಲುಪಿಸಬೇಕು ಎಂಬ ಆಶಯ ಹೊಂದಿದ್ದ ವ್ಯಕ್ತಿ ಎಂದರು.
ನಡೆಯಬೇಕಿದ್ದ ತಾ.ಪಂ.ಸಾಮಾನ್ಯ ಸಭೆಯನ್ನು ಜನವರಿ 5ಕ್ಕೆ ಮುಂದೂಡಲಾಯಿತು.
ಈ ಸಂದರ್ಭದಲ್ಲಿ ಇ.ಓ. ಎನ್.ಎಂ.ದಯಾನಂದ್, ತಾ.ಪಂ.ಸದಸ್ಯರಾದ ಶಶಿಧರ, ಎಂ.ಎಂ.ಜಗದೀಶ್, ವಸಂತಕುಮಾರ್, ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಜಯಣ್ಣ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು
ಚಿಕ್ಕನಾಯಕನಹಳ್ಳಿ,ಡಿ.26 : ನಮ್ಮ ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು, ವಿದೇಶಿ ಸಂಸ್ಕೃತಿಗೆ ಸೆಡ್ಡು ಹೊಡೆದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಬೇಕು ಎಂದು ಖ್ಯಾತ ಸಂಗೀತ ನಿದರ್ೇಶಕ ವಿ.ಮನೋಹರ್ ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ  ಸ್ವರನೂಪುರ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಹೆಣ್ಣಿನ ಶೋಷಣೆಯಾಗುತ್ತಿರುವುದು ಶೋಷಣೆಯ ಸಂಗತಿ, ಜಾಗತಿಕ ವಿದ್ಯಾಮಾನದಲ್ಲಿ ಹಲವು ಬದಲಾವಣೆ ಮೂಲಕ ಹೆಣ್ಣಿನ ಮೇಲೆ ದೌರ್ಜನ್ಯ ಮುಂದುವರೆಯುತ್ತಿದೆ ಎಂದು ಕಳವಳ ವ್ಯಕ್ತಪಡಿದಿರು. 
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವೈವಿದ್ಯಮಯ ಸಂಸ್ಕೃತಿ ನಮ್ಮ ಬದುಕಿನ ಪ್ರತೀಕ, ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದು ಹೊಣೆಗಾರಿಕೆ ನಮ್ಮದಲ್ಲವೆಂಬ ಭಾವನೆಯಿಂದ ಹೊರ ಬರಬೇಕಿದೆ ಎಂದರಲ್ಲದೆ, ದೇಶಕ್ಕಾಗಿ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳಸಬೇಕು. ಗ್ರಾಮಗಳಲ್ಲಿ ಅವರ ಪ್ರತಿಭೆಗಳು ಹೆಚ್ಚಿದೆ ಆದರೆ ಅದು ಹೊರಗೆ ಬರುತ್ತಿಲ್ಲ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ವೇದಿಕೆ ಮೇಲೆ ಬರುಲು ಮೊದಲು ಹಿಂಜರಿಯುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಧೈರ್ಯದಿಂದ ವೇದಿಕೆಗಳನ್ನು ಅಲಕಂರಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಎಂದರು.
ಅಂತರರಾಷ್ಟ್ರೀಯ ಇನ್ನರ್ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಶೈಲಜಾಭಟ್ ಮಾತನಾಡಿ ಮಹಿಳೆಯರಿಗಾಗಿ ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಇನ್ನರ್ವೀಲ್ ಕ್ಲಬ್ ಮುಂದಾಗಿದ್ದು, ಕ್ಲಬ್ನ  ಸ್ನೇಹ, ಪ್ರೀತಿ ವಿಶ್ವಾಸದಿಂದ ಮುಂದುವರಿಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಸೃಷ್ಠಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ 319ರ ಛೇರ್ಮನ್ ಅಮುತಾಸುರೇಶ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ರಮೇಶ್ಬಾಬು, ರೋಟರಿ ವಿದ್ಯಾಪೀಠದ ಲೋಕನಾಥನಾಯ್ಡು ಮಾತನಾಡಿದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ತೇಜಾವತಿ ನರೇಂದ್ರಬಾಬು, ಭವಾನಿ ಜಯರಾಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ಪುಷ್ಪವಾಸುದೇವ್ ನಿರೂಪಿಸಿದರು. ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ 
                            
ಚಿಕ್ಕನಾಯಕನಹಳ್ಳಿ,ಡಿ.26 : ತಾಲ್ಲೂಕು, ಜನಪದ ಕಲೆಗಳ ತವರೂರು ಇಲ್ಲಿನ ಜನಪದ  ಕಲಾವಿದರು ಇಲ್ಲಿನ ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಯಕ್ಷಗಾನ ಬಯಲು ನಾಟಕ ಕಲಾ ಸಂಘದ  ವತಿಯಿಂದ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿ.ಬಿ.ಮಲ್ಲಪ್ಪ, ಪಂಚಲಿಂಗಯ್ಯ, ಈಶ್ವರಪ್ಪರಂತಹವರ ಕಲಾವಿದರ ಜನ್ಮ ತಾಳಿದ ನಾಡಿನಲ್ಲಿ ಕಲೆಯನ್ನು ಉಳಿಸಿ ಬೆಳೆಸುವ ಯತ್ನ ನಡೆಯುತ್ತಿರುವುದು ಸಂತೋಷಕರ ವಿಷಯ ಎಂದ ಅವರು ಎಂ.ರಂಗಯ್ಯ ಹಿರಿಯ ಜನಪದ ಕಲಾವಿದರು ಇವರು ಕಲಾಸಕ್ತರಿಗಾಗಿ ಅವರ ಸ್ಥಳಕ್ಕೆ ಹೋಗಿ ಕಲಾ ಪ್ರದರ್ಶನ ನೀಡುತ್ತಿರುವುದರಿಂದ ಅವರಿಗಾಗಿ ಪುರಸಭೆ ವತಿಯಿಂದ ಸಾರಿಗೆ ವೆಚ್ಚವನ್ನು ನೀಡುವ ಭರವಸೆ ನೀಡಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ ಸಾಂಸ್ಕೃತಿಕ ಜನಪದ ಕಲೆಯನ್ನು ಹಿರಿಯರು ತೋರಿದ ಮಾರ್ಗದಲ್ಲೇ ಮುಂದುವರಿಯುತ್ತಾ ಜನಪದ ಸಂಸ್ಕೃತಿ ಉಳಿಸಲಿ ಎಂದರು.
ಸಮಾರಂಭದಲ್ಲಿ ಪೂಜಾಕುಣಿತ, ರಂಗಕುಣಿತ, ಪಟಕುಣಿತ, ಚಿಟ್ಟೆಮೇಳ, ಕೋಲಾಟ, ಜನಪದಲಾವಣಿ, ಭಜನೆ, ತತ್ವಪದ ಶಾಲಾಮಕ್ಕಳು ಹಾಗೂ ಕಲಾವಿದರಿಂದ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಸಿ.ಟಿ.ವರದರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎಸ್.ಕೋದಂಡರಾಮಯ್ಯ, ಜಯಕೃಷ್ಣ, ಸಿ.ಎ.ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ 




ಚಿಕ್ಕನಾಯಕನಹಳ್ಳಿ,ಡಿ.26 : ಕೇಂದ್ರ ಸಕರ್ಾರ ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ವಿದೇಶಿ ಬೃಹತ್ ಕಂಪನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿರುವುದು ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ ಎಂದು ರಾಜ್ಯ ಸ್ವದೇಶಿ ಜಾಗರಣಾ ಮಂಚ್ನ ಸಂಘಟನಾ ಕಾರ್ಯದಶರ್ಿ ಜಗದೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಸ್ವದೇಶಿ ಜಾಗರಣಮಂಚ್ನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಜನಭರಿತ ಹಾಗೂ ಗ್ರಾಮ ಪ್ರಧಾನ ಆಥರ್ಿಕ ವ್ಯವಸ್ಥೆ ಇರುವ ಭಾರತದಲ್ಲಿ ಇಂದಿಗೂ ಚಿಲ್ಲರೆ ವ್ಯಾಪಾರ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿದೆ, ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಚಿಲ್ಲರೆ ಅಂಗಡಿಗಳಿವೆ, ಸಕರ್ಾರದ ಯಾವುದೇ ನೆರವಿಲ್ಲದೆ 4ಕೋಟಿ ಕುಟುಂಬಗಳು ಈ ವೃತ್ತಿಯಿಂದ ಜೀವನ ನಡೆಸುತ್ತಿವೆ, ಕೇಂದ್ರ ಸಕರ್ಾರ ವಿದೇಶಿ ಕಂಪನಿಗಳ ಪ್ರವೇಶ ಅವಕಾಶ ನೀಡುತ್ತಿರುವುದರಿಂದ ವಾಲ್ಮಾಟರ್್ ಅಮೇರಿಕಾದ ಹೋಂಡಿಪೋ, ರ್ರೋಗರ್, ಪ್ರಾನ್ಸ್ನ ಕ್ಯಾಪೋರ್, ನೆದರ್ಲ್ಯಾಂಡ್ನ ರಾಯಲ್, ಆಯೋಲ್ಡ್ ಮುಂತಾದ ದೈತ್ಯ ವಿದೇಶಿ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ದಾಳಿ ಮಾಡಲು ತಯಾರಿ ನಡೆಸಿವೆ. ಈ ದೈತ್ಯ ಕಂಪನಿಗಳ ಪ್ರವೇಶದಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿ ವಿದೇಶ ಬಂಡವಾಳದ ಹರಿವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ ಎಂದು ಸಕರ್ಾರಿ ಆಥರ್ಿಕ ತಜ್ಞರು ಕಾಪರ್ೋರೇಟ್ ವಲಯದವರು ಭ್ರಮೆಯಲ್ಲಿದ್ದಾರೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಾಪಾರಕ್ಕೆಂದೇ ಬರುವ ವಿದೇಶಿಯರು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗುತ್ತಾರೆ, ಉದಾರಣೆಯಾಗಿ   ಬ್ರಿಟೀಷ್ ಆಡಳಿತ ನಡೆದುದ್ದನ್ನು ನೆನಪಿಸಿದರು ಹಾಗೂ  ಸ್ವದೇಶ ವಸ್ತುಗಳನ್ನು ಕೊಳ್ಳವಂತೆ ಕೋರಿದರು.
ಸಮಾರಂಭದಲ್ಲಿ ವರ್ತಕರ ಸಂಘದ ಕಾರ್ಯದಶರ್ಿ ಈಶ್ವರ್ಭಾಗವತ್, ಸ್ವದೇಶಿ ಮಂಚ್ನ ಮೇರುನಾಥ್, ಲಕ್ಷ್ಮಯ್ಯ, ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ ಸ್ವಾಗತಿಸಿ, ಶಂಕರಯ್ಯ ವಂದಿಸಿದರು. 

Friday, December 23, 2011




ಅಪರೂಪದ 10 ಗ್ರಾಂ ತೂಕದ ಮೊಟ್ಟೆ ರೇವಮ್ಮಜ್ಜಿ ಮನೆಯಲ್ಲಿ
ಚಿಕ್ಕನಾಯಕನಹಳ್ಳಿ,ಡಿ.23 : ನಾಟಿಕೋಳಿಯೊಂದು ಇಟ್ಟಿರುವ  ಮೊಟ್ಟೆಯು ಕೇವಲ 10 ಗ್ರಾಂ.ನಷ್ಟಿದ್ದು ಈ ಮೊಟ್ಟೆ ಅಪರೂಪವಾಗಿದೆ ಎಂದು ಪಶು ಇಲಾಖೆಯ ವೈದ್ಯಾಧಿಕಾರಿ ಲತಾಮಣಿ ತಿಳಿಸಿದ್ದಾರೆ.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯ ರೇವಮ್ಮಜ್ಜಿಯು ಸಾಕಿರುವ ಕೋಳಿಯು ಈ ಮೊಟ್ಟೆ ಇಟ್ಟಿದೆ, ಸಾಧಾರಣ  ಫಾರಂ ಕೋಳಿ ಮೊಟ್ಟೆಯ ತೂಕ 55 ರಿಂದ 60 ಗ್ರಾಂ ಇರುತ್ತದೆ, ನಾಟಿ ಕೋಳಿ  ಮೊಟ್ಟೆ ತೂಕ 45 ರಿಂದ 50 ಗ್ರಾಂ ಇರುತ್ತದೆ ಎಂದು ತಿಳಿಸುವ  ಪಶುವೈದ್ಯಾಧಿಕಾರಿ,  50 ಗ್ರಾಂಗಿಂತ ಹೆಚ್ಚು ತೂಕವಿರುವ  ಮೊಟ್ಟೆಯನ್ನು ಜಂಬೋ ಎಗ್ಸ್ ಎಂತಲೂ, ಕಡಿಮೆ ತೂಕವಿರುವ ಮೊಟ್ಟೆಯನ್ನು ಪಿ.ವಿ.ಎಗ್ಸ್ ಎಂತಲೂ ವೈದ್ಯಕೀಯ ಭಾಷೆಯಲ್ಲಿ ಕರೆಯುವುದುಂಟು, ಆದರೆ ಕೇವಲ 10 ಗ್ರಾಂ ಇರುವ ಮೊಟ್ಟೆಯನ್ನು ನಾವು ನೋಡುತ್ತಿರುವುದು ಇದೇ ಪ್ರಥಮವಾಗಿದೆ  ಎಂದಿದ್ದಾರೆ. 
ಪಶು ವೈದ್ಯಶಾಸ್ತ್ರದಲ್ಲೂ ಇಷ್ಟು ಕಡಿಮೆ ತೂಕವಿರುವ ಆರೋಗ್ಯವಂತ ಮೊಟ್ಟೆಯನ್ನು ಕಂಡಿಲ್ಲವೆನ್ನುವ ವೈದ್ಯರಿದ್ದಾರೆ. ಇಂಟರ್ನೆಟ್ನಲ್ಲೂ ಈ ಬಗ್ಗೆ ತಡಕಾಡಿದಾಗ 15 ಗ್ರಾಂ ತೂಕವಿರುವ ಮೊಟ್ಟೆ ಜಪಾನಿನಲ್ಲಿ ದೊರೆತಿದೆಯೇ ಹೊರತು, 10 ಗ್ರಾಂ ನಷ್ಟು ಕಡಿಮೆ ತೂಕವಿರುವ ಮೊಟ್ಟೆ ಇಲ್ಲವೆಂಬುದು ದೃಡಪಟ್ಟಿದೆ.
ಸುಮಾರು 50 ವರ್ಷಗಳಿಂದಲೂ ಕೋಳಿ ಸಾಕುವುದನ್ನು ತನ್ನ ಹವ್ಯಾಸವನ್ನು ಮಾಡಿಕೊಂಡಿರುವ ರೇವಮ್ಮಜ್ಜಿ, ಎಂದೂ ಕೋಳಿಯನ್ನು ದುಡ್ಡಿಗೆ ಮಾರುವುದಿಲ್ಲ, ತನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳು ತಿನ್ನಲಿ ಎನ್ನುವ ಮಾತೃ ಹೃದಯದ ಈ ಅಜ್ಜಿ, ಮೊಟ್ಟೆಯನ್ನೂ ಎಂದೂ ಮಾರುವುದಿಲ್ಲ ಎಂದು ಅವರ ಮಗ ದೃಢಪಡಿಸಿದ್ದಾರೆ.
ರೇವಮ್ಮಜ್ಜಿ ಹೇಳುವ ಪ್ರಕಾರ ನನ್ನ 75 ವರ್ಷಗಳ ಇತಿಹಾಸದಲ್ಲಿ  ಇಷ್ಟು ಸಣ್ಣ ಮೊಟ್ಟೆಯನ್ನು  ಕಂಡಿಲ್ಲ ಎನ್ನುತ್ತಾರೆ. ಈ ವಿಷಯ ತಿಳಿದಿರುವ ಪಟ್ಟಣದ ಕೆಲವು ಜನರು ಈ ಮೊಟ್ಟೆಯನ್ನು ನೋಡಿ ಆಕಷರ್ಿತರಾಗಿದ್ದಾರೆ.

ಮೋಟ್ರು, ವೈರು ಕದ್ದವರ ಸೆರೆ
ಚಿಕ್ಕನಾಯಕನಹಳ್ಳಿ,ಡಿ.23 : ಸುಮಾರು 39ಸಾವಿರ ರೂಗಳ ಕೇಬಲ್ವೈರು, ಅಲ್ಯೂಮಿನಿಯಂ ಮೈನ್ಸ್ ವೈರು, ಸ್ಟಾರ್ಟರ್, 2ಸಬ್ಮಸರ್ಿಬಲ್ ಮೋಟಾರು, 2 ಪಂಪ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಚಿ.ನಾ.ಹಳ್ಳಿ ಪಿ.ಎಸೈ. ಚಿದಾನಂದಮೂತರ್ಿ ನೇತೃತ್ವದ ತಂಡ  ಸೆರೆಹಿಡಿದಿದ್ದಾರೆ.
ತಾಲ್ಲೂಕಿನ ಅರಳೀಕೆರೆ ಬಳಿ ಆಗಸ್ಟ್ 30ರಂದು ರಾತ್ರಿ ಕಳ್ಳತನವಾಗಿದ್ದು ಕಲಂ 379, 411ರ ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಯಶಸ್ವಿಕಾರ್ಯಚರಣೆಯೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಅರಳೀಕೆರೆಯವರೇ ಆಗಿದ್ದು ಸಿ.ಎಸ್.ಅಶೋಕ್ಕುಮಾರ್(29), ಬಸವರಾಜು(35), ನರಸಿಂಹಯ್ಯ(40), ಉಮೇಶ(27) ಎಂದು ಗುರುತಿಸಲಾಗಿದೆ. ಆನಂದ್ ಹಾಗೂ ಲಕ್ಷ್ಮಯ್ಯ ಎಂಬುವವರು ತಲೆ ಮರೆಸಿಕೊಂಡಿರುತ್ತಾರೆ.
 ಚಿ.ನಾ.ಹಳ್ಳಿ ಪೋಲಿಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಚಿ.ನಾ.ಹಳ್ಳಿಯಲ್ಲಿ ಚಿಲ್ಲರೆ ವ್ಯಾಪರದ ಬಗ್ಗೆ ಉಪನ್ಯಾಸ
ಚಿಕ್ಕನಾಯಕನಹಳ್ಳಿ.ಡಿ.23: ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಬೃಹತ್ ಕಂಪನಿಗಳ ಪ್ರವೇಶದಿಂದಾಗುವ ಅಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಇದೇ 24ರ ಶನಿವಾರ ಸಂಜೆ6.30ಕ್ಕೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ನ ತಾ.ಸಂಚಾಲಕ ಶ್ರೀನಿವಾಸಮೂತರ್ಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ನ ರಾಜ್ಯ ಸಂಘಟನಾ ಕಾರ್ಯದಶರ್ಿ ಕೆ.ಜಗದೀಶ್ ಮುಖ್ಯ ಭಾಷಣಮಾಡಲಿದ್ದಾರೆ.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷರಾದ ಕೆ.ಆರ್.ಇಂದ್ರಕುಮಾರ್ ವಹಿಸುವರು. ವರ್ತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.


Thursday, December 22, 2011


ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಡಿ.22: ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವನ್ನು ಇದೇ 23ರ ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ರಂಗ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಉದ್ಘಾಟನೆ ನೆರವೇರಿಸಲಿದ್ದು ಗ್ರಾ.ಪಂ.ಅಧ್ಯಕ್ಷೆ ಪಾರ್ವತಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಜಿ.ಸಂತೋಷ್, ತಾ.ಪಂ.ಸದಸ್ಯೆ ರಮೇಶ್ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ಗ್ರಾ.ಪಂ.ಸದಸ್ಯರಾದ  ರವಿಕುಮಾರ್, ದಿನೇಶ್, ಕುಮಾರಯ್ಯ, ಲಲಿತಮ್ಮ, ವಿಶೇಷ ಆಹ್ವಾನಿತರಾಗಿ ಆಕಾಶವಾಣಿ ಕಲಾವಿದ ಎಂ.ರಂಗಯ್ಯ ಉಪಸ್ಥಿತರಿರುವರು.

ಸ್ವರನೂಪುರ ಮಹಿಳಾ ಸಾಂಸ್ಕೃತಿಕ
ಚಿಕ್ಕನಾಯನಹಳ್ಳಿ,ಡಿ.22 : ಸ್ವರನೂಪುರ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಇದೇ 25ರ ಭಾನುವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
    ಕಾರ್ಯಕ್ರಮವನ್ನು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ವೀಣಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸುವರು. ಜಿಲ್ಲಾ 319ರ ಛೇರ್ಮನ್ ಅಮುತಾಸುರೇಶ್ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ಅಂತರರಾಷ್ಟ್ರೀಯ ಇನ್ನರ್ವೀಲ್ ಸಂಸ್ಥೆ ಮಾಜಿ ಅಧ್ಯಕ್ಷ ಶೈಲಜಾಭಟ್, ಸಂಗೀತ ನಿದರ್ೇಶಕ ವಿ.ಮನೋಹರ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ರಮೇಶ್ಬಾಬು, ರೋಟರಿ ವಿದ್ಯಾಪೀಠ ಲೋಕನಾಥನಾಯ್ಡು, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.22 : ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ ಕಾಲೇಜಿನ 2011-12ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 23ರ ಶುಕ್ರವಾರ ಏರ್ಪಡಿಸಲಾಗಿದೆ.
     ಶಿಬಿರವನ್ನು ತರಬೇನಹಳ್ಳಿಯಲ್ಲಿ ಮಧ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ, ಮೃತ್ಯಂಜಯದೇಶೀಕೇಂದ್ರಸ್ವಾಮಿ ದಿವ್ಯ ಸಾನಿದ್ಯದಲ್ಲಿ ನಡೆಯಲಿದ್ದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದು ಗ್ರಾ.ಪಂ.ಸದಸ್ಯೆ ಜಿ.ಎಸ್.ಕುಶಲ ಉದ್ಘಾಟನೆ ನೆರವೇರಿಸಲಿದ್ದಾರೆ.
   ಶ್ರೀ.ಮವಿ.ಸಂಸ್ಥೆಯ ಕಾರ್ಯದಶರ್ಿ ಎಂ.ಬಿ.ಶಿವಣ್ಣ, ಸಾಹಿತಿ ಎಂ.ವಿ.ನಾಗರಾಜ್ರಾವ್, ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ದಾಕ್ಷಾಯಿಣಿ ಅಶ್ವಥ್, ತಾ.ಪಂ.ಮಾಜಿ ಅಧ್ಯಕ್ಷ ಗಿರಿಜಮ್ಮ, ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ಗ್ರಾ.ಪಂ.ಸದಸ್ಯ ಪರಮಶಿವಯ್ಯ, ಕೃಷಿಕ ತರಬೇನಹಳ್ಳಿ ಷಡಕ್ಷರಿ, ಮುಖ್ಯೋಪಾಧ್ಯಾಯರಾದ ಶಾಂತಮ್ಮ ಉಪಸ್ಥಿತರಿರುವರು.

Wednesday, December 21, 2011


ಹಿಂದು, ಮುಸ್ಲಿಂರ ಭಾವೈಕತೆಯು ಟಿಪ್ಪು ಅಭಿಮಾನಿ ಸಂಘ 
ಚಿಕ್ಕನಾಯಕನಹಳ್ಳಿ,ಡಿ.21 : ಹಿಂದು, ಮುಸ್ಲಿಂರ ಭಾವೈಕತೆಯು ಪ್ರತಿ ಗ್ರಾಮಗಳಲ್ಲೂ ಉತ್ತಮವಾಗಿರಬೇಕು, ಅದಕ್ಕಾಗಿ ಟಿಪ್ಪು ಅಭಿಮಾನಿ ಸಂಘ ಸ್ಥಾಪಿಸಿದ್ದು ಸಂಘ ಈಗಾಗಲೇ ರಾಜ್ಯದ್ಯಾಂತ 15 ಜಿಲ್ಲೆಗಳಲ್ಲಿ ರಚಿತವಾಗಿದ್ದು ಅಲ್ಲೆಲ್ಲ ಹಿಂದು, ಮುಸ್ಲಿಂರು ಪ್ರತಿ ಸಕರ್ಾರಿ ಕಾರ್ಯಕ್ರಮವನ್ನು ಒಗ್ಗಟ್ಟಾಗಿ ಆಚರಿಸುತ್ತಿದ್ದಾರೆ ಎಂದು ರಾಜ್ಯ ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಟಿಪ್ಪು ಖಾಸಿಂ ಆಲಿಸಾಬ್ ಹೇಳಿದರು.
ಪಟ್ಟಣದ ಕನಕ ಭವನದಿಂದ, ತಾತಯ್ಯನಗೋರಿಯವರೆಗೆ ಪ್ರಮುಖ ಬೀದಿಯಲ್ಲಿ ಕನ್ನಡ ಬಾವುಟ, ಟಿಪ್ಪು ಬಾವುಟಗಳೊಂದಿಗೆ ಮೆರವಣಿಗೆ ನಡೆಯಿತು.
ತಾತಯ್ಯನಗೋರಿ ಆವರಣದಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪುಸುಲ್ತಾನ್ ಸ್ಮರಣೀಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಟಿಪ್ಪು ಭಾವೈಕತೆಗೆ ಹಾಗೂ ಸ್ವಾತಂತ್ರಕ್ಕಾಗಿ ಹೋರಾಡಿದವರು ಅವರ ಹೆಸರಿನಲ್ಲಿ ನಾವು ಹಿಂದು, ಮುಸ್ಲಿಂರನ್ನು ಒಟ್ಟಾಗಿ ಸೇರಿಸುವ ಕಾರ್ಯ ಈ ಮೂಲಕ ನಡೆದಿದೆ ಎಂದ ಅವರು ಟಿಪ್ಪುಸುಲ್ತಾನ್ ದೇಶಕ್ಕಾಗಿ ಹೋರಾಡಿದ ವೀರ ಅವರ ಹೆಸರಿನಲ್ಲಿ  ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟಿಪ್ಪು ಹೆಸರಿನಿಂದ ನಾಮಕರಣವಾಗಬೇಕು, ಟಿಪ್ಪು ನವಂಬರ್ ತಿಂಗಳನಿಲ್ಲಿ ಜನಿಸಿದ್ದರಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ  ಟಿಪ್ಪು ಜಯಂತಿಯನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿ ಮಾಡಬೇಕು ಹಾಗೂ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ, ಪ್ರಾಧಿಕಾರಗಳು ಆರಂಭವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಾವು ಮನವಿ ಅಪರ್ಿಸಿದ್ದೇವೆಂದು ತಿಳಿಸಿದರು.
ಕುಪ್ಪೂರು ಮಠದ  ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಜಾತಿ ರಾಜಕೀಯ ಮಾಡುವವರಿಗೆ ಮಾರ್ಗದರ್ಶನವಾಗಿದೆ ಟಿಪ್ಪುಸುಲ್ತಾನ್ ಅಭಿಮಾನಿ ಬಳಗ, ಹಿಂದು ಮುಸ್ಲಿಂ ಬೆಸೆಯುವ ಕಾರ್ಯ ಸಂಘದಿಂದ ನಡೆಯಲಿ, ನಾವು ಇಂತಹ ಧರ್ಮದಲ್ಲೇ ಹುಟ್ಟಬೇಕೆಂದು ನಿರ್ಧರಿಸೇ ಹುಟ್ಟುವುದಿಲ್ಲ, ದೇವರು ನಿರ್ಧರಿಸಿದ್ದಲ್ಲಿ ಜನಿಸುತ್ತೇವೆ. ನಾವು ದಾರ್ಶನಿಕರ ಮಾತಿನಂತೆ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಗಾಂಧೀ, ಸುಭಾಷ್ಚಂದ್ರಬೋಸ್ ಮುಂತಾದ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುವಂತೆಯೇ ಟಿಪ್ಪುವಿನ ಸ್ಮರಣೆ ದಿನಾಚರಣೆಯನ್ನು ಸಕರ್ಾರದ ವತಿಯಿಂದ ಮಾಡಬೇಕು ಎಂದ ಅವರು  ಟಿಪ್ಪು ಸಂಘಟನೆ ಶುರು ಮಾಡುವ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಹಿಂದು, ಮುಸ್ಲಿಂ ಭಾವೈಕತೆಗೆ ಎತ್ತಿಹಿಡಿಯುವ ವಿಷಯವಾಗಿದೆ. ಟಿಪ್ಪು ಜಯಂತಿಯನ್ನು ಸಕರ್ಾರ ಆಚರಣೆ ಮಾಡುತ್ತಾ ಟಿಪ್ಪುವಿನ ಬಗ್ಗೆ ಮಕ್ಕಳಿಗೂ ತಿಳಿಸಲಿ ಎಂದರಲ್ಲದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಾತಯ್ಯನಗೋರಿ ಮುಂದೆ ಹೋದರೆ ಅಧಿಕಾರವುಳ್ಳ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವೆವು ಎಂಬ ತಪ್ಪು ತಿಳುವಳಿಕೆಯನ್ನು ಬಿಡಬೇಕು  ಎಂದರು.
ಗೋಡೆಕೆರೆ ಮಠದ ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮಾತನಾಡಿ ಕನ್ನಡ ಸಾಹಿತಿಗಳು ಆಂಗ್ಲ ಭಾಷಾ ವ್ಯಾಮೋಹಕ್ಕೆ ಸಿಲುಕಿದ್ದಾರೆ, ತಮ್ಮ ಮಕ್ಕಳನ್ನೇ ಆಂಗ್ಲ ಶಾಲೆಗಳಲ್ಲಿ ಓದಿಸುತ್ತಿದ್ದಾರೆ, ಕೇವಲ ಬಾಯಿಮಾತಿಗಾಗಿ ಭಾಷಣಗಳಲ್ಲಿ ಕನ್ನಡ ಕಡ್ಡಾಯದ ಬಗ್ಗೆ ಮಾತನಾಡುತ್ತಾರೆ ಎಂದ ಅವರು ಭಾರತ ಸಾಂಸ್ಕೃತಿಕ ಕೇಂದ್ರ, ಹಿಂದು ಮುಸ್ಲಿಂ ಬಾಂಧವರು ರಾಷ್ಟ್ರ ಪ್ರೇಮ ಬೆಳಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತ್ಯಾತೀತವಾಗಿ ಒಟ್ಟಾಗಿ ಬಾಳುತ್ತಿರುವ ನಾವು ಕನರ್ಾಟಕ ಮಾತೆಯ ಮಕ್ಕಳು ಎಂಬ ಭಾವನೆಯಿಂದ ಬಾಳಬೇಕು, ಉತ್ತಮ ರೀತಿಯ ಬಾಂಧವ್ಯ ಬೆಸೆಯುತ್ತಿರುವ ಈ ಸಂಘದ ಕಾರ್ಯ ಪ್ರಶಂಸನೀಯವಾದುದು, ನಾಡಿನ ಬಗ್ಗೆ ಟಿಪ್ಪುವಿಗೆ ಇದ್ದ ಪ್ರೇಮ ಮುಸಲ್ಮಾನರಾದರೂ ಶ್ರೀರಂಗನಾಥ ದೈವಭಕ್ತರಾಗಿದ್ದರೆಂಬುದು ಧಾಮರ್ಿಕ ಭಾವೈಕತೆಗೆ ಟಿಪ್ಪುಸುಲ್ತಾನ್ ಸಾಕ್ಷಿಯಾಗಿದ್ದಾರೆ ಎಂದ ಅವರು ಅವರ 49ನೇ ವರ್ಷದ ಅವಧಿಯಲ್ಲಿ ಕ್ಷಣ ಕ್ಷಣಕ್ಕೂ ದೇಶಪ್ರೇಮ ಬೆಳಸಿಕೊಂಡಿದ್ದರು, ನಾಡಿನಾದ್ಯಂತ ಟಿಪ್ಪು ದಿನಾಚರಣೆ ಆಚರಿಸುವಂತೆ ಸಕರ್ಾರವನ್ನು ಒತ್ತಾಯಿಸುತ್ತೇನೆ ಎಂದರು.
ಸಮಾರಂಭದಲ್ಲಿ ಟಿಪ್ಪುವಿನ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಮಾಸ್ಟರ್ ಅರ್ಫತ್ ಆಲಂನನ್ನು ಗಣ್ಯರು ಶ್ಲಾಘಿಸಿದರು.
ಸಮಾರಂಭದಲ್ಲಿ ರಾಜ್ಯ ಅಹಿಂದ ಮುಖಂಡ ಮುರುಗರಾಜೇಂದ್ರ ಒಡೆಯರ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಯ್ಯ, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ತಹಶೀಲ್ದಾರ್ ಉಮೇಶ್ಚಂದ್ರ, ಜಾಮಿಯಾ ಮಸೀದಿ ಮಹಮದ್ಖಲಂದರ್ಸಾಬ್, ಕ್ಯಾಪ್ಟನ್ಸೋಮಶೇಖರ್, ಮಿಲ್ಟ್ರಿಶಿವಣ್ಣ, ಸಿ.ಬಸವರಾಜು, ಪುರಸಬಾ ಸದಸ್ಯ ಸಿ.ಡಿ.ಚಂದ್ರಶೇಖರ್, ಇ.ಓ ಎನ್.ಎಂ.ದಯಾನಂದ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಜಿಲ್ಲಾ ಉಪಾಧ್ಯಕ್ಷ ಜಾವಿದ್, ತಾಲ್ಲೂಕು ಟಿಪ್ಪುಸುಲ್ತಾನ್ ಅಭಿಮಾನಿ ಸಂಘದ ಅಧ್ಯಕ್ಷ ಮಹಮದ್ಅಸ್ಲಮ್, ಉಪಾಧ್ಯಕ್ಷ ಫಝಲ್, ಸಂಘಟನಾ ಕಾರ್ಯದಶರ್ಿ ಪವರ್ಿಜ್, ಇಮ್ರೋಜ್  ಮುಂತಾದವರು ಉಪಸ್ಥಿತರಿದ್ದರು.
  ಸಮಾರಂಭದಲ್ಲಿ ಪಲ್ಲಕ್ಕಿ ಬಸವರಾಜು ಸ್ವಾಗತಿಸಿ, ಸಿ.ಬಿ.ರೇಣುಕಸ್ವಾಮಿ ನಿರೂಪಿಸಿದರು.


Tuesday, December 20, 2011



ಚಿ.ನಾ.ಹಳ್ಳಿ ತಾಲೂಕಿಗೆ  ಹೇಮೆ ಹರಿಸಲು ಮೂವತ್ತು ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಡಿ.19: ತಾಲೂಕಿನ ಮೂರು ಹೋಬಳಿಗಳಿಗೆ ಹೇಮಾವತಿ ನಾಲೆಯಿಂದ  ಕುಡಿಯುವ ನೀರು ಒದಗಿಸುವ ಯೋಜನೆಗೆ 30 ಕೋಟಿ ರೂಗಳನ್ನು ಮಂಜೂರು ಮಾಡಿರುವ ಸಕರ್ಾರವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಅಭಿನಂದಿಸಿದ್ದಾರೆ.
ತಾಲೂಕಿನ 26 ಕೆರೆಗಳಿಗೆ ನೀರು ಸರಬರಾಜು ಮಾಡಲು ಸಕರ್ಾರ 102.60 ಕೋಟಿ ರೂಗಳನ್ನು ಮಂಜೂರು ಮಾಡಿದ್ದು,  ಈ ಪೈಕಿ ಮೂರನೇ ಒಂದು ಭಾಗದಷ್ಟು ಹಣವಾದ 30 ಕೋಟಿ ರೂಗಳನ್ನು ಸಕರ್ಾರ ಬಿಡುಗಡೆ ಮಾಡಿದೆ ಎಂದರು,  ಈ ಯೋಜನೆ ಜಾರಿಗೆ ತರುವಲ್ಲಿ ಸಂಸದ ಜಿ.ಎಸ್.ಬಸವರಾಜು ನೀರಾವರಿ ತಜ್ಞ ಪರಮಶಿವಯ್ಯನವರ ಜೊತೆಗೂಡಿ ಶ್ರಮಿಸಿರುವುದು, ತಾಲೂಕಿನ ಮಾಜಿ ಶಾಸಕರುಗಳು ಹಾಗೂ ರೈತ ಸಂಘ, ಕನ್ನಡ ಪರ ಸಂಘಟನೆಗಳ ಹೋರಾಟ ಹಾಗೂ  ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರವರ ಇಚ್ಚಾಶಕ್ತಿಗೆ ನನ್ನ ಕೃತ್ಞತೆಗಳನ್ನು ಅಪರ್ಿಸಲು ಇಚ್ಚಿಸುತ್ತೇನೆ ಎಂದರು.
ಬರದ ನಾಡಿಗೆ ಕುಡಿಯುವ ನೀರು ತರುವಲ್ಲಿ ಮೂರು ಜನ ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಲಕ್ಕಪ್ಪನವರೂ ಶ್ರಮಿಸಿದ್ದಾರೆ ಎಂದ ಅವರು, ನೀರು ತರುವಲ್ಲಿ ಎಲ್ಲರೂ  ಪಕ್ಷಭೇತ ಮರೆಯುವದರ ಜೊತೆಗೆ  ವಿವಿಧ ಸಂಘಟನೆಗಳು ಕೈ ಜೋಡಿಸಿದರೆ ಈ ಯೋಜನೆಯನ್ನು ಅತೀ ಶೀಘ್ರವಾಗಿ ಜನತೆಗೆ ಅಪರ್ಿಸಬಹುದು ಎಂದರು. ಯಾವ ರಾಜಕೀಯ ಪಕ್ಷದವರೂ  ನೀರಿನ ವಿಷಯದಲ್ಲಿ ರಾಜಕಾರಣ ಮಾಡದೆ ಜನತೆಯ ಆಶಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ ಅವಶ್ಯಕವೆಂದರು.
ತಾಲೂಕಿನ ಹಂದನಕೆರೆ ಹೋಬಳಿಯ ಮತಿಘಟ್ಟ ಭಾಗಕ್ಕೆ  ಹೊನ್ನವಳಿಯಿಂದ ಹಾಗೂ ಕಂದಿಕೆರೆ ಹೋಬಳಿಯ ಗುಡ್ಡದಾಚೆ ಭಾಗಕ್ಕೆ ನಿಟ್ಟೂರು ಕಡೆಯಿಂದ ಹಾಗೂ ಬುಕ್ಕಾಪಟ್ಟಣದ ಭಾಗದ ರಾಮಲಿಂಗಾಪುರದ ಕೆರೆಗೆ ಕಳ್ಳಂಬೆಳ್ಳಾ ಕಡೆಯಿಂದ ನೀರು ತರಬಹುದರ ಬಗ್ಗೆ ಆಲೋಚನೆ ಮಾಡುತ್ತಿದ್ದು ಈ ಬಗ್ಗೆಯೂ ಶ್ರಮಿಸುವುದಾಗಿ ತಿಳಿಸಿದರು.
ಯು.ಜಿ.ಡಿ.ಗೆ 22ಕೋಟಿ ರೂ ಪ್ರಸ್ತಾವನೆ: ಪಟ್ಟಣದ ಒಳ ಚರಂಡಿ ವ್ಯವಸ್ಥೆಯನ್ನು ಜಾರಿಗೆ ತರಲು ಸಕರ್ಾರಕ್ಕೆ 22 ಕೋಟಿ ರೂಗಳ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಿದೆ ಎಂದರಲ್ಲದೆ, ಈಗಾಗಲೇ ಸವರ್ೆ ಕಾರ್ಯ ಮುಗಿದಿದ್ದು, ಒಳ ಚರಂಡಿ ನೀರನ್ನು ಊರಿನ ಹೊರಭಾಗಕ್ಕೆ ಬಿಡಲು ಅಗತ್ಯವಿರುವ ಜಮೀನುಗಳನ್ನು ಗುತರ್ಿಸಲಾಗುತ್ತಿದ್ದು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಕರ್ಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು. 
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ  ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಈ ಸಂಬಂಧ ಸಾರಿಗೆ ಸಚಿವ ಆರ್. ಅಶೋಕ್ ರವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರು ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿದರ್ೇಶಕರಿಗೆ ಸೂಚಿಸಿರುವುದಾಗಿ ತಿಳಿಸಿದರು, ಈ ನಿಲ್ದಾಣಕ್ಕೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
2012 ಮಾಚರ್ಿ ಅಂತ್ಯಕ್ಕೆ ತೀ.ನಂ.ಶ್ರೀ. ಭವನ ಪೂರ್ಣ: ಪಟ್ಟಣದ ಟೆಲಿಪೋನ್ ಕಛೇರಿ ಪಕ್ಕದಲ್ಲಿ ನಿಮರ್ಾಣವಾಗುತ್ತಿರುವ ತೀ.ನಂ.ಶ್ರೀ.ಶತಮಾನೋತ್ಸವ ಭವನವನ್ನು 2012ರ ಮಾಚರ್ಿ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವರು ಲಿಖಿತವಾಗಿ ತಿಳಿಸಿದ್ದು, ಈ ಕಾಮಗಾರಿ ಈಗಾಗಲೇ ಲಿಂಟೆಲ್ ವರೆವಿಗೆ ನಿಮರ್ಾಣ  ಮುಗಿಸಿದ್ದು ಲಿಂಟೆಲ್ ಮೇಲ್ಬಾಗದ ಮೇಲ್ಕಟ್ಟಡದ ಕೆಲಸ ಪ್ರಗತಿಯಲ್ಲಿದೆ ಎಂದರಲ್ಲದೆ, ಈ ಕಾಮಗಾರಿಗೆ ಈಗಾಗಲೇ ಜಿಲ್ಲಾಧಿಕಾರಿಗಳ ಮುಖೇನ ಒಂದು ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ,  ಈ ಕಾಮಗಾರಿಗೆ ಇನ್ನೂ 50 ಲಕ್ಷ ರೂಗಳ  ಅನುದಾನ ಅವಶ್ಯಕತೆ ಇದೆ,  ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ತೀ.ನಂ.ಶ್ರೀ.ಭವನವನ್ನು ಒಟ್ಟು ಒಂದುವರೆ ಕೋಟಿ ರೂಗಳ ಅಂದಾಜಿನಲ್ಲಿ ನಿಮರ್ಿಸಲು ಯೋಜಿಸಲಾಗಿದೆ ಎಂದರು.
ಪಟ್ಟಣದಲ್ಲಿ ಈಗಾಗಲೇ ನಿಮರ್ಾಣವಾಗಿರುವ ಅಗ್ನಿಶಾಮಕ ಠಾಣೆ, ವಾಲ್ಮೀಕಿ ಭವನ, ತಾಲೂಕು ಕ್ರೀಡಾಂಗಣ,  ಸಂತೆ ಸ್ಥಳ ಹಾಗೂ ಪಟ್ಟಣದ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ಅಂಬೇಡ್ಕರ್ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಪುರಸಭಾ ಸದಸ್ಯರುಗಳಾದ ರವಿ(ಮೈನ್ಸ್), ಎಂ.ಎನ್.ಸುರೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ದಾನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ-2
ಹಿಂದುಳಿದ ಹಾಗೂ ಪರಿಶಿಷ್ಟರ ಬಗ್ಗೆಯೂ ನಮ್ಮ ಬ್ಯಾಂಕ್ ಹೆಚ್ಚು ಕಾಳಜಿವಹಿಸಿದೆ ಕೆ.ಎನ್.ಆರ್
ಚಿಕ್ಕನಾಯಕನಹಳ್ಳಿ,ಡಿ.19 ; ಅತಿ ಹಿಂದುಳಿದ ಜನರು ಇರುವುದು ಹಳ್ಳಿಗಾಡಿನಲ್ಲಿ, ಇಲ್ಲಿರುವ ಶೇ.80ರಷ್ಟು  ಜನ ಕೃಷಿಕರಾಗಿದ್ದು ಅವರಿಗೆ ಆಥರ್ಿಕವಾಗಿ ಸದೃಡವಾಗಲು ಆಗುತ್ತಿಲ್ಲ ಅವರಿಗಾಗಿ ಸಾಲದ ಸೌಲಭ್ಯ ನೀಡಲಾಗುತ್ತಿದೆ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
    ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ನಡೆದ ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,  ಸಣ್ಣ ಮತ್ತು ದೊಡ್ಡ ಹಿಡುವಳಿ ರೈತರುಗಳ ಜೀವನ ಸುಧಾರಿಸಲು ಬ್ಯಾಂಕಿನ ಸಾಲ ನೀಡಲಾಗುತ್ತಿದೆ, ರೈತರು ತಮ್ಮಲ್ಲಿರುವ ಹಣವನ್ನು ಖಚರ್ು ಮಾಡಿ ಕೃಷಿಗೆ ಹಾಕಿದರೂ ಲಾಭ ಸಿಗದೆ ಅವರು ಬೇರೆಯವರಿಂದ ಹೆಚ್ಚು ಬಡ್ಡಿಗೆ ಸಾಲ ಮಾಡಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೊಡಗುತ್ತಿದ್ದಾರೆ, ಇದನ್ನು ಹಾಗೂ ರೈತರ ತಲೆ ಮೇಲೆ ಇರುವ ಖಾಸಗಿ ಬಡ್ಡಿ ಸಾಲದ ಹೊರೆ ಕಡಿಮೆ ಮಾಡಲು ಜಿಲ್ಲಾ ಬ್ಯಾಂಕ್ ನಿರ್ಧರಿಸಿದ್ದು ಹಳ್ಳಿಗಾಡಿನ ಪ್ರದೇಶದವರಿಗೆ ನಿರಂತರವಾಗಿ ಸಾಲ ನೀಡುತ್ತಿದೆ ಎಂದರು. ಹಿಂದುಳಿದವರ್ಗ ಹಾಗೂ ಪರಿಶಿಷ್ಟರ ಕಡೆಯೂ ಡಿಸಿಸಿ ಬ್ಯಾಂಕ್ ಗಮನ ಹರಿಸುತ್ತಿದೆ ಎಂದರು.
 ಬ್ಯಾಂಕಿಗೆ ಸಕರ್ಾರದಿಂದ ಯಾವುದೇ ರೀತಿಯ ಹಣ ಬರುವುದಿಲ್ಲ, ನಬಾಡರ್್ನಿಂದ ಮಾತ್ರ ಅಲ್ಪಸ್ವಲ್ಪ ಬರುತ್ತದೆ ಅದನ್ನು ಅವಧಿಯೊಳಗೆ ಬ್ಯಾಂಕ್ ಪೂರ್ಣಗೊಳಿಸಬೇಕು, ಆದರೂ ರೈತರಿಗೆ ಹಾಗೂ ಸ್ವಸಹಾಯ ಸಂಘದವರಿಗೆ ಸಾಲ ನೀಡಲಾಗುತ್ತಿದೆ ಅದನ್ನು ಖಾತೆದಾರರು ಕಟ್ಟುವ ಠೇವಣಿಯಿಂದ ನೀಡಲಾಗುತ್ತಿದೆಯಾದ್ದರಿಂದ ಸಾಲ ಪಡೆದವರು ಮರುಪಾವತಿ ಮಾಡಲು ಮುಂದಾಗಬೇಕು ಹಾಗೂ ಸಾಲಕ್ಕೆ ಮಾತ್ರ ಜಿಲ್ಲಾ ಬ್ಯಾಂಕ್ ಬೇಕು ಖಾತೆಯಲ್ಲಿ ಠೇವಣಿ ಇಡಲು ಬೇರೆ ಬ್ಯಾಂಕ್ ಬೇಕೇ ಇದರ ಬಗ್ಗೆ ರೈತರು ಯೋಚಿಸಬೇಕು, ರೈತರು ತಮ್ಮ ಹಣವನ್ನು ಡಿಸಿಸಿ ಬ್ಯಾಂಕ್ನಲ್ಲಿ  ಠೇವಣ ಇಡಬೇಕೆಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ರೈತರು ಹೊಸದಾಗಿ ತಮ್ಮ ಜಮೀನುಗಳಿಗೆ ಪಂಪ್ಸೆಟ್ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲೇಬೇಕು,  ಇಲ್ಲವಾದರೆ ಸಂಪರ್ಕ ಅಳವಡಿಸಲು ಅನುಮತಿ ನೀಡುವುದಿಲ್ಲವೆಂಬ  ತುಮಕೂರು ಜಿಲ್ಲೆಯಲ್ಲಿರುವ ಹೊಸ ಶಾಸನವನ್ನು ಬದಲಿಸಬೇಕು,  ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಇಂಧನ ಸಚಿವೆ ಶೋಭಾ ಕರೆಂದ್ಲಾಜೆರವರಿಗೆ ತಿಳಿಸಿರುವುದಾಗಿ ಹೇಳಿದರು.
 ರೈತರು ತಮ್ಮ ಜಮೀನುಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕೊಡಿಸಿಕೊಳ್ಳಲು ಆಗದೆ ಪರದಾಡುತ್ತ ತಮ್ಮ ಬಳಿ ಬಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ, ಸಕರ್ಾರವೂ ಸಹ ಹಳೇ ಪಂಪ್ಸೆಟ್ ಕೆಟ್ಟು ಹೋದರೆ ಹೊಸದಾಗಿ ಅಳವಡಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ ಹಾಗೆಯೇ  ಯಾವುದೇ ಹೊಸ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಹಾಕಿಸುವ ಸ್ಥಿತಿಯಲ್ಲಿಯೂ ಇಲ್ಲ ಇದರಿಂದ ರೈತರ ಆಥರ್ಿಕ ಜೀವನಕ್ಕೆ ತೊಂದರೆಯಾಗಲಿದ್ದು ಇದಕ್ಕಾಗಿ ಹೋರಾಟ ಅನಿವಾರ್ಯವಾಗಲಿದೆ ಎಂದರು.
 ರೈತರು ಬೆಳೆಯುವ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ, ತಮ್ಮ ತೋಟದಲ್ಲಿ ಬೆಳೆಯುವ ಎಳನೀರನ್ನು 3ರೂಗೆ ಸಗಟು ವ್ಯಾಪಾರಿಗಳಿಗೆ ಮಾರಾಟಮಾಡುತ್ತಿದ್ದು,  ಈ ಸಗಟು ಮಾರಾಟಗಾರರು ಮಾರುಕಟ್ಟೆಯಲ್ಲಿ 10ರೂಗೆ ಮಾರಾಟಮಾಡುತ್ತಿದ್ದಾರೆ,  ಇಂತಹ ಹಲವಾರು ವ್ಯಾಪಾರಿ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದರೂ ರೈತರ ಹೆಸರಿನಲ್ಲಿ ಹಸಿರು ಟವಲ್ ತೊಟ್ಟು ಅಧಿಕಾರ ಸ್ವೀಕರಿಸಿದ ಸಕರ್ಾರ  ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದರು.  
ರಾಜ್ಯದಲ್ಲಿ ಭ್ರಷ್ಠಾಚಾರ ಹೆಚ್ಚಾಗುತ್ತಿದೆ, ರಾಜಕಾರಣ ದುಡ್ಡಿಗಾಗಿ ನಡೆಯುತ್ತಿದೆ, ರಾಜ್ಯ ಅಫೀಮು, ಗಾಂಜ ಬೆಳೆಯುವ ಜಾಗವಾಗಿದೆ ಇವುಗಳ ವಿರುದ್ದ ಸಮರ ಸಾರುವವರು ಬೇಕಾಗಿದ್ದಾರೆ ಇವುಗಳ ವಿರುದ್ದ ಹೋರಾಟಕ್ಕೆ ಎಲ್ಲರೂ ಮುಂಚೂಣಿಯಲ್ಲಿರಬೇಕು ಎಂದರಲ್ಲದೆ ನಾವು ಶಾಸಕರಾಗಿದ್ದಾಗ ವಿಧಾನಸಭೆಗಳಲ್ಲಿ ಹಾಗೂ ತಾಲ್ಲೂಕಿನ ಕೆಡಿಪಿ ಸಭೆಗಳಲ್ಲಿ  ಇವುಗಳ ಬಗ್ಗೆ ಚಚರ್ಿಸುತ್ತಿದ್ದೆ, ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ ಯೋಗ್ಯರನ್ನು ಆರಿಸಿ ವಿಧಾನಸಭೆಗೆ ಕಳುಹಿಸುವುದು ಜನತೆಯ ಮೇಲಿದ್ದು ಜನತೆ ಯೋಗ್ಯರನ್ನು ಆರಿಸಬೇಕಾಗಿದೆ  ಮತ್ತು ತಾಲ್ಲೂಕಿನ  ಹಂದನಕೆರೆ ಹೋಬಳಿಯ ಸಮಸ್ಯೆ ಗಗನಕ್ಕೇರಿದ್ದು ಇಲ್ಲಿಗೆ ಜಿಲ್ಲಾ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಮಾಡುತ್ತಿರುವುದು ಜನತೆಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜಿಲ್ಲಾ ಬ್ಯಾಂಕ್ ರೈತರು ಹಾಗೂ ಸ್ವಸಹಾಯ ಸಂಘಗಳಿಗೆ 18 ಲಕ್ಷ ರೂ ಹೊಸ ಸಾಲ ನೀಡುತ್ತಿದೆ, ಮುಸ್ಲಿಂ, ಸಮುದಾಯ ದಕ್ಕಲಿಗರು, ಕೊರಮ ಇತ್ಯಾದಿ ಹಿಂದುಳಿದ ಸಮುದಾಯಗಳಿಗೆ ಸಾಲ ನೀಡುವ ಮೂಲಕ ಆ ಸಮುದಾಯಗಳನ್ನು ಆಥರ್ಿಕವಾಗಿ ಸಹಕರಿಸುವ  ತರುವ ಕಾರ್ಯ ಮಾಡುತ್ತಿದ್ದೇವೆ, ಸಾಲ ಸೌಲಭ್ಯವನ್ನು ತಾಲ್ಲೂಕಿನಲ್ಲಿ ಮೊದಲು ಮಾಡಿದ್ದು ಈಗ ಈಡೀ ಜಿಲ್ಲೆಯಲ್ಲಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬರಗೂರು ನಾಗರಾಜು, ಬಸವಣ್ಣ, ಬಾಬು, ಆರ್.ಜಿ.ಕುಮಾರ್, ರಾಮಚಂದ್ರಪ್ಪ, ಪುಟ್ಟರಾಜ್ ಮುಂತಾದವರಿದ್ದರು.
ಟಿಪ್ಪು ಅಭಿಮಾನಿ ಮಹಾವೇದಿಕೆ ಉದ್ಘಾಟನೆ, ರಾಜ್ಯೋತ್ಸವ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ .ಡಿ.20:- ತಾಲ್ಲೂಕು ಟಿಪ್ಪುಸುಲ್ತಾನ್ ಅಭಿಮಾನಿ ಮಹಾವೇದಿಕೆ ಸಂಘದ ಉದ್ಘಾಟನೆ  ಹಾಗೂ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮವನ್ನು ಇದೆ 21ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಟಿಪ್ಪುಸುಲ್ತಾನ್ ಅಭಿಮಾನಿ ಮಹಾವೇದಿಕೆ ವತಿಯಿಂದ ಪಟ್ಟಣದ ತಾತಯ್ಯನಗೋರಿ ಮುಂಭಾಗ ಹಮ್ಮಿಕೊಂಡಿದ್ದು ಸಮಾರಂಭಕ್ಕೂ ಮುನ್ನ  ಕನಕ ಭವನದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಕನ್ನಡ ಬಾವುಟ, ಟಿಪ್ಪು ಬಾವುಟಗಳೊಂದಿಗೆ ಗಣ್ಯರು ಮೆರವಣಿಗೆ ಭಾಗವಹಿಸುವರು, ನಂತರ ತಾತಯ್ಯನ ಗೊರಿಯ ಮಂಭಾಗ ಕಾರ್ಯಕ್ರಮ ನಡೆಯುತ್ತದೆ.  ಕಾರ್ಯಕ್ರಮದಲ್ಲಿ ಶಾಸಕರು, ತಾಲೂಕಿನ ಗಣ್ಯ ವ್ಯಕ್ತಿಗಳು, ತುಮಕೂರು ಟಿಪ್ಪು ಸಂಘದ ಅದ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಟಿಪ್ಪು ಸಂಘದ ಅಧ್ಯಕ್ಷರಾದ ಅಸ್ಲಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸಿಕ ಪಿಂಚಿಣಿಯಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಿ
ಚಿಕ್ಕನಾಯಕನಹಳ್ಳಿ .ಡಿ.20:- ತಾಲ್ಲೂಕಿನ ಎಸ್.ಎಸ್.ವೈ, ವಿಧವೆ ವೇತನ ಮಂಜೂರಾತಿಯಾಗಿತ್ತು ಆದರೆ ಕಳೆದ ಕೆಲವು ತಿಂಗಳಿಂದ  ತಾಲ್ಲೂಕಿನ 4000 ಸಾವಿರ ಜನರಿಗೆ ವೇತನದ ಹಣ ಬರದೆ ಅನ್ಯಾಯವಾಗುತ್ತಿದೆ ಎಂದು ಗ್ರಾ.ಪಂ ಸದಸ್ಯೆ ಬಿ.ಎನ್.ಶಶಿಕಲಾ ಆರೋಪಿಸಿದ್ದಾರೆ.
ಗ್ರಾಮ ಲೆಕ್ಕಿಗರು ಸರಿಯಾಗಿ ವರದಿ ಮಾಡದೆ, ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ, ಹಾಗೂ ಆರ್.ಐ ಹಾಗೂ ತಹಶೀಲ್ದಾರ್ರ ವರದಿಯ ಮೇಲೆ ಎ.ಸಿ ಅವರಿಗೆ ವರದಿ ಕಳಿಸಿದ್ದರು ಆದ್ದರಿಂದ ಜಿಲ್ಲಾಧಿಕಾರಿಯವರು ನೀಡಿರುವ  ವರಿದಿಯನ್ನು ಮರುಪರಿಶೀಲಿಸಿ ತಾಲ್ಲೂಕಿನ ದಲಿತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳಿಗೆ ತಿಂಗಳ ವೇತನವನ್ನು ಮಂಜೂರು ಮಾಡಿಸಿ ಇಲ್ಲವಾದರೆ ತಾಲ್ಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಿರಿಯರು ಮಕ್ಕಳಂತೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಡಿ.20 :  ಹಿರಿಯರು ಮಕ್ಕಳಂತೆ, ಅವರ ಜೊತೆ ನಮ್ಮೆಲ್ಲರ ಒಡನಾಟ ಸ್ನೇಹ, ಪ್ರೀತಿಯಿಂದ ಕೂಡಿದಾಗ, ಅವರ ಜೀವನವು ಖುಷಿಯಾಗಿ ಮುಂದೆ ಸಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ನಡೆದ ನಕರರವರ ಮತ್ತು ನಿವೃತ್ತ ನೌಕರರ ದಿನಾಚಾರಣೆ, ಸರ್ವ ಸದಸ್ಯರ ವಾಷರ್ಿಕ ಮಹಾಸಭೆ ಹಾಗೂ ನಿವೃತ್ತ ನೌಕರರ ಸಂಘದ ಮೊದಲನೆ ಮಹಡಿ ಕಟ್ಟಡದ ಉದ್ಘಾಟಿನೆ ನೆರವೇರಿಸಿ ಮಾತನಾಡಿದ ಅವರು ಹಿರಿಯರ ಬಾವನೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ, ಅವರು ಜೀವನದ ಅನುಭವಸ್ಥರಾಗಿದ್ದು ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಾಗಿದೆ, ಈಗಿನ ಯುವಕರು ಹಿರಿಯರ ಮಾರ್ಗದರ್ಶನವನ್ನು ಅರಿಯಬೇಕು ಎಂದ ಅವರು ಹಿರಿಯರು ತಮ್ಮ ನಿವೃತ್ತಿ ನಂತರವೂ ಸಮಾಜದಲ್ಲಿ ಒಂದಲ್ಲ ಒಂದು ರೀತಿ ಕಾರ್ಯನಿರ್ವಹಿಸಬೇಕು ಆಗ ಅವರಿಗೆ ತಮ್ಮ ವಯಸ್ಸಿನ ಬಗ್ಗೆ ತಿಳಿಯದೆ ಮುಂದುವರೆಯುತ್ತಾರೆ ಹಾಗೂ ಹಿರಿಯರ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸುವುದಾಗಿ ಅವರು ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯ ಸರ್ಕರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎನ್.ಸಂಪತ್, ಕಾರ್ಯದಶರ್ಿ ರೇವಣಸಿದ್ದಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ, ಕಾರ್ಯದಶರ್ಿ ಸಿ.ಡಿ.ರುದ್ರಮುನಿ, ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ವಾಣಿಜ್ಯ ಇಲಾಖೆಯ ನಿವೃತ್ತ ಸಹಾಯುಕ್ತ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಮೈನ್ಸ್(ರವಿ) ಹಾಗೂ ಹಿರಿಯ ನಾಗರೀಕರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಲಿತಮ್ಮ ಪ್ರಾಥರ್ಿಸಿದರೆ, ಸಿ.ಕೆ.ವಿಶ್ವೇಶ್ವರಯ್ಯ ಸ್ವಾಗತಿಸಿದರು.


Saturday, December 17, 2011



ಜನರ ಬಳಿ ಹೋಗಿ ಸಮಸ್ಯೆ ಅರಿಯಲು ಚಿಂತನ-ಮಂಥನ ಕಾರ್ಯಕ್ರಮ: ಷಫಿ ಅಹಮದ್
ಚಿಕ್ಕನಾಯಕನಹಳ್ಳಿ,ಡಿ.17 : ಕಳೆದುಕೊಂಡಿರುವ ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತೆ ಕ್ಷೇತ್ರದಲ್ಲಿ ಕಟ್ಟಲು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಇರುವ ಸಮಸ್ಯೆಗಳ ಬಗ್ಗೆ ತಿಳಿಯಲು 'ಚಿಂತನ ಮಂಥನ' ಎಂಬ ಕಾರ್ಯಕ್ರಮದ ಮೂಲಕ ಸಕರ್ಾರದ ಗಮನ ಸೆಳಯುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಪಕ್ಷ ಸಂಘಟನೆ ಮಾಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಕಟ್ಟುವುದು ಅದಕ್ಕಾಗಿ ಎಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿ ಹೋಬಳಿ, ಗ್ರಾಮಗಳಲ್ಲಿ ಸಂಘಟನೆ ಮಾಡಲು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರ ನಿದರ್ೇಶನದ ಮೇರೆಗೆ   ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳಲ್ಲಾಗಿದೆ ಎಂದ ಅವರು,  ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಚಿಂತನ ಮಂಥನ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚಿಂತಿಸಿ ಪರಿಹರಿಸುವುದಾಗಿ ತಿಳಿಸಿದರು. 
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಿಂದುಳಿದ ಹಾಗೂ ಬರಪೀಡಿತ  ಕ್ಷೇತ್ರವಾಗಿದ್ದು ಇಲ್ಲಿನ ಅನೇಕ ಸಮಸ್ಯೆಗಳನ್ನು ಶಾಸಕರು ಬಗೆಹರಿಸುತ್ತಿಲ್ಲ, ಆದ್ದರಿಂದ ಪಕ್ಷವೇ ಮುಂದಾಗಿ ಸಮಸ್ಯೆಗಳನ್ನು ಎತ್ತಿಹಿಡಿಯಲು ಹಾಗೂ ಕೇಂದ್ರ ಸಕರ್ಾರದಿಂದ ಬದಂತಹ ಹಲವು ಯೋಜನೆಗಳನ್ನು ಸರಿಯಾಗಿ ಸಮರ್ಪಕ ಅನುಷ್ಠಾನಗೊಳಿಸಲು  ಪಕ್ಷ ಮುಂದಾಗುತ್ತದೆ ಎಂದರು. 
ಗೋಷ್ಠಿಯಲ್ಲಿ ಮುಖಂಡರಾದ ಮಾಜಿ ಶಾಸಕ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಕೆ.ಪಿ.ಸಿ.ಸಿ.ಸದಸ್ಯ ಸೀಮೆಎಣ್ಣೆಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಬಾಬುಸಾಹೇಬ್, ರೇಣುಕಾಗುರುಮೂತರ್ಿ ಮುಖಂಡರುಗಳಾದ ಎಚ್.ಬಿ.ಎಸ್.ನಾರಾಯಣಗೌಡ, , ಕ್ಯಾಪ್ಟನ್ ಸೋಮಶೇಖರ್ ವಿಶ್ವನಾಥ್,  ಕೆ.ಜಿ.ಕೃಷ್ಣೆಗೌಡ, ತೀರ್ಥಪುರದ ವಾಸು ಮುಂತಾದವರಿದ್ದರು.

Friday, December 16, 2011





ಆದರೂ  ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ : ಹಳೆಮನೆ ಶಿವನಂಜಪ್ಪ
ಚಿಕ್ಕನಾಯಕನಹಳ್ಳಿ,ಡಿ. 16 : ಜಿಲ್ಲೆಯಿಂದ ತುಮಕೂರು ಹಾಲು ಒಕ್ಕೂಟ ಮಹಮಂಡಳಿಗೆ ದಿನಕ್ಕೆ 4 ಲಕ್ಷ ಲೀಟರ್ನಷ್ಟು ಹಾಲು ಸರಬರಾಜಾದರೂ 2ಲಕ್ಷ ಲೀಟರ್ ಮಾರಾಟವಾಗಿ 2 ಲಕ್ಷ ಲೀಟರ್ಹಾಲು ಉಳಿಯುತ್ತಿದೆ, ಆದರೂ  ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ನಡೆದ ನಂದಿನಿ ಪ್ರತಿಭಾನ್ವೇಷಣೆ ಸ್ಪಧರ್ೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಜನತೆಗೆ ತಿಳಿಸಲು ಇಂತಹ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ  ಹಮ್ಮಿಕೊಳ್ಳಲಾಗಿದೆ ಎಂದ ಅವರು ನಾನು ಅಧ್ಯಕ್ಷನಾದ ಮೇಲೆ ತಾಲ್ಲೂಕಿನಲ್ಲಿ ನಂದಿನಿ ಹಾಲು ಒಕ್ಕೂಟದಲ್ಲಿ 92 ಸಂಘ ಹಾಗೂ 22 ಉಪಕೇಂದ್ರಗಳನ್ನಾಗಿ ಹೆಚ್ಚಿಸಿದ್ದೇನೆ ಎಂದರು.
ನಂದಿನಿ ಹಾಲು ಒಕ್ಕೂಟವು 67 ತರಹದ ವ್ಯವಸ್ಥೆ ಹೊಂದಿದ್ದು ಐ.ಎಸ್.ಐ ಗುರುತನ್ನು ಪಡೆದಿದೆ. ನಂದಿನಿಯ ಹಾಲು ಶೇ.100ರಷ್ಟು ಶುದ್ದವಾಗಿದೆ, ಹಾಲನ್ನು ರೈತರುಗಳು ಯಾವುದೇ ಖಾಸಗಿಯವರಿಗೆ ನೀಡದೆ ಒಕ್ಕೂಟಕ್ಕೆ ನೀಡಿ ಹೆಚ್ಚಿನ ಲಾಭ ಪಡೆಯಲು ತಿಳಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ನಂದಿನಿ ಹಾಲು, ತುಪ್ಪ, ಪೇಡ ಬಹಳ ಉತ್ಕೃಷ್ಠ ಹಾಗೂ ಶುದ್ದವಾಗಿರುವುದಲ್ಲದೆ ಗುಣಮಟ್ಟದಲ್ಲಿ ನಂ.1ಸ್ಥಾನ ಪಡೆದಿದೆ, ಈ ಹಾಲಿನ ಬಗ್ಗೆ ಹಳ್ಳಿ, ಹಳ್ಳಿಗೂ ಪ್ರಚಾರವಾಗಬೇಕಿದೆ ಎಂದ ಅವರು ರೈತರುಗಳು ಹಸುಗಳನ್ನು ಸಾಕಿ ಹಾಲಿನ ಉತ್ಪಾದನೆಯಿಂದ ಲಾಭ ಪಡೆದುಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉಪಸ್ಥಿತರಿದ್ದರು.


Thursday, December 15, 2011



ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಮಂಜೂರು ಮಾಡಲು ಒತ್ತಾಯಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.15 : ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೊ ಕಾಲೇಜುಗಳನ್ನು ಸಕರ್ಾರ ಶೀಘ್ರವೇ ಮಂಜೂರು ಮಾಡಬೇಕೆಂದು ಒತ್ತಾಯಿಸಿ  ಅಭಾವಿಪ ರಸ್ತೆ ತಡೆ ನೆಡಸಿ ಪ್ರತಿಭಟಿಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ಹಾಗೂ ಅಭಾವಿಪ ಕಾರ್ಯಕರ್ತರು ಕಾಲೇಜು ಮಂಜೂರು ಬಗ್ಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕು ಪ್ರಮುಕ್ ಚೇತನ್ಪ್ರಸಾದ್, ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಹಳ್ಳಿ ಎಂದೇ ಬಿಂಬಿಸುತ್ತಾ ಬಂದಿರುವ ಸಕರ್ಾರ ಹಾಗೂ ಜನಪ್ರತಿನಿಧಿಗಳು ತಾಲ್ಲೂಕಿನ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದಾರೆ, ಇಲ್ಲಿನ ಸಾವಿರಾರು ವಿದ್ಯಾಥರ್ಿಗಳು ದೂರದ ಊರುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಸಕರ್ಾರ ತಾಲ್ಲೂಕಿಗೆ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಇಲ್ಲವಾದರೆ ಈ ಹೋರಾಟವನ್ನು ಅಭಾವಿಪ ಕೈಗೆತ್ತುಕೊಂಡು ಹಂತ ಹಂತವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಭಾವಿಪ ಸಹ ಕಾರ್ಯದಶರ್ಿ ದಿಲೀಪ್ ಮಾತನಾಡಿ ತಾಲ್ಲೂಕು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆಯಾದ್ದರಿಂದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ತೋರಿಸಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ತರಲು ಮುಂದಾಗಬೇಕೆಂದು ಒತ್ತಾಯಿಸಿದರು.
  ಪ್ರತಿಭಟನೆಯಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ, ಗುರು, ನಂದ, ಜಯರಾಜ್, ದರ್ಶನ್, ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.

Tuesday, December 13, 2011




ಮತ್ತೆ ಈ ರಾಜ್ಯದ ಜನತೆಯ ಸೇವೆ ಮಾಡುವ ವಿಶ್ವಾಸಿವಿದೆ: ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಡಿ.11 : ರಾಜ್ಯದ ಜನತೆಯ ಆಶೀವರ್ಾದ, ಜಗದ್ಗುರು ಕೃಪಾಶರ್ಿವಾದ ಇದ್ದರೆ ಮತ್ತೆ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಧರ್ಮಜಾಗೃತಿ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುವುದನ್ನು ಸಹಿಸದ ಅನೇಕ ರಾಜಕಾರಣಿಗಳು ಷಡ್ಯಂತ್ರಮಾಡಿ ನನ್ನನ್ನು ಕಾರಾಗೃಹಕ್ಕೆ ದೂಡಿದರು, ನಾನು ಯಾವುದೇ ಸಂದರ್ಭದಲ್ಲೂ ಬೆನ್ನು ತೋರಿಸಿ ಬೆಳದವನಲ್ಲ , ಪ್ರತಿಯೊಂದು ಸಂದರ್ಭದಲ್ಲೂ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ಜಾರಿಗೆ ತಂದವನು ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಕಾರಾಗೃಹದಲ್ಲಿದ್ದಾಗ ಅಲ್ಲಿ ಸುಮಾರು ಒಂದು ಸಾವಿರ ಕಾರಾಗೃಹ ವಾಸಿಗಳು ನನ್ನನ್ನು ಸನ್ಮಾನಿಸಿದರು, ಆ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ನನ್ನ ಮನ ಕಲಕಿದವು.
ನನ್ನ ಮೂರುವರೆ ವರ್ಷದ ಮುಖ್ಯಮಂತ್ರಿ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ, ಭಾಗ್ಯಲಕ್ಷ್ಮೀ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದೇನೆ,  ಸಾಮಾಜಿಕ ನ್ಯಾಯದಡಿಯಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗಳಿಸಿದ್ದೇನೆ ಎಂದ ಅವರು ನಾನು ಕಾರಾಗೃಹಕ್ಕೆ ಹೋದ ಸಂದರ್ಭದಲ್ಲಿ ನನ್ನ 40 ವರ್ಷಗಳ ಜೀವನದ ಬಗ್ಗೆ 24 ದಿನಗಳ ಕಾಲ ಡೈರಿಯನ್ನು ಬರೆದಿದ್ದೇನೆ ಎಂದರು.
ನಾನು ಅಟಲ್ ಬಿಹಾರಿ ವಾಜ್ಪೇಯಿಯವರ ಗರಡಿಯಲ್ಲಿ ಬೆಳದವನು ನಾನು ಮಾಡಿದ ರಾಜ್ಯದ ಯೋಜೆನೆಗಳ ಯಶಸ್ವಿಯನ್ನು ಬೇರೆಯವರು ಸಾಧಿಸದಿದ್ದರಿಂದ ನನಗೆ ಹಲವಾರು ತೊಂದರೆಗಳು ಎದುರಾಯಿತು. ನಾನು ಇಷ್ಟು ಎತ್ತರಕ್ಕೆ ಬೆಳದದ್ದೇ ನನಗೆ ಮುಳುವಾಯಿತು ಎಂದರು ಸಮಾರಂಭದಲ್ಲಿ  ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರಸ್ವಾಮಿ, ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಪಟೂರು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ತೋಂಟದಾರ್ಯಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಸಚಿವ ವಿ.ಸೋಮಣ್ಣ, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಂತಾದವರಿದ್ದರು.
ದರೋಡೆಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ.ಬಂದ್
ಚಿಕ್ಕನಾಯಕನಹಳ್ಳಿ,ಡಿ.12: ದರೋಡಿಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ. ಬಂದ್ ಆಗಿದೆ.
ಪಟ್ಟಣದ ಶೆಟ್ಟೀಕೆರೆ ಗೇಟ್ ಬಳಿ ಇರುವ ಎ.ಟಿ.ಎಂ. ಕೇಂದಕ್ಕೆ ಹೊಸದುರ್ಗ ಕಡೆಯಿಂದ ಬಂದ ಏಳ ಜನರಿರುವ ದರೋಡಿಕೋರರ ಗುಂಪೊಂದು ಇಲ್ಲಿನ ಎ.ಟಿ.ಎಂ.ಗೆ ಸೋಮವಾರ ಬೆಳಗಿನ ಜಾವದ ಸುಮಾರಿಗೆ ನುಗ್ಗಿ ಮಧು ಎಂಬುವರ ಎ.ಟಿ.ಎಂ.ಕಾಡರ್್ನಿಂದ 20 ಸಾವಿರಕ್ಕೂ ಹೆಚ್ಚಿನ ಹಣವನ್ನು ದೋಚಿಕೊಂಡು ಹೋಗಿದೆ.
  ಹೊಸದುರ್ಗ ತಾಲೂಕಿನ ಹೊನ್ನೆಕೆರೆಯ ಮಧು ಭಾನುವಾರ(11) ರಾತ್ರಿ 12ರ ಸುಮಾರಿಗೆ ಹೊಸದುರ್ಗ ಪಟ್ಟಣದಲ್ಲಿ  ಸಿನಿಮಾ ಮಂದಿರದಲ್ಲಿ ರಾತ್ರಿ ಎರಡನೇ ಪ್ರದರ್ಶನ ನೋಡಿಕೊಂಡು ತನ್ನ ಊರು ಹೊನ್ನೆಕೆರೆಗೆ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮಾರುತಿ ವ್ಯಾನೊಂದು ಮಧು ಬೈಕ್ನಿಲ್ಲಿಸಿ ಪಾವಗಡಕ್ಕೆ ಹೋಗುವ ದಾರಿ ಕೇಳಿದ್ದಾರೆ ಈ ಸಂದರ್ಭದಲ್ಲಿ ದಾರಿ ತೋರಿಸಲು ಬೈಕ್ನಿಲ್ಲಿಸಿದ ಮಧು ಮತ್ತು ಆತನ ಸ್ನೇಹಿತರಿಗೆ ಮಾರುತಿ ವ್ಯಾನನಲ್ಲಿದ್ದ ದರೋಡೆಕೋರರ ಗುಂಪು ಲಾಂಗ್, ಮಚ್ ತೋರಿಸಿ ಬೆದರಿಸಿ ಅವರ ಬಳಿ ಇರುವ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದೆ.
 ಈ ಸಂದರ್ಭದಲ್ಲಿ ಮಧು ಜೊತೆಇದ್ದ ಸ್ನೇಹಿತರು ದರೋಡೆಕೋರರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ, ಇದರಿಂದ ಮತ್ತೂ ರೊಚ್ಚಿಗೆದ್ದ ತಂಡ ಮಧುವನ್ನು ತನ್ನ ವ್ಯಾನಿಗೆ ಎತ್ತಾಕಿಕೊಂಡು ಅವನಿಗೆ ಹಣಕ್ಕಾಗಿ ಹಿಂಸೆ ನೀಡಿದೆ,  ಆ ಸಂದರ್ಭದಲ್ಲಿ ಮಧು ತನ್ನ ಬಳಿಇದ್ದ ಎ.ಟಿ.ಎಂ.ಕಾಡರ್್ಕೊಟ್ಟಿದ್ದಾನೆ, ಈ ಕಾಡರ್್ ತೆಗೆದುಕೊಂಡ ದರೋಡೆಕೋರರು ಚಿಕ್ಕನಾನಯಕನಹಳ್ಳಿಯ ಎ.ಟಿ.ಎಂ.ಕೇಂದ್ರಕ್ಕೆ ಬಂದು ಆತನ ಖಾತೆಯಿಂದ ಮೂರು ಬಾರಿ ಹಣ ತೆಗೆದುಕೊಂಡಿದ್ದಾರೆ. ನಂತರ ಮಧುವನ್ನು ಪಟ್ಟಣದ ಬಳಿಯ ತರಬೇನಹಳ್ಳಿಯ ಬಳಿ ಇಳಿಸಿ ದರೋಡೆಕೋರರು ಮುಂದೆ ಸಂಚರಿಸಿದ್ದಾರೆ.




