Monday, June 10, 2013



ಮನದಲ್ಲಿ ಬೇರೂರಿದ್ದ ಶಿಕ್ಷಕರಿಗೆ ಹೃದಯ ಸ್ಪಶರ್ಿ ಶ್ರದ್ದಾಂಜಲಿ ಅಪರ್ಿಸಿದ ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಜೂ.09 : ಮನದಾಳದಲ್ಲಿ ಬೇರೂದಿದ ಶಿಕ್ಷಕ ಅಗಲಿದಾಗ ಶಿಷ್ಯವೃಂದದವರು ಹಾಗೂ ಗ್ರಾಮಸ್ಥರು ಶಿಕ್ಷಕರಿಗೆ ಈಗೂ ಗೌರವ ಸಲ್ಲಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಗೋಪಾಲನಹಳ್ಳಿಯ ಜನರು.
ಗೋಪಾಲನಹಳ್ಳಿಯಲ್ಲಿ 20ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ಗ್ರಾಮಸ್ಥರ ಮನೆ, ಮನದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿಕೊಂಡಿದ್ದ ಶಿಕ್ಷಕ ರಂಗಸ್ವಾಮಿಯ್ಯ ನವರನ್ನು ಸ್ಮರಿಸಿಕೊಂಡ ರೀತಿ ಇಡೀ ಸಮಾಜಕ್ಕೆ ಆದರ್ಶವಾಗುವಂತೆ ಶ್ರದ್ದಾಂಜಲಿ ಸಭೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದ್ದು ಹೃದಯಸ್ಪಶರ್ಿಯಾಗಿತ್ತು.
ಕಳೆದ ತಿಂಗಳು  ಸಾವನ್ನಪ್ಪಿದ ಗ್ರಾಮಸ್ಥರ ಪ್ರೀತಿಯ ನಿವೃತ್ತ ಶಿಕ್ಷಕ ರಂಗಸ್ವಾಮಿರವರ ಅಂತಿಮ ಸಂಸ್ಕಾರಕ್ಕೆ  ಗ್ರಾಮಸ್ಥರೆಲ್ಲಾ ತೆರಳಲು ಸಾಧ್ಯವಾಗಲಿಲ್ಲವೆಂಬ ನೋವಿನಿಂದ  ಇಡೀ ಗ್ರಾಮದವರು ಒಟ್ಟಿಗೆ ಸೇರಿ ಅವರ ನೆನಪಿನಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮನಮಿಡಿಯುವಂತೆ ನಡೆಸಿಕೊಟ್ಟರು.
ಇಪ್ಪತ್ತು ವರ್ಷಗಳ ಕಾಲ ಗೋಪಾಲನಹಳ್ಳಿಯ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಗ್ರಾಮದ ಪ್ರತಿಯೊಬ್ಬರ ಮನೆ-ಮನದಲ್ಲಿ ನೆಲಸಲು ಕಾರಣ ಅವರು ವೃತ್ತಿಯಲ್ಲಿ ಇಟ್ಟಿದ್ದ ಶ್ರದ್ದೆ ಹಾಗೂ ವಿದ್ಯಾಥರ್ಿಗಳಿಗೆ ನೀಡುತ್ತಿದ್ದ ಮಾರ್ಗದರ್ಶನ, ಅವರ ಅಕ್ಷರಭ್ಯಾಸವನ್ನಷ್ಟೇ ಮಾಡಿಸಿದೆ, ಮಕ್ಕಳಿಗೆ ಪಾಠದ ಜೊತೆಗೆ, ಆಟ, ನಾಟಕ, ಸಾಂಸ್ಕೃತಿಕ ಕಲೆಗಳ ಪರಿಚಯವನ್ನು ಮಾಡಿಕೊಡುತ್ತಿದ್ದು, ಗ್ರಾಮದ ಸ್ವಚ್ಚತೆಗಾಗಿ ಅವರು ವಹಿಸುತ್ತಿದ್ದ ಕಾಳಜಿಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಸ್ಮರಿಸಿಕೊಂಡರು.
