Thursday, July 8, 2010

ಹೊನ್ನಮ್ಮಳ ಹತ್ಯೆ ಶಾಸಕರ ಬೆಂಬಲಿಗರಿಂದಲೇ: ಬಿ.ಜೆ.ಪಿ.ಕಾರ್ಯದಶರ್ಿ ಸುರೇಶ್ ಉವಾಚ
ಚಿಕ್ಕನಾಯಕನಹಳ್ಳಿ,ಜು.08: ಹೊನ್ನಮ್ಮನ ಹತ್ಯೆಯನ್ನು ಜೆ.ಡಿ.ಎಸ್ನ ಗುಂಪು ಬರ್ಭರವಾಗಿ ನಡೆಸಿದ್ದು ಅದರ ಮುಂದಾಳತ್ವವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಮತ್ತು ಅವಳ ಗಂಡ ವಹಿಸಿದ್ದು ಆರೋಪಿಗಳಿಗೆ ಶಾಸಕರ ಬೆಂಬಲ ಈ ಕೃತ್ಯವನ್ನೆಸಗಲು ಪ್ರೇರಣೆ ನೀಡಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯಶರ್ಿ ಸುರೇಶ್ಹಳೇಮನೆ ಆರೋಪಿಸಿದ್ದಾರೆ.
ಈ ಸಂಬಂಧ ಈಗಾಗಲೇ ಅಪರಾಧಿಗಳನ್ನು ಬಂದಿಸಿದ್ದು ಇವರೆಲ್ಲಾ ಬಹುತೇಕ ಜೆ.ಡಿ.ಎಸ್ ಶಾಸಕರ ಬೆಂಬಲಿತ ಪುಂಡರ ಗುಂಪೇ ಆಗಿದೆ, ಈ ಕೃತ್ಯದನಂತರ ಶಾಸಕರು ಹತ್ಯೆಗೀಡಾದ ಹೊನ್ನಮ್ಮನ ಶವದ ಹತ್ತಿರವೂ ಸುಳಿಯದ ಇವರು, ಇಡೀ ಎರಡು ದಿನ ಪ್ರತಿಭಟನೆಯನ್ನು ದಲಿತ ಸಂಘಟನೆಗಳು ನಡೆಸಿದರೂ ಬರದೆ ಜೆ.ಡಿ.ಎಸ್.ನ ಕೈವಾಡವನ್ನು ಸಾಬೀತು ಪಡಿಸಿದ್ದಾರೆ.
ಆದರೆ ಈ ಎಲ್ಲಾ ಪ್ರಕರಣವನ್ನು ಮೀರಿದಂತೆ ಸಕರ್ಾರದಿಂದ ಹೊನ್ನಮ್ಮನ ಕುಟುಂಬಕ್ಕೆ ನೆರವಾಗಲು ಬಂದ ಒಂದು ಲಕ್ಷ ರೂ ಚೆಕ್ಕನ್ನು ಮಾತ್ರ ಹೊನ್ನಮ್ಮನ ಕುಟುಂಬಕ್ಕೆ ವಿತರಿಸಿದ್ದಾರೆ. ಒಂದು ಕೈಯಲ್ಲಿ ರಕ್ತ ಸುರಿಯುವ ಮಚ್ಚನ್ನು ಹಿಡಿದು ಮತ್ತೊಂದು ಕೈಯಲ್ಲಿ ಬಿ.ಜೆ.ಪಿ ಕಾರ್ಯಕತರ್ೆಯನ್ನು ತನ್ನ ಬೆಂಬಲಿಗರಿಂದ ಕೊಲ್ಲಿಸಿ ಮತ್ತು ಜೆ.ಡಿ.ಎಸ್ ಶಾಸಕರು ತಮ್ಮ ಅಧಿಕಾರದ ಅಮಲಿನಲ್ಲಿ ಹುಳಿಯಾರು ಪೋಲಿಸ್ ಠಾಣೆಗೆ ನುಗ್ಗಿದರೆ, ಅವರ ತಮ್ಮ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಪಂಗಡದ ಮಹಿಳಾ ಪೋಲಿಸ್ ಪೇದೆಯ ಮೇಲೆ ನುಗ್ಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇನ್ನು ಸಾಸಲು ಗ್ರಾ.ಪಂ ಚುನಾವಣೆಯಲ್ಲಿ ಮತ ಕೇಳುವ ನೆಪದಲ್ಲಿ ಹಿಂದುಳಿದ ವರ್ಗದ ಮಹಿಳೆಯ ಮನೆಗೆ ನುಗ್ಗಿದ ಜೆ.ಡಿ.ಎಸ್ ಗೂಂಡಾಗಳ ಗುಂಪು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು ಈ ಎಲ್ಲವನ್ನು ತನ್ನ ಅಧಿಕಾರದ ಬಲದಿಂದ ಮುಚ್ಚುವ ಪ್ರಯತ್ನವನ್ನು ಶಾಸಕರು ನಿರಂತರವಾಗಿ ಮಾಡುತ್ತಿದ್ದಾರೆ ಈಗ ದಲಿತೆ ಬಿ.ಜೆ.ಪಿ ಕಾರ್ಯಕತರ್ೆ ಹೊನ್ನಮ್ಮನ ಸರಿದಿ.
ಈ ಕೂಡಲೇ ಶಾಸಕರು ಮತ್ತು ಅವರ ಬೆಂಬಲಿಗರು ತಮ್ಮ ತಪ್ಪನ್ನು ಅರಿತು ತಿದ್ದುಕೊಂಡು ಮಾಡಬೇಕಾದ ಅಭಿವೃದ್ದಿ ಕಾರ್ಯಗಳನ್ನು ಮಾಡಿದರೆ ಸರಿ, ಇಲ್ಲದಿದ್ದರೆ ಮತದಾರನ ಮುಂದೆ ಈ ಎಲ್ಲವನ್ನೂ ಬಿಚಡಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ.

ಹೊನ್ನಮ್ಮನ ಹತ್ಯಾಕಾಂಡ: ಜೆ.ಡಿ.ಎಸ್ ಮೇಲೆ ಕೂಬೆ ಕೂರಿಸಲು ಹವಣಿಸುವ ಬಿ.ಜೆ.ಪಿ.ಕಾರ್ಯದಶರ್ಿ ಹೇಳಿಕೆ ಬಾಲಿಶ
ಚಿಕ್ಕನಾಯಕನಹಳ್ಳಿ,ಜು.08: ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯಾ ಪ್ರಕರಣ ಘಟನೆಗೆ ಶಾಸಕರ ಕೈವಾಡವಿದೆ ಎಂದು ಆರೋಪಿಸಿರುವ ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ಹಳೇಮನೆಯವರಿಗೆ ಅರಿವಿನ ಕೊರತೆ ಇರುವುದರಿಂದ ಪಕ್ಷ ರಾಜಕಾರಣದ ಹೇಳಿಕೆ ನೀಡಿ ಅವರ ಬಾಲಿಶತನವನ್ನು ಪ್ರದಶರ್ಿಸಿದ್ದಾರೆ ಎಂದು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್ ಆರೋಪಿಸಿದ್ದಾರೆ.
ಶಾಸಕರು ಹತ್ಯಾ ಪ್ರಕರಣ ನಡೆದ ದಿನದಂದು ಕಾರ್ಯ ನಿಮಿತ್ತ ಕೇಂದ್ರ ಸ್ಥಾನದಲ್ಲಿ ಇರಲಿಲ್ಲ, ಅವರಿಗೆ ಸುದ್ದಿ ತಿಳಿದ ನಂತರ ತಾಲೂಕಿಗೆ ಆಗಮಿಸಿ ಹೊನ್ನಮ್ಮನ ಮಗನಾದ ಮಂಜುನಾಥನನ್ನು ಖುದ್ದು ಭೇಟಿ ಮಾಡಿ ಸಾಂತ್ವಾನ ಹೇಳಿ ಸಕರ್ಾರದ ವತಿಯಿಂದ ನೀಡಿದ ಪರಿಹಾರ ಧನ ಸ್ಥಳದಲ್ಲಿಯೇ ನೀಡಿದ್ದಾರೆ. ಈ ಕೃತ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರಲ್ಲದೆ, ಮರುದಿನ ಬೆಳಿಗ್ಗೆ ಸಿ.ಪಿ.ಐ ರವರ ಜೊತೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ಜನಕ್ಕೆ ಸಾಂತ್ವಾನ ಹೇಳಿ ಮುಂದೆ ಈ ರೀತಿ ಯಾವುದೇ ಹಿಂಸಾಚಾರ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲು ಪೋಲಿಸ್ ಅಧಿಕಾರಿಗೆ ಸೂಚಿಸಿದ್ದಾರಲ್ಲದೆ, ಜಿಲ್ಲಾ ಮಂತ್ರಿ ಸುರೇಶ್ಕುಮಾರ್ ಜೊತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಡಾ.ಸಿ.