Wednesday, February 16, 2011



ಖಜಾನೆ ಬರಿದಾಗಿರುವಾಗ ಕೃಷಿ ಬಜೆಟ್ಗೆ ಅನುದಾನ ಎಲ್ಲಿದೆ: ಎಚ್.ಡಿ.ಕೆ. ಬಡವರ ಪರವಾಗಿ ಕೆಲಸ ಮಾಡುವುದು ತಪ್ಪೇ ಎಚ್.ಡಿ.ಕೆ. ಕಣ್ಣಂಚಿನಲ್ಲಿ ನೀರು ನನಗೇನು ರಾಜಕೀಯ ಬೇಡ, ಜನ ಇಂದೇ ರಾಜಕೀಯ ಬಿಡಿ ಎಂದರೆ ಬಿಟ್ಟು
ಬಿಡುತ್ತೇನೆ
ಚಿಕ್ಕನಾಯಕನಹಳ್ಳಿ,ಫೆ.16: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಲಿಂಗಾಯಿತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಹಾಗಾದರೆ ನಾನು ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪಾ, ಬಡವರ ಪರ ಕೆಲಸ ಮಾಡುವುದೇ ತಪ್ಪಾ, ನಾನು ಹೋರಾಡುತ್ತಿರುವುದು ರಾಜ್ಯದ ಜನತೆಗಾಗಿ, ಜನ ನನ್ನು ರಾಜಕೀಯ ಬಿಡಿ ಎಂದರೆ ಇವತ್ತೇ ಬಿಟ್ಟು ಬಿಡುತ್ತೇನೆ, ಎಂದು ಹುಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣಂಚಿನಲ್ಲಿ ನೀರು ಸುರಿಸುತ್ತಾ ಗದ್ಗದಿತರಾಗಿ ನುಡಿದರು.
ಬಡವರ ಬಗ್ಗೆ, ದೀನ ದಲಿತರ ಬಗ್ಗೆ, ಹಗಲಿರುಳ ದುಡಿಯುತ್ತಿದ್ದೇನೆ, ಜನತಾ ದರ್ಶನ, ಗ್ರಾಮವಾಸ್ಥವ್ಯದ ಮೂಲಕ ಜನರ ಸಂಕಷ್ಟುಗಳನ್ನು ಹತ್ತಿರದಿಂದ ನೋಡಿದ ಮೇಲೆ, ನನಗಿರುವ ಹೃದಯ ರೋಗದ ತೊಂದರೆಯನ್ನು ಲೆಕ್ಕಿಸಿದೆ ಜನರ ಸಂಕಷ್ಟವನ್ನು ಆಲಿಸಿ ಅವರಿಗೆ ಪರಿಹಾರವನ್ನು ನೀಡುತ್ತಿದ್ದೇನೆ ಎನ್ನುವ ಸಂದರ್ಭಕ್ಕಾಗಲೇ ಮುಂದೆ ಮಾತನಾಡದೆ ದುಃಖದಿಂದ ಮುಖ ಮುಚ್ಚಿಕೊಂಡು ಕ್ಷಣಕಾಲ ಮಾತನ್ನು ನಿಲ್ಲಿಸಿದರು. ನಂತರದಲ್ಲಿ ಮುಂದೆ ಕಂಠ ಸರಿ ಪಡಿಸಿಕೊಂಡು ಮಾತನಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ಉಚ್ಚಾರಣೆ ಬಾರದೆ ಭಾಷಣವನ್ನು ಮೊಟಕು ಮಾಡಿ ಕರವಸ್ತ್ರದಲ್ಲಿ ಕಣ್ಣು ಒರಿಸಿಕೊಂಡು ತಮ್ಮ ಕುಚರ್ಿಯಲ್ಲಿ ಕುಣಿತೇ ಬಿಟ್ಟರು.
ಇದಿಷ್ಟು ನಡೆದಿದ್ದು ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ.
ಯಡಿಯೂರಪ್ಪನವರು ಕಳೆದ ಬಜೆಟ್ನ ಯೋಜನೆಗಳೇ ಸಮರ್ಪಕವಾಗಿ ಅನುಷ್ಠಾನಗೊಳಿಸಲ್ಲ ಎಂದು ದೂರಿದ ಅವರು, ಈಗ ಕೃಷಿ ಬಜೆಟ್ ನೀಡುತ್ತೇನೆ ಎನ್ನುವ ಯಡಿಯೂರಪ್ಪ ಹಣವಿಲ್ಲದೆ ಖಜಾನೆ ಬರಿದು ಮಾಡಿಕೊಂಡಿರುವ ಇವರು, ಏನೇ ವಾಗ್ದಾನ ಮಾಡಿದರೂ ಅದನ್ನು ಅನುಷ್ಠಾನಗೊಳಿಸಲು ಹಣವಿಲ್ಲದ ಮೇಲೆ ಇವರು ಬಜೆಟ್ ನೀಡಿ ಏನು ಉಪಯೋಗ ಎಂದರಲ್ಲದೆ, 2009ರಲ್ಲಿ ಉತ್ತರ ಕನರ್ಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಪರಿಹಾರವಾಗಿ ನೀಡಿದ ಚೆಕ್ಗಳ ನಗದು ಮಾಡಿಸಿಕೊಳ್ಳಲಾಗಿಲ್ಲ, ಈ ಚೆಕ್ಗಳ ಸಂಬಂಧ ಅಲ್ಲಿನ ತಹಶೀಲ್ದಾರ್ ಈ ಚೆಕ್ಗಳಿಗೆ ಸಕರ್ಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಹಿಂಬರ ನೀಡುತ್ತಾರೆ ಇಂತಹ ಸಕರ್ಾರಕ್ಕೆ ಕೃಷಿ ಬಜೆಟ್ನಲ್ಲಿ ವಿಶೇಷವಾಗಿ ಅನುದಾನ ನೀಡಲು ಹಣವೆಲ್ಲಿದೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಯಡಿಯೂರಪ್ಪ 45 ಸಾವಿರ ಕೋಟಿ ಸಾಲವನ್ನು ಈ ರಾಜ್ಯದ ಜನತೆಯ ಮೇಲೆ ಹೊರೆಸಿದ್ದಾರೆ ಎಂದರು.
ಯಡಿಯೂರಪ್ಪನವರು ಯಾವೊಬ್ಬ ಸಚಿವರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಎಲ್ಲರೂ ಅವರಿಗೆ ಅಸಹಕಾರ ತೋರಿಸುತ್ತಿದ್ದಾರೆ, ಸಕರ್ಾರದಲ್ಲಿ ಉತ್ತಮ ಕೆಲಸಗಳನ್ನು ನಡೆಯುತ್ತಿಲ್ಲ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ದೂರುವುದು ಸರಿಯಲ್ಲ ಎಂದ ಎಚ್.ಡಿ.ಕೆ, ಅವರೇ ವಿಧಾನ ಸೌಧದ ಅಧಿಕಾರಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ನಾವು ನೀವು ತಿಂದದ್ದು ಸಾಕು, ಇನ್ನಾದರೂ ಜನರ ಪರವಾಗಿ ಕೆಲಸ ಮಾಡೋಣ ಎನ್ನುವ ಮೂಲಕ ಅವರ ಯೋಗ್ಯತೆಯನ್ನು ಪರಾಮಶರ್ಿಸಿಕೊಂಡಿದ್ದಾರೆ ಎಂದರು. ಯಡಿಯೂರಪ್ಪನವರು ಒಬ್ಬ ಬಡವನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ, ಅವರಿಗೆ ಮಾನವೀಯ ಸ್ಪಂದನೆ ಎಂಬುದೇ ಇಲ್ಲವೆಂದರು.
ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿರುವ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ನನ್ನನ್ನು ಲಿಂಗಾಯಿತರ ವಿರೋಧಿ ಇನ್ನುತ್ತಾರೆ. ನಾನು ಕೇಳುವುದು ಇಷ್ಟೇ, ಈ ರಾಜ್ಯ ಉಳಿಯಬೇಕಾ ಅಥವಾ ಯಡಿಯೂರಪ್ಪ ಉಳಿಯಬೇಕಾ ನಿರ್ಧರಿಸಿ ಎಂದರು.
ಗ್ರಾಮೀಣ ಬಡ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಬೇಕಾದ ಕೆಲಸ ಸಕರ್ಾರದ ಜವಬ್ದಾರಿ, ಈ ಕೆಲಸವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಮಾಡುತ್ತಿರುವುದು ಶ್ಲಾಘನೀಯ, ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದ ಅವರು, ಮುಂದೆ ಯಾವುದೇ ಚುನಾವಣೆಗಳು ಬಂದರೂ ಸುರೇಶ್ ಬಾಬು ರವರ ಕೈಬಲ ಪಡಿಸಿ ಎಂದರಲ್ಲದೆ, ಸುರೇಶ್ ಬಾಬುರವರಿಗೆ ಸಚಿವರಾಗುವ ಲಕ್ಷಣ ಹಾಗೂ ಅವಕಾಶಗಳು ಹೆಚ್ಚಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ಆಡಂಬರಕ್ಕಾಗಿ ಆಚರಣೆ ಮಾಡಿಕೊಳ್ಳುತ್ತಿಲ್ಲ, ಜನತೆಯ ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳನ್ನು ಈಡೇರಿಸುವ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.
ಮಾಚರ್ಿ ಎಂಟರಂದು ಮಹಿಳಾ ದಿನಾಚರಣೆ ಅಂಗವಾಗಿ ಈ ತಾಲೂಕಿನಲ್ಲಿ ಪ್ರಥಮವಾಗಿ 2001 ಗಭರ್ಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ, ಜೆ.ಡಿ.ಎಸ್. ಮುಖಂಡ ಮುದ್ದುಹನುಮೇಗೌಡ ಮಾತನಾಡಿದರು.
ಜಿ.ಪಂ.ಅಧ್ಯಕ್ಷ ಡಾ.ರವಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ ಉಪಸ್ಥಿತರಿದ್ದರು.