Saturday, November 6, 2010





ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರ
ಚಿಕ್ಕನಾಯಕನಹಳ್ಳಿ,ನ.04: ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರವರು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ಬಿ.ಸಿ.ನಾಗರಾಜಪ್ಪ, ಪ್ರಧಾನ ಕಾರ್ಯದಶರ್ಿಯಾಗಿ ರಾಮಚಂದ್ರನಾಯ್ಕ, ಖಜಾಂಚಿಯಾಗಿ ಮೂತರ್ಿನಾಯ್ಕ, ಉಪಾಧ್ಯಕ್ಷರಾಗಿ ಮೋತಿನಾಯ್ಕ, ನಾಗರಾಜನಾಯ್ಕ, ಕುಮಾರನಾಯ್ಕ, ಉಮ್ಲನಾಯ್ಕ, ಕರಿಯಾನಾಯ್ಕ, ಪುಟ್ಟೀಬಾಯಿ ಮತ್ತು ಸಂಘಟನಾ ಕಾರ್ಯದಶರ್ಿಯಾಗಿ ಜನಾರ್ಧನನಾಯ್ಕ, ಶಶಿಧರನಾಯ್ಕ, ಲಕ್ಮೀನರಸಿಂಹಸ್ವಾಮಿ, ಜಗದೀಶನಾಯ್ಕ, ಜಂಟಿ ಕಾರ್ಯದಶರ್ಿಯಾಗಿ ರಾಮಕೃಷ್ಣನಾಯ್ಕ, ರಮೇಶನಾಯ್ಕ, ವೇದಮೂತರ್ಿನಾಯ್ಕ ಹಾಗೂ ಕಾನೂನು ಸಲಹೆಗಾರರಾಗಿ ಚಿಕ್ಕಣ್ಣ, ಶಂಕರ್ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ತಿಳಿ

ಕನಕ ಜಯಂತಿ: ಪೂರ್ವ ಭಾವಿ ಸಭೆ
ಚಿಕ್ಕನಾಯಕನಹಳ್ಳಿ,ನ.06: ತಾಲೂಕು ಮಟ್ಟದ ಭಕ್ತ ಕನಕದಾಸರ ಜಯಂತೋತ್ಸವ ಆಚರಣೆಗಾಗಿ ಇದೇ 7ರ ಭಾನುವಾರ ಬೆಳಿಗ್ಗೆ 11ಕ್ಕೆ ಕನಕ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಇದೇ 24ರಂದು ಆಚರಿಸುವ ಕನಕ ದಾಸರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು, ತಾಲೂಕಿನ ಎಲ್ಲಾ ಗುರು ಮಠಗಳ ಗುರುಗಳು, ಗೌಡರು, ಬಳಗ ಬಂಡಾರಿಗಳು, ಕನಕ ಸಂಘಗಳ ಎಲ್ಲಾ ಪದಾಧಿಕಾರಿಗಳು, ನೌಕರ ಬಂಧುಗಳು, ರಾಜಕೀಯ ಮುಖಂಡರುಗಳು, ಸ್ಥಳೀಯ ಸಂಸ್ಥೆಗಳ ಎಲ್ಲಾ ಬಂಧುಗಳು, ಯುವಕ ಮಿತ್ರರು ಹಾಗೂ ಸಮಾಜದ ಬಂಧುಗಳು ಆಗಮಿಸಿ ತಮ್ಮೆಗಳೆಲ್ಲರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.



ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಬಿ.ಶಿವನಂಜಪ್ಪನವರಿಗೆ ಅಭಿನಂದನಾ ಸಮಾರಂಭ

ಚಿಕ್ಕನಾಯಕನಹಳ್ಳಿ,ನ.06: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆರವರಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಕಟ್ಟಡದ ಮೇಲೆ ಇದೇ 8ರ ಸೋಮವಾರ ಏರ್ಪಡಿಲಾಗಿದೆ.
ಸಮಾರಂಭವನ್ನು ಮಧ್ಯಾಹ್ನ 12ಗಂಟೆಗೆ ಏರ್ಪಡಿಸಿದ್ದು ನಂ.ಹಾ.ಉ.ಪ.ಸ.ಸಂ. ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ ಅಧ್ಯಕ್ಷತೆ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾಜ್ಯ ಹಾಲು ಮಹಾಮಂಡಳಿ ನಿದರ್ೇಶಕ ಹೆಚ್.ಕೆ.ರೇಣುಕಪ್ರಸಾದ್, ಮುಖ್ಯ ಅತಿಥಿಗಳಾಗಿ ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ಡಿ.ಅಶೋಕ್, ಉಪ ವ್ಯವಸ್ಥಾಪಕ ಡಾ.ಸುಬ್ರಯಭಟ್, ಪಶುವೈಧ್ಯ ರಾಜು, ವಿಸ್ತರಣಾಧಿಕಾರಿಗಳಾದ ಎನ್.ಬಸಪ್ಪ, ಎ.ಪಿ.ಯರಗುಂಟಪ್ಪ ಮತ್ತು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಕಾರ್ಯದಶರ್ಿ ಮತ್ತು ಸದಸ್ಯರುಗಳು ಉಪಸ್ಥಿತರಿರುವರು.