Thursday, September 30, 2010



ಗಣೇಶನ ಹೆಸರಿನಲ್ಲಿ ಗ್ರಾಮದ ಸ್ವಚ್ಚತೆ, ಆರೋಗ್ಯ ಶಿಬಿರಕ್ಕೆ ಮುಂದಾಗುವ 'ಗೆಳೆಯರ ಬಳಗ'
ಚಿಕ್ಕನಾಯಕನಹಳ್ಳಿ,ಸೆ.29: ಕುಪ್ಪೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಗಣೇಶನ ಮೂತರ್ಿ ಪ್ರತಿಷ್ಠಾಪನೆ ಕಾರ್ಯ ಸಾಂಗವಾಗಿ ನಡೆದುಕೊಂಡು ಬರುತ್ತಿರುವ ಧಾಮರ್ಿಕ ಆಚರಣೆ, ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಗೆಳೆಯರ ಬಳಗ ಸಂಘಟನೆಯ ವಿಶೇಷವೆಂದರೆ, ಈ ಸಂದರ್ಭದಲ್ಲಿ ಗಣೇಶನ ಪೂಜೆಯ ಜೊತೆಗೆ ಗ್ರಾಮದ ಸ್ವಚ್ಚತೆ ಹಾಗೂ ಆರೋಗ್ಯ ಶಿಬಿರಕ್ಕೆ ಹೆಚ್ಚು ಒತ್ತುಕೊಟ್ಟು ಸಂಘದ ಎಲ್ಲರೂ ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವುದು ಗಮನಾರ್ಹ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹಾಗೂ ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ಕೆ ಗ್ರಾಮದ ಹಿರಿಯರು, ಯುವಕರು, ಸ್ತ್ರೀಶಕ್ತಿ ಸಂಘದವರ ಮುತುವಜರ್ಿಯಲ್ಲಿ ನಡೆಯುವ ಈ ಕಾರ್ಯದಲ್ಲಿ ಪೂಜಾ ವಿಧಾನಗಳಿಗೆ ವಹಿಸುವಷ್ಟು ಶ್ರದ್ಧೆಯನ್ನೇ ಗ್ರಾಮದ ಸ್ವಚ್ಚತೆಯ ಕಡೆಗೂ ನಿಗಾ ವಹಿಸುವುದು ವಿಶೇಷ. ಗಣಪತಿ ವಿಸಜರ್ಿಸುವವರೆಗೆ ಯುವಕರೆಲ್ಲಾ ಸ್ವಯಂ ಪ್ರೇರಿತರಾಗಿ ಕೊಳಚೆ ಪ್ರದೇಶಗಳ ನಿಮರ್ೂಲನೆ ಹಾಗೂ ಕಸಕಡ್ಡಿಗಳ ನಿರ್ವಹಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ವಿದ್ಯಾಥರ್ಿಗಳಿಗೆ ಕ್ರೀಡಾ ತರಬೇತಿ, ರಾಜ್ಯಮಟ್ಟದ ಜಾನಪದ ಕಲಾವಿದರಿಗೆ ಸನ್ಮಾನ, ಆರೋಗ್ಯ ಶಿಬಿರಗಳನ್ನು ನಡೆಸುವ ಈ ಬಳಗ, ಗಣೇಶನ ಹೆಸರಿನಲ್ಲಿ ಸೃಜನಶೀಲ ಕಾರ್ಯಗಳನ್ನು ಮಾಡುತ್ತಿರುವುದು, ಧಾಮರ್ಿಕ ಕಾರ್ಯದಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಹತ್ವಕೊಟ್ಟಿರುವುದು ಒಂದು ಹೊಸ ಆಯಾಮ.
ಈ ಗಣೇಶನ ಮೂತರ್ಿಯನ್ನು ಇದೇ ಅ.2ರ ಶನಿವಾರ ಸಂಜೆ 8ಕ್ಕೆ ವಿಸಜರ್ಿಸಲಿದ್ದು, ಈ ಸಂದರ್ಭದಲ್ಲಿ ವಿವಿಧ ಜಾನಪದ ಪ್ರಕಾರಗಳಾದ ವೀರಭದ್ರನ ಕುಣಿತ, ಕಂಸಾಳೆ, ಮ್ಯೂಸಿಕ್ ನಾಸಿಕ್ ಡೋಲ್ ಬ್ಯಾಂಡ್ ತಂಡ, ಜಾನಪದ ನೃತ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

No comments:

Post a Comment