Sunday, October 31, 2010


ಶಾಸಕರಿಲ್ಲದೆ ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ: ತಾ.ಬಿ.ಜೆ.ಪಿ.ಕಾರ್ಯದಶರ್ಿಯ ಆರೋಪ
ಚಿಕ್ಕನಾಯಕನಹಳ್ಳಿ,ಅ.31: ಆಪರೇಷನ್ ಕಮಲದಿಂದ ಜೆ.ಡಿ.ಎಸ್ ಪಕ್ಷವು ಮುಳುಗುವ ಸಂಭವವಿದೆಯೆಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಾಲೂಕಿನ ಶಾಸಕ ಸಿ.ಬಿ.ಸುರೇಶ್ಬಾಬುರವರನ್ನು ತಾಲೂಕಿನ ಜನತೆಗೆ ಸುಳಿವೂ ಸಿಗದಂತೆ ತಮ್ಮ ಜೊತೆಯಲ್ಲಿ ಇರಿಸಿಕೊಂಡಿರುವುದರಿಂದ ತಾಲೂಕಿನಾದ್ಯಂತ ಕಳ್ಳತನ, ಅಕ್ರಮ ಕಾಮಗಾರಿ ಮತ್ತು ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಆರೋಪಿಸಿದ್ದಾರೆ.ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ತಾಲೂಕಿನ ಶಾಸಕರು 45 ದಿನಗಳಿಂದ ಯಾವುದೇ ಸಭೆ ಸಮಾರಂಭಗಳಿಗೆ ಭಾಗವಹಿಸದೇ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಾರ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ, ಅಲ್ಲದೆ ತಾಲೂಕಿನಲ್ಲಿ ನಡೆಯುವ ಜನಸ್ಪಂದನ ಸಭೆಗೆ ಅಧಿಕಾರಿಗಳು ಮಾತ್ರ ಆಗಮಿಸಿ ಮನವಿ ಪತ್ರ ಪಡೆದು ಸುಮ್ಮನಾಗುತ್ತಿದ್ದಾರೆ ಇದನ್ನು ಕೇಳುವವರೆ ಇಲ್ಲದಂತಾಗಿದ್ದು ತಾಲೂಕಿನ ಅಭಿವೃದ್ದಿಗಾಗಿ ಬರುವ ಸಕರ್ಾರದ ಹಲವು ಯೋಜನೆ ಅನುಷ್ಟಾನಗಳನ್ನು ನೆರವೇರಿಸಲು ಹಿಂದೆ ಬಿದ್ದಿರುವುದರಿಂದ ತಾಲೂಕಿಗೆ ಬರುವ ಯೋಜನೆಗಳೆಲ್ಲ ಮರೀಚಿಕೆಯಾಗುತ್ತಿವೆ. ಪುರಸಭೆಯಲ್ಲಿ ಶಾಸಕರ ಮಾತೇ ವೇದ ವಾಕ್ಯವಾಗಿದ್ದು ಆಡಳಿತ ಪಕ್ಷದಲ್ಲಿ ಬಹುಮತವಿರುವುದರಿಂದ ಕೆಲವೇ ಜನರ ತೃಪ್ತಿಗಾಗಿ 6ತಿಂಗಳಿಗೊಮ್ಮೆ ಪುರಸಭಾಧ್ಯಕ್ಷರನ್ನು ಬದಲಾಯಿಸುತ್ತಿರುವುದರಿಂದ ಅಧ್ಯಕ್ಷಗಿರಿ ಪಡೆಯುತ್ತಿರುವವರಿಗೆ ಆಡಳಿತದ ಅನುಭವವಾಗದೇ ಪುರಸಭಾ ವ್ಯಾಪ್ತಿಯ ಕಾರ್ಯಗಳೆಲ್ಲ ಮೂಲೆ ಗುಂಪಾಗಿದೆ ಎಂದು ಆರೋಪಿಸಿದ್ದಾರಲ್ಲದೆ, ಪುರಸಭೆಗೆ ಕಳೆದ ಸಾಲಿನಲ್ಲಿ ಒಂದು ಕೋಟಿ ಐವತ್ತು ಲಕ್ಷರೂಗಳು ಸಕರ್ಾರದಿಂದ ಅನುದಾನ ಬಿಡುಗಡೆಯಾದರೂ ನಿರ್ವಹಿಸಿರುವ ಎಲ್ಲಾ ಕಾರ್ಯಗಳು ಕಳಪೆಯಿಂದ ಕೂಡಿದ್ದು ಇವನ್ನೆಲ್ಲ ಗಮನಿಸಲು ಶಾಸಕರೇ ತಾಲೂಕಿನಲ್ಲಿ ಕಾಣಸಿಗುತ್ತಿಲ್ಲ ಕೂಡಲೇ ಪುರಸಭಾ ವ್ಯಾಪ್ತಿಯಲ್ಲಿನ ಕಾಮಗಾರಿಗಳು ತನೆಖೆಯಾಗಬೇಕು ಎಂದ ಅವರು ತಾಲೂಕಿನಾದ್ಯಂತ ಈ ರೀತಿಯ ಅವ್ಯವಹಾರಗಳು ನಡೆದರು ಬಾರದ ಶಾಸಕರಿಗಾಗಿ ನಾವು ಹೋರಾಟ ಮಾಡಬೇಕ ಎಂದು ಪ್ರಶ್ನಿಸಿದ್ದಾರೆ ಕೂಡಲೇ ಸಕರ್ಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಅಜಾಗರೂಕತೆ, ಸಭೆ ಸಮಾರಂಭಗಳಿಗೆ ಭಾಗವಹಿಸದೇ ನಿರ್ಲಕ್ಷತೆ ತೋರುತ್ತಿರುವುದು, ಅಭಿವೃದ್ದಿ ಕಾಮಗಾರಿಗಳಾಗದೆ ನಿಂತುಹೋಗಿರುವುದು ಸರಿಯಾಗದಿದ್ದರೆ ಬೇರೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಗೋಷ್ಟಿಯಲ್ಲಿ ಬಿ.ಜೆ.ಪಿ ಜಿಲ್ಲಾ ಯುವ ಮೋಚರ್ಾ ಕಾರ್ಯದಶರ್ಿ ಪ್ರವೀಣ್, ನಗರಾಧ್ಯಕ್ಷ ಚೇತನ್ಕುಮಾರ್, ಪುರಸಭಾ ನಾಮಿನಿ ಸದಸ್ಯ ರವಿಕುಮಾರ್ ಸುಂದರ್ರಾಜ್, ಮರುಳಯ್ಯ, ಉಪಸ್ಥಿತರಿದ್ದರು.

Saturday, October 30, 2010


ತಾಲೂಕು ಆಡಳಿತದ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ.30
: 54ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ನವಂಬರ್ 1ರ ಬೆಳಗ್ಗೆ 9ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ.ಸಮಾರಂಭದಲ್ಲಿ ಕಲಾವಿದ ಸಿ.ಎನ್.ಕೃಷ್ಣಾಚಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಗೋಕಾಕ್ ಚಳುವಳಿ ಹೋರಾಟಗಾರ ಸಿ.ಎಸ್.ನಾಗರಾಜುರವರಿಗೆ ಸನ್ಮಾನಿಸಲಾಗುವುದು.. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿರುವರು.
ಕನ್ನಡ ಸಂಘದ ವತಿಯಿಂದ

ರಾಜ್ಯೋತ್ಸವಚಿಕ್ಕನಾಯಕನಹಳ್ಳಿ,ಅ.30: 54ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಿಂದ ಮೂರು ದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದ್ದಾರೆ.ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಜೊತಗೆ ಕೃಷ್ಣದೇವರಾಯ, ಟಿಪ್ಪು ಸುಲ್ತಾನ್ ಕಿತ್ತೂರ ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಮದಕರಿ ನಾಯಕ, ಕುವೆಂಪು, ಮಾಸ್ತಿವೆಂಕಟೇಶ ಅಯ್ಯಂಗಾರ್, ತಾ.ರಾ.ಸು, ದ.ರಾ.ಬೇಂದ್ರೆ, ತೀ.ನಂ.ಶ್ರೀ, ಸಿ.ಬಿ.ಮಲ್ಲಪ್ಪ, ಡಾ.ರಾಜ್ಕುಮಾರ್ ಹಾಗೂ ಪೌರಾಣಿಕ ಕಥೆಗಳನ್ನು ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳಿರುತ್ತವೆ.ನ.1ರ ಮಧ್ಯಾಹ್ನ ಮಧಾಹ್ನ 3ಗಂಟೆಗೆ ಕನ್ನಡ ಸಂಘದ ವೇದಿಕೆಯಲ್ಲಿ ರಂಗ ಗೀತೆಗಳ ಸ್ಪಧರ್ೆ, 2ರ ಮಂಗಳವಾರ ಸಂಜೆ 6.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 3ರ ಬುಧವಾರ 'ಆಷಾಡದಲ್ಲಿ ಅಳಿಯ' ಎಂಬ ನಗೆ ನಾಟಕವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ನ ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭತನೆಚಿಕ್ಕನಾಯಕನಹಲ್ಲಿ,ಅ.30:

ಸಕರ್ಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾಥರ್ಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿರುವ ಪರಿಣಾ ಶಿಕ್ಷಣದ ವ್ಯಾಪಾರೀಕರಣ ನಡೆಯುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲವೆಂದು ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಕಿಡಿಕಾರಿದರು.ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ, ಎ.ಬಿ.ವಿ.ಪಿ. ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕ್ ಕಛೇರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ 4ವರ್ಷಗಳ ಹಿಂದೆ ಬಿ.ಕಾಂ, ಬಿ.ಎಸ್.ಡಬ್ಲೂ ಮತ್ತು ಬಿ.ಬಿ.ಎಂ ಕೋಸರ್್ಗಳು ಆರಂಭಗೊಂಡಿದ್ದು, ದಿನದಿಂದ ದಿನಕ್ಕೆ ವಿದ್ಯಾಥರ್ಿಗಳು ಹೆಚ್ಚಾಗುತ್ತಿದೆ. ಈಗ 500ಕ್ಕೂ ಹೆಚ್ಚು ವಿದ್ಯಾಥರ್ಿಗಳನ್ನು ಹೊಂದಿದ್ದು ಈ ವಿದ್ಯಾಥರ್ಿಗಳ ಸಂಖ್ಯೆಗೆ ಅಗತ್ಯವಿರುವಷ್ಟು ಕೊಠಡಿಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲದೆ ವಿದ್ಯಾಥರ್ಿಗಳು ಪರದಾಡುವಂತಾಗುತ್ತಿದೆ. ಖಾಯಂ ಉಪನ್ಯಾಸಕ ಕೊರತೆ, ಕ್ರೀಡೆಗೆ ತರಬೇತಿ ನೀಡಲು ದೈಹಿಕ ಶಿಕ್ಷಕರು ಇಲ್ಲದಿರುವುದು ಮತ್ತು ಕಾಲೇಜಿನಲ್ಲಿ 12ಸಾವಿರ ಪುಸ್ತಕಗಳಿದ್ದರೂ ಗ್ರಂಥಪಾಲಕರಿಲ್ಲದೆ ಪುಸ್ತಕಗಳು ವಿದ್ಯಾಥರ್ಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಸ್ಮಧರ್ಾತ್ಮಕ ಯುಗದಲ್ಲಿ ಬೇಕಾಗಿರುವ ಕಂಪ್ಯೂಟರ್ ಶಿಕ್ಷಣ ಮತ್ತು ಗ್ರೂಪ್ ಡಿ ನೌಕರರಿಲ್ಲದೆ ಸ್ವಚ್ಚತೆಯಲ್ಲೂ ವ್ಯತ್ಯಾಸವಾಗಿದೆ. ಗ್ರಾಮೀಣ ಭಾಗದಿಂದ ಸೈಕಲ್ನಲ್ಲಿ ಬರುವ ವಿದ್ಯಾಥರ್ಿಗಳಿಗೆ ಸೈಕಲ್ ಸ್ಟ್ಯಾಂಡ್ ಇಲ್ಲದಿರುವುದರಿಂದ ವಿದ್ಯಾಥರ್ಿಗಳು ಉಪನ್ಯಾಸದ ಕಡೆ ಗಮನ ನೀಡದೆ ತಮ್ಮ ಸೈಕಲ್ಗಳ ಕಡೆ ಗಮನ ಹರಿಸಬೇಕಾಗುತ್ತದೆ ಎಂದು ವಿದ್ಯಾಥರ್ಿಗಳು ದೂರಿದ್ದಾರೆ. ಕಾಲೇಜಿನ ಆವರಣಕ್ಕೆ ಅಗತ್ಯವಿರುವ ಕಾಂಪೌಂಡ್ ಇಲ್ಲದೆ ಕಾಲೇಜಿನ ಕಟ್ಟಡದಲ್ಲಿ ರಾತ್ರಿ ಸಮಯದಲ್ಲಿ ಆಗುಂತಕರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಕಾಲೇಜಿನ ವಿದ್ಯಾಥರ್ಿಗಳು ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಚೇತನ್ ಹೇಳಿದರು.ಅಭಾವಿಪ ಹಿರಿಯ ಮುಖಂಡ ರಾಕೇಶ್ ಮಾತನಾಡಿ ಸಕರ್ಾರ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಕ್ಕೆ ಹಣವನ್ನು ಹಂಚಿಕೆ ಮಾಡಿದ ನಂತರ ಉಳಿದ ಅಲ್ಪ ಮೊತ್ತವನ್ನು ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುತ್ತಿದ್ದು ಇದರಿಂದ ಶಿಕ್ಷಣದ ಅಭಿವೃದ್ದಿ ಕೆಲಸಗಳಾಗದೆ ಕುಂಠಿತಗೊಳ್ಳುತ್ತಿವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಅಭಾವಿಪ ನಗರ ಕಾರ್ಯದಶರ್ಿ ಮನೋಹರ್ ಅಣೆಕಟ್ಟೆ, ಸಹ ಕಾರ್ಯದಶರ್ಿ ದಿಲೀಪ್, ಸದಸ್ಯರಾದ ವಿಜಯ್ಕುಮಾರ್, ಗುರುಚೇತನ್, ವರದರಾಜು, ಮಂಜುನಾಥ್, ಆನಂದ್ ಉಪಸ್ಥಿತರಿದ್ದರು.
ಪುರಸಭಾ ಆವರಣದಲ್ಲಿದ್ದ ಶ್ರೀಗಂಧ ,

ಅ.30: ಪುರಸಭಾ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ದುಷ್ಕಮರ್ಿಗಳು ಕದ್ದು ಕೊಯ್ದಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಕಳೆದ ಹತ್ತುವರ್ಷಗಳಿಂದ ಪುರಸಭಾ ಆವರಣದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು, ಇದರಲ್ಲಿ ಒಂದು ಮರವನ್ನು ಕಳೆದ ಮಾಚರ್ಿನಲ್ಲಿ ಕೊಯ್ದಿದ್ದು, ಇದನ್ನು ಹೊರ ತರಲಾಗದೆ ಸ್ಥಳದಲ್ಲೇ ಬಿಟ್ಟು ಹೋಗಿದ್ದರು, ಇದನ್ನು ಕಛೇರಿಯ ಸಿಬ್ಬಂದಿ ಆಫೀಸ್ನಲ್ಲೇ ಇಟ್ಟುಕೊಂಡಿದ್ದಾರೆ. ಈಗ ಮತ್ತೆ ಶ್ರೀಗಂಧದ ಮರವನ್ನು ಕುಯ್ದಿದು, ಈ ಸಲ ಮರವನ್ನು ಹೊತ್ತುಹೊಯ್ಯುವಲ್ಲಿ ಸಫಲಕಂಡಿರುವ ದುಷ್ಕಮರ್ಿಗಳು, ಮರವನ್ನು ಮಂಗಮಾಯ ಮಾಡಿದ್ದಾರೆ. ಪುರಸಭಾ ವ್ಯಾಪ್ತಿಗೆ ಸೇರಿದ ಸಂತೆ ಮೈದಾನದಲ್ಲೂ ಮೂರು ಕಾಡು ಮರಗಳು ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿವೆ, ಪುರಸಭೆಯ ಹಿಂಭಾಗದಲ್ಲಿದ್ದ ಜಲ ಶುದ್ದಿಕರಣ ಘಟಕದಲ್ಲಿದ್ದ ಜೆ.ಸಿ.ಬಿ. ವಾಹನದಲ್ಲಿದ್ದ ಬ್ಯಾಟರಿಯೂ ಕಳ್ಳತನವಾಗಿದೆ. ಸದಾ ಜಾಗೃತರಾಗಿರುವ ಕಛೇರಿಯ ಆವರಣಲ್ಲೇ ಈ ಪ್ರಕರಣ ನಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ

Wednesday, October 27, 2010

ಮಲ್ಲಿಗೆರೆಯಲ್ಲಿ ಒಂದು ಲಕ್ಷರೂಗಳ ಚಿನ್ನಾಭರಣ ಕಳವು
ಚಿಕ್ಕನಾಯಕನಹಳ್ಳಿ,ಅ.27: ತಾಲೂಕಿನ ಮಲ್ಲಿಗೆರೆ ಗ್ರಾಮದ ಪ್ರಕಾಶ್ ಎಂಬುವರ ಮನೆಯಲ್ಲಿ ಒಂದು ಲಕ್ಷರೂಗಳ ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ನಡೆದಿದೆ.
ಮಲ್ಲಿಗೆರೆ ವಾಸಿ ಪ್ರಕಶ್ ಬಿನ್ ಹುಚ್ಚಪ್ಪ ಎಂಬುವರು ಮನೆಗೆ ಬೀಗ ಹಾಕಿ, ನೆಂಟರ ಮನೆಗೆ ಹಬ್ಬಕ್ಕೆಂದು ಹೋದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದ್ದು ಪ್ರಕಾಶ್ ಮನೆಯ ಬೀಗ ಹೊಡೆದಿರುವ ದುಷ್ಕಮರ್ಿಗಳು ಮನೆಯಲ್ಲಿದ್ದ ಚಿನ್ನದ ಸರ, ಉಂಗುರ ಸೇರಿದಂತೆ ಬೆಳ್ಳಿಯ ದೇವರ ಮೂತರ್ಿಗಳನ್ನು ಸಹ ಕದ್ದೊಯ್ದಿದ್ದಾರೆ. ಹಂದನೆಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪತ್ತೆಕಾರ್ಯದಲ್ಲಿ ನಿರತವಾಗಿದ್ದವು.


Monday, October 25, 2010

Sunday, October 24, 2010








ಜನರನ್ನೇ ಮರೆತ ಜನಪ್ರತಿನಿಧಿಗಳು; ಹಣದ ಸುಳಿಯಲ್ಲಿ ಸಿಲುಕ್ಕಿದ್ದಾರೆ. ಚಿಕ್ಕನಾಯಕನಹಳ್ಳಿ,ಅ.24: ಚುನಾವಣೆ ಬಂದಾಗ ಒಂದು ಓಟು ಬಿಸಾಕಿ ಮಲಗಿದವರು, ಮತ್ತೇ ನಾವು ಹೇಳುವುದು ಮುಂದಿನ ಚುನಾವಣೆಗೆ ಹಾಗಾಗಿಯೇ ಇಂದು ನಮ್ಮ ರಾಜ್ಯದ ಜನಪ್ರತಿನಿಧಿಗಳು ಈ ರೀತಿಯ ಲಜ್ಜೆಗೇಡಿತನದಿಂದ ವತರ್ಿಸುತ್ತಿದ್ದಾರೆ. ಇದೊಂದು ಕುಂಬಕರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ನಮ್ಮನಾಳುತ್ತಿದೆ ಎಂದು ಸ್ವತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಯುಕ್ತವಾಗಿ ಆಯೋಜಿಸಿದ್ದ ಹಿರಿಯ ನಾಗರೀಕರಿಗೆ ಸನ್ಮಾನ, 'ಲೋಕನಾಯಕ ಜೆ.ಪಿ.' ಪುಸ್ತಕ ಬಿಡುಗಡೆ ಹಾಗೂ ಪಿ.ಎಚ್.ಡಿ.ಪುರಸ್ಕೃತರಾದ ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಿಗಳು ಜನರನ್ನು ಓಟು ಕೊಡುವ ಯಂತ್ರಗಳನ್ನಾಗಿಸಿಕೊಂಡಿರುವ ಪರಿಣಾಮ ಜನರು ಕೊಟ್ಟಿರುವ ಓಟನ್ನು ಹರಾಜಿಗಿಟ್ಟು ಹಣವನ್ನು ಮಾಡಲು ಹೊರಟಿರುವ ಈ ಲಜ್ಜೆಗೇಡಿ ರಾಜಕಾರಣಿಗಳಿಗೆ ಜನರು ಒಳ್ಳೆಯ ಪಾಠ ಕಲಿಸಬೇಕಿದೆ ಎಂದರು.
ನಾಯಿ ಬಾಲವನ್ನು ಅಲ್ಲಾಡಿಸಲುವುದು ಸಹಜ, ಆದರೆ ಈಗ ನಮ್ಮ ರಾಜ್ಯದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ. ನಮ್ಮ ಅನುಕೂಲಕ್ಕಿರುವ ಹಣ, ಇಂದು ನಮ್ಮನ್ನೇ ಆಳುತ್ತಿದೆ. ಮನುಷ್ಯತ್ವವನ್ನು ಮರೆತಿರುವ ಜನ ಹಣದ ಆಸೆಗೆ ಬಿದ್ದು ಓಟು ಹಾಕಿ ಗೆಲ್ಲಿಸಿದ ಜನರನ್ನು ಮರೆತು ಅಧಿಕಾರದ ಆಸೆಗಾಗಿ ಸಲ್ಲದ ದಾರಿ ಹಿಡಿದು ಜನರು ಕೊಟ್ಟ ಅಧಿಕಾರವನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದರು.
ಇಂದು ಜನಪ್ರತಿನಿಧಿಗಳಾಗುತ್ತಿರುವವರು ಕೋಟಾಧಿಪತಿಗಳು, ಹೆಂಡದ ದೊರೆಗಳು, ಕುದುರೆ ಜೂಜಾಡುವ ಜನರೇ, ಹಾಗಾಗಿಯೇ ಬಡವರ ಕಷ್ಟ ಅವರಿಗೆ ಅರಿವಿಗೆ ಬರುತ್ತಿಲ್ಲವೆಂದರು.
ಮಹಾತ್ಮ ಗಾಂಧಿ, ವಿನೋಬ ಭಾವೆ ಅವರೆಲ್ಲ, ಬಡವರಿಗೆ ಜಮೀನು ಹಂಚುವುದಕ್ಕಾಗಿ ಜಮೀನುದಾರರಿಂದ 42 ಲಕ್ಷ ಎಕರೆ ಸಂಗ್ರಹಿಸಿದ್ದರು. ಬಿಹಾರ ರಾಜ್ಯ ಒಂದರಲ್ಲೇ 24 ಲಕ್ಷ ಎಕರೆ ಸಂಗ್ರಹವಾಗಿತ್ತು ಎಂದರಲ್ಲದೆ, ಆಗಿನ ಕಾಲದಲ್ಲಿ ಎಲ್ಲಾ ಬಡವರಿಗೆ ಕನಿಷ್ಠ ಪ್ರಮಾಣದಲ್ಲಿ ಜಮೀನು ಹಂಚಬೇಕೆಂದರೆ 5 ಕೋಟಿ ಎಕರೆ ಜಮೀನಿನ ಅಗತ್ಯವಿತ್ತು ಎಂದರು.
ದಿನೇ ದಿನೇ ಬಡವರ ಸಂಖ್ಯೆ ಹೆಚ್ಚುತ್ತಿದೆ, ಅದನ್ನು ನೀಗಿಸುವ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಮುಂದಾಗಿ, ವರ್ಷದಲ್ಲಿ ಸೇವಾ ಸಂಸ್ಥೆಯೊಂದು ಕನಿಷ್ಟ ಹತ್ತು ಜನರ ಜೀವನಾಧಾರಕ್ಕೆ ಅಗತ್ಯವಾದ ಉದ್ಯೋಗವನ್ನು ಕಲ್ಪಿಸಿಕೊಡಬೇಕೆಂದರು.
ಸಮಾರಂಭದಲ್ಲಿ ಗೌರವಾಭಿನಂದನೆಯನ್ನು ಸ್ವೀಕರಿಸಿದ ಕುಪ್ಪೂರು ಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಸಮಾಜಕ್ಕಾಗಿ ದುಡಿಯುವ ಜನರ ಸಂಖ್ಯೆ ಹೆಚ್ಚಾಗಬೇಕಾಗಿದೆ. ನಮ್ಮ ದೇಹದಲ್ಲಿ ಜೀವವೆಂಬುದು ಇರುವ ತನಕ ಈ ದೇಹಕ್ಕೆ ಒಂದು ಬೆಲೆ, ನೆಲೆ. ನಂತರದಲ್ಲಿ ಈ ದೇಹವೇ ಬೇರೆ, ಜೀವವೇ ಬೇರೆಯಾಗಿ ದೇಹ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೇಹದಲ್ಲಿ ಜೀವವಿರುವಾಗಲೇ ಬೇರೆಯವರ ಜೀವನಕ್ಕೂ ಸಹಾಯ ಮಾಡಿ ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಡಿಸಿರುವ ತಮ್ಮ ಪ್ರೌಢ ಪ್ರಬಂಧ 'ವೀರಶೈವ ಧಾಮರ್ಿಕ ಸಂಸ್ಕಾರಗಳಲ್ಲಿ ಸಾಮಾಜಿ ಸ್ವಾಸ್ಥ್ಯ' ಎಂಬ ವಿಷಯದ ತಿರುಳೆಂದರೆ ಜಾನಪದ ಆಟವಾದ ಕಣ್ಣಾಮುಚ್ಚೆ ಕಾಡೇಗೂಡೆ'' ಯ ಸಾರಾಂಶವೇ ಆಗಿದೆ, ಎಂಬುದನ್ನು ಎಳೆ ಎಳೆಯಾಗಿ ಸಭೆಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಪ್ರೊ.ನಾ.ದಯಾನಂದ, ಸಿ.ಪಿ.ಐ. ರವಿಪ್ರಸಾದ್, ರೋಟರಿ ಜಿಲ್ಲಾ ಅಸಿಸ್ಟಂಟ್ ಗೌರ್ನರ್ ಶಾಂತಿಲಾಲ್, ಸಿ.ಎಚ್.ಮರಿದೇವರು ಮಾತನಾಡಿದರು. ಆರ್.ಬಸವರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ನಾಗರೀಕರಾದ ಎಸ್.ಎ.ನಬಿ, ಸಿ.ಕೆ.ಸೀತರಾಮಯ್ಯ, ಸಿ.ಎಚ್.ಮರಿದೇವರು, ಪೈಲ್ವಾನ ಶಿವರಾಮಯ್ಯ, ಪಾರ್ಕ ಶಿವಣ್ಣ, ಗುಂಡಮ್ಮ ನವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಭಾವನಿ ಜಯರಾಂ ನಿರೂಪಿಸಿದರು, ಸಿ.ಕೆ.ಪರಶುರಾಮಯ್ಯ ಅಭಿನಂದನಾ ಪತ್ರ ವಾಚಿಸಿದರು, ಕೆ.ವಿ.ಕುಮಾರ್ ವಂದಿಸಿದರು.

ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.24: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.




ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.23: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಅಂಗನವಾಡಿ ಶಿಕ್ಷಕಿ
ಚಿಕ್ಕನಾಯಕನಹಳ್ಳಿ,ಅ.22: ವರದಕ್ಷಿಣೆ ಕಿರುಕುಳವನ್ನು ಸಹಿಸದ ಅಂಗನವಾಡಿ ಶಿಕ್ಷಕಿ ರೇಣುಕಮ್ಮ(25) ವಿಷ ಕುಡಿದು ಸಾವನ್ನಪ್ಪಿರುವ ಘಟನೆ ರಂಗಾಪುರದ ಹಟ್ಟಿಯಲ್ಲಿ ನಡೆದಿದೆ.
ಪಟ್ಟಣದ ಗಂಗಮ್ಮನ ಮಗಳು ರೇಣುಕಮ್ಮಳನ್ನು ಇದೇ ತಾಲೂಕಿನ ರಂಗಾಪುರದ ಹಟ್ಟಿಯ ಆನಂದ ಎಂಬುವವರಿಗೆ ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿತ್ತು. ಮದುವೆಯ ಸಂದರ್ಭದಲ್ಲಿ ವರ ಆನಂದನಿಗೆ ಐವತ್ತು ಸಾವಿರ ರೂ ನಗದು, ಒಂದು ಉಂಗುರ, ಹೆಣ್ಣಿಗೆ ಎರಡು ಎಳೆ ಚಿನ್ನದ ಸರ ಕೊಟ್ಟು ಮದುವೆ ಮಾಡಿದ್ದರು.
ಆರಂಭದಲ್ಲಿ ಅನೂನ್ಯವಾಗಿದ್ದ ರೇಣುಕಮ್ಮ, ಅಲ್ಲಿಯೇ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಅವಳ ಸಂಬಳವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದ ಪತಿ ಆನಂದ ಕುಡಿತಕ್ಕೆ ಬಲಿಯಾಗಿ, ಕುಡಿದ ಅಮಲಿನಲ್ಲಿ ತವರು ಮನೆಯಿಂದ ಹಣ ತರುವಂತೆ ರೇಣುಕಮ್ಮಳನ್ನು ಪೀಡಿಸುತ್ತಿದ್ದ.
ತವರು ಮನೆಯವರು ಮಗಳ ಸಂಸಾರ ಸುಖವಾಗಿರಲೆಂದು ಒಂದೆರಡು ಸಂದರ್ಭಗಳಲ್ಲಿ ಹಣವನ್ನು ಕೊಟ್ಟು ಗಂಡನ ಮನೆಗೆ ಕಳುಹಿಸಿದ್ದಾರೆ. ಇದಷ್ಟಕ್ಕೆ ತೃಪ್ತಿಯಾಗದ ಆನಂದ, ತನ್ನ ತಾಯಿ ಲಕ್ಷ್ಮಮ್ಮನೊಂದಿಗೆ ಸೇರಿಕೊಂಡು ರೇಣುಕಮ್ಮಳಿಗೆ ಇನ್ನಷ್ಟು ಹಣ ತರುವಂತೆ ಪೀಡಿಸತೊಡಗಿದ್ದಾರೆ.
ಈ ಸಂಬಂಧವಾಗಿ ರೇಣುಕಮ್ಮ ಹುಳಿಯಾರು ಠಾಣೆಗೆ ತನಗಾಗುತ್ತಿರುವ ಕಿರುಕುಳದ ಬಗ್ಗೆ ಅಲ್ಲಿನ ಅಧಿಕಾರಿಗಳ ಬಳಿ ಅಲವತ್ತು ಕೊಂಡಿದ್ದಾಳೆ, ಇವ್ಯಾವುದಕ್ಕೂ ಜಗ್ಗದ ಗಂಡ ಆನಂದ, ಅತ್ತೆ ಲಕ್ಷ್ಮಮ್ಮ, ಗಂಡನ ಸ್ನೇಹಿತರಾದರ ಬಳೆ ಚಂದ್ರಯ್ಯ, ಓಂಕಾರ, ಪಾಂಡುರಂಗ ಸೇರಿ ರೇಣುಕಮ್ಮಳಿಗೆ ಕಿರುಕುಳ ಕೊಟ್ಟದ್ದರಿಂದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ತಾಯಿ ಗಂಗಮ್ಮ ದೂರಿದ್ದಾರೆ.
ಮೃತಳ ಪತಿ ಆನಂದನನ್ನು ಚಿ.ನಾ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


Tuesday, October 19, 2010




ಚಿಕ್ಕನಾಯಕನಹಳ್ಳಿ,ಅ.19: ಉಚಿತ ನರ ಮತ್ತು ಮನೋರೋಗ ಚಿಕಿತ್ಸಾ ತಪಾಸಣಾ ಶಿಬಿರವನ್ನು ಇದೇ24ರ ಭಾನುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಶಿಬಿರವನ್ನು ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಹಾಗೂ ಸ್ನೇಹ ಮನೋವಿಕಾಸ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಶಿಬಿರದ ಉದ್ಘಾಟನೆ ನೆರವೇರಿಸಲಿದ್ದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾನ್ವಿತರಾಗಿ ಮನೋವೈದ್ಯ ಡಾ.ಲೋಕೇಶ್ಬಾಬು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ವೈದ್ಯಾಧಿಕಾರಿಗಲಾದ್ ಶಿವಕುಮಾರ್, ಪ್ರೇಮ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಇನ್ನರ್ವೀಲ್ ಅಧ್ಯಕ್ಚೆ ನಾಗರತ್ನರಾವ್, ಡಾ.ಸಿ.ಎಂ.ಸುರೇಶ್, ಪ್ರಶಾಂತಕುಮಾರಶೆಟ್ಟಿ, ಶ್ರೀನಿವಾಸ್, ಪದ್ಮಾಕ್ಷಿ, ಚೇತನ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ಸೃಜನ ವತಿಯಿಂದ ಸ್ತ್ರೀ ಶಕ್ತಿ ಮಹಿಳಾ ಸಸ್ವಹಾಯ ಸಂಘಗಳಿಗೆ ಮಹಿಳಾ ಸಬಲೀಕರಣ ಅಧ್ಯಯನ ಶಿಬಿರವನ್ನು ಇದೇ 23ರ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಎನ್.ಇಂದಿರಮ್ಮ ತಿಳಿಸಿದ್ದಾರೆ.ಶಿಬಿರವನ್ನು ಗೋಡೇಕೆರೆ ಭೂಕ್ಷೇತ್ರದಲ್ಲಿ ಏರ್ಪಡಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಕುಶಲ ವಹಿಸಲಿದ್ದು ಹುಳಿಯಾರು ಎಸ್.ಐ ಪಾರ್ವತಮ್ಮ ಎಸ್.ಯಾದವ್ ಉದ್ಘಾಟನೆ ನೆರವೇರಿಸಲಿದ್ದು ಸೃಜನ ಗ್ರಂಥಾಲಯದ ಉದ್ಘಾಟನೆಯನ್ನು ರಂಗಕಮರ್ಿ ವಾಣಿಸತೀಶ್ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಭಸವಯ್ಯ, ಬಾಲ ವಿಕಾಸ ಯೋಜನಾಧಿಕಾರಿ ಅನೀಸ್ಖೈಸರ್ ಉಪಸ್ಥಿತರಿರುವರು. ಮತ್ತು 23ರಂದು ಮಧ್ಯಾಹ್ನ 12-30ಕ್ಕೆ ಮಹಿಳಾ ಹೋರಾಟದ ಚರಿತ್ರೆಯ ಮಜಲುಗಳು, ಸಸ್ವಹಾಯ ಸಂಘಗಳ ಪರಿಕಲ್ಪನೆ, ವಿಕಾಸ ಮತ್ತು ಆಶಯಗಳು, ಸ್ವಸಾಹಯ ಸಂಘಗಳ ಸಂಘದ ವಾರದ ಸಭೆಯ ಕಾರ್ಯ ವಿಧಾನ ಮತ್ತು 24ರಂದು ಸಸ್ವಹಾಯ ಸಂಘಗಳ ಮೂಲಕ ಸಬಲೀಕರಣದ ಸಾಧ್ಯತೆಗಳು, ಸೃಜನ ಕನಸು-ಮುಂದಿನ ಹೆಜ್ಜೆಗಳು, ಮಹಿಳಾ ಸಸ್ವಹಾಯ ಸಂಘಗಳ ಒಕ್ಕೂಟ(ಆಂದ್ರಪ್ರದೇಶದ ಅನುಭವ)ಎಂಬ ವಿಷಯಗಳನ್ನು ಕಾರ್ಯಗಾರದಲ್ಲಿ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೃಜನಸಂಘದ ಅಧ್ಯಕ್ಷರಾದ ಎಲ್.ಜಯಮ್ಮ ಅಧ್ಯಕ್ಷತೆ ವಹಿಸಲಿದ್ದು ಜಿ.ಪಂ.ಯೋಜನಾ ನಿದರ್ೇಶಕ ಕೆ.ಬಿ.ಆಚಿಜನಪ್ಪ ಸಮಾರೋಪ ಭಾಷಣ ಮಾಡಲಿದ್ದು , ಮುಖ್ಯ ಅತಿಥಿಗಳಾಗಿ ಹುಳಿಯಾರು ಸೃಜನ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷೆ ವೀಣಾಶಂಕರ್ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ೆ 2010-11ನೇ ಸಾಲಿನ ನೂತನ ಕಾರ್ಯಕಾರಿಣಿಯನ್ನು ಜಿಲ್ಲಾ ಸಂಚಾಲಕ್ ಶ್ರೀನಿವಾಸ್ ಘೋಷಸಿದ್ದಾರೆ.ತಾಲೂಕು ಪ್ರಮುಖ್ಆಗಿ ಚೇತನ್ಪ್ರಸಾದ್, ನಗರಕಾರ್ಯದಶರ್ಿಯಾಗಿ ಮನೋಹರ್ ಅಣೇಕಟ್ಟೆ, ಸಹ ಕಾರ್ಯದಶರ್ಿಯಾಗಿ ದಿಲೀಪ್, ವಿದ್ಯಾಥರ್ಿನಿ ಪ್ರಮುಖ್ ಸುಷ್ಮಾ, ಸಹ ವಿದ್ಯಾಥರ್ಿನಿ ಪ್ರಮುಖ್ ಸುಪ್ರಿಯ, ಅಧ್ಯಯನ ವೃತ್ತ ಪ್ರಮುಖ್ ರೂಪೇಶ್, ಖಜಾಂಚಿ ಗುರು, ಕಾಲೇಜು ಪ್ರಮುಖ್ ಶರತ್, ಆನಂದ್, ರವಿ, ಭಾನು, ದರ್ಶನ್, ನವೀನ್ ಸಿದ್ದೇಗೌಡ, ಚರಣ್, ಕೇಂದ್ರ ಪ್ರಮುಖ್ ಮಹೇಶ್, ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ಮಧು, ರವಿ, ಗುರುರಾಜ್, ಸುಧಾಕರ್ ಮೂತರ್ಿ, ಗಿರೀಶ್, ನಂದೀಶ್, ಶಶಿಕಮಾರ್ ಆಯ್ಕೆಯಾಗಿದ್ದಾರೆ.

Monday, October 18, 2010

ಹಿರಿಯ ನಾಗರೀಕರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ
,ಅ.18: ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಮತ್ತು ಇನ್ನರ್ವೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆಇದೇ 20ರ ಬುಧವಾರ ಸಂಜೆ 5-30ಕ್ಕೆ ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಕುಪ್ಪೂರು ಗದ್ದಿಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಘಾಟನೆ ನೆರವೇರಿಸುವರು. ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ದಿ. ಜಿ.ವಿ.ನಾರಾಯಣಮೂತರ್ಿಯವರ 'ಲೋಕನಾಯಕ ಜೆ.ಪಿ ಪುಸ್ತಕ ಬಿಡುಗಡೆ ಮತ್ತು ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರಾದಎಸ್.ಎ.ನಭಿ(ಸಮಾಜಸೇವೆ),ಸಿ.ಕೆ.ಸೀತಾರಾಮಯ್ಯ(ಕಾನೂನು), ಸಿ.ಎಚ್.ಮರಿದೇವರು(ಶಿಕ್ಷಣ ಮತ್ತು ಸಾಹಿತ್ಯ), ಪೈಲ್ವಾನ್ ಶಿವರಾಮಯ್ಯ(ಕುಸ್ತಿಪಟು), ಶಿವಣ್ಣ(ಸಸ್ಯಸಂರಕ್ಷಣೆ), ಗುಂಡಮ್ಮ(ಗೃಹಕಾರ್ಯನಿವರ್ಾಹಕ)ರವರಿಗೆ ಸನ್ಮಾನಿಸಲಾಗುವುದು. ಗೌರವಾನ್ವಿತ ಅತಿಥಿಗಳಾಗಿ ಲೇಖಕ ನಾ.ದಯಾನಂದ, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ಎಂದು ಕ.ಸಾ.ಪ. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ

ರೋಟರಿಯಿಂದ ಸಸಿ ನೆಡು-ಬೆಳಸು ಕಾರ್ಯಕ್ರಮಚಿಕ್ಕನಾಯಕನಹಲ್ಲಿ
,ಅ.18: ಸಸಿ ನೆಡು-ಬೆಳಸು ಕಾರ್ಯಕ್ರಮವನ್ನು ರೋಟರಿ ಹಾಗೂ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ನ ಎನ್.ಎಸ್.ಎಸ್. ಘಟಕದ ವತಿಯಿಂದ ಇದೇ 20ರ ಬುಧವಾರ ಸಂಜೆ 4-45ಕ್ಕೆ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಕಾರ್ಯದಶರ್ಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಸಮಾರಂಭವನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಪೀಠಾದ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಭಾಗವಹಿಸಲಿದ್ದು, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ 3190 ಅಸಿಸ್ಟೆಂಟ್ ಗವರ್ನರ್ ಪಿ.ಶಾಂತಿಲಾಲ್, ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲೇಖಕ ನಾ.ದಯಾನಂದ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಪ್ರಾಚಾರ್ಯ ಎ.ಎನ್.ವಿಶ್ವೇಶ್ವರಯ್ಯ, ಸಿ.ಪಿ.ಐ ರವಿಪ್ರಸಾದ್, ಸಾಮಾಜಿಕ ಅರಣ್ಯ ಇಲಾಖೆ ಆರ್.ಎಫ್.ಓ. ಪಿ.ಎಚ್.ಮಾರುತಿ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ವಕೀಲ ಸಿ.ಕೆ.ಸೀತಾರಾಮಯ್ಯ, ಲೇಖಕ ಮರಿದೇವರು ಉಪಸ್ಥಿತರಿರುವರು.
ಥಿಯೋಸಫಿಕಲ್, ರೋಟರಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ,ಅ.18: ಥಿಯೋಸಫಿಕಲ್ ಸೊಸೈಟಿ ಮತ್ತು ರೋಟರಿ ಕ್ಲಬ್ ವತಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಇದೇ 22ರ ಶುಕ್ರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಶಿಬಿರದಲ್ಲಿ ಹಳೇ ಸಾಗರ್ ಅಪೋಲೋ ಆಸ್ಪತ್ರೆಯ ಪರಿಣಿತ ವೈದ್ಯರುಗಳು ಹೃದಯ ತಪಾಸಣಾ ಚಿಕಿತ್ಸೆ, ಮತ್ತು ಇ.ಸಿ.ಜಿ, ಮತ್ತು ಇ.ಸಿ.ಎಚ್.ಒ ಗಳ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದು, ಯಶಸ್ವಿನಿ ಕಾಡರ್ು ಫಲಾನುಭವಿಗಳಿಗೆ ಕೂಡ ಉಚಿತ ಚಿಕಿತ್ಸೆ ಸೌಲಭ್ಯಗಳನ್ನು ಮತ್ತು ಅಗತ್ಯವಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಸಂಘಟನಾ ಸಂಸ್ಥೆಗಳೇ ತಮ್ಮ ಖಚರ್ಿನಲ್ಲಿ ಆ ದಿನವೇ ಕರೆದುಕೊಂಡು ಹೋಗಿ ಔಷದೋಪಚಾರಗಳನ್ನು ಕೊಡಲಾಗುವುದು ಎಂದು ಥಿಯೋಸಫಿಕಲ್ ಸೊಸೈಟಿಯ ಕಾರ್ಯದಶರ್ಿ ಸಿದ್ದರಾಮಯ್ಯ ತಿಳಿಸಿದ್ದಾರೆ

Tuesday, October 12, 2010





ಎ.ಪಿ.ಎಲ್. ಪಡಿತರದಾರರಿಗೆ ಅಕ್ಕಿ,ಗೋಧಿ ವಿತರಣೆ
ಚಿಕ್ಕನಾಯಕನಹಳ್ಳಿ,ಸೆ.12: ತಾಲೂಕಿನ ಭಾವಚಿತ್ರ ಸೆರೆ ಹಿಡಿದು ಶಾಶ್ವತ ಪಡಿತರ ಚೀಟಿ ವಿತರಿಸಿರುವ ಎ.ಪಿ.ಎಲ್. ಕಾಡರ್್ದಾರರಿಗೆ ಹಾಗೂ ಭಾವಚಿತ್ರ ಸೆರೆಹಿಡಿಯಲಾಗಿರುವ ನೆಮ್ಮದಿ ಎ.ಪಿ.ಎಲ್ ಪಡಿತರ ಚೀಟಿದಾರರಿಗೆ ವಿತರಿಸಲು ಅಕ್ಕಿ ಗೋಧಿ ಹಂಚಿಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿರುವ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿವಾರು ವಿತರಿಸಲಾಗುವುದು ಎಂದಿರುವ ಅವರು, ಎ.ಪಿ.ಎಲ್. ಪಡಿತರ ಚೀಟಿ ಒಂದಕ್ಕೆ 5 ಕೆ.ಜಿ.ಅಕ್ಕಿ, ಗೋಧಿ ವಿತರಿಸಲಿದ್ದು, ಒಂದು ಕೆ.ಜಿ.ಅಕ್ಕಿಗೆ ರೂ 9.40 ದರದಲ್ಲಿ ಹಾಗೂ ಗೋಧಿ ಒಂದು ಕೆ.ಜಿ.ಗೆ ರೂ 7.20ರ ದರದಲ್ಲಿ ಮರು ಹಂಚಿಕೆ ನೀಡಿದೆ. ಸಂಬಂಧಪಟ್ಟವರು ಪಡಿತರವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಹೆಣ್ಣು ಮಕ್ಕಳು ಸ್ವಚ್ಚತೆ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ
ಚಿಕ್ಕನಾಯಕನಹಳ್ಳಿ,ಸೆ.12: ಹೆಣ್ಣು ಮಕ್ಕಳು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ರುಜಿನಗಳಿಂದ ದೂರಾವಾಗವುದರ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಥಿರತೆ ಕಾಪಾಡಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಗುತ್ತದೆ ಎಂದು ಪುರಸಭಾ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.
ಪುರಸಭಾ ವ್ಯಾಪ್ತಿಯ ಜೋಗಿಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿ ಭಾಗ್ಯಲಕ್ಷ್ಮಿ ಫಲಾನುಭವಿಗಳ ಆರೋಗ್ಯ ತಪಾಸಣೆಯಿಂದ ಮಕ್ಕಳನ್ನು ಕಾಡುವ ಹಲವಾರು ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಬಹುದು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳು ಹೆಚ್ಚಿನ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ಸಮಯೋಚಿತ ಎಂದರು.
ಸಿ.ಡಿ.ಪಿ.ಓ. ಅನೀಸ್ ಖೈಸರ್ ಮಾತನಾಡಿ ಉಜ್ವಲ ಭವಿಷ್ಯಕ್ಕಾಗಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿನಂತಿಸಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಮಾತನಾಡಿ ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಣ್ಣು ಬ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲ ಕಾಮರ್ಿಕತೆಯಂತಹ ಸಾಮಾಜಿಕ ಪಿಡುಗುಗಳನ್ನು ದೂರ ಮಾಡಬಹುದೆಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಶ್ರೀಧರ್, ವಿಶಾಲಕ್ಷಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರತ್ನ ನಿರೂಪಿಸಿದರೆ, ಎ.ಸಿ.ಡಿ.ಪಿ.ಓ. ಪರಮೇಶ್ವರಪ್ಪ ಸ್ವಾಗತಿಸಿದರೆ, ರಾಧಮ್ಮ ವಂದಿಸಿದರು.

Friday, October 8, 2010

ಚುನಾಯಿತ ಸಂಘಕ್ಕೆ ಮಾತ್ರ ಅಧಿಕಾರ: ಜಿಲ್ಲಾಧ್ಯಕ್ಷ
ಚಿಕ್ಕನಾಯಕನಹಳ್ಳಿ,ಅ.08: ಕೇವಲ ಕೈಲಾಗದವರು ಸ್ವಯಂ ಘೋಷಿತ ಶಿಕ್ಷಕರ ಸಂಘ ರಚಿಸಿಕೊಂಡಿದ್ದು ಅವರ ಸ್ವಂತ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲದಿರುವಾಗ ಶಿಕ್ಷಕರ ಸಮಸ್ಯೆ ಬಗೆಹರಿಸಲು ಹೇಗೆ ಸಾದ್ಯ ಎಂದು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಪ್ರಶ್ನಿಸಿದ್ದಾರೆ.
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬುದ್ದಿವಂತ ಶಿಕ್ಷಕರು ಚುನಾಯಿಸಿ ಅಧಿಕಾರಕ್ಕೆ ಶಿಕ್ಷಕರ ಸಂಘ ಒಡೆದು ಸಂಘದ ಶಿಕ್ಷಕರನ್ನು ಬೇರೆ ಕಡೆ ಸೆಳೆಯಲು ಸಾದ್ಯವಿಲ್ಲವೆಂದು ಮತ್ತು ನಾಲ್ಕು ತಿಂಗಳಿಂದ ಒದ್ದಾಡಿ ಸಂಘದ ಉದ್ಘಾಟನೆಗೆ ಕೇವಲ 88ಜನ ಶಿಕ್ಷಕರು ಬಂದಿದ್ದರು ಆದರೆ ಚುನಾಯಿತ ಸಂಘದ ಸಂತೋಷ ಕೂಟದ ಸಮಾರಂಭಕ್ಕೆ ಹಾಗೂ ಸಂಘಟನೆಯ ಸಂಘಕ್ಕೆ ಬಲಯುತವಾಗಿ ತಾಲೂಕಿನಿಂದ ಶಿಕ್ಷಕರೆಲ್ಲರೂ ಸೇರಿ 800 ಜನ ಶಿಕ್ಷಕರು ಸೇರಿದ್ದಾರೆ, ಇಷ್ಟು ಜನ ಶಿಕ್ಷಕರು ಸೇರಿರುವುದೇ ನಮ್ಮ ಶಿಕ್ಷಕರ ಸಂಘಟನೆಗೆ ಸಾಕ್ಷಿಯಾಗಿದ್ದು ತಾಲೂಕಿನ ಎಲ್ಲಾ ಶಿಕ್ಷಕರು ಬಹಳ ಅಭಿಮಾನದಿಂದ ನಮ್ಮ ಸಂಘಕ್ಕೆ ಸಹಕಾರ ನೀಡುತ್ತಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅಭಾರಿಯಾಗಿ ಸದಾ ಸೇವೆ ಮಾಡಲು ಸಿದ್ದನಿದ್ದೇನೆ ಎಂದ ಅವರು ರಾಜ್ಯದಿಂದ ಬಂದ ವಿರೋಧಿ ಬಣದ ರಮಾದೇವಿ ಸೋತು ಸುಣ್ಣವಾಗಿ ನೆಲೆ ಇಲ್ಲದೆ ಒದ್ದಾಡುತ್ತಿದ್ದಾರೆ ಅವರ ಸಂಘಕ್ಕೆ ಮಾನ್ಯತೆ ಕೊಡಬೇಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ತಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ಚುನಾವಣೆಯಿಂದ ಗೆದ್ದ ಸಂಘಕ್ಕೆ ಮಾನ್ಯತೆ ಇದ್ದು ಆ ಸಂಘ ಮಾತ್ರ ಶಿಕ್ಷಕರ ಬೇಕು ಬೇಡಿಕೆ ಈಡೇರಿಸುವುದಕ್ಕೆ ಸಾಧ್ಯ, ದಿನಕ್ಕೆ ಸಾವಿರ ಸಂಘ ಹುಟ್ಟುತ್ತವೆ ಸಾವಿರ ಸಂಘ ಸಾಯುತ್ತವೆ ನಮ್ಮ ಸಂಘ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಕುಣಿಗಲ್ ತಾಲೂಕಿನ ರಾಜ್ಯ ಪದಾಧಿಕಾರಿ ನಾಗರಾಜು ಮಾತನಾಡಿ ಹೊಸ ಸಂಘ ಪ್ರಾರಂಭ ಮಾಡುತ್ತಿರುವ ರಮಾದೇವಿ, ಗೋಪಿನಾಥ್, ಬಿ.ಎಲ್.ಬಸವರಾಜು ನಮ್ಮ ಸಂಘದಲ್ಲಿ ಸೋತು ಸುಣ್ಣವಾಗಿ ಭ್ರಷ್ಟಾಚಾರ ಮಾಡಿ ನಿಲ್ಲಲು ನೆಲೆ ಇಲ್ಲದೆ ಹೊಸ ಸಂಘಕ್ಕೆ ಹೋಗಿದ್ದಾರೆ ಎಂದ ಅವರು ಮಾಜಿ ಅಧ್ಯಕ್ಷರಾದ ಗೋಪಿನಾಥ್ 3ಸಾರಿ ಅಮಾನತ್ತುಗೊಂಡಿದ್ದರು ಅಂತವರು ಶಿಕ್ಷಕರನ್ನು ಕಾಪಾಡಲು ಹೇಗೆ ಸಾಧ್ಯವಿಲ್ಲ ಎಂದರು.
ಜಿಲ್ಲಾ ಸಂಘಟನಾ ಕಾರ್ಯದಶರ್ಿ ಚುಡಾಮಣಿ ಮಾತನಾಡಿ ತಿಳಿಗೇಡಿಗಳು ಮಾಡುವ ಸಂಘಕ್ಕೆ ಬೆಲೆ ಇಲ್ಲ, ಅಧ್ಯಕ್ಷರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಶಿಕ್ಷಕರು ಅವರ ಜೊತೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಘುನಾಥ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ರಾಜ್ಯ ಶಿಕ್ಷಕ ಸಂಘದ ಉಪಾಧ್ಯಕ್ಷ ಶೋಭಾ, ಷಣ್ಮುಖ, ತಿಮ್ಮಯ್ಯ, ರಾಮಚಂದ್ರಯ್ಯ, ನರಸಿಂಹಮೂತರ್ಿ, ಗೊರವಣ್ಣ, ಎನ್.ಪ್ರಕಾಶ್, ಜಯರಾಮಯ್ಯ, ಸಿದ್ದರಾಮಣ್ಣ, ಪುಟ್ಟರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾರದಮ್ಮ,ವಿಜಯಲಕ್ಷ್ಮಮ್ಮ ಪ್ರಾಥರ್ಿಸಿದರೆ, ಶಶಿಧರ್ ಎಸ್,ಎನ್ ಸ್ವಾಗತಿಸಿ, ಪಲ್ಲಕ್ಕಿ ಬಸವರಾಜು ನಿರೂಪಿಸಿ, ನಟರಾಜು ವಂದಿಸಿದರು.

ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಅ.08: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 12ರ ಮಂಗಳವಾರ ಬೆಳಿಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಸದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಡಾ.ಎ.ಎಚ್.ಶಿವಯೋಗಿಸ್ವಾಮಿ, ವೈ.ವಿ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕುಸುಮ ಜಗನ್ನಾಥ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಟಿ.ಗಂಗಾಧರಯ್ಯ, ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.






Monday, October 4, 2010


ರಿಯಲ್ ಎಸ್ಟೇಟ್ ಏಜಂಟರಾಗಿರುವ ಶಿಕ್ಷಕರ ಸಂಘ

ಪದಾಧಿಕಾರಿಗಳು

ಚಿಕ್ಕನಾಯಕನಹಳ್ಳಿ,ಅ.04: ರಾಜ್ಯ ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದು, ಸಂಘದ ಪದಾಧಿಕಾರಿಗಳು ಏಜೆಂಟರ್ಂತೆ ವತರ್ಿಸುತ್ತಿದ್ದಾರೆ ಎಂದು ರಾಜ್ಯ ಸ.ಪ್ರಾ.ಶಾ.ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಆರೋಪಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸ್ವಾಥರ್ಿಗಳು, ಸಂಘಟನೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಎಂದರಲ್ಲದೆ, ತಮ್ಮ ಲಾಭಕ್ಕಾಗಿ ಅಮಾಯಕ ಶಿಕ್ಷಕರ ಗುಂಪುಗಳನ್ನು ಕಟ್ಟಿಕೊಂಡು ಹಲವು ವಿಧದ ಆಮಿಷಗಳನ್ನು ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.

ಸಂಘಟನೆಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹೊರತು ಸಾಮೂಹಿಕವಾಗಿ ಶಿಕ್ಷಕರಿಗೆ ಆಗುವ ಅನುಕೂಲಗಳ ಕಡೆ ಗಮನಕೊಡುತ್ತಿಲ್ಲ, ನಮ್ಮ ರಾಜ್ಯದ ಶಿಕ್ಷಕರಿಗೂ ಪಕ್ಕದ ಆಂಧ್ರ, ತಮಿಳು ನಾಡು ಶಿಕ್ಷಕರುಗಳಿಗೂ ಮೂಲ ವೇತನದಲ್ಲಿ ಭಾರಿ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕರ್ಾರದಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವ ಸಂಘ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರ ಸಂಘದ ಸದಸ್ಯತ್ವಕ್ಕಾಗಿ ನೀಡುವ ಹಣವನ್ನು 20ರೂ ನಿಂದ 50ರೂಗೆ ಏರಿಸಿರುವುದರಿಂದ ಸಂಗ್ರಹವಾಗುವ ಹಣವನ್ನು ರಾಜ್ಯ ಪದಾಧಿಕಾರಿಗಳು ತಮ್ಮ ಖಾಸಗಿ ವಿಲಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಅವರ ದುರ್ಬಲತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಒಂದು ಸಂಘವು ಎಡವಿದರೆ, ಆ ತಪ್ಪನ್ನು ತಿದ್ದಲು ಇನ್ನೊಂದು ಸಂಘದ ಅವಶ್ಯಕತೆ ಇದೆ ಎಂದರು.

ರಾಜ್ಯ ಸ.ಪ್ರಾ.ಶಾ.ಶಿ.ಶಿ ಸಂಘದ ಕಾರ್ಯದಶರ್ಿ ಶಂಕರಮೂತರ್ಿ ಮಾತನಾಡಿ ಗ್ರಾಮ, ಪಟ್ಟಣಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ, ಈ ವಿಷಯವನ್ನು 10 ವರ್ಷಗಳಿಂದಲೂ ಸಕರ್ಾರಕ್ಕೆ ಹೇಳಿದರೂ ಯಾವ ಪ್ರಯೋಜನವು ಆಗುತ್ತಿಲ್ಲ, ಶಿಕ್ಷಕರು ನಿಮಗೆ ನೀವೆ ನಾಯಕರಾಗಿ ನಮ್ಮ ಸಂಘದ ಜೊತೆ ಕೈಜೋಡಿಸಿದರೆ ನಾವು ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತುತ್ತೇವೆ ಎಂದರಲ್ಲದೆ, ನಮ್ಮ ಸಂಘವು ನಿಸ್ವಾರ್ಥ ಸೇವೆ ಮೂಲಕ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಸಮಾರಂಭದಲ್ಲಿ ಜಿ,ಮು,ಶಿ,ಸಂಘದ ಅಧ್ಯಕ್ಷ ಹೆಚ್.ಎನ್ ಗೋಪಿನಾಥ್, ತಾ,ಸ,ಪ್ರಾ,ಶಾ,ಶಿ,ಶಿ, ಸಂಘದ ಅಧ್ಯಕ್ಷ ಬಿ.ಎಲ್.ಬಸವರಾಜು, ಮುಖ್ಯ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷ ಕೆ.ರಾಜಯ್ಯ, ತಾ,ಸ,ಪ್ರಾ,ಶಾ,ಶಿ,ಶಿ ಸಂಘದ ಗೌರವಾಧ್ಯಕ್ಷ ಎಂ ಗಂಗಾಧರಯ್ಯ, ಉಪಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದಶರ್ಿ ಬೆಳಗುಲಿ ವೆಂಕಟೇಶ್, ಎನ್.ಪಿ ಕುಮಾರಸ್ವಾಮಿ, ರುಕ್ಮಾಂಗದ, ಜಿ.ತಿಮ್ಮಯ್ಯ, ಜಿ.ರಂಗಯ್ಯ, ಶಿವಕುಮಾರ್, ಕೆಂಬಾಳ್ರಮೇಶ್, ಸಿ.ಜಿ.ಶಂಕರ್, ಚಿಕ್ಕಣ್ಣ ಉಪಸ್ಥಿತರಿದ್ದರು.

ಅ.5ಮತ್ತು 6ರಂದು ಸಮುದಾಯದತ್ತ ಶಾಲೆ

ಚಿಕ್ಕನಾಯಕನಹಳ್ಳಿ,ಅ.04: ತಾಲೂಕು ಸಕರ್ಾರಿ ಶಾಲೆಗಳ ಮೊದಲನೇ ಸುತ್ತಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇದೇ 5 ಮತ್ತು 6ರಂದು ನಡೆಯಲಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ಪ್ರೌಡಶಾಲೆ ಶಿಕ್ಷಕರು, ಹಾಗೂ ಪ್ರೌಡಶಾಲೆ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೇಲ್ವಿಚಾರಕರಾಗಿ ಭಾಗವಹಿಸಲಿದ್ದು ಅಂದು ನಿಯಮಾನುಸಾರ ವೇಳಾ ಪಟ್ಟಿಗನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.


Sunday, October 3, 2010

Saturday, October 2, 2010

Friday, October 1, 2010


ಆಯುವರ್ೇದ ಔಷದಿ ರೋಗನಿರೋದಕ ಶಕ್ತಿಯನ್ನು ಹೊಂದಿದೆ: ನ್ಯಾಯಾದೀಶೆ ಎನ್.ಶೀಲಾ
ಚಿಕ್ಕನಾಯಕನಹಳ್ಳಿ,ಅ.01: ಅನೈರ್ಮಲ್ಯದಿಂದ ದೂರವಿದ್ದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ಚದಿಂದ ಕಾಪಾಡಿಕೊಂಡರೆ ಚಿಕೂನ್ಗುನ್ಯ, ಡೆಂಗೆ, ಎಚ್1ಎನ್1ನಂತಹ ಭಯಾನಕಾರಕ ರೋಗಗಳು ಸುಳಿಯುವುದಿಲ್ಲ ಎಂದು ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ ಹೇಳಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಆಯುಷ್ ಇಲಾಖೆ, ಸಕರ್ಾರಿ ಆಯುವರ್ೇದ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಡೆದ ಆಯುಷ್ ಜಾಗೃತಿ ಶಿಬಿರ ಹಾಗೂ ಔಷದಿ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಆಯುವರ್ೇದ ಔಷದಿಗಳಲ್ಲಿ ರೋಗನಿರೋಧಕ ಶಕ್ತಿಯಿದ್ದು ಹಲವು ಕಾಯಿಲೆಗಳನ್ನು ಆಯುವರ್ೇದ ಔಷದಿಗಳಿಂದ ಪರಿಹರಿಸಬಹುದು ಎಂದ ಅವರು ಜಿಲ್ಲಾ ಆಯುಷ್ ಇಲಾಖೆಯವರು ನಡೆಸುತ್ತಿರುವ ಈ ರೀತಿಯ ಸಮಾರಂಭವನ್ನು ಪ್ರತಿ ಹಳ್ಳಿಯಲ್ಲೂ ನಡೆಸಿ ಗ್ರಾಮಸ್ಥರೇ ಬೆಳಸುವ ಗಿಡಮೂಲಿಕೆಗಳಿಂದ ರೋಗವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂದು ತಿಳಿಸಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಹೊನ್ನತ್ತಿ ಡಿ.ರಾಮರಾವ್ ಮಾತನಾಡಿ ಅಮೃತಬಳ್ಳಿ, ತುಳಸಿಯಂತಹ ಎಲೆ ಸೇವಿಸುವುದರಿಂದ ಪ್ರಾಣವಾಯು ಮತ್ತು ಹಲವು ಕಾಯಿಲೆಗಳಿಂದ ನರಳುತ್ತಿರುವ ಜನರನ್ನು ಕಾಯಿಲೆಗಳಿಂದ ಪರಿಹರಿಸುವುದೇ ಆಯುಷ್ ಇಲಾಖೆ ಉದ್ದೇಶ ಎಂದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ವಕೀಲರಾದ ಸೀತಾರಾಮಯ್ಯ, ಸಿ.ರಾಜಶೇಖರ್. ವೈದ್ಯಾಧಿಕಾರಿಗಳಾದ ಹೆಚ್.ಸಂಜೀವಮೂತರ್ಿ, ಶ್ರೀಧರ್, ಸಿ.ದೇವೇಂದ್ರಪ್ಪ ಯೋಗ ಶಿಕ್ಷಕ ಭುವನಸುಂದರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಕೀಲ ದಿಲೀಪ್ ಸ್ವಾಗತಿಸಿ, ಹನುಮಂತಯ್ಯ ನಿರೂಪಿಸಿದರು.

ಶಿಕ್ಷಕರ ಬೇಡಿಕೆ ದಿನಾಚರಣೆ ಆಚರಿಸಲು ಕರೆ
ಚಿಕ್ಕನಾಯಕನಹಳ್ಳಿ,ಅ.01: ಪ್ರಾಥಮಿಕ ಶಾಲಾ ಶಿಕ್ಷಕರು ಶಾಲಾ ಹಂತದಲ್ಲಿ 10 ಅಂಶಗಳ ಪಟ್ಟಿಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿ ಅಕ್ಟೋಬರ್ 5ರಂದು ಶಿಕ್ಷಕರ ಬೇಡಿಕೆ ದಿನಾಚರಣೆಯಾಗಿ ಆಚರಿಸಲು ತಾ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಕರ್ಾರದ ಗಮನ ಸೆಳೆಯಲು ಶಿಕ್ಷಕರ ರಚಿಸಿರುವ ಬೇಡಿಕೆಳೆಂದರೆ 200ರೂ ವಿಶೇಷ ವೇತನವನ್ನು ವಿಲೀನಗೊಳಿಸಿಬೇಕು, ಮುಖ್ಯೋಪಾಧ್ಯಾಯರಿಗೆ ಆಯ್ಕೆ ದಜರ್ೆಯ ವೇತನ ಶ್ರೇಣಿ ನೀಡಬೇಕು. ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಾಗಿ ಬಂದ ಶಿಕ್ಷಕರಿಗೆ 10.15.20 ವರ್ಷದ ಆಥರ್ಿಕ ಸೌಲಭ್ಯ ನೀಡಬೇಕು, ಸಿ.ಆರ್.ಪಿ, ಬಿ.ಆರ್.ಪಿ ಹುದ್ದೆಗಳನ್ನು ಮುಖ್ಯೋಪಾಧ್ಯಾಯರ ಹುದ್ದೆಗಳನ್ನಾಗಿ ಪರಿಗಣಿಸಿ, ಬಿ.ಎ, ಬಿ.ಇಡಿ, ಆದ ಶಿಕ್ಷಕರಿಗೆ ಈಗ ನೀಡುವ ಬಡ್ತಿ ಪ್ರಮಾಣವನ್ನು 50ರಿಂದ 75ಕ್ಕೆ ಹೆಚ್ಚಿಸಿ ಮತ್ತು ಪ್ರೌಡಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡವಾಗ ಶೇ.10ರಷ್ಟು ಮೀಸಲಾತಿ ನೀಡಬೇಕು, ಸಮಾನ ಶಾಲಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು.
ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಅವಧಿಯನ್ನು ಗುತ್ತಿಗೆ ಶಿಕ್ಷಕರ ಗುತ್ತಿಗೆ ಅವಧಿಯನ್ನು ನಿರಂತರ ಸೇವೆ ಎಂದು ಪರಿಗಣಿಸಿ ಆಥರ್ಿಕ ಸೌಲಭ್ಯವನ್ನು ಒಳಗೊಂಡು ಎಲ್ಲಾ ಸೌಲಭ್ಯ ನೀಡಬೇಕು, ನಲಿ ಕಲಿ ಯೋಜನೆಯನ್ನು 3ಮತ್ತು 4ನೇ ತರಗತಿಗೆ ವಿಸ್ತರಿಸಬಾರದು. ಸೇವಾ ಜೇಷ್ಠತೆಯನ್ನು ದೈಹಿಕ ಶಿಕ್ಷಕರಿಗೆ, ಉದರ್ು ಶಿಕ್ಷಕರಿಗೆ ಶಿಕ್ಷಣ ಸಂಯೋಜಕ ಹುದ್ದೆಗಳನ್ನು ನೀಡಬೇಕು ಮತ್ತು ಎಲ್ಲಾ ರೀತಿಯ ಬಡ್ತಿ ಅವಕಾಶಗಳನ್ನು ನೀಡಬೇಕು. ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ನೀಡಿ, ಸಕರ್ಾರದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಈ ಹಿಂದಿನ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು. ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಹೊಸದಾಗಿ ರಚಿತವಾದ ಸಂಘಗಳು ಯಾವುದೇ ದೇಯೋದ್ದೇಶಗಳನ್ನು ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಶಿಕ್ಷಕರ ಸಮಸ್ಯಗಳ ಬಗ್ಗೆ ಹೆಚ್ಚಿನ ಸಲಹೆ ಮರ್ಗದರ್ಶನ ಪಡೆಯಲು, ಚಚರ್ಿಸಲು ಶ್ರೀ ದುಗರ್ಾದೇವಿ ಬೆಟ್ಟ ಹರೇನಹಳ್ಳಿ ಗೇಟ್ಹತ್ತಿರ ಬೆಳಗ್ಗೆ 10ಕ್ಕೆ ತಾಲೂಕಿನ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಲಾಗಿದೆ ಎಂದು ತಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ ಕೋರಿದ್ದಾರೆ.