ದರೋಡೆಗೊಳಗಾದ ಮಧು ತರಬೇನಹಳ್ಳಿಯಿಂದ ಆ ಸರಿ ರಾತ್ರಿಯಲ್ಲಿ ಬಸ್ ಹಿಡಿದು  ಮತ್ತೆ ಹೊಸದುರ್ಗಕ್ಕೆ ತೆರಳಿ ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಪಿ.ರವಿಪ್ರಸಾದ್ ಬಳಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊಸದುರ್ಗದ ಸಿ.ಪಿ.ಐ. ರವಿಪ್ರಸಾದ್ ಚಿ.ನಾ.ಹಳ್ಳಿಯ ಎಸ್.ಬಿ.ಎಂ.ಗೆ ಬಂದು ಎ.ಟಿ.ಎಂ.ನ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿರುವ ದರೋಡೆಕೋರರ ಛಾಯಾ ಚಿತ್ರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಇಲ್ಲಿನ ಎ.ಟಿ.ಎಂ.ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಬ್ಯಾಂಕ್ನ ಉನ್ನತಾಧಿಕಾರಗಳ ಬರುವಿಕೆಗಾಗಿ ಇಲ್ಲಿನ ಬ್ಯಾಂಕ್ನ ಅಧಿಕಾರಿಗಳು ಕಾಯುತ್ತಿದ್ದಾರೆ. ಮಧುವನ್ನು ಕರೆತಂದಿರುವ ಸಿ.ಪಿ.ಐ.ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಠಗಳು ಸಮಾಜದಲ್ಲಿ   ಸಾಮರಸ್ಯ ಮತ್ತು ಸಾತ್ವಿಕತೆಯನ್ನು ನಿಮರ್ಾಣ ಮಾಡಬೇಕು.
ಚಿಕ್ಕನಾಯಕನಹಳ್ಳಿ,ಡಿ.12 : ಪಂಚಪೀಠಗಳು ಸಮಾಜದ ಸಾಮರಸ್ಯಕ್ಕೆ ಸ್ಪೂತರ್ಿ ಹಾಗೂ ಸಾತ್ವಿಕ ಸಮಾಜದ ನಿಮರ್ಾಣ ಮಾಡುತ್ತಾ ಧರ್ಮದ ಉಳಿಸುವಿಕೆಯ ಕಾರ್ಯ ನಿರ್ವಹಿಸುತ್ತಿವೆ ಎಂದು ರಂಭಾಪುರಿ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮಿ ಹೇಳಿದರು. 
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಧಾಮರ್ಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮರಂಗವನ್ನು ಬಿಟ್ಟು ಉಳಿದೆಲ್ಲ ರಂಗಗಳು ಕಲುಷಿತಗೊಂಡಿದೆ, ಸಜ್ಜನರಿಗಿಂತ ದುರ್ಜನರು ಹೆಚ್ಚಾಗುತ್ತಿದ್ದಾರೆ. ಇವುಗಳನ್ನು ಸರಿಪಡಿಸುವ ಜವಬ್ದಾರಿ  ಮಠಾಧೀಶರ ಹಾಗೂ ಸಮಾಜದ ಚಿಂತಕರ ಮೇಲಿದೆ. ಪ್ರತಿಯೊಬ್ಬರಲ್ಲೂ ಧರ್ಮದ ವಿಚಾರದಲ್ಲಿ ಸ್ವಾಭಿಮಾನ ಹುಟ್ಟಬೇಕು ಎಂದ ಅವರು, ಧರ್ಮ ಮತ್ತು ಜಾತಿಯ ಸಂಘರ್ಷಗಳು ನಡೆಯುತ್ತಿದೆ, ರಾಷ್ಟ್ರ ಪ್ರೇಮ, ಕರ್ತವ್ಯ ನಿಷ್ಠೆ ಎಲ್ಲರಲ್ಲೂ ಬೆಳೆಯಲಿ ಎಂದರು.
 ಮರುಳಸಿದ್ದೇಶ್ವರ ಕ್ಷೇತ್ರವು ಸಮಾಜಕ್ಕೆ ಒಳ್ಳೆಯ ಧಾಮರ್ಿಕ ಕೊಡುಗೆ ನೀಡುತ್ತಿದೆ ಎಂದರು. ಕಳೆದ ಅಕ್ಟೋಬರ್ ತಿಂಗಳಿಲ್ಲಿ ಉಜೈನಿ ಹಾಗೂ ಶ್ರೀ ಶೈಲ ಪೀಠಗಳ ಜಗದ್ಗುರುಗಳ ನಿಧನದಿಂದ ತುಂಬ ನೋವಾಗಿದೆ ಎಂದು ತಿಳಿಸಿದರು.
ಉಜೈನಿ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರಸ್ವಾಮಿ ಮಾತನಾಡಿ, ಭಾರತ ದೇಶದ ಪರಂಪರೆ ಭಕ್ತಿ ಶ್ರದ್ದೆಗಳನ್ನು ಮಠಗಳಲ್ಲಿ ಕಾಣಬಹುದು, ಒಳ್ಳೆಯ ತನವನ್ನು ಬೆಳೆಸುವುದರ ಜೊತೆಗೆ ಧರ್ಮ, ಬ್ರಾತೃತ್ವ ಮತ್ತು  ಸ್ನೇಹತ್ವಗಳನ್ನು  ಆಚರಣೆಗೆ ತರುವುದು ಎಂದರು.
ಶ್ರೀ ಶೈಲ ಶ್ರೀ ಚನ್ನಸಿದ್ದರಾಮ ಪಂಡಿತರಾದ್ಯ ರಾಜದೇಶೀಕೇಂದ್ರ ಸ್ವಾಮಿ ಮಾತನಾಡಿ ಧರ್ಮ ಮನುಷ್ಯನಿಗೆ ಉತ್ತಮ ವಿಚಾರಗಳನ್ನು ತಿಳಿಸುತ್ತವೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ತಿಪಟೂರು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು  ಮುಂತಾದವರಿದ್ದರು
ಸಮಾರಂಭದಲ್ಲಿ ದಯಾನಂದಶಾಸ್ತ್ರಿ ಪ್ರಾಥರ್ಿಸಿದರೆ, ಸವಿತ ಶಿವಕುಮಾರ್ ನಿರೂಪಸಿದರು, ದಯಾಶಂಕರ್ ವಂದಿಸಿದರು.

Friday, December 9, 2011

Thursday, December 8, 2011



ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದ
ಚಿಕ್ಕನಾಯಕನಹಳ್ಳಿ,ಡಿ.08: ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಕುಪ್ಪೂರು ಮರುಳಸಿದ್ದಶ್ರೀ ಪ್ರಶಸ್ತಿ ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದಿಸಲಾಗುವುದು  ಎಂದು ಕುಪ್ಪೂರುಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ತಿಳಿಸಿದರು.
ಡಿಸಂಬರ್ 10 ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಮತ್ತು 11ರಂದು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗುವುದು,  ಜಾತ್ರೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿರವರಿಗೆ ವಿಶೇಷ ಸನ್ಮಾನಿಸಲಾಗುವುದು.
11ರ ಭಾನುವಾರದಂದು ಬೆಳಗ್ಗೆ 10.30ಕ್ಕೆ ಉಜೈನಿಯ ಶ್ರೀಮದ್ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವ ನಡೆಯುತ್ತದೆ ನಂತರ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದೆ.
ಈ ಜಾತ್ರಾಮಹೋತ್ಸವವನ್ನು ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಕ್ಷೇತ್ರವು  ದಾಸೋಹದ ಮಠ ಎಂದು ಪ್ರಖ್ಯಾತ ಹೊಂದಿದ್ದು ಜಾತ್ರಾಮಹೊತ್ಸವಕ್ಕೆ  ಸುಮಾರು 35 ರಿಂದ 40ಸಾವಿರ ಭಕ್ತರು ಆಗಮಿಸಲಿದ್ದು ಅವರಿಗೆಲ್ಲ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ.
ನಂದೀಶ್ವರರ ಉತ್ಸವ ಹಾಗೂ ಮರುಳಸಿದ್ದೇಶ್ವರ ಅಡ್ಡಪಲ್ಲಕ್ಕಿಯೊಂದಿಗೆ ಬಸವೇಶ್ವರರು ಅನ್ನದ ರಾಶಿಗೆ ಪಾದವನ್ನು ಸ್ಪರ್ಶ ಮಾಡುವಂತಹ ಕಾರ್ಯಕ್ರಮ ಇದೇ 10ರ ಶನಿವಾರ ನಡೆಯಲಿದೆ. 11ರ ಭಾನುವಾರದಂದು ಶ್ರೀ ಮಠದ ಭಕ್ತರು ಉಳಿದುಕೊಳ್ಳುವ ಸಲುವಾಗಿ  ಯಾತ್ರಿ ನಿವಾಸದ ಅಡಿಗಲ್ಲು ಸ್ಥಾಪನೆಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. 
ಈ ಸಮಾರಂಭದಲ್ಲಿ ಶ್ರೀಮದ್ ಉಜ್ಜೈನಿ ಸದ್ದರ್ಮ ಸಿಂಹಾಸನಾಧೀಶ್ವರ  ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ, ಶ್ರೀ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ,  ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶೀಕೇಂದ್ರರವರು ದಿವ್ಯ ಸಾನಿದ್ಯ ವಹಿಸಲಿದ್ದು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಮಾಡಾಳು ಕುಮಾರಾಶ್ರಮ ಮಠದ ತೋಂಟದಾರ್ಯ ಸ್ವಾಮಿ, ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ 'ಕುಪ್ಪೂರು ಮರುಳಸಿದ್ದಶ್ರೀ' ಪ್ರಶಸ್ತಿ, ತಮ್ಮಡಿಹಳ್ಳಿ ಮಠದ  ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ನೇತೃತ್ವ ವಹಿಸುವರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾತ್ರಿ ನಿವಾಸ ಶಂಕು ಸ್ಥಾಪನೆ ನೆರವೇರಿಸಲಿದ್ದು ಸಂಸದ ಜಿ.ಎಸ್.ಬಸವರಾಜು  ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠ ಡಾ.ಮಹಾಂತಲಿಂಗ ಶಿವಾಚಾರ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.

