Tuesday, March 24, 2015


        ಶಾಸಕರಿಂದ ಸಾರ್ವಜನಿಕ ಕುಂದುಕೊರತೆಗಳ ಸಭೆ
                          
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ ಕುಂದುಕೊರತೆಗಳ ಸಭೆ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.
ತಾ.ಪಂ.ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಎಂ.ಎಚ್.ಕಾವಲ್ ಹಾಗೂ ಗೊಲ್ಲರ ಹಟ್ಟಿ ಗ್ರಾಮಗಳಿಗೆ ಸವರ್ೆ ನಂ. 28ರ ಸಕರ್ಾರ ಖರಾಬ್ನಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ ಕೊರೆಸಿದ್ದು ಈ ಸ್ಥಳ ನಮಗೆ ಸೇರಿದೆ ಎಂದು ಅದೇ ಗ್ರಾಮದ ರವಿ ಎನ್ನುವವರು ಗ್ರಾಮ ಪಂಚಾಯ್ತಿಯಿಂದ ಕೊಳವೆ ಬಾವಿಗೆ ಮೋಟಾರು ಅಳವಡಿಸಲು ಹೋದಾಗ ಅಡ್ಡಿಪಡಿಸುತ್ತಿದ್ದಾರೆ ಇದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ, ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಹೆಚ್.ಎಂ.ಕಾವಲು ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಅಪರ್ಿಸಿದರು. ಸ್ಥಳಕ್ಕೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಾಸಕರು ಇ.ಓ ರವರಿಗೆ ಸೂಚಿಸಿದರು.
ಬಡಕೆಗುಡ್ಲು ಗ್ರಾಮಕ್ಕೆ ಸ್ವಚ್ಛ ಕುಡಿಯುವ ನೀರಿನ ಘಟಕವನ್ನು ಆರ್.ಓ ಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ದೊಡ್ಡಬಿದರೆ ಗ್ರಾಮಕ್ಕೆ ರಸ್ತೆ, ಡಾಂಬರೀಕರಣಗೊಳಿಸುವಂತೆ ಕೊಳವೆ ಬಾವಿ ಕೊರೆಸಿಕೊಡುವಂತೆ ದೊಡ್ಡಬಿದರೆ ಗ್ರಾಮಸ್ಥರು ಮನವಿ ಮಾಡಿದರು.
ಕುಂದುಕೊರತೆಯ ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ತಹಶೀಲ್ದಾರ್ ಕಾಮಾಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.

 ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ಚೆಕ್ಪೋಸ್ಟ್ಗಳು
ಚಿಕ್ಕನಾಯಕನಹಳ್ಳಿ,ಮಾ.24: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ತಡೆಯಲು ತಿಪಟೂರು ತಾಲ್ಲೂಕಿನ ಕೊಡಿಗೆಹಳ್ಳಿ ಸೇರಿದಂತೆ ಒಂಬತ್ತು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ 50 ಟಿಪ್ಪರ್ಲಾರಿ ಹಾಗೂ 29 ಟ್ರಾಕ್ಟರ್ ಮರಳನ್ನು ವಶಪಡಿಸಿಕೊಂಡು ಹನ್ನೊಂದು ಲಕ್ಷ ಅರವತ್ತು ಸಾವಿರ ರೂ ದಂಡ ವಿಧಿಸಲಾಗಿದೆ ಎಂದ ಅವರು, ತಾಲ್ಲೂಕಿನ ಬಾಚಿಹಳ್ಳಿ, ಅಣೆಕಟ್ಟೆ, ಹರೇನಹಳ್ಳಿಗೇಟ್, ತಿಮ್ಮನಹಳ್ಳಿ, ಹುಳಿಯಾರ್ ಗೇಟ್, ಕಣಿವೆಕ್ರಾಸ್, ಬೆಳ್ಳಾರ ಕ್ರಾಸ್, ನಂದಿಹಳ್ಳಿ ರಸ್ತೆ, ಮತಿಘಟ್ಟ ಕೈಮರದ ಬಳಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಪ್ರತಿಯೊಂದು ಚೆಕ್ಪೋಸ್ಟ್ ಬಳಿ ವಿಲೇಜ್ ಅಕೌಂಟೆಂಟ್, ಒಬ್ಬ ಪೋಲಿಸ್, ಒಬ್ಬರು ಹೋಮ್ಗಾಡರ್್ ನಿಯೋಜಿಸಲು ತೀಮರ್ಾನಿಸಲಾಗಿದೆ, ಈಗಾಗಲೇ ಮರಳು ತೆಗೆಯುವುದರಿಂದ ಅಂತರ್ಜಲ ಕುಸಿದಿದ್ದು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಶಪಡಿಸಿಕೊಂಡಿರುವ ಮರಳನ್ನು ಹರಾಜು ಮಾಡಲು ಲೋಕೋಪಯೋಗಿ ಅಧಿಕಾರಿಗಳಿಗೆ ವಹಿಸಲಾಗಿದ್ದು ಸಕರ್ಾರ ನಿಗಧಿಪಡಿಸಿದ ದರದಲ್ಲಿ ಈ ಮರಳನ್ನು ಮನೆ ನಿಮರ್ಿಸಿ ಕೊಳ್ಳುವವರಿಗೆ ನೀಡಲಾಗುತ್ತಿದೆ ಎಂದರು,  ಇದುವರೆಗೆ ತಾಲ್ಲೂಕಿನ ವಿವಿಧ ಪೋಲಸ್ ಠಾಣಾ ವ್ಯಾಪ್ತಿಯಲ್ಲಿ 100 ಮೊಕದ್ದಮೆಗಳು ಹಾಕಿದ್ದು 2013ರಿಂದ 2015ರವರೆಗೆ 52 ಜನರಿಗೆ ಮರಳು ಪರವಾನಗಿ ನೀಡಲಾಗಿದೆ, 313.40 ಘನ ಮೀಟರ್ ಮರಳನ್ನು ಹರಾಜು ಮಾಡಲಾಗಿದೆ ಎಂದರು.
ರಾಜ್ಯ ಸಕರ್ಾರ ಮರಳು ನೀತಿಯನ್ನು ಜಾರಿಗೆ ತರಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಉಪತಹಶೀಲ್ದಾರ್ ಶಿವಶಂಕರ್ ಉಪಸ್ಥಿತರಿದ್ದರು.

ಹೈನುಗಾರಿಕೆಯ ಸಹಾಯಧನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ : ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಮಾ.24: ಕುಟುಂಬವು ಆಥರ್ಿಕವಾಗಿ ಸದೃಡಗೊಳ್ಳಲು ಸಕರ್ಾರ ಹೈನುಗಾರಿಕೆಯ ಮೂಲಕ ನೀಡುತ್ತಿರುವ ಸಹಾಯ ಧನವನ್ನು  ಫಲಾನುಭವಿಗಳು  ಸಮರ್ಪಕವಾಗಿ ಹೈನುಗಾರಿಕೆಗೆ ತೊಡಗಿಸಿಕೊಂಡು ಕುಟುಂಬದ ಆಥರ್ಿಕ ಬಲವರ್ದನೆಗೆ ಹೊತ್ತು ನೀಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
   ಇಂದು ಪಟ್ಟಣದ ಪಶು ಆಸ್ವತ್ರೆಯ ಸಭಾಂಗಣದಲ್ಲಿ 14-15 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಥರ್ಿಕ ಸಬಲೀಕರಣಕ್ಕಾಗಿ ಹೈನುಗಾರಿಕೆಗೆ ಪ್ರೋತ್ಸಾಹಿಸಲು ಕುಟುಂಬಕ್ಕೆ ನೀಡುವ 75 ಸಾವಿರ ಸಹಾಯ ಧನ ಚೆಕ್ ವಿತರಿಸಿ ಮಾತನಾಡುವಾಗ ಕುಟುಂಬದಲ್ಲಿ ಹಸುಹೊಂದಿದ್ದರೆ ಆ ಹಸುವಿನಿಂದ ಕುಟುಂಬವೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆ ಉಪಯೋಗ ಪಡೆಯಲು 108 ಕ್ಕೂ ಅಧಿಕ ಅಜರ್ಿಗಳು ಬಂದಿದ್ದವು ಆದರೆ ಈ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 9 ಪರಿಶಿಷ್ಟ ಪಂಗಡಕ್ಕೆ 4  ಒಟ್ಟು 13 ಫಲಾನುಭವಿಗಳನ್ನು ಆಯ್ಕೆ ಮಾಡಲು ಸಕರ್ಾರ ಅನುಮೋದನೆ ನೀಡಿತ್ತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಯ್ಕೆ ಮಾಡಲಾಗುವುದು. ಈ ಯೋಜನೆಯ ಉದ್ದೇಶ ಇಡೇರಬೇಕಾದರೆ ಫಲಾನುಭವಿಗಳು ಹೈನುಗಾರಿಕೆಗೆ ಉತ್ತೇಜನ ನೀಡಿ ಸಾರ್ಥಕತೆ ಪಡೆದುಕೊಳ್ಳಬೇಕು. ಈಗಾಗಲೇ ಪಶು ಆಸ್ವತ್ರೆಗಳನ್ನು ಹೊಸದಾಗಿ ನಿಮರ್ಾಣ ಮಾಡಲು ಕೈಗೆತ್ತಿಕೊಂಡ  100 ಆಸ್ವತ್ರೆಗಳ ಪೈಕಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೋಡೆಕೆರೆ ಹೊಯ್ಸಲಕಟ್ಟೆ, ಬೆಂಚೆಗೇಟ್, ಗಳಿಗೆ 3 ಆಸ್ಟತ್ರೆ ನೀಡಿದ್ದು ತೀರ್ಥಪುರ ಪಶು ಆಸ್ವತ್ರೆಯನ್ನು ಮೇಲ್ದಜರ್ೆಗೇರಿಸಿರುವ  ಸಚಿವರಿಗೂ ಮತ್ತು ಸಕರ್ಾರಕ್ಕೂ ಕೃತಘ್ಞತೆ ಸಲ್ಲಿಸುತ್ತೇನೆ ಎಂದರು. 
