Tuesday, May 31, 2016


ಮಕ್ಕಳ ಶಿಕ್ಷಣಕ್ಕೆ ಪೋಷಕರು ಪ್ರೋತ್ಸಾಹಿಸಿ
ಚಿಕ್ಕನಾಯಕನಹಳ್ಳಿ,ಮೇ.31 : ಸಕರ್ಾರಿ ಶಾಲೆಗಳ ಮಕ್ಕಳಿಗಾಗಿ ಸಕರ್ಾರ ಬಿಸಿಯೂಟ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ರೂಪಿಸುವ ಮೂಲಕ ವಿದ್ಯಾಥರ್ಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತಿದೆ, ಈ ಕಾರ್ಯಕ್ಕೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಪ್ರೋತ್ಸಾಹಿಸಬೇಕು ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಆರನೇ ವರ್ಷದ ವಾಷರ್ಿಕೋತ್ಸವ ಮತ್ತು ಶಾಲಾ ವಿದ್ಯಾಥರ್ಿಗಳಿಗೆ ಉಚಿತ ಸ್ಕೂಲ್ಬ್ಯಾಗ್, ನೋಟ್ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳ ಕಲಿಕೆಯನ್ನು ಗಮನಿಸುತ್ತಿರಬೇಕು, ಈ ಬಗ್ಗೆ ಶಿಕ್ಷಕರಲ್ಲಿ ಚಚರ್ಿಸಿ, ಕಲಿಕೆಯಲ್ಲಿ ಹಿಂದುಳಿಯಲು ಕಾರಣವೇನು, ಯಾವ ರೀತಿಯ ಪ್ರೋತ್ಸಾಹವನ್ನು ಮನೆಯಲ್ಲಿ ನೀಡಬೇಕು, ಶಿಸ್ತು, ಸಮಯ, ಸಂಯಮ ರೂಡಿಸಿಕೊಳ್ಳುವಂತಹಗಳನ್ನು ತಿಳುವಳಿಕೆ ಹೇಳಿಕೊಡುವಂತೆ ತಿಳಿಸಿದ ಅವರು ನಿರಂತರವಾಗಿ ಪೋಷಕರು ಶಾಲೆಯ ಸಂಪರ್ಕ ಹೊಂದಿರುವಂತೆ ಸಲಹೆ ನೀಡಿದರು. 
ಶಾಲೆ ಹಿರಿಯ ವಿದ್ಯಾಥರ್ಿ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ನನಗೀಗ 75 ವರ್ಷ, 5ನೇ ವಯಸ್ಸಿನಲ್ಲಿದ್ದಾಗ ಶಾಲೆಗೆ ಸೇರಿದ್ದೆ ಅಂದರೆ 70ವರ್ಷದ ಹಿಂದೆ ಈ ಶಾಲೆಯ ವಿದ್ಯಾಥರ್ಿಯಾಗಿ ವಿದ್ಯಾಭ್ಯಾಸ ಮಾಡಿದ್ದೇನೆ ಇದೇ ರೀತಿ ಕುರುಬರಶ್ರೇಣಿ ಿಶಾಲೆಯಲ್ಲಿ ಓದಿದಂತಹ ವಿದ್ಯಾಥರ್ಿಗಳು ಇಂದು ಉನ್ನತ ಅಧಿಕಾರಿಗಳಾಗಿ, ದೇಶ-ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಈ ಶಾಲೆಯಲ್ಲಿ ಓದಿದ ಮಕ್ಕಳು ಎತ್ತರೆತ್ತರಕ್ಕೆ ಬೆಳೆದಿದ್ದಾರೆ ಎಂದರಲ್ಲದೆ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಸ್ಥಾಪಕ ಅಧ್ಯಕ್ಷ ಕ್ಯಾಪ್ಟನ್ಸೋಮಶೇಖರ್ ಮಾತನಾಡಿ, ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲವಾಗಲು ಹಾಗೂ ಕಾರ್ಯಕ್ರಮ, ಸಮಾರಂಭ ನಡೆದರೆ ಉಪಯೋಗಕ್ಕಾಗಿ ಉತ್ತಮವಾದ ಕೊಠಡಿ ಕಟ್ಟಿಸಲು ಈಗಾಗಲೇ ಯೋಜನೆ ರೂಪಿಸಿದ್ದೇವೆ, ಹಿರಿಯ ವಿದ್ಯಾಥರ್ಿಗಳಾದ ಎಂ.ವಿ.ನಾಗರಾಜ್ರಾವ್ರವರ ನೇತೃತ್ವದಲ್ಲಿ ಹಿರಿಯ ವಿದ್ಯಾಥರ್ಿಗಳ ಸಂಘ ಈ ಕಾರ್ಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ, ಶಾಲೆಗೆ 100ವರ್ಷ ತುಂಬಿದ ಹಿನ್ನಲೆಯಲ್ಲಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು ಜೊತೆಗೂಡಿ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಸೃಷ್ಠಿಯಾದ ಹಿರಿಯ ವಿದ್ಯಾಥರ್ಿಗಳ ಸಂಘ ಇಂದು ಆರನೇ ವರ್ಷದ ವಾಷರ್ಿಕೋತ್ಸವ ಆಚರಿಸಿಕೊಳ್ಳುತ್ತಿದೆ ಸಂಘದ ಮೂಲಕ ವಿದ್ಯಾಥರ್ಿಗಳಿಗೆ ಬ್ಯಾಗ್ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ತಿಮ್ಮಾಬೋವಿ ಮಾತನಾಡಿ, ತಾಲ್ಲೂಕಿನ ಹಿರಿಯ ವಿದ್ಯಾಥರ್ಿ ಸಂಘವೊಂದು ಶಾಲೆಯ ಅಭಿವೃದ್ದಿಗಾಗಿ ಹಿರಿಯ ವಿದ್ಯಾಥರ್ಿಗಳು ಒಗ್ಗಟ್ಟಾಗಿ ಸಲಕರಣೆ ವಿತರಿಸುತ್ತಿರುವುದು ಶ್ಲಾಘನೀಯವಾದದು, ಈಗಾಗಲೇ ಕುರುಬರಶ್ರೇಣಿಯ ಶಾಲೆಯಲ್ಲಿ ವಿದ್ಯಾಥರ್ಿಗಳಿಗಾಗಿ ಶಾಲಾಬ್ಯಾಗ್, ನೋಟ್ಬುಕ್, ಸಮವಸ್ತ್ರ ನೀಡಲಾಗುತ್ತಿದೆ ಎಂದ ಅವರು,  ಬಡತನದಿಂದಲೇ ಓದಿದಂತಹ ನಾವುಗಳು ಸಕರ್ಾರಿ ಶಾಲೆಯಲ್ಲಿ ಓದುವ ಬಡವಿದ್ಯಾಥರ್ಿಗಳಿಗೆ ಅನುಕೂಲವಾಗಲು ಇಂತಹ ಕಾರ್ಯಕ್ರಮವನ್ನು ಪ್ರತಿದಿನ ಕುರುಬರಶ್ರೇಣಿ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡಲಿದ್ದಾರೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಯುತ್ತದೆ ಇಂತಹ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿ ಪ್ರೋತ್ಸಾಹ ನೀಡಬೇಕು ಎಂದರು. 
ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜಶೇಖರ್, ಹಿರಿಯ ವಿದ್ಯಾಥರ್ಿಗಳು ಶಿಕ್ಷಕರುಗಳಾದ ಶಿವಕುಮಾರ್, ಸುರೇಶ್, ಪಾಂಡುರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕೋಟ್-1
ಕುರುಬರಶ್ರೇಣಿ ಶಾಲೆಯಲ್ಲಿ ಓದುವ ವಿದ್ಯಾಥರ್ಿಗಳಿಗೆ ಅನುಕೂಲವಾಗಲು  ಪ್ರತಿದಿನ ಬೆಳಗಿನ ಜಾವ 5.30ಕ್ಕೆ ಶಾಲೆಯನ್ನು ಆರಂಭ ಮಾಡುತ್ತೇವೆ, ಆ ಸಮಯದಲ್ಲಿ ಮಕ್ಕಳಿಗಾಗಿ ವ್ಯಾಯಾಮ, ಕ್ರೀಡೆ ಬಗ್ಗೆ ತಿಳಿಸುತ್ತೇವೆ ನಂತರ ಸಂಜೆ ವೇಳೆ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾಥರ್ಿಗಳಿಗಾಗಿ ಕಲಿತಾ ತರಬೇತಿ ಮಾಡುತ್ತೇವೆ ಇದಕ್ಕೆ ಪೋಷಕರು ಮಕ್ಕಳನ್ನು ಕಳುಹಿಸಿ ಸಹಕರಿಸಬೇಕು.
ತಿಮ್ಮಾಬೋವಿ, ಮುಖ್ಯೋಪಾಧ್ಯಾಯರು, ಕುರುಬರಶ್ರೇಣಿ ಶಾಲೆ. ಚಿ.ನಾ.ಹಳ್ಳಿ.

ಜೂನ್ 2ರಂದು ನಡೆಯುವ ಸಕರ್ಾರಿ ನೌಕರರ ಮುಷ್ಕರಕ್ಕೆ ನೌಕರರು ಬೆಂಬಲಿಸಿ
ಚಿಕ್ಕನಾಯಕನಹಳ್ಳಿ,ಮೇ.31 : ಜೂನ್ 2ರಂದು ನಡೆಯುವ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಮುಷ್ಕರಕ್ಕೆ ತಾಲ್ಲೂಕಿನ ಎಲ್ಲಾ ಸಕರ್ಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸುವಂತೆ ತಾ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಪ್ಪ ತಿಳಿಸಿದ್ದಾರೆ.
ಕೇಂದ್ರ ಸಕರ್ಾರಿ ನೌಕರರಿಗೆ ನೀಡುವ ವೇತನದಂತೆ ರಾಜ್ಯ ಸಕರ್ಾರಿ ನೌಕರರಿಗೂ ಸಮಾನ ವೇತನ ನೀಡುವಂತೆ ಜೂನ್ 2ರಂದು ರಾಜ್ಯಾದ್ಯಂತ ಸಕರ್ಾರಿ ನೌಕರರು ಕೆಲಸಕ್ಕೆ ಗೈರುಹಾಜರಾಗುವ ಮೂಲಕ ಮುಷ್ಕರ ನಡೆಸುತ್ತಿದ್ದಾರೆ ಇದಕ್ಕೆ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕ ನೌಕರರು ಸಹಕರಿಸಬೇಕು ಎಂದು ತಾ.ಪ್ರೌ.ಶಾ.ಸ.ಶಿ.ಸಂಘದ ಕಾರ್ಯದಶರ್ಿ ಸಿ.ಗವಿರಂಗಯ್ಯ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಷ್ಕರ : ಕೇಂದ್ರ ಸಕರ್ಾರ, ಕೇಂದ್ರ ಸಕರ್ಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗಳಿಸಿದ್ದು ರಾಜ್ಯ ಸಕರ್ಾರಿ ನೌಕರರಿಗೂ 7ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸುವಂತೆ ರಾಜ್ಯ ಸಕರ್ಾರಕ್ಕೆ ರಾಜ್ಯ ಸಕರ್ಾರಿ ನೌಕರರ ಸಂಘ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಸಕರ್ಾರ ವೇತನ ಆಯೋಗ ರಚಿಸುವ ತೀಮರ್ಾನ ಮಾಡಿರುವುದಿಲ್ಲ, ಇದರಿಂದ ರಾಜ್ಯ ಸಕರ್ಾರಿ ನೌಕರರಲ್ಲಿ ಅತಿ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿದ್ದು ನಮಗೆ ವೇತನ ಹಾಗೂ ಭತ್ಯೆ ನೀಡಿಕೆಯಲ್ಲಿ ಬಹಳಷ್ಟು ತಾರತಮ್ಯವಾಗಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸಕರ್ಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸಕರ್ಾರಿ ನೌಕರರ ಸಂಘವು ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಬೆಂಬಲಿಸು ಎಲ್ಲಾ ಶಿಕ್ಷಕರು ಜೂನ್ 2ರಂದು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ತಾ.ಪ್ರಾ.ಶಾ.ಶಿ.ಸಂಘ ಕೋರಿದೆ.

