Monday, December 22, 2014

ಜಿಲ್ಲೆಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ
ಚಿಕ್ಕನಾಯಕನಹಳ್ಳಿ,ಡಿ.22 :  ಜಿಲ್ಲೆಯ ಮೂರು ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕುಗಳಿಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ ರೂಪಾಯಿ ಬಿ  
ಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
    ಪಟ್ಟಣದ ತಾಲ್ಲೂಕು ಕಛೇರಿಯ ಸಭಾಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ 157.88 ಕೋಟಿ ರೂಪಾಯಿಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಶೇಕಡ 60 ರಷ್ಟು ಅಂದರೆ 95.77ಲಕ್ಷ ರೂಗಳು ಬರಲಿದೆ. ತಿಪಟೂರು ಹಾಗೂ ಗುಬ್ಬಿ ತಾಲ್ಲೂಕುಗಳಿಗೆ ತಲಾ ಶೇಕಡ 20 ರಷ್ಷು ಹಣ ಬಿಡುಗಡೆಯಾಗಿದೆ ಎಂದರು.
ಅಧಿಕಾರಿಗಳು ತಾಲ್ಲೂಕಿನ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುವಂತೆ  ಅಧಿಕಾರಿಗೆ ಸಲಹೆ ನೀಡಿದರಲ್ಲದೆ  ಸಮಯಕ್ಕೆ ಸರಿಯಾಗಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾದ ವರದಿ ನೀಡಿದರೆ ಪ್ರತಿ ವರ್ಷ 400 ರಿಂದ 500 ಕೋಟಿ ರೂ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಗೆ  5 ಕೋಟಿ 74 ಲಕ್ಷ ಬಿಡುಗಡೆಯಾಗಿದ್ದು ಈ ಹಣದಲ್ಲಿ ಹೆಚ್ಚುವರಿ ಶಾಲಾ ಕೊಟ್ಟಡಿ ನಿಮರ್ಾಣಕ್ಕೆ 3ಕೋಟಿ 80 ಲಕ್ಷ ರೂಪಾಯಿ, ಶೌಚಾಲಯ ನಿಮರ್ಾಣಕ್ಕೆ 56.22 ಲಕ್ಷ.ರೂ,  ಶಾಲೆಗಳ ಸುತ್ತ ಮುತ್ತ ಕಾಂಪೌಂಡ್ ನಿಮರ್ಾಣಕ್ಕೆ 78.5.ರೂ ಲಕ್ಷ ಶಾಲಾ ಮಕ್ಕಳ ಶುದ್ದ ಕುಡಿಯುವ ನೀರಿನ ಆರ್.ಓ.ಯೋಜನೆಗೆ  84.ಲಕ್ಷ.ರೂ ಹಾಗೂ ದೊಡ್ಡ ಕೊಠಡಿಗಳ ರಿಪೇರಿಗೆ 58.5 ಲಕ್ಷ.ರೂ ಬಿಡುಗಡೆಯಾಗಿದೆ. 
    ಕೃಷಿ ಇಲಾಖೆಯ ವಿವಿಧ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ 3 ಕೋಟಿ 54 ಲಕ್ಷ ಬಿಡುಗಡೆಯಾಗಿದ್ದು 9 ಗ್ರಾಮ ಪಂಚಾಯ್ತಿಗಳ 17 ಹಳ್ಳಿಗಳ 1565 ಹೆಕ್ಟರ್ ಪ್ರದೇಶಗಳಲ್ಲಿ ಕೃಷಿ ಜಲನಯನ ಅಭಿವೃದ್ದಿ ಕಾಮಗರಿಗಳಾದ ಕೃಷಿ ಜಮೀನುಗಳಲ್ಲಿ ಸ್ಥಳದಲ್ಲೇ ಮಣ್ಣು, ನೀರು ಸಂರಕ್ಷಣೆ, ಕೃಷಿ ಹೊಂಡ, ತಡೆಹಣೆಗಳು, ಹಳೇ ಕಟ್ಟಡಗಳ ದುರಸ್ತಿ, ನಾಲ ಬದು ಕಾಮಗರಿಗಳು ಕೈಗೆತ್ತಿಕೋಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಸಣ್ಣಹೊನ್ನೇಗೌಡ ತಿಳಿಸಿದರು.
    ಪಶು ಸಂಗೋಪನಾ ಇಲಾಖೆಗೆ 81 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದ್ದು ಪಶು ಆರೋಗ್ಯ ಶಿಬಿರಗಳಿಗೆ ಕುರಿ, ಮೇಕೆ, ಜಂತುಹುಳ ನಾಶ ಔಷದಿಗೆ, ಜಾನುವಾರಗಳಿಗೆ ಚಿಕಿತ್ಸೆ ಮಾಡುವ ಪಿಲ್ಟರ್ ಕಟ್ಟಡಗಳ ದುರಸ್ಥಿ ಹಾಗೂ ಕಾಂಪೌಂಡ್ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಶಶಿಕುಮಾರ್ ತಿಳಿಸಿದರು. 
    ಸಾರಿಗೆ ಮತ್ತು ಸಂಪರ್ಕ ರಸ್ತೆ ನಿಮರ್ಾಣಕ್ಕೆ 60 ಕೋಟಿ ಹಣ ಬಿಡುಗಡೆಯಾಗಿದ್ದು ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿಗಳ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದು ಜೋಗಿಹಳ್ಳಿಯಿಂದ ಹೋನ್ನೆಬಾಗಿ, ಬುಳ್ಳೆನಹಳ್ಳಿ ಮೂಲಕ ಗುಡ್ಡದ ಪಾಳ್ಯದ ಗ್ರಾಮದವರೆಗೆ 12 ಕಿ.ಮಿವರೆಗೆ ಕಾಕ್ರೆಟ್ ರಸ್ತೆ,  ಗೋಡೆಕೆರೆ, ಬಾಣದೇವರಹಟ್ಟಿ ಮೂಲಕ ಸೋಂಡೆನಹಳ್ಳಿಗೊಲ್ಲರಹಟ್ಟಿ, ಹಾಗೂ ಸೊಂಡೆನಹಳ್ಳಿಯವರಿಗೆ ಗೋಡೆಕೆರೆ, ರಂಗನಾಥಪುರ, ನಡುವನಹಳ್ಳಿ, ಬಗ್ಗನಹಳ್ಳಿಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಜೋಗಿಹಳ್ಳಿಯಿಂದ ಗೊಲ್ಲರಹಳ್ಳಿ ಮುಖಾಂತರ ಗಣಿಗಾರಿಕೆ ನಡೆಯುವ ಅಬ್ಬಿಗೆ ಗುಡ್ಡ ರಸ್ತೆ ನಿಮರ್ಾಣ. ಹಾಗೂ                  ತೀರ್ಥಪುರ, ದೊಡ್ಡರಾಂಪುರ, ಯರೇಕಟ್ಟೆ ಮೂಲಕ ತೀರ್ಥರಾಮೇಶ್ವರ ದೇವಾಲಯದವರೆಗೆ ಕಾಕ್ರಿಂಟ್ ರಸ್ತೆ, ಬರಸಿಡ್ಲಹಳ್ಳಿಯಿಂದ ಚಿಕ್ಕರಾಂಪುರದ ಮೂಲಕ ಎಲ್.ಎಸ್.ಕೋರೆಯವರೆಗೆ ಕಾಂಕ್ರೇಟ್ ರಸ್ತೆ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರು.. 
    ಪರಿಸರ ಹಾಗೂ ಅರಣ್ಯ ಇಲಾಖೆಗೆ 18 ಕೋಟಿ ಬಿಡುಗಡೆಯಾಗಿದ್ದು ಜಾಣೇಹಾರ್,  ಕಾಮನಹಳ್ಳಿ, ತೀರ್ಥರಾಮೇಶ್ವರ ದೇವಾಲಯ ಭಾಗಗಳ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಸಸಿ ನೆಡುವ ಕಾರ್ಯಕ್ರಮ ಜಾಣೇಹಾರ್ ಬಳಿ ಮಿನಿ ಮೃಗಾಲಯ ಹಾಗೂ ಜಾಣೇಹಾರ್ ಬಳಿ ಇರುವ ಬೆಟ್ಟದ ಮೇಲೆ ಪ್ರವಾಸಿ ಮಂದಿರ ನಿಮರ್ಿಸಲು ರೂಪುರೇಶೆ ರಚಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು. 
ಜಾಣೇಹಾರ್ ಬೆಟ್ಟದ ಮೇಲೆ ಉತ್ತಮ ಪರಿಸರ ಇರುವುದರಿಂದ ಆ ಸ್ಥಳದಲ್ಲಿ ಪ್ರವಾಸಿ ಮಂದಿರ ನಿಮರ್ಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣನಾಯ್ಕ್ ಸೂಚಿಸದ ಶಾಸಕರು ಗಣಿ ಭಾಗ ಗುಡ್ಡ ಪ್ರದೇಶವಾಗಿರುವುದರಿಂದ ಗುಡ್ಡ ಭಾಗಗಳ ಮಧ್ಯೆ ಅಣೆಕಟ್ಟು (ಡ್ಯಾಂ) ನಿಮರ್ಿಸಿದರೆ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿದರೆ ಎರಡು ಹೋಬಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ ಎಂದರು .
ಹಾಗೂ ಹೊಸಹಳ್ಳಿಯಿಂದ ಗೊಲ್ಲರಹಳ್ಳಿ, ದಿಬ್ಬದಹಳ್ಳಿ, ಭಾವನಹಳ್ಳಿ ಮುಖಾಂತರ ಹೊನ್ನೆಬಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗೆ ಸೂಚಿಸಿದ ಅವರು ತಾಲ್ಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆ, ಹೊನ್ನೆಬಾಗಿಯಲ್ಲಿ ನೂತನ ಸಕರ್ಾರಿ ಆಸ್ಪತ್ರೆ  ಹಾಗೂ ಪ್ರಯೋಗ ಶಾಲೆ ಮಾಡಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ರವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಲೇಜು ಹೆಣ್ಣು ಮಕ್ಕಳ ಹಾಸ್ಟಲ್, ನಿವೇಶನ, ಕಟ್ಟಡ ನಿಮರ್ಾಣಕ್ಕೆ ಹಾಗೂ ದುರಸ್ತಿ, ಮೂಲಭೂತ ಸೌಕರ್ಯಗಳಿಗೆ ಮತ್ತು ಕಾತ್ರಿಕೆಹಾಲ್ ಭಾಗದಲ್ಲಿ ಶಾಲೆ ತೆರೆಯಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಕೆಪಿಟಿಸಿಎಲ್ ಅಧಿಕಾರಿ ರಾಜಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.