Friday, July 9, 2010

ಅಂಗನವಾಡಿ ನೌಕರರ ಹಲವು ಬೇಡಿಕೆಗಾಗಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.09: ಅಂಗನವಾಡಿ ನೌಕರರು 35 ವರ್ಷಗಳಿಂದ ದುಡಿಯುತ್ತಾ ಬಂದಿದ್ದರೂ ಗೌರವಧನ ಬಿಟ್ಟರೆ ಬೇರ್ಯಾವ ಸೌಲಭ್ಯಗಳನ್ನೂ ಸಕರ್ಾರಗಳು ನೀಡುತ್ತಿಲ್ಲ ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂಣರ್ಿಮಾ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ನಡೆದ ಅಂಗನವಾಡಿ ನೌಕರರ ಪ್ರತಿಭಟನಾ ಮರೆವಣಿಗೆಯ ನಂತರ ಮಾತನಾಡಿದ ಅವರು ಅಂಗನವಾಡಿ ನೌಕರರು ಸಮಗ್ರ ಶಿಶು ಅಭಿವೃದ್ದಿ ಯೋಜನೆಯಲ್ಲಿ 65ವರ್ಷ ತುಂಬಿದರೂ ಇನ್ನೂ ನಿವೃತ್ತರಾಗದೆ ದುಡಿಯುತ್ತಲೇ ಇದ್ದು ಅವರಿಗೆ ಯಾವುದೇ ರೀತಿಯ ನಿವೃತ್ತಿ ಸೌಲಭ್ಯ ಸಿಗುತ್ತಿಲ್ಲ ಅವರಿಗೆ 65ವರ್ಷ ವಯಸ್ಸನ್ನು ನಿಗದಿ ಪಡಿಸಿ ಪ್ರತಿ ತಿಂಗಳು 1500 ಮತ್ತು 750ರೂಗಳ ಕನಿಷ್ಠ ನಿವೃತ್ತಿ ವೇತನ ನೀಡಿ 1ಲಕ್ಷದ 50ಸಾವಿರ ರೂಗಳ ಗ್ರಾಜ್ಯುಟಿ ಕೊಡಬೇಕು ಮತ್ತು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಸಿದ್ದಪಡಿಸಿದ ಆಹಾರವನ್ನು ಕೂಡಲೇ ಬದಲಾಯಿಸಿ ವಸ್ತುಗಳ ರೂಪದ ಆಹಾರವನ್ನು ಕೇಂದ್ರಗಳಿಗೆ ಸರಬರಾಜು ಮಾಡಬೇಕು ಮತ್ತು ಎಲ್ಲಾ ಅಂಗನವಾಡಿ ನೌಕರರಿಗೂ ಬಿಪಿಎಲ್ ಕಾಡರ್್ ಮತ್ತು ವಸತಿ ಸೌಲಭ್ಯವನ್ನು ಒದಗಿಸಿಬೇಕು ಎಂದ ಅವರು ಎಸ್.ಎಸ್.ಎಲ್.ಸಿ ಓದಿದ ಸಹಾಯಕಿಯರಿಗೆ ಅಂಗನವಾಡಿ ಕಾರ್ಯಕತರ್ೆಯರಾಗಿ ತೆಗೆದುಕೊಳ್ಳಲು ನಿದರ್ೆಶನ ಜಾರಿಮಾಡಿ ಹುದ್ದೆಗಳನ್ನು ತುಂಬುವಾಗ ಮತ್ತು ವಗರ್ಾವಣೆ ಮಾಡುವಾಗ ಆಗುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆಗೆ ಸಂಪೂರ್ಣ ಮೀಸಲಾತಿ ನೀಡಬೇಕು ಮತ್ತು ನಿವೃತ್ತಿಯಾಗುವ ನೌಕರರ ಸಂಬಳದ ಅರ್ಧ ಭಾಗದಷ್ಟು ನಿವೃತ್ತಿ ವೇತನ ನೀಡಿ ಬೆಲೆಯೇರಿಕೆಯ ಆಧಾರದಲ್ಲಿ ಗೌರವಧನ ಏರಿಸಬೇಕು ಮತ್ತು 3, 4 ಗ್ರೇಡ್ನ ನೌಕರರಾಗಿ ಖಾಯಂ ಮಾಡಬೇಕು ಎಂದು ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಕಾರ್ಯದಶರ್ಿ ಕೆ.ಜೆ.ಶಾರದ, ಅನ್ನಪೂರ್ಣಮ್ಮ, ನಾಗರತ್ನ ಮುಂತಾದವರಿದ್ದರು.

ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಜು.09: ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ರಥೋತ್ಸವ ಹಾಗೂ ಜಾತ್ರ ಮಹೋತ್ಸವ ಸಮಾರಂಭವು ಇದೇ ತಿಂಗಳ 22ರಿಂದ 24ರ ಶನಿವಾರದ ವರೆವಿಗೂ ಪಟ್ಟಣದಲ್ಲಿ ನಡೆಯಲಿದೆ.
ಜುಲೈ 22ರ ಗುರುವಾರ ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ ಕುಂಚಾಕುರ ಕಲಾ ಯುವಕ ಮತ್ತು ವಾಣಿ ಚಿತ್ರಕಲಾ ವಿದ್ಯಾಲಯ ಸಂಯುಕ್ರ ಆಶ್ರಯದ್ಲಲಿ ಮಸೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
23ರ ಶುಕ್ರವಾರ ಬ್ರಹ್ಮರಥೋತ್ಸವವನ್ನು ಹಮ್ಮಿಕೊಂಡಿದ್ದು ದಿವ್ಯಜ್ಯೋತಿ ಕಲಾ ಸಂಘದ ವತಿಯಿಂದ ನವ ದಂಪತಿಗಳು ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪದರ್ೆ ಮತ್ತು ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಏರ್ಪಡಿಸಲಾಗಿದ್ದು 24ರ ಶನಿವಾರ ರಥೋತ್ಸವ ಮತ್ತು ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು ಕಲ್ಪವೃಕ್ಷ ಕೋಆಪರೇಟಿವ್ ಸಭಾಂಗಣದಲ್ಲಿ ಮಧ್ಯಾಹ್ನ 3ಗಂಟೆಗೆ ನವದಂಪತಿಗಳ ಸ್ಪಧರ್ೆ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಹಮ್ಮಿಕೊಂಡಿದ್ದು ಸಂಜೆ ದಿವ್ಯಜ್ಯೋತಿ ಕಲಾ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕವನ್ನು ಏರ್ಪಡಿಸಲಾಗಿದೆ.


No comments:

Post a Comment