ಮಾನವೀಯತೆ ಮರೆಯುತ್ತಿರುವುದರಿಂದ ವೃದ್ದಾಶ್ರಮಗಳು ಹೆಚ್ಚುತ್ತಿವೆ
ಚಿಕ್ಕನಾಯಕನಹಳ್ಳಿಮೇ.31. : ಮನುಷ್ಯ ಮಾನವೀಯತೆಯಿಂದ ದೂರ ಸರಿಯುತ್ತಿರುವುದರಿಂದ  ವೃದ್ದಾ ಶ್ರಮಗಳು ಹೆಚ್ಚಾಗುತ್ತಿವೆ ಎಂದು ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ವಿಷಾಧಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದ ಸಾಹಿತಿ ಸಾ.ಶಿ. ಮರುಳಯ್ಯ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸಾಸಲು ಗ್ರಾಮವನ್ನು ಗುರುತಿಸಲು ಸಾಹಿತಿ ಸಾ.ಶಿ ಮರುಳಯ್ಯನವರು ಕಾರಣ, ಬಸವಾದಿ ಶರಣರು ಮನುಷ್ಯ ಬದುಕನ್ನು ಕಟ್ಟಿಕೊಳ್ಳುವಂತೆ  ಉಪದೇಶಿಸಿದರು, ಈಗ ನಾವು ಮಾನವೀಯತೆಯನ್ನು ಮರೆತು ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ ಎಂದ ಅವರು  ಜ್ಞಾನದಿಂದ  ಅಳಿಯಬೇಕು ಹೊರತು ಜಾತಿಯಿಂದ ಅಳಿಯಬಾರದು,  ಈಗ ಜಾತಿ ಜಾತಿಗಳಲ್ಲಿ ವೈರತ್ವ  ಹೆಚ್ಚಾಗುತ್ತಿದ್ದು ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರತಿಷ್ಠಿಗೆ ಜಾತಿಗಳನ್ನು ಎತ್ತಿಕಟ್ಟಿ ಶೋಷಣೆ ಮಾಡುತ್ತಿದ್ದಾನೆ, ಸರ್ವಧರ್ಮ ಸಮಾರಂಭದಲ್ಲಿ ಎಲ್ಲ ಸ್ವಾಮೀಜಿಗಳು ಒಂದೇ ವೇದಿಕೆಯನ್ನು ಕುಳಿತು ಸಂಗಮವಾಗಿದ್ದೇವೆ ಅದೇ ರೀತಿ ಎಲ್ಲರೂ ಒಂದಾಗಿ ಬಾಳಿದರೆ ಸಾ.ಶಿ, ಮರುಳಯ್ಯನವರಿಗೆ ಗೌರವ ತರುತ್ತದೆ, ಮನುಷ್ಯನ ಮನಸ್ಸುಗಳು ಮೈಲಿಗೆಯಾಗುತ್ತಿವೆ  ಅಂತಹ ಮನಸ್ಸುಗಳಿಗೆ ಗಂಗಾ ಸ್ನಾನವಾಗಬೇಕಾಗಿದೆ, ಕನಿಷ್ಟ, ಶ್ರೇಷ್ಠ ಎಂಬ ಭಾವನೆ ಯಾರಲ್ಲೂ ಬರಬಾರದು ಎಂದರು.
ಚಿತ್ರದುರ್ಗದ ಮಾಚಿದೇವರ ಮಠದ ಬಸವಮಾಚೀದೇವಸ್ವಾಮೀಜಿ ಮಾತನಾಡಿ ಡಾ.ಸಾ.ಶಿ.ಮರುಳಯ್ಯನವರ ಬದುಕು ಬರಹ ಅನಾವರಣ ಮಾಡಲು ಧಾಮರ್ಿಕ ಸಮಾರಂಭದಲ್ಲಿ ಮಾಡುತ್ತಿರುವುದು ಸಂತಸ ತಂದಿದೆ, ಸಾಹಿತ್ಯ ಕ್ಷೇತ್ರಕ್ಕೆ ಮಾತನಾಡುವ ಶಕ್ತಿಯ ಜೊತೆಯಲ್ಲಿ ಬದುಕನ್ನು ರೂಪಿಸುವ ಶಕ್ತಿ ಇದೆ, ಸ್ವಾಮೀಜಿಗಳು ಸಮಾಜದಲ್ಲಿ ಒಂದಾದ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದರು.
ಉಪನ್ಯಾಸಕಿ ಸುಕನ್ಯ ಮಾತನಾಡಿ 1913ರಲ್ಲಿ ಜನಿಸಿದ ಡಾ||ಸಾಹಿತಿ ಸಾ.ಶಿ ಮರುಳಯ್ಯನವರು ಸಾಸಲಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮೈಸೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಶಿಕ್ಷಕರಾಗಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸಾಹಿತಿಯಾಗಿ ಗುರುತಿಸಿಕೊಂಡು ನಾಡಿನ ಶ್ರೇಷ್ಠ ಸಾಹಿತಿಯಾಗಿದ್ದರೂ ಗುರುಪರಂಪರೆಯನ್ನು ಹೊಂದಿದ ಸಾ.ಶಿ.ಮರುಳಯ್ಯನವರು ಸಾಮರಸ್ಯ. ಶಿಲ್ಪ ಶಿವತಾಂಡವ ಪುರುಷ ಸಿಂಹ ಎಂಬ ಅನೇಕ ನಾಟಕಗಳು ಪುಸ್ತಕಗಳನ್ನು ಬರೆದಿದ್ದಾರೆ ಅದರಲ್ಲೂ ತಮ್ಮ ದೇಹವನ್ನು ಜೆ.ಎಸ್.ಎಸ್. ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಾನವೀಯತೆ  ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ  ಡಾ.ಸಾಹಿತಿ  ಸಾ.ಶಿ.ಮರುಳಯ್ಯ ಹಾಗೂ ಸಾಹಿತಿ ದೇ. ಜವರೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
 ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯಸ್ವಾಮೀಜಿ, ಅರೇಮಾದನಹಳ್ಳಿ ಸುಜ್ಞಾನ ಗುರುಪೀಠದ ಶಿವಸುಜ್ಞಾನತೀರ್ಥಸ್ವಾಮೀಜಿ, ಸಿಡ್ಲೆಕೋಣ ವಾಲ್ಮೀಕಿ ಗುರುಪೀಠದ ಸಂಜಯಕುಮಾರಾನಂದಸ್ವಾಮೀಜಿ, ಅಲ್ಬೂರು ಶನೀಶ್ವರಾಮಠದ ನರಸಿಂಹಸ್ವಾಮೀಜಿ, ಕೋಡಿಹಳ್ಳಿ ಅಧಿಜಾಂಬವ ಮಠದ ಷಡಾಕ್ಷರಿಮುನಿಸ್ವಾಮೀಜಿ, ಕರಿಸಿದ್ದೇಶ್ವರ ಮಠದ ಶಿವಪ್ರಕಾಶಶಿವಾಚಾರ್ಯಸ್ವಾಮೀಜಿ. ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್, ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮತ್ತಿತ್ತರರು ಉಪಸ್ಥಿತರಿದ್ದರು.


