Friday, September 30, 2016



ಸಿಡಿಪಿಓ ಕಛೇರಿಯಿಂದ ಮಕ್ಕಳಿಗೆ ಆಧಾರ್ ನೊಂದಣಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಆಧಾರ್ ನೊಂದಣಿ ಕಾರ್ಯದಿಂದ ತಾಲ್ಲೂಕಿನ ಮಕ್ಕಳ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಈ ಮೂಲಕ ಆರಂಭದಿಂದಲೇ ಮಕ್ಕಳ ದೊರಕುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಪ್ಪಯ್ಯ ಹೇಳಿದರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ್ ನೊಂದಣಿ ದೇಶದ ಯಾವುದೇ ಮೂಲೆಯಲ್ಲಿದ್ದರು ಇಂತಹ ವ್ಯಕ್ತಿಯೇ ಎಂಬುದು ಪತ್ತೆಯಾಗುವ ಸಾಧನ, ಈ ನೊಂದಣಿಯಿಂದ ಸಕರ್ಾರಿ ಸೌಲಭ್ಯಗಳಿಗೂ ಸಹಾಯವಾಗುತ್ತದೆ ಇದನ್ನು ಪ್ರತಿ ಮಗುವು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ಮಾತನಾಡಿ, ಸಕರ್ಾರ ನೀಡಿರುವ ಟ್ಯಾಬ್ ಮೂಲಕ ಮಕ್ಕಳ ನೊಂದಣಿ ಮಾಡುವುದರಿಂದ ಸಮಗ್ರ ವರದಿ ಲಭ್ಯವಾಗುತ್ತದೆ, ಈ ನೊಂದಣಿಯಿಂದ ಯಾವುದೇ ಮಾಹಿತಿಯ ಕೊರತೆ ಉಂಟಾಗಲಾರದು ಎಂದರು. 
ಈ ಸಂದರ್ಭದಲ್ಲಿ ಮಕ್ಕಳಿಂದ ಹೆಬ್ಬೆಟ್ಟು ಗುರುತು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಚಾರಕಿ ಅನುಸೂಯಮ್ಮ, ಮಹದೇವಮ್ಮ, ಲಕ್ಷ್ಮಯ್ಯ, ಶಾರದಮ್ಮ, ಪ್ರಮೀಳಾ, ಚೌಗತಿ ಹಾಜರಿದ್ದು ನೊಂದಣಿ ಕಾರ್ಯ ನೆರವೇರಿಸಿದರು.


ಎಪಿಎಂಸಿ ರೈತ ಸಂಜೀವಿನಿ ಯೋಜನೆ ವತಿಯಿಂದ ಮೃತ

ರೈತನ ಕುಟುಂಬಕ್ಕೆ 1ಲಕ್ಷ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, : ಮೃತ ರೈತ ಕುಟುಂಬಕ್ಕೆ ಸಕರ್ಾರ ನೀಡುವ ಪರಿಹಾರದ ಹಣವನ್ನು ಬದುಕು ಕಟ್ಟಿಕೊಳ್ಳಲು ತೊಡಗಿಸಿಕೊಂಡು ಜೀವನವನ್ನು ಸದೃಡ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜು ಹೇಳಿದರು.
ಕೆಲವು ತಿಂಗಳ ಹಿಂದೆ ಚುಂಗನಹಳ್ಳಿ ಗ್ರಾಮದ ರೈತ ಮಧುಸೂದನ್ ಟ್ಯಾಕ್ಟರ್ನಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುವ ವೇಳೆ ಟ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಸೂಕ್ತ ದಾಖಲಾತಿ ಪಡೆದು ಸಕರ್ಾರಕ್ಕೆ ವರದಿ ಸಲ್ಲಿಸಿದ ಪ್ರಸ್ಥಾವನೆಯಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಶಾರಾಣಿ ರವರಿಗೆ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ.ರೂ ಮೊತ್ತದ ಚೆಕ್ ನೀಡಲಾಗಿದೆ ಈ ಹಣವನ್ನು ನಿಮ್ಮ ಆಥರ್ಿಕ ಭದ್ರತೆಗೆ ತೊಡಗಿಸಿಕೊಳ್ಳುವಂತೆ ಹೇಳಿದರು. 
ಎ.ಪಿ.ಎಂ.ಸಿ ಕಾರ್ಯದಶರ್ಿ ಶ್ರೀನಿವಾಸ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ರೈತ ಭಾಗಿಯಾಗಿದ್ದಾಗ ಅಪಘಾತ ಅಥವಾ ಸಾವು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ವಸ್ತು ಸ್ಥಿತಿಯ ದಾಖಲೆ ಸಂಗ್ರಹಿಸಿ ರೈತ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ಹಣ ನೀಡಲಾಗುತ್ತದೆ ಇದರಿಂದ ಸಂಕಷ್ಟಕ್ಕೊಳಗಾದವರ ಆಥರ್ಿಕ ಸಮಸ್ಯೆ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜು, ಈಶಣ್ಣ ಹಾಜರಿದ್ದರು.