Tuesday, April 21, 2015


ಚಿ.ನಾ.ಹಳ್ಳಿಯಲ್ಲಿ ಬಸವಜಯಂತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : ಜಾತವೇದ ಮುನಿ ಶಿವಾಚಾರ್ಯಸ್ವಾಮಿ ವೀರಶೈವ ಧರ್ಮವನ್ನು ಸ್ಥಾಪಿಸಿದ ಮೊದಲಿಗರು, ಇವರ ಪ್ರೇರಣೆಯಿಂದ ಬಸವಣ್ಣನವರು ಆಗಿನ ಕಾಲದಲ್ಲಿ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದರು ಎಂದು ಕುಪ್ಪೂರು ಶ್ರೀಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಬಸವೇಶ್ವರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಬಸವಣ್ಣನವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ನಂತರ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದವರು, ಬಸವಣ್ಣನವರು ಜಾತಿ, ಬೇದ ಮರೆತು ಎಲ್ಲರನ್ನೂ ಒಟ್ಟುಗೂಡಿಸಲು ಶ್ರಮಪಟ್ಟವರು, ವಿಶ್ವಮಾನವರಾದ ಬಸವಣ್ಣನವರು ವಚನ ಸಾಹಿತ್ಯ ರಚಿಸಿ ವಿಶ್ವಕ್ಕೆ ಮಾದರಿಯಾದವರು ಎಂದರಲ್ಲದೆ ಕಾರ್ಯಕ್ರಮಗಳಿಗೆ ಎಷ್ಟು ಜನ ಬಂದಿದ್ದಾರೆ ಎಂಬುದು ಮುಖ್ಯವಲ್ಲ ಕಾರ್ಯಕ್ರಮದಿಂದ ಹೋದ ನಾವುಗಳು ಬಸವಣ್ಣನವರ ತತ್ವಗಳಂತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.
 ತಾಲ್ಲೂಕಿನ 26ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುವ ಯೋಜನೆಯಲ್ಲಿ ಕುಪ್ಪೂರು, ದಾಸಿಹಳ್ಳಿ, ತಮ್ಮಡಿಹಳ್ಳಿ, ಹಾಲ್ಕುರಿಕೆ ಕೆರೆಗಳನ್ನು ಕೈ ಬಿಡುವ ಹುನ್ನಾರ ನಡೆಯುತ್ತಿದ್ದು ಶೀಘ್ರವೇ ಇದರ ಬಗ್ಗೆ ಸಭೆಯನ್ನು ಕರೆದು ಚಚರ್ಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಶಾಸಕರು ಸಕರ್ಾರದ ಜೊತೆಯಲ್ಲಿ ಮಾತುಕತೆ ನಡೆಸುವಂತೆ ಸಲಹೆ ನೀಡಿದರು.
ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಧಾಮರ್ಿಕ ಮೌಲ್ಯಗಳನ್ನು ತಿಳಿಸುವ ಕಾರ್ಯಕ್ರಮಗಳು ಅವಶ್ಯ ಎಂದು ಸಲಹೆ ನೀಡಿದರು.
ಇನ್ನೂ ಗ್ರಾಮೀಣ ಭಾಗಗಳಲ್ಲಿ ಬಸವಣ್ಣ (ನಂದಿಯನ್ನು) ಪೂಜಿಸುವ ಸಂಪ್ರದಾಯವಿದೆ ನಾವು ಇನ್ನೂ ದಾರ್ಶನಿಕರ, ದಾಸರ, ವಚನಕಾರರ ಜಯಂತಿಗಳನ್ನು ಆಚರಿಸಿಕೊಳ್ಳುತ್ತಾ ಬಂದಿರುವುದರಿಂದಲೇ ನಮ್ಮ ಧಾಮರ್ಿಕ ಮೌಲ್ಯಗಳಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಬಸವಣ್ಣನವರು ಜಾತಿ ಬೇದಬಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲ ವರ್ಗಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲು ಅನುಭವ ಮಂಟಪ ಸ್ಥಾಪಿಸಿದರು. ಈಗ ರಾಜಕಾರಣಿಗಳು ಜಾತಿಗಳನ್ನು ಸೃಷ್ಠಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಜಾತಿ ನಮ್ಮ ಮನೆಯಲ್ಲಿರಬೇಕೆ ಹೊರತು ಹೊರಗಡೆಯಲ್ಲ ಎಲ್ಲರಿಗೂ ಒಂದೇ ಭಾವನೆ ಬಂದರೆ ಮಾತ್ರ ಸಮಾಜ ಉದ್ದಾರವಾಗುತ್ತದೆ, ಮಠ ಮಂದಿರಗಳು ಸಮಾಜ ತಿದ್ದುವ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿ, ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ, ಅನೇಕ ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿರುವುದು ಸಂತಸ, ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ,  ಬಸವಣ್ಣನವರು ಸ್ತ್ರೀಯರಿಗೆ ಸರಿಸಮಾನಾದ ಗೌರವವನ್ನು ಅನುಭವ ಮಂಟಪದಲ್ಲಿ ಅವಕಾಶ ನೀಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮವನ್ನು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಡಿಎಸ್ಎಸ್ನ ಬೇವಿನಹಳ್ಳಿಚನ್ನಬಸವಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾಧ್ಯಕ್ಷೆ ರೇಣುಕಮ್ಮಸಣ್ಣಮುದ್ದಯ್ಯ, ಸಿ.ಎಲ್.ಜಯದೇವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವಸ್ವಾಮಿ ನಿರೂಪಿಸಿ ಸ್ವಾಗತಿಸಿದರು. ರಾಜ್ಕುಮಾರ್ ವಂದಿಸಿದರು. ತಾಲ್ಲೂಕು ಕಛೇರಿಯಿಂದ ಹೊರಟ ಬಸವಣ್ಣನವರ ಭಾವಚಿತ್ರವಿರುವ ಮೆರವಣಿಗೆಯು ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು.