Friday, April 23, 2010


ಜನರ ಮನ ಸೆಳೆದ ಗುರು ಕಿರಣ್ ನೃತ್ಯ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಏ.23: ಸುಗಮ ಸಂಗೀತದಿಂದ ಪಾಶ್ಚಿಮಾತ್ಯ ಸಂಗೀತದ ವರೆಗೆ, ಭರತ ನಾಟ್ಯದಿಂದ ಪಾಪ್ ಡ್ಯಾನ್ಸ್ ವರಗೆ, ಸ್ಟಾರ್ ವ್ಯಾಲ್ಯೂ ಕಲಾವಿದರ ದಂಡೇ ಇಲ್ಲಿಗೆ ಆಗಮಿಸಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ತಾಲೂಕಿನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಉಂಟು ಮಾಡಿದೆ.


ತಾತಯ್ಯನವರ 50 ನೇ ವರ್ಷದ ಉರಸ್ ಅಂಗವಾಗಿ ಸಂಗೀತ ನಿದರ್ೇಶಕ ಗುರು ಕಿರಣ್ ರವರ ತಂಡ ಇಲ್ಲಿನ ಜನರಿಗೆ ಒದಗಿಸಿದ ಮನರಂಜನೆಯನ್ನು 12 ಸಾವಿರಕ್ಕೂ ಹೆಚ್ಚಿನ ರಸಿಕರು ಮಳೆಯ ನಡುವೆಯೂ ರಾತ್ರಿ 2.30ರವರೆಗೆ ವೀಕ್ಷಿಸಿದೆ.ಗುರು ಕಿರಣ್ ನೇತೃತ್ವದ ತಂಡ ನೀಡಿದ ನೃತ್ಯ ಹಾಗೂ ಶಮಿತಾ ಮಲ್ನಾಡ್, ಜೋಗಿ ಖ್ಯಾತಿಯ ಸುನೀತ, ಲಕ್ಷ್ಮಿ ಯವರ ಹಾಡುಗಾರಿಕೆಗೆ ಇಲ್ಲಿನ ಜನ ತಲೆ ತೂಗಿದ್ದಾರೆ. ಮಿಮಿಕ್ರಿ ದಯಾನಂದ್ ರವರ ಕಜಗುಳಿ ಜನರಿಗೆ ಮನರಂಜನೆಯನ್ನು ನೀಡಿತು.ಜಗಮಗಿಸುವ ರಂಗ ಮಂಟಪದಲ್ಲಿ ನವೀನ ರೀತಿಯ ನೆರಳು ಬೆಳಕಿನ ನಡುವೆ ನಡೆದ ಕಾರ್ಯಕ್ರಮ ರಸಿಕರ ಮನಸೂರೆಗೊಂಡಿದೆ.ಈ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಸಂಗೀತ ನಿದರ್ೇಶಕ ಗುರುಕಿರಣ್, ಗಾಯಕರುಗಳಾದ ಶಮಿತಾ ಮಲ್ನಾಡ್, ಚೇತನ್ ಕುಮಾರ್, ಸುನೀತ, ನಿರೂಪಕಿ ಅನುಶ್ರೀ ಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜುರವರನ್ನು ಸನ್ಮಾನಿಸಲಾಯಿತು.


ಸಾಂಸ್ಕೃತಿಕ ವಾತಾವರಣದ ಮೆರಗು: ಇತ್ತೀಚಿಗೆ ಇಲ್ಲಿನ ಜನರು ಡಾ.ಸಿ. ಅಶ್ವಥ್ ರವರ ಸುಗಮ ಸಂಗೀತದಿಂದ ಆರಂಭಗೊಂಡು ರಾಜೇಶ್ ಕೃಷ್ಣನ್, ಗುರು ಕಿರಣ್, ಡಾ.ಸಂಜಯ್ ರವರ ಭರತ ನಾಟ್ಯದ ವರೆಗೆ, ಯುವ ಗಾಯಕರುಗಳಾದ ಅಶ್ವಿನ್ ಶಮರ್ಾ, ಮದ್ವೇಶ್ ಭಾರಧ್ವಜ್, ಅನಿರುಧ್, ಸಹನ, ಹಂಸಿಣಿ ವರೆಗಿನ ಯುವ ಪ್ರತಿಭೆಗಳ ಸಂಗೀತವನ್ನು ಇಲ್ಲಿಯ ಜನರು ಆಸ್ವಾದಿಸಿದ್ದಾರೆ.ಕನ್ನಡವೇ ಸತ್ಯ ಕಾರ್ಯಕ್ರಮದ ಮೂಲಕ ಡಾ.ಸಿ.ಅಶ್ವಥ್, ಉರಸ್ನ ಅಂಗವಾಗಿ ರಾಜೇಶ್ ಕೃಷ್ಣನ್, ಚಿಣ್ಣರ ಹಬ್ಬದ ಅಂಗವಾಗಿ ಅಶ್ವಿನ್ ಶರ್ಮ ಸೇರಿದಂತೆ ಝೀ ಟಿ.ವಿ.ಯ ಯುವ ಕಲಾವೃಂದವರಿಂದ ನೃತ್ಯ ಕಾರ್ಯಕ್ರಮ ರಸಿಕರ ಮನ ತಣಿದಿದೆ.


ಗ್ರಾ.ಪಂ.ಚುನಾವಣೆ: 5 ದಿನಕ್ಕೆ 789 ನಾಮಪತ್ರಗಳ ಸಲ್ಲಿಕೆ


ಚಿಕ್ಕನಾಯಕನಹಳ್ಳಿ,ಏ.23: ತಾಲೂಕಿನ 28 ಗ್ರಾ.ಪಂ.ಗಳಲ್ಲಿ ಇಲ್ಲಿಯವರೆಗೆ 789 ಅಜರ್ಿಗಳನ್ನು ಸಲ್ಲಿಸಿದ್ದು ಇದರಲ್ಲಿ 23ರ ಶುಕ್ರವಾರ ಒಂದೇ ದಿನ 560 ನಾಮ ಪತ್ರಗಳು ಸಲ್ಲಿಕೆ ಆಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.


ನಾಮ ಪತ್ರ ಸಲ್ಲಿಸಲು ಆರಂಭಗೊಂಡ ಮೊದಲ ದಿನವಾದ ಹತ್ತೊಂಭತ್ತರಂದು ಮೂರು ಅಜರ್ಿಗಳು ಮಾತ್ರ ಸಲ್ಲಿಕೆಯಾಗಿದ್ದು, 20 ರಂದು 9 ಸಲ್ಲಿಕೆಯಾಗಿದ್ದರೆ, 21 ರಂದು 41 ನಾಮಪತ್ರಗಳು ಸಲ್ಲಿಕೆಯಾಗಿದೆ, 22 ರಂದು 176 ನಾಮಪತ್ರಗಳು, 23 ರಂದು 560 ನಾಮ ಪತ್ರಗಳು ಸಲ್ಲಿಕೆಯಾಗಿದ್ದು 28 ಗ್ರಾ.ಪಂ.ಗಳ ಪೈಕಿ ಅತಿ ಹೆಚ್ಚು ಹುಳಿಯಾರಿನಲ್ಲಿ ಒಂದೇ ದಿನ 52 ನಾಮ ಪತ್ರಗಳು ಸಲ್ಲಿಕೆಯಾಗಿದ್ದರೆ, ಬರಗೂರಿನಲ್ಲಿ 7 ನಾಮಪತ್ರಗಳು ಸಲ್ಲಿಕೆಯಾಗಿವೆ.


ಗಣತಿ ಸಹಾಯ ವಾಣಿ: ತಾಲೂಕಿನಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಯ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದವರು ಸಹಾಯ ವಾಣಿವನ್ನು ಸಂಪಕರ್ಿಸ ಬಹುದು, ತಾಲೂಕು ಕಛೇರಿ ದೂರವಾಣಿ ಸಂಖ್ಯೆ: 267242, ಗ್ರಾಮಾಂತರ ವಿಭಾಗಕ್ಕೆ ಹೆಚ್ಚುವರಿ ಚಾಜರ್್ ಅಧಿಕಾರಿ ಕೆ.ವಿ.ಕುಮಾರ್ ರವರ ಮೊಬೈಲ್ ಸಂಖ್ಯೆ: 9448747612, ಜನಗಣತಿ ಶಾಖೆಯ ಎಚ್.ಎಸ್.ಗುರುಸಿದ್ದಪ್ಪ ನವರ ಮೊಬೈಲ್ ಸಂಖ್ಯೆ 9844624098 ಇಲ್ಲಿ ಸಂಪಕರ್ಿಸ ಬಹುದು.


ಸ್ವತಂತ್ರ ಹೋರಾಟಗಾರನ ನಿಧನ: ಶೆಟ್ಟೀಕೆರೆಯ ಸ್ವತಂತ್ರ ಹೋರಾಟಗಾರ ಎಸ್.ಸಿ.ರಾಮಲಿಂಗಪ್ಪ(85) ನಿಧನರಾಗಿದ್ದಾರೆ. ಇವರು ಸ್ವತಂತ್ರ ಹೋರಾಟದಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದು ಆರು ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದರು.


ಇವರು ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.


ಮೃತರ ಗೃಹಕ್ಕೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಭೇಟಿ ನೀಡಿ ಸಕರ್ಾರದ ವತಿಯಿಂದ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದ್ದಾರೆ. ಶಾಸಕ ಸಿ.ಬಿ.ಸುರೇಶ್ ಬಾಬು ರಾಮಲಿಂಗಪ್ಪನವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.







ಸಾಲದ ಮೇಲಿನ ಬಡ್ಡಿ ಇಳಿಕೆ


ಚಿಕ್ಕನಾಯಕನಹಳ್ಳಿ,ಏ.23: ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನಿಂದ ನೀಡುವ ವಿವಿಧ ಸಾಲಗಳ ಬಡ್ಡಿದರವನ್ನು ಕಡಿಮೆ ಮಾಡಿದೆ ಮತ್ತು ನಿತ್ಯನಿಧಿ ಠೇವಣಿಯನ್ನು ಆರು ತಿಂಗಳ ಅವಧಿಗೆ ನಿಗದಿಮಾಡಲಾಗಿದೆ ಎಂದು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಡಿಮೆ ಬಡ್ಡಿ ಮಾಡಿರುವ ಸಾಲಗಳಲ್ಲಿ ಶೇ.15ರಷ್ಟಿದ್ದ ಅಡಿಕೆ ದಾಸ್ತಾನು ಸಾಲವನ್ನು ಶೇ.14 ಇಳಿಸಿದೆ, ಶೇ.13ರಷ್ಟಿದ್ದ ಆಭರಣ ಸಾಲವನ್ನು ಶೇ.10ರಷ್ಟಕ್ಕೆ, ವಾಹನಸಾಲವನ್ನು 13ರಷ್ಟಕ್ಕೆ ಮತ್ತು ಶೇ.16ರಷ್ಟಿದ್ದ ನಗದು ಹಾಗು ವ್ಯಾಪಾರ ಸಾಲವನ್ನು ಶೇ.14ರಷ್ಟಕ್ಕೆ ಇಳಿಸಲಾಗಿದ್ದು ಷೇರುದಾರರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆಯಲು ಕೋರಿದ್ದಾರೆ.