Friday, February 4, 2011

ಚಿಕ್ಕನಾಯಕನಹಳ್ಳಿ,ಫೆ.03: ತಾಲೂಕು ಪಂಚಾಯ್ತಿಯಲ್ಲಿ ಪಕ್ಷ ಭೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಶ್ಲಾಘಿಸಿದರು.
ಬುಧವಾರ ತಾಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಕಳೆದ ಬಾರಿಯಾಗಿ ಅವಧಿ ಮುಕ್ತಾಯವಾದ 19ಜನ ತಾ.ಪಂ.ಸದಸ್ಯರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಮಸ್ಯೆ ಬಂದರು ಪಕ್ಷಬೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಕಡಿಮೆ ಅನುದಾನದಲ್ಲೂ ತಮ್ಮ ಕೈಲಾದ ಸೇವೆ ಜನತೆಗೆ ಮಾಡಿದ್ದೀರಿ ಅಧಿಕಾರವಿದ್ದಾಗ ಸಾರ್ವಜನಿಕ ಕೆಲಸ ಮಾಡುವುದು ಮುಖ್ಯವಲ್ಲ ಅಧಿಕಾರದ ನಂತರ ಜನರ ಸೇವೆ ಮಾಡುವುದು ಮುಖ್ಯ, ಎಂದ ಅವರು ಮುಂದೆ ಬರುವ ತಾ.ಪಂ.ಸದಸ್ಯರು ಎಲ್ಲರ ಜೊತೆಗೂಡಿ ಹೊಂದಣಿಕೆ ಮಾಡಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನ್ಯಯ ಮಾತನಾಡಿ ಕಳೆದ ಸಕರ್ಾರ ತಾ.ಪಂ.ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೂ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಅಭಿವೃದ್ದಿಗೆ ಶ್ರಮಿಸಿದ್ದೇವೆ ಎಂದ ಅವರು ಸದಸ್ಯರಿಂದ ಅಧಿಕಾರಿಗಳ ಬಗ್ಗೆ ಕಠಿಣವಾಗಿ ವತರ್ಿಸಿದರೆ ಕ್ಷಮೆ ಇರಲಿ, ನಾವು ಅಭಿವೃದ್ದಿಗೆ ಕಾರ್ಯಕಗಳಿಗೆ ಮಾತ್ರ ಕಠಿಣವಾಗಿ ವತರ್ಿಸುತ್ತಿದ್ದೆವೆ ಹೊರತು ನಿಮ್ಮ ಬಗ್ಗೆ ನಮಗೆ ದ್ವೇಶ ಇರಲಿಲ್ಲ ಎಂದರು.
ಮಾಜಿ ಅಧ್ಯಕ್ಷೆ ಶಾರದ ಸೀತರಾಮಯ್ಯ ಮಾತನಾಡಿ ಕಳೆದ ಬಾರಿ ನಾವು ತಾ.ಪಂ.ಗೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕನ್ನು ಅಭಿವೃದ್ದಿ ಮಾಡಬೇಕು, ಜನತೆಯ ಸಮಸ್ಯೆಗಳನ್ನು ಈಡೇರಿಸಬಹುದು ಎಂದು ಅಧಿಕಾರಕ್ಕೆ ಬಂದಿದ್ದು ಸಕರ್ಾರ ತಾ.ಪಂ.ಗಳಿಗೆ ಅನುದಾನ ಬಿಡುಗಡೆ ಮಾಡದೆ ಇದ್ದುದನ್ನು ನೋಡಿ ನಮಗೆ ನಿರಾಸೆಯಾಯಿತು ಎಂದ ಅವರು ಸಕರ್ಾರ ಹಣ ಬಿಡುಗಡೆ ಮಾಡುವಂತೆ ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಎಲ್ಲಾ ತಾ.ಪಂ.ಸದಸ್ಯರು ಹೋರಾಟ ಮಾಡಿದರೂ ಏನು ಪ್ರಯೋಜನವಾಗಲಿಲ್ಲ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಇ.ಓ ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ಪಿ.ರವಿಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.





No comments:

Post a Comment