Friday, September 30, 2011


ತಂದೆಗೆ ತಕ್ಕ ಮಗ ಶಾಸಕ ಸಿ.ಬಿ.ಎಸ್: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ಸೆ.26 : ನಮ್ಮ ತಂದೆಯವರು ತೋರಿಸಿಕೊಟ್ಟ ಉತ್ತಮ ಹಾದಿಯಲ್ಲೇ ನಾವು ಈಗಲೂ ನಡೆಯುತ್ತಿದ್ದು, ಮುಂದೆಯೂ ಅದೇ ರೀತಿ ಜನರ ಮಧ್ಯೆ ಇರುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ದಿ.ಎನ್.ಬಸವಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆಯವರಂತೆಯೇ ನಾವು ಸಾರ್ವಜನಿಕರಲ್ಲಿ ಬೆರೆತು ಅವರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ, ಬಡವರ್ಗದ ಹಾಗೂ ಹಿಂದುಳಿದ ಜನಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಬಸವಯ್ಯನವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತೀಪರ್ು ನೀಡುವ ಮೂಲಕ ಅವರನ್ನು ನ್ಯಾಯಾಲಯದ ಮೆಟ್ಟಿಲನ್ನು ತುