ಚಿಕ್ಕನಾಯಕನಹಳ್ಳಿ,ಅ.31: ಆಪರೇಷನ್ ಕಮಲದಿಂದ ಜೆ.ಡಿ.ಎಸ್ ಪಕ್ಷವು ಮುಳುಗುವ ಸಂಭವವಿದೆಯೆಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಾಲೂಕಿನ ಶಾಸಕ ಸಿ.ಬಿ.ಸುರೇಶ್ಬಾಬುರವರನ್ನು ತಾಲೂಕಿನ ಜನತೆಗೆ ಸುಳಿವೂ ಸಿಗದಂತೆ ತಮ್ಮ ಜೊತೆಯಲ್ಲಿ ಇರಿಸಿಕೊಂಡಿರುವುದರಿಂದ ತಾಲೂಕಿನಾದ್ಯಂತ ಕಳ್ಳತನ, ಅಕ್ರಮ ಕಾಮಗಾರಿ ಮತ್ತು ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಆರೋಪಿಸಿದ್ದಾರೆ.ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ತಾಲೂಕಿನ ಶಾಸಕರು 45 ದಿನಗಳಿಂದ ಯಾವುದೇ ಸಭೆ ಸಮಾರಂಭಗಳಿಗೆ ಭಾಗವಹಿಸದೇ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಾರ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ, ಅಲ್ಲದೆ ತಾಲೂಕಿನಲ್ಲಿ ನಡೆಯುವ ಜನಸ್ಪಂದನ ಸಭೆಗೆ ಅಧಿಕಾರಿಗಳು ಮಾತ್ರ ಆಗಮಿಸಿ ಮನವಿ ಪತ್ರ ಪಡೆದು ಸುಮ್ಮನಾಗುತ್ತಿದ್ದಾರೆ ಇದನ್ನು ಕೇಳುವವರೆ ಇಲ್ಲದಂತಾಗಿದ್ದು ತಾಲೂಕಿನ ಅಭಿವೃದ್ದಿಗಾಗಿ ಬರುವ ಸಕರ್ಾರದ ಹಲವು ಯೋಜನೆ ಅನುಷ್ಟಾನಗಳನ್ನು ನೆರವೇರಿಸಲು ಹಿಂದೆ ಬಿದ್ದಿರುವುದರಿಂದ ತಾಲೂಕಿಗೆ ಬರುವ ಯೋಜನೆಗಳೆಲ್ಲ ಮರೀಚಿಕೆಯಾಗುತ್ತಿವೆ. ಪುರಸಭೆಯಲ್ಲಿ ಶಾಸಕರ ಮಾತೇ ವೇದ ವಾಕ್ಯವಾಗಿದ್ದು ಆಡಳಿತ ಪಕ್ಷದಲ್ಲಿ ಬಹುಮತವಿರುವುದರಿಂದ ಕೆಲವೇ ಜನರ ತೃಪ್ತಿಗಾಗಿ 6ತಿಂಗಳಿಗೊಮ್ಮೆ ಪುರಸಭಾಧ್ಯಕ್ಷರನ್ನು ಬದಲಾಯಿಸುತ್ತಿರುವುದರಿಂದ ಅಧ್ಯಕ್ಷಗಿರಿ ಪಡೆಯುತ್ತಿರುವವರಿಗೆ ಆಡಳಿತದ ಅನುಭವವಾಗದೇ ಪುರಸಭಾ ವ್ಯಾಪ್ತಿಯ ಕಾರ್ಯಗಳೆಲ್ಲ ಮೂಲೆ ಗುಂಪಾಗಿದೆ ಎಂದು ಆರೋಪಿಸಿದ್ದಾರಲ್ಲದೆ, ಪುರಸಭೆಗೆ ಕಳೆದ ಸಾಲಿನಲ್ಲಿ ಒಂದು ಕೋಟಿ ಐವತ್ತು ಲಕ್ಷರೂಗಳು ಸಕರ್ಾರದಿಂದ ಅನುದಾನ ಬಿಡುಗಡೆಯಾದರೂ ನಿರ್ವಹಿಸಿರುವ ಎಲ್ಲಾ ಕಾರ್ಯಗಳು ಕಳಪೆಯಿಂದ ಕೂಡಿದ್ದು ಇವನ್ನೆಲ್ಲ ಗಮನಿಸಲು ಶಾಸಕರೇ ತಾಲೂಕಿನಲ್ಲಿ ಕಾಣಸಿಗುತ್ತಿಲ್ಲ ಕೂಡಲೇ ಪುರಸಭಾ ವ್ಯಾಪ್ತಿಯಲ್ಲಿನ ಕಾಮಗಾರಿಗಳು ತನೆಖೆಯಾಗಬೇಕು ಎಂದ ಅವರು ತಾಲೂಕಿನಾದ್ಯಂತ ಈ ರೀತಿಯ ಅವ್ಯವಹಾರಗಳು ನಡೆದರು ಬಾರದ ಶಾಸಕರಿಗಾಗಿ ನಾವು ಹೋರಾಟ ಮಾಡಬೇಕ ಎಂದು ಪ್ರಶ್ನಿಸಿದ್ದಾರೆ ಕೂಡಲೇ ಸಕರ್ಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಅಜಾಗರೂಕತೆ, ಸಭೆ ಸಮಾರಂಭಗಳಿಗೆ ಭಾಗವಹಿಸದೇ ನಿರ್ಲಕ್ಷತೆ ತೋರುತ್ತಿರುವುದು, ಅಭಿವೃದ್ದಿ ಕಾಮಗಾರಿಗಳಾಗದೆ ನಿಂತುಹೋಗಿರುವುದು ಸರಿಯಾಗದಿದ್ದರೆ ಬೇರೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಗೋಷ್ಟಿಯಲ್ಲಿ ಬಿ.ಜೆ.ಪಿ ಜಿಲ್ಲಾ ಯುವ ಮೋಚರ್ಾ ಕಾರ್ಯದಶರ್ಿ ಪ್ರವೀಣ್, ನಗರಾಧ್ಯಕ್ಷ ಚೇತನ್ಕುಮಾರ್, ಪುರಸಭಾ ನಾಮಿನಿ ಸದಸ್ಯ ರವಿಕುಮಾರ್ ಸುಂದರ್ರಾಜ್, ಮರುಳಯ್ಯ, ಉಪಸ್ಥಿತರಿದ್ದರು.
ನಿಮ್ಮ ಸುದ್ದಿ ವಾಹಕ ............................................................................................................................... ......................................................... feed back: chiguru_2020@rediffmail.com
Sunday, October 31, 2010
ಚಿಕ್ಕನಾಯಕನಹಳ್ಳಿ,ಅ.31: ಆಪರೇಷನ್ ಕಮಲದಿಂದ ಜೆ.ಡಿ.ಎಸ್ ಪಕ್ಷವು ಮುಳುಗುವ ಸಂಭವವಿದೆಯೆಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಾಲೂಕಿನ ಶಾಸಕ ಸಿ.ಬಿ.ಸುರೇಶ್ಬಾಬುರವರನ್ನು ತಾಲೂಕಿನ ಜನತೆಗೆ ಸುಳಿವೂ ಸಿಗದಂತೆ ತಮ್ಮ ಜೊತೆಯಲ್ಲಿ ಇರಿಸಿಕೊಂಡಿರುವುದರಿಂದ ತಾಲೂಕಿನಾದ್ಯಂತ ಕಳ್ಳತನ, ಅಕ್ರಮ ಕಾಮಗಾರಿ ಮತ್ತು ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಆರೋಪಿಸಿದ್ದಾರೆ.ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ತಾಲೂಕಿನ ಶಾಸಕರು 45 ದಿನಗಳಿಂದ ಯಾವುದೇ ಸಭೆ ಸಮಾರಂಭಗಳಿಗೆ ಭಾಗವಹಿಸದೇ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಾರ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ, ಅಲ್ಲದೆ ತಾಲೂಕಿನಲ್ಲಿ ನಡೆಯುವ ಜನಸ್ಪಂದನ ಸಭೆಗೆ ಅಧಿಕಾರಿಗಳು ಮಾತ್ರ ಆಗಮಿಸಿ ಮನವಿ ಪತ್ರ ಪಡೆದು ಸುಮ್ಮನಾಗುತ್ತಿದ್ದಾರೆ ಇದನ್ನು ಕೇಳುವವರೆ ಇಲ್ಲದಂತಾಗಿದ್ದು ತಾಲೂಕಿನ ಅಭಿವೃದ್ದಿಗಾಗಿ ಬರುವ ಸಕರ್ಾರದ ಹಲವು ಯೋಜನೆ ಅನುಷ್ಟಾನಗಳನ್ನು ನೆರವೇರಿಸಲು ಹಿಂದೆ ಬಿದ್ದಿರುವುದರಿಂದ ತಾಲೂಕಿಗೆ ಬರುವ ಯೋಜನೆಗಳೆಲ್ಲ ಮರೀಚಿಕೆಯಾಗುತ್ತಿವೆ. ಪುರಸಭೆಯಲ್ಲಿ ಶಾಸಕರ ಮಾತೇ ವೇದ ವಾಕ್ಯವಾಗಿದ್ದು ಆಡಳಿತ ಪಕ್ಷದಲ್ಲಿ ಬಹುಮತವಿರುವುದರಿಂದ ಕೆಲವೇ ಜನರ ತೃಪ್ತಿಗಾಗಿ 6ತಿಂಗಳಿಗೊಮ್ಮೆ ಪುರಸಭಾಧ್ಯಕ್ಷರನ್ನು ಬದಲಾಯಿಸುತ್ತಿರುವುದರಿಂದ ಅಧ್ಯಕ್ಷಗಿರಿ ಪಡೆಯುತ್ತಿರುವವರಿಗೆ ಆಡಳಿತದ ಅನುಭವವಾಗದೇ ಪುರಸಭಾ ವ್ಯಾಪ್ತಿಯ ಕಾರ್ಯಗಳೆಲ್ಲ ಮೂಲೆ ಗುಂಪಾಗಿದೆ ಎಂದು ಆರೋಪಿಸಿದ್ದಾರಲ್ಲದೆ, ಪುರಸಭೆಗೆ ಕಳೆದ ಸಾಲಿನಲ್ಲಿ ಒಂದು ಕೋಟಿ ಐವತ್ತು ಲಕ್ಷರೂಗಳು ಸಕರ್ಾರದಿಂದ ಅನುದಾನ ಬಿಡುಗಡೆಯಾದರೂ ನಿರ್ವಹಿಸಿರುವ ಎಲ್ಲಾ ಕಾರ್ಯಗಳು ಕಳಪೆಯಿಂದ ಕೂಡಿದ್ದು ಇವನ್ನೆಲ್ಲ ಗಮನಿಸಲು ಶಾಸಕರೇ ತಾಲೂಕಿನಲ್ಲಿ ಕಾಣಸಿಗುತ್ತಿಲ್ಲ ಕೂಡಲೇ ಪುರಸಭಾ ವ್ಯಾಪ್ತಿಯಲ್ಲಿನ ಕಾಮಗಾರಿಗಳು ತನೆಖೆಯಾಗಬೇಕು ಎಂದ ಅವರು ತಾಲೂಕಿನಾದ್ಯಂತ ಈ ರೀತಿಯ ಅವ್ಯವಹಾರಗಳು ನಡೆದರು ಬಾರದ ಶಾಸಕರಿಗಾಗಿ ನಾವು ಹೋರಾಟ ಮಾಡಬೇಕ ಎಂದು ಪ್ರಶ್ನಿಸಿದ್ದಾರೆ ಕೂಡಲೇ ಸಕರ್ಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಅಜಾಗರೂಕತೆ, ಸಭೆ ಸಮಾರಂಭಗಳಿಗೆ ಭಾಗವಹಿಸದೇ ನಿರ್ಲಕ್ಷತೆ ತೋರುತ್ತಿರುವುದು, ಅಭಿವೃದ್ದಿ ಕಾಮಗಾರಿಗಳಾಗದೆ ನಿಂತುಹೋಗಿರುವುದು ಸರಿಯಾಗದಿದ್ದರೆ ಬೇರೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಗೋಷ್ಟಿಯಲ್ಲಿ ಬಿ.ಜೆ.ಪಿ ಜಿಲ್ಲಾ ಯುವ ಮೋಚರ್ಾ ಕಾರ್ಯದಶರ್ಿ ಪ್ರವೀಣ್, ನಗರಾಧ್ಯಕ್ಷ ಚೇತನ್ಕುಮಾರ್, ಪುರಸಭಾ ನಾಮಿನಿ ಸದಸ್ಯ ರವಿಕುಮಾರ್ ಸುಂದರ್ರಾಜ್, ಮರುಳಯ್ಯ, ಉಪಸ್ಥಿತರಿದ್ದರು.
Saturday, October 30, 2010
ಚಿಕ್ಕನಾಯಕನಹಳ್ಳಿ,ಅ.30: 54ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ನವಂಬರ್ 1ರ ಬೆಳಗ್ಗೆ 9ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ.ಸಮಾರಂಭದಲ್ಲಿ ಕಲಾವಿದ ಸಿ.ಎನ್.ಕೃಷ್ಣಾಚಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಗೋಕಾಕ್ ಚಳುವಳಿ ಹೋರಾಟಗಾರ ಸಿ.ಎಸ್.ನಾಗರಾಜುರವರಿಗೆ ಸನ್ಮಾನಿಸಲಾಗುವುದು.. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿರುವರು.
ಕನ್ನಡ ಸಂಘದ ವತಿಯಿಂದ
ಪುರಸಭಾ ಆವರಣದಲ್ಲಿದ್ದ ಶ್ರೀಗಂಧ ,
Wednesday, October 27, 2010
ಚಿಕ್ಕನಾಯಕನಹಳ್ಳಿ,ಅ.27: ತಾಲೂಕಿನ ಮಲ್ಲಿಗೆರೆ ಗ್ರಾಮದ ಪ್ರಕಾಶ್ ಎಂಬುವರ ಮನೆಯಲ್ಲಿ ಒಂದು ಲಕ್ಷರೂಗಳ ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ನಡೆದಿದೆ.
ಮಲ್ಲಿಗೆರೆ ವಾಸಿ ಪ್ರಕಶ್ ಬಿನ್ ಹುಚ್ಚಪ್ಪ ಎಂಬುವರು ಮನೆಗೆ ಬೀಗ ಹಾಕಿ, ನೆಂಟರ ಮನೆಗೆ ಹಬ್ಬಕ್ಕೆಂದು ಹೋದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದ್ದು ಪ್ರಕಾಶ್ ಮನೆಯ ಬೀಗ ಹೊಡೆದಿರುವ ದುಷ್ಕಮರ್ಿಗಳು ಮನೆಯಲ್ಲಿದ್ದ ಚಿನ್ನದ ಸರ, ಉಂಗುರ ಸೇರಿದಂತೆ ಬೆಳ್ಳಿಯ ದೇವರ ಮೂತರ್ಿಗಳನ್ನು ಸಹ ಕದ್ದೊಯ್ದಿದ್ದಾರೆ. ಹಂದನೆಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪತ್ತೆಕಾರ್ಯದಲ್ಲಿ ನಿರತವಾಗಿದ್ದವು.
Monday, October 25, 2010
Sunday, October 24, 2010
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಯುಕ್ತವಾಗಿ ಆಯೋಜಿಸಿದ್ದ ಹಿರಿಯ ನಾಗರೀಕರಿಗೆ ಸನ್ಮಾನ, 'ಲೋಕನಾಯಕ ಜೆ.ಪಿ.' ಪುಸ್ತಕ ಬಿಡುಗಡೆ ಹಾಗೂ ಪಿ.ಎಚ್.ಡಿ.ಪುರಸ್ಕೃತರಾದ ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಿಗಳು ಜನರನ್ನು ಓಟು ಕೊಡುವ ಯಂತ್ರಗಳನ್ನಾಗಿಸಿಕೊಂಡಿರುವ ಪರಿಣಾಮ ಜನರು ಕೊಟ್ಟಿರುವ ಓಟನ್ನು ಹರಾಜಿಗಿಟ್ಟು ಹಣವನ್ನು ಮಾಡಲು ಹೊರಟಿರುವ ಈ ಲಜ್ಜೆಗೇಡಿ ರಾಜಕಾರಣಿಗಳಿಗೆ ಜನರು ಒಳ್ಳೆಯ ಪಾಠ ಕಲಿಸಬೇಕಿದೆ ಎಂದರು.
ನಾಯಿ ಬಾಲವನ್ನು ಅಲ್ಲಾಡಿಸಲುವುದು ಸಹಜ, ಆದರೆ ಈಗ ನಮ್ಮ ರಾಜ್ಯದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ. ನಮ್ಮ ಅನುಕೂಲಕ್ಕಿರುವ ಹಣ, ಇಂದು ನಮ್ಮನ್ನೇ ಆಳುತ್ತಿದೆ. ಮನುಷ್ಯತ್ವವನ್ನು ಮರೆತಿರುವ ಜನ ಹಣದ ಆಸೆಗೆ ಬಿದ್ದು ಓಟು ಹಾಕಿ ಗೆಲ್ಲಿಸಿದ ಜನರನ್ನು ಮರೆತು ಅಧಿಕಾರದ ಆಸೆಗಾಗಿ ಸಲ್ಲದ ದಾರಿ ಹಿಡಿದು ಜನರು ಕೊಟ್ಟ ಅಧಿಕಾರವನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದರು.
ಇಂದು ಜನಪ್ರತಿನಿಧಿಗಳಾಗುತ್ತಿರುವವರು ಕೋಟಾಧಿಪತಿಗಳು, ಹೆಂಡದ ದೊರೆಗಳು, ಕುದುರೆ ಜೂಜಾಡುವ ಜನರೇ, ಹಾಗಾಗಿಯೇ ಬಡವರ ಕಷ್ಟ ಅವರಿಗೆ ಅರಿವಿಗೆ ಬರುತ್ತಿಲ್ಲವೆಂದರು.
ಮಹಾತ್ಮ ಗಾಂಧಿ, ವಿನೋಬ ಭಾವೆ ಅವರೆಲ್ಲ, ಬಡವರಿಗೆ ಜಮೀನು ಹಂಚುವುದಕ್ಕಾಗಿ ಜಮೀನುದಾರರಿಂದ 42 ಲಕ್ಷ ಎಕರೆ ಸಂಗ್ರಹಿಸಿದ್ದರು. ಬಿಹಾರ ರಾಜ್ಯ ಒಂದರಲ್ಲೇ 24 ಲಕ್ಷ ಎಕರೆ ಸಂಗ್ರಹವಾಗಿತ್ತು ಎಂದರಲ್ಲದೆ, ಆಗಿನ ಕಾಲದಲ್ಲಿ ಎಲ್ಲಾ ಬಡವರಿಗೆ ಕನಿಷ್ಠ ಪ್ರಮಾಣದಲ್ಲಿ ಜಮೀನು ಹಂಚಬೇಕೆಂದರೆ 5 ಕೋಟಿ ಎಕರೆ ಜಮೀನಿನ ಅಗತ್ಯವಿತ್ತು ಎಂದರು.
ದಿನೇ ದಿನೇ ಬಡವರ ಸಂಖ್ಯೆ ಹೆಚ್ಚುತ್ತಿದೆ, ಅದನ್ನು ನೀಗಿಸುವ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಮುಂದಾಗಿ, ವರ್ಷದಲ್ಲಿ ಸೇವಾ ಸಂಸ್ಥೆಯೊಂದು ಕನಿಷ್ಟ ಹತ್ತು ಜನರ ಜೀವನಾಧಾರಕ್ಕೆ ಅಗತ್ಯವಾದ ಉದ್ಯೋಗವನ್ನು ಕಲ್ಪಿಸಿಕೊಡಬೇಕೆಂದರು.
