Saturday, July 19, 2014

ಗೊಂದಲ ಗದ್ದಲಗಳ ನಡುವೆ ಸಭೆ


ಚಿಕ್ಕನಾಯಕನಹಳ್ಳಿ,ಜೂ.19 : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ವರ್ಗದವರ ಹಿತರಕ್ಷಣಾ ಸಮಿತಿ ಸಭೆ ಆರಂಭದಲ್ಲಿ ಅನುಪಾಲನಾ ವರದಿಯ ಸಂದರ್ಭದಲ್ಲಿ ಇದ್ದ ಸಭಾ ಶಿಸ್ತು ಮಧ್ಯೆದಲ್ಲೇ ಗೊಂದಲ ಗದ್ದಲಗಳ ನಡುವೆ ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೆ ಅಂತ್ಯ ಕಂಡಿತು.
 ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಆರಂಭದಲ್ಲಿ ಶಿಸ್ತು ಬದ್ದವಾಗಿ ನಡೆಯುತ್ತಿತ್ತು ಆದರೆ ಕೆಲವು ವಿಷಯಗಳು ಚಚರ್ೆಯ ನಂತರದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಮನವರಿಕೆಯಾಗದಷ್ಟು ಗೊಂದಲ ಗೊಂಡಿತ್ತು.
ಸಭೆಯ ಆರಂಭದಲ್ಲಿ ನಡೆದ ಪ್ರಮುಖವಾದ ಚಚರ್ೆ ಎಂದರೆ,  ತಾಲ್ಲೂಕಿನಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಲ್ಲಿ ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಗುತ್ತಿಗೆದಾರರು, ಕೂಲಿ ಕಾಮರ್ಿಕರ ಜಾಬ್ಕಾಡರ್್ಗಳನ್ನು ಪಡೆದು ಹಣ ನೀಡದೆ ವಂಚಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಲಿಂಗದೇವರು ಹಾಗೂ ಕಂಟಲಗೆರೆ ಸತೀಶ್ ಆರೋಪಿಸಿದರು.
 ಮಾತನಾಡಿ, ಎಸ್.ಸಿ, ಎಸ್.ಟಿ ಜನಾಂಗಕ್ಕೆ ನೀಡುವ ಶೇ.22.75ರ ಅನುದಾನದ ಸಕರ್ಾರಿ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ, ವಿವಿಧ ಇಲಾಖೆಗಳ್ಲಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಸಿಗುವ ಸವಲತ್ತುಗಳ ಬಗ್ಗೆ ಕಛೇರಿಗಳ ನಾಮ ಫಲಕವನ್ನು ಹಾಕುವಂತೆ ಒತ್ತಾಯಿಸಿದರು.
 ಪಟ್ಟಣದ ಎಸ್.ಸಿ ಕಾಲೋನಿಯ ಚರಂಡಿ ಕಾಮಗಾರಿ ಮಾಡದೇ 1.60ಲಕ್ಷ ರೂಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ, ಇದರ ಬಗ್ಗೆ ತನಿಖೆ ನಡೆಸುವಂತೆ ಮಲ್ಲಿಕಾಜರ್ುನ ಒತ್ತಾಯಿಸಿದರು.
 ಸಕರ್ಾರ ಬಿಡುಗಡೆ ಮಾಡಿರುವ ಹಣದಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಮೀಸಲಿರಸಬೇಕಾದ ಹಣದಲ್ಲಿ ತಟ್ಟೆ, ಲೋಟ, ತಮಟೆಯನ್ನು ನೀಡುವ ಬದಲು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿ ಎಂದು ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
 ತಾಲ್ಲೂಕಿನಲ್ಲಿ ವಿತರಿಸಿರುವ ಸಾವಿರಾರು ಪಡಿತರ ಚೀಟಿಯಲ್ಲಿ ಹಣ ತೆಗೆದುಕೊಂಡು ನೀಡಲಾಗಿದೆ, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿ ಮಧ್ಯವತರ್ಿಗಳ ಮುಖಾಂತರ ಪಡಿತರ ಚೀಟಿ ನೀಡಿದಿರಿ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ ಎಂದರು. 
 ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿರುವ ನಾಡ ಕಛೇರಿಗಳಲ್ಲಿ ಅಳವಡಿಸಿರುವ ಪಹಣಿ ಕೇಂದ್ರಗಳಲ್ಲಿ ಸರಿಯಾಗಿ ವಿದ್ಯುತ್ ಇಲ್ಲದೆ ರೈತರು ಸಟರ್ಿಫಿಕೇಟ್ಗಳಿಗಾಗಿ ಪರದಾಡುತ್ತಿದ್ದಾರೆ, ಹಳ್ಳಿಗಳಲ್ಲಿ ಅಂತರ್ಜಲ ಇಲ್ಲದೆ ರೈತರಿಗೆ ಸಮಸ್ಯೆಯಾಗಿದೆ ಆದ್ದರಿಂದ ಬದಲಿ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ಗೆ ಸಭೆಯಲ್ಲಿ ಡಿಎಸ್ಎಸ್ ಮುಖಂಡರು ಒತ್ತಾಯಿಸಿದರು.
 ಈ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ, ನಾಡಕಛೇರಿಯಲ್ಲಿ ವಿದ್ಯುತ್ ಸಮಸ್ಯೆಯಾದಾಗ ಪಹಣಿ ತೆಗೆಯಲು ಸೋಲಾರ್ ಅಳವಡಿಸಲಾಗುವುದು, ಆಕಸ್ಮಿಕ ಕಂಪ್ಯೂಟರ್ ಕೆಟ್ಟು ಹೋದಾರೆ ತಾಲ್ಲೂಕು ಕಛೇರಿಯಲ್ಲಿ ಪಹಣಿ ನೀಡುವ ವ್ಯವಸ್ಥೆ ಮಾಡಲಾಗುವುದು, ನಾಡ ಕಛೇರಿಯ ನೋಟಿಸ್ ಬೋರ್ಡ್ನಲ್ಲಿ ಹಾಕುವಂತೆ ಕಂದಾಯ ನಿರೀಕ್ಷಕರಿಗೆ ತಿಳಿಸಿರುವುದಾಗಿ ಹೇಳಿದರು.
 ತಾಲ್ಲೂಕಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸುವ ಸೀಮೆಎಣ್ಣೆ ಫಲಾನುಭವಿಗಳಿಗೆ ವಿತರಣೆಯಲ್ಲಿ ಲೋಪದೋಶವಾಗಿದೆ, ತಾಲ್ಲೂಕಿನಲ್ಲಿ ಸಂಚರಿಸುವ ಕೆಲವೊಂದು ಬಸ್ನವರು ಸೀಮೆಎಣ್ಣೆಯಲ್ಲಿ ವಾಹನ ಓಡಿಸುತ್ತಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದರು. ಬರಶಿಡ್ಲಹಳ್ಳಿ ವಿ.ಎಸ್.ಎಸ್.ನಲ್ಲಿ ಆಹಾರ ವಿತರಿಸುವಾಗ ಆಹಾರ ಪದಾರ್ಥಗಳನ್ನು ತೂಕ ಹಾಕದೇ ಡಬ್ಬದಲ್ಲಿ ಹಾಕುತ್ತಾರೆ ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದರು.
 ತಾಲ್ಲೂಕಿನ ದಲಿತ ಕಾಲೋನಿಗಳಲ್ಲಿ ಮಧ್ಯ ಮಾರಾಟ ಅವ್ಯಾಹಿತವಾಗಿ ನಡೆಯುತ್ತಿದೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿತು.
 ಮಧ್ಯದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಹುಳುಗಳಿರುವ ನೀರನ್ನು ನೀಡುತ್ತಾರೆ ಹಾಗೂ ಮಧ್ಯದ ಅಂಗಡಿಯಲ್ಲಿ ದರಪಟ್ಟಿ ಪ್ರಕಟಿಸದೆ ಇರುವುದರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
 ಪರಿಶಿಷ್ಟ ಜಾತಿ ಪಂಗಡದ ಜನಾಂಗಕ್ಕೆ ನೀಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿ ಪ್ರತಿ ಬುಧವಾರ ಬರಬೇಕು ಆದರೆ ಸರಿಯಾಗಿ ಬಾರದೇ ಫಲಾನುಭವಿಗಳು ಕಾದೂ ಕಾದೂ ವಾಪಾಸ್ ತಮ್ಮ ಊರಿಗೆ ಹಿಂತಿರುಗುತ್ತಾರೆ ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗಿದೆ ಆದ್ದರಿಂದ ಅಧಿಕಾರಿ ಪ್ರತಿವಾರ ಸರಿಯಾಗಿ ಬರುವಂತೆ ಶಾಸಕರು ಸೂಚಿಸುವಂತೆ ಒತ್ತಾಯಿಸಿದರು.
 ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್, ತಾ.ಪಂ.ಸದಸ್ಯ ಚೇತನಗಂಗಾಧರ್, ಪುರಸಭಾ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಸದಸ್ಯ ಅಶೋಕ್, ಡಿಎಸ್ಎಸ್ ಮುಖಂಡರಾದ ಬಿಳಿಗೆಹಳ್ಳಿ ರಾಜು, ಗೋವಿಂದಪ್ಪ, ಹೊಸಕೆರೆ ಶಿವು, ವಸಂತ್, ತೀರ್ಥಪುರ ಕುಮಾರ್, ಕೆಂಪರಾಜು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸಿಡಿಪಿಓ ಅನೀಸ್ಖೈಸರ್, ಪಿಡಬ್ಯ್ಯೂಡಿ ಇಂಜನಿಯರ್ ಆನಂದಪ್ಪ ಉಪಸ್ಥಿತರಿದ್ದರು.

ಹೇಮಾವತಿ ನೀರಿಗಾಗಿ ಅಪರ ಜಿಲ್ಲಾಧಿಕಾರಿಗೆ ಮನವಿ
                                    
ಚಿಕ್ಕನಾಯಕನಹಳ್ಳಿ,ಜೂ.19 : ತಾಲ್ಲೂಕಿನ 26 ಕೆರೆಗಳಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಹಾಗೂ ಚಿ.ನಾ.ಹಳ್ಳಿ ತಿಪಟೂರು ರಸ್ತೆಯ ದುರಸ್ತಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಘಟಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಅನುರಾಧರವರಿಗೆ ಮನವಿ ಅಪರ್ಿಸಿದರು.
 ಹೇಮಾವತಿ ಕುಡಿಯುವ ನೀರಿನ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿ.ನಾ.ಹಳ್ಳಿ ತಾಲ್ಲೂಕಿನ 26 ಕೆರೆಗಳ ಆಯ್ದ ಜಲಸಂಗ್ರಹಗಾರಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಮಂದಗತಿಯಲ್ಲಿ ನಡೆಯುತ್ತಿದ್ದು ಇದುವರೆವಿಗೂ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿಲ್ಲ ಹಾಗೂ ಜೆ.ಎಂ.ಸಿ.ಯು ಅತ್ಯಂತ ಶೀಘ್ರವಾಗಿ ಮಾಡುವ ಅವಶ್ಯಕತೆ ಇದೆ ಎಂದಿದ್ದಾರೆ.
ಭೂ ಸ್ವಾಧೀನಕ್ಕೆ ಒಳಪಡುವ ರೈತರು ಈಗಾಗಲೇ ಸ್ವಯಂ ಪ್ರೇರಿತರಾಗಿ ಕೆಲವು ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದರೂ ಸಕರ್ಾರ ರೈತರಿಗೆ ಪರಿಹಾರ ನೀಡಿರುವುದಿಲ್ಲ, 2012ರಲ್ಲೇ ಸಕರ್ಾರ 35 ಕೋಟಿ ನಾಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದರೂ, ಈ ವೇಳೆಗಾಗಲೇ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಗುತ್ತಿಗೆದಾರರ ಅವಧಿ ಮುಗಿಯುತ್ತಾ ಬಂದಿದ್ದರೂ ಇದುವರೆವಿಗೂ ಭೂ ಸ್ವಾಧೀನ ಪ್ರಕ್ರಿಯೆಯು ಕುಂಟುತ್ತಾ ಸಾಗುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಅಲ್ಲದೆ ಹೇಮಾವತಿ ನಾಲಾ ಇಂಜನಿಯರ್ ಮತ್ತು ಗುತ್ತಿಗೆದಾರರ ಭೂ ಸ್ವಾಧೀನ ಅಧಿಕಾರಿಗಳ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ, ಚಿ.ನಾ.ಹಳಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ಸಾವಿರಾರು ಅಡಿ ಕೊಳವೆ ಬಾವಿಗಳನ್ನು ಕೊರೆದರು ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದ್ದು, ಆದ್ದರಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಭೂ ಸ್ವಾಧೀನ ಪಡಿಸಿಕೊಂಡು ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಒತ್ತಾಯಿಸಿರುವ ಅವರು ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆಯ, ತಿಪಟೂರು ರಸ್ತೆಯು ತೀವ್ರ ಹದಗೆಟ್ಟಿದ್ದು ಈ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ಪ್ರಯಾಣಿಸಲು ತೊಂದರೆಯಾಗಿದೆ ಆದ್ದರಿಂದ ರಸ್ತೆಯನ್ನು ಶಿಘ್ರವಾಗಿ ಪ್ರಾರಂಭಿಸುವಂತೆಯೂ ಹಾಗೂ ದುರಸ್ತಿ ಮಾಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾಲ್ಲೂ