Tuesday, July 6, 2010

ಪರಿಶಿಷ್ಟರ ಸಹಾಯಧನ ವಿತರಣೆಯಲ್ಲಿ ವಿಳಂಬ: ಆರೋಪ
ಚಿಕ್ಕನಾಯಕನಹಳ್ಳಿ,ಜೂ.06: 2009-10ನೇ ಸಾಲಿನಲ್ಲಿ ಮಹಿಳಾ ಸಂಘಗಳಿಗೆ ಸಕರ್ಾರದಿಂದ 40ಸಾವಿರ ರೂ. ಸಹಾಯಧನವನ್ನು ಮಂಜೂರು ಮಾಡಿದ್ದರೂ ಈವರೆವಿಗೂ ಸಹಾಯಧನ ವಿತರಣೆಯಾಗಿಲ್ಲ, ಇದು ಪರಿಶಿಷ್ಟ ಜಾತಿ ಮಹಿಳಾ ಸಂಘಗಳಿಗೆ ಸಕರ್ಾರ ಸುಳ್ಳು ಹೇಳಿ ಅನ್ಯಾಯ ಮಾಡಿದಂತಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಡಿ.ಆರ್.ರುದ್ರೇಶ್ ಆರೋಪಿಸಿದ್ದಾರೆ.
ಸಕರ್ಾರದ ನಿದರ್ೇಶನದಂತೆ 100 ಮಹಿಳಾ ಸಂಘಗಳಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳ ಪಟ್ಟಿ ಮಾಡಿದ್ದು, ಇದುವರೆವಿಗೂ ಸಹಾಯ ಧನ ಮಂಜೂರಾಗಿರುವುದಿಲ್ಲ ಈ ವಿಷಯವನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿಧಾನ ಸಭೆಯಲ್ಲಿ ಮಂಡಿಸಿ ಅನುದಾನ ಬಿಡುಗಡೆ ಮಾಡಿಸಿ ಕೊಡದಿದ್ದಲ್ಲಿ ಮಹಿಳಾ ಸಂಘಟನೆಗಳನ್ನು ಒಟ್ಟು ಗೂಡಿಸಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಕರ್ಾರದ ಗಮನ ಸೆಳೆಯಲು ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗ ಹರಡುವ ತಿಪ್ಪೆ ನೊಣಗಳಾಗಬೇಡಿ: ವೀರೇಶಾನಂದ ಸ್ವಾಮಿ
ಚಿಕ್ಕನಾಯಕನಹಳ್ಳಿ,ಜು.06: ಸದೃಡ ಮನಸ್ಸಿನ ವ್ಯಕ್ತಿಗಳು ಸಮಾಜಕ್ಕೆ ಸಿಹಿ ಹಂಚುವ ಜೇನು ನೊಣಗಳಾಗಬೇಕೆ ಹೊರತು ರೋಗ ಹರಡುವ ತಿಪ್ಪೆ ನೊಣಗಳಾಗಬಾರದು ಎಂದು ವೀರೇಶಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಹೊಂಬಾಳಮ್ಮ ದೇವಾಲಯ ಟ್ರಸ್ಟ್ ವತಿಯಿಂದ ನಡೆದ 20ನೇ ವರ್ಷದ ವಿದ್ಯಾಥರ್ಿ ವೇತನ ವಿತರಣಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಂಬಾಳಮ್ಮ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್ ಮಾತನಾಡಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಬೆರೆತು ಒಟ್ಟಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ಕಾಣಬಹುದು ಮತ್ತು ಇಂತಹ ಕಾರ್ಯಕ್ರಮಗಳಿಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗುತ್ತದೆ ಎಂದರು.
ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ ಮಾತನಾಡಿ ಟ್ರಸ್ಟ್ ಸತತ 20 ವರ್ಷಗಳಿಂದ ಬಡ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಾ ನೀಡಿ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಲಿ ಎಂದರು.
ಸಮಾರಂಭದಲ್ಲಿ ಕುರುಬರಶ್ರೇಣಿ ಶತಮಾನೋತ್ಸವ ನೆನಪಿಗಾಗಿ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಿರಾ ಪ್ರೆಸಿಡೆನ್ಸಿ ಸ್ಕೂಲ್ ಅಧ್ಯಕ್ಷ ಚಿದಾನಂದ್, ಕುರುಬರಶ್ರೇಣಿ ಶಾಲೆ ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜಿ.ರಂಗಯ್ಯ, ದೇವಾಂಗ ಸಂಘದ ಅಧ್ಯಕ್ಷ ಶಂಕರಪ್ಪ ಬಟ್ಲೇರಿ, ಪುರಸಭಾ ಸದಸ್ಯರಾದ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಿ.ಕೆ.ಮೇಘನಾಥ್ ಸ್ವಾಗತಿಸಿ, ಬಿ.ಕೆ.ಸುರೇಶ್ ನಿರೂಪಿಸಿ ನಾಗರಾಜ್ ಭಾಗವತ್ ವಂದಿಸಿದರು.


No comments:

Post a Comment