ಸಮಾರಂಭದಲ್ಲಿ ಗೌರವಾಭಿನಂದನೆಯನ್ನು ಸ್ವೀಕರಿಸಿದ ಕುಪ್ಪೂರು ಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಸಮಾಜಕ್ಕಾಗಿ ದುಡಿಯುವ ಜನರ ಸಂಖ್ಯೆ ಹೆಚ್ಚಾಗಬೇಕಾಗಿದೆ. ನಮ್ಮ ದೇಹದಲ್ಲಿ ಜೀವವೆಂಬುದು ಇರುವ ತನಕ ಈ ದೇಹಕ್ಕೆ ಒಂದು ಬೆಲೆ, ನೆಲೆ. ನಂತರದಲ್ಲಿ ಈ ದೇಹವೇ ಬೇರೆ, ಜೀವವೇ ಬೇರೆಯಾಗಿ ದೇಹ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೇಹದಲ್ಲಿ ಜೀವವಿರುವಾಗಲೇ ಬೇರೆಯವರ ಜೀವನಕ್ಕೂ ಸಹಾಯ ಮಾಡಿ ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಡಿಸಿರುವ ತಮ್ಮ ಪ್ರೌಢ ಪ್ರಬಂಧ 'ವೀರಶೈವ ಧಾಮರ್ಿಕ ಸಂಸ್ಕಾರಗಳಲ್ಲಿ ಸಾಮಾಜಿ ಸ್ವಾಸ್ಥ್ಯ' ಎಂಬ ವಿಷಯದ ತಿರುಳೆಂದರೆ ಜಾನಪದ ಆಟವಾದ ಕಣ್ಣಾಮುಚ್ಚೆ ಕಾಡೇಗೂಡೆ'' ಯ ಸಾರಾಂಶವೇ ಆಗಿದೆ, ಎಂಬುದನ್ನು ಎಳೆ ಎಳೆಯಾಗಿ ಸಭೆಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಪ್ರೊ.ನಾ.ದಯಾನಂದ, ಸಿ.ಪಿ.ಐ. ರವಿಪ್ರಸಾದ್, ರೋಟರಿ ಜಿಲ್ಲಾ ಅಸಿಸ್ಟಂಟ್ ಗೌರ್ನರ್ ಶಾಂತಿಲಾಲ್, ಸಿ.ಎಚ್.ಮರಿದೇವರು ಮಾತನಾಡಿದರು. ಆರ್.ಬಸವರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ನಾಗರೀಕರಾದ ಎಸ್.ಎ.ನಬಿ, ಸಿ.ಕೆ.ಸೀತರಾಮಯ್ಯ, ಸಿ.ಎಚ್.ಮರಿದೇವರು, ಪೈಲ್ವಾನ ಶಿವರಾಮಯ್ಯ, ಪಾರ್ಕ ಶಿವಣ್ಣ, ಗುಂಡಮ್ಮ ನವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಭಾವನಿ ಜಯರಾಂ ನಿರೂಪಿಸಿದರು, ಸಿ.ಕೆ.ಪರಶುರಾಮಯ್ಯ ಅಭಿನಂದನಾ ಪತ್ರ ವಾಚಿಸಿದರು, ಕೆ.ವಿ.ಕುಮಾರ್ ವಂದಿಸಿದರು.
ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.24: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.
ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.23: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.
ಚಿಕ್ಕನಾಯಕನಹಳ್ಳಿ,ಅ.22: ವರದಕ್ಷಿಣೆ ಕಿರುಕುಳವನ್ನು ಸಹಿಸದ ಅಂಗನವಾಡಿ ಶಿಕ್ಷಕಿ ರೇಣುಕಮ್ಮ(25) ವಿಷ ಕುಡಿದು ಸಾವನ್ನಪ್ಪಿರುವ ಘಟನೆ ರಂಗಾಪುರದ ಹಟ್ಟಿಯಲ್ಲಿ ನಡೆದಿದೆ.
ಪಟ್ಟಣದ ಗಂಗಮ್ಮನ ಮಗಳು ರೇಣುಕಮ್ಮಳನ್ನು ಇದೇ ತಾಲೂಕಿನ ರಂಗಾಪುರದ ಹಟ್ಟಿಯ ಆನಂದ ಎಂಬುವವರಿಗೆ ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿತ್ತು. ಮದುವೆಯ ಸಂದರ್ಭದಲ್ಲಿ ವರ ಆನಂದನಿಗೆ ಐವತ್ತು ಸಾವಿರ ರೂ ನಗದು, ಒಂದು ಉಂಗುರ, ಹೆಣ್ಣಿಗೆ ಎರಡು ಎಳೆ ಚಿನ್ನದ ಸರ ಕೊಟ್ಟು ಮದುವೆ ಮಾಡಿದ್ದರು.