     ತಾಲ್ಲೂಕು ಪಶು ಇಲಾಖಾ ಸಹಾಯಕ ನಿದರ್ೇಶಕ ಎಂ.ಪಿ.ಶಶಿಕುಮಾರ್ ಮಾತನಾಡಿ ಪ್ರತಿ ಫಲಾನುಭವಿ ರ್ಯತರಿಗೆ ಹಸು ಸಾಕಾಣಿಕೆಗೆಂದು 75 ಸಾವಿರ ಸಹಾಯ ಧನ ನೀಡಲಾಗುವುದು. ಫಲಾನುಭವಿ ವಂತಿಕೆ 25 ಸಾವಿರ ಸೇರಿ 1 ಲಕ್ಷ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮೊತ್ತವನ್ನು 2 ಹಂತದಲ್ಲಿ ಬ್ಯಾಂಕ್ ಮೂಲಕ ಹಣವನ್ನು  ವಿತರಿಸಲಾಗುವುದು. ಫಲಾನುಭವಿ ಹೈನುಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಬಂದ ಫಲಾನುಭವಿಗೆ ಉಳಿದ ಕಂತನ್ನು ಅರ್ಧವಾಷರ್ಿಕದಲ್ಲಿ ವಿತರಿಸಲಾಗುವುದು. ಪ್ರತಿ ಹಸುವಿಗೂ ಜೀವ ವಿಮೆ  ನಿವರ್ಹಣೆ ಮತ್ತು ಆಹಾರ ಇವುಗಳು ಕೂಡ ಈ ಯೊಜನೆಯ್ಲಲಿಯೇ ಸೇರಿದ್ದು ಪ್ರತಿ ಲೀಟರ್ ಗೆ ನಿಡುವ 4 ರೂ ಪ್ರೊತ್ಸಾಹ ಧನ ಬಳೆಸಿಕೊಂಡು ಉತ್ತಮವಾಗಿ ಹ್ಯನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.  
  ಪಶು ಇಲಾಖೆಯ ವಿಸ್ತರಣಾಧಿಖಾರಿ ಡಾ||ಕಾಂತರಾಜು ಮಾತನಾಡಿ ಸಕರ್ಾರ ಸದುದ್ದೇಶದಿಂದ ರೈತರು ಆಥರ್ಿಕವಾಗಿ ಸದೃಡರಾಗಲೆಂದೇ ನೀಡುವ ಸಹಾಯದಿಂದ  ಪಡೆದ ಹಸುಗಳ ಮುಂದಿನ ದಿನಗಳಲ್ಲಿ ಅದರ ಉತ್ವನ್ನವಾಗುವಂತೆ ಇರಬೇಕು ಎಂದರಲ್ಲದೆ,  ನೀಡುವ ಸಹಾಯಗಳು ಕೆಲವೇ ದಿನಗಳಲ್ಲಿ ಅದರ ಉಪಯೋಗವಿಲ್ಲದಂತೆ ಆಗುತ್ತಿರುವುದು ಆತಂಕಕಾರಿ ಸಂಗತಿ . ಇಂತಹ ಸದುಪಯೋಗ ಪಡಿಸಿಕೊಂಡು ಸ್ವತ್ತಿನ ಉತ್ವತ್ತಿಯಿಂದ ನಿಮ್ಮ ಆಥರ್ೀಕ ಅಭಿವೃದ್ಧಿ ಹೊಂದಲು ಫಲಾನಿಭವಿಗಳು ಕಾಯರ್ೋನ್ಮುಕರಾಗುವಂತೆ  ಕರೆನೀಡಿದರು.
        ಈ ಸಂದರ್ಭದಲ್ಲಿ  ಮಂಜುನಾಥ್, ರಾಮಚಂದ್ರಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಮತ್ತಿತರರು ಉಪಸ್ಥಿತರಿದ್ದು ಫಲಾನುಭವಿಗಳಿಗೆ 75 ಸಾವಿರ ಸಹಾಯ ಧನದ ಚೆಕ್ನ್ನು ವಿತರಿಸಿದರು.