Saturday, January 29, 2011

ತಾಲೂಕಿನ ಕೆಲವು ಗ್ರಾಮಗಳಿಗೆ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನ
ಚಿಕ್ಕನಾಯಕನಹಳ್ಳಿ,ಜ.29: ಬರಸಿಡ್ಲಹಳ್ಳಿ, ದೊಡ್ಡರಾಂಪುರ, ಗೊಲ್ಲರಹಟ್ಟಿ, ಭಾಗಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ 77ಲಕ್ಷ ರೂ, ತೀರ್ಥಪುರ ಸಕರ್ಾರಿ ಪ್ರೌಡಶಾಲೆಗೆ 25ಲಕ್ಷ ರೂ ಸಕರ್ಾರ ಬಿಡುಗಡೆ ಮಡಿದ್ದು ಬಸವ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ 1000 ಮನೆ ನಿಮರ್ಿಸಲು ಮಂಜೂರಾತಿ ನೀಡಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲೂಕಿನ ಕಾತ್ರಿಕೆಹಾಳ್ನಲ್ಲಿ ಜಿ.ಪಂ. ತಾ.ಪಂ. ಲೋಕೋಪಯೋಗಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಜಲಾನಯನ ಇಲಾಖೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಹಾಗೂ ಶಂಕುಸ್ಥಾಪನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೀರ್ಥಪುರ ಗ್ರಾಮ ವ್ಯಾಪ್ತಿಯ ನಿವೇಶನ ರಹಿತರಿಗೆ 1200 ನಿವೇಶನ ನೀಡಲು ತೀಮರ್ಾನಿಸಿದ್ದೇವೆ, ಕಾತ್ರಿಕೆಹಾಳ್, ತೀರ್ಥಪುರ, ಹಾಗಲವಾಡಿ, ಡಾಂಬರು ನಿಮರ್ಿಸಲು 78ಲಕ್ಷ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರಲ್ಲದೆ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಜಾಣೆಹಾರ್, ಕಾತ್ರಿಕೆಹಾಳ್ ಮಧ್ಯ ಇರುವ ಸೇತುವೆಯು ಮಾಚರ್್ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಳ್ಳಿಗಳು ದೇಶದ ಬೆನ್ನೆಲುಬು, ಹಳ್ಳಿಗಳ ಸವರ್ಾಂಗೀಣ ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುವುದು ಖಂಡಿತ, ಮಹಾತ್ಮಾಗಾಂಧೀಜಿಯವರು ಕಂಡಂತಹ ರಾಮರಾಜ್ಯ ನನಸು ಮಾಡಲು ಯುವ ಜನತೆ ಮುಂದೆ ಬರಬೇಕಾಗಿದೆ ಎಂದ ಅವರು, ಅತಿ ಹಿಂದುಳಿದ ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಕರ್ಾರ ಅನೇಕ ಯೋಜನೆ ಹಾಕಿಕೊಂಡು ಶಿಕ್ಷಣ, ರಸ್ತೆ ಅಭಿವೃದ್ದಿ, ಸಮುದಾಯಭವನ, ಪದವಿ ಪೂರ್ವ ಕಟ್ಟಡ ನಿಮರ್ಿಸಿ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ಭಾಗದಲ್ಲಿ ವಾಹನ ಸೌಕರ್ಯವಿಲ್ಲದೆ ವಿದ್ಯಾಥರ್ಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದು ಈ ಸ್ಥಳದಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸಿ ಹೆಣ್ಣುಮಕ್ಕಳು ಕ್ರಿಯಾಶೀಲರಾಗಲು ಮತ್ತು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಸಕರ್ಾರ ಸ್ಪಂದಿಸುತ್ತಿದೆ ಎಂದರು.
ಮಹಿಳೆಯರಿಗೆ

ಜನಗಣತಿ ಕಾರ್ಯಕ್ರಮದ ನಿಮಿತ್ತ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ರಜೆ
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜನಲ್ಲಿ ಇದೇ ಜನವರಿ 31ರ ಸೋಮವಾರ ದಂದು ಜನಗಣತಿ ಕಾರ್ಯಕ್ರಮವನ್ನು ಏರ್ಪಡಿಸಿರುವುದರಿಂದ ಅಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಿರಲು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕೊಠಡಿಗಳನ್ನು ಜನಗಣತಿ ಕಾರ್ಯಕ್ಕೆ ಬಿಟ್ಟುಕೊಡಲಾಗಿದ್ದು ಅಂದು ವಿದ್ಯಾಥರ್ಿಗಳ ತರಗತಿಗಳಿಗೆ ಅಡಚಣೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯಿಂದ ತರಗತಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ದಿಗೆ ಜನಗಣತಿಯ ಆಧಾರ ಮುಖ್ಯ: ಡಿ.ಡಿ.ಪಿ.ಐ ಮೋಹನ್ಕುಮಾರ್
ಚಿಕ್ಕನಾಯಕನಹಳ್ಳಿ,ಜ.29: ಒಂದು ದೇಶ ಅಭಿವೃದ್ದಿಯಾಗ ಬೇಕಾದರೆ ಅದು ದೇಶದ ಜನಗಣತಿಯ ಆಧಾರದ ಮೇಲೆ ದೇಶದ ಯೋಜನೆಗಳು ರೂಪುಗೊಳ್ಳುತ್ತದೆ ಎಂದು ಡಿ.ಡಿ.ಪಿ.ಈ ಮೋಹನ್ಕುಮಾರ್ ಹೇಳಿದರು.
ಶನಿವಾರ ಪಟ್ಟಣದ ಸಕರ್ಾರಿ ಪದವಿ ಕಾಲೇಜನಿಲ್ಲಿ ನಡೆದ 2010-11ನೇ ಸಾಲಿನ 3ದಿನದ ಜನಗಣತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ದೇಶದ ರಾಜ್ಯ,ಜಿಲ್ಲೆ ತಾಲೂಕು ಅಭಿವೃದ್ದಿಯಾಗಬೇಕದಾರರೆ ಜನಗಣತಿಯ ಆಧಾರದ ಮೇಲೆ ಪಂಚವಾಷರ್ಿಕ ಯೋಜನೆಗಳನ್ನು ಸಕರ್ಾರ ರೂಪಿಸುತ್ತದೆ. ಆಥರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗ ಬೇಕಾದರೆ ಜನಗಣತಿ ಅಗತ್ಯ ಎಂದರು.
ಸರ್ವ ಶಿಕ್ಷಣ ಅಭಿಯಾನದ ಹಾಗೆ ಪ್ರೌಡಶಾಲೆಗಗಳಿಗೆ ಆರ್.ಎಮ್.ಇ.ಸಿ ಯೋಜನೆಯಡಿಯಲ್ಲಿ ಸಕರ್ಾರಿ ಪ್ರೌಡಶಾಲೆಗಳ ಅಭಿವೃದ್ದಿಗೆ 25ರಿಂದ 40ಸಾವಿರ ರೂಪಾಯಿಗಳನ್ನು ಪ್ರೌಡಶಾಲಾ ಮುಖ್ಯೋಪಾಧ್ಯಾರ ಖಾತೆಗೆ ಜಮಾ ಮಡಲಾಗಿದ್ದು ಈ ಹಣವನ್ನು ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ 10ವರ್ಷಕ್ಕೊಮ್ಮೆ ಒಮ್ಮೆ ನಡೆಯುವ ಜನಗಣತಿಯ ಕಾರ್ಯಕ್ರಮದಲ್ಲಿ ಶಿಕ್ಷಕರು ವ್ಯವಸ್ಥಿತವಾಗಿ ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ಭಾರತದ ಸಕರ್ಾರಿ ಯೋಜನೆಗಳ ಶೈಕ್ಷಣಿಕವಾಗಿ ಆಥರ್ಿಕ ಸಾಮಾಜಿಕ ವೈಜ್ಞಾನಿಕವಾಗಿ ಕ್ಷೇತ್ರಗಳಲ್ಲಿ ಹಾಗೂ ವಸತಿ ರಹಿತರಿಗೆ ಶೌಚಾಲಯ ಹಾಗೂ ಮಕ್ಕಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಜನಗಣತಿ ಆಧಾರದ ಮೇಲೆ ನಿಂತಿದೆ ಎಂದ ಅವರು ಎರಡನೇ ಹಂತದ ಜನಗಣತಿ ಕಾರ್ಯಕ್ರಮ ಫೆಬ್ರವರಿ 6ರಿಂದ 28ರವರಗೆ ನಡೆಯಲಿದೆ ಜನಗಣತಿ ಕಾರ್ಯಕ್ರಮದಲ್ಲಿ ಶಿಕ್ಷಕರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾನಂದ್, ಸಿ.ಡಿ.ಪಿ.ಓ ಅನೀಸ್ಖೈಸರ್, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಸಮಾಜ ಕಲ್ಯಾಣಅಧಿಕಾರಿ ಸಯದ್ಮುನೀರ್ ಹಾಜರಿದ್ದರು
ಗಣತಿ ಕಾರ್ಯಕ್ಕೆ ಗೈರಾದರೆ ಶಿಸ್ತು ಕ್ರಮ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಜನಗಣತಿಯ ಗಣತಿ ಕಾರ್ಯಕ್ರಮವು ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಆಗಿರುವ ತೊಂದರೆಯನ್ನು ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದ ಅವರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 11ಗಂಟೆ ವೇಳೆಗೆ ಮುಗಿಸಿ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ

No comments:

Post a Comment