Wednesday, December 7, 2011


ಹನುಮಜಯಂತಿ ಪ್ರಯುಕ್ತ ವಿಶೇಷ ಅಲಂಕಾರ 
ಚಿಕ್ಕನಾಯಕನಹಳ್ಳಿ,ಡಿ.07  : ಹನುಮಜಯಂತಿ ಪ್ರಯುಕ್ತ  ಪಟ್ಟಣದ ಶ್ರೀ ಬಲಮುರಿ ಗಣಪತಿ, ಶ್ರೀ ಯೋಗಾಂಜನೇಯಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಇದೇ 8ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8ಕ್ಕೆ ಸ್ವಾಮಿಯವರಿಗೆ ಅಭಿಷೇಕ, ಹಾಗೂ ಮದ್ಯಾಹ್ನ 12ಕ್ಕೆ ಸ್ವಾಮಿಯವರಿಗೆ ಬೆಳ್ಳಿ ಕಿರೀಟ ಧಾರಣೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯೋಗಾಂಜನೇಯ ಸಮಿತಿ ತಿಳಿಸಿದೆ.
ಶ್ಯಾವಿಗೆಹಳ್ಳಿಯಲ್ಲಿ ಹನುಮಜಯಂತಿ :  ಕಸಾಬಾ ಹೋಬಳಿ ಶ್ಯಾವಿಗೆಹಳ್ಳಿಯಲ್ಲೂ ಸಹ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಜಿ.ತಿಮ್ಮಯ್ಯ ತಿಳಿಸಿದ್ದಾರೆ.


Tuesday, December 6, 2011

Monday, December 5, 2011


ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು
ಚಿಕ್ಕನಾಯಕನಹಳ್ಳಿ,ಡಿ.05 : 2011-12ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಇದೇ 8ರ ಗುರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಜಿ.ಪಂ.ಸದಸ್ಯರಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತೀಮ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ



ಚಿಕ್ಕನಾಯಕನಹಳ್ಳಿ,ಡಿ.05 : ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಇದೇ 8ರಿಂದ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಲೋಕೇಶ್ ತಿಳಿಸಿದ್ದಾರೆ.

ಮಡಿವಾಳ ಸಮಾಜದವರು ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ
ಚಿಕ್ಕನಾಯಕನಹಳ್ಳಿ,ಡಿ.05 : ಮಡಿವಾಳ ಜನಾಂಗದವರು ತಮ್ಮ ಉಪಜಾತಿಗಳನ್ನು ನಮೂದಿಸದೆ ಎಲ್ಲರೂ ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ ಮಡಿವಾಳ ಸಮಾಜದ ಮುಖಂಡ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರ ಸೂಚನೆಯಂತೆ ಸಮಾಜದ ಎಲ್ಲಾ ಭಾಂದವರು ಜಾತಿಗಣತಿಯ ಸಂದರ್ಭದಲ್ಲಿ ಸ್ಪಷ್ಟವಾಗಿ ಮಡಿವಾಳ ಎಂದೇ ನಮೂದಿಸುವಂತೆ ಕೋರಲಾಗಿದೆ.

Sunday, December 4, 2011


ಅಂಗವಿಕಲರು ಮುಂದೆ ಬರಲು ರಾಜಕೀಯ ಕ್ಷೇತ್ರ ಮುಖ್ಯ
ಚಿಕ್ಕನಾಯಕನಹಳ್ಳಿ,ನ.03 : ರಾಜಕೀಯ ಕ್ಷೇತ್ರದಲ್ಲಿ  ಅಂಗವಿಕಲರಿಗೆ ಸ್ಥಾನ ನೀಡಿದರೆ  ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಬಂದು ಅಂಗವಿಕಲರು ಅಭಿವೃದ್ದಿ ಹೊಂದುತ್ತಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಸಿ.ಗಂಗರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ವಿಶ್ವ ವಿಕಲ ಚೇತನರ(ಅಂಗವಿಕಲರ) ದಿನಾಚಾರಣೆ ಹಾಗೂ ತಾಲ್ಲೂಕು ವಿಕಲಚೇತನರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಕಲಚೇತನರ ಜೀವನ ಬಹಳ ದುಸ್ಥಿತಿಯಲ್ಲಿದೆ, ಅಂಗವಿಕಲತೆ ಎನ್ನುವುದು ಶಾಪವಲ್ಲ, ಅದೊಂದು ವರ ವಿಕಲಾಂಗರಿಗೆ ಯಾವುದೇ ಅನುಕಂಪ ಬೇಡ ಅವರಿಗೆ ಅವಕಾಶ ಬೇಕಾಗಿದೆ  ಮುಖ್ಯವಾಗಿ ಎಂದ ಅವರು ಅವರಿಗೆ ನೀಡುತ್ತಿರುವ ಮಾಸಾಶನವನ್ನು ಸಾವಿರ ರೂಗಳಿಗೆ ಹೆಚ್ಚಿಸಬೇಕು ಮತ್ತು ಅವರಿಗಾಗಿ ಜನಸ್ಪಂದನ ಸಭೆಗಳನ್ನು ಮಾಡಬೇಕು ಎಂದ ಅವರು ದಲಿತ ಸಮುದಾಯಗಳ ಸಮಸ್ಯೆಗಳಿಗಿಂತ  ಅಂಗವಿಕಲರ ಸಮಸ್ಯೆಗಳು ವಿಭಿನ್ನವಾಗಿದೆ, ದಲಿತರು ಅನುಭವಿಸಿರುವಂತಹ ಸಾಮಾಜಿಕ ನೋವುಗಳಿಗಿಂತ ಅಂಗವಿಕಲರ ಆಥರ್ಿಕ ಹಿಂಸೆ ದೊಡ್ಡದಾಗಿದೆ ಇದು ಬದಲಾಗಬೇಕಾದರೆ ಅಂಗವಿಕಲರ ಸಂಘಟನೆ ಬಲವಾಗಬೇಕಿದೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾನು ಯಾವುದೇ ಸಂದರ್ಭದಲ್ಲಿದ್ದರೂ ಅಂಗವಿಕಲರಿಗೆ ಮೊದಲ ಆಧ್ಯತೆ ನಂತರ ವೃದ್ದರಿಗೆ, ಆನಂತರ ಇತರರಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಅಂಗವಿಕಲ ವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಪಂಚಾಯ್ತಿಗಳಿಂದ ಸಹಾಯ ನೀಡಲಿದ್ದು ಅಂಗವಿಕಲರ ಜೀವನ ನಿರ್ವಹಣೆಗಾಗಿ  ವಿಶೇಷ ಮಾನ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಅಂಗವಿಕಲ ಹೋರಾಟ ಸಮಿತಿಯ ಬೆನಕನಕಟ್ಟೆ ರಮೇಶ್ ಮಾತನಾಡಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿಗಳಲ್ಲಿ ಅಂಗವಿಕಲರನ್ನು ಸದಸ್ಯರಾಗಿ ನೇಮಿಸಬೇಕು, ಅಂಗವಿಕಲರಿಗೆ ದೃಡೀಕರಣ ಪತ್ರ ಕಡ್ಡಾಯವಾಗಿ ತೆಗೆದುಹಾಕಬೇಕು,  ತಾಲ್ಲೂಕಿನಲ್ಲಿ ಅಂಗವಿಕಲರ ಭವನ ನಿಮರ್ಾಣ ಮಾಡಬೇಕು, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಗಳ ಕಂಪ್ಯೂಟರ್ ಕೇಂದ್ರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೊದಲ ಆಧ್ಯತೆ ನೀಡಬೇಕು, ಅಂಗವಿಕಲರ ಅನುದಾನ ಶೇಕಡ 3ರಷ್ಟು ಸಮರ್ಪಕವಾಗಿ ಖಚರ್ು ಮಾಡಬೇಕು, ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡಬೇಕು,  ಎನ್ನುವ ಇನ್ನಿತರ ಅಂಗವಿಕಲರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಿಕಲಚೇತನ ಚಂದ್ರಯ್ಯ ಮಾತನಾಡಿ ವಿಕಲಚೇತನರು ಸಕರ್ಾರದ ಹಣ ಬರುವುದನ್ನೇ ಕಾಯಬಾರದು ನಮ್ಮ  ಜೀವನವನ್ನು ಸುಧಾರಿಸುವಂತಹ ಕಾರ್ಯದಿಂದ ಜೀವನ ಸಾಗಿಸಬೇಕು ಹಾಗೂ ಇರುವವರು ಇಲ್ಲದವರಿಗೆ ಆಥರ್ಿಕವಾಗಿ ಸಹಕರಿಸಬೇಕು ಎಂದ ಅವರು ಅಂಗವಿಕಲರ ಕಲ್ಯಾಣ ನಿಧಿ ಸ್ಥಾಪನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್ ಇ.ಓ ಎನ್.ಎಂ.ದಯಾನಂದ್, ಸಿಡಿಪಿಓ ಅನೀಸ್ಖೈಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Thursday, December 1, 2011


: ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಡಿ.01 : ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಹಾಗೂ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಕಾಯಕಯೋಗಿಗಳಿಗೆ ಕುಪ್ಪೂರು ಶ್ರೀರಕ್ಷೆ ಸುಕ್ಷೇತ್ರ ಕಾರ್ಯಕ್ರಮವನ್ನು ಇದೇ 10ರ ಶನಿವಾರ ಮತ್ತು 11ರ ಭಾನುವಾರ ನಡೆಯಲಿದೆ.
ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮವಿದ್ದು 10ರ ಸಂಜೆ 4.30ಕ್ಕೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಹಮ್ಮಿಕೊಂಡಿದ್ದು ಸಿದ್ದಸಂಸ್ಥಾನ ಮಠದ ಜಗದ್ಗುರು ಶಿವಲಿಂಗಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯಸ್ವಾಮಿ, ದೊಡ್ಡಗುಣಿಮಠದ ರೇವಣಸಿದ್ದೇಶ್ವರಶಿವಾಚಾರ್ಯಸ್ವಾಮಿ, ಶಿವಗಂಗೆ ಕ್ಷೇತ್ರದ ಮಲಯಶಾಂತಮುನಿ ಶಿವಾಚಾರ್ಯಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಆಯುರಾಶ್ರಮದ ಡಾ.ಸಂತೋಷ ಗುರೂಜಿ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಲೋಕೇಶ್, ಪ್ರಭಾಕರ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಾಯಕಯೋಗಿಗಳಾದ  ಅರಳೆ ಗುರುಸಿದ್ದಪ್ಪ, ಬಿ.ಎಸ್.ನಾಗರಾಜು, ವೈ.ಜಗದೀಶ್ದರೇದಾರ, ಎಸ್.ಜಿ.ಜಗದೀಶ್, ಬಿ.ನಿರಂಜನ್ ಇವರಿಗೆ ಕುಪ್ಪೂರು ಶ್ರೀರಕ್ಷೆ ನೀಡಲಾಗುವುದು.
11ರಂದು ಬೆಳಗ್ಗೆ 10.30ಕ್ಕೆ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದ್ದು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಸಮ್ಮುಖದಲ್ಲಿ ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠದ ಡಾ.ಮಹಾಂತಲಿಂಗಶಿವಾಚಾರ್ಯ ಗುರೂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿಗೆ ವಿಶೇಷ ಸನ್ಮಾನ ನಡೆಯಲಿದ್ದು ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ ಕುಪ್ಪೂರು ಮರಳಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು.



ವರ್ತಕರ ಸಂಘದಿಂದ ಪ್ರತಿಭಟನೆ  
ಚಿಕ್ಕನಾಯಕನಹಳ್ಳಿ,ಡಿ.01 : ದೇಶದ ಚಿಲ್ಲರೆ ವ್ಯಾಪರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸಕರ್ಾರ ಅನುಮತಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಪಟ್ಟಣದ ದಿನಸಿ ವರ್ತಕರ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಫ್ಯಾನ್ಸಿ ವರ್ತಕರ ಸಂಘ, ಎಲೆಕ್ಟ್ರಿಕಲ್ ವರ್ತಕರ ಸಂಘ, ಮೊಬೈಲ್ ವರ್ತಕರ ಸಂಘ ಹಾಗೂ ಎಲ್ಲಾ ವರ್ತಕರ ಸಂಘದವರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಈಶ್ವರ್ಭಾಗವತ್, ಚಂದ್ರಶೇಖರ್ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.