ಆರಂಭದಲ್ಲಿ ಅನೂನ್ಯವಾಗಿದ್ದ ರೇಣುಕಮ್ಮ, ಅಲ್ಲಿಯೇ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಅವಳ ಸಂಬಳವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದ ಪತಿ ಆನಂದ ಕುಡಿತಕ್ಕೆ ಬಲಿಯಾಗಿ, ಕುಡಿದ ಅಮಲಿನಲ್ಲಿ ತವರು ಮನೆಯಿಂದ ಹಣ ತರುವಂತೆ ರೇಣುಕಮ್ಮಳನ್ನು ಪೀಡಿಸುತ್ತಿದ್ದ.
ತವರು ಮನೆಯವರು ಮಗಳ ಸಂಸಾರ ಸುಖವಾಗಿರಲೆಂದು ಒಂದೆರಡು ಸಂದರ್ಭಗಳಲ್ಲಿ ಹಣವನ್ನು ಕೊಟ್ಟು ಗಂಡನ ಮನೆಗೆ ಕಳುಹಿಸಿದ್ದಾರೆ. ಇದಷ್ಟಕ್ಕೆ ತೃಪ್ತಿಯಾಗದ ಆನಂದ, ತನ್ನ ತಾಯಿ ಲಕ್ಷ್ಮಮ್ಮನೊಂದಿಗೆ ಸೇರಿಕೊಂಡು ರೇಣುಕಮ್ಮಳಿಗೆ ಇನ್ನಷ್ಟು ಹಣ ತರುವಂತೆ ಪೀಡಿಸತೊಡಗಿದ್ದಾರೆ.
ಈ ಸಂಬಂಧವಾಗಿ ರೇಣುಕಮ್ಮ ಹುಳಿಯಾರು ಠಾಣೆಗೆ ತನಗಾಗುತ್ತಿರುವ ಕಿರುಕುಳದ ಬಗ್ಗೆ ಅಲ್ಲಿನ ಅಧಿಕಾರಿಗಳ ಬಳಿ ಅಲವತ್ತು ಕೊಂಡಿದ್ದಾಳೆ, ಇವ್ಯಾವುದಕ್ಕೂ ಜಗ್ಗದ ಗಂಡ ಆನಂದ, ಅತ್ತೆ ಲಕ್ಷ್ಮಮ್ಮ, ಗಂಡನ ಸ್ನೇಹಿತರಾದರ ಬಳೆ ಚಂದ್ರಯ್ಯ, ಓಂಕಾರ, ಪಾಂಡುರಂಗ ಸೇರಿ ರೇಣುಕಮ್ಮಳಿಗೆ ಕಿರುಕುಳ ಕೊಟ್ಟದ್ದರಿಂದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ತಾಯಿ ಗಂಗಮ್ಮ ದೂರಿದ್ದಾರೆ.
ಮೃತಳ ಪತಿ ಆನಂದನನ್ನು ಚಿ.ನಾ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Tuesday, October 19, 2010
ಚಿಕ್ಕನಾಯಕನಹಳ್ಳಿ,ಅ.19: ಸೃಜನ ವತಿಯಿಂದ ಸ್ತ್ರೀ ಶಕ್ತಿ ಮಹಿಳಾ ಸಸ್ವಹಾಯ ಸಂಘಗಳಿಗೆ ಮಹಿಳಾ ಸಬಲೀಕರಣ ಅಧ್ಯಯನ ಶಿಬಿರವನ್ನು ಇದೇ 23ರ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಎನ್.ಇಂದಿರಮ್ಮ ತಿಳಿಸಿದ್ದಾರೆ.ಶಿಬಿರವನ್ನು ಗೋಡೇಕೆರೆ ಭೂಕ್ಷೇತ್ರದಲ್ಲಿ ಏರ್ಪಡಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಕುಶಲ ವಹಿಸಲಿದ್ದು ಹುಳಿಯಾರು ಎಸ್.ಐ ಪಾರ್ವತಮ್ಮ ಎಸ್.ಯಾದವ್ ಉದ್ಘಾಟನೆ ನೆರವೇರಿಸಲಿದ್ದು ಸೃಜನ ಗ್ರಂಥಾಲಯದ ಉದ್ಘಾಟನೆಯನ್ನು ರಂಗಕಮರ್ಿ ವಾಣಿಸತೀಶ್ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಭಸವಯ್ಯ, ಬಾಲ ವಿಕಾಸ ಯೋಜನಾಧಿಕಾರಿ ಅನೀಸ್ಖೈಸರ್ ಉಪಸ್ಥಿತರಿರುವರು. ಮತ್ತು 23ರಂದು ಮಧ್ಯಾಹ್ನ 12-30ಕ್ಕೆ ಮಹಿಳಾ ಹೋರಾಟದ ಚರಿತ್ರೆಯ ಮಜಲುಗಳು, ಸಸ್ವಹಾಯ ಸಂಘಗಳ ಪರಿಕಲ್ಪನೆ, ವಿಕಾಸ ಮತ್ತು ಆಶಯಗಳು, ಸ್ವಸಾಹಯ ಸಂಘಗಳ ಸಂಘದ ವಾರದ ಸಭೆಯ ಕಾರ್ಯ ವಿಧಾನ ಮತ್ತು 24ರಂದು ಸಸ್ವಹಾಯ ಸಂಘಗಳ ಮೂಲಕ ಸಬಲೀಕರಣದ ಸಾಧ್ಯತೆಗಳು, ಸೃಜನ ಕನಸು-ಮುಂದಿನ ಹೆಜ್ಜೆಗಳು, ಮಹಿಳಾ ಸಸ್ವಹಾಯ ಸಂಘಗಳ ಒಕ್ಕೂಟ(ಆಂದ್ರಪ್ರದೇಶದ ಅನುಭವ)ಎಂಬ ವಿಷಯಗಳನ್ನು ಕಾರ್ಯಗಾರದಲ್ಲಿ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೃಜನಸಂಘದ ಅಧ್ಯಕ್ಷರಾದ ಎಲ್.ಜಯಮ್ಮ ಅಧ್ಯಕ್ಷತೆ ವಹಿಸಲಿದ್ದು ಜಿ.ಪಂ.ಯೋಜನಾ ನಿದರ್ೇಶಕ ಕೆ.ಬಿ.ಆಚಿಜನಪ್ಪ ಸಮಾರೋಪ ಭಾಷಣ ಮಾಡಲಿದ್ದು , ಮುಖ್ಯ ಅತಿಥಿಗಳಾಗಿ ಹುಳಿಯಾರು ಸೃಜನ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷೆ ವೀಣಾಶಂಕರ್ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ೆ 2010-11ನೇ ಸಾಲಿನ ನೂತನ ಕಾರ್ಯಕಾರಿಣಿಯನ್ನು ಜಿಲ್ಲಾ ಸಂಚಾಲಕ್ ಶ್ರೀನಿವಾಸ್ ಘೋಷಸಿದ್ದಾರೆ.ತಾಲೂಕು ಪ್ರಮುಖ್ಆಗಿ ಚೇತನ್ಪ್ರಸಾದ್, ನಗರಕಾರ್ಯದಶರ್ಿಯಾಗಿ ಮನೋಹರ್ ಅಣೇಕಟ್ಟೆ, ಸಹ ಕಾರ್ಯದಶರ್ಿಯಾಗಿ ದಿಲೀಪ್, ವಿದ್ಯಾಥರ್ಿನಿ ಪ್ರಮುಖ್ ಸುಷ್ಮಾ, ಸಹ ವಿದ್ಯಾಥರ್ಿನಿ ಪ್ರಮುಖ್ ಸುಪ್ರಿಯ, ಅಧ್ಯಯನ ವೃತ್ತ ಪ್ರಮುಖ್ ರೂಪೇಶ್, ಖಜಾಂಚಿ ಗುರು, ಕಾಲೇಜು ಪ್ರಮುಖ್ ಶರತ್, ಆನಂದ್, ರವಿ, ಭಾನು, ದರ್ಶನ್, ನವೀನ್ ಸಿದ್ದೇಗೌಡ, ಚರಣ್, ಕೇಂದ್ರ ಪ್ರಮುಖ್ ಮಹೇಶ್, ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ಮಧು, ರವಿ, ಗುರುರಾಜ್, ಸುಧಾಕರ್ ಮೂತರ್ಿ, ಗಿರೀಶ್, ನಂದೀಶ್, ಶಶಿಕಮಾರ್ ಆಯ್ಕೆಯಾಗಿದ್ದಾರೆ.
Monday, October 18, 2010
ರೋಟರಿಯಿಂದ ಸಸಿ ನೆಡು-ಬೆಳಸು ಕಾರ್ಯಕ್ರಮಚಿಕ್ಕನಾಯಕನಹಲ್ಲಿ
ಥಿಯೋಸಫಿಕಲ್, ರೋಟರಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರ
Tuesday, October 12, 2010
Friday, October 8, 2010
Monday, October 4, 2010
ರಿಯಲ್ ಎಸ್ಟೇಟ್ ಏಜಂಟರಾಗಿರುವ ಶಿಕ್ಷಕರ ಸಂಘ
ಪದಾಧಿಕಾರಿಗಳು
ಚಿಕ್ಕನಾಯಕನಹಳ್ಳಿ,ಅ.04: ರಾಜ್ಯ ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದು, ಸಂಘದ ಪದಾಧಿಕಾರಿಗಳು ಏಜೆಂಟರ್ಂತೆ ವತರ್ಿಸುತ್ತಿದ್ದಾರೆ ಎಂದು ರಾಜ್ಯ ಸ.ಪ್ರಾ.ಶಾ.ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಆರೋಪಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸ್ವಾಥರ್ಿಗಳು, ಸಂಘಟನೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಎಂದರಲ್ಲದೆ, ತಮ್ಮ ಲಾಭಕ್ಕಾಗಿ ಅಮಾಯಕ ಶಿಕ್ಷಕರ ಗುಂಪುಗಳನ್ನು ಕಟ್ಟಿಕೊಂಡು ಹಲವು ವಿಧದ ಆಮಿಷಗಳನ್ನು ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.
ಸಂಘಟನೆಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹೊರತು ಸಾಮೂಹಿಕವಾಗಿ ಶಿಕ್ಷಕರಿಗೆ ಆಗುವ ಅನುಕೂಲಗಳ ಕಡೆ ಗಮನಕೊಡುತ್ತಿಲ್ಲ, ನಮ್ಮ ರಾಜ್ಯದ ಶಿಕ್ಷಕರಿಗೂ ಪಕ್ಕದ ಆಂಧ್ರ, ತಮಿಳು ನಾಡು ಶಿಕ್ಷಕರುಗಳಿಗೂ ಮೂಲ ವೇತನದಲ್ಲಿ ಭಾರಿ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕರ್ಾರದಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವ ಸಂಘ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರ ಸಂಘದ ಸದಸ್ಯತ್ವಕ್ಕಾಗಿ ನೀಡುವ ಹಣವನ್ನು 20ರೂ ನಿಂದ 50ರೂಗೆ ಏರಿಸಿರುವುದರಿಂದ ಸಂಗ್ರಹವಾಗುವ ಹಣವನ್ನು ರಾಜ್ಯ ಪದಾಧಿಕಾರಿಗಳು ತಮ್ಮ ಖಾಸಗಿ ವಿಲಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಅವರ ದುರ್ಬಲತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಒಂದು ಸಂಘವು ಎಡವಿದರೆ, ಆ ತಪ್ಪನ್ನು ತಿದ್ದಲು ಇನ್ನೊಂದು ಸಂಘದ ಅವಶ್ಯಕತೆ ಇದೆ ಎಂದರು.
ರಾಜ್ಯ ಸ.ಪ್ರಾ.ಶಾ.ಶಿ.ಶಿ ಸಂಘದ ಕಾರ್ಯದಶರ್ಿ ಶಂಕರಮೂತರ್ಿ ಮಾತನಾಡಿ ಗ್ರಾಮ, ಪಟ್ಟಣಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ, ಈ ವಿಷಯವನ್ನು 10 ವರ್ಷಗಳಿಂದಲೂ ಸಕರ್ಾರಕ್ಕೆ ಹೇಳಿದರೂ ಯಾವ ಪ್ರಯೋಜನವು ಆಗುತ್ತಿಲ್ಲ, ಶಿಕ್ಷಕರು ನಿಮಗೆ ನೀವೆ ನಾಯಕರಾಗಿ ನಮ್ಮ ಸಂಘದ ಜೊತೆ ಕೈಜೋಡಿಸಿದರೆ ನಾವು ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತುತ್ತೇವೆ ಎಂದರಲ್ಲದೆ, ನಮ್ಮ ಸಂಘವು ನಿಸ್ವಾರ್ಥ ಸೇವೆ ಮೂಲಕ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಸಮಾರಂಭದಲ್ಲಿ ಜಿ,ಮು,ಶಿ,ಸಂಘದ ಅಧ್ಯಕ್ಷ ಹೆಚ್.ಎನ್ ಗೋಪಿನಾಥ್, ತಾ,ಸ,ಪ್ರಾ,ಶಾ,ಶಿ,ಶಿ, ಸಂಘದ ಅಧ್ಯಕ್ಷ ಬಿ.ಎಲ್.ಬಸವರಾಜು, ಮುಖ್ಯ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷ ಕೆ.ರಾಜಯ್ಯ, ತಾ,ಸ,ಪ್ರಾ,ಶಾ,ಶಿ,ಶಿ ಸಂಘದ ಗೌರವಾಧ್ಯಕ್ಷ ಎಂ ಗಂಗಾಧರಯ್ಯ, ಉಪಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದಶರ್ಿ ಬೆಳಗುಲಿ ವೆಂಕಟೇಶ್, ಎನ್.ಪಿ ಕುಮಾರಸ್ವಾಮಿ, ರುಕ್ಮಾಂಗದ, ಜಿ.ತಿಮ್ಮಯ್ಯ, ಜಿ.ರಂಗಯ್ಯ, ಶಿವಕುಮಾರ್, ಕೆಂಬಾಳ್ರಮೇಶ್, ಸಿ.ಜಿ.ಶಂಕರ್, ಚಿಕ್ಕಣ್ಣ ಉಪಸ್ಥಿತರಿದ್ದರು.
ಅ.5ಮತ್ತು 6ರಂದು ಸಮುದಾಯದತ್ತ ಶಾಲೆ
ಚಿಕ್ಕನಾಯಕನಹಳ್ಳಿ,ಅ.04: ತಾಲೂಕು ಸಕರ್ಾರಿ ಶಾಲೆಗಳ ಮೊದಲನೇ ಸುತ್ತಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇದೇ 5 ಮತ್ತು 6ರಂದು ನಡೆಯಲಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ಪ್ರೌಡಶಾಲೆ ಶಿಕ್ಷಕರು, ಹಾಗೂ ಪ್ರೌಡಶಾಲೆ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೇಲ್ವಿಚಾರಕರಾಗಿ ಭಾಗವಹಿಸಲಿದ್ದು ಅಂದು ನಿಯಮಾನುಸಾರ ವೇಳಾ ಪಟ್ಟಿಗನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.