Tuesday, February 1, 2011




ತು.ಹಾ.ಒಕ್ಕೂಟಕ್ಕೆ ಮೂರು ತಿಂಗಳಲ್ಲಿ 3.89 ಕೋಟಿ ಲಾಭ
ಚಿಕ್ಕನಾಯಕನಹಳ್ಳಿ,ಫೆ.01: ತುಮಕೂರು ಹಾಲು ಒಕ್ಕೂಟದ ಕಳೆದ ತ್ರೈಮಾಸಿಕ ವಹಿವಾಟಿನಲ್ಲಿ ಸುಮಾರು 3.89 ಕೋಟಿ ಲಾಭ ಬಂದಿದೆ ಎಂದು ಹಾಲು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಬೆನಕನಕಟ್ಟೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಅಳೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ತಿಂಗಳಲ್ಲೇ ಒಕ್ಕೂಟಕ್ಕೆ 1.40ಕೋಟಿ ಲಾಭ ಬಂದಿತು. ನಂತರ ನವೆಂಬರ್ನಲ್ಲಿ ಒಂದು ಕೋಟಿ ಲಾಭ ಬಂದಿದೆ, ಡಿಸೆಂಬರ್ನಲ್ಲಿ 45ಲಕ್ಷ ಲಾಭ ತಂದು ಕೊಡುವ ಮೂಲಕ ತುಮಕೂರು ಹಾಲು ಒಕ್ಕೂಟ ಲಾಭದಾಯಕ ಒಕ್ಕೂಟವಾಗುವಲ್ಲಿ ನಮ್ಮೆಲ್ಲ ನಿದರ್ೇಶಕರ ಸಹಕಾರ ಮಹತ್ವ ಪೂರ್ಣವಾದದ್ದು ಎಂದರು.
ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದನೆ ಒಂದು ಉದ್ಯಮವಾಗಿ ಬೆಳೆದಿದ್ದು, ತೋಟಕ್ಕೆ ಬಂಡವಾಳ ಹಾಕುವುದಕ್ಕಿಂತ ಸೀಮೆ ಹಸು ಮೇಲೆ ಬಂಡವಾಳ ಹೂಡುವುದು ಹೆಚ್ಚು ಲಾಭದಾಯಕ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ ಎಂದರಲ್ಲದೆ, ಹಾಲು ಉತ್ಪಾದಕರು ತಮ್ಮ ಗ್ರಾಮಗಳಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಮೂಲಕ ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡಿಕೊಳ್ಳಲು ಮುಂದಾಗುವಂತೆ ಸಲಹೆ ನೀಡಿದರು.
ಪ್ರಸ್ತುತ ಚಿಕ್ಕನಾಯಕನಹಳ್ಳಿಯಲ್ಲಿ 86 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಖ್ಯೆಯನ್ನು ಅಧಿಕಗೊಳಿಸಬೇಕಾಗಿದೆ ಎಂದರಲ್ಲದೆ, ನನ್ನ ಅಧ್ಯಕ್ಷಾವಧಿ ಮುಗಿಯುವುದರೊಳಗೆ ಈ ತಾಲೂಕಿನಲ್ಲಿ 101 ಸಂಘಗಳನ್ನು ಸ್ಥಾಪಿಸಬೇಕೆಂಬ ಹಂಬಲ ಹೊಂದಿದ್ದೇನೆ ಎಂದರು.
ಹಸುಗಳಿಗೆ ನೀಡುವ ಆಹಾರದಲ್ಲಿ ಹಸಿರು ಮೇವಿಗೆ ಹೆಚ್ಚು ಒತ್ತು ನೀಡಿ, ಅದರ ಜೊತೆಗೆ ಅಜೋಲಾವನ್ನು ಹಸುಗಳಿಗೆ ನೀಡಿ ಎಂದರಲ್ಲದೆ, ಬೂಸದ ಉತ್ಪಾದನೆ ಕಡಿಮೆಯಾಗಿರುವುದರಿಂದ ಅದರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶೆಟ್ಟಿಕೆರೆ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಹಾಲು ಉತ್ಪಾದಕರ ಸಂಘದ ಅಳಿವು-ಉಳಿವು ಉತ್ಪಾದಕರ ಕೈಯಲ್ಲಿದ್ದು ಯಾವ ಸಂಘ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಅಂತಹ ಸಂಘ ಅಭಿವೃದ್ದಿ ಶೀಲವಾಗಿರುತ್ತದೆ ಎಂದರು. ನಾನು ಸಹ ಆರಂಭದಲ್ಲಿ ಹಾಲುಗೊಣ ಹಾಲು ಉತ್ಪಾದಕರ ಸಂಘದ ಕಾರ್ಯದಶರ್ಿಯಾಗಿ ದುಡಿದ ಅನುಭವವನ್ನು ಹಂಚಿಕೊಂಡರು.
ಬೆನಕನಕಟ್ಟೆ ಗ್ರಾಮ ನನ್ನ ರಾಜಕೀಯ ಬೆಳವಣಿಗೆಗೆ ಸ್ಪಂದಿಸಿದೆ, ಚುನಾವಣೆಗೆ ಮುನ್ನ ನಾನು ಈ ಊರಿಗೆ ಭೇಟಿ ನೀಡಿದಾಗ, ಊರಿನ ಕೆರೆಯ ಅಭಿವೃದ್ದಿ ಬಗ್ಗೆ ಹಾಗೂ ಅಲ್ಲಿಗೆ ಮಲ್ಲಿಕಾಜರ್ುನ ಸ್ವಾಮಿ ಬೆಟ್ಟದಿಂದ ನೀರು ಹರಿಸುವ ಬಗ್ಗೆ ಗ್ರಾಮಸ್ಥರು ಚಚರ್ಿಸಿದ್ದರು, ಆ ದಿನ ನಾನು ಏನು ಮಾತು ಕೊಟ್ಟಿದ್ದೆನೋ, ಅದೇ ಮಾತಿಗೆ ಇಂದು ಕಟಿಬದ್ದನಾಗಿದ್ದೇನೆ. ಗ್ರಾಮಸ್ಥರೆಲ್ಲಾ ಯಾವ ಸಂದರ್ಭದಲ್ಲೇ ಈ ಕಾರ್ಯಕ್ಕೆ ಕೈಯಾಕಿದರು ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದರು. ಈ ಗ್ರಾಮದ ಆಂಜನೇಯ ದೇವಸ್ಥಾನ ಜೀಣರ್ೋದ್ದಾರ ಕಾರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತು.ಹಾ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸುಬ್ರಾಯ್ಭಟ್ರು ಮಾತನಾಡಿ, ಹಸು ಸಾಕುವವರು ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಹಸುಗಳಿಗೆ ಕಾಲಕಾಲಕ್ಕೆ ಚುಚ್ಚು ಮದ್ದುಗಳನ್ನು ಹಾಕಿಸುವುದರ ಕಡೆ ಹೆಚ್ಚು ಗಮನ ನೀಡಿದರೆ ಹಸುಗಳು ಆರೋಗ್ಯ ಪೂರ್ಣವಾಗಿರುವುದರ ಜೊತೆಗೆ ಹೆಚ್ಚು ಹಾಲು ಕೊಡುವ ಮೂಲಕ, ಹೆಚ್ಚು ಆದಾಯವನ್ನು ತಂದು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ, ನಮ್ಮೂರಿನ ಹಲವು ದಿನಗಳ ಬೇಡಿಕೆಯಾಗಿದ್ದ ಹಾಲಿನ ಕೇಂದ್ರ ಆರಂಭಗೊಂಡಿರುವುದು ನಮಗೆಲ್ಲಾ ಹರ್ಷ ತಂದಿದೆ ಎಂದರಲ್ಲದೆ, ಈ ಸಂಘದ ಅಭಿವೃದ್ದಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದೊರೆಯುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಮ್ಮ ಪಂಚಾಯಿತಿ ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರಪ್ಪ, ತು.ಹಾ.ಒಕ್ಕೂಟದ ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ ಕುಪ್ಪೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ.ಕೃಷ್ಣಮೂತರ್ಿ, ಕಾರ್ಯದಶರ್ಿ ಕೆ.ಎಂ.ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ತಾ.ಪಂಸದಸ್ಯೆ ಚಿಕ್ಕಮ್ಮಗಂಗಾಧರಪ್ಪ, ಗ್ರಾ.ಪಂ.ಸದಸ್ಯರುಗಳಾದ ಬಿ.ಆರ್.ಕೃಷ್ಣಮೂತರ್ಿ, ಪೂಣರ್ಿಮ ಆನಂದ್. ಉಮೇಶ್, ಕುಪ್ಪೂರು ಗದ್ದಿಗೆ ಮಠದ ಏಜೆಂಟ್ ವಾಗೀಶ್ ಪಂಡಿತಾರಾಧ್ಯ, ಕುಪ್ಪೂರು ಹಾ.ಉ.ಸ.ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಂಘದ ಕಾರ್ಯದಶರ್ಿ ಬಿ.ಸಿ.ವೆಂಕಟೇಶ್ ಮೂತರ್ಿ ಸ್ವಾಗತಿಸಿ, ಶಿಕ್ಷಕ ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ ವಂದಿಸಿದರು.


ಅಲ್ಪಸಂಖ್ಯಾತರ ಮಕ್ಕಳು ಗೈರು ಹಾಜರಾದರೆ ಶಿಕ್ಷಕರೆ ಹೊಣೆ
ಚಿಕ್ಕನಾಯಕನಹಳ್ಳಿ.ಫೆ.02: ಅಲ್ಪಸಂಖ್ಯಾತ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹೆಚ್ಚು ಜವಬ್ದಾರಿ ಹೊರಬೇಕೆಂದು ತುಮಕೂರು ದಕ್ಷಿಣ ಜೆಲ್ಲೆಯ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಮೋಹನ್ಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಅಲ್ಪಸಂಖ್ಯಾತರ ಮಕ್ಕಳ ನಾವಿನ್ಯಯುತ ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಮಕ್ಕಳು ಶಾಲೆಗೆ ಗೈರು ಹಾಜರಾಗುವ ಪ್ರಮಾಣ ಹೆಚ್ಚುತ್ತಿದೆ, ಇಂತಹ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಲು ಸಕರ್ಾರ ಹಲವು ಉತ್ತೇಜಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರ ಗೈರು ಹಾಜರಿ ತಪ್ಪಿಸಲು ಪ್ರಯತ್ನಿಸುತ್ತಿದೆ, ಇದಕ್ಕೆ ಈ ವರ್ಗದ ಶಿಕ್ಷಕರ ಪ್ರಯತ್ನವೂ ಬಹಳ ಮುಖ್ಯ ಎಂದರು.
ಅಲ್ಪಸಂಖ್ಯಾತರ ಶಾಲೆಗಳಲ್ಲಿ ವಿಜ್ಞಾನ ಉಪಕರಣ ಕೊಳ್ಳಲು ತಾಲೂಕಿಗೆ ಒಂದು ಲಕ್ಷರೂಗಳನ್ನು ನೀಡಲಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳ ಶಿಕ್ಷಕರು ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳಲ್ಲಿನ ಶಿಕ್ಷಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಗೈರು ಹಾಜರಿಯನ್ನು ಕಡಿಮೆ ಮಾಡಬೇಕು, ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ದಾಖಲಾಗದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿಯನ್ನು ನಿರ್ವಹಿಸಬೇಕು, ಅಲ್ಪಸಂಖ್ಯಾತರ ಶಾಲೆಗಳಿರುವ ಸ್ಥಳಗಳಲ್ಲಿ ದಾಖಲಾಗದ ಹಾಗೂ ದೀರ್ಘಕಾಲದ ಮಕ್ಕಳು ಕಂಡುಬಂದರೆ ಆ ಶಾಲೆಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದರ್ು ಸಿ.ಆರ್.ಪಿ. ಅಪ್ರೋಜ್ ಉನ್ನೀಸಾ ಪ್ರಾಥರ್ಿಸಿದರೆ, ಬಿ.ಆರ್.ಸಿ.ಸುಧಾಕರ್ ಸ್ವಾಗತಿಸಿದರು, ದುರ್ಗಯ್ಯ ನಿರೂಪಿಸಿ, ಪುಟ್ಟಮಾದಯ್ಯ ವಂದಿಸಿದರು.


No comments:

Post a Comment