ಸಾಹಿತಿ ದೇ.ಜವರೇಗೌಡರ ನಿಧನಕ್ಕೆ ಕಸಾಪ ಸಂತಾಪ 
ಚಿಕ್ಕನಾಯಕನಹಳ್ಳಿ.ಮೇ.31 : ದೇ.ಜವರೇಗೌಡರು ಸಾಹಿತಿ ತೀ.ನಂ.ಶ್ರೀರವರ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದರಿಂದಲೇ ತಾಲ್ಲೂಕಿಗೆ ಭೇಟಿ ನೀಡಲು ಸಂತಸ ಪಡುತ್ತಿದ್ದರು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಸಂಘದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೇ.ಜವರೇಗೌಡರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. 
ಎಂ.ವಿ.ನಾಗರಾಜ್ರಾವ್ ಮಾತನಾಡಿ, ದಿ.ದೇ.ಜವರೇಗೌಡರು ತೀ.ನಂ.ಶ್ರೀರವರನ್ನು ತನ್ನ ಗುರುಗಳು ಎಂದು ಭಾವಿಸಿದ್ದರು ಅದಕ್ಕಾಗಿ ತೀ.ನಂ.ಶ್ರೀರವರ ಸ್ವಸ್ಥಳಕ್ಕೆ ತೆರಳಿ ಅವರು ಸಂಚರಿಸುತ್ತಿದ್ದ ಕಡೆಗಳಿಗೆಲ್ಲಾ ಭೇಟಿ ನೀಡುತ್ತಿದ್ದರು ಹಾಗೂ ಚಿಕ್ಕನಾಯಕನಹಳ್ಳಿಗೆ ಕರೆದಾಗಲೂ ಖುಷಿಯಿಂದ ಬರುತ್ತಿದ್ದರು ಎಂದ ಅವರು ಜವರೇಗೌಡರು ರಚಿಸಿರುವ ಪುಸ್ತಕವೊಂದರಲ್ಲಿ ಚಿಕ್ಕನಾಯಕನಹಳ್ಳಿಗೆ ಬಂದು ಹೋದ ಘಟನೆ ಬಗ್ಗೆ ವಿವರಿಸಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಜಾನಪದವನ್ನು ಸಂಗ್ರಹಿಸುವಲ್ಲಿ ದೇ.ಜವರೇಗೌಡರ ಕೊಡುಗೆ ಅಪಾರ ಹಾಗೂ ಜವರೇಗೌಡರು ವೈಚಾರಿಕ ಪರಂಪರೆ ಕಟ್ಟಿದವರು ಎಂದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಜವರೇಗೌಡರು ಕುವೆಂಪುರವರ ಶಿಷ್ಯರಾಗಿ ಸಾಹಿತ್ಯದ ರುಚಿ ಕಂಡವರು ಈ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದ ಅವರು  ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಎನ್.ಇಂದಿರಮ್ಮ, ಕಸಾಪ ಪದಾಧಿಕಾರಿಗಳಾದ ನಾಗಕುಮಾರ್, ರಾಮಕೃಷ್ಣಪ್ಪ, ಜಯಮ್ಮ, ರಾಮ್ಕುಮಾರ್, ಸಿ.ಟಿ.ಗುರುಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು. 






ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭೆಯಲ್ಲಿ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕಂದಾಯಾಧಿಕಾರಿ ಹನುಮಂತೇಗೌಡ, ದ್ವಿತಿಯ ದಜರ್ೆ ಸಹಾಯಕ ಜಯಶಂಕರ್ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಈರ್ವರನ್ನು ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಬೀಳ್ಕೊಟ್ಟರು.