ಶ್ರದ್ದಾಂಜಲಿ ಕಾರ್ಯಕ್ರಮವನ್ನು ಊರಿನ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರುವಂತೆ ಬೃಹತ್ ಶಾಮಿಯಾನದ ವ್ಯವಸ್ಥೆ ಮಾಡಿದಲ್ಲದೆ, ಭಜನೆ, ಸ್ಮರಣೆ, ಮಾತು, ಮಾರ್ಗದರ್ಶನ, ಊಟ ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದಿ.ರಂಗಸ್ವಾಮಿರವರ ಸ್ನೇಹಿತರಾದ ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ ಮಾತನಾಡಿ, ಅವರ ಜೊತೆ ಸಹಪಾಠಿಯಾಗಿದ್ದ ನಾನು ಅವರಿಂದ ಉತ್ತಮವಾದ ತಿಳುವಳಿಕೆ ಪಡೆದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ, ನಾಟಕದ ಕೆಲ ಪ್ರಸಂಗದ ಅಂಶಗಳು ಹಾಗೂ ಗ್ರಾಮ ಸ್ವಚ್ಛತೆಯ ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸಿದರಲ್ಲದೆ ರಂಗಸ್ವಾಮಿರವರೊಂದಿಗೆ 20ವರ್ಷ ನನ್ನ ಅವರ ಒಡನಾಟ ಉತ್ತಮ ರೀತಿಯಲ್ಲಿತ್ತು, ಅವರು ಮಕ್ಕಳಿಗೆ ನೀತಿ ಕಥೆಗಳನ್ನು ವಿದ್ಯಾಥರ್ಿಗಳಿಗೆ ಹೇಳುತ್ತಾ ಅವರಿಗೆ ಸಂಸ್ಕಾರಯುತವಾದ ಜೀವನ ನಡೆಸಲು ದಾರಿಯಾದರು ಎಂದರಲ್ಲದೆ ಜೀವನದಲ್ಲಿ ನೆನಪಿನಲ್ಲಿ ಉಳಿಯುವ ಶಿಕ್ಷಕರು, ಸಂಬಳಕ್ಕಾಗಿ ದುಡಿಯುವ ಶಿಕ್ಷಕರು, ಕಾಟಾಚಾರಕ್ಕೆ ಶಿಕ್ಷಕ ವೃತ್ತಿ ಮಾಡುವವರು ಎಂಬ ಮೂರು ವಿಧಗಳಿವೆ,  ಅವರಲ್ಲಿ ದಿ.ರಂಗಸ್ವಾಮಿಯವರು ಮೊದಲ ಪಂಕ್ತಿಯ  ಶಿಕ್ಷಕರು ಎಂದರು.
ಗೋಪಾಲನಹಳ್ಳಿ ರಘು ಮಾತನಾಡಿ ಗ್ರಾಮದ ವಿದ್ಯಾಥರ್ಿಗಳಿಗೆ ಉತ್ತಮ ಬದುಕು ರೂಪಿಸಿದ ಹಾಗೂ ಸಮಾಜಕ್ಕೆ ತನ್ನ ಸರ್ವಸ್ವದ ಅನುಭವವನ್ನು ನೀಡಿದ ಶಿಕ್ಷಕರಲ್ಲಿ ರಂಗಸ್ವಾಮಿರವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ, ಅವರ 78ವರ್ಷಗಳ ಕಾಲದ ಜೀವಿತಾವಧಿಯಲ್ಲಿ  ಈ ಗ್ರಾಮದಲ್ಲೇ 20ವರ್ಷ ಸೇವೆ ಸಲ್ಲಿಸಿದ್ದಾರೆ ಎಂದರಲ್ಲದೆ ರತ್ನಮಾಂಗಲ್ಯ ಎಂಬ ನಾಟಕವನ್ನು ಪ್ರಾರಂಭಿಸಿ ಹಲವು ಕಲಾವಿದರಿಗೆ ದಾರಿದೀಪವಾದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಸ್ವಾಮಿರವರ ಪುತ್ರ ಶ್ರೀನಿವಾಸ್, ಗ್ರಾಮದ ಹಿರಿಯರಾದ ಮುನಿಸಿದ್ದಪ್ಪ, ಶಾಂತವೀರಪ್ಪ, ಗ್ರಾ.ಪಂ.ಸದಸ್ಯ ಡಿ.ಎಮ್.ಬಸವರಾಜು, ನಾಗರಾಜು,  ವೆಂಕಟರಾಮಯ್ಯ, ಶಿಕ್ಷಕ ಕಾಂತರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು