Tuesday, April 13, 2010

ರಜೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಹೆಚ್ಚಲಿ

ಚಿಕ್ಕನಾಯಕನಹಳ್ಳಿ,ಏ.13: ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಂಡು ಪಠ್ಯದ ಜೊತೆಗೆ ನೆನಪನ್ನು ಹೆಚ್ಚಿಸುವಂತಹ ಕ್ರಿಯಾಶೀಲಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳು ಖುಷಿಯಿಂದ ಬೇಸಿಗೆ ರಜೆಯನ್ನು ಕಳೆಯಬೇಕು ಎಂದು ಬಿ.ಇ ಓ ಬಿ.ಜೆ.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಡಿ.ವಿ.ಪಿ ಬಿ.ಎಚ್.ಎಸ್ ಶಾಲಾಯಲ್ಲಿ ನಡೆದ ಸಿ.ಬಿ.ಎಸ್ ಡ್ಯಾನ್ಸ್ ವಲ್ಡರ್್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ 4ನೇ ವರ್ಷದ ಕಾರಂಜಿ-2010 ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಸಬೇಕು, ಮಕ್ಕಳು ನೃತ್ಯ, ಸಂಗೀತ, ಜಾನಪದ, ಚಿತ್ರಕಲೆ, ಸಂಸ್ಕೃತಿಕರಣ, ಕಂಪ್ಯೂಟರ್ ಜ್ಞಾನ, ಇವುಗಳ ಜೊತೆಗೆ ಈಜು ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಕಾರಂಜಿ ಎಂದರೆ ಚೈತನ್ಯ, ಮಕ್ಕಳು ಆ ಚೈತನ್ಯವನ್ನು ಸದಾ ತಮ್ಮದಾಗಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಕ್ಕಳು ರಜೆಯಲ್ಲಿ ವೃಥಾ ಕಾಲ ಕಳೆಯುವ ಬದಲು, ಮಕ್ಕಳ ಶಿಬಿರದಂತಹವುಗಳಿಗೆ ಪಾಲ್ಗೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಭಿವೃದ್ದಿಯನ್ನು ಕಾಣಬಹದು ಎಂದ ಅವರು, ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳನ್ನು ಗುತರ್ಿಸಿ ಅವುಗಳನ್ನು ಅನಾವರಣಗೊಳಿಸಲು ಇಂತಹ ಶಿಬಿರಗಳು ಒತ್ತು ನೀಡುತ್ತವೆ ಎಂದು ಹೇಳಿದರು.
ಡಿ.ವಿ.ಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಸಿ.ಆರ್.ಪಿ ಅಣ್ಣಪ್ಪ, ನೃತ್ಯ ನಿದರ್ೇಶಕ ವಿಶ್ವನಾಥ್, ಮಿಮಿಕ್ರಿ ರಮೇಶ್ ಉಪಸ್ಥಿತರಿದ್ದರು.


No comments:

Post a Comment