Friday, June 14, 2013




ಚಿತ್ರಕಲಾ ಕ್ಷೇತ್ರದಲ್ಲಿ ಕುಂಚಾಂಕುರ ಕಲಾ ಸಂಘದ ಕೆಲಸ ಶ್ಲಾಘನೀಯ: ಸಿದ್ದು ಜಿ.ಕೆರೆ
ಚಿಕ್ಕನಾಯಕನಹಳ್ಳಿ,ಜೂ.14: ಸ್ಥಳೀಯ ಚಿತ್ರಕಲಾವಿದರನ್ನು ಪ್ರೋತ್ಸಾಹಿಸಿ ಜಿಲ್ಲಾ ಹಾಗು ರಾಜ್ಯ ಮಟ್ಟದಲ್ಲಿ ತಮ್ಮ ಕಲಾಕೃತಿಗಳ ಕಲೆಯನ್ನು ಪ್ರದಶರ್ಿಸುವ ಪ್ರತಿಭೆ ಕಲಾವಿದನಿಗೆ ಒಂದು ಅಯಾಮವನ್ನು ತಂದುಕೊಟ್ಟಿದೆ ಎಂದು ಕಲಾವಿದ ಸಿದ್ದು ಜಿ.ಕೆರೆ ತಿಳಿಸಿದರು.
ಪಟ್ಟಣದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪದರ್ೆಯನ್ನು ಉದ್ಘಾಟಿಸಿ ಮಾತನಾಡಿ ಅವರು ಚಿತ್ರಕಲಾ ಶಿಬಿರ ಹಾಗು ಸ್ಪಧರ್ೆಯನ್ನು ಸತತ 10 ವರ್ಷಗಳಂದ ನೆಡೆಸಿಕೊಂಡು ಬಂದಿರುವ ಕುಂಚಾಂಕುರ ಕಲಾ ಸಂಘದ ಗಂಗಾಧರ್ ರವರ ಕೆಲಸ ಶ್ಳಾಘನೀಯವಾದ ಕೆಲಸವಾಗಿದೆ ಎಂದರು.
 ಹೊಯ್ಸಳ ಶಿಲ್ಪಕೇಂದ್ರದ ಶಿಲ್ಪಿ ವಿಶ್ವಾನಾಥರವರು ತುಂಬ ಕಷ್ಟಪಟ್ಟು ಶಿಲ್ಪಕಲೆ ಕಲಿತು ರಾಜ್ಯಪ್ರಶಸ್ತಿ ಪಡೆದು ನಮ್ಮೂರಿನಲ್ಲೆ ಶಿಲ್ಪಾಕಲಾ ಕಾಲೇಜು ತೆರೆದು ಕಲಾವಿದರನ್ನು ಸೃಷ್ಟಿ ಮಾಡುತ್ತಿದ್ದಾರೆ ಚಿತ್ರ ಹಾಗು ಶಿಲ್ಪ ಕಲಾವಿದ ವಿದ್ಯಾಥರ್ಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದಶರ್ಿಸಿ ಹೆಸರುಗಳಿಸಲಿ ಎಂದರು.
 ಕುಂಚಾಂಕುರ ಕಲಾ ಸಂಘದ ಅಧ್ಯಕ್ಷರಾದ ಸಿ.ಹೆಚ್.ಗಂಗಾದರ್ ಮಗ್ಗದಮನೆರವರು ಮಾತನಾಡಿ ಸಾಹಿತಿಗಳು ಪುಸ್ತಕ ಬರೆಯುವ ಮೂಲಕ ಸಮಾಜದ ಹಾಗುಹೋಗುಗಳ ಪರಿಚಯವನ್ನು ಮಾಡಿಕೊಡುವಂತೆ, ಚಿತ್ರಾಕಲಾವಿದರು ತಮ್ಮ ಚಿತ್ರಗಳ ರಚನೆಯಲ್ಲಿ ಸಮಾಜದ, ಲೋಕದ ಅಂಕುಡೊಂಕುಗಳನ್ನು ತಿದ್ದುವ ಜವಬ್ದಾರಿ ಕಲಾವಿದರಿಗಿದೆ ಎಂದರಲ್ಲದೆ,  ಈ ನಾಡು, ನುಡಿ, ಜಲ, ಸಂಸ್ಕೃತಿ, ಕಲೆಯ ಬಗ್ಗೆ, ನಶಿಸುತ್ತಿರುವ ಗ್ರಾಮೀಣ ಕುಲಕಸುಬುಗಳ ಗ್ರಾಮೀಣಾಭಿವೃದ್ದಿಯಲ್ಲಿ ಮಾಧ್ಯಮಗಳ ಪಾತ್ರದ ವಿಷಯವಾಗಿ ಚಿತ್ರ ರಚಿಸಬಹುದೆಂದರು.
 ಶಿಲ್ಪಿ ವಿಶ್ವಾನಾಥ ಮಾತನಾಡಿ 10 ದಿನಗಳ ಕಾಲ ನೆಡೆದ ಈ ಶಿಬಿರದಲ್ಲಿ ಪಾಲ್ಗೊಂಡಿರುವ ಕಲಾ ವಿದ್ಯಾಥರ್ಿಗಳು ಇನ್ನು ಹೆಚ್ಚಿನ ಶ್ರಮವಹಿಸಿ ಕಲಿತರೆ ಒಳ್ಳೆಯ ಕಲಾವಿದರಾಗಬಹುದು ಕಲೆ ಎಂಬದು ಒಂದು ರೀತಿಯ ತಪಸ್ಸು ಇದ್ದಹಾಗೆ ಶ್ರದ್ದೆಯಿಂದ ಕಲಿಯಬೇಕು ಎಂದರು.
 ಕಾರ್ಯಕ್ರಮದಲ್ಲಿ ವಾಣಿಚಿತ್ರಕಲಾ ಕಾಲೇಜಿನ ಉಪನ್ಯಾಸಕ ರವೀಶ್ ಬಾಳೆಕಾಯಿ, ಶ್ಯಾಮ್ ,ಕನ್ನಡ ಸಾಹಿತ್ಯ ಪರಿಷತ್ತಿನ ಹುಳಿಯಾರು ಶಬ್ಬೀರ್, ಪ್ರವೀಣ್, ಕಲಾವಿದರಾದ ಗೌಸ್, ಜಗ್ಗು, ನವೀನ್ಅರಸ್,  ನರಸಿಂಹ, ರೇಣುಕಾ, ರಂಗಸ್ವಾಮಿ, ಸಿ.ಎಂ.ರಘು, ಮೈಸ್ ಕಂಪ್ಯೂಟರ್ ಹರೀಶ್ ಉಪಸ್ಥಿತರಿದ್ದರು.


ರೈತರ ಪಂಪ್ಸೆಟ್ಟ್ಗಳ ಅಕ್ರಮ ವಿದ್ಯುತ್ ಸಂಪರ್ಕವನ್ನು ಶೀಘ್ರ ಸಕ್ರಮಗೊಳಿಸಿ: ಶಾಸಕ ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಜೂ.14 : ರೈತರು ಅಕ್ರಮ, ಸಕ್ರಮದ ಅಡಿಯಲ್ಲಿ ಬೆಸ್ಕಾಂ 12ಸಾವಿರ ರೂಪಾಯಿ ಪಾವತಿಸಿದ್ದು ಕೂಡಲೇ ಟೆಂಡರ್ ಕರೆದು ಫಲಾನುಭವಿಗಳಿಗೆ ಸಕ್ರಮ ಬಳಸುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಸೂಚಿಸಿದರು.
ಪಟ್ಟಣದ ಬೆಸ್ಕಾಂ ಕಛೇರಿಗೆ ಭೇಟಿ ನೀಡಿ  ತಾಲ್ಲೂಕಿನ ಅಧಿಕಾರಿಗಳೊಂದಿಗೆ ಚಚರ್ಿಸಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಲೋಡ್ ಇರುವ ಟ್ರಾನ್ಸ್ಪಾರಂಗಳ ಜಾಗದಲ್ಲಿ ಹೆಚ್ಚುವರಿ ಟ್ರಾನ್ಸ್ಫಾರಂಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಬೆಳಗುಲಿ, ದೊಡ್ಡೆಣ್ಣೆಗೆರೆ,  ಮತ್ತಿಘಟ್ಟ ಬಳಿಯ ಗಾಂಧಿನಗರ, ಗೋಡೆಕೆರೆ ಭಾಗದಲ್ಲಿ 110 ಕೆ.ವಿ ಹಾಗೂ ಸಾಲ್ಕಟ್ಟೆ ಕ್ರಾಸ್ ಬಳಿ 220ಕೆವಿ ವಿದ್ಯುತ್ ಉಪಸ್ಥಾವರಗಳನ್ನು ಸ್ಥಾಪಿಸಲು ಸಕರ್ಾರಕ್ಕೆ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳಿಗೆ ತಿಳಿಸಿದರು. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರಲ್ಲದೆ, ತಾಲ್ಲೂಕಿನಲ್ಲಿ ಲೈನ್ಮೇನ್ಗಳ ಕೊರತೆ ಇದ್ದು ಈ ಬಗ್ಗೆ ಸಕರ್ಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು. 
ಸಭೆಯಲ್ಲಿ ತಿಪಟೂರು ವಿಭಾಗದ ಬೆಸ್ಕಾಂ ಕಾರ್ಯನಿರ್ವಹಕ ಅಭಿಯಂತರ ಉಮಾಶಂಕರ್, ಎ.ಇ.ಇ ರಾಜಶೇಖರ್, ಎ.ಎ.ಓ ಪ್ರಕಾಶ್, ಶಾಖಾಧಿಕಾರಿ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.