ಸೊಮಶೇಖರ್ ಜೊತೆಯಲ್ಲಿ ಪ್ರಕರಣದ ಬಗ್ಗೆ ಚಚರ್ಿಸಿ ಮೃತ ಹೊನ್ನಮನ ಮಗನಾದ ಮಂಜುನಾಥನಿಗೆ ಸಕರ್ಾರದ ವತಿಯಿಂದ ಅವನ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಕೊಡಿಸಲು ಪ್ರಯತ್ನಿಸಿತ್ತಿದ್ದಾರೆ. ಸಕರ್ಾರ ಹೊನ್ನಮ್ಮನ ಕುಟುಂಬಕ್ಕೆ ಒಂದು ಲಕ್ಷ ಹಣ ನೀಡಿದ್ದು, ಈ ಹಣ ಸಾಕಾಗುವುದಿಲ್ಲವೆಂದು, ಕನಿಷ್ಟ ಪಕ್ಷ 10ಲಕ್ಷ ರೂ.ಗಳನ್ನು ಪರಿಹಾರವಾಗಿ ಕೊಡಬೇಕೆಂದು ಒತ್ತಾಯಿಸಿದ್ದಾರೆ ಹಾಗೂ ಅವರ ಕುಟುಂಬದ ಸಾಲವನ್ನು ಮನ್ನಾ ಮಾಡಬೇಕೆಂದು ಸಕರ್ಾರವನ್ನು ಒತ್ತಾಯಿಸಿದ್ದಾರೆ ಹೊರತು, ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಸಕರು ಯಾರಿಗೂ ಪ್ರಚೋದನೆ ನೀಡುವುದಾಗಲಿ, ಬೆಂಬಲ ನೀಡುವುದಾಗಲಿ ಮಾಡಿಲ್ಲ ಇವೆಲ್ಲಾ ಹೊನ್ನಮ್ಮನ ಪರವಾಗಿ ಈ ಕ್ಷೇತ್ರದ ಶಾಸಕರಾಗಿ ಮಾಡಿರುವ ಕಾರ್ಯವೇ ಎಂದಿರುವ ಎಂ.ಬಿ.ನಾಗರಾಜು, ಈ ಪ್ರಕರಣದಲ್ಲಿ ಶಾಸಕರ ಕೈವಾಡವಿದೆ ಎನ್ನವುದು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ.
ನಮ್ಮ ನಾಯಕ ಸಿ.ಬಿ.ಸುರೇಶ್ಬಾಬುರವರಿಗೆ ಶಾಸಕ ಸ್ಥಾನದ ಜವಾಬ್ದಾರಿಯ ಅರಿವಿದ್ದು ಸುರೇಶ್ ಹಳೇಮನೆಯವರಿಂದ ಯಾವುದೇ ಪಾಠ ಕಲಿಯುವ ಅವಶ್ಯಕತೆಯಿಲ್ಲ, ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಹೇಳಿಕೆಗಳನ್ನು ಮತ್ತು ಇಂತಹ ಗಂಭೀರ ಪ್ರಕರಣದಲ್ಲಿ ಹೇಳಿಕೆ ನೀಡುವಾಗ ತಮ್ಮ ಜವಾಬ್ದಾರಿ ಅರಿತು ವಸ್ತುನಿಷ್ಠವಾಗಿ ಹೇಳಿಕೆ ನೀಡಬೇಕೆಂಬ ಸಾಮಾನ್ಯ ಜ್ಞಾನವನ್ನು ಸುರೇಶ್ ಹಳೇಮನೆ ರೂಢಿಸಿಕೊಳ್ಳಲಿ ಎಂದು ಎಂ.ಬಿ.ಎನ್. ಹೇಳಿಕೆ ನೀಡಿದ್ದಾರೆ.
ಚಿ.ನಾ.ಹಳ್ಳಿ ಇನ್ನರ್ ವೀಲ್ ಕ್ಲಬ್ ಮಾದರಿಯಾಗಿದೆ: ಜಿಲ್ಲಾ ಚೇರ್ಮನ್
ಚಿಕ್ಕನಾಯಕನಹಳ್ಳಿ,ಜು.08: ಮಹಿಳೆಯರ ಆಥರ್ಿಕತೆ ಮತ್ತು ಅವರ ಅಭಿವೃದ್ದಿಯ ಏಳ್ಗೆಗಾಗಿ ನಮ್ಮ ಕ್ಲಬ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಕೆಲಸವನ್ನು ನಿರ್ವಹಿಸುತ್ತಿರುವ ಇನ್ನರ್ವೀಲ್ ಕ್ಲಬ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಜಿಲ್ಲಾ ಚೇರ್ಮನ್ ರೇಣುಅಯ್ಯರ್ ಹೇಳಿದ್ದಾರೆ.
ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ 2010-11ನೇ ವರ್ಷದ ಇನ್ನರ್ ವೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ಇನ್ನರ್ವೀಲ್ ಕ್ಲಬ್ ವಿದ್ಯಾಥರ್ಿ ವೇತನ, ಅಂಗವಿಕಲರಿಗೆ ಸಲಕರಣೆ ವಿತರಣೆ, ಸ್ತ್ರೀ ರೋಗಗಳ ತಪಾಸಣಾ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರಲ್ಲದೆ, ಸ್ತ್ರೀಯರಿಗೆ ಕ್ಲಬ್ ಆಥರ್ಿಕವಾಗಿ ಸಹಾಯ ಮಾಡುತ್ತಿದ್ದು ಎಂದರಲ್ಲದೆ, ಸ್ತ್ರೀಯರು ರಾಜಕೀಯವಾಗಿ, ಮತ್ತು ಕ್ರೀಡೆಗಳಂತಹ ಸ್ಫಧರ್ೆಗಳಲ್ಲಿ ತಾವು ಭಾಗವಹಿಸುವುದರ ಜೊತೆಗೆ ತಮ್ಮ ಮಕ್ಕಳನ್ನು ಸ್ಪಧರ್ಿಸುವಂತೆ ಪ್ರೋತ್ಸಾಹ ನೀಡಿ ಅವರನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ಪರಿವತರ್ಿಸಬೇಕು ಎಂದರು.
ಜಿಲ್ಲಾ 319ರ ಕಾರ್ಯದಶರ್ಿ ಆಶಾ ಶೈಲೇಂದ್ರ ಮಾತನಾಡಿ, ಇಲ್ಲಿನ ಇನ್ನರ್ವೀಲ್ ಕ್ಲಬ್ನ ಸಹೋದರಿಯರು ಪ್ರತಿಯೊಂದು ಸಮಾರಂಭದಲ್ಲೂ ತನ್ನ ಸಕ್ರೀಯ ಸದಸ್ಯರೊಂದಿಗೆ ಒಟ್ಟುಗೂಡಿ ರಾಜ್ಯ ಮಟ್ಟದ ಸಾಂಸ್ಕೃತಿಕತೆಸ್ಪಧರ್ೆಗಳಲ್ಲಿ ಜೊತೆಗೂಡಿ ಸ್ಪಧರ್ೆಗಳಲ್ಲಿ ಬಹುಮಾನ ತರುತ್ತಿರುವುದು ನಮ್ಮ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ ಎಂದ ಅವರು, ಎಲ್ಲಾ ಮಹಿಳಾ ಕ್ಲಬ್ಗಳೂ ಈ ಒಗ್ಗಟ್ಟನ್ನೇ ಅನುಸರಿಸಬೇಕು ಎಂದರು.
ಇನ್ನರ್ವೀಲ್ಕ್ಲಬ್ ಅಧ್ಯಕ್ಷೆ ನಾಗರತ್ನರಾವ್ ಮಾತನಾಡಿ, ಕ್ಲಬ್ನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಏಳ್ಗೆಗಾಗಿ ನಮ್ಮೇಲ್ಲಾ ಕ್ಲಬ್ನ ಸಹೋದರಿಯರೊಂದಿಗೆ ಶ್ರಮಿಸುತ್ತೇನೆ ಎಂದರು.
ಸಮಾರಂಭದಲ್ಲಿ ಜಿಲ್ಲಾ 319ರ ಇ.ಎಸ್.ಒ ಮಾಲಿನಿರಾವ್ , ಇನ್ನರ್ವೀಲ್ ಕ್ಲಬ್ ಕಾರ್ಯದಶರ್ಿ ತೇಜಾವತಿ ಬಾಬು, ಸದಸ್ಯರಾದ ಚಂದ್ರಿಕಾಮೂತರ್ಿ, ಶಕುಂತಲಾ ಜಯದೇವ್, ಪುಷ್ಪಶಿವಣ್ಣ, ಮತ್ತು ರೋಟರಿ ಕ್ಲಬ್ನ ಅಧ್ಯಕ್ಷ ಶ್ರೀಕಂಠಯ್ಯ, ಅಶ್ವತ್ಥ್ನಾರಾಯಣ್ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ವಿದ್ಯಾಥರ್ಿವೇತನಕ್ಕೆ ಶೀಘ್ರ ಅಜರ್ಿ ಸಲ್ಲಿಸಿ: ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಜು.08: ತಾಲೂಕಿನ ಎಲ್ಲಾ ಶಾಲೆಯ ಒಂದರಿಂದ ಹತ್ತನೇ ತರಗತಿವರಗೆ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರಾತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ ತಿಳಿಸಿದ್ದಾರೆ.
ವಿದ್ಯಾಥರ್ಿಗಳು ಶಾಲಾ ಮುಖ್ಯಸ್ಥರ ದೃಡೀಕರಣದೊಂದಿಗೆ ಜುಲೈ 7ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಸಲ್ಲಿಸುವಂತೆ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದ್ದು ಪೋಷಕರು ವ್ಯಯಕ್ತಿಕ ಗಮನ ಹರಿಸಿ ವಿದ್ಯಾಥರ್ಿ ವೇತನದ ಅಜರ್ಿಗಳನ್ನು ತಿಳಿಸುವಂತೆ ಕೋರಿದ್ದಾರೆ.