Friday, September 30, 2011






ತಂದೆಗೆ ತಕ್ಕ ಮಗ ಶಾಸಕ ಸಿ.ಬಿ.ಎಸ್: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ಸೆ.26 : ನಮ್ಮ ತಂದೆಯವರು ತೋರಿಸಿಕೊಟ್ಟ ಉತ್ತಮ ಹಾದಿಯಲ್ಲೇ ನಾವು ಈಗಲೂ ನಡೆಯುತ್ತಿದ್ದು, ಮುಂದೆಯೂ ಅದೇ ರೀತಿ ಜನರ ಮಧ್ಯೆ ಇರುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ದಿ.ಎನ್.ಬಸವಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆಯವರಂತೆಯೇ ನಾವು ಸಾರ್ವಜನಿಕರಲ್ಲಿ ಬೆರೆತು ಅವರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ, ಬಡವರ್ಗದ ಹಾಗೂ ಹಿಂದುಳಿದ ಜನಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಬಸವಯ್ಯನವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತೀಪರ್ು ನೀಡುವ ಮೂಲಕ ಅವರನ್ನು ನ್ಯಾಯಾಲಯದ ಮೆಟ್ಟಿಲನ್ನು ತುಳಿಯದಂತೆ ನೋಡಿಕೊಳ್ಳುತ್ತಿದ್ದರಲ್ಲದೆ, ಜನರ ಕಷ್ಠ ಸುಖಗಳಿಗೆ ಸ್ಪಂದಿಸುತ್ತಿದ್ದರು ಅದೇ ಗುಣ ಅವರ ಮಗನಾದ ಸುರೇಶ್ ಬಾಬುವಿಗೂ ಇದೆ, ತಂದೆಯಂತೆ ಮಗ ಎಂಬ ಗಾದೆಯನ್ನು ಇವರು ನಿಜ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಂಗಸ್ವಾಮಯ್ಯ, ರಾಜಣ್ಣ ಉಪಸ್ಥಿತರಿದ್ದರು.

ಗಾಂಧಿಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾ.ಪಂ.ಅಧ್ಯಕ್ಷರ ಬಹಿಷ್ಕಾರ: ಒಕ್ಕೂಟದ ಹೇಳಿಕೆ
ಚಿಕ್ಕನಾಯಕನಹಳ್ಗ್ಭಿ,ಸೆ.26 : ಗ್ರಾಮಪಂಚಾಯ್ತಿಗಳ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯು 3 ವರ್ಷದಿಂದ ವಿಳಂಬಗತಿಯಲ್ಲಿರುವುದರಿಂದ ಗಾಂಧಿಜಯಂತಿಯಂದು ಕ್ರಿಯಾ ಯೋಜನೆಗೆ ನಡೆಸುವ ಗ್ರಾಮಸಭೆಗೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಸಭೆಯನ್ನು ಬಹಿಷ್ಕರಿಸತ್ತೇವೆ ಎಂದು ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷೆ ಕುಶಾಲಮರಿಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಯಂತಿ ದಿನ ಗ್ರಾಮಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಕರಡು ತಯಾರಿಸಲು ಸುತ್ತೋಲೆ ಬಂದಿದೆ, ಕಳೆದ 2010-11ನೇ ಸಾಲಿನಲ್ಲಿ ತಯಾರಿಸಿದ್ದ ಕ್ರಿಯಾ ಯೋಜನೆಯೇ ಇನ್ನೂ ಪರಿಪೂರ್ಣವಾಗಿಲ್ಲ, 11-12ನೇ ಸಾಲಿನಲ್ಲಿ ತಯಾರಿಸಿದ ಯೋಜನೆ ಪ್ರಾರಂಭಿಸಿಯೇ ಇಲ್ಲ, ಈಗ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸಲು ಗ್ರಾ.ಪಂ.ಗಳಿಗೆ ಅಸಮಾಧಾನವಾಗಿದೆ ಎಂದು ತಿಳಿಸಿದವ ಅವರು, ಈ ಹಿಂದಿನ ಕ್ರಿಯಾ ಯೋಜನೆಗಳ ವಿಚಾರದಲ್ಲಿ ಗ್ರಾ.ಪಂ. ಪಿಡಿಓ ಮತ್ತು ಕಾಯರ್ಾದಶರ್ಿಗಳನ್ನು ವಿಚಾರಿಸಿದರೆ ನಮಗೆ ಸಕರ್ಾರದಿಂದ ಆದೇಶ ಬಂದಿಲ್ಲ ಎಂದು ಮೇಲಧಿಕಾರಿಗಳನ್ನು ತೋರಿಸಿ ಕೈ ತೊಳೆದಕೊಳ್ಳುತ್ತಾರೆ ಎಂದರು. 10-11ನೇ ಸಾಲಿನ ಮತ್ತು 11-12ನೇ ಸಾಲಿನ ಕ್ರಿಯಾ ಯೋಜನೆ ಪೂರ್ಣಗೊಳ್ಳದೆ 12-13ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆಗಳಿಗೆ ಸುತ್ತೋಲೆ ಕಳುಹಿಸಿರುವುದನ್ನು ಗ್ರಾ.ಪಂ. ಒಕ್ಕೂಟ ತಿರಸ್ಕರಿಸುತ್ತದೆ. ಹೊರ ರಾಜ್ಯಗಳಲ್ಲಿ ಗ್ರಾ.ಪಂ.ಅಭಿವೃದ್ದಿಗೆ ಕೇಂದ್ರ ಸಕರ್ಾರದಿಂದ 15 ರಿಂದ 16 ಸಾವಿರ ಕೋಟಿ ರೂ ಬಳಕೆಯಾಗುತ್ತದೆ, ಆದರೆ ನಮ್ಮ ರಾಜ್ಯದಲ್ಲಿ ಕೇಂದ್ರ ಸಕರ್ಾರ ಬಿಡುಗಡೆಗೊಳಿಸುವ ಗ್ರಾಮೀಣ ಅಭಿವೃದ್ದಿ ಅನುದಾನವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಇನ್ನೆರಡು ಮೂರು ದಿನಗಳೊಳಗೆ ಹಿಂದಿನ ಕ್ರಿಯಾ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳದಿದ್ದರೆ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಕರಡು ತಯಾರಿಸುವುದನ್ನು ಗ್ರಾಮಸಭೆಗಳಲ್ಲಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬರಗೂರು ಬಸವರಾಜು, ಉಷಾ, ಕಲ್ಪನಾ ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗಾಗಿ ಎಲ್ಲರ ಒಲವು ಅಗತ್ಯ
ಚಿಕ್ಕನಾಯಕನಹಳ್ಳಿ,ಸೆ.30 : ವಿದ್ಯಾಥರ್ಿಗಳು ಎಸ್.ಡಿ.ಎಂ.ಸಿ, ಶಿಕ್ಷಕವರ್ಗ ಹಾಗೂ ಪೋಷಕರ ಒಲವನ್ನು ಗಳಿಸಿ ಅವರ ಮಾರ್ಗದರ್ಶನದಂತೆ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿ.ನಂಜಯ್ಯ ಸಲಹೆ ನೀಡಿದರು.
ಪಟ್ಟಣದ ಎಂ.ಎಚ್.ಪಿ.ಎಸ್ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ಆಯಾ ಮಕ್ಕಳ ಉತ್ತರ ಪತ್ರಿಕೆಗಳೊಂದಿಗೆ ಚಚರ್ೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿಗೆ ಶ್ರಮಿಸಬೇಕೆಂದು ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಹಲವು ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿ.ಬಿ.ಲೋಕೇಶ್ ಮಾತನಾಡಿ ಶೇ.75ರಷ್ಟು ರೈತರ ಹಾಗೂ ಬಡಕೂಲಿ ಕಾಮರ್ಿಕರ ಮಕ್ಕಳು ಸಕರ್ಾರಿ ಶಾಲೆಯಲ್ಲಿ ಓದುತ್ತಿರುವುದರಿಂದಲೇ ಸಕರ್ಾರಿ ಶಾಲೆಗಳು ಈಗಲೂ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿರುವುದು ಎಂದ ಅವರು ಪೋಷಕರು ಶಾಲೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕ್ರೀಡೆ, ಇನ್ನಿತರ ಚಟುವಟಿಕೆಗಳ ಬಗ್ಗೆ ಶಿಕ್ಷಕರೊಂದಿಗೆ ಚಚರ್ಿಸಬೇಕು ಮತ್ತು ಪೋಷಕರು ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಿ ಸಕರ್ಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ ಅವರು ಮಕ್ಕಳು ಅತಿ ಹೆಚ್ಚಾಗಿ ಟಿವಿ ನೋಡುವುದನ್ನು ತಪ್ಪಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಿಸುತ್ತಾ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಪೋಷಕರು ಮನೆಯಲ್ಲಿ ಮತ್ತೊಮ್ಮೆ ತಿಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶರವರು ಆಗಮಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪರಿಶೀಲಿಸಿ, ವಸ್ತು ಪ್ರದರ್ಶನ ವೀಕ್ಷಿಸಿ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಕೆ.ಪಿ.ಚೇತನ, ಧನಪಾಲ್, ಮಾರ್ಗದಶರ್ಿ ಶಿಕ್ಷಕ ಬಸವರಾಜು, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಗದೀಶ್ ಹೆಚ್.ಸ್ವಾಗತಿಸಿದರೆ, ಎಸ್.ಕೆ.ವಿಜಯ್ಕುಮಾರ್ ನಿರೂಪಿಸಿದರು.


ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೆ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಸೆ.30 : ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೇ ವರ್ಷದ ವಾಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು (ಇಂದು) ಅಕ್ಟೋಬರ್ 1ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದು ಖುಷಿ ಸಂಸ್ಕೃತಿ ಕೇಂದ್ರದ ಆಚಾರ್ಯ ರಂಗಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಉಮೇಶ್ಚಂದ್ರ, ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮರಾಮಯ್ಯ, ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ವಿಶೇಷ ಆಹ್ವಾನಿತರಾಗಿ ರಾ.ಸ.ಪ್ರಾ.ಶಾ.ಶಿ.ಶಿಸಂಘದ ಅಧ್ಯಕ್ಷ ರಮಾದೇವಿ, ಕಾರ್ಯದಶರ್ಿ ಶಂಕರಮೂತರ್ಿ, ಖಜಾಂಚಿ ಟಿ.ಮನೋರಮಾ, ಮುಖ್ಯಶಿಕ್ಷಕರಾದ ಗೊವಿಂದರಾಜು, ತಾ.ಪ್ರೌ.ಶಾ.ಸ.ಶಿ.ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಪ್ರೌ.ಶಾ.ಶಿ.ಸಂಘದ ಕಾರ್ಯದಶರ್ಿ ತಿಮ್ಮಯ್ಯ ಉಪಸ್ಥಿತರಿರುವರು.

