Thursday, February 28, 2013

ಚಿ.ನಾ.ಹಳ್ಳಿ ಕ್ಷೇತ್ರದ ಮುಂದಿನ ಎಂ.ಎಲ್.ಎ.ಚುನಾವಣೆಯ ಅಬ್ಯಾಥರ್ಿಕೆ.ಎಸ್.ಕಿರಣ್ಕುಮಾರ್. ಬಿ.ಜೆ.ಪಿ.ರಾಜ್ಯಾಧ್ಯಕ್ಷ
                      
ಚಿಕ್ಕನಾಯಕನಹಳ್ಳಿ,ಜ.28 : ಮುಂದಿನ ವಿಧಾನಸಭಾ ಚುನಾವಣೆಗೆ ಭಾಜಪ ಪಕ್ಷದಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಘೋಷಿಸಿದರು.
    ಪಟ್ಟಣದ ಪುರಸಭಾ ವಾಡರ್್ಗಳಿಗೆ ರೋಡ್ ಶೋ ಮೂಲಕ ಭೇಟಿ ನೀಡಿ ನಂತರ ಮಾತನಾಡಿದ ಅವರು ಕಳೆದ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಜಪ ಪಕ್ಷವು ರಾಜ್ಯದ 4970 ಕ್ಷೇತ್ರದಲ್ಲಿ 1400 ಸ್ಥಾನಗಳನ್ನು ಪಡೆದಿತ್ತು, ಈ ಬಾರಿ 2800ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯುವ ವಿಶ್ವಾಸವಿದೆ ಎಂದರು.
    ಕಳೆದ 60 ವರ್ಷದಿಂದ ರಾಜ್ಯದಲ್ಲಿ ಆಗದಿರುವ ಅಭಿವೃದ್ದಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಗಿದೆ, ಈ ಕಾರಣದಿಂದಲೇ ರಾಜ್ಯದ ಜನ ಮುಂದೆಯೂ ಬಿಜೆಪಿ ಸಕರ್ಾರವನ್ನು ಅಧಿಕಾರಕ್ಕೆ ತಂದರೆ ನಮ್ಮ ಎಲ್ಲಾ ಯೋಜನೆಗಳೂ ಪೂರ್ಣಗೊಳಲಿದೆ ಎಂದರದಲ್ಲ,  ದೇಶದ ಅಭಿವೃದ್ದಿಯೂ ಬಿಜೆಪಿ ಮುಖಾಂತರವೇ ಆಗಲಿದೆ ಎಂದರು.
    ರಾಜ್ಯದಲ್ಲಿ ಭಾಜಪ ಸಕರ್ಾರ ಆರಂಭಿಸಿರುವ ಕಾಮಗಾರಿಗಳನ್ನು ಪಕ್ಷ ಮತ್ತೆ ಅಧಿಕಾರ ಹಿಡಿದು ಕಾಮಗಾರಿಗಳನ್ನು ಪೂರ್ಣಗೊಳಿಸಲಿದೆ ಎಂದರು.
    ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ತಾಲ್ಲೂಕಿಗೆ ಹರಿಯಲಿರುವ ಹೇಮಾವತಿ ನೀರಿನ ಕಾಮಗಾರಿ ಕೇವಲ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ, ಚಿಕ್ಕನಾಯಕನಹಳ್ಳಿ ಕೆರೆಗೂ ಸ್ವಾಭಾವಿಕವಾಗಿ ನೀರು ಹರಿಯಲಿದೆ ಎಂದರಲ್ಲದೆ ಪುರಸಭಾ ಚುನಾವಣೆಯಲ್ಲಿ ಭಾಜಪ ಅಭ್ಯಾಥರ್ಿಗಳನ್ನು ಚುನಾಯಿಸಬೇಕೆಂದು  ಮನವಿ ಮಾಡಿದರು.
    ಇದಕ್ಕೂ ಮುನ್ನ ಭಾಜಪ ಪಕ್ಷದ ಕಛೇರಿಯಿಂದ ಪಟ್ಟಣದ ಪುರಸಭಾ ವಾಡರ್್ಗಳಿಗೆ ಕಾರ್ಯಕರ್ತರೊಂದಿಗೆ ವಾಹನದಲ್ಲಿ ಭೇಟಿ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಭಾಜಪ ಅಧ್ಯಕ್ಷ ಶಿವಪ್ರಸಾದ್, ತಾ.ಭಾಜಪ ಅಧ್ಯಕ್ಷ ಮಿಲ್ರ್ಟಿಶಿವಣ್ಣ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಶ್ರೀನಿವಾಸಮೂತರ್ಿ, ಬರಗೂರು ಬಸವರಾಜು, ಅಭಾವಿಪ ತಾ.ಪ್ರಮುಖ್ ಚೇತನ್ಪ್ರಸಾದ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯ
ಚಿಕ್ಕನಾಯಕನಹಳ್ಳಿ,ಫೆ.28:  ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯದ ಸಂಚಾರವನ್ನು ಮಾಚರ್್ 1ರಿಂದ 3ರವರೆಗೆ ತಾಲ್ಲೂಕಿನಾದ್ಯಂತ ಏರ್ಪಡಿಸಲಾಗಿದೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿಯವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು 1ರ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ.
    ಪ್ರಧಾನ ಸಿವಿಲ್ ಜಡ್ಜ್ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಅಧಿಕ ಸಿವಿಲ್ ಜಡ್ಜ್ ಎನ್.ವೀಣಾ, ತಹಶೀಲ್ದಾರ್ ಕೆ.ಟಿ.ಕೃಷ್ಣಸ್ವಾಮಿ, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆ.ನಿರಂಜನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಬಿ.ಇ.ಓ ಎಸ್.ಸಿ.ನಾಗೇಶ್, ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಉಪಸ್ಥಿತರಿರುವರು.
    ಮಾಚರ್್ 1ರ ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ವಿ.ಶಿವಾನಂದ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ.     ಮಧ್ಯಾಹ್ನ 1.30ಕ್ಕೆ ಮುದ್ದೇನಹಳ್ಳಿ ಗ್ರಾ.ಪಂ.ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಮಾತನಾಡಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ತಿಳಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಸಿ.ಕಮಲಮ್ಮಜಯಣ್ಣ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಹೆಚ್.ಕೆ.ನಿರಂಜನ್, ಜಿ.ಎಸ್.ಚನ್ನಬಸಪ್ಪ, ಎಂ.ಮಹಾಲಿಂಗಯ್ಯ ಉಪಸ್ಥಿತರಿರುವರು. ಸಂಜೆ 4ಕ್ಕೆ ಚಿ.ನಾ.ಹಳ್ಳಿ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಎನ್.ಶೇಖರ್ ಬಾಲ ಕಾಮರ್ಿಕ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಮೋಟಾರ್ ವಾಹನ ಕಾಯ್ದೆ ಹಾಗೂ ವಾಹನ ಪರವಾನಗಿ ಬಗ್ಗೆ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಕೆ.ಎಸ್.ಚಂದ್ರಶೇಖರ್, ಕೆ.ಸಿ.ಬಸವರಾಜು ಉಪಸ್ಥಿತರಿರುವರು.
    ಮಾಚರ್್ 2ರ ಶನಿವಾರ ತೀರ್ಥಪುರ ಗ್ರಾ.ಪಂ.ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಎರಡನೇ ದಿನದ ಕಾರ್ಯಕ್ರಮ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷೆ ಪದ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರುಗಳಾದ ಹೆಚ್.ಟಿ.ಹನುಮಂತಯ್ಯ ಕೌಟುಂಬಿಕೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಕೆ.ಎಸ್.ಚಂದ್ರಶೇಖರ್ ಮಧ್ಯಸ್ಥಿಕೆ ಕೇಂದ್ರದ ಮಹತ್ವ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರಾದ ಎಂ.ವಿ.ಶಿವಾನಂದ, ಮಾರುಮರ್ಧನ್ ಉಪಸ್ಥಿತರಿರುವರು. ಮಧ್ಯಾಹ್ನ 1.30ಕ್ಕೆ ಬರಶಿಡ್ಲೆಹಳ್ಳಿ ಶಾಲಾ ಆವರಣದಲ್ಲಿ ವಕೀಲರುಗಳಾದ ಮೋಹನ್ಕುಮಾರ್ ಜನನ ಮತ್ತು ಮರಣ ನೊಂದಣಿ ಕಾಯ್ದೆ, ಎ.ಎಂ.ಮಂಜುನಾಥ್ ಉಯಿಲ್(ವಿಲ್) ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ತಾಲ್ಲೂಕು ಕಛೇರಿ ಆವರಣದಲ್ಲಿ ಜಮೀನು ಮಂಜುರಾತಿ ಹಾಗೂ ನೊಂದಣಿ ಕಾಯ್ದೆ ಬಗ್ಗೆ ವಕೀಲ ಹೆಚ್.ಎಸ್.ಜ್ಞಾನಮೂತರ್ಿ ಹಾಗೂ ವಕೀಲ ಹೆಚ್.ಎ.ಹಬೀಬುಲ್ಲಾ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ. 
    ಮಾಚರ್್ 3ರಂದು ಬೆಳಗುಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಇರುವ ಸವಲತ್ತು, ಆಸ್ತಿ ಹಕ್ಕು ಬಗ್ಗೆ ಹಾಗೂ ಮಧ್ಯಾಹ್ನ 2ಕ್ಕೆ ಹುಳಿಯಾರಿನ ಅಭೇಡ್ಕರ್ ಭವನದಲ್ಲಿ ಮಹಿಳೆ ಮತ್ತು ಕಾನೂನು, ಹಿಂದೂ ವಿವಾಹ ಕಾಯ್ದೆ  ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
 

Wednesday, February 27, 2013

ಮಹಿಳೆಯ  ರೇಪ್, ಮರ್ಡರ್: ಸುಟ್ಟು ಕರಕಲಾಗಿರುವ  ದೇಹ
                          
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಜೋಗಿಹಳ್ಳಿಯ ಹೊಲ ಒಂದರಲ್ಲಿ ಮಹಿಳೆಯೊಬ್ಬರನ್ನು ಮಾನಭಂಗ ಮಾಡಿ, ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.
    ಜೋಗಿಹಳ್ಳಿಯ ನಂಜುಂಡಯ್ಯ ಎಂಬುವರ ಹೊಲದಲ್ಲಿ ಈ ಕುಕೃತ್ಯ ನಡೆದಿದ್ದು, ಮಹಿಳೆಯ ಮಮರ್ಾಂಗವನ್ನು ಆಸಿಡ್ ಅಥವಾ  ಪೆಟ್ರೋಲ್ ಹಾಕಿ ಸುಟ್ಟು ನಂತರ ಇಡೀ ದೇಹವನ್ನು ಗರಿ ಮತ್ತಿತರ ಕೃಷಿ ತ್ಯಾಜ್ಯದ ಜೊತೆಗೆ ಆಸಿಡ್ನಿಂದ  ಸುಟ್ಟಿರ ಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಮುಖ ಹಾಗೂ ದೇಹ ಗುರುತಿಸಲಾಗದಷ್ಟು ಕರಕಲಾಗಿದೆ. ಮೃತ ಮಹಿಳೆ ಸುಮಾರು 35 ರಿಂದ 40 ವರ್ಷದೊಳಗಿರ ಬಹುದೆಂದು ಅಂದಾಜಿಸಲಾಗಿದ್ದು, ಹೊರಗೆಲ್ಲೋ ಕೊಲೆ ಮಾಡಿ ಜೋಗಿಹಳ್ಳಿ ಈ ಹೊಲಕ್ಕೆ ತಂದು ಸುಟ್ಟು ಹಾಕಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಯುವಾಗ ಮುಷ್ಟಿ ಬಿಗಿಹಿಡಿದಿದ್ದು, ಮುಷ್ಠಿ ಒಳಗೆ ಸೀರೆಯ ತುಂಡು ಸಿಕ್ಕಿದೆ, ಕಾಲನ ಬಳಿ ನೆರಳೆ ಬಣ್ಣದ ಲಂಗದ ತುಂಡಿದೆ, ಮೂಗಿನಲ್ಲಿ ಮೂಗುತಿ, ಕೊರಳಲ್ಲಿ ಚಿನ್ನದ ಸರವಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಕೋದಂಡರಾಮ ರೆಡ್ಡಿ, ಸಿ.ಪಿ.ಐ.ಕೆ.ಪ್ರಭಾಕರ್, ಪಿ.ಎಸೈ. ಗೋವಿಂದ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಸಿ.ಪಿ.ಐ, ಕೆ.ಪ್ರಭಾಕರ್ ತನಿಖೆ ಕೈಗೊಂಡಿದ್ದಾರೆ.
    ಮೃತ ಮಹಿಳೆಯ ದೇಹವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮಹಿಳೆಯ ಗುರುತು ಬಲ್ಲವರು ಚಿ.ನಾ.ಹಳ್ಳಿ ಸಿ.ಪಿ.ಐ.ರವರನ್ನು 9480802939, 9448659311 ಸಂಪಕರ್ಿಸಲು ಕೋರಿದೆ.
ಚಿ.ನಾ.ಹಳ್ಳಿ ಪುರಸಭೆ: 10 ನಾಮಪತ್ರಗಳು ವಾಪಸ್, 72ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಪುರಸಭೆಯ 23 ವಾಡರ್್ಗಳಿಂದ 10 ಜನ ಅಬ್ಯಾಥರ್ಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
 ನಾಮ ಪತ್ರ ವಾಪಸ್    ಪಡೆದವರೆಂದರೆ ವಾಡರ್್ ಒಂದರಲ್ಲಿ ಪಕ್ಷೇತರ ಅಬ್ಯಾಥರ್ಿಗಳಾದ ಸಲ್ಮ, ವೀಣಾಶಂಕರ್, ವಾಡರ್್5ರಲ್ಲಿ ಸಿ.ಎನ್.ವಿಜಯಕುಮಾರ್, ವಾಡರ್್11ರಲ್ಲಿ ಸಿ.ಎನ್.ಮಂಜುನಾಥ್, ವಾಡರ್್12ರಲ್ಲಿ ಸಿ.ಬಿ.ಜಯಕುಮಾರ್, ಕೆಜೆಪಿಯ ಬಾಬು ಸಾಹೇಬ್, ವಾಡರ್್13ರಲ್ಲಿ ಟಿ.ಎಲ್.ಯಶೋದಮ್ಮ, ವಾಡರ್್15ರಲ್ಲಿ ಮಹಮದ್ ಸುಹೇಲ್, ವಾಡರ್್16ರಲ್ಲಿ ಅಬ್ದುಲ್ ಸಲಾಂ, ಮಹಮದ್ ಜಹೀರ್ ಉದ್ದೀನ್ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದರಲ್ಲಿ 9ಜನ ಪಕ್ಷೇತರರು, ಒಂದು ಕೆಜೆಪಿ ಅಬ್ಯಾಥರ್ಿಗಳಾಗಿದ್ದಾರೆ.
ಅಂತಿಮವಾಗಿ ವಾಡರ್್ವಾರು ಕಣದಲ್ಲಿರುವವರು: ವಾಡರ್್1: ದಾಕ್ಷಾಯಣಮ್ಮ(ಜೆಡಿಎಸ್),ರೇಖಾ(ಕಾಂಗ್ರೆಸ್),ಹೆಚ್.ಸಿ.ಶಾಮಲ(ಬಿಜೆಪಿ),ರೂಪ(ಕೆಜೆಪಿ),ವಿಶಾಲಾಕ್ಷಮ್ಮ(ಬಿಎಸ್ಆರ್) ಮತ್ತು ವರಮಹಾಲಕ್ಷ್ಮಿ(ಪಕ್ಷೇತರ). ಒಟ್ಟು=6
ವಾಡರ್್ 2: ಇಂದಿರಾ(ಜೆಡಿಎಸ್),ಸುಖನ್ಯಾ(ಕಾಂಗ್ರೆಸ್),ಕೆಂಪಮ್ಮ(ಬಿಜೆಪಿ),ನಿರ್ಮಲ(ಕೆಜೆಪಿ) ಒಟ್ಟು=4
ವಾಡರ್್ 3: ಸಿ.ಡಿ.ಚಂದ್ರಶೇಖರ್(ಜೆಡಿಎಸ್)&ಸಿ.ಟಿ.ಸುರೇಶ್ ಕುಮಾರ್(ಕೆಜೆಪಿ) ಒಟ್ಟು=2
ವಾಡರ್್ 4: ಕೆ.ಶೈಲಜ(ಜೆಡಿಎಸ್),ದೊಡ್ಡಮ್ಮ(ಬಿಜೆಪಿ),&ಎಂ.ಡಿ.ನೇತ್ರಾವತಿ(ಕೆಜೆಪಿ)=3
ವಾಡರ್್ 5: ಎಮ್.ಕೆ.ರವಿಚಂದ್ರ(ಜೆಡಿಎಸ್),ಚೇತನ್ಪ್ರಸಾದ್(ಬಿಜೆಪಿ) ಮತ್ತು ಸಿ.ಆರ್.ನಾಗಕುಮಾರ್ ಚೌಕಿಮಠ=3
ವಾಡರ್್ 6: ಕೆ.ಎಸ್.ಶಹೀದಾ(ಜೆಡಿಎಸ್),ಧರಣಿ ಲಕ್ಕಪ್ಪ(ಕಾಂಗ್ರಸ್), ಮೀನಾಕ್ಷಮ್ಮ(ಬಿಜೆಪಿ)&ಎನ್.ಪುಷ್ಪವತಿ(ಬಿಎಸ್ಆರ್)=4
ವಾಡರ್್ 7: ಸಿ.ಎಮ್.ರಾಜಶೇಖರ್(ಜೆಡಿಎಸ್)=1
ವಾಡರ್್ 8: ಮಲ್ಲಿಕಾಜರ್ುನಯ್ಯ(ಜೆಡಿಎಸ್),ಕೆ.ಬಿ.ಶಿವಣ್ಣ(ಕಾಂಗ್ರಸ್)&ಮೆಹಬೂಬ್(ಕೆಜೆಪಿ)=3
ವಾಡರ್್9: ಕಮಲಮ್ಮ(ಜೆಡಿಎಸ್),ರೇಣುಕಮ್ಮ(ಕಾಂಗ್ರಸ್),ಸರಸ್ವತಿ(ಬಿಜೆಪಿ),&ರಾಜಮ್ಮ(ಕೆಜೆಪಿ)=4
ವಾಡರ್್ 10: ಸಿ.ಎಸ್.ರಮೇಶ್(ಜೆಡಿಎಸ್),ಚಂದ್ರಶೇಖರ್(ಕಾಂಗ್ರಸ್),ಶ್ರೀನಿವಾಸ ಮೂತರ್ಿ(ಬಿಜೆಪಿ) ಮತ್ತು ರೇಣುಕ್ ಪ್ರಸಾದ್(ಕೆಜೆಪಿ)=4
ವಾಡರ್್11: ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್),ಸಿ.ಕೆ.ಕುಮಾರಸ್ವಾಮಿ(ಕಾಂಗ್ರೆಸ್),ಈಶ್ವರಯ್ಯ(ಬಿಜೆಪಿ) ಮತ್ತು ರೇಣುಕ ಪ್ರಸಾದ್(ಪಕ್ಷೇತರ)=4
ವಾಡರ್್ 12: ತಿಮ್ಮಪ್ಪ(ಜೆಡಿಎಸ್),ಜಯಲಕ್ಷ್ಮಿ(ಕಾಂಗ್ರೆಸ್)&ಧನಪಾಲ್(ಬಿಜೆಪಿ)=3
ವಾಡರ್್ 13: ಸಿ.ಎಮ್.ರಂಗಸ್ವಾಮಿ(ಜೆಡಿಎಸ್),&ಗೋಪಾಲಕೃಷ್ಣ(ಕೆಜೆಪಿ)=2
ವಾಡರ್್ 14: ಹೆಚ್.ಬಿ.ಪ್ರಕಾಶ್(ಜೆಡಿಎಸ್),ಕೆ.ಜಿ.ಕೃಷ್ಣೇಗೌಡ(ಕಾಂಗ್ರೆಸ್),ಸಿ.ಕೆ.ಶಾಂತಕುಮಾರ್(ಬಿಜೆಪಿ)&ಶಶಿ ಶೇಖರ್(ಕೆಜೆಪಿ)=4
ವಾಡರ್್ 15: ಮಲ್ಲೇಶಯ್ಯ(ಜೆಡಿಎಸ್)&ಸಿ.ಬಸವರಾಜು(ಕಾಂಗ್ರೆಸ್)=2
ವಾಡರ್್ 16: ಮಹಮದ್ ಖಲಂದರ್(ಜೆಡಿಎಸ್),ಮಹಮದ್ ಅಲ್ತಾಫ್(ಕಾಂಗ್ರೆಸ್)ಮತ್ತು ಬಾಬು ಸಾಹೇಬ್(ಕೆಜೆಪಿ)=3
ವಾಡರ್್ 17: ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್),ಸಿ.ಪಿ.ಮಹೇಶ್(ಕಾಂಗ್ರೆಸ್),ಸಿ.ಎಮ್.ಗಂಗಾಧರಯ್ಯ(ಬಿಜೆಪಿ)ಮತ್ತು ದುರ್ಗಮ್ಮ(ಪಕ್ಷೇತರ)=4
ವಾಡರ್್ 18: ಪ್ರೇಮಾ(ಜೆಡಿಎಸ್)&ಶಾಂತಮ್ಮ(ಕಾಂಗ್ರೆಸ್)=2
ವಾಡರ್್ 19: ಸಿ.ಟಿ.ದಯಾನಂದ(ಜೆಡಿಎಸ್),ಸಿ.ಡಿ.ಲಕ್ಷ್ಮಯ್ಯ(ಕಾಂಗ್ರೆಸ್)&ಸಿಕ.ೆ.ಲೋಕೇಶ್(ಪಕ್ಷೇತರ)=3
ವಾಡರ್್ 20: ಸಿ.ಆರ್.ಗೀತಾ(ಜೆಡಿಎಸ್),&ಶಕುಂತಲಮ್ಮ(ಬಿಜೆಪಿ)=2
ವಾಡರ್್ 21: ಪುಷ್ಪಾ(ಜೆಡಿಎಸ್)&ಹೇಮಾವತಿ(ಬಿಜೆಪಿ)=2
ವಾಡರ್್ 22: ಕೆ.ರೇಣುಕಾ(ಜೆಡಿಎಸ್)&ಮಾಲಾ(ಬಿಜೆಪಿ)=2
ವಾಡರ್್ 23: ಅಶೋಕ್(ಜೆಡಿಎಸ್),ನಿವರ್ಾಣ ಸಿದ್ದಯ್ಯ(ಕಾಂಗ್ರೆಸ್),ಗಂಗಾಧರಯ್ಯ(ಬಿಜೆಪಿ),ಲಿಂಗದೇವರು(ಬಿಎಸ್ಆರ್)&ಕೆಂಚಯ್ಯ(ಪಕ್ಷೇತರ)=5
 

Tuesday, February 26, 2013

         ದೇವಾಲಯದ   ಅಭಿವೃದ್ದಿಗಾಗಿ ಮತದಾನದ ಹಕ್ಕನ್ನೇ ಕಳೆದುಕೊಂಡ ಜನ
                   ಮಾಮೂಲಿನಂತೆ ಹಣದ ತೈಲಿ, ಗುಂಡು ತುಂಡಗಳ ಅಬ್ಬರ
                                                                  (ಚಿಗುರು ಕೊಟಿಗೆಮನೆ)
    •     5ಲಕ್ಷ ರೂ ಕೊಟ್ಟು ಅವಿರೋಧವಾಗಿ ಆಯ್ಕೆಯಾದ  ಸದಸ್ಯ
    •     ಟಿಕೆಟ್ಗಾಗಿ 2 ಲಕ್ಷ ರೂ ದೇವಾಲಯಕ್ಕೆ ಕೊಟ್ಟರು
    •     ಅಬ್ಯಾಥರ್ಿಗಳಿಗಾಗಿ ಕೊನೆ ಕ್ಷಣದಲ್ಲಿ ಪರದಾಡಿದ ರಾಷ್ಟ್ರೀಯ ಪಕ್ಷಗಳು
    •     ಜೆ.ಡಿ.ಎಸ್.ಗೆ ಬಂಡಾಯದ ಬಿಸಿ ತಟ್ಟುತ್ತದೆಯೇ........!?
ಚಿಕ್ಕನಾಯಕನಹಳ್ಳಿ,ಫೆ.24: ಇಲ್ಲಿನ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಣದ ತೈಲಿ, ಬಾಡೂಟದ ಗಮ್ಮತ್ತು ಗುಂಡಿನ ಕರಾಮತ್ತು ಯಥೇಚ್ಚವಾಗಿದ್ದು, ಯುವಕರುಗಳಂತೂ ಬಿಡುವಿಲ್ಲದೆ ಪಾಟರ್ಿಗಳಲ್ಲಿ ಮುಳುಗೇಳುತ್ತಿದ್ದಾರೆ. ಚುನಾವಣೆ ಎಂದ ಮೇಲೆ ಇವೆಲ್ಲಾ ಮಾಮೂಲಿ, ಇಷ್ಟೂ ಇಲ್ಲದೆ ಮೇಲೆ ಅದೆಂತಹ ಚುನಾವಣೆ ಎಂಬಾತ್ತಾಗಿದೆ.! ಆದರೆ ವಿಷಯ ಅದಲ್ಲಾ....... ಇಲ್ಲಿನ ವಾಡರ್್ ಒಂದರಲ್ಲಿ ಅಬ್ಯಾಥರ್ಿಯೊಬ್ಬರಿಂದ 5 ಲಕ್ಷ ರೂ ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಇನ್ನೊಂದು ವಾಡರ್್ನಲ್ಲಿ ನಿಧರ್ಿಷ್ಟ ಪಕ್ಷ ಒಂದರಲ್ಲಿ ಟಿಕೆಟ್ ಪಡೆಯಲು ಗ್ರಾಮದವರಿಗೆ 2 ಲಕ್ಷ ರೂಗಳನ್ನು ದೇಣಿಗೆಯಾಗಿ ಕೊಟ್ಟಿರುವ ಪ್ರಸಂಗವೂ ಕೇಳಿ ಬರುತ್ತಿದೆ.   
ದೇವಾಲಯದ ಅಭಿವೃದ್ದಿಗೆ ದುಡ್ಡು ಪಡೆಯುವ ವಾಡರ್ಿನ ಮತದಾರರು:  ಇಲ್ಲೊಂದು ವಾಡರ್ಿನಲ್ಲಿ ಚುನಾವಣೆಯ ಸಹವಾಸವೇ ಬೇಡ, ನಮಗೆ ಸ್ಪಧರ್ಿಸಲು ಅವಕಾಶವಿಲ್ಲವೆಂದ ಮೇಲೆ, ಯಾರು ಗೆದ್ದು ನಮಗೇನಾಗಬೇಕು ಎಂಬ ಮನೋಧೋರಣೆ ತೆಳೆದಿದ್ದಾರೆ, ಹಾಗಂತ ಅವರು ತೀಮರ್ಾನಿಸಲು ಕಾರಣವೂ ಇಲ್ಲದಿಲ್ಲ, ಅಲ್ಲಿರುವ ಬಹುತೇಕರು ಒಂದು ವರ್ಗಕ್ಕೆ ಸೇರಿದವರು.  ಆದರೆ ಆ ವಾಡರ್ಿಗೆ  ಸಕರ್ಾರ ಮೀಸಲಿಟ್ಟಿರುವ ವರ್ಗವೇ ಬೇರೆ, ಮೀಸಲಾತಿಯಿಂದಾಗಿ  ನಮಗೆ ಚುನಾವಣೆಗೆ ಸ್ಪಧರ್ಿಸುವ ಹಕ್ಕಿಲ್ಲವೆಂದ ಮೇಲೆ, ನಮಗೆ ಮತದಾನದ ಹಕ್ಕೂ ಬೇಡವೆಂಬ ತೀಮರ್ಾನಕ್ಕೆ ಬಂದಿರುವ ಜನ   ಹೇಗಿದ್ದರೂ ನಮ್ಮದು ಹಳ್ಳಿ ಜೀವನ, ನಮಗೆ ಇದೇ ಬೇಕು, ಅದೇ ಬೇಕು ಎಂದು ಕೇಳಿದರೆ ಗೆದ್ದವರ್ಯಾರು ನಮಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಿಲ್ಲ, ಆದ್ದರಿಂದ  ಏನಿದೆಯೋ ಅದಕ್ಕೆ ಹೊಂದಿಕೊಂಡು ಹೋಗುವ ಬಾಳು ನಮ್ಮದು, ಅಂತಹ ಸಂಪತ್ತಿಗೆ ನಾವ್ಯಾಕೆ ಚುನಾವಣೆ ಅಂತ ಕಿತ್ತಾಡಿಕೊಳ್ಳಬೇಕು ಎಂದು ತೀಮರ್ಾನಿಸಿರುವ 7ನೇ ವಾಡರ್ಿನ ಜನ ಚುನಾವಣೆಯ ಸಂದರ್ಭದಲ್ಲಾದರೂ  ಗ್ರಾಮದಲ್ಲಿರುವ ದೇವಾಲಯಗಳ ಅಭಿವೃದ್ದಿ ಪಡಿಸೋಣ ಎಂದು ತೀಮರ್ಾನಿಸಿ, ಕಳೆದ ಬಾರಿಯಿಂದ ಅಲ್ಲಿ ಚುನಾವಣೆ ನಡೆಯದ ರೀತಿ ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಬಾರಿ ಎರಡು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಈ ಬಾರಿ ಏಳು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಈ ಹಣವನ್ನೆಲ್ಲಾ ಆ ವಾಡರ್್ನಲ್ಲಿರುವ ದೇವಾಲಯಗಳಾದ ಬಸವೇಶ್ವರ, ಮೈಲಾರಲಿಂಗೇಶ್ವರ, ಅರವೇಲಕಮ್ಮ  ದೇವಾಲಯಗಳ ಅಭಿವೃದ್ದಿಗೆ ಬಳಸುತ್ತಿದ್ದಾರೆ. ದೇವಾಲಯದ ಅಭಿವೃದ್ದಿಯೇನೋ ಆಗುತ್ತದೆ...... ಆದರೆ ಪ್ರಜಾಪ್ರಭುತ್ವದ ಗತಿ.!?
ಟಿಕೆಟ್ಗಾಗಿ ಎರಡು ಲಕ್ಷ ರೂ ಕೊಟ್ಟ ಪ್ರಸಂಗ: ಇಲ್ಲಿನ ಪುರಸಭೆಯ ಕೆಲವು ವಾಡರ್್ಗಳ ಮಟ್ಟಿಗೆ ಜೆ.ಡಿ.ಎಸ್. ಬೇರೆ ಪಕ್ಷಗಳಿಗೆ ಹೊಲಿಸಿಕೊಂಡರೆ ಸ್ಟ್ರಾಂಗ್. ಹೀಗಾಗಿ ಜೆ.ಡಿ.ಎಸ್. ಪಕ್ಷದಿಂದ ಟಿಕೆಟ್ ಪಡೆಯುವುದೆಂದರೆ ಒಂದು ರೀತಿ ಅರ್ಧ ಚುನಾವಣೆ ಗೆದ್ದುಕೊಂಡಂತೆ ಹಾಗಾಗಿ ವಾಡರ್್ 2ರಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು, ಈ ತಲೆ ಬಿಸಿ ಕಡಿಮೆ ಮಾಡಿಕೊಳ್ಳಲು ಸ್ಥಳೀಯ ಜೆ.ಡಿ.ಎಸ್ ವರಿಷ್ಟ ಸಿ.ಬಿ.ಸುರೇಶ್ ಬಾಬು ಕೆಲವು ತಂತ್ರಗಾರಿಕೆ ಕಲಿತಿದ್ದಾರೆ. ಕೆಲವು ನಿಧರ್ಿಷ್ಟ ವಾಡರ್್ಗಳಿಗೆ ಟಿಕೆಟ್ ಕೇಳಿದರೆ ಅಲ್ಲಿಯ ಗುಂಪುಗಳನ್ನು ಒಪ್ಪಿಸಿಕೊಂಡು ಅವರನ್ನು ಜೊತೆಯಲ್ಲಿ ಕರೆತರ ಬೇಕು ಆಗ ಮಾತ್ರ ಜೆ.ಡಿ.ಎಸ್. ವರಿಷ್ಟರ ಕೃಪಕಟಾಕ್ಷ ಅವರ ಮೇಲೆ ಬೀಳುತ್ತದೆ, ಅಲ್ಲಿಯವರೆಗೆ ಯಾರು ಎಷ್ಟೇ ಆಪ್ತರಿದ್ದರೂ ಸರಿಯೇ ನಯವಾಗಿ ಸಾಗಾಕುತ್ತಾರೆ. ಅಂತಹ ಸನ್ನಿವೇಶವೇ ವಾಡರ್್ 2ರಲ್ಲೂ ನಿಮರ್ಾಣವಾಯಿತು, ವರಿಷ್ಟರ ಇಷ್ಟಕಷ್ಟಗಳನ್ನು ಹತ್ತಿರದಿಂದ ಬಲ್ಲವರೊಬ್ಬರು ಸೀದಾ ಜೋಗಿಹಳ್ಳಿಗೆ ಹೋಗಿ ಅಲ್ಲಿಯ ಜೆ.ಡಿ.ಎಸ್. ಪಕ್ಷದ ಪ್ರಮುಖರನ್ನೆಲ್ಲಾ ಒಂದೆಡೆ ಸೇರಿಸಿ ಟಿಕೆಟ್ಗಾಗಿ ಹರಾಜು ಕೂಗಿದರು ಆ ಹರಾಜು 2 ಲಕ್ಷ ರೂಗಳಿಗೆ ನಿಂತಿತು. ಆ ಹಣವನ್ನು ಸಂಗ್ರಹಿಸಿಕೊಂಡು ಅಲ್ಲಿಯ ದೇವಾಲಯಕ್ಕೆ ಕೊಟ್ಟರು ಎಂಬುದು ಬಲವಾಗಿ ಕೇಳಿ ಬರುತ್ತಿರುವ ಸುದ್ದಿ.
     ಸದ್ಯದ ಮಟ್ಟಿಗೆ ನಿಜವಾದ ಕಾಳಗವಿರುವುದು 17ನೇ ವಾಡರ್್ನಲ್ಲಿ ಪುನರ್ ಆಯ್ಕೆ ಬಯಸಿ ಕಾಂಗ್ರೆಸ್ನ ಸಿ.ಪಿ.ಮಹೇಶ್ ಇದ್ದರೆ, ಜೆ.ಡಿ.ಎಸ್ನಿಂದ ಸಿ.ಬಿ.ತಿಪ್ಪೇಸ್ವಾಮಿ, ಶಾಸಕ ಸಿ.ಬಿ.ಸುರೇಶ್ ಬಾಬು ರವರು ತಮ್ಮ ಸಹೋದರ ತಿಪ್ಪೇಸ್ವಾಮಿಯವರನ್ನು ಕಣದಲ್ಲಿರಿಸಿದ್ದಾರೆ, ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್ರವರ ಸಹೋದರ ಸಿ.ಪಿ.ಮಹೇಶ್, ಸಹೋದರರ ಸಲುವಾಗಿ ಮುಖಂಡರಿಗೆ ಇದು ಪ್ರತಿಷ್ಟೆಯ ಕಣ. ಬಿ.ಜೆ.ಪಿ.ಯಿಂದ ಸಿ.ಎಂ.ಗಂಗಾಧರ್ ಅಜರ್ಿ ಸಲ್ಲಿಸಿದ್ದಾರೆ.
    ಇನ್ನು ವಾಡರ್್ ಒಂದರಲ್ಲಿ ಎಂಟು ಜನ ಅಬ್ಯಾಥರ್ಿಗಳು ಸ್ಪಧರ್ಿಸಿದ್ದು ಅಂತಿಮವಾಗಿ ಕಣದಲ್ಲಿ ಎಷ್ಟು ಮಂದಿ ಇರುತ್ತರೆಂಬುದನ್ನು ಕಾದು ನೋಡಬೇಕಿದೆ, ವಾಡರ್್ 3ರಲ್ಲಿ ಇಬ್ಬರು ಸ್ಪಧರ್ಿಗಳಿದ್ದು ಇಬ್ಬರ ಸೆಣಸಾಟ ನಿಗಧಿಯಾಗಿರುವುದರಿಂದ ಇಲ್ಲಿ ಪಟ್ಟು ಪ್ರತಿ ಪಟ್ಟುಗಳು ಹೇಗಿರುತ್ತವೆ ನೋಡಬೇಕು,
    ಚಿಕ್ಕನಾಯಕನಹಳ್ಳಿ ಪುರಸಭಾ ವ್ಯಾಪ್ತಿಗೆ ಮೂರು ಹಳ್ಳಿಗಳು ಸೇರಿಕೊಳ್ಳುತ್ತವೆ, ಜೋಗಿಹಳ್ಳಿ, ಕುರುಬರಹಳ್ಳಿ, ದಬ್ಬೆಘಟ್ಟ ಈ ಮೂರರಲ್ಲಿ ದಬ್ಬೆಘಟ್ಟ ವಾಡರ್್4, ಇದೊಂದೇ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ಇಲ್ಲದೆ, ದೂರ ಉಳಿದಿರುವುದು ಇಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ.
    5ನೇ ವಾಡರ್್ಗೆ ಹಣದ ತೈಲಿಯನ್ನೇ ಹಿಡಿದು ಹೊರಟಿರುವ ಧೂಳಿನ ಧಣಿ ಇದ್ದಾರೆ, ಪ್ರಗತಿಪರ ಹೋರಾಟದ ನಾಗಕುಮಾರ್ ಇದ್ದಾರೆ, ಎ.ಬಿ.ವಿ.ಪಿ.ಯ ತಾಲೂಕು ಪ್ರಮುಖ್ ಚೇತನ್ ಪ್ರಸಾದ್ ಬಿ.ಜೆ.ಪಿ.ಯಿಂದ ಕಣದಲ್ಲಿದ್ದಾರೆ.
    6ನೇ ವಾಡರ್್ ಮಾಜಿ ಎಂ.ಎಲ್.ಎ. ಲಕ್ಕಪ್ಪನವರ ಪತ್ನಿ ಧರಣಿ  ಪುನರ್ ಆಯ್ಕೆ ಬಯಸಿರುವವರು, ಬಿ.ಜೆ.ಪಿ.ಯ ರೇವಣ್ಣನವರ ಪತ್ನಿ ಮೀನಾಕ್ಷಮ್ಮ ಇದ್ದರೆ ಜೆ.ಡಿ.ಎಸ್.ನವರು ಇಲ್ಲಿ ಮುಸ್ಲಿಂ ಮಹಿಳೆಯ ಮೂಲಕ ಚುನಾವಣೆಗೆ ಹೊರಟಿದ್ದಾರೆ.
    ವಾಡರ್್ 8ರಲ್ಲಿ ಮೂರು ಜನರಿದ್ದು ಇಬ್ಬರು ಒಂದೇ ಕೋಮಿನವರು ಮತ್ತೊಬ್ಬರು ಮುಸ್ಲಿಂ, ವಾಡರ್್ 9 ಇಲ್ಲಿ ರೇಣುಕಮ್ಮ ಪುನರ್ ಆಯ್ಕೆ ಬಯಸಿದ್ದರೆ ಮಾಜಿ ಕೌನ್ಸಿಲರ್ಗಳಾದ ಬಸ್ ರಾಜಣ್ಣ, ಗಾರೆ ಬೀರಪ್ಪ ತಮ್ಮ ಮಡದಿಯನ್ನು ನಿಲ್ಲಿಸಿದ್ದಾರೆ, ಬೋವಿ ಸಮಾಜದ ಸರಸ್ವತಿ ಸತೀಶ್ ಇಲ್ಲಿ ಸ್ಪಧರ್ಿಸಿದ್ದಾರೆ. 10ನೇ ವಾಡರ್ಿನಲ್ಲಿ ಪುನರ್ ಆಯ್ಕೆ ಬಯಸಿ ಜೆ.ಡಿ.ಎಸ್.ನ ರಮೇಶ್ ಸ್ಪಧರ್ಿಸಿದ್ದರೆ, ಹಿರಿಯ ಬಿ.ಜೆ.ಪಿ.ಮುಖಂಡ ಶ್ರೀನಿವಾಸಮೂತರ್ಿ, ಕೆಜೆಪಿಯ ರೇಣುಕಮೂತರ್ಿ, ಕಾಂಗ್ರೆಸ್ನವರೂ ಇಲ್ಲೊಂದು ಅಬ್ಯಾಥರ್ಿಯನ್ನು ಹಾಕಿದ್ದಾರೆ. 11ನೇ ವಾಡರ್್ನಲ್ಲಿ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂತರ್ಿ ಆಯ್ಕೆ ಬಯಸಿದ್ದರೆ, ಕಳೆದ ಸಲ ಅಲ್ಪ ಮತಗಳಲ್ಲಿ ಸೋಲುಂಡ ಬಿ.ಜೆ.ಪಿ.ಯ ಈಶ್ವರಯ್ಯ, ಕಾಂಗ್ರೆಸ್ನ ಕುಮಾರಸ್ವಾಮಿ ಸ್ಪಧರ್ಿಸಿದ್ದಾರೆ.
    12ನೇ ವಾಡರ್್ನಲ್ಲಿ ಕೆ.ಜೆ.ಪಿ.ಯ ಬಾಬು ಸಾಹೇಬ್ ಎರಡನೇ ಬಾರಿಗೆ ಸದಸ್ಯನಾಗವು ಕನಸು ಕಂಡಿದ್ದರೆ, ಜೆ.ಡಿ.ಎಸ್ನಲ್ಲಿ ದೇವಾಂಗ ಸಮಾಜದ ಹಿರಿಯರಾದ  ತಿಮ್ಮಪ್ಪನವರನ್ನು ನಿಲ್ಲಿಸಿದ್ದಾರೆ, ಬಿ.ಜೆ.ಪಿ.ಯ ಧನಪಾಲ್, ಕಾಂಗ್ರೆಸ್ನ ಜಯಲಕ್ಷ್ಮಿ ತೊಡರಗಾಲು ಸ್ಕಿಂನವರು. 13ನೇ ವಾಡರ್್ನ ಜೆ.ಡಿ.ಎಸ್ನ ಹಳೇ ಹುಲಿ ಸಿ.ಎಂ.ರಂಗಸ್ವಾಮಿ ಕಣದಲ್ಲಿದ್ದಾರೆ, ಗೋಪಾಲಕೃಷ್ಣ, ಯಶೋಧಮ್ಮ ಏನು ಮಾಡುತ್ತಾರೊ ನೋಡಬೇಕು. 14ನೇ ವಾಡರ್್ನಿಂದ ಜೆ.ಡಿ.ಎಸ್ನಿಂದ ಎಚ್.ಬಿ.ಪ್ರಕಾಶ್ ಇದ್ದಾರೆ ಕಳೆದ ಬಾರಿ ಇಲ್ಲಿ ಸೋಲುಂಡವರು, ಬಿ.ಜೆ.ಪಿ.ಯ ಸಿ.ಕೆ.ಶಾಂತಕುಮಾರ್, ಕಾಂಗ್ರೆಸ್ನ ಕೃಷ್ಣೇಗೌಡ, ಕೆಜೆಪಿಯಿಂದ ಶಶಿಕುಮಾರ್  ಅಜರ್ಿ ಸಲ್ಲಿಸಿದ್ದಾರೆ. 15ನೇ ವಾಡರ್್ನಲ್ಲಿ ಕಾಂಗ್ರೆಸ್ನ ಸಿ.ಬಸವರಾಜು ಅಪ್ಪನ ಕಾಲದಿಂದ ಪುರಸಭೆ ಪ್ರವೇಶವನ್ನು ಮಿಸ್ ಮಾಡಿಕೊಂಡವರಲ್ಲ, ಜೆ.ಡಿ.ಎಸ್.ನ ಮಲ್ಲೇಶಯ್ಯ ಕೆ.ಜೆ.ಪಿ.ಯ ಮಹಮದ್ ಸುಹೇಲ್ ಇದ್ದಾರೆ.
    16ನೇ ವಾಡರ್್ ಮುಸ್ಲಿಂರೇ ಅಧಿಕವಾಗಿರುವ ಈ ವಾಡರ್್ನಲ್ಲಿ ಮೂರು ಪಾಟರ್ಿಯವರು  ಒಂದೇ ಧರ್ಮದವರನ್ನೇ ಕಣಕ್ಕಿಳಿಸಿದ್ದಾರೆ. 18ನೇ ವಾಡರ್್ ಇಲ್ಲಿನ ದೇವಿ ನಾಟಕ ಸಂಘದವರು ಪ್ರಬಲಬಹುತೇಕ ಜೆ.ಡಿ.ಎಸ್. ವಾಡರ್್ ಎಂದೇ ಗುರುತಿಸಿಕೊಂಡಿದೆ ಎಲ್ ಪ್ರೇಮ ಅಬ್ಯಾಥರ್ಿ ಆದ್ದರಿಂದ ಕಾಂಗ್ರೆಸ್ನ ಸಿ.ಎಲ್.ಶಾಂತಮ್ಮ ಯಾವ ತಂತ್ರ ಮಾಡುತ್ತಾರೆ ನೋಡಬೇಕು.19 ನೇ ವಾಡರ್್ನಿಂದ ಸಿ.ಟಿ.ದಯಾನಂದ್ ಜೆ.ಡಿ.ಎಸ್ ಅಬ್ಯಾಥರ್ಿ ಇವರು ಶಾಸಕ ಸಿ.ಬಿ.ಸುರೇಶ್ ಬಾಬು ರವರ ದಾಯಾದಿ, ಪಕ್ಷೇತರರಾಗಿ ಲೋಕೇಶ್ ಕಾಂಗ್ರೆಸ್ನಿಂದ ಕಳೆದ ಬಾರಿ ಸೋಲುಂಡ ಲಕ್ಷ್ಮಯ್ಯ ಅಬ್ಯಾಥರ್ಿ. 20ನೇ ವಾಡರ್್ ಇಲ್ಲಿ ಜೆ.ಡಿ.ಎಸ್.ನ ಸಿ.ಆರ್.ಗೀತ ಸ್ಟ್ರಾಂಗ್, ಬಿ.ಜೆ.ಪಿ.ಯ ಶಕುಂತಲಮ್ಮ ಅಜರ್ಿ ಹಾಕಿದ್ದಾರೆ. 21ನೇ ವಾಡರ್್ನಲ್ಲಿ ಜೆ.ಡಿ.ಎಸ್.ನ  ಪುಷ್ಪಾವತಿ, ಬಿ.ಜೆ.ಪಿ.ಯ ಹೇಮಾವತಿ ಸ್ಪಧರ್ಿಸಿದ್ದಾರೆ.22ನೇ ವಾಡರ್್ನಿಂದ ಜೆ.ಡಿ.ಎಸ್.ನ ರೇಣುಕಮ್ಮ ಸ್ಟ್ರಾಂಗ್, ಬಿ.ಜೆ.ಪಿ.ಯ ಮಾಲ ಏನು ಮಾಡುತ್ತಾರೆ ನೋಡಬೇಕು, 23ನೇ ವಾಡರ್್ನಲ್ಲಿ ಜೆ.ಡಿ.ಎಸ್ನಿಂದ ಅಶೋಕ, ಬಿ.ಜೆ.ಪಿ.ಯಿಂದ ಗಂಗಾಧರಯ್ಯ, ಕಾಂಗ್ರೆಸ್ನ ನಿವರ್ಾಣಸಿದ್ದಯ್ಯ, ಬಿ.ಎಸ್.ಆರ್ನಿಂದ ಲಿಂಗದೇವರು ಸ್ಪಧರ್ಿಸಿದ್ದಾರೆ ಇದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ.
 


ಗುಡ್ಡಕ್ಕೆ ಬೆಂಕಿ ಇಡಬೇಡಿ, ಜೀವ ಪ್ರಭೇದಗಳನ್ನು                 ಸುಡಬೇಡಿ: ಪರಿಸರ ಕಾರ್ಯಕರ್ತರು
                                   
ಚಿಕ್ಕನಾಯಕನಹಳ್ಳಿ,ಫೆ.24:ತಾಲ್ಲೂಕಿನ ಮದಲಿಂಗನ ಕಣಿವೆ ಮತ್ತು ತೀರ್ಥ ರಾಮಲಿಂಗೇಶ್ವರ ಅರಣ್ಯ ಪ್ರದೇಶಗಳು ನೈಸಗರ್ಿಕ ಕಾವಲುಗಾರರಂತಿದ್ದು ನಿರಂತರ ಗಣಿಗಾರಿಕೆ ಮತ್ತು ಬೇಸಿಗೆಯಲ್ಲಿ ಬೆಂಕಿ ಆಹುತಿಯಿಂದ ಜರ್ಜರಿತವಾಗಿವೆ.  ಅನಾಹುತವನ್ನು ಅರಿವು ಮಾಡಿಕೊಂಡು ಇದರ ವಿರುದ್ದ ಧ್ವನಿ ಎತ್ತಬೇಕು ಎಂದು ಡಿಸಿಸಿ ಬ್ಯಾಂಕ್ ನಿದೇಶಕ ಸಿಂಗದಹಳ್ಳಿ ರಾಜಕುಮಾರ್ ಹೇಳಿದರು.
  ಭಾನುವಾರ ಗುಡ್ಡಗಳನ್ನು ಬೆಂಕಿಯಿಂದ ಕಾಪಾಡಿ ಎಂಬ ಜನಜಾಗೃತಿ ಮೋಟಾರ್ ಸೈಕಲ್ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.   ಗುಡ್ಡದ ತಪ್ಪಲಿನ ಜನರು ತಮಗೆ ಗೊತ್ತಿಲ್ಲದೆ ಬೀಡಿಕಟ್ಟಲು ತೂಬರೆ ಎಲೆ ಚನ್ನಾಗಿ ಬರುತ್ತವೆ,ಭಾದೆ ಹುಲ್ಲು ಚಿಗುರುತ್ತದೆ ಎಂಬ ಮೂಡನಂಬಿಕೆಯಿಂದ ಗುಡ್ಡಗಳಿಗೆ ಬೆಂಕಿ ಹಾಕುತ್ತಿದ್ದು ನೂರಾರು ಬಗೆಯ ಪ್ರಾಣಿ ಪಕ್ಷಿಗಳು,ಸಾವಿರಾರು ಸಸ್ಯ ಪ್ರಭೇದಗಳು,ಲಕ್ಷಾಂತರ ಕೀಟ ವೈವಿಧ್ಯಗಳು ಮತ್ತು ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿದ್ದು ಕಾಡುಪ್ರಾಣಿಗಳು ಆಶ್ರಯ ಅರಸಿ ಹಳ್ಳಿಗಳಿಗೆ ನುಗ್ಗುತ್ತಿವೆ ಮತ್ತು ತೆಂಗಿನ ತೋಟಗಳಿಗೆ ನುಸಿಪೀಡೆಯಂತಹ ರೋಗಗಳು ತಗುಲಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
 ಪ್ರಾಸ್ತಾವಿಕ ಮಾತುಗಳನ್ನಾಡಿದ ಸೃಜನಾ ಸಂಘಟನೆಯ ಎನ್. ಇಂದಿರಮ್ಮ ಅರಣ್ಯ ಇಲಾಖೆ,ಸಾರ್ವಜನಿಕ ಅರಣ್ಯ ಸಮಿತಿಗಳು ಕಣ್ಣುಮುಚ್ಚಿಕುಳಿತಿದ್ದು ರಾಷ್ಟೀಯ ಉಧ್ಯಾನಗಳು ಮತ್ತು ಅಭಯಾರಣ್ಯಗಳಿಗೆ ಬೆಂಕಿ ಬಿದ್ದಾಗ ಮಾತ್ರ ಕಣ್ಣು ಬಿಡುತ್ತವೆ ಆದ್ದರಿಂದ ಎಚ್ಚರದಿಂದಿದ್ದು ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು ಈ ಸದುದ್ದೇಶದಿಂದ ಗುಡ್ಡಗಲ ಹೆಬ್ಬಾಗಿಲಿನಂತಿರುವ ಹೊಸಹಳ್ಳಿಯಿಂದ ಜಾಥಾ ಪ್ರಾರಂಭವಾಗುತ್ತಿದೆ ಎಂದರು.
 ಪರಿಸರ ಗೀತೆಗಳನ್ನು ಹಾಡುತ್ತ,ಘೋಣೆಗಳನ್ನು ಕೂಗುತ್ತ,ಮದಲಿಂಗನ ಕಣಿವೆ ತಪ್ಪಲಲ್ಲಿ ಬರುವ ಹಳ್ಳಿಗಳಲ್ಲಿ ಪರಿಸರ ಜಾಗೃತಿ ಸಭೆಗಳನ್ನು ನಡೆಸುತ್ತ ಜಾಣೇಹಾರ್,ಕೆಂಪರಾಯನಹಟ್ಟಿ,ಅಜ್ಜೀಗುಡ್ಡೆ, ಕಾತ್ರಿಕೆಹಾಳ್ ಮೂಲಕ ಸಾಗಿದ ಜಾಥಾ ತೀರ್ಥರಾಮೇಶ್ವರ ವಜ್ರದಲ್ಲಿ ಸಭೇ ನಡೆಸಿತು.ಸಭೆಯಲ್ಲಿ ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸುಲು ತೀಮರ್ಾನಿಸಲಾಯಿತು. ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗು ಯುವಕರಿಗೆ ವಿಚಾರ ಸಂಕಿರಣ ಆಯೋಜಿಸುವ ತೀಮರ್ಾನ ಕೈಗೊಳ್ಳಲಾಯಿತು.
  ಕೆಂಪರಾಯನಹಟ್ಟಿಯ ಲಕ್ಮಣ ಅರಣ್ಯ ಇಲಾಖೆಯವರೇ ಗುಡ್ಡಕ್ಕೆ ಬೆಂಕಿ ಇಡುತ್ತಾರೆ ಎಂದು ದೂರಿದರು. ಈ ಸಂಬಂಧ ಪತ್ರಿಕೆ ಅರಣ್ಯ ಇಲಾಖೆಯನ್ನು ಸಂಪಕರ್ಿಸಿದಾಗ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಫೈರ್ ಲೈನ್ ಮಾಡುತ್ತೇವೆ. ಒಬ್ಬ ವನಪಾಲಕ ಇದ್ದು ಬೆಂಕಿ ಅನಾಹುತವನ್ನು ಮಾನೀಟರಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದು ಎಎಫ್ಒ ಮಾರುತಿ ಸ್ವಷ್ಟೀಕರಣ ನೀಡಿದರು ನಂತರ ಯರೇಕಟ್ಟೆ,ತೀರ್ಥಪುರ,ದೊಡ್ಡರಾಂಪುರ,ದೊ.ಗೊಲ್ಲರಹಟ್ಟಿ,ಚಿಕ್ಕರಾಂಪುರ ಮಾರ್ಗವಾಗಿಸಾಗಿ ಸುಮಾರು 50 ಕಿ.ಮಿ.ಸಾಗಿ ಸಂಜೆ 8.30ಕ್ಕೆ ಚಿಕ್ಕರಾಂಪುರ ಗೊಲ್ಲರಹಟ್ಟಿಯಲ್ಲಿ ಸಮಾರೋಪಗೊಂಡಿತು.
     ಜಾಥಾದಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾ ಕೇಶವಮೂತರ್ಿ,ವಿಜ್ಷಾನ ಸಂಘದ ರಾಮಕೃಷ್ಣಪ್ಪ, ಸೃಜನಾ ಅಧ್ಯಕ್ಷೆ ಜಯ್ಯಮ್ಮ, ಎಂ.ಎಸ್.ರವಿಕುಮಾರ್,ಸಿ.ಬಿ.ರೇಣುಕಸ್ವಾಮಿ,ಜಯದೇವ ಮೂತರ್ಿ,ಕವಿಯತ್ರಿ ಪುಷ್ಪಾಶಿವಣ್ಣ, ರಾಧಾಕೃಷ್ಣ, ಕವಿತಾ ಚನ್ನಬಸಪ್ಪ,ರಾಮಕುಮಾರ್,ಈಶ್ವರಪ್ಪ,ದಿನಕರ್ ಲೇಖಕ ಅಣೇಕಟ್ಟೆ ವಿಶ್ವನಾಥ್ ಮುಂತಾದವರು ಹಾಗು ಶಾಲಾ ಕಾಲೇಜು ವಿದ್ಯಾಥರ್ಿಗಳು ಭಾಗವಹಿಸಿದ್ದರು.
ರಸಗೊಬ್ಬರ ಸಬ್ಸಿಡಿ ನೀಡಲು ಬ್ಯಾಂಕ್ ಖಾತೆಗೆ ಆಧಾರ್ ಕಾಡರ್್ ಸೇರಿಸಲು ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಫೆ.26 : 2013-14 ನೇ ಸಾಲಿನಿಂದ ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ರಸಗೊಬ್ಬರ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಆಧಾರ್ ಕಾಡರ್್ ಕೋರ್ ಬ್ಯಾಂಕಿಂಗ್ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು ರೈತ ಭಾಂದವರು ಆಧಾರ್ ಕಾಡರ್್ ನಮೂದಿಸಿ ಬ್ಯಾಂಕ್ ಖಾತೆ ತೆರೆಯುವುದು ಅವಶ್ಯಕವಾಗಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ರಸಗೊಬ್ಬರಗಳ ಪೂರ್ಣದರ ಪಾವತಿಸಿ ಹೊಂದಿದ ಹಾಗೂ ಟಜಿಟ  ನಲ್ಲಿ ನೊಂದಾಯಿತ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದಾಗಿದೆ. ಆದುದರಿಂದ ಖಾತೆ ಹೊಂದಿರುವವರು ಮಾತ್ರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ, ಆದುದರಿಂದ ಕೋರ್ ಆಧಾರ್ ಲಿಂಕ್ ಖಾತೆಗಳನ್ನು ಆದಷ್ಟು ಬೇಗ ಮಾಡಿಸಿಕೊಳ್ಳಲು ರೈತ ಭಾಂದವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
   ತೋಟಕ್ಕೆ ಬೆಂಕಿ: ಅಡಿಕೆ, ತೆಂಗು, ಬಾಳೆ ಗಿಡಗಳು ಭಸ್ಮ
                                       
ಚಿಕ್ಕನಾಯಕನಹಳ್ಳಿ,ಫೆ.26: ಪಟ್ಟಣದ ಹೊರವಲಯದಲ್ಲಿರುವ ದಾಸಿಹಳ್ಳಿ ಗ್ರಾಮದ ತೋಟಕ್ಕೆ ಬೆಂಕಿ ತಗಲಿ ಸುಮಾರು ಮೂರು ಲಕ್ಷ ರೂಗಳಿಗೂ ಹೆಚ್ಚು ಬೆಲೆ ಬಾಳು ಮರ,ಗಿಡ ಮತ್ತು ಫಸಲುಗಳು ಬೆಂಕಿಗಾಹುತಿಯಾಗಿದೆ.
    ಪಟ್ಟಣದ ಗುಡಿದಾಸಿ ಮಂಜುನಾಥ್ ಎಂಬುವರಿಗೆ ಸೇರಿದ ತೋಟಕ್ಕೆ ಇದೇ 25ರಂದು ಆಕಸ್ಮಿಕವಾಗಿ ಬೆಂಕಿ ತಗಲಿದ್ದರಿಂದ ತೋಟದಲ್ಲಿದ್ದ ಐದು ನೂರು ಅಡಿಕೆ ಮರ, ನಾಲ್ಕು ನೂರು ಬಾಳೆ ಗಿಡ ಮತ್ತು ಐವತ್ತು ತೆಂಗಿನ ಮರಗಳು ಬೆಂಕಿ ಆಹುಯಾಗಿದೆ. ಜೊತೆಗೆ ಪಕ್ಕದ ತೋಟಕ್ಕೂ ಬೆಂಕಿ ತಗಲಿದ್ದು ಆ ತೋಟದಲ್ಲಿನ ಅಡಿಕೆ ಮರ, ಹಾಗೂ ಎಲೆ ಬಳ್ಳಿಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಸಕರ್ಾರಿ ಪ್ರೌಢಶಾಲಾ ಸ.ಶಿ.ಗಳ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.26: ಸಕರ್ಾರಿ ಪ್ರೌಢಶಾಲೆ ಸಹ ಶಿಕ್ಷಕರ ಗ್ರೇಡ್-2ರ ಜೇಷ್ಠತಾ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ನಲ್ಲಿ ಪ್ರಕಟಸಿಲಾಗಿದೆ, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಮಾಚರ್ಿ 4ರೊಳಗೆ ಕಛೇರಿಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
    ಜೇಷ್ಠತಾ ಪಟ್ಟಿಯನ್ನು 01.01.2008 ರಿಂದ 31.02.2010 ರವರೆಗೆ ಅಂತಿಮಗೊಳಿಸಿದ್ದು ಪಟ್ಟಿಯಲ್ಲಿ ಬಿಟ್ಟುಹೋಗಿರುವ ಪ್ರಕರಣಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದ್ದು ಇಲಾಖೆಯ ವೆಬ್ ಸೈಟ್ ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ <ಣಣಠಿ://ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ>  ಪರಿಶೀಲಿಸಲು ಸಂಬಂಧಿಸಿದ ಶಿಕ್ಷಕರಿಗೆ ತಿಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Friday, February 22, 2013


ಕಾವೇರಿಗಾಗಿ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ                   ರಾಜೀನಾಮೆ ನೀಡಬೇಕು
ಚಿಕ್ಕನಾಯಕನಹಳ್ಳಿ,ಫೆ.22 : ಕಾವೇರಿ ಐತೀಪರ್ು ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷಿಯಿಂದ ನಾಡಿನ ಎಲ್ಲಾ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ನಿಲುವನ್ನು ಕೇಂದ್ರಕ್ಕೆ ಸ್ಪಷ್ಟ ಪಡಿಸಬೇಕಿತ್ತು  ಆದರೆ ರಾಜ್ಯ ಸಕರ್ಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ತಾಲೂಕಿನ ಸುಂಟರೆಮೆಳೆ ಶ್ರಿ ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ಜೀಣರ್ೋದ್ದಾರ, ಪುನರ್ ಪ್ರಾಣ ಪ್ರತಿಷ್ಟಾಪನೆ ಹಾಗೂ ನೂತನ ಶಿಖರ  ಕಳಶಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಸಕರ್ಾರದ ಅಧಿಸೂಚನೆ ತಮಿಳುನಾಡಿನ ಮುಖ್ಯಮಂತ್ರಿಗೆ ಹುಟ್ಟು ಹಬ್ಬದ ಕೊಡುಗೆಯಾಗಿದ್ದರೆ, ರಾಜ್ಯದ ಪಾಲಿಗೆ ಕರಾಳ ದಿನವಾಗಿದೆ ಎಂದ ಅವರು, ಈ ಅಧಿಸೂಚನೆಯಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಲಿದ್ದು, ರಾಜ್ಯದಲ್ಲಿ ಮಳೆ ಬರಲಿ ಬಿಡಲಿ ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡಲೇಬೇಕಾದ ಪರಿಸ್ಥಿತಿ ಒದಗಿದೆ ಎಂದರು.
    ಕೆ.ಜೆ.ಪಿ. ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸುವುದಲ್ಲದೆ, ಈ ಭಾಗದ 9 ಜಿಲ್ಲೆಗಳಿಗೆ ನೀರು ಹರಿಸಲು 25 ಸಾವಿರ ಕೋಟಿ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು.
    ರಾಜ್ಯದ ಬಜೆಟ್ನ ಗಾತ್ರ  ಕೇವಲ 40 ಸಾವಿರ ಕೋಟಿಗೆ ಸೀಮಿತವಾಗಿದ್ದನ್ನು ನಾನು ಸಿ.ಎಂ.ಆಗಿದ್ದಾಗ ರಾಜ್ಯದ ಜನತೆಯ ಮೇಲೆ ಯಾವೊಂದು ಹೊಸ ತೆರಿಗೆಯನ್ನು ಹಾಕದೆ  ಬಜೆಟ್ನ ಗಾತ್ರವನ್ನು  ಒಂದು ಲಕ್ಷ ಕೋಟಿ ರೂಗಳಿಗೆ ಏರಿಸುವ ಮೂಲಕ, ನಾಡಿನ  ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿರುವುದಾಗಿ ತಿಳಿಸಿದರಲ್ಲದೆ, ರೈತರ ಪರವಾಗಿ ಬಜೆಟ್ ಮಂಡಿಸಿ ಅವರ ಕಷ್ಟಕ್ಕೆ ಸ್ಪಂದಿಸಿದ್ದೇನೆ, ವಾಷರ್ಿಕ ಶೇ. 14 ರೂ ದರದಲ್ಲಿ ಬಡ್ಡಿ ಕಟ್ಟುತ್ತಿದ್ದ ರೈತರಿಗೆ ಅವರ ಬವಣೆ ತಪ್ಪಿಸಲು ಅದನ್ನು ಶೇ.1ಕ್ಕೆ ಇಳಿಸಿ ಸುಲಭವಾಗಿ ಸಾಲ ಸಿಗುವಂತೆ ಮಾಡಿದ್ದೇನೆ ಎಂದರು.
    ನಮ್ಮ ಪಕ್ಷ  ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ 200 ಸಣ್ಣ ಪುಟ್ಟ ಮಠಗಳನ್ನು ಗುತರ್ಿಸಿ ಅವುಗಳ ಅಭಿವೃದ್ದಿಗೆ ತಲಾ ಒಂದು ಕೋಟಿಯಂತೆ ಬಜೆಟ್ನಲ್ಲಿ 200 ಕೋಟಿ ರೂಗಳನ್ನು ಮೀಸಲಿಡುವುದಾಗಿ ತಿಳಿಸಿದರು.
 ಮಾಜಿ ಶಾಸಕ  ಜೆ.ಸಿ. ಮಾಧುಸ್ವಾಮಿ ಹಾಗೂ ಸಂಸದ ಜಿ .ಎಸ್ ಬಸವರಾಜು ನಮ್ಮ ಜೊತೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆ ಹೇಳಿದರು.
 ಬಿ.ಎಸ್ ಯೂಡಿಯೂರಪ್ಪನವರು  ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರಿಗೆ  ಹೂವಿನ ಹಾರ ಹಾಕುವ ಮೂಲಕ  ಕೆ.ಜೆ.ಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
    ಸಂಸದ ಜಿ.ಎಸ್.ಬಸವರಾಜು ನೇತ್ರಾವತಿ ತಿರುವು ಯೋಜನೆ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನಾಲಾ ಯೋಜನೆಗಳಿಂದ 9ಜಿಲ್ಲೆಗಳ 10,200 ಕೆರೆಗಳಿಗೆ ಶಾಶ್ವತ ನೀರನ್ನು ಹರಿಸುವುದಕ್ಕೆ ಸಾಧ್ಯವೆಂಬದನ್ನು ನೀರಾವತಿ ತಜ್ಞ ಪರಮಶಿವಯ್ಯನವರ ವರದಿಯಲ್ಲಿ ತಿಳಿಸಿದೆ, ಈ ವರದಿ ಅನುಷ್ಠಾನಗೊಳ್ಳುವುದಕ್ಕೆ 25 ಸಾವಿರ ಕೋಟಿ ರೂಗಳ ಅನುದಾನ ಅವಶ್ಯಕ, ಇದು  ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ ಸಾಧ್ಯವಾಗುವುದು ಎಂದರು.
    ತಾಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸಲು ಯಡಿಯೂರಪ್ಪ 120 ಕೋಟಿ ರೂಗಳ ಯೋಜನೆ ಜಾರಿಗೆ ತಂದು, ಈ ಕಾರ್ಯಕ್ಕೆ 40 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ ಶೀಘ್ರವೇ ಈ ಯೋಜನೆ ಕಾಯರ್ಾರಂಭಗೊಳ್ಳುವುದು ಎಂದರು.
    ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್ರವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಮಂತ್ರಿಯಾಗುವ ಅವಕಾಶವಿತ್ತು, ಆದರೆ ನಾನು ಅವರನ್ನು ನಮ್ಮ ತಾಲೂಕಿಗೆ ನೀರು ಕೊಡಿ ಎಂದು ಕೇಳಿದೆನೇ ಹೊರತು, ಮಂತ್ರಿಗಿರಿ ಬೇಡವೆಂದೆ ಆದ್ದರಿಂದ್ದಲ್ಲೇ ಆಗ ನಮಗೆ ನೀರಿನ ಅಲೋಕೇಷನ್ ಸಿಕ್ಕಿದ್ದು, ನಾನು ಕಾನೂನಿಗೆ ಬೆಲೆ ಕೊಡುವವನು ಆದರಿಂದಾಗಿ ಕೃಷ್ಣ ಬೇಸಿನ್ಗೆ ನೀರು ಸಿಗುವುದು ಕಷ್ಟವೆಂದು ಹೇಳಿದ್ದೆ ಎಂದರು.
     ವಿಧಾನ ಸಭೆಯಿಂದ ಪುರಸಭೆವರೆಗೆ ಎಲ್ಲರೂ ಬಂಡವಾಳ ಶಾಹಿಗಳು ಸ್ಪಂಧರ್ಿಸುತ್ತಿದ್ದು, ಸೇವೆ ಮಾಡವ ಬದಲು ಲಾಭ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದುಗೆ ಮಠ ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ, ಗೋಡೆಕೆರೆ ಸಂಸ್ಥಾನದ ಮಠದ ಪೀಠಾಧ್ಯಕ್ಷರುಗಳಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಸಿದ್ದರಾಮದೇಶಿ ಕೇಂದ್ರ ಸ್ವಾಮಿ ಆಶರ್ೀವಚನ ನೀಡಿದರು.
    ತಾ.ಪಂ.ಸದಸ್ಯ ಎಚ್.ಆರ್.ಶಶಿಧರ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಎನ್.ಶಿವರಾಜ್, ತಾ.ಪಂ. ಮಾಜಿ ಅಧ್ಯಕ್ಷರಾದ ಎಚ್.ಎಂ.ಸುರೇಂದ್ರಯ್ಯ, ಸಿದ್ದರಾಮಣ್ಣ, ಸಾಹಿತಿ ಸಿ.ಎಚ್.ಮರಿದೇವರು ಗ್ರಾ.ಪಂ.ಅಧ್ಯಕ್ಷ ಬಸವೇಗೌಡ ಸೇರಿದಂತೆ ಹಲವರಿದ್ದರು.
    ಈ ಸಂದರ್ಭದಲ್ಲಿ ದೇವಾಲಯ ನಿಮರ್ಾತೃ ಹಾಗೂ ದಾನಿ ಎಸ್.ಎಲ್.ಶಾಂತಕುಮಾರ್ರವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.
    ದೇವಾಲಯದ ಟ್ರಸ್ಟಿ ಎಸ್.ರಾಜಶೇಖರ್ ಸ್ವಾಗತಿಸಿದರು,
              36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಫೆ.22 : ಪಟ್ಟಣದ ಪುರಸಭೆಯ 23 ವಾಡರ್್ಗಳಲ್ಲಿ ಜೆಡಿಎಸ್ನಿಂದ 22, ಬಿಜೆಪಿಯಿಂದ 9, ಕಾಂಗ್ರೆಸ್ನಿಂದ ಇಬ್ಬರು, ಕೆಜೆಪಿಯಿಂದ ಒಬ್ಬರು ಹಾಗೂ ಪಕ್ಷೇತರರಾಗಿ ಇಬ್ಬರು ಸೇರಿ ಒಟ್ಟು  36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ.
    1ನೇವಾಡರ್್: ಎಚ್.ಸಿ.ಶ್ಯಾಮಲ(ಬಿಜೆಪಿ), ದಾಕ್ಷಾಯಣಮ್ಮ(ಜೆಡಿಎಸ್, 2ನೇ ವಾಡರ್್ : ಇಂದ್ರಮ್ಮ(ಜೆಡಿಎಸ್), 3ನೇ ವಾಡರ್್ ಸಿ.ಡಿ.ಚಂದ್ರಶೇಖರ್(ಜೆಡಿಎಸ್), 4ನೇ ವಾಡರ್್ ಎಂ.ಡಿ.ನೇತ್ರಾವತಿ(ಕೆಜೆಪಿ), ಕೆ.ಶೈಲಜ(ಜೆಡಿಎಸ್), 5ನೇ ವಾಡರ್್ ಚೇತನ್ಪ್ರಸಾದ್(ಬಿಜೆಪಿ), ರವಿಚಂದ್ರ ಎಂ.ಕೆ(ಜೆಡಿಎಸ್), 6ನೇ ವಾಡರ್್ ಶಾಹೇದ ಕೆ.ಎಸ್(ಜೆಡಿಎಸ್), 7ನೇ ವಾಡರ್್ ಸಿ.ಎಮ್.ರಾಜಶೇಖರ್(ಜೆಡಿಎಸ್), 8ನೇ ವಾಡರ್್ ಮಲ್ಲಿಕಾಜರ್ುನಯ್ಯ(ಜೆಡಿಎಸ್), 9ನೇವಾಡರ್್ ಸರಸ್ವತಿ(ಬಿಜೆಪಿ), ಕಮಲಮ್ಮ(ಜೆಡಿಎಸ್), 10ನೇವಾಡರ್್ ಸಿ.ಎಸ್.ರಮೇಶ್(ಜೆಡಿಎಸ್),  11ನೇವಾಡರ್್ ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್), ಈಶ್ವರಯ್ಯ(ಬಿಜೆಪಿ), 12ನೇವಾಡರ್್ ಧನಪಾಲ್(ಬಿಜೆಪಿ), ಸಿ.ಆರ್.ತಿಮ್ಮಪ್ಪ(ಜೆಡಿಎಸ್, 13ನೇವಾಡರ್್ ಯಶೋಧಮ್ಮ(ಪಕ್ಷೇತರ), ಸಿ.ಎಮ್.ರಂಗಸ್ವಾಮಯ್ಯ(ಜೆ.ಡಿ.ಎಸ್), 14ನೇ ವಾಡರ್್ ಎಚ್.ಬಿ.ಪ್ರಕಾಶ್(ಜೆಡಿಎಸ್), 15ನೇ ವಾಡರ್್ ಮಲ್ಲೇಶಯ್ಯ(ಜೆಡಿಎಸ್), 16ನೇ ವಾಡರ್್ ಮಹಮದ್ಖಲಂದರ್ (ಜೆಡಿಎಸ್), 17ನೇ ವಾಡರ್್ ಸಿ.ಪಿ.ಮಹೇಶ್(ಕಾಂಗ್ರೆಸ್), ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್), ಸಿ.ಎಂ.ಗಂಗಾಧರಯ್ಯ(ಬಿಜೆಪಿ), 18ನೇವಾಡರ್್ ಎಲ್.ಪ್ರೇಮ(ಜೆಡಿಎಸ್), ಸಿ.ಎಲ್.ಶಾಂತಮ್ಮ(ಕಾಂಗ್ರೆಸ್), 19ನೇವಾಡರ್್ ಸಿ.ಟಿ.ದಯಾನಂದ(ಜೆಡಿಎಸ್), ಲೋಕೇಶ(ಪಕ್ಷೇತರ), 20ನೇವಾಡರ್್ ಶಕುಂತಲಮ್ಮ(ಬಿಜೆಪಿ), ಗೀತ ರಮೇಶ್ (ಜೆಡಿಎಸ್), 22ನೇ ವಾಡರ್್ ಮಾಲ(ಬಿಜೆಪಿ), ರೇಣುಕಾ(ಜೆಡಿಎಸ್), 23ನೇ ವಾಡರ್್ ಅಶೋಕ(ಜೆಡಿಎಸ್), ಗಂಗಾಧರಯ್ಯ(ಬಿಜೆಪಿ) ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ. 21ನೇ ವಾಡರ್್ನಲ್ಲಿ ಇದುವರೆಗೂ ಯಾವ ಅಭ್ಯಥರ್ಿಯು ಇನ್ನೂ ನಾಮ ಪತ್ರ ಸಲ್ಲಿಸಿಲ್ಲ.

 

Wednesday, February 20, 2013

ಸುಂಟರಮಳೆ ಸಿದ್ದರಾಮೇಶ್ವರ ದೇವಾಲಯ ಪ್ರವೇಶಕ್ಕೆ                  ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಫೆ.19 : ಸುಂಟರಮೆಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ಜೀಣರ್ೋದ್ಧಾರ ನೂತನ ದೇವಾಲಯ ಪ್ರವೇಶ, ಪುನರ್ ಪ್ರಾಣ ಪ್ರತಿಷ್ಠಾನಪನಾ, ಹಾಗೂ ನೂತನ ಶಿಖರ ಕಳಶಾರೋಹಣವನ್ನು ಇದೇ 21, 22ರ ಗುರವಾರ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    21ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ, ಹೆಂಜಾರು ಭೈರವೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮದೇವಿಯವರ ಆಗಮನದೊಂದಿಗೆ ದೇವಾಲಯದ ಪ್ರಮೇಶ ನಡೆಯಲಿದೆ.
    22ರಂದು ನಡೆಯುವ ಧಾಮರ್ಿಕ ಸಮಾರಂಭದ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಯವರು ಶಿವಾಲಯದ ಗೋಪುರಕ್ಕೆ ಕಳಶಾರೋಹಣ ನೆರವೇರಲ್ಪಡುತ್ತದೆ.
    22ರಂದು ಬೆಳಗ್ಗೆ 11ಕ್ಕೆ ನಡೆಯುವ  ಧಾಮರ್ಿಕ ಸಭೆಗೆ ಕಾಯಕಯೋಗಿ ಡಾ.ಶಿವಕುಮಾರಸ್ವಾಮಿಯವರು ಆಗಮಿಸಲಿದ್ದು,  ದೇವಾಲಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾಮಿರ್ಕ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಡೆಸಲಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು  ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ, ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶಿಕೇಂದ್ರಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಉಪಸ್ಥಿತರಿರಲಿದ್ದು,
ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ದೇವಾಲಯದ ನಿಮರ್ಾತೃ ಎಸ್.ಎಲ್.ಶಾಂತಕುಮಾರ್ರವರಿಗೆ ಸನ್ಮಾನ ನಡೆಯಲಿದೆ ಎಂದರು.
    ಈ ಸಂದರ್ಭದಲ್ಲಿ ದಾನಿ ಎಸ್.ಎಲ್.ಶಾಂತಕುಮಾರ್, ತಾ.ಪಂ.ಸದಸ್ಯ ಶಶಿಧರ್, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ ಉಪಸ್ಥಿತರಿದ್ದರು.

ಯಾವ ಪಕ್ಷಕ್ಕೆ ಸೇರಬೆಕೆಂಬ ವಿಷಯದಲ್ಲಿ  ನಮ್ಮ ಕಾರ್ಯಕರ್ತರು ನನ್ನನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಫೆ.19 : ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಮೂಲಕವೇ ಚುನಾವಣೆಗೆ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    ನವೋದಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸ ಮಾತನಾಡಿದ ಅವರು ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪದರ್ಿಸಬೇಕೆಂಬ ನಮ್ಮ ನಿಧರ್ಾರವನ್ನೇ ಕಾರ್ಯಕರ್ತರು ಗೊಂದಲ ಮಾಡಿದ್ದಾರೆ, ಕೆಲವರು ಕೆಜೆಪಿ ಪಕ್ಷದಿಂದ ಸ್ಪಧರ್ಿಸಿ ಎಂದರೆ,  ಇನ್ನು ಕೆಲವರು ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿ ಎಂಬ ನಿಲುವನ್ನು ತಿಳಿಸುತ್ತಿರುವುದರಿಂದ ಚುನಾವಣೆಗೆ ಗೊಂದಲ ಏರ್ಪಟ್ಟಿದೆ ಎಂದರು.
 ಸುಂಟರಮಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯ ನೂತನ ದೇವಾಲಯಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಗಮನದಿಂದ ಯಾವುದೇ ರಾಜಕೀಯ ಬೆಳವಣಿಗೆಯಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಂದಿಕೆರೆ ಶ್ರೀ ಗವಿಶಾಂತ ವೀರಸ್ವಾಮಿಗಳ ವೈಭವದ ಜಾತ್ರೋತ್ಸವ ಆರಂಭ
ಚಿಕ್ಕನಾಯಕನಹಳ್ಳಿ,ಫೆ.19 : ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ ಫೆಬ್ರವರಿ 18ರಿಂದ 26ರವರಗೆ ಕಂದಿಕೆರೆಯಲ್ಲಿ ನಡೆಯಲಿದೆ.
18ರಂದು ವಿಘ್ನೇಶ್ವರ ಸ್ವಾಮಿಯವರಿಗೆ ಅಭಿಷೇಕ ಪೂಜೆ, 19ರಂದು ಭಜನಾಸಪ್ತಾಹ, 20ರಂದು ನವಗ್ರಹ ಸ್ವಾಮಿಗಳಿಗೆ ಮಹಾಮಂಗಳಾರತಿ, 21ರಂದು ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, 22ರಂದು ಅಂಭಾದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ, 23ರಂದು ಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ, ಸಹಸ್ತ್ರ ನಾಮಪೂಜೆ, 24ರಂದು ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ತ್ರನಾಮಪೂಜಾ, 101ಪೂಜಾಧಿಗಳು ನಡೆಯಲಿದ್ದು 25ರಂದು ಬೆಳಗ್ಗೆ ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲಿಗಳಿಗೆ ಅಭಿಷೇಕ, ಪೂಜೆ ನಿಬೂರು ಗ್ರಾಮಸ್ಥರಿಂದ ಬೆಳಗ್ಗೆ 10ಗಂಟೆಗೆ ರಥೋತ್ಸವಕ್ಕೆ ಕಳಸ ಸ್ಥಾಪನೆ ನೆರವೇರಲಿದೆ. 
26ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಸಾಧು ಸಂತರಿಗೆ ಕವದಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ
ಚಿಕ್ಕನಾಯಕನಹಳ್ಳಿ,ಫೆ.19 : ಶ್ರೀ ಪಾರ್ವತಿ ಪ್ರಸನ್ನ ರಾಮೇಶ್ವರಸ್ವಾಮಿಯವರ ಗಿರಿಜಾ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವು ಇದೇ ಫೆಬ್ರವರಿ 23ರಿಂದ ಮಾಚರ್್ 1ರವರೆಗೆ ನಡೆಯಲಿದೆ.
23ರಂದು ಮಹಾಗಣಪತಿ ಪೂಜೆ, 24ರಂದು ಪ್ರಕಾರೋತ್ಸವ, 25ರಂದು ಮಂಟಪೋತ್ಸವ, 26ರಂದು ನಿತ್ಯಹೋಮ, ಬಲಿದಾನ, ಪ್ರಾಕಾರೋತ್ಸವ, 27ರಂದು ಅವಭೃತಸ್ನಾನ, 28ರಂದು ಅನ್ನಸಂತರ್ಪಣೆ ನಡೆಯಲಿದ್ದು 1ರಂದು ಪ್ರಸನ್ನರಾಮೇಶ್ವರಸ್ವಾಮಿಯವರಿಗೆ ವಿಭೂತಿ ಅಲಂಕಾರ, ಅರಿಶಿನ ಅಲಂಕಾರ ಹಾಗೂಸಂಜೆ 6.30ಕ್ಕೆ ಭೂಕೈಲಾಸೋತ್ಸವ ನಡೆಯಲಿದೆ.

              ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ
ಚಿಕ್ಕನಾಯಕನಹಳ್ಳಿ, :ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರತ ಕಾರಣ ವಿವಿಧ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದ ಘಟನೆ ತಾಲ್ಲೂಕಿನ ಬೆಳಗುಲಿ ರಂಗನಾಥ ಸ್ವಾಮಿ ಬೆಟ್ಟದದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಬೆಳಗುಲಿ ಬೆಟ್ಟದ ಮೇಲೆ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿಯ ದೇಗುಲಕ್ಕೆ ಈಚೆಗೆ ಭಕ್ತರ ನೆರವಿನಿಂದ ನೂತನ ಗೋಪುರ ನಿಮರ್ಾಣ ಮಾಡಲಾಗಿತ್ತು. ಈ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಕಾರ್ಯಕ್ರಮವನ್ನು ಭಾನುವಾರ ಆಲಯದವತಿ ಹಾಗೂ ಏಳುಹಳ್ಳಿಗಳ ಭಕ್ತಾದಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಭಾನವಾರ ತಾಲ್ಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳನ್ನು ಆಹ್ವಾನಿಸಲಾಗಿತ್ತು.  ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ನಾಯಕರುಗಳು ಯಾವುದೇ ಸಾರ್ವಜನಿಕ ಸಂಪರ್ಕಗಳ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇರೀತಿ ಈ ಧಾಮರ್ಿಕ ಕಾರ್ಯಕ್ರಮಕ್ಕೆ ಮೊದಲಿಗೆ ಮಾಜಿ ಶಾಸಕ ಕೆ.ಎಸ್ಕಿರಣ್ಕುಮಾರ್  ಭಾನುವಾರ ಮಧ್ಯಾಹ್ನ 1-30 ಸಮಯದಲ್ಲಿ ಆಗಮಸಿದರು. ಅವರ ಹಿಂದೆ  ಸ್ಥಳೀಯ ಹಾಗೂ ಅವರ ಜೊತೆಯಲ್ಲಿದ್ದ ಬೆಂಬಲಿಗರೂ ಸಹ ಜೊತೆಗೂಡಿ ದೇವಸ್ಥಾನದ ಕಳಸಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿ ಸ್ವಲ್ಪಸಮಯವಿದ್ದು ವಾಪಸ್ ತೆರಳಿದರು. ನಂತರ ಅರ್ಧತಾಸಿನ ನಂತರ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಸಂಗಡಿಗರೊಂದಿಗೆ  ಸಹ ಬೆಟ್ಟಕ್ಕೆ ಆಗಮಿಸಿದರು.  ಅವರು ದೇವಾಲಯಕ್ಕೆ ಆಗಮಿಸಿದಾಗ ಸ್ಥಳೀಯವಾಗಿ ಅಲ್ಲಿದ್ದ ಅವರ ಬೆಂಬಲಿಗರು ಅವರನ್ನು ಸುತ್ತುವರೆದು ಆಲಯಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕೆಲ ಅಭಿಮಾನಿಗಳು ಅವರಗೆ ಜೈಕಾರ ಹಾಕಲು ಮುಂದಾದಾಗ ಮಾಧುಸ್ವಾಮಿಯವರೇ ಅದಕ್ಕೆ ತಡೆಒಡ್ಡಿದರು. ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂತಿರುಗಿದರು. ಅವರು ಹೋದ ಸ್ವಲ್ಪ ಸಮಯಕ್ಕೆ ಹಾಲಿ ಶಾಸಕ ಸಿ.ಬಿ. ಸುರೇಶ್ಬಾಬು ಬೆಟ್ಟಕ್ಕೆ ಬರುತ್ತಿದ್ದಂತಯೇ ಅಲ್ಲಿನ ವಾತಾವರಣವೇ ಬದಲಾಗಿ ಶಾಸಕರನ್ನು ವಿವಿಧ ವಾದ್ಯ ಗೋಷ್ಠಿ ಹಾಗೂ ಪರಾಕು ಮತ್ತು ಜೈಕಾರದೊಂದಿಗೆ ದೇವಾಲಯಕ್ಕೆ ಸ್ವಾಗತಿಸಿ ಪೂಜೆ ಸಲ್ಲಿಸುವವರೆಗೂ ಅವರನ್ನು ಆದರದಿಂದ ನೋಡಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ದೇವಾಲಯದಿಂದ ಹಿಂತಿರುಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆಯಿದ್ದ ಮಾಜಿ ಶಾಸಕರುಗಳ ಬೆಂಬಲಿಗರು ಹಾಲಿ ಶಾಸಕರಿಗೆ ವಿಶೇಷ ಸ್ವಾಗತ ಕೋರಿದ ಬಗ್ಗೆ ತಗಾದೆ ತೆಗೆದರು. ಮಾತಿನ ಚಕಮಕಿ ಎರಡೂ ಕಡೆಯಲ್ಲೂ  ನಡೆದು ಅದು ಮಿತಿಮೀರಿತು. ಅತೃಪ್ತರ ಒಂದು ಗುಂಪು ವಾದ್ಯ ನುಡಿಸುತ್ತಿದ್ದವರ ಮೇಲೆ ಮುಗಿಬಿದ್ದು ನಾದಸ್ವರ , ತಮಟೆ ಹಾಗೂ ಇನ್ನಿತರ ವಾದ್ಯಗಳನ್ನು ಕಿತ್ತೆಸೆದು ಅವರ ಮೇಲೆ ಕೈ ಮಾಡಿದರು. ಈ ಮಾರಾಮರಿಯು ಹಾಲಿ ಶಾಸಕರ  ಸಮ್ಮುಖದಲ್ಲಿ ನಡೆಯಿತು. ನಂತರ ಎರಡೂ ಗುಂಪುಗಳು ಸಮಾಧಾನಪಟ್ಟರೂ ಹಲವು ಮಂದಿ ಬೆಟ್ಟದ ಕೆಳಗೆ ನಡೆದ ಧಾಮರ್ಿಕ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ವಿರಳ ಭಕ್ತಾದಿಗಳ ನಡುವೆ ಸಭೆ ಮುಗಿಯಿತು.
ಈ ಧಾಮರ್ಿಕ ಕಾರ್ಯಕ್ರಮದ ಅಂಗವಾಗಿ ಬೆಳಗುಲಿ ಗ್ರಾಮ ಹಾಗೂ ಬೆಟ್ಟದ ಸನಿಹದಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಫ್ಲೆಕ್ಸ್ಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿದ್ದವು. ಈ ನಡುವೆ ಕಳಸ ಪ್ರತಿಷ್ಠಾಪನೆಯ ಅಂಗವಾಗಿ ಗ್ರಾಮದೇವತೆಗಳನ್ನು ಉತ್ಸವದ ಮೂಲಕ ಬೆಟ್ಟಕ್ಕೆ ಬರಮಾಡಿಕೊಂಡಿದ್ದು ವಾದ್ಯದವರನ್ನು ಥಳಿಸಿದ ಹಿನ್ನಲೆಯಲ್ಲಿ ವಾದ್ಯ ಕಲಾವಿದರು ಉತ್ಸವ ಮೂತರ್ಿಯನ್ನು ವಾಪಸ್ ಕರೆತರುವ ಸಮಯದಲ್ಲಿ ವಾದ್ಯ ನುಡಿಸುವುದಿಲ್ಲ ನಮಗೆ ಅವಮಾನವಾಗಿದೆ ಎಂದು ಪಟ್ಟುಹಿಡಿದ ಕಾರಣ ಸೋಮವಾರ ಸಂಜೆಯವರೆಗೂ  ಉತ್ಸವಮೂತರ್ಿಗಳು ಬೆಟ್ಟದ ಆಲಯದಲ್ಲಿಯೇ ಉಳಿಯಬೇಕಾಯಿತು. ಸಂಜೆ ಊರಿನ ಗಣ್ಯರ ಮನವೊಲಿಕೆಯಿಂದ ಉತ್ಸವಮೂತರ್ಿಗಳನ್ನು ಆಯಾ ಊರಿಗೆ ವಾದ್ಯಗೋಷ್ಠಿಯೊಂದಿಗೆ ಬಿಡಲಾಯಿತು. ಒಟ್ಟಿನಲ್ಲಿ ಧಾಮರ್ಿಕ ಕಾರ್ಯಕ್ರಮದಲ್ಲಿ ಕೆಟ್ಟ ರಾಜಕೀಯ ನುಸುಳಿದ ಪರಿಣಾಮ ಧಾಮರ್ಿಕತೆಯು ತನ್ನ ಅರ್ಥವನ್ನು ಕಳೆದುಕೊಂಡು ಘಟನೆ ಹಾಗೇ ಉಳಿಯಿತು.
 

Saturday, February 16, 2013


                        ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ    ಯೋಜನೆಗಳನ್ನು ಜಾರಿಗೆ: ಹೆಚ್.ಡಿ.ಕೆ

ಚಿಕ್ಕನಾಯಕನಹಳ್ಳಿ,ಪೆ.16 : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
    ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಯೋಗ ಮೇಳ, ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬುರವರ 43ನೇ ವರ್ಷದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ ವಿಧವೆಯರಿಗೆ, ವಿಕಲಚೇತನರಿಗೆ ಹಾಗೂ  ಮದುವೆಯಾಗದೆ ಇರುವ ಹೆಣ್ಣುಮಕ್ಕಳಿಗೆ ಒಂದುವರೆ ಸಾವಿರ ರೂಪಾಯಿ ಮಾಸಶಾಸನ, ಗಭರ್ಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರಕ್ಕಾಗಿ ಒಂದು ವರ್ಷಗಳ ಕಾಲ ತಿಂಗಳ 5ಸಾವಿರ ರೂನಂತೆ ಭತ್ಯೆ ನೀಡುವುದಾಗಿ ತಿಳಿಸಿದರಲದಲ್ಲದೆ,  ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ಪಶುಆಹಾರ ನೀಡಲಾಗುದು ಎಂದರು.
 ತಮ್ಮ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸಕರ್ಾರ ವಿವಿಧ ಸವಲತ್ತುಗಳ 9ಲಕ್ಷಕ್ಕೂ ಹೆಚ್ಚು ಮಾಸಾಶಸನಗಳನ್ನ ನಿಲ್ಲಿಸಿದೆ ನಮ್ಮ ಸಕರ್ಾರ ಅಧಿಕಾರಕ್ಕೆ ಬಂದರೆ ಪುನಃ ಆ ಎಲ್ಲಾ ಯೋಜನೆಗಳನ್ನು  ಜಾರಿಗೆ ತರುವುದಾಗಿ ತಿಳಿಸಿದರು.
    ಕೇಂದ್ರ ಸಕರ್ಾರದ ತಪ್ಪು ಆಥರ್ಿಕ ನೀತಿಯ ಕಾರಣ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಜೀವನ ನಡೆಸಲು ತತ್ತರಿಸುತ್ತಿದ್ದಾರೆ, ಖಾಸಗಿಕರಣ, ಉದಾರೀಕರಣದ ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಠಿಸುವುದು ಅಷ್ಟೋಂದು ಕಷ್ಟದ ಕೆಲಸವಲ್ಲ, ಖಾಸಗಿ ಕಂಪನಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಎಂಟು ಸಾವಿರದಿಂದ ಹತ್ತು ಸಾವಿರ ಸಂಬಳ ದೊರೆಯುತ್ತದೆ ಎಂದರಲ್ಲದೆ, ನಗರಗಳಲ್ಲಿನ ಸಿದ್ದ ಉಡುಪು ಕಾಖರ್ಾನೆಗಳಿಗೆ ಗುಳೆ ಹೋಗದಂತೆ ತಡೆಯಲು ಹೆಣ್ಣು ಮಕ್ಕಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಕಾಖರ್ಾನೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.
    ಮಾಜಿ ಸಚಿವ ಬಂಡೆಪ್ಪಕಾಶೆಂಪೂರ್ ಮಾತನಾಡಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೂ ಜೆಡಿಎಸ್ ಪಕ್ಷಕ್ಕೆ ಜನಬೆಂಬಲ ದೊರೆತಿದ್ದು ಮುಂದಿನ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಶಾಸಕರು ಆಯ್ಕೆಯಾಗಿ ಸಕರ್ಾರ ರಚಿಸುವುದಾಗಿ ತಿಳಿಸಿದರು.
    ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿದ್ದು ರಾಜ್ಯದಲ್ಲಿಯೇ ಪ್ರಥಮ. ರಾಜ್ಯ ಹಾಗೂ ಕೇಂದ್ರ ಸಕರ್ಾರಗಳ ದುರಾಡಳಿತದಿಂದ ಅಕ್ಕಿ ಬೆಲೆ ಗಗನಕ್ಕೇರಿದೆ, ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಸಂಧ್ಯಾ ಸುರಕ್ಷಾ, ವಿಕಲಚೇತನರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಭಿವೃದ್ದಿ ಕಾರ್ಯಗಳಿಗೆ ಗಮನ ಹರಿಸಿದರು ಎಂದರು.
    ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸ್ಥಳೀಯ ಪುರಸಭಾ ಚುನಾವಣೆಯನ್ನು ಸಕರ್ಾರ ಘೋಷಿಸಿದರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ನಡೆಯಬೇಕಿದ್ದ ಉದ್ಯೋಗಮೇಳ, ಆರೋಗ್ಯತಪಾಸಣಾ ಶಿಬಿರವನ್ನು ಗೋಡೆಕೆಗೆ ಸ್ಥಳಾಂತರಿಸಲಾಯಿತು. ಇದರಿಂದ ರೋಗಿಗಳಿಗೆ ಹಾಗೂ ನಿರುದ್ಯೋಗಿ ಯುವರಿಕಗೆ ತೊಂದರೆಯಾಗಿರುವುದಕ್ಕೆ  ವಿಷಾದಿಸುತ್ತೇನೆ ಎಂದರು.   
    ಕಾರ್ಯಕ್ರಮದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆಪ್ರೇಮಮಹಾಲಿಂಗಯ್ಯ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಮಾಜಿ ಜಿ.ಪಂ.ಅಧ್ಯಕ್ಷ ಆನಂದರವಿ, ಜೆಡಿಎಸ್ ಮುಖಂಡರಾದ ಮೈಲಾರಪ್ಪ, ಲಿಂಗರಾಜು, ಮಹದೇವಪ್ಪ, ಚೌಡಾರೆಡ್ಡಿ, ಶಿರಾ ತಾ.ಪಂ.ಅಧ್ಯಕ್ಷೆ ಗಂಗಮ್ಮ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೋ ಆಪರೆಟೀವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್, ತಾ.ಪಂ.ಸದಸ್ಯರಾದ ಹೇಮಾವತಿ, ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    ಕಣ್ಣಯ್ಯ ನಿರೂಪಿಸಿದರು, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ರಘುನಾಥ್ ಸ್ವಾಗತಿಸಿದರು. 

ಚಿಕ್ಕನಾಯಕನಹಳ್ಳಿ,ಫೆ.16 : ರಾಜ್ಯದಲ್ಲಿ ಸ್ಥಳೀಯ ಪುರಸಭೆ ನಗರಸಭೆ ಅಧಿಸೂಚನೆ ಸಕಾರ ಹೊರಡಿಸಿದ ಹಿನ್ನಲೆಯಲ್ಲಿ ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆಯಬೇಕಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹಾಗೂ ಸಿ.ಬಿ.ಸುರೇಶ್ಬಾಬುರವರ ಹುಟ್ಟುಹಬ್ಬವನ್ನು ಗ್ರಾಮೀಣ ಪ್ರದೇಶವಾದ ಗೋಡೆಕೆರೆಗೆ ಸ್ಥಳಾಂತರಿಸಲಾಯಿತು.
    ಇದರಿಂದ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಿರಾರು ರೋಗಿಗಳಿಗೆ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸುವರಿಗೆ ತೊಂದರೆಯಾಗಬಾರದು ಎಂದು ಮಿನಿ ವಾಹನಗಳು, ಬಸ್ಸುಗಳು ಹಾಗೂ ಲಾರಿಗಳಲ್ಲಿ ಗೋಡೆಕೆರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಉದ್ಯೊಗ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು.

Friday, February 8, 2013


ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು

                 ಚಿಕ್ಕನಾಯಕನಹಳ್ಳಿ,ಫೆ.08 : ಸಕರ್ಾರದಿಂದ ಸಿಗುವ ಸವಲತ್ತು, ಸಹಾಯಧನದ ಮಾಹಿತಿಯ ಕೊರತೆ ನೇಕಾರರಿಗಿದೆ, ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು ಅದಕ್ಕಾಗಿ ನೇಕಾರರ  ಸಂಘಟನೆ ಬಲಿಷ್ಠಗೊಂಡರೆ ಇಲಾಖೆಯ ಸೌಲಭ್ಯದ ಬಗ್ಗೆ ಅರಿವು ಮೂಡಿಸಿಕೊಡುವಲ್ಲಿ ಶ್ರಮಿಸುವುದಾಗಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಗಂಗಯ್ಯ ಹೇಳಿದರು.
 ಪಟ್ಟಣದ ಶ್ರೀ ಬನಶಂಕರಿ ಸಿಲ್ಕ್ ಹ್ಯಾಂಡ್ಲೂಮ್ ನೇಕಾರರ ಸಹಕಾರ ಸಂಘದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮಾರಾಟಗಾರರ ಸಂಘದ ವತಿಯಿಂದ  ನಡೆದ ವಿನ್ಯಾಸಗಳ ಪ್ರದರ್ಶನ ಹಾಗೂ ಬಣ್ಣ ಹಾಕುವ ಕಾರ್ಯಗಾರದಲ್ಲಿ ಮಾತನಾಡಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕಾಯರ್ಾಗಾರದಿಂದ ನೇಕಾರರಿಗೆ  ನೆರವಾಗಲಿದೆ, ಸೀರೆಗಳಿಗೆ ಬಣ್ಣ ಹಾಕುವ ಹಾಗೂ ಅದರಿಂದ ಲಾಭ ಪಡೆಯುವ ಬಗ್ಗೆ ಮಾಹಿತಿ ಪಡೆದು ತಾಂತ್ರಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರಲ್ಲದೆ ಕಾಲಕಾಲಕ್ಕೆ ಇಲಾಖೆವರು ನಡೆಸುವ ಕಾರ್ಯಕ್ರಮಕ್ಕೆ ಸಂಘದ ಆಡಳಿತ ಮಂಡಳಿ ಸ್ಪಂದಿಸಿ ನೇಕಾರರಿಗೆ ಅರಿವು ಮೂಡಿಸಿ ಅವರಿಗೆ ಆಥರ್ಿಕವಾಗಿ ಸದೃಡಗೊಳ್ಳಲು ತಿಳಿಸಬೇಕು ಅಲ್ಲದೆ ಸಕರ್ಾರದಿಂದ ನೇಕಾರರಿಗೆ ಸಿಗುವ ವಿದ್ಯುತ್ಶಕ್ತಿ ಸಹಾಯಧನದ ಮತ್ತಿತರ ಸೌಲಭ್ಯಗಳನ್ನು ಒಗ್ಗಟ್ಟಿನಿಂದ ಪಡೆಯಬೇಕು ಎಂದರು. 
ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಕೈಮಗ್ಗ ಮತ್ತು ಜವಳಿ ಇಲಾಖೆಯವರು ನಡೆಸುವಂತಹ ಕಾಯರ್ಾಗಾರದಲ್ಲಿ ನೇಕಾರರು ಪಾಲ್ಗೊಂಡರೆ ಬಟ್ಟೆಗೆ ಯಾವ ರೀತಿ ಬಣ್ಣ ಹಚ್ಚಿ, ವ್ಯಾಪಾರದ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕು ಜೊತೆಗೆ ಸಕರ್ಾರದ ಅನೇಕ ಸೌಲಭ್ಯಗಳ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು. ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಾಕರ ಸಂಘ ಸ್ವತಂತ್ರ ಪೂರ್ವದಿಂದಲೂ ಇದ್ದು ಇಲ್ಲಿನ ನೇಕಾರರು ಅನೇಕ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಇಂತಹ ಕಾಯರ್ಾಗಾರದಿಂದಲಾದರೂ ನೇಕಾರರಿಗೆ ಸೌಲಭ್ಯ ದೊರಕಲಿ ಎಂದು ಆಶಸಿದರು. 
ಸಮಾರಂಭದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಕಿರಣ್ಕುಮಾರ್, ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್, ಸಿ.ಡಿ.ರಂಗಧಾಮಯ್ಯ ಸೇರಿದಂತೆ ಹಲವರಿದ್ದರು.
ಸಕರ್ಾರಿ ವೈದ್ಯರ ಮುಷ್ಕರ

ಚಿಕ್ಕನಾಯಕನಹಳ್ಳಿ,ಫೆ.08 : ಇಂದಿನಿಂದ ಪ್ರಾರಂಭವಾಗಿರುವ ಸಕರ್ಾರಿ ವೈದ್ಯರ ಮುಷ್ಕರದಿಂದಾಗಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸಲಿಲ್ಲ, ವೈದ್ಯರುಗಳು ಕೇಂದ್ರಗಳಲ್ಲೇ ಹಾಜರಿದ್ದು ಕೇವಲ ತುತರ್ು ಸೇವೆಗಳು ಮಾತ್ರ ಲಭ್ಯವಿದ್ದವು. 
ವೈದ್ಯರ ಪ್ರಮುಖ ಬೇಡಿಕೆಗಳಾದ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವಗರ್ಾಯಿಸಬೇಕು,  ಸರಿಯಾದ ಸಮಯಕ್ಕೆ ಸಂಬಳ ಆಗಬೇಕು ಮತ್ತು ವಗರ್ಾವಣಾ ನಿಯಮಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟು ವೈದ್ಯರುಗಳು ಮುಷ್ಕರದಲ್ಲಿ ನಿರತರಾಗಿದ್ದಾರೆ. ಮುಷ್ಕರ ನಾಳೆಯೂ ಮುಂದುವರಿಯುವ ಲಕ್ಷಣವಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

Thursday, February 7, 2013


ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ

                  ಚಿಕ್ಕನಾಯಕನಹಳ್ಳಿ,ಫೆ.07 : ಮಹಿಳೆಯರು ಅಬಲೆಯರು ಎಂದು ಕೊರಗುತ್ತಾ ಮನೆಯಲ್ಲಿ ಕೂರುವ ಪರಿಸ್ಥಿತಿ ಇಂದು ನಿವಾರಣೆಯಾಗಿದೆ, ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಮರ್ಥರಿದ್ದಾರೆ ಆದರೂ, ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ್ಲ, ಮಹಿಳೆಯರು ಅರಿತು ನಡೆದರೆ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಜಿ.ಪಂ.ಸದಸ್ಯೆ ಲೋಹಿತಬಾಯಿರಂಗಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಶ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸುತ್ತುನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ನಾರಿ ಪ್ರಪಂಚದಲ್ಲಿಯೇ ಸಂಸ್ಕೃತಿಯ ಪ್ರತೀಕ, ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ  ಎಂದರಲ್ಲದೆ ಆಕೆ ತನಗೆ ಎಷ್ಟೇ ನೋವಾದರು ಪರರಿಗೆ ಕೇಡನ್ನು ಬಯಸುವುದಿಲ್ಲ, ಹುಟ್ಟಿದ ಮತ್ತು ಕೊಟ್ಟ ಮನೆಗೆ ಒಳಿತನ್ನು ಬಯಸುತ್ತಾಳೆ, ಆದರೆ ಗಂಡನ ಮನೆಯಲ್ಲಿ ಅತ್ತೆ ಮತ್ತು ನಾದಿನಿಯರು ಹೆಣ್ಣಾಗಿದ್ದರೂ ಹೊರಗಿನಿಂದ ಬಂದ ಹೆಣ್ಣಿಗೆ ತೊಂದರೆ ಕೊಡುವ ಪ್ರವೃತ್ತಿ ಇನ್ನು ಸಮಾಜದಲ್ಲಿ ಮುಂದುವರೆದಿದೆ ಎಂದರು.  ಸಕರ್ಾರ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ನೀಡುವ ಸುತ್ತುನಿಧಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ಬಡ್ಡಿ ವ್ಯವಹಾರಕ್ಕಲ್ಲ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಮಹಿಳೆಯರು ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘಗಳಲ್ಲಿ ಪಡೆಯುವ ಸಾಲವನ್ನು ದುಡಿಮೆಯ ಬಂಡವಾಳವನ್ನಾಗಿ ತೊಡಗಿಸಿದರೆ ಸಾಲ ಮರುಪಾವತಿ ಕಷ್ಟಕರವಲ್ಲ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕಿ ಸುಜಾತ ಮಾತನಾಡಿ ಮಹಿಳೆಯರು ಆಥರ್ಿಕವಾಗಿ ಅಭಿವೃದ್ದಿ ಹೊಂದಲು ಸುತ್ತುನಿದಿ ವಿತರಣೆ ಮಾಡುತ್ತಿದ್ದು ಈ ಮೂಲಕ ಅವರ ಆಥರ್ಿಕ ಮಟ್ಟ ಸುಧಾರಣೆಗೊಳ್ಳಲಿದೆ, ಹಾಗೂ ಮಹಿಳೆಯರು ಒಂದು ಸಂಘದಲ್ಲಿ ಇದ್ದು ಬೇರೆ ಬೇರೆ ಸಂಘಕ್ಕೆ ಹೋಗುವುದನ್ನು ಬಿಡಬೇಕು, ಸಂಘದ ಪ್ರತಿನಿಧಿಗಳೆಲ್ಲ ಸೇರಿ ಸಂಘದ ಏಳಿಗೆಗಾಗಿ ಒಗ್ಗೂಡಿ ಚಚರ್ಿಸಿ ಸಂಘ ಅಭಿವೃದ್ದಿ ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಸಿಡಿಪಿಓ ಅನೀಸ್ಖೈಸರ್,  ಜಿ.ಪಂ.ಸದಸ್ಯರಾದ ಮಂಜುಳ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ.ತಿಮ್ಮಯ್ಯ, ತಾ.ಪಂ.ಸದಸ್ಯರಾದ ಶಿಶಿಧರ್, ಕೆಂಕೆರೆ ನವೀನ್, ವಸಂತ್ಕುಮಾರ್, ಎಸಿಡಿಪಿಓ ಪರ್ವತಯ್ಯ, ಪರಮೇಶ್ವರಪ್ಪ, ದಯಾನಂದ್ ಉಪಸ್ಥಿತರಿದ್ದರು.


ಚಿ.ನಾ ಹಳ್ಳಿಗೆ ಇಂಜಿನಿಯರಿಂಗ್ ಕಾಲೇಜ್ಗೆ ಭರವಸೇ, ಬೇಗ ಅನುಷ್ಠನವಾಗಲಿ; ಚೇತನ್ ಪ್ರಸಾದ್
ಚಿಕ್ಕನಾಯಕನಹಳ್ಳಿ,ಪೆ.07 : ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಕರ್ಾರಿ ಪಾಲಿಟೆಕ್ನಿಕ್/ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ಪರಿಶೀಲನೆ ಮಾಡಿ ಕಾಲೇಜು ಮಂಜೂರು ಮಾಡಿಸುವುದಾಗಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಯವರು ನೀಡಿರುವ ಭರವಸೆಗೆ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಆಭಿನಂದನೆ ಸಲ್ಲಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಪ್ರಶ್ನೆಗೆ ಉತ್ತಿರಿಸಿ ರಾಜ್ಯದ ಪ್ರಸ್ತುತ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಬಗ್ಗೆ ವಿವರಿಸಿ ನೀಡಿರುವ ಭರವಸೆಯನ್ನು ಸಚಿವರು ಬೇಗ ಅನುಷ್ಠಾನಗೊಳಿಸಲಿ ಎಂದು ಚೇತನ್ಪ್ರಸಾದ್ ಮನವಿ ಮಾಡಿದ್ದಾರೆ. 
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಳೆದ ವರ್ಷಗಳಿಂದ ತಾಲ್ಲೂಕಿನಲ್ಲಿ ಇಂಜಿನಿಯರಿಂಗ್ ಹಾಗೂ ಡಿಪ್ಲೋಮ ಕಾಲೇಜು ಸ್ಥಾಪಿಸಬೇಕು ಎಂದೂ  ಅನೇಕ ಹೋರಾಟಗಳನ್ನು ನೆಡೆಸಿದ್ದು, ಮುಖ್ಯಮಂತ್ರಿ ಜಗಧೀಶ್ಶೆಟ್ಟರ್ರವರು ತಾಲ್ಲೂಕಿಗೆ ಆಗಮಿಸಿದ ಸನ್ನಿವೇಶದಲ್ಲಿ ಅ.ಭಾ.ವಿ.ಪ ಕಾರ್ಯಕರ್ತರು ಮನವಿ ಮಾಡಿದ್ದರು,  ತಾಲ್ಲೂಕಿನ ಶಾಸಕ ಸಿ.ಬಿ ಸುರೇಶ್ಬಾಬುರವರು ಬಜೆಟ್ ಅಧಿವೇಶನದಲ್ಲಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜು ಮಂಜುರೂ ಮಾಡಬೇಕು ಎಂದು ಮನವಿ ಮಾಡಿದ್ದು ನಮ್ಮ ಹೋರಾಟಕ್ಕೆ ಶಕ್ತಿ ಬಂದತ್ತಾಗಿದೆ, ತಾಲ್ಲೂಕಿಗೆ ಇಂಜಿನಿಯರಿಂಗ್ ಕಾಲೇಜು ಮಂಜುರು ಮಾಡುವುದಾಗಿ ಭರವಸೆ ನೀಡಿರುವ ಸರಕಾರಕ್ಕೆ ಹಾಗೂ ತಾಲ್ಲೂಕಿನ ಶಾಸಕರಿಗೆ ತಾಲ್ಲೂಕು ಅ.ಭಾ.ವಿ.ಪ ಆಭಿನಂದನೆಯನ್ನು ಸಲ್ಲಿಸುತ್ತದೆ. ಈ ಭರವಸೇ ಭರವಸೇಯಾಗಿ ಉಳಿಯದೆ ಅನುಷ್ಠಾನಗೋಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ರೈತ ಸಂಪರ್ಕ ಕೇಂದ್ರದ ಉದ್ಘಾಟನಾ
ಚಿಕ್ಕನಾಯಕನಹಳ್ಳಿ,ಫೆ.07 : ಕಂದಿಕೆರೆ ರೈತ ಸಂಪರ್ಕ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಇದೇ 11ರ ಸೋಮವಾರ ಬೆಳಗ್ಗೆ 11ಕ್ಕೆ ಕಂದಿಕೆರೆಯ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಗ್ರಾ.ಪಂ.ಅಧ್ಯಕ್ಷ ಸಿ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಕೃಷಿ ಯಂತ್ರೋಪಕರಣ ವಿತರಣೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸದಸ್ಯರಾದ ನಿರಂಜನಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿರುವರು.


Wednesday, February 6, 2013



ಗಾಯಗೊಂಡ ಚಿರತೆ: ಸುರಕ್ಷಿತವಾಗಿ ಬೆಂಗಳೂರಿನ ವನ್ಯಪ್ರಾಣಿ ಆಸ್ಪತ್ರೆಗೆ.
ಚಿಕ್ಕನಾಯಕನಹಳ್ಳಿ,ಫೆ.05: ಮೂರು ದಿನಗಳ ಕಾಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡುವ ಮೂಲಕ ಬೋನಿನಲ್ಲಿ ಹಿಡಿದು ಸುರಕ್ಷಿತವಾಗಿ ಬೆಂಗಳೂರಿನಲ್ಲಿರುವ ವನ್ಯಪ್ರಾಣಿಗಳ ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ   ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಶೆಟ್ಟಿಕೆರೆ ಬಳಿಯ ಮಾಕುವಳ್ಳಿ ಬಳಿಯಲ್ಲಿನ ಹಾಳುಬಾವಿಯೊಂದಕ್ಕೆ ಭಾನುವಾರ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಬೋನಿನಲ್ಲಿ ಹಿಡಿದು ಬೆಂಗಳೂರಿನ ಹೆಬ್ಬಾಳದ ವನ್ಯಪ್ರಾಣಿಗಳ ಆಸ್ಪತ್ರೆಗೆ ಸೇರಿಸಿದ್ದಾರೆ. 
ಸುಮಾರು ಎರಡು ವರೆ ವರ್ಷದ ಚಿರತೆಯು ಆಹಾರಕ್ಕಾಗಿ ಬೆಕ್ಕನ್ನು ಹಿಡಿಯುವ ರಭಸದಲ್ಲಿ ಮಾಕುವಳ್ಳಿ ಸಮೀಪದ ಹಾಳುಬಾವಿಯೊಂದಕ್ಕೆ ಬಿದ್ದ ಪರಿಣಾಮ ಚಿರತೆಯ ಕಾಲಿಗೆ ಗಾಯವಾಗಿತ್ತು, ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗುಣ ಪಡಿಸಿದ ನಂತರ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದಿದ್ದಾರೆ. 
ಈ ಕಾಯರ್ಾಚರಣೆಯಲ್ಲಿ ತಿಪಟೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರಪ್ರಸಾದ್, ಬೆಂಗಳೂರಿನ ಪಶುವೈದ್ಯಾಧಿಕಾರಿ ಡಾ.ಅರುಣ್, ಶೂಟರ್ ರಮೇಶ್, ವಲಯ ಅರಣ್ಯಾಧಿಕಾರಿ ಪಿ.ಹೆಚ್.ಮಾರುತಿ, ವಲಪಾಲಕರುಗಳು ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಹೆಚ್ಚುತ್ತಿರುವ ಕರಡಿ,ಚಿರತೆ ದಾಳಿ: ತಾಲೂಕಿನ ಹಂದನಕೆರೆ, ಹುಳಿಯಾರು ಹೋಬಳಿಗಳ ಗಡಿ ಭಾಗದಲ್ಲಿ ಕರಡಿಗಳು ಗ್ರಾಮಸ್ಥರ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ, ಕಂದಿಕೆರೆ ಹೋಬಳಿಯ ಮದಲಿಂಗನ ಕಣಿವೆ ಭಾಗ ಹಾಗೂ ಶೆಟ್ಟೀಕೆರೆ ಹೋಬಳಿಯ ಭಾಗಗಳಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದೆ, ಇದರಿಂದ ಸಾಕಷ್ಟು ಜನರಿಗೆ ಸಾವು-ನೋವುಗಳು ಸಂಭವಿಸಿದರೆ ಸಂತ್ರಸ್ಥರಿಗೆ ಜನಪ್ರತಿನಿಧಿಗಳು ಅಥವಾ ಆ ಭಾಗದ ರಾಜಕಾರಣಿಗಳು ತಮ್ಮ ಕೈಲಿದ್ದಷ್ಟು ಹಣಕೊಟ್ಟು ಪೋಟೊ ತೆಗೆಸಿಕೊಂಡು ಅದನ್ನು ಮಾಧ್ಯಮದವರಿಗೆ ಕೊಟ್ಟು ತಮ್ಮ ಪ್ರಚಾರ ಪ್ರಿಯತೆಯನ್ನು ಮೆರೆಯುತ್ತಾರೆ ಹೊರತು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ. ಇದೇ ರೀತಿ ಕಾಡು ಪ್ರಾಣಿಗಳು ನಾಡಿನೊಳಕ್ಕೆ ಬರುವುದು ಹೆಚ್ಚಾದರೆ ಹಳ್ಳಿಯಲ್ಲಿನ ಜನ,ಜಾನುವಾರುಗಳ ಪ್ರಾಣಕ್ಕೆ ಸಂಕಷ್ಟ ತಪ್ಪಿದಲ್ಲ. 

ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು
ಚಿಕ್ಕನಾಯಕನಹಳ್ಳಿಫೆ.05 : ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು ಹಾಗೂ ರಾಜ್ಯ ಬಿಜೆಪಿಯ ಜನಪರ ಕಾರ್ಯಕ್ರಮಗಳು ಜನರಿಗೆ ಅರ್ಥವಾಗಿದೆ, ನಮ್ಮ ಪ್ರಣಾಳಿಕೆಯಲ್ಲಿನ ಶೇ.85ರಷ್ಟು ಆಶ್ವಾಸನೆಗಳನ್ನ ಸಕರ್ಾರ ಈಡೇರಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಹೇಳಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ನೋವು ತರುತ್ತಿವೆ ಈ ಗೊಂದಲಗಳನ್ನು ಆಂತರಿಕವಾಗಿ ಪರಿಹಾರ ಮಾಡಿಕೊಂಡಿದ್ದರೆ ಅಭಿವೃದ್ದಿ ಹೆಚ್ಚುತ್ತಿತ್ತು, 35 ರಿಂದ 40 ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ಚುನಾವಣಾ ತಂತ್ರವಾಗಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ,  ಆಧಾರ್ ಅರಿವಿನ ಪಾದಯಾತ್ರೆಗಳನ್ನು ಮಾಡುತ್ತಿವೆ, ಜ್ವಲಂತ ಸಮಸ್ಯೆಗಳು ಇವರಿಗೆ ನೆನಪಾಗಲಿಲ್ಲ,  ಇವು ಜನರನ್ನು ದಿಕ್ಕುತಪ್ಪಿಸುವ ಕಾರ್ಯಕ್ರಮಗಳು, ನಿರಂತರವಾಗಿ ಡಿಸೆಲ್,ಪೆಟ್ರೋಲ್ ಬೆಲೆಗಳನ್ನು ಏರಿಸುತ್ತಿದ್ದು, ತಪ್ಪು ಆಥರ್ಿಕ ನೀತಿಗಳನ್ನು ಕೈಗೊಳ್ಳುತ್ತಿರುವುರಿಂದ  ಕೇಂದ್ರ ಸಕರ್ಾರವು ಜನರ ಆಕ್ರೋಶಕ್ಕೆ ತುತ್ತಾಗಿದೆ ಎಂದರು.
ಫೆಬ್ರವರಿ 28ರೊಳಗಾಗಿ  ಮತಗಟ್ಟೆಯ ಅಭಿಯಾನ ಮತ್ತು ಮಾಚರ್್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಸಕರ್ಾರದ ಸಾಧನೆಗಳನ್ನು ಮತ್ತು ಕೇಂದ್ರ ಸಕರ್ಾರದ ವೈಪಲ್ಯಗಳನ್ನು ಮತದಾರರಿಗೆ ಅರ್ಥ ಮಾಡಿಸುತ್ತೇವೆ ಎಂದು ನುಡಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಂಕರಪ್ಪ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಕವಿತಾಕಿರಣ್ಕುಮಾರ್, ಗಂಗಾಧರ್, ರಾಮಣ್ಣ, ಮುಂತಾದವರು ಉಪಸ್ಥಿತರಿದ್ದರು.
ಗುಡಿಸಲುಗಳು ಭಸ್ಮ
ಚಿಕ್ಕನಾಯಕನಹಳ್ಳಿ,ಫೆ.05 : ಪಟ್ಟಣದ ಹುಳಿಯಾರು ಗೇಟಿನ ಬಳಿ ದೊಂಬದಾಸರು ವಾಸವಾಗಿರುವ 15ಗುಡಿಸುಲುಗಳ ಪೈಕಿ 3ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಸುಮಾರು ಎರಡು ಲಕ್ಷರೂಗಳ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.
ವಾಡರ್್ ನಂ.23 ಮಾರುತಿ ನಗರದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಭಾಗ್ಯಮ್ಮ, ಜಯಮ್ಮ ಮತ್ತು ಶಿವಣ್ಣ ಎಂಬುವರ ಮನೆಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಬಹುತೇಕವಾಗಿ ಕುಟುಂಬಗಳು ಊರೂರು ಅಲೆಯುತ್ತ ಏರುಪಿನ್ನ, ಬಾಚಣಿಗೆ, ಮಾರುವ ಕಾಯಕದಲ್ಲಿ ತೊಡಗಿರುವುದರಿಂದ ಘಟನೆ ಸಂಭವಿಸಿದಾಗ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಮತ್ತು ಅಗ್ನಿಶಾಮಕ ಠಾಣೆ ಹತ್ತಿರದಲ್ಲೇ ಇದ್ದುದರಿಂದ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿ ಆಗಬಹುದಾಗಿದ್ದ ಹೆಚ್ಚು ಅನಾಹುತವನ್ನು ತಪ್ಪಿಸಿಸಿದರು ಎಂದು ತಾಲ್ಲೂಕು  ಅಲೆಮಾರಿ ಜನಾಂಗ ಸಂಘದ  ಅಧ್ಯಕ್ಷ ರಾಜಣ್ಣ ತಿಳಿಸಿದರು.  
ಘಟನೆ ನಡೆದ ಸ್ಥಳಕ್ಕೆ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಹಶೀಲ್ದಾರ್ ಗೀತ, ನಿರೀಕ್ಷಕ ರವಿಕುಮಾರ್, ಶಿವಣ್ಣ, ಶಿವಶಂಕರ್ ಮುಂತಾದವರು ಭೇಟಿ ನೀಡಿದ್ದರು. 
ಹಿಂದಿನ ಇ.ಓ.ದಯಾನಂದ್ರವರು ಸಭೆಗೆ ಕರೆಸದಿದ್ದರೆ ತಾ.ಪಂ.ಕಛೇರಿ ಮುಂದೆ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರ ಪ್ರತಿಭಟನೆಯ ಬೆದರಿಕೆ  
ಚಿಕ್ಕನಾಯಕನಹಳ್ಳಿ,ಫೆ.06 : ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ನಡೆಯಲಾಗಿದೆ ಎನ್ನಲಾದ ಏಕಪಕ್ಷೀಯ ವರ್ತನೆ ಬಗ್ಗೆ ಹಿಂದಿನ ಇ.ಓ ದಯಾನಂದ್ರವರಿಗೆ ನೋಟಿಸ್ ಜಾರಿ ಮಾಡಿರುವುದು ಕಾನೂನು ರೀತಿಯಲ್ಲಿ ಸಮರ್ಪಕವಾಗಿಲ್ಲವಾದ್ದರಿಂದ  ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಇ.ಓ ದಯಾನಂದ್ರವರನ್ನು ಸಭೆಗೆ ಕರೆಸಬೇಕು ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಕಾಯರ್ಾಲಯದ ಮುಂದೆ ತಾ.ಪಂ.ಸದಸ್ಯರು ಹಾಗೂ ಜಿ.ಪಂ.ಸದಸ್ಯರೊಡನೆ ಪ್ರತಿಭಟನೆ ಕೂರುವುದಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಯ ಎರಡನೇ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. 
ಕಳೆದ ಬಾರಿ ಜಾಗೃತಿ ಸಮಿತಿ ಸಭೆಗೆ ಹಿಂದಿನ ಇ.ಓದಯಾನಂದ್ರವರನ್ನು ಕರೆಸಿ ಸಭೆ ನಡೆಸುವಂತೆ ತಿಳಿಸಿದರೂ ಈಗ ನಡೆಯುತ್ತಿರುವ ಸಭೆಗೆ ಅವರು ಬಂದಿರದ ಬಗ್ಗೆ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಬಾಯಿ, ತಾ.ಪಂ.ಸದಸ್ಯ ಶಶಿಧರ್ ಆಕ್ಷೇಪಿಸಿದರು. 
ಕಳೆದ ಬಾರಿ ತಿಳಿಸಿದ್ದರೂ ಇ.ಓ.ದಯಾನಂದ್ರವರು ಆಗಮಿಸಿದ ಬಗ್ಗೆ ಈಗಿನ ಇ.ಓ ತಿಮ್ಮಯ್ಯರವರಿಗೆ ತರಾಟೆಗೆ ತೆಗೆದುಕೊಂಡ ಸದಸ್ಯರು ನಮ್ಮ ಕಣ್ಣೊರೆಸಲು ಇ.ಓ ರವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದರು ಆದರೆ  ಹಿಂದಿನ ಇ.ಓರೊಡನೆ ನೀವೂ ಶಾಮೀಲಾಗಿರುವುದರಿಂದ ನೋಟಿಸ್ ನೀಡುವ ವಿಷಯದಲ್ಲಿ ಸರಿಯಾಗಿ ನೀಡಿಲ್ಲ ಎಂದು ದೂರಿದರು.
ಹಿಂದಿನ ಬಾರಿ ನಡೆದ ಸಭೆಯಲ್ಲಿ ಸಭೆ ಮುಗಿದಿದ್ದರೂ ಅದರ ಜೊತೆಗೆ ಇನ್ನಿತರ ವಿಷಯಗಳನ್ನು ಸೇರಿಸಿ ಇ.ಓ, ಶಾಸಕರೊಂದಿಗೆ ಸಹಿ ಹಾಕಿರುವ ಬಗ್ಗೆ ವಿವರಣೆ ಕೇಳಿ, ನಂತರ ಈ ಬಗ್ಗೆ ಕೂಲಂಕುಶವಾಗಿ ವಿವರಣೆ ಬರಬೇಕು ಎಂದು ಸದಸ್ಯರು ಪಟ್ಟು ಹಿಡಿದಾಗ ದೂರವಾಣಿಯ ಮೂಲಕ ಶಾಸಕರನ್ನು ಇ.ಓ ಭೇಟಿ ಮಾಡಿ ಮುಂದಿನ ಸಭೆ ನಡೆಯುವ ದಿನಾಂಕವನ್ನು ಕೇಳಿ ತಿಳಿಸುತ್ತೇನೆ ಎಂದು ಸದಸ್ಯರಿಗೆ ತಿಳಿಸಿದರು.
ಸದಸ್ಯರು ದೂರುತ್ತಿರುವ ಬಗ್ಗೆ ಪತ್ರಕರ್ತರು ಇ.ಓ ತಿಮ್ಮಯ್ಯರವರನ್ನು ಸಂಪಕರ್ಿಸಿದಾಗ, ಹಿಂದಿನ ಅಜೆಂಡಾದಲ್ಲಿ ಏನು ನಡೆದಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ, ಹಿಂದಿನ ಸಭೆಯಲ್ಲಿ ನಡೆದ ಅಜೆಂಡದಲ್ಲಿ ಸದಸ್ಯರೆಲ್ಲಾ ತೀಮರ್ಾನ ಮಾಡಿ ನೀಡಿದ ವಿಷಯವನ್ನೇ ನಾನು ಹಿಂದಿನ ಇ.ಓರವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.  
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಮಂಜುಳ, ನಿಂಗಮ್ಮ ತಾ.ಪಂ.ಸದಸ್ಯರಾದ, ಶಶಿಧರ್, ನವೀನ್, ಬಿ.ಬಿ.ಪಾತೀಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಮತ್ತಿತರರು ಉಪಸ್ಥಿತರಿದ್ದರು. 

ಚಿ.ನಾ.ಹಳ್ಳಿಯಲ್ಲಿ ಶ್ರೀ.ಕ್ಷೇ.ಧರ್ಮಸ್ಥಳ ಸಂಸ್ಥೆವತಿಯಿಂದ  ಫೆ.10,11 ಅರ್ಥಗಭರ್ಿತ ಕೃಷಿ ಉತ್ಸವ
ಚಿಕ್ಕನಾಯಕನಹಳ್ಳಿ,ಫೆ.06 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಇದೇ ಫೆಬ್ರವರಿ 10 ಮತ್ತು  11ರ ಎರಡು ದಿನಗಳ ಕಾಲ ಕೃಷಿ ಉತ್ಸವ ನಡೆಯಲಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು. 
ಎರಡು ದಿನಗಳ ಕಾಲ ನಡೆಯುವ ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳುವ ರೈತರಿಗೆ, ಸಾರ್ವಜನಿಕರಿಗೆ ಸಮಗ್ರ ಕೃಷಿ ಪದ್ದತಿ, ಕುರಿ ಸಾಕಾಣಿಕೆ ಸವಾಲು ಸಾಧ್ಯತೆ , ಮೌಲ್ಯವಧರ್ಿತ ಸಾವಯುವ ಗೊಬ್ಬರ, ವಾಣಿಜ್ಯ ಮತ್ತು ಅಲ್ಪಾವಧಿ ಬೆಳೆಗಳ ಅವಕಾಶ, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಹಾಗೂ  ಮಹಿಳೆಯರು ಸುಖಿಸಂಸಾರ, ಸ್ವಾಸ್ಥ್ಯಸಮಾಜ ನಿಮರ್ಾಣದಲ್ಲಿ ಅವರ ಪಾತ್ರಗಳ ಬಗ್ಗೆ ವಿಶೇಷವಾಗಿ ತಿಳಿಯಬಹುದು ಎಂದರಲ್ಲದೆ ಈ ಸಂದರ್ಭದಲ್ಲಿ ಜಾನುವಾರು, ಶ್ವಾನ, ಮತ್ತು ಕುಕ್ಕಟ ಪ್ರದರ್ಶನ, ಪರಿಣಿತರಿಂದ ವಿಚಾರಗೋಷ್ಠಿ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು 10ರ ಸೋಮವಾರ ಬೆಳಗ್ಗೆ 10ಕ್ಕೆ ಏರ್ಪಡಿಸಿದ್ದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಟ್ರಸ್ಟಿ ಡಿ.ಸುರೇಂದ್ರಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ನಾರಾಯಣಗೌಡ ಕರಕುಶಲ ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ಬಿ.ಎಸ್.ಆರ್.ಪಕ್ಷದ ಜಿಲ್ಲಾಧ್ಯಕ್ಷ ಜಿ.ರಾಮಾಂಜನೇಯ ವಸ್ತುಪ್ರದರ್ಶನ
ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೆ.ಎಂ.ಎಲ್ ಎಸ್.ಎಲ್.ಶಾಂತಕುಮಾರ್ ಉಪಸ್ಥಿತರಿರುವರು.
ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಮೊದಲ ಗೋಷ್ಠಿಯಲ್ಲಿ 'ನಮ್ಮ ಕೃಷಿ ಬದುಕಿನಲ್ಲಿರುವ ಅವಕಾಶಗಳು, ಸಮಗ್ರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ವಿಷಯವಾಗಿ ನಡೆಯುವ ಗೋಷ್ಠಿಯಲ್ಲಿ   ಪ್ರಾ.ಸ.ಕೃ.ಬ್ಯಾಂಕ್ನ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು ಕೃಷಿ ರಂಗ ವಿಭಾಗದ ಪ್ರಸಾರ ನಿವರ್ಾಹಕ ಡಾ.ವಿಜಯ್ಅಂಗಡಿ ಸಂಪನ್ಮೂಲ ವ್ಯಕ್ತಿಗಳು.  2ರಿಂದ 3.30ರವರೆಗೆ ವಿಚಾರಗೋಷ್ಠಿ2 ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಸಂಪನ್ಮೂಲ ವ್ಯಕ್ತಿ ಪ್ರಿಸ್ಟೈನ್ ಆಗ್ಯರ್ಾನಿಕ್ ವ್ಯವಸ್ಥಾಪಕ ನಿದರ್ೇಶಕ ಕೆ.ಸಿ.ರಘು, , 3.30ರಿಂದ 4.30ರವರೆಗೆ ವಿಚಾರಗೋಷ್ಠಿ3 ಹಸಿರು ಸೇನೆಯ ಪ್ರಧಾನ ಕಾರ್ಯದಶರ್ಿ ಸತೀಶ್ಕೆಂಕೆರೆ ಅಧ್ಯಕ್ಷತೆ ವಹಿಸಲಿದ್ದು ಕೆ.ವಿ.ಕೆ ಸಂಯೋಜಕ ಡಾ.ಜಿ.ಎಂ.ಸುಜಿತ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. 
11ರ ಸೋಮವಾರ ಬೆಳಗ್ಗೆ 10ಕ್ಕೆ ಜಾನುವಾರು ಶ್ವಾನ ಮತ್ತು ಕುಕ್ಕಟ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನಡೆಸಲಿದ್ದು ಜಿ.ಹಾ.ಒಕ್ಕೂದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 11ರಿಂದ1ವಿಚಾರಗೋಷ್ಠಿ 12.30ರಿಂದ 2ನೇ ವಿಚಾರಗೋಷ್ಠಿ , 2ರಿಂದ 3ನೇ ವಿಚಾರಗೋಷ್ಠಿ ನಡೆಯಲಿದ್ದು  ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. 
ಈ ಸಂದರ್ಭದಲ್ಲಿ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ.ಬಿ.ನಾಗರಾಜು, ಉಪಾಧ್ಯಕ್ಷರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಎಸ್.ನಟರಾಜು, ಯಳನಡು ಗುರುಪ್ರಸಾದ್, ಪ್ರಕಾಶ್ ಉಪಸ್ಥಿತರಿದ್ದರು.


Friday, February 1, 2013


ವಸತಿ ಯೋಜನೆಯ ಆಯ್ಕೆಯಲ್ಲಿ ಇ.ಓ.ದಯಾನಂದರ ಅಧಿಕಾರ ದುರುಪಯೋಗ: ಜನಪ್ರತಿನಿಧಿಗಳ ಆಕ್ರೋಶ.
ಚಿಕ್ಕನಾಯಕನಹಳ್ಳಿ,ಫೆ.01: ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ  ಹಿಂದಿನ ಇ.ಓ. ದಯಾನಂದ ರವರು ಹಣ ಪಡೆದು ಏಕಪಕ್ಷೀಯವಾಗಿ ವತರ್ಿಸಿ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಸಿ ಕರ್ತವ್ಯ ಲೋಪವೆಸಗಿದ್ದಾರೆ ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯಬೇಕೆಂದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು  ಆಗ್ರಹಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ನಡೆದ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಗೆ ಜಾಗೃತಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದರು. 
  ಬಸವ ಇಂದಿರಾ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಹಿಂದಿನ ತಾಲ್ಲೂಕು ಪಂಚಾಯಿತಿ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ. ದಯಾನಂದ ರವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಮನಸೋಇಚ್ಛೆ ಹಣ ಪಡೆದು ಆಯ್ಕೆ ಮಾಡಿದ್ದಾರೆ ಎಂದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಆರೋಪ ಮಾಡಿದರು.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಕ್ಕಾಪಟ್ಟಣ ಹೋಬಳಿ ಹೊರತು ಪಡಿಸಿ ಉಳಿದ ಹೋಬಳಿಗಳನ್ನು ನಿರ್ಲಕ್ಷಿಸಿ ಬುಕ್ಕಾಪಟ್ಟಣ ಹೋಬಳಿಗೆ 1781 ಮನೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. 
ಶಿರಾ ತಾಲ್ಲೂಕಿನ ತಾ.ಪಂ.ಸದಸ್ಯ ರಂಗನಾಥಪ್ಪ ಮಾತನಾಡಿ ಕಳೆದ ಭಾರಿ 164 ಮನೆಗಳನ್ನು ಮಂಜೂರು ಮಾಡಿದ್ದು 2ನೇ ಅವಧಿಯಲ್ಲಿ ಮಂಜೂರಾತಿಗೆ ಶಾಸಕ ಸಿ.ಬಿ.ಸುರೇಶ್ಬಾಬು ವಸತಿ ಸಚಿವ ವಿ.ಸೋಮಣ್ಣರವರನ್ನು ಭೇಟಿ ಮಾಡಿ ಅತಿ ಹಿಂದುಳಿದ ಗುಡ್ಡಗಾಡು ಪ್ರದೇಶವಾದ ತಾಲ್ಲೂಕಿಗೆ ಹೆಚ್ಚುವರಿ 2000 ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ ಪರಿಣಾಮ ತಾಲ್ಲೂಕಿಗೆ ಪುನಃ 2000 ಮನೆಗಳನ್ನು ದೊರಕಿಸಲು ಸಾಧ್ಯವಾಯಿತು ಎಂದರು. 
  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಪ್ರತಿ ಗ್ರಾಮಪಂಚಾಯ್ತಿ ಗ್ರಾಮ ಸಭೆಗಳಲ್ಲಿ ಗುಡಿಸಲು ರಹಿತ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಅನುಮೋದನೆಗೆ ಕಳುಹಿಸುವಂತೆ ಎರಡು ಭಾರಿ ಸೂಚಿಸಿದ್ದರು. ಸಂಬಂಧಪಟ್ಟ ಗ್ರಾಮಪಂಚಾಯ್ತಿಗಳ ಕಾರ್ಯದಶರ್ಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ನೀಡಿದ ನಂತರ ಬುಕ್ಕಾಪಟ್ಟಣ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ  ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿದವರನ್ನು ಮಾತ್ರ ಪಟ್ಟಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಶಿರಾ ತಾ.ಪಂ. ಅಧ್ಯಕ್ಷೆ ಗಂಗಮ್ಮಸಿದ್ದಹನುಮಯ್ಯ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಾನಮ್ಮ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಾ ಗಂಗಾಧರ್, ನಿರಂಜನ್, ಜಯಣ್ಣ, ಶಶಿಧರ್, ರಮೇಶ್ ಕುಮಾರ್, ಶಿವರಾಜ್, ಲತವಿಶ್ವೇಶ್ವರಯ್ಯ, ಬುಕ್ಕಾಪಟ್ಟಣ ತಾ.ಪಂ.ಸದಸ್ಯೆ ಶೈಲಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಶಿರಾ ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ವೇದಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.   
ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ ಜೇಷ್ಟತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.01:  ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದಕ್ಕೆ ಬಡ್ತಿ ಸಂಬಂಧ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಜಿಲ್ಲಾವಾರು, ವಿಷಯವಾರು ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸೇವಾನಿರತ ಶಿಕ್ಷಕರ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಬಿಇಒ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಲಾಗಿದೆ ಇಂದು ಬಿ.ಇ.ಓ. ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
.  ಜನವರಿ 01 2013ರೊಳಗೆ ಅರ್ಹ ವಿದ್ಯಾರ್ಹತೆಯನ್ನು ಹೊಂದಿದವರು  ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಆಕ್ಷೇಪಣೆಗಳನ್ನು ಅರ್ಹ ಶಿಕ್ಷಕರುಗಳಿಂದ ಆಹ್ವಾನಿಸಲಾಗಿದೆ. ಹೊಸದಾಗಿ ಹೆಸರು ಸೇರ್ಪಡೆ ಅಥವಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಲ್ಲಿ ಅಥವಾ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಶಿಕ್ಷಕರು ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ದಿನಾಂಕ 06.02.2013 ರೊಳಗಾಗಿ ಸಲ್ಲಿಸಲು ಹಾಗೂ ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗುವುದಿಲ್ಲ ತಿಳಿಸಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಚಿ.ನಾ.ಹಳ್ಳಿ ಜಿ.ಎಫ್.ಜಿ.ಸಿ.ಯಿಂದ ಎನ್.ಎಸ್.ಎಸ್.ಶಿಬಿರ


ಚಿಕ್ಕನಾಯಕನಹಳ್ಳಿ,ಫೆ.01:  ಸಕರ್ಾರಿ ಪ್ರಥಮ ದಜರ್ೆ ಕಾಲೇಜು 2012-2013 ಸಾಲಿನ  ವಾಷರ್ಿಕ ವಿಶೇಷ ಶಿಬಿರವನ್ನು ಇದೇ ಫೆಬ್ರವರಿ 2 ರಿಂದ 8 ವರೆಗೆ 7 ದಿನಗಳ ಕಾಲ ಕಂದಿಕೆರೆಯಲ್ಲಿ ನಡೆಯಲಿದೆ. 
ಫೆಬ್ರವರಿ 2ನೇ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭವನ್ನು  ಶಾಸಕ ಸಿ.ಬಿ.ಸುರೇಶ್ಬಾಬು  ನೇರೆವೆರಿಸಿಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವಿ.ವರದರಾಜು ವಹಿಸಲಿದ್ದು ಕಾರ್ಯಕ್ರಮಾಧಿಕಾರಿಗಳಾದ ಶಿವರಾಮಯ್ಯ ಪ್ರಾಸ್ತಾವಿಕ ಮಾತಗಳನ್ನಾಡಲಿದ್ದಾರೆ.  
ಮುಖ್ಯ ಅತಿಥಿಗಳು ತಹಸೀಲ್ದಾರ್ ಎನ್. ಆರ್ ಉಮೇಶ್ ಚಂದ್ರ  ಜಿಲ್ಲಾ ಪಂಚಾಯಿತ್ ಸದಸ್ಯೆ ಲೋಹಿತ ಬಾಯಿ ಪುರಾಸಭಾಧ್ಯಕ್ಷ ಕೃಷ್ಣಮೂತರ್ಿ ತಾ.ಪಂ ಉಮಾದೇವಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಕಂದಿಕೆರೆ ಗ್ರಾ.ಪಂ. ಅಧ್ಯಕ್ಷ ಸಿ. ಲೋಕೇಶ್ ಮಾಜಿ ಜಿ.ಪಂ. ಅಧ್ಯಕ್ಷೆ ಜಯಮ್ಮ ದಾನಪ್ಪ ಶಾಂತವೀರಸ್ವಾಮಿ ಅಧ್ಯಕ್ಷ ಎನ್. ರೇವಣ್ಣ ಹಾಲು ಉತ್ಪಾತಕರ ಸಂಘದ ಅಧ್ಯಕ್ಷ ಕೆ.ನಾಗರಾಜು, ಗ್ರಾ.ಪಂ. ಸದಸ್ಯರಾದ ಕೆ.ಆರ್ ನಾಗರಾಜು, ವಸಂತಕುಮಾರ್, ಅಬ್ದುಲ್ ರಜಾಕ್ ಉಪಸ್ಥಿತರಿರುವರು. 

aPÀÌ£ÁAiÀÄPÀ£ÀºÀ½î PÉÊUÀjPÁ E¯ÁSÁªÀw¬ÄAzÀ a®ègÉ ªÁå¥ÁgÀUÁgÀjUÉ ±Á¸ÀPÀ ¹.©.¸ÀÄgÉÃ±ï ¨Á§Ä Qmï «vÀj¹zÀgÀÄ. f.¥ÀA.¸ÀzÀ¸Éå eÁ£ÀªÀÄä gÁªÀÄZÀAzÀæAiÀÄå, vÁ.¥ÀA.¸ÀzÀ¸ÀågÁzÀ ZÉÃvÀ£ÁUÀAUÁzsÀgï, ºÉêÀiÁªÀw,  PÉÊUÁjPÁ «¸ÀÛgÁuÁ¢üPÁj ¹zÀÝUÀAUÀªÀÄä ªÀÄwÛvÀgÀgÀÄ ºÁdjzÀÝgÀÄ. 
                                                    

aPÀÌ£ÁAiÀÄPÀ£ÀºÀ½î J¸ïJAJ¸ï PÁ¯ÉÃf£À «zÁåyð¤ vÀ£ÀÄ¥ÀæeÁ ¥ÀÄgÀ¸À¨sÁ PÁAiÀiÁð®AiÀÄ £ÀqɹzÀ WÀ£À vÁådå ªÀ¸ÀÄÛ ¤ªÀðºÀuÉ PÀÄjvÁV£À ¨sÁµÀt ¸ÀàzsÉðAiÀÄ°è ¥ÀæxÀªÀÄ §ºÀĪÀiÁ£À ¥ÀqÉ¢zÀÝjAzÀ UÀtgÁeÉÆåÃvÀìªÀ ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä §ºÀĪÀiÁvÀ£À «vÀj¹zÀgÀÄ. ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, G¥ÁzsÀåPÉë UÁ¬Äwæ¥ÀÄlÖtÚ, vÀºÀ²Ã¯ÁÝgï GªÉÄñïZÀAzÀæ ºÁdjzÀÝgÀÄ.