Sunday, November 28, 2010



ವಿಜ್ಞಾನ ಸಮಾವೇಶದಲ್ಲಿ ಚಿ.ನಾ.ಹಳ್ಳಿಗೆ ಸಿಂಹಪಾಲ
ಚಿಕ್ಕನಾಯಕನಹಳ್ಳಿ,ನ.28: 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ನಡೆದ ಭೂ ಸಂಪನ್ಮೂಲ ಸಮೃದ್ದಿಗಾಗಿ ಬಳಸಿ ಭವಿಷ್ಯಕ್ಕಾಗಿ ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ 6ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ ಎಂದು ತಾ.ವಿ.ಕೇಂದ್ರ ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮೀಣ ಕಿರಿಯರ ವಿಭಾಗದಲ್ಲಿ ಚಿಕ್ಕಬಿದರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕುಮಾರಿ ಆಶಾ ತಂಡ, ದಿವ್ಯಪ್ರಭ ಶಾಲೆಯ ದೀಪರಾಜಕುಮಾರ್ ತಂಡ, ನವೋದಯ ಶಾಲೆಯ ಸಿ.ಎಮ್.ಜಯಂತ್ ತಂಡ, ಅಂಭೇಡ್ಕರ್ ಪ್ರೌಡಶಾಲೆಯ ಹೆಚ್.ಎನ್.ಕಾವ್ಯ ತಂಡ, ರೋಟರಿ ಪ್ರೌಡಶಾಲೆಯ ಕುಮಾರಿ ಭವ್ಯ ತಂಡ, ಜೆ.ಸಿ.ಪುರ ಮೊರಾಜರ್ಿ ಶಾಲೆಯ ರಂಗಸ್ವಾಮಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್. ಜಿಲ್ಲಾ ವಿಜ್ಞಾನ ಕೇಂದ್ರ ಕಾರ್ಯದಶರ್ಿ ರಾಮಕೃಷ್ಣ, ತಾಲೂಕು ವಿಜ್ಞಾನ ಕೇಂದ್ರ ಅಧಕ್ಷ್ಷೆ ಎನ್.ಇಂದಿರಮ್ಮ, ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ಅಭಿನಂದಿಸಿದ್ದಾರೆ.


ಮಹಿಳೆಯರಿಗೆ ವಿಪುಲ ಅವಕಾಶವಿದೆ ಬಳಸಿಕೊಳ್ಳಲು ಮುಂದೆ ಬನ್ನಿ
ಚಿಕ್ಕನಾಯಕನಹಳ್ಳಿನ.28: ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ರಂಗಗಳಲ್ಲಿಯೂ ಪ್ರವೇಶಿಸಿ ಜನರ ಕಷ್ಟ ಸುಖಗಳಿಗೆ ಬಾಗಿಯಾಗಿ ಆಥರ್ಿಕವಾಗಿ ಸಬಲರಾಗಬೇಕು ಎಂದು ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಭಸವಯ್ಯ ಕರೆ ನೀಡಿದರು.
ಪಟ್ಟಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಇರುವಿಕೆಯನ್ನು ಸಾದರ ಪಡಿಸಿ ಪುರಷರಿಗೆ ಸರಿಸಮನಾಗಿ ಬದುಕುವಂತೆ ತಿಳಿಸಿದ ಅವರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ರಚನೆಯಾಗಿ ಇಂದು ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಸಮಾರಂಭಗಳಿಗೆ ಹಾಜರಾಗಿ ಸಮಾಜದ ಹಲವು ವಿಷಯಗಳ ಬಗ್ಗೆ ಚಚರ್ಿಸಿ ಅನ್ಯೂನ್ಯತೆಯಿಂದ ಬಾಳಿ ಸಬಲರಾಗುವಂತೆ ಮತ್ತು ಮಹಿಳೆಯರು ಸ್ವಸಹಾಯ ಸಂಘಗಳಿಗೆ ನೆರವಾಗುವಂತೆ ಬ್ಯಾಂಕಿನ ವ್ಯವಹಾರವನ್ನು ತಿಳಿದುಕೊಂಡು ಆಥರ್ಿಕವಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ತಮ್ಮ ಹಕ್ಕು ಮತ್ತು ರಕ್ಷಣೆಗಾಗಿ ಸಂಘಟಿತರಾಗಲು ಹೋರಾಟ ಕೆಲವೊಮ್ಮೆ ಅನಿವಾರ್ಯವಾಗಬಹುದು ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರು ಸಂಘಟಿತರಾಗಿ ಕೀಳರಿಮೆ ತೊರೆದು ಸಮಾಜದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಹೊಂದಬೇಕಾಗುತ್ತದೆ ಎಂದ ಅವರು ಮಹಿಳೆ ಮತ್ತು ಪುರುಷರ ಅನುಪಾತದಲಿ ವ್ಯತ್ಯಾಸದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು ಮೂಢನಂಬಿಕೆ, ಸ್ತ್ರೀ ಬ್ರೂಣ ಹತ್ಯೆ, ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶಾಲೆ ಬಿಡುವಿಕೆ, ಇಂತಹ ಸಾಮಾಜಿಕ ಪಿಡುಗು ನಿವಾರಣೆಗಾಗಿ ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರ್ವತಯ್ಯ ಮಾತನಾಡಿ ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಿದರೆ ಮಾಜಿ ಪ್ರಧಾನಿ ಇಂಧಿರಾಗಾಂಧಿಯಂತೆ ದಿಟ್ಟ ಹೆಜ್ಜೆಗಳನ್ನು ಇಟ್ಟು ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಾರೆ, ಮತ್ತು ಇಂಧಿರಗಾಂಧಿಯವರ 20 ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯು ಒಂದಾಗಿದ್ದು ಮಹಿಳೆಯರು ಅಧಿಕಾರ ಹಿಡಿದರೆ ಸ್ವಾರ್ಥಕ್ಕಾಗಿ ಶ್ರಮಿಸದೆ ಇಂದಿರಾಗಾಂಧಿಯವರಂತೆ ದೇಶದ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ತುಳಸಿ ಪ್ರಾಥರ್ಿಸಿದರೆ ನಾಗರತ್ನ ಸ್ವಾಗತಿಸಿ, ಮಹದೇವಮ್ಮ ವಂದಿಸಿದರು.
29ರಂದು ಗೋಡೆಕೆರೆ ಲಕ್ಷ ದಿಪೋತ್ಸವ
ಚಿಕ್ಕನಾಯಕನಹಳ್ಳಿ,ನ.28: ಗುರುಸಿದ್ದರಾಮೇಶ್ವರ ಸ್ವಾಮಿಯವರ ಕಾತರ್ಿಕ ಮಾಸದ ಲಕ್ಷದೀಪೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಇದೇ 29ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಗೋಡೆಕೆರಯಲ್ಲಿ ಹಮ್ಮಿಕೊಂಡಿದ್ದು ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮತ್ತು ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಕುಶಾಲ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಬಿ.ಜೆ.ಪಿ ಮುಖಂಡ ಅರುಣ್ಸೋಮಣ್ಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಪಂಚಾಕ್ಷರಿ, ಟೂಡಾ ಆಯುಕ್ತ ಎನ್.ಆರ್.ಆದರ್ಶಕುಮಾರ್, ಜಿ. ಪಂ. ಯೋಜನಾಧಿಕಾರಿ ಜಿ.ಎಂ.ಸಿದ್ದರಾಮಣ್ಣ ಜಿ.ಪಂ.ಸದಸ್ಯೆ ಸುಶೀಲ ಸುರೇಂದ್ರಯ್ಯ ಉಪಸ್ಥಿತರಿರುವರು.

ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.26: ಸಂಸ್ಥೆಗಳ ಮುಖ್ಯವಾದ ಕೆಲಸ ಸೇವೆ, ಸಂಸ್ಥೆಗಳ ಸೇವೆಯಿಂದ ದೇಶದ ಹೆಮ್ಮೆ ಮತ್ತು ಕೀತರ್ಿಯನ್ನು ಬೆಳಗಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಬಿ.ಸಿ.ಎಂ ಹಾಸ್ಟಲ್ನಲ್ಲಿ ಬಿ.ಸಿ.ಎಂ ಮತ್ತು ಇನ್ನರ್ವೀಲ್ ಕ್ಲಬ್ವತಿಯಿಂದ ನಡೆದ ಉಚಿತ ಬೆಡ್ಶೀಟ್ ಮತ್ತು ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವರಿಗೆ ಹುಟ್ಟಿನಿಂದಲೇ ಸೇವೆಯ ಗುಣ ಆವರಿಸಿರುತ್ತದೆ ಅಂತವರು ಸೇವೆಯ ಮಹತ್ವವನ್ನು ಇತರರಿಗೆ ತಿಳಿಸಿ ಅವರನ್ನು ಸೇವೆಯ ಕಡೆ ವಾಲುವಂತೆ ನೋಡಿಕೊಳ್ಳಬೇಕು ಮತ್ತು ಶ್ರದ್ದೆಯಿಂದ ಸೇವೆ ಸಲ್ಲಿಸಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸೇವೆ ಸಲ್ಲಿಸುವ ರೀತಿ ಮಹತ್ವದ್ದು ಆದರೆ ಸೇವೆಗೆ ತಕ್ಕಂತೆ ಪ್ರತಿಫಲ ದೊರಕಿದಾಗ ಸೇವೆ ಸಲ್ಲಿಸುವವರು ಮುಂದೆ ಬರುತ್ತಾರೆ, ಅದೇ ರೀತಿ ಹಾಸ್ಟಲ್ಗೆ ಇನ್ನರ್ವೀಲ್ ಕ್ಲಬ್ ವತಿಯಿಂದ ನೀಡಿರುವ ಕೊಡುಗೆ ಸಾರ್ಥಕವಾಗಲು ವಿದ್ಯಾಥರ್ಿನಿಯರೆಲ್ಲ ಉತ್ತಮ ಅಂಕಗಳನ್ನು ತೆಗೆದು ಒಳ್ಳೆಯ ಕೆಲಸಗಳನ್ನು ಪಡೆದು ಈ ಸಮಾಜ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಸಮುದಾಯದ ಸಹಭಾಗಿತ್ವವಿದ್ದರೆ ಪ್ರತಿಯೊಬ್ಬರಿಗೂ ಸಹಾಯವಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಅದಕ್ಕಾಗಿ ಶ್ರದ್ದೆಯಿಂದ ಉತ್ತಮ ಜ್ಞಾನ ಪಡೆದು ಶೈಕ್ಷಣಿಕವಾಗಿ ಹಾಗೂ ಸಮಾಜಿವಕಾಗಿ ಸಮಾಜವನ್ನು ಅಭಿವೃದ್ದಿಪಡಿಸಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ತೇಜಾವತಿ ನರೇಂದ್ರ, ತಾ.ಪಂ.ಸದಸ್ಯ ಸಿ.ಡಿ.ರುದ್ರೇಶ್, ವನಮೂಲ ಭೂಮ್ಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾನಾಮತಿ ನಿರೂಪಿಸಿದರೆ ದೇವರಾಜಪ್ಪ ವಂದಿಸಿದರು.