Saturday, September 24, 2011



ನೈತಿಕತೆ ಕಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳು: ಕೋಡಿಹಳ್ಳಿ ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಸೆ.24 : ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳಾದ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಹಾಗೂ ಸಮೂಹ ಮಾಧ್ಯಮಗಳು ತಮ್ಮ ನೈತಿಕತೆ ಕಳೆದುಕೊಂಡು ದೇಶವನ್ನು ದಿವಾಳಿ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ರೈತ ಸಂಘ ಕಛೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕನರ್ಾಟಕ ಭ್ರಷ್ಠಾಚಾರದಲ್ಲಿ ರಾಷ್ಟ್ರದಲ್ಲೇ ಅಗ್ರ ಸ್ಥಾನ ಪಡೆದಿದೆ, ಇದು ಕೇವಲ ರಾಜಕೀಯ ನಾಯಕರಿಗೆ ಬಂದಿಲ್ಲ ಇಡೀ ನಾಡಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋಟರ್್ ಕನರ್ಾಟಕದ ಗಣಿಗಾರಿಕೆಯ ಬಗ್ಗೆ ತನಿಖೆಗೆ ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸಕರ್ಾರ 2ಜಿ ಸೆಕ್ಟ್ರಂ ಹಗರಣದಲ್ಲಿ ಸಿಲುಕಿದೆ ಅಷ್ಟೇಅಲ್ಲ, ರಾಷ್ಟ್ರದ ಎಲ್ಲಾ ಪಕ್ಷಗಳೂ ನೈತಿಕತೆ ಕಳೆದುಕೊಳ್ಳುತ್ತಿವೆ ಇದನ್ನು ಸರಿದಾರಿಗೆ ತರಲು ಪ್ರಜ್ಞಾವಂತ ನಾಗರೀಕರು ಸತ್ಯಾಗ್ರಹ, ಚಳುವಳಿಗಳನ್ನು ಕೈಗೊಳ್ಳಲು ರೈತಸಂಘ ಹಾಗೂ ಸಾರ್ವಜನಿಕರು ಸಂಘಟನೆಗೊಂಡು ಸರಿ ದಾರಿಗೆತರಬೇಕಿದೆ. ಕಳೆದ ಮೂರು ದಶಕಗಳಿಂದ ನಮ್ಮ ಸಂಘ ರಾಜಕೀಯ ವ್ಯಕ್ತಿಗಳ ವಿರುದ್ದ ಹೋರಾಟ ನಡೆಸುತ್ತಲೇ ಇದ್ದು ಮುಂದಿನ ದಿನಗಳಲ್ಲೂ ಈ ಕಾರ್ಯ ಮುಂದುವರಿಯಲಿದೆ ಎಂದರು.
ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಮಳೆಯಿಂದ ಹಾನಿಯಾದರೆ ಬಯಲು ಪ್ರದೇಶದಲ್ಲಿ ಮಳೆಯಿಲ್ಲದೆ ಬರಗಾಲ ಬಂದಿದೆ, ರಾಜ್ಯ ಸಕರ್ಾರ ಈ ಭಾಗದ ಪ್ರದೇಶವನ್ನು ಬರಗಾಲವೆಂದು ಘೋಷಿಸಿ ಜನಜಾನುವಾರಗಳನ್ನು ರಕ್ಷಿಸಬೇಕು ಎಂದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ಸೋಮಗುದ್ದ ರಂಗಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಕಾರ್ಯದಶರ್ಿ ದೇವರಾಜು. ಜಿಲ್ಲಾ ಸಂಚಾಲಕ ಶಂಕರಣ್ಣ, ಹಸಿರುಸೇನೆ ಜಿಲ್ಲಾ ಸಂಚಾಲಕ ಕೆ.ಎಸ್.ಸತೀಶ್, ತಾಲ್ಲೂಕು ಉಪಾಧ್ಯಕ್ಷ ಗಂಗಾಧರ್, ತಿಮ್ಮನಹಳ್ಳಿ ಲೋಕೇಶ್, ಕೆ.ಪಿ.ಮಲ್ಲೇಶ್, ಎ.ಬಿ.ಪ್ರಕಾಶಯ್ಯ, ಮರುಳಸಿದ್ದಪ್ಪ, ಮಲ್ಲಿಕಾಜರ್ುನಯ್ಯ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಸೆ.24: ಚಂದ್ರಶೇಖರ್ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡದ ಹಿರಿಮೆಯನ್ನು ಅಂತರರéಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಬಿಂಬಿಸಿದಂತಾಗಿದೆ ಎಂದು ತಾಲ್ಲೂಕು ಕಸಾಪ ಹರ್ಷವ್ಯಕ್ತ ಪಡಿಸಿದೆ.
ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಈ ಬಗ್ಗೆ ಪ್ರತಿಕ್ರಿಯಿಸಿ ದೇಶೀ ಸಂಸ್ಕೃತಿಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡು ಕನ್ನಡ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದಿದ್ದಾರೆ.

Friday, September 23, 2011






ಸಕರ್ಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಶ್ರಮಿಸಲು ಕರೆ
ಚಿಕ್ಕನಾಯಕನಹಳ್ಳಿ,ಸೆ.23 : ಸಕರ್ಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಸಮುದಾಯ ಶ್ರಮಿಸುವಂತೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಬಿ.ಲೋಕೇಶ್ ಕರೆ ನೀಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ 2011-12ನೇ ಸಾಲಿನ ಎಸ್.ಡಿ.ಎಂ.ಸಿ ಹಾಗೂ ಸಿ.ಎ.ಸಿ ಸದಸ್ಯರಿಗೆ ನಡೆದ ಎರಡು ದಿನದ ಸಂಕಲ್ಪ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕರ್ಾರಿ ಅಧಿಕಾರಿಗಳು, ಸಕರ್ಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಂದ ದೂರವಿರಿಸಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಇದರಿಂದ ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದೆ ಎಂದ ಅವರು, ಸಕರ್ಾರಿ ಅಧಿಕಾರಿಗಳು ಮೊದಲು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಗೆ ಕಳುಹಿಸಿದರೆ ಸಕರ್ಾರಿ ಶಾಲೆಗಳು ಅಭಿವೃದ್ದಿ ಹೊಂದುತ್ತವೆ, ಅಲ್ಲದೆ ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಸಕರ್ಾರ ಗುಣಾತ್ಮಕ ಶಾಲಾ ಶಿಕ್ಷಣದತ್ತ ಸಮುದಾಯ ಎಂಬಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಹಾಗಾಗಿ ಸಮುದಾಯ ಸಕರ್ಾರಿ ಶಾಲೆಗಳ ಅಭಿವೃದ್ದಿಯಲ್ಲಿ ಶಿಕ್ಷಕರ ಜೊತೆ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸಕರ್ಾರದ ವತಿಯಿಂದ ಎಸ್.ಎಸ್.ಎ ಬಂದಾಗಿನಿಂದ ಎಸ್.ಡಿ.ಎಂ.ಸಿ ರಚಿಸಲಾಗಿ ಶಾಲೆಗಳ ಗುಣಾತ್ಮಕ ಶಿಕ್ಷಣ ಹಾಗೂ ಶಾಲಾ ಭೌತಿಕ ಅಭಿವೃದ್ದಿಯತ್ತ ಗಮನ ಹರಿಸಲಾಗಿದ್ದು ಇದಕ್ಕೆ ಎಲ್ಲಾ ಪೋಷಕರು ಸಹಕಾರ ಅಗತ್ಯವಾಗಿದೆ. ಸಕರ್ಾರಿ ಶಾಲೆಗಳನ್ನು ಓದಿದ ಹಲವರು ಇಂದು ಸಕರ್ಾರದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸದೆ ಸಕರ್ಾರಿ ಶಾಲೆಗಳಿಗೆ ಕಳುಹಿಸುವಂತೆ ಮನವಿ ನೀಡಿದರು.
ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಕರಾದ ಮರುಳಾನಾಯ್ಕ ಮಾತನಾಡಿ ಎಸ್.ಡಿ.ಎಂ.ಸಿ.ಸದಸ್ಯರ ಸಹಕಾರದಿಂದ ಇಂದು ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದ್ದು ಪ್ರಶಂಸನೀಯ ಎಂದರು. ಹಿಂದೆ ಶಿಕ್ಷಕರಿಗೆ ಗುರುಸ್ಥಾನ ನೀಡಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಗೌರವಿಸಿ ಸ್ವಾಗತಿಸುತ್ತಿದ್ದರು. ಆದರೆ ಖಾಸಗಿ ಶಾಲೆಗಳ ಬಗ್ಗೆ ಜನರಲಿ ವ್ಯಾಮೋಹ ಹೆಚ್ಚಾಗಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಚೇತನ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾಥರ್ಿಸಿದರು. ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿದರೆ, ಜಗದೀಶ್ ನಿರೂಪಿಸಿ, ಎಚ್.ಆರ್.ಹೊನ್ನಲಿಂಗಯ್ಯ ವಂದಿಸಿದರು.



ರೈತ ಸಂಘದ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಸೆ.23 : ರೈತ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ತಾಲ್ಲೂಕು ರೈತಸಂಘ ಕಾಯರ್ಾಯಲದ ಉದ್ಘಾಟನೆಯನ್ನು 24ರ(ಇಂದು) ಶನಿವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ರೈತ ಸಂಘದ ಕಾಯರ್ಾಲಯದ ಉದ್ಘಾಟನೆ ನೆರವೇರಿಸಲು ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸುತ್ತಿದ್ದು ಪಟ್ಟಣದ ಅರಣ್ಯ ಇಲಾಖೆ ಎದುರು ನೂತನವಾಗಿ ಆರಂಭಿಸಿರುವ ಕಾಯರ್ಾಲಯ, ಶೆಟ್ಟಿಕೆರೆ ಹೋಬಳಿ ಮಾಕುವಳ್ಳಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಹಾಗೂ ದಬ್ಬೇಘಟ್ಟ ಗ್ರಾಮದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ರೈತ ಸಂಘದ ಉದ್ಘಾಟನೆ ನೆರವೇರಿಸಲಿದ್ದಾರೆ.

