Friday, September 3, 2010

16ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಚಿಕ್ಕನಾಯಕನಹಳ್ಳಿ,ಸೆ.03: 2010-11ನೇ ಸಾಲಿನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಘದ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಸೆಪ್ಟಂಬರ್ 5ರ ಭಾನುವಾರ ನಡೆಯಲಿರುವ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರಾದ ಬರಗೂರಿನ-ಹನುಮಂತಯ್ಯ, ತೀರ್ಥಪುರ-ಬಸವರಾಜು, ಕಂದಿಕೆರೆ-ರೇವಣ್ಣಎಸ್.ಬಿ, ಶೆಟ್ಟಿಕೆರೆ-ಸಿದ್ದರಾಮಯ್ಯ, ಜೆ.ಸಿ.ಪುರ-ಕೃಷ್ಣಪ್ಪ ಮತ್ತು ಅಜ್ಜಯ್ಯ, ಮತಿಘಟ್ಟ-ರಾಧಮ್ಮ, ಹುಳಿಯಾರು-ಲೀಲಾವತಿ, ಯಸ್ಮಿನಾಬಾನು, ಗಾಣಧಾಳು-ಹನುಮಂತರಾಜು, ಯಳನಡು-ಪುರಂದರ, ಹೋಯ್ಸಳಕಟ್ಟೆ-ದೇವರಾಜು, ಹಂದನಕೆರೆ-ಸೀತಮ್ಮ, ಚಿಕ್ಕನಾಯಕನಹಳ್ಳಿ-ಸಿ.ಕೆ.ಪುಟ್ಟಸ್ವಾಮಿ, ಸರ್ವಮಂಗಳ, ಜಗದಾಂಬ ಶಿಕ್ಷಕರುಗಳನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.

No comments:

Post a Comment