Monday, September 19, 2011



ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಧುರೀಣರೇ ಹಾಳುಮಾಡುತ್ತಿರುವುದು
ಚಿಕ್ಕನಾಯಕನಹಳ್ಳಿ,ಸೆ.18 : ನಮ್ಮ ಪ್ರಜಾಪ್ರಭುತ್ವದ ರಾಜಕೀಯದ ಧುರೀಣರು, ಜಾತಿ ಅಂಕುಶ, ಶ್ರೀಮಂತ ವರ್ಗಗಳ ಪ್ರಭಾವ ಹಾಗೂ ಆಮಿಷಗಳ ಅಂಕುಶಗಳಿಗೆ ಒಳಗಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಇನ್ನೊಬ್ಬರ ಅಡಿಯಾಳಾಗಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಹಾಳುಮಾಡುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ತರುತ್ತಿದಾರೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಹೇಳಿದರು.
ಪಟ್ಟಣದಲ್ಲಿ ನಡದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಪ್ರಾಬಲ್ಯಕ್ಕಾಗಿ ಬದುಕಿನ ಅಸ್ಥಿರತೆ, ಅಶಾಂತಿ, ಗೊಂದಲಗಳು ಸ್ಥಷ್ಠಿಗೊಂಡು ನಿರುದ್ಯೋಗ, ಮತಧರ್ಮ ಸಂಸ್ಥೆಗಳ ದುರ್ಬಳಕೆ, ಶಿಕ್ಷಣದ ವೈರುಧ್ಯಗಳು, ವ್ಯಕ್ತಿ ಸಮಾಜದ ಮುಖಾಮುಖಿಯು ಮಾನವೀಯ ಸಂಬಂಧಗಳ ಅರ್ಥಹೀನತೆ ದಾರಿ ಕಾಣುತ್ತದೆ. ರಾಜಕೀಯ ಧುರೀಣರು ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಿ ಸರಕಾರ ಮತ್ತು ಸಮುದಾಯ ಮಟ್ಟದಲ್ಲಿ ಮುಂದಾಲೋಚನೆಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ನಿರಪೇಕ್ಷ ಸೇವೆ ಮತ್ತು ಪ್ರೀತಿಯು ಬಾಳಿನಲ್ಲಿ ಮಿಂಚಿನಂತೆ, ಹೊಳೆದಾಗಲೇ ಸಾಹಿತ್ಯ ಸಂಕೀರ್ಣ ಶುರುವಾಗಿ ಜಗತ್ತಿನ ವೈರುಧ್ಯಗಳ ಸಂಘರ್ಷವನ್ನು ಬಿಂಬಿಸಿ ಬದುಕಿನ ಆಶಯವನ್ನು ಕಟ್ಟಿಕೊಡಲು ಪ್ರಾರಂಭಿಸುತ್ತದೆ. ಈಗೆ ಬದುಕು ಸಮುದಾಯಗಳ ಬಿನ್ನಭಿಪ್ರಾಯವಿದ್ದರೂ ವಿರೋಧದಿಂದ ಕೂಡಿರದೆ ಪ್ರಾಕೃತಿಕ ಸಂಪನ್ಮೂಲ ವಿತರಣೆ, ರಕ್ಷಣೆ ಮೊದಲಾದವನ್ನು ಎಲ್ಲರ ಅಭ್ಯುದಯಕ್ಕೆ, ಸುಖಕ್ಕೆ ಬಳಕೆ ಮಾಡುವ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗುವ ಆಲೋಚನೆಯೇ ಆಗಿರುತ್ತದೆ, ಹೀಗೆ ಜೀವನವನ್ನು ಹಲವು ಮಗ್ಗಲುಗಳಿಂದ ಕಂಡು, ಅನುಭವದ ದ್ರವ್ಯದಲ್ಲಿ ಅದ್ದಿ ಸಾಹಿತ್ಯ ಸೃಷ್ಠಿ ಮಾಡಬೇಕಾಗುತ್ತದೆ, ಈ ರೀತಿಯ ಸತ್ವಯುತ ಬರಹದಲ್ಲಿಯೇ ಸಾಹಿತಿ ಬದುಕನ್ನು ಬಿಂಬಿಸುವ ಕಾರ್ಯದಲ್ಲಿ ತೊಡಗುತ್ತಾ ಜೀವನ ಕಳೆಯುತ್ತಾನೆ ಎಂದ ಅವರು ಗ್ರಾಮೀಣ ಸೊಗಡಿನ ಜಾನಪದ, ಪಟ್ಟಣಗಳ ಶಿಷ್ಟ ಮಾತು ಹಾಗೂ ಸಂಸ್ಕೃತದ ಒಡನಟ ಹಾಗೂ ಪ್ರಭಾವ ಹಳಗನ್ನಡದ ಸಿರಿನುಡಿ, ಹೊಸಗನ್ನಡದ ಚೆಲುವು, ಕನ್ನಡ ಭಾಷೆಯಲ್ಲಿ ನುಡಿ ಸಂವಹನ ಹಾಗೂ ಬರಹ ಸಂವಹನ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸಿದ್ದು ಅದೇ ರೀತಿಯಲ್ಲಿ ನಮ್ಮ ಚಿಂತನಾ ಕ್ರಮ ಮತ್ತು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ಬಗೆಯೂ ಹೊಸತನ ಕಂಡುಕೊಂಡಿದೆ. ತಾಲ್ಲೂಕಿನಲ್ಲಿ ಕೈಮಗ್ಗ ನೇಕಾರಿಕೆ ಹಾಗೂ ಉಣ್ಣೆ ಕಂಬಳಿಯ ಉದ್ಯಮದ ಪ್ರಾಧನ್ಯತೆಯು ನಿರುದ್ಯೋಗ ಪ್ರಪಾತದಲ್ಲಿ ಸಿಲುಕಿ ನೇಕಾರಿಕೆ ಹಾಗೂ ಕಂಬಳಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಆಥರ್ಿಕ ಪರಿಸ್ಥಿತಿಯನ್ನು ತಂದುಕೊಡಲು ಸಾಧ್ಯವಾಗದೆ ರಾಜಕಾರಣ ಮಾತ್ರ ಪಲ್ಲವದ ಚೈತ್ರದಂತೆ ಜನಮನವನ್ನು ಸಂಪೂರ್ಣ ತಟ್ಟಿದೆ ಎಂದರು.
ತಾಲ್ಲೂಕಿನ ಗಣಿ ಉದ್ಯಮ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿನ ಗುಡ್ಡಗಳನ್ನು ಕಬಳಿಸಿ ಭೂ ಸಂಪತ್ತನ್ನು ಬರಿದುಮಾಡುವ ಮಟ್ಟಕ್ಕೂ ನಡೆದಿದೆ, ಗಣಿಗಾರಿಕೆಯ ಕಾರಣದಿಂದ ಉತ್ತಮ ರಸ್ತೆ ಮಾಡಲ್ಪಟ್ಟರೂ, ಧೂಳಿನ ಪರಿಸರ ಊರಿನ ಜನತೆಗೆ ದುಷ್ಪರಿಣಾಮವನ್ನು ಉಂಟುಮಾಡಿ ತಾಲ್ಲೂಕಿನ ನೈಸಗರ್ಿಕ ಸಂಪತ್ತನ್ನು ಹಾಳುಮಾಡುತ್ತಿದ್ದು ಪ್ರಜ್ಞಾವಂತರಾದ ಎಲ್ಲಾ ರಂಗದ ಧುರೀಣರು ಒಗ್ಗೂಡಿ ಗಣಿಗಾರಿಕೆಯ ಉತ್ಪನ್ನವನ್ನು ಸೂಕ್ತ ವಹಿವಾಟಿನ ಮೂಲಕ ಮಾರಾಟ ಯೋಜನೆಗೆ ಸೀಮಿತಗೊಳಿಸಲು ಸರಕಾರಕ್ಕೆ ನೆರವಾಗಬೇಕು ಎಂದರು.

ಚಿಕ್ಕನಾಯಕನಹಳ್ಳಿ, ಅನುಭವದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಸಾಹಿತ್ಯ ಎನ್ನುವುದು ಅನುಭವದ ಸಾರ ಆಗಿರಬೇಕು ಎಂದು ನಾಡಿನ ಪ್ರಸಿದ್ದ ಕವಿ ಡಾ.ಸಾ.ಶಿ.ಮರುಳಯ್ಯ ನುಡಿದರು.
ಅವರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿನ ಅನುಭವವು ಸಾಹಿತ್ಯ ರಚಿಸುವ ಅಂಶ ಒಳಗೊಂಡಿದೆ, ಪ್ರತಿಯೊಬ್ಬರ ಅನುಭವದ ಬಗ್ಗೆ ಕುರಿತು ರಚಿಸುವವ ಸಾಹಿತ್ಯವು ಇನ್ನೊಬ್ಬರಿಗೆ ಆನಂದವನ್ನುಂಟು ಮಾಡುತ್ತದೆ. ಸಾಹಿತ್ಯವು ಸರ್ವರ ಸ್ವತ್ತಾಗಬೇಕಾಗಿದೆಯೇ ಹೊರತು ಯಾರೊಬ್ಬರ ಸ್ವತ್ತಾಗಬಾರದು ಎಂದರು. ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಉನ್ನತ ಸಾಧನೆ ಮಾಡುತ್ತಲೇ ಬಂದಿದ್ದಾರೆ ಅವರಿಗೆ ಈಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುವವರಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ ಅಂತಹವರಿಗೆ ಸಾಹಿತ್ಯ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದ ಅವರು ನಮ್ಮ ಹೊಟ್ಟೆಯ ಮುಂದೆ ಯಾವ ಫಿಲಾಸಪಿಯೂ ಫಲ ಕೊಡುವುದಿಲ್ಲ, ಆದ್ದರಿಂದ ನಮ್ಮ ಹೊಟ್ಟೆಗೆ ಅನ್ನ ಕೊಡುವ ಕೃಷಿಕರನ್ನು ನೆನೆಯಬೇಕಿದೆ ಅವರ ಬಗ್ಗೆ ಮಾತನಾಡಬೇಕಿದೆ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆಯೂ ಸ್ಥಷ್ಠಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ.ಪು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಇಂದು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪರಿಷತ್ತಿನ ಪಧಾಧಿಕಾರಿಳಿಗೆ ಮಾತ್ರ ಸೀಮಿತವಾಗಿರಬಾರದು ಅದು ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬಂದು ಸಾಹಿತ್ಯ ಚಟುವಟಿಕೆಗಳಿಗೆ ಮುಂದಾಗಿ ಕನ್ನಡ ಸಾಹಿತ್ಯವನ್ನು ಉಳಿಸವಂತಾಗುವುದು ಎಂದ ಅವರು ಈಗಿನ ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯನ್ನು ಯುವಕರೇ ಹಾಳುಮಾಡುತ್ತಿದ್ದಾರೆ, ಕಲಿಯಬಾರದ ವ್ಯಸನಗಳನ್ನೆಲ್ಲಾ ಕಲಿತು ತಮ್ಮ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗುತ್ತಾ ಅಲ್ಲಿನ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಾಹಿತ್ಯ ಸಂಸ್ಕೃತಿಳನ್ನು ಮರೆಯುತ್ತಿದ್ದಾರೆ, ಇದರಿಂದಲೇ ಸಾಹಿತ್ಯವು ಈಗಿನ ಯುವಕರಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದ್ದ ಕನ್ನಡ ಭಾಷೆಯು ಕಾನ್ವೆಂಟ್ ಶಾಲೆಗಳಿಂದ ಆಂಗ್ಲ ಭಾಷೆಗೆ ಮಾರುಹೋಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿದೆ, ಇದರಿಂದ ಸಾಹಿತ್ಯಾಸಕ್ತಿಯು ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪೂರ್ಣಕುಂಭ, ದೊಳ್ಳುಕುಣಿತ, ನಾಸಿಕ್ಡೋಲ, ನಂದಿಧ್ವಜ, ಸೋಮನಕುಣಿತ, ತಮಟೆವಾಧ್ಯ, ಸೇರಿದಂತೆ ಅನೇಕ ಜನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳಾದ ಲೋಹಿತಾಬಾಯಿ, ಸಿ.ಎಸ್.ನಟರಾಜು, ಸಿ.ಎಲ್.ದೊಡ್ಡಯ್ಯ, ಸಿ.ಟಿ.ಗುರುಮೂತರ್ಿ, ಸಿ.ಬಿ.ರೇಣುಕಸ್ವಾಮಿ, ಸೀಮೆಎಣ್ಣೆಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಎಂ.ಎನ್.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಇ.ಒ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ,ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹಲವರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಉಪನ್ಯಾಸಕ ಕಣ್ಣಯ್ಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಇನ್ನರ್ವೀಲ್ ಕ್ಲಬ್ ಸದಸ್ಯರು ಕ್ನನಡಗೀತೆ ಹಾಡಿದರು. ಅಣ್ಣಪ್ಪರಾವ್ ವಂದಿಸಿದರು. ವೀಣಾಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿದರು.






ಚಿಕ್ಕನಾಯಕನಹಳ್ಳಿ,ಸೆ.19 : ನಮ್ಮ ಮಕ್ಕಳು ದೇಶದ ಪ್ರಜೆಯಾದರೆ ಸಾಲದು, ದೇಶ ರಕ್ಷಿಸುವಂತಹ ದೇಶಪ್ರೇಮಿಗಳಾಗಬೇಕು ಎಂದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಹೇಳಿದರು.
ಪಟ್ಟಣದ ಕಾಳಮ್ಮನ ಗುಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ,ಎಂ.ಸಿ ಮತ್ತು ಸಿ, ಎ, ಸಿ ,ಸದಸ್ಯರಿಗೆ ಸನಿವಾಸ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ದೇಶದ ರಕ್ಷಣೆಯಂತಹ ಕಾರ್ಯಗಳಲ್ಲಿ ಭಾಗವಹಿಸಿಬೇಕು, ಹಲವಾರು ಸಂಘ ಸಂಸ್ಥೆಗಳು ದೇಶಪ್ರೇಮದ ಬಗ್ಗೆ ಉತ್ತಮ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ವಹಿಸಿ ದೇಶ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿ ಅವರ ಭವಿಷ್ಯದ ಕಡೆ ಯೋಚಿಸಿ ಯಾವ ಮಗುವೂ ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಪ್ರೋತ್ಸಾಹಿಸಬೇಕು. ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು. ಶಾಲಾ ಮಕ್ಕಳ ಕಲಿಕೆ ಕುರಿತಂತೆ ಅಧ್ಯಾಪಕರೊಂದಿಗೆ ಚಚರ್ಿಸಿ ಉತ್ತಮಪಡಿಸಲು ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮರುಳಾನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಯ್ಯ ಮಾತನಾಡಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿ, ಮು.ಶಿ ಶಂಕರಪ್ಪ ವಂದಿಸಿದರು.



ಚಿಕ್ಕನಾಯಕನಹಳ್ಳಿ,ಸೆ.19 : ಲಂಬಾಣಿ ಸಮಾಜದ ತಮ್ಮದೇ ಆದ ಗುರುಪರಂಪರೆ ಸಂಸ್ಕೃತಿ ಇದ್ದು ಸಮಾಜ ಅಭಿವೃದ್ದಿ ಹೊಂದಲು ಶಿಕ್ಷಣ, ಸಂಸ್ಕಾರ, ಸ್ವಾಭಿಮಾನದಿಂದ ಬಾಳಬೇಕಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಆಲದಕಟ್ಟೆ ತಾಂಡ್ಯದ ನೂತನ ಸೇವಲಾಲ್ ಪರಿಶಿಷ್ಠ ಜಾತಿ(ಲಂಬಾಣಿ) ವಿವಿದ್ದೋದ್ದೇಶ ಸಹಕಾರ ಸಂಘದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುವುದು ಲಂಬಾಣಿ ಜನಾಂಗದಲ್ಲಿ ಹೆಚ್ಚು, ನಮ್ಮಲ್ಲಿ ವ್ಯವಸಾಯ ವೃತ್ತಿ ಮಾಡುವವರೇ ಹೆಚ್ಚು, ದುಡಿದ ಹಣವನ್ನು ದುಶ್ಚಟಗಳಿಗೆ ವ್ಯಯಮಾಡದೆ ಸ್ವಲ್ಪ ಹಣ ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಎಂದರು. ಜನಾಂಗದ ಮಹಿಳೆಯರು ಸಂಸ್ಕೃತವಂತರಾಗಿ ಅಡುಗೆ ಜೊತೆಯಲ್ಲಿ ಸಮಾಜ ಸೇವೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಜನಾಂಗದ ವಿದ್ಯಾವಂತರು ಹಾಗೂ ಸಕರ್ಾರಿ ನೌಕರರು ತಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಲು ಸಲಹೆ ನೀಡಿದರು.
ಜಿ.ಪಂ.ಸದಸ್ಯ ಲೋಹಿತಾಬಾಯಿ ಮಾತನಾಡಿ ಸಹಕಾರ ಮನೋಭಾವವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಂಡು ದ್ವೇಶ, ಅಸೂಹೆಗಳಿಂದ ದೂರವಿದ್ದರೆ ಮಾತ್ರ ಸಮಾಜ ಉದ್ದಾರವಾಗಲಿದೆ, ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ನಮ್ಮ ಜನಾಂಗವನ್ನು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಅಲ್ಪಸ್ವಲ್ಪ ಆಮಿಶ ಒಡ್ಡಿ ಮತ ಪಡದು ಕೈಬಿಡುತ್ತಾರೆ ಎಂದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ,ಸಹಕಾರ ಸಂಘಗಳು ನಮ್ಮದು ಎನ್ನುವ ಭಾವನೆ ಬಂದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ ಎಂದರಲ್ಲದೆ, ್ನ ತೆಗೆದುಕೊಂಡ ಸಾಲವನ್ನು ಸರಿಯಾಗಿ ಪಾವತಿಸಿ ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸವುಂತೆ ತಿಳಿಸಿದರು.
ಸಮಾರಂಭದಲ್ಲಿ ಬಿ.ವೆಂಕಟೇಶ್ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಕೈಗಾರಿಕೋದ್ಯಮಿ ಟಿ.ಜಿ.ತಿಮ್ಮಯ್ಯ, ಆಲದಕಟ್ಟೆ ಶ್ರೀರಂಗನಾಯಕ, ಮಾಜಿ ತಾ.ಪಂ.ಉಪಾಧ್ಯಕ್ಷ ಕಮಲಾನಾಯಕ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರುಗಳಾದ ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ರಂಗಮ್ಮ ವೆಂಕಟೇಶ್, ವಿನೋದಬಾಯಿ ರಾಜಾನಾಯಕ, ಕರಿಯಮ್ಮರಾಮಚಂದ್ರನಾಯಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಮಲಾನಾಯಕ ಸ್ವಾಗತಿಸಿದರು. ರಾಮಚಂದ್ರನಾಯಕ ನಿರೂಪಿಸಿದರು.


ರಾಜ್ಯ ವೀರಶೈವ ವೇದಿಕೆಯ ಸೆ.26ರಂದು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಸೆ.19 : ವೀರಶೈವ ಸಮಾಜದ ಸಂಘಟನೆಯನ್ನು ಮನೆ ಮನೆ ಹಾಗೂ ಹಳ್ಳಿಗಳಿಂದ ಸಂಘಟನೆ ಮಾಡಲು ಕನರ್ಾಟಕ ರಾಜ್ಯ ವೀರಶೈವ ವೇದಿಕೆ ತೀಮರ್ಾನಿಸಿದೆ ಎಂದು ರಾಜ್ಯಧ್ಯಾಕ್ಷ ಶಿವಮಹದೇವಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ಉಚಿತ ವಿದ್ಯಾಥರ್ಿನಿಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಬಡವಿದ್ಯಾಥರ್ಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುವುದು, ಬಸವ ಜಯಂತಿ ಹಾಗೂ ಶರಣರ ಜಯಂತಿ ಸೇರಿದಂತೆ ಶಾಲಾ ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಭಂದ ಸ್ಪಧರ್ೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳನ್ನು ನಡೆಸಲಾಗುವುದು ಹಾಗೂ ಸ್ಮಧರ್ಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ಸಲಹೆ, ಗಾಂಧೀ ಜಯಂತಿ, ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದರು. ಈ ಸಂಘಟನೆಯ ರೂಪರೇಷೆ ಹಾಗೂ ಸಂಘದ ಸಂಘಟೆನಯ ಬಗ್ಗೆ ಚಚರ್ಿಸಲು ಇದೇ 26ರಂದು ಪಟ್ಟಣದ ಎಸ್.ಎಂ.ಎಸ್. ಶಾಲೆಯ ಆವರಣಲದಲ್ಲಿ ಬೆಳಗ್ಗೆ 10.30ಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿಯವರ ಸಾನಿಧ್ಯದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಗಂಗಾಧರ, ತೋಟರಾಧ್ಯ ಉಪಸ್ಥಿತರಿದ್ದರು.

Wednesday, September 14, 2011

ಪದವೀಧರ ಸಹಕಾರ ಸಂಘಕ್ಕೆ ಚಾಲನೆ :ಕ್ಯಾಪ್ಟನ್ ಸೋಮಶೇಖರ್ಚಿಕ್ಕನಾಯಕನಹಳ್ಳಿ,ಸೆ.14 : ತಾಲ್ಲೂಕು ಪಧವೀದರರ ಪತ್ತಿನ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರಲು ಯೋಜಿಸಲಾಗುತ್ತಿದೆ ಎಂದು ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ. ಪಟ್ಟಣದ ರೋಟರಿ ಬಾಲಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉದ್ದೇಶಿತ ಸಹಕಾರ ಸಂಘಕ್ಕೆ 500ರಿಂದ 600 ಜನ ಷೇರುದಾರರನ್ನು ಹೊಂದುವ ಉದ್ದೇಶವಿದ್ದು ಪ್ರತಿ ಷೇರಿಗೆ 1200 ರೂ ಷೇರು ಧನವಾಗಿ ಸಂಗ್ರಹಿಸಲಾಗುವುದು ಎಂದರಲ್ಲದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೊತೆಗೆ ಬಿಳಿಗೆರೆ ಹಾಗೂ ಬುಕ್ಕಾಪಟ್ಟಣವನ್ನು ನಮ್ಮ ಷೇರುದಾರರ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುವುದು ಎಂದರು.ನಮ್ಮ ಈ ಸಹಕಾರ ಸಂಘದಲ್ಲಿ 10ಜನ ಪ್ರಮೋಟರ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಹೆಚ್ಚಿನ ವಿವರಗಳಿಗೆ ಕ್ಯಾಪ್ಟನ್ ಸೋಮಶೇಖರ್ ರವರನ್ನು 9448175389 ಇಲ್ಲಿ ಸಂಪಕರ್ಿಸಲು ಕೋರಲಾಗಿದೆ.

Tuesday, September 13, 2011



ಸಮ್ಮೇಳನದಲ್ಲಿ ವಿವಿದ ಗೋಷ್ಠಿ, ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಸೆ.13: ತಾಲ್ಲೂಕಿನಲ್ಲಿ ಇದೇ 17ರಂದು ನಡೆಯುವ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 12.45ಕ್ಕೆ ವಿಶೇಷ ಉಪನ್ಯಾಸ -ಗೋಷ್ಠಿ 1, ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಹಿರಿಯ ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ. ಎರಡನೇ ಕಸಾಪ ಸಮ್ಮೇಳನಾಧ್ಯಕ್ಷ ಆರ್.ಬಸವರಾಜು ಮಾತನಾಡಲಿದ್ದು , ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ದಲಿತ ಮುಖಂಡ ಚನ್ನಬಸವಯ್ಯ ಬೇವಿನಹಳ್ಳಿ ಉಪಸ್ಥಿತರಿರುವರು. ಇದೇ ಸಮಯದಲ್ಲಿ ಪ್ರೊ.ಲಿಂಗದೇವರು ಹಳೆಮನೆ ಒಂದು ನೆನಪು ಕಾರ್ಯಕ್ರಮವನ್ನು ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ ನಡೆಸಿಕೊಡುವರು. ಮಧ್ಯಾಹ್ನ 2.45ಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ-ಗೋಷ್ಠಿ2 ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕೃಷಿ ಪರಿಸರದ ಬಗ್ಗೆ ಕೃಷಿ ತಜ್ಞ ಪ್ರೊ.ಜಿ.ಶಿವನಂಜಯ್ಯ ಬಾಳೆಕಾಯಿ ಮಾತನಾಡಲಿದ್ದು ಪ್ರೊ.ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾತನಾಡುವರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ತಾಲ್ಲೂಕಿನ ಜೀವವೈವಿಧ್ಯಗಳು ಬಗ್ಗೆ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡುವರು.ವಿಶೇಷ ಆಹ್ವಾನಿತರಾಗಿ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್ ಉಪಸ್ಥಿತರಿರುವರು. ಸಂಜೆ 5ಕ್ಕೆ ಕವಿ ಮಿಲನ ಗೋಷ್ಠಿ-3 ಕಾರ್ಯಕ್ರಮವಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಸಿಂಗಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾ.ಪ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮರಿದೇವರು ಟಿ.ಎಲ್.ರಂಗನಾಥಶೆಟ್ಟಿರವರ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅಧ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿ.ಸಂಘದ ಬಿ.ಎಲ್.ಬಸವರಾಜು ಹಾಗೂ ಹಲವರು ಕವಿಗಳು ಭಾಗವಹಿಸುವರು.

Friday, September 9, 2011

ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಠಾನ ತೃಪ್ತಿದಾಯಕವಾಗಿಲ್ಲಚಿಕ್ಕನಾಯಕನಹಳ್ಳಿ,ಸೆ.09 : ಸಕರ್ಾರ ಜಾರಿಗೆ ತಂದಿರುವ ಶಾಲೆಗೊಂದು ವನ ಕಾರ್ಯಕ್ರಮ ಯಶಸ್ವಿಯಾಗದ ಬಗ್ಗೆ ಆಕ್ಷೇಪಿಸಿದ ಅವರು ಶಾಲೆಗಳಲ್ಲಿ ಸಣ್ಣದೊಂದು ಉದ್ಯಾನವನದಂತೆ ಸಸಿಗಳನ್ನು ನೆಟ್ಟು ಯಶಸ್ವಿಗೊಳಿಸಲು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪಶು ಇಲಾಖೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪ್ರತಿಬಾರಿ ಆಕ್ಷೇಪಣೆಗಳು ಕೇಳಿಬರುತ್ತಿದ್ದು ಇದರ ಬಗ್ಗೆ ಗಮನ ಹರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಕರ್ಾರಿ ಕಾರ್ಯಕ್ರಮಗಳು, ಉದ್ಘಾಟನೆಗೊಳ್ಳುವ ಹಲವು ಸಮಾರಂಭಗಳನ್ನು ಏರ್ಪಡಿಸುವ ಮುನ್ನ ತಹಶೀಲ್ದಾರ್, ತಾ.ಪಂ.ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಂಭಂದಪಟ್ಟ ಜನಪ್ರತಿನಿಧಿಗಳಿಗೆ ಖಡ್ಡಾಯವಾಗಿ ತಿಳಿಸಿ ಆನಂತರ ಕಾರ್ಯಕ್ರಮ ಏರ್ಪಡಿಸಬೇಕೆಂದು ತಾಲ್ಲೂಕು ಇಲಾಖಾಧಿಕಾರಿಗಳಿಗೆ ಇ.ಓ.ಎನ್.ಎಂ.ದಯಾನಂದ್ ಸೂಚಿಸಿದರು.ತಾಲ್ಲೂಕಿನ ಇಲಾಖಾಧಿಕಾರಿಗಳು ತಮಗೆ ಬೇಕಾದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳಿಗೆ, ತಮ್ಮ ಮೇಲಾಧಿಕಾರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿಸದೆ ಇಲಾಖಾ ಸಮಾರಂಭಗಳನ್ನು ಏರ್ಪಡಿಸಿ ಸಮಾರಂಭ ಕೆಲವು ದಿನಗಳಿವೆ ಎಂದಾಗ ತಿಳಿಸಲು ಬರುತ್ತಾರೆ ಎಂದು ಆರೋಪಿಸಿದ ಅವರು, ಈ ರೀತಿಯ ಕಾರ್ಯಗಳು ನಡೆಯಬೇಕಾದರೆ ಮುಂಚಿತವಾಗಿ ತಹಶೀಲ್ದಾರ್ರವರಿಂದ ಮೊದಲು ಅನುಮತಿ ಪಡೆದು ನಂತರ ಶಾಸಕರಿಂದ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿ, ಸಮಾರಂಭ ನಡೆಯುವ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಆನಂತರ ಸಮಾರಂಭವನ್ನು ಏರ್ಪಡಿಸಿ ಶಿಷ್ಠಾಚಾರ ಪಾಲಿಸಬೇಕು ಎಂದು ತಿಳಿಸಿದರು.ತೋಟಗಾರಿಕೆಯ ವ್ಯಾಪ್ತಿಯಲ್ಲಿ ಕೆಂಪುಮೂತಿ ಹುಳುವಿನಿಂದ ತೆಂಗಿನ ಬೆಳೆಗೆ ಹಾನಿಯುಂಟಾಗುತ್ತಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹಳ್ಳಿಕೆರೆಪುರ, ಸೊಂಡೇನಹಳ್ಳಿ ಗ್ರಾಮಗಳಲ್ಲಿ 25ಎಕರೆಯಷ್ಟು ಬೆಳೆಯು ಹುಳುವಿನಿಂದ ನಾಶವಾಗಿದ್ದು ಇದರ ಬಗ್ಗೆ ಜನಜಾಗೃತಿಯನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಕೆಂಪುಮೂತಿ ಹುಳುವಿನಿಂದ ಬೆಳೆಯಲ್ಲಿ ಏರುಪೇರು ಉಂಟಾದರೆ ಹೋಬಳಿ ಮಟ್ಟದಲ್ಲಿ ಸಹಾಯಕ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೆ ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತೋಟಗಾರಿಕಾ ಇಲಾಖಾಧಿಕಾರಿ ತಿಳಿಸಿದರು.ಸಮಾರಂಭದಲ್ಲಿ ತಾ.ಪಂ.ಅದ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್ ಹಾಗೂ ತಾಲ್ಲೂಕು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Thursday, September 8, 2011







ಸೆ.17 ರಂದು ಚಿ.ನಾ.ಹಳ್ಳಿ ನಾಲ್ಕನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಸೆ.08 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಇದೇ 17ರ ಶನಿವಾರ ಬೆಳಗ್ಗೆ 08.15 ಆರಂಭಗೊಳಲಿದೆ, ಸಮ್ಮೇಳನಾಧ್ಯಕರಾದ ಪ್ರೊ.ನಾ.ದಯಾನಂದರವರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವೈವಿಧ್ಯಮ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.15ಕ್ಕೆ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅರಳೇಪೇಟೆ, ನೆಹರು ಸರ್ಕಲ್, ತಾತಯ್ಯನ ಗೋರಿ ಮಾರ್ಗವಾಗಿ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಅವರನ್ನು ಮೆರವಣಿಗೆಯಲ್ಲಿ ಬಯಲು ರಂಗಮಂದಿರಕ್ಕೆ ಕರೆತರಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಬಸವರಾಜಪ್ಪ ನೆರವೇರಿಸುವರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪುರಸಭಾ ಸದಸ್ಯರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಹಾಜರಿರುವರು. . ಬೆಳಗ್ಗೆ 10.45ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಕವಿ ಡಾ.ಸಾ.ಶಿ.ಮರುಳಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ತಾಲ್ಲೂಕಿನ 3ನೇ ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಂ.ವಿ.ನಾಗರಾಜ್ರಾವ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವರು.ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪ-ಸಿ.ಡಿ ಬಿಡುಗಡೆ ಮಾಡಲಿದ್ದು ಹಿರಿಯ ಸಾಹಿತಿ ಡಾ.ಅಬ್ದುಲ್ ಹಮೀದ್ ಪುಸ್ತಕ ಮಳಿಗೆಗಳ ಉದ್ಗಾಟನೆ ನೆರವೇರಿಸಲಿದ್ದು ಕವಿ ಹಾಗೂ ಲೇಖಕ ಪ್ರೊ.ನಾ.ದಯಾನಂದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರತ್ನರಾವ್, ಜಯಮ್ಮ, ಭಾರತಿ ನಟರಾಜ್, ಸರಸ್ವತಮ್ಮ, ಪದ್ಮವರದರಾಜು, ಸುಲೋಚನಮ್ಮ, ಜಯಮ್ಮ ವೇದಮೂತರ್ಿ, ನಾಗರಾಜು, ಲಕ್ಕಮ್ಮ, ಬೆನಕನಕಟ್ಟೆ ಬಿ.ಪಿ.ಚನ್ನಪ್ಪ, ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಜೋಡಿಕಲ್ಲೇನಹಳ್ಳಿಶಿವಪ್ಪ, ಅನ್ಸರ್ಪಾಷ, ಕೆ.ಎನ್.ಶಂಕರಲಿಂಗಯ್ಯ, ಬಿ.ಎಲ್.ಪಂಕಜ ಚಂದ್ರಶೇಖರ್, ರಂಗಪ್ಪ ಇವರುಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಗ್ರಾಮೀಣ ವಿಭಾಗದ ಅಧ್ಯಕ್ಷ ಜಿ.ಇಂದ್ರಕುಮಾರ್ ಹಾಗೂ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್.ಬಸವರಾಜ್ರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು, ಎಂ.ವಿ.ನಾಗರಾಜರಾವ್ರವರ ಸಾವಿರಾರು ನುಡಿಮುತ್ತುಗಳು, ಸೂಕ್ತಿಕೋಶ, ಪ್ರೊ. ನಾ.ದಯಾನಂದರವರ ಜಂಗಮ ಮಂಡೆವಿಶೇಷ ಆಹ್ವಾನಿತರಾಗಿ ತಾ.ಪಂ.ಇಓ ಎನ್.ಎಂ.ದಯಾನಂದ್, ಟಿ.ಸಿ.ಕಾಂತರಾಜು, ಬಿಇಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ಬೆಂಗಳೂರಿನ ಹೇಮಂತ ಸಾಹಿತ್ಯದ ವೆಂಕಟೇಶ್, ಕೈಗಾರಿಕೋದ್ಯಮಿ ಎನ್.ಎಂ.ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಪಾಲ್ಗೊಳ್ಳುವರು.
ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರವನ್ನಾಗಿಸಿಕೊಂಡಿದ್ದವರು, ಈಗ ಎ.ಟಿ.ಎಂ.ನ್ನಾಗಿಸಿಕೊಂಡಿದ್ದಾರೆ.ಚಿಕ್ಕನಾಯಕನಹಳ್ಳಿ,ಸೆ.8 : ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸಿಕೊಂಡಿದ್ದ ಕೆಲವು ಗಂಡಸರು, ಈಗ ಸ್ತ್ರೀಶಕ್ತಿ ಸಂಘದಿಂದ ಹಣವನ್ನು ತಂದುಕೊಡುವ ಎ.ಟಿ.ಎಂ.ಗಳನ್ನಾಗಿಸಿಕೊಂಡಿರುವ ಬಗ್ಗೆ ಮಹಿಳೆಯರು ಜಾಗೃತಿವಹಿಸಬೇಕೆಂದು ಪುರಸಭಾ ಸದಸ್ಯೆ ಸಿ.ಎಂ.ರೇಣುಕಮ್ಮ ಹೇಳಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸ್ಥಳೀಯ ಗ್ರಾಮಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊಟಮ್ಮನವರು ಅಂದು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಕೆಲವು ಜನ ಗಂಡಸರು ಸಂಘದಿಂದ ತರುವ ಹಣವನ್ನು ಉಪಯೋಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ, ಇನ್ನೂ ಕೆಲವು ದಂಪತಿಗಳು ಕಷ್ಟದ ದುಡಿಮೆಯಿಂದ ಹಾಗೂ ಬುದ್ದಿವಂತಿಕೆಯಿಂದ ಬದುಕು ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಇಂದಿನ ಯುಗಕ್ಕೆ ತಕ್ಕಂತೆ ಬದುಕುತ್ತಿರುವದನ್ನು ಸಹಿಸದ ಕೆಲವು ಕುಹಿಕಿಗಳು ಟೀ ಅಂಗಡಿ ಮುಂದೆ ಕುಳಿತು ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಹೋಗುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿಕೊಂಡು ಅವಹೇಳನ ಮಾಡುವುದು ತರವಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ಪುರುಷರು ಮತ್ತು ಮಹಿಳೆಯರು ಪ್ರತಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ನೆರವಾದರೆ ಸಮಾಜ ಮುಂದೆ ಬರುತ್ತದೆ, ಒಬ್ಬ ಪುರುಷನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷನು ಇರುತ್ತಾರೆ ಎಂದು ಹೇಳಿದರು. ಗಂಡು ಹೆಣ್ಣು ಸಮಾನವಾಗಿ ಯೋಚಿಸುವ ಕುಟುಂಬಗಳು ಸುಖವಾಗಿವೆ, ಅಂತಹ ಕುಟುಂಬದ ಮಕ್ಕಳು ಒಳ್ಳೆಯ ಬದುಕನ್ನು ರೂಢಿಸಿಕೊಳ್ಳುತ್ತಾರೆ. ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳು ಅಲ್ಲ ಸಮರಸವೇ ಜೀವನವೆಂಬುದನ್ನು ಅರಿತು ಬಾಳಬೇಕೆಂದರು. ಜ್ಞಾನನಿಧಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಜಿ ರಾಜ್ ಮಾತನಾಡಿ ಮಹಿಳೆಯರು ಸಂಘಗಳಿಗೆ ಸೇರಿ ಉಳಿತಾಯದ ಮನೋಭಾವನೆಯನ್ನು ಅರಿತುಕೊಂಡವರ ಜೀವನ ಸುಧಾರಿಸುತ್ತಿದ್ದಾರೆ ಎಂದರು. ಮಹಿಳೆಯರು ಒಗ್ಗಟ್ಟಾಗಿ ತಮ್ಮ ಸಂಘದ ಬಗ್ಗೆ ಇರುವ ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕೆಂದರಲ್ಲದೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಾಟೆ ಮಾಡಿಕೊಳ್ಳಬೇಡಿ, ತಮ್ಮ ಸಂಘದಿಂದ ಸಾಲವನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಆಥರ್ಿಕವಾಗಿ ಸದೃಡವಾಗಿ ಎಂದು ಹೇಳಿದ ಅವರು, ಹಿಂದೆ ಗಂಡಸರು ದುಡಿಮೆ ಮಾಡಿಕೊಂಡು ಬಂದರೆ ಜೀವನ ನಡೆಯುತ್ತಿತ್ತು ಇಲ್ಲವಾದರೆ ತುತ್ತು ಅನ್ನಕ್ಕೂ ಬಡತನವಿತ್ತು ಆದರೆ ಈಗ ಮಹಿಳೆಯರು ಸಂಸಾರದ ಜವಾಬ್ದಾರಿ ಹೊತ್ತು ವ್ಯವಹಾರದೊಂದಿಗೆ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದಾರೆ ಎಂದರು. ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನಾಧಿಕಾರಿ ಲೋಹಿತಾಶ್ವ ಮಾತನಾಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇದ್ದರೆ ನಮ್ಮ ಸ್ವಯಂಸೇವಕರು ಪ್ರತಿ ಸಂಘದಲ್ಲೂ ಇರುತ್ತಾರೆ ಅವರ ಬಳಿ ಮಾಹಿತಿ ಪಡೆದು ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದ ಅವರು ಸ್ವಸಹಾಯ ಸಂಘಗಳು ಒಂದುಗೂಡಿ ಯೋಜನೆಯ ಬಗ್ಗೆ ಇತರರಿಗೆ ತಿಳಿಸುತ್ತಾ ತಾವು ಅಭಿವೃದ್ದಿ ಹೊಂದಲು ಕರೆ ನೀಡಿದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರುಕ್ಮಿಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ರವಿಕುಮಾರ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾಳಿಗೆಮನೆಯಿಂದ ಮಾನಸಗಂಗೋತ್ರಿಯವರಿಗೆ ಏರಿಬಂದವರು ಡಾ.ರಾಧಾಕೃಷ್ಣನ್ಚಿಕ್ಕನಾಯಕನಹಳ್ಳಿ,ಸೆ.08 : ನಮ್ಮ ದೇಶ ಗುರುಪರಂಪರೆಯಿಂದ ಕೂಡಿದ್ದು ಆ ಪರಂಪರೆಯ ಶಿಕ್ಷಣವೆಂಬ ಸೌರವ್ಯೂಹದಲ್ಲಿ ತಿರುಗುವ ಮಿನುಗುತಾರೆ ಶಿಕ್ಷಕ, ಅವನು ವ್ಯಕ್ತಿಯ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಕಾರ್ಯ ಮುಂದುವರಿಸುತ್ತಾನೆ ಎಂದು ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ರಾಜಕುಮಾರ್ ಹೇಳಿದರು.ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಡಾಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಷಯ ಜ್ಞಾನವನ್ನು ಪಡೆದವನು ಶಿಕ್ಷಕ, ಮಾಳಿಗೆಯ ಮನೆಯಿಂದ ಮಾನಸಗಂಗೋತ್ರಿಯವರೆಗೆ ಏರಿ ಬಂದವರು ರಾಧಾಕೃಷ್ಣನ್, ಯುವ ಶಕ್ತಿಯನ್ನು ಒಗ್ಗೂಡಿಸಿ ರಾಷ್ಟ್ರ ಕಟ್ಟಿದವರಾಗಿ, ಶಿಕ್ಷಕರಾಗಿ ಉಪಕುಲಪತಿಯಾಗಿ ದೇಶದ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ, ದೇಶವಿದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಪಸರಿಸಿದ ದಷ್ಟಾರಾಗಿ ಎತ್ತರಕ್ಕೆ ಏರಿದವರು ಡಾ ಎಸ್.ರಾಧಾಕೃಷ್ಣನ್. ವಿದ್ಯಾಥರ್ಿಗಳು ಸಮುದಾಯದ ಎಲ್ಲರೊಂದಿಗೆ ಬೆರೆಯುವಂತಾಗಬೇಕು ಮಾನವ ಜನಾಂಗವನ್ನು ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕೆ.ಸಿ. ಬಸಪ್ಪನವರು ಮಾತನಾಡಿ ಜಗತ್ತಿಗೆ ಕನಸುಗಳನ್ನು ಮಾರಾಟ ಮಾಡುವವನೆ ಶಿಕ್ಷಕ, ಶಿಕ್ಷಕ ಕಲಾಕೃತಿಯಾಗಿ ಉಳಿಯಬೇಕು, ನಿಷ್ಠೆ ಸ್ವಯಂಸಿದ್ದತೆ ತಾನು ತಿಳಿದದ್ದನ್ನೆಲ್ಲಾ ವಿದ್ಯಾಥರ್ಿಗಳಿಗೆ ತಿಳಿಸುವನಾಗಬೇಕು. ಅನ್ವಯತೆಯನ್ನು ಚಲನಶೀಲವನ್ನಾಗಿಸಿಕೊಳವುದೇ ಶಿಕ್ಷಕ ಸಮುದಾಯ ಎಂದು ನುಡಿದ ಅವರು ಜಗತ್ತಿನ ಯಾವ ಶಕ್ತಿಯು ಶಿಕ್ಷಕ ಶಕ್ತಿಗೆ ಸಮನಾಗಲಾರದು. ಶಿಕ್ಷಕ ಏನು? ಎಲ್ಲಿದೆ? ಎಂಬ ಪ್ರಶ್ನೆಗಳ ಮೂಲಕ ಒಬ್ಬ ವ್ಯಕ್ತಿಯನ್ನು ಬೆಳಸುವವನು. ಶಿಕ್ಷಕ ಅನುಮಾನಗಳನ್ನು ಪರಿಹರಿಸುವವನಾಗಬೇಕು ಶಿಕ್ಷಕ ಹಣದ ದಾಹವನ್ನು ಬಿಟ್ಟು ಜ್ಞಾನ ನೀಡುವವನಾಗುವ ಜೊತೆಗೆ ನಿರಂತರವಾದ ಅಧ್ಯಯನಶೀಲನಾಗಿ ವಿಷಯಗಳನ್ನು ಅನ್ವಯಶೀಲಗೊಳಿಸಬೇಕು. ವಿದ್ಯಾಥರ್ಿಗಳು ನಿರಂತರವಾಗಿ ಜ್ಞಾನದಾಹಿಗಳಾಗಬೇಕು ಆಗ ಮಾತ್ರ ಈ ಆಚರಣೆ ಅರ್ಥ ಪೂರ್ಣ ಎಂದರು. ಉಪನ್ಯಾಸಕ ಪ್ರೊ.ಆರ್.ಎಂ. ಶೇಖರಯ್ಯ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿ ಡಾಎಸ್. ರಾಧಾಕೃಷ್ಣನ್ ಅವರ ಆದರ್ಶಗಳು ಬದುಕಿಗೆ ಇಂಬು ನೀಡಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಪ್ರೊ. ಬಿ.ಎಸ್. ಬಸವಲಿಂಗಯ್ಯ ಉಪಸ್ಥಿತರಿದ್ದರು.

Monday, September 5, 2011







ಮೌಢ್ಯತೆಯಿಂದ ದೂರವಾಗಿ, ಶಿಕ್ಷಣ ಪಡೆಯುವುದರೊಂದಿಗೆ ಮುಖ್ಯವಾಹಿನಿಗೆ ಬನ್ನಿ
ಚಿಕ್ಕನಾಯಕನಹಳ್ಳಿ,ಸೆ.05 : ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಮೂಲಕ ಭವಿಷ್ಯದ ಯಾದವ ಸಮಾಜವನ್ನು ಕಟ್ಟಲು ಮುಂದಾಗಿರಿ ಎಂದು ಚಿತ್ರದುರ್ಗ ಕೃಷ್ಣ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣಯಾದವಾನಂದಸ್ವಾಮಿ ಹೇಳಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಯಾದವ ವಿದ್ಯಾಥರ್ಿ ನಿಲಯದ ಶಂಕುಸ್ಥಾಪನೆ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಮೌಢ್ಯತೆ ಆವರಿಸಿಕೊಂಡಿರುವ ಈ ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ಜೊತೆಗೆ ಶಿಕ್ಷಣದಿಂದ ಅಭಿವೃದ್ದಿ ಹೊಂದಿರುವ ಯುವಕ ಪಡೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜವನ್ನು ಕಟ್ಟಲು ಅಣಿಯಾಗುವುದಾಗಿ ತಿಳಿಸಿದ ಅವರು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗುವ ಮೂಲಕ ಸಂಘ ಶಕ್ತಿಯನ್ನು ಪ್ರದಶರ್ಿಸುವ ಕಾಲ ಬಂದೊದಗಿದೆ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಲು ಶ್ತಮಿಸುತ್ತೇನೆ ಎಂದರು. ಹಾಸ್ಟಲ್ ಕಟ್ಟಲು ಶಾಸಕರಾದ ಸಿ.ಬಿ.ಸುರೇಶ್ ಬಾಬು ಮೂರು ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದ್ದು ಅವರ ಸಕರ್ಾರಿ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕೋರಲಾಗುವುದು ಎಂದರು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎರಡು ಲಕ್ಷ ರೂಗಳನ್ನು ಕೊಡುವುದಾಗಿ ವಾಗ್ದಾನವನ್ನು ನೀಡಿದ್ದಾರೆ ಇಲ್ಲಿನ ಸಮಾಜದ ಮುಖಂಡರು ಘೋಷಿಸಿರುವ ಹಣವನ್ನು ಸಂಗ್ರಹಿಸುವ ಜೊತೆಗೆ ಅದನ್ನು ಯೋಗ್ಯ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಹೋಗಬೇಕು ಎಂದರಲ್ಲದೆ ಪಾದಯಾತ್ರೆ ಮೂಲಕ ಇನ್ನಷ್ಟು ಹಣ ಸಂಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ಎ.ಕೃಷ್ಣಪ್ಪ ಮಾತನಾಡಿ ಪ್ರತಿಯೊಂದು ಸಮಾಜ ಬೆಳೆಯಲು ಶಿಕ್ಷಣ ಅತ್ಯಗತ್ಯವಾಗಿದ್ದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ, ನಮ್ಮ ಜನಾಂಗದವರಿಗೆ ಶಿಕ್ಷಣಕ್ಕಾಗಿ ಕೇವಲ ಭಾರತದಾದ್ಯಂತ 16ರಷ್ಟು ಹಾಸ್ಟಲ್ಗಳಿವೆ ಎಂದರಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ ಒಂದು ಲಕ್ಷರೂ ತಾಲ್ಲೂಕು ಮಟ್ಟದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ 50ಸಾವಿರ ರೂ ನೀಡಲಿದ್ದು ಈಗ ರೂಪುಗೊಳ್ಳುತ್ತಿರುವ ಹಾಸ್ಟಲ್ಗೆ ತಾನು ಒಂದು ಲಕ್ಷ ಹಣ ನೀಡುವುದಾಗಿ ಆ ಹಣವನ್ನು ಹಾಸ್ಟಲ್ ಕಾಮಗಾರಿಯ ಅಭಿವೃದ್ದಿ ನೋಡಿ ನೀಡುತ್ತೇನೆ ಎಂದರು. ಕನರ್ಾಟಕ ರಾಜ್ಯದಲ್ಲಿ ಮಠಗಳು ನೀಡುತ್ತಿರುವ ಶಿಕ್ಷಣಾಸಕ್ತಿಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಮಠ ಮಾನ್ಯಗಳು ಈ ರೀತಿಯಲ್ಲಿ ಮಾಡುತ್ತಿರುವ ಸೇವೆಯನ್ನು ನಾವು ಪ್ರಶಂಸಿಸಲೇ ಬೇಕಾಗಿದೆ ಎಂದರಲ್ಲದೆ ಭಾರತದಾದ್ಯಂತ ಯಾದವ ಸಮಾಜ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದು ಇವರೆಲ್ಲಾ ಒಗ್ಗೂಡಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಯಾದವ ಸಮಾಜದಲ್ಲಿ ಗುರಿ ಮತ್ತು ಗುರು ಒಟ್ಟಿಗೆ ದೊರಕಿರುವುದು ಉತ್ತಮ ಸಂಗತಿ, ಸಮಾಜವನ್ನು ಬೆಳಸಬೇಕಾದರೆ ಸ್ವಾಮೀಜಿಯ ಮಾರ್ಗದರ್ಶನದಂತೆ ಮುನ್ನೆಡೆಯಬೇಕಾಗಿದ್ದು ಜನಾಂಗದಲ್ಲಿರುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಗ್ಗಟ್ಟಾಗಬೇಕು ಎಂದರು. ಯಾದವ ಸಮಾಜದ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಕುಲ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದು, ಸಕರ್ಾರಕ್ಕೆ ಈ ವರದಿ ಬಂದನಂತರ ಸದನದಲ್ಲಿ ಚಚರ್ಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅರಿವನ್ನು ಮೂಡಿಸುವವರೇ ನಮ್ಮ ಗುರು ಅವರ ಮಾರ್ಗದರ್ಶನದಂತೆ ಸಂಘಟನೆಯನ್ನು ಬೆಳೆಸಿದಾಗ ಸಮಾಜದ ಛಾಪನ್ನು ಮೂಡಿಸಬಹುದಾಗಿದೆ, ಹಲವು ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದ್ದು ಈಗಲಾದರೂ ನಾವೆಲ್ಲರೂ ಶಿಕ್ಷಣ ಕ್ರಾಂತಿಯನ್ನು ಮೊಳಗಿಸೋಣ ಎಂದರು.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಹಾಸ್ಟಲ್ ಸೌಲಭ್ಯಕ್ಕೆ ಈಗ ದೊರಕಿರುವ ಸಹಾಯ ಧನವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.. ಸಮಾರಂಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಅಕ್ಕಲಪ್ಪಯಾದವ್, ಜಿ.ಪಂ.ಸದಸ್ಯರಾದ ಹೆಚ್. ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮ ರಾಮಯ್ಯ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಾ.ಪಂ.ಸಸ್ಯರುಗಳಾದ ಜಗದೀಶ್, ಲತಾಕೇಶವಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸತೀಶ್ಸಾಸಲು, ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಗೋವಿಂದಯ್ಯ ಸ್ವಾಗತಿಸಿದರು.

ಶಿಕ್ಷಕ ಎಸ್.ಕೆ.ವಿಜಯ ಕುಮಾರ್ ನಿರೂಪಿಸಿದರು.ದೇಶದ ಭವಿಷ್ಯವನ್ನು ಶಾಲಾ ಕೊಠಡಿಯಲ್ಲಿ ಯೋಜಿಸುವವನೆ ಶಿಕ್ಷಕ: ಎನ್.ಎನ್.

ಚಿಕ್ಕನಾಯಕನಹಳಳಿ,ಸೆ.05: ಶಿಕ್ಷಕರು ಶಾಲೆಗಳಲ್ಲಿ ಬೋಧನೆ ಜೊತೆಗೆ ಮಕ್ಕಳ ಮನಸ್ಸನ್ನು ಕಟ್ಟಲು ಮುಂದಾದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದು ಎಂದು ಚಿಕ್ಕನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಪಟ್ಟಣದ ಸಕರ್ಾರಿ ಪ್ರೌಡಾಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ನನ್ರವರ 123ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚಾರಣೆಯಲ್ಲಿ ಮಾತನಾಡಿ 5,6 ನೇ ವರ್ಷದ ಮಕ್ಕಳಲ್ಲಿ ಅಗಾದವಾದ ಜ್ಞಾಪನಾಶಕ್ತಿ ಇದ್ದು 2000 ಪದಗಳನ್ನು ಸಂಗ್ರಹಿಸುವ ಶಕ್ತಿ ಇರುತ್ತದೆ. ಇಂತಹ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿಯಾದ ಜಾನಪದ ಕಲೆಗಳು, ನೃತ್ಯ, ಕೋಲಾಟ ಸುಗ್ಗಿ ಕುಣಿತ ಇವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ಟಿ.ವಿ. ಮಾಧ್ಯಮಗಳು ನಮ್ಮ ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಿನಿಮಾ ಹಾಗೂ ಟಿವಿ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳನ್ನು ಪ್ರತಿಭೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದ್ದರೂ ಇದನ್ನು ಪ್ರತಿಭಟಿಸುವ ಶಕ್ತಿ ನಮ್ಮ ಹೆಣ್ಣು ಮಕ್ಕಳಲ್ಲಿ ಕಡಿಮೆಯಾಗಿದೆ ಎಂದು ವಿಷಾಧಿಸಿದ ಅವರು ಮನುಷ್ಯ ಮನುಷ್ಯರಲ್ಲಿರುವ ಸಂಬಂಧಗಳು ಕಡಿಮೆಯಾಗುತ್ತಿವೆ, ಶಿಕ್ಷಕರು ಪ್ರತಿ ದಿನ ಪ್ರತಿ ಕ್ಷಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಆತ್ಮ ವಿಮಷರ್ೆ ಮಾಡುವಂತಹವರು ಮಾತ್ರ ಶಿಕ್ಷಕ ವೃತ್ತಿಗೆ ಅರ್ಹರು ಎಂದ ಅವರು, ಶಿಕ್ಷರು ತಾವು ಮಕ್ಕಳಿಗೆ ಪಾಠ ಹೇಳುವ ಮುನ್ನ ಪುಸ್ತಕಗಳನ್ನು ಅಭ್ಯಸಿಸಿದ ನಂತರ ಭೋದಿಸಿ, ದುಶ್ಚಟಗಳಿಂದ ದೂರವಿದ್ದು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಕಲಿಸುವ ಕಡೆ ಗಮನ ಹರಿಸಬೇಕಾಗಿದೆ. ರಾಧಾಕೃಷ್ಣನ್ರವರನ್ನು ಅವರ ಜಯಂತಿ ದಿನದಂದು ಮಾತ್ರ ಸ್ಮರಿಸುವುದಲ್ಲ ಶಿಕ್ಷಕರಾದವರು ಪ್ರತಿಕ್ಷಣ ನೆನಪಿಸಿಕೊಳ್ಳುವುದು ಶಿಕ್ಷಕನ ಕರ್ತವ್ಯ, ಶಿಕ್ಷಕ ಸದಾ ಅಧ್ಯಯನ ಶೀಲರಾಗಬೇಕು, ಸಭೆ ಸಮಾರಂಭಗಳು ಹೂವಿನ ಹಾರದ ಬದಲು ಡಾ.ರಾಧಕೃಷ್ಣರವರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಿ ಎಂದು ಸಲಹೆ ನೀಡಿದರು. ಸಮಾಜ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಕೃಕಜ್ಞತೆಯಿಂದ ಸ್ಮರಿಸಬೇಕು, ಅವರೆ ಅಕ್ಷರವನ್ನು ಕಲಿಸುವವರು ಶಿಕ್ಷಕರು ವಿದ್ಯಾಥರ್ಿಗಳು ಕೇಳುವ ಪ್ರಶ್ನೆಗೆ ಉತ್ತರ ತಿಳಿಯದಿದ್ದಲ್ಲಿ ಗದರಿಸದೆ ತಿಳಿದು ಹೇಳಬೇಕು. ಸಮಾರಂಭದಲಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣಗೊಳಿಸಿದರು. ತಾ.ಪಂ.ಉಪಾಧ್ಯಕ್ಷ ಬಿ.ಬಿ.ಪಾತೀಮ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಡಶಾಲಾ ಹಾಗೂ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು. ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮ, ನಿಂಗಮ್ಮ, ಮಂಜುಳ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ದಯಾನಂದ್, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಬಿ.ಇ.ಓ ಸಾ.ಚಿ.ನಾಗೇಶ್ ಉಪಸ್ಥಿತರಿದ್ದರು.

Sunday, September 4, 2011









. ಹೊಂಗೆ ಬೆಳೆದು ಬಂಗಾರದ ಬೆಲೆ ಪಡೆಯಿರಿ್ಡ ಹೊಂಗೆಬೀಜದ ಎಣ್ಣೆ ಉತ್ಪಾದನಾ ಘಟಕದಲ್ಲಿ ತಜ್ಞರ ಅಭಿಮತ್ಡ ಸ್ವಾವಲಂಭನೆಗಾಗಿ ಜೈವಿಕ ಇಂಧನಕ್ಕೆ ಮೊರೆ ಹೊಗಲು ಕರೆ್ಡ ಪೆಟ್ರೋಲಿಯಂ ಉತ್ಪನ್ನಗಳಿಗೆ ಪಯರ್ಾಯವಾಗಿ ಜೈವಿಕ ಇಂಧನಚಿಕ್ಕನಾಯಕನಹಳ್ಳಿ,ಸೆ.3 : ಹೊಂಗೆಬೀಜವನ್ನು ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕೇವಲ 8ರೂಗಳಿಗೆ ಮಾರುವ ಬದಲು ಬೀಜದಿಂದ ಎಣ್ಣೆ ತೆಗೆಯುವ ಮೂಲಕ ಜೈವಿಕ ಇಂಧನವಾಗಿ ಪರಿವತರ್ಿಸಿ ಮಾರಾಟ ಮಾಡಿದರೆ ಅತಿಹೆಚ್ಚು ಲಾಭವನ್ನು ಪಡೆದು ಆಥರ್ಿಕವಾಗಿ ಸದೃಡರಾಗಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶ್ಯಾಮಸುಂದರ ಜೋಶಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಾಲುಗೊಣ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜೈವಿನ ಇಂದನ ಉದ್ಯಾನ ಹಾಗೂ ಭಾರತೀಯ ಜೈವಿಕ ತಂತ್ರಜ್ಞಾನ ಸಂಸ್ಥೆ ವತಿಯಿಂದ ನಡೆದ ಜೈವಿನ ಎಣ್ಣೆ ಉತ್ಪಾದನಾ ಘಟಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನೈಸಗರ್ಿಕ ವಸ್ತು ಹೊಂಗೆಬೀಜದಿಂದ ಹೆಚ್ಚು ಲಾಭ ಪಡೆಯುವುದು ಕಷ್ಠವಿದೆ, ಕಚ್ಚಾ ಬೀಜನವನ್ನು ಯಂತ್ರದ ಬಳಸಿ ಎಣ್ಣೆ ತೆಗೆದರೆ ಅಷ್ಠೇ ಲಾಭವನ್ನು ಇನ್ನು ಮುಂದೆ ರೈತರು ಪಡೆಯಬಹುದು, ತಾವು ಉತ್ಪಾದಿಸಿದ ಹೊಂಗೆಬೀಜವನ್ನು ಈ ರೀತಿ ತಯಾರಿಸಿದ ಎಣ್ಣೆಯನ್ನು ವಿದ್ಯುತ್ ಬಳಕೆಯಲ್ಲಿ, ವಾಹನ ಚಲಿಸಲು ಇನ್ನಿತರ ಇಂಧನ ವಸ್ತುವಾಗಿ ಬಳಸಬಹುದಾಗಿದ್ದು ತಮಗೆ ಬೇಕಾದಷ್ಟು ಇಂಧನ ಶಕ್ತಿಯನ್ನು ಉಪಯೋಗಿಸಬಹುದು ಎಂದರು. ಈ ಶಕ್ತಿಯ ಉಪಯೋಗಕ್ಕಾಗಿ ಇನ್ನು 5 ವರ್ಷದಲ್ಲಿ ಸುಮಾರು 15ಟನ್ ಹೆಚ್ಚು ಹೊಂಗೆಬೀಜ ಉತ್ಪಾದನೆಯನ್ನು ಮಾಡಿದರೆ ದೇಶದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದಂತಾಗಲಿದೆ, ಅಲ್ಲದೆ ಬೇರೆ ಬೇರೆ ದೇಶಗಳಿಂದ ತರುವ ಪೆಟ್ರೋಲಿಯಂ ವಸ್ತುಗಳ ಬೆಲೆಯೂ ಸಹ ಕಡಿಮೆಯಾಗಲಿದೆ ಎಂದರು. ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ.ಚಂದ್ರಕಾಂತ್ ಮಾತನಾಡಿ ಈ ಯಂತ್ರದ ಮೂಲಕ ಜೈವಿನ ಇಂಧನವು ದೈನಿಕ ಇಂಧನವಾಗಬೇಕು ಆಗ ಪ್ರತಿಯೊಬ್ಬರಿಗೂ ಇಂಧನ ಕೊರತೆ ಉಂಟಾಗದೆ ದೇಶ ಆಥರ್ಿಕವಾಗಿ ಮುಂದುವರಿಯಲಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು. ತು.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಮಾತನಾಡಿ ಇತ್ತೀಚಿಗೆ ಕಲೆಬೆರಕೆ ವಸ್ತುಗಳು ಹೆಚ್ಚಾದರೂ ಅವುಗಳಿಗೆ ಬೆಲೆ ಹೆಚ್ಚುತ್ತಿದೆ ಇದರಿಂದ ಬಡವರು ತೀರಾ ಸಂಕಷ್ಠಕ್ಕೆ ದೂಡಲ್ಪಡುತ್ತಿದ್ದಾರೆ ಇಂತಹವುಗಳನ್ನು ಹೋಗಲಾಡಿಸಬೇಕಾದರೆ ಗ್ರಾಮಸ್ಥರು ಒಗ್ಗಟ್ಟಾಗಿ ಕೈಜೋಡಿಸಿ ತಮ್ಮಲ್ಲಿರುವ ಬೆಳೆಯ ಉತ್ಪಾದನೆಯನ್ನು ಹೆಚ್ಚಾಗಿ ತಯಾರಿಸಿ ತಮ್ಮ ಸಮಸ್ಯೆಗಳನ್ನು ಯಾರ ಹಂಗಿಲ್ಲದೆ ತಾವೇ ಪರಿಹರಿಸಿಕೊಂಡರೆ ತಮ್ಮ ಗ್ರಾಮವೇ ದೇಶಕ್ಕೆ ಮಾದರಿಯಾಗುತ್ತದೆ ಎಂದರಲ್ಲದೆ, ತುಮಕೂರು ಹಾಲು ಒಕ್ಕೂಟವು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದು ಅದರಿಂದಲೇ ಇಂದು 4ಲಕ್ಷಕ್ಕೂ ಹೆಚ್ಚು ಹಾಲು ಜಿಲ್ಲೆಯಲ್ಲಿ ಸರಬರಾಜಾಗುತ್ತಿದ್ದು 5ಕೋಟಿಯಷ್ಠು ಬಡವಾಡಿ ನೀಡುತ್ತಾ 400 ಕೋಟಿ ವ್ಯವಹಾರ ನಡೆಯುತ್ತಿದ್ದು ಇದನ್ನು ಇನ್ನು ಹೆಚ್ಚಿಸುವ ಗುರಿ ಹೊಂದಿದೆ ಒಕ್ಕೂಟ ಎಂದರು.ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಉದ್ಘಾಟನೆಗೊಂಡಿರುವ ಯಂತ್ರಗಳನ್ನು ರೈತರು ಒಳ್ಳೆಯ ನಿಟ್ಟಿನಲ್ಲಿ ಉಪಯೋಗಿಸಿದರೆ ಯಾರನ್ನು ಅವಲಂಬಿಸದೆ ತಮಗೆ ತಾವೇ ಸ್ವಾವಲಂಬಿಗಳಾಗುತ್ತೇವೆ, ಇದಕ್ಕಾಗಿ ಸಹಕಾರಿ ಸಂಘಗಳು ಮುಂದೆ ಬಂದು ಇಂತಹ ಯಂತ್ರಗಳನ್ನು ಒಗ್ಗಟ್ಟಿನಿಂದ ಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮದಲ್ಲಿರುವ ತೊಳಲಾಟಗಳನ್ನು ಗ್ರಾಮಸ್ಥರೇ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಂಡರೆ ತಾವು ಗ್ರಾಮದ ಅಭಿವೃದ್ದಿಗೆ

ಮುಂದಾಗುತ್ತೇವೆ ಎಂದರು. ಸಮಾರಂಭದಲ್ಲಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರಾಜಣ್ಣ, ಶಿವನಂಜಪ್ಪ ಮುಂತಾದವರಿದ್ದರು.

ಚಿ.ನಾ.ಹಳ್ಳಿ.ಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಚಿಕ್ಕನಾಯಕನಹಳ್ಳಿ,ಸೆ.3 : ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 124ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಇದೇ 5ರ ಸೋಮವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಸಮಾರಂಭವನ್ನು ಕೆ.ಎಂ.ಹೆಚ್.ಪಿ.ಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ. ರಾಧಕೃಷ್ಣರವರ ಭಾವಚಿತ್ರವನ್ನು ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಪ್ರಾಂಶುಪಾಲ ಎನ್.ನಾಗಪ್ಪ ಸಮಾರಂಭ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್ ಉತ್ತಮ ಶಿಕ್ಷಕ ಪ್ರಶಸ್ತಿ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಶಾಸಕರುಗಳು, ಜಿ.ಪಂ.ಸದಸ್ಯರುಗಳು ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿರುವರು.

ಜಾನುವಾರುಗಳ ಮೇವಿಗೂ ತತ್ವಾರಚಿಕ್ಕನಾಯಕನಹಳ್ಳಿ,ಸೆ.3 ; ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ರೈತರು ಕಂಗಾಲಾಗಿದ್ದಾರೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದು ಸತತ ಬರಗಾಲದಿಂದ ಪರಿತಪಿಸುತ್ತಿದ್ದಾರೆ ಜಾನುವಾರುಗಳಿಗೆ ಮೇವಿಲ್ಲದೆ ಅವುಗಳು ಕಟುಕರ ಪಾಲಾಗಿದ್ದು ತಾಲ್ಲೂಕಿನ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಆದ್ದರಿಂದ ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಗ್ರಾ.ಪಂ.ಸದಸ್ಯೆ ಶಶಿಕಲಾ ಆಗ್ರಹಿಸಿದ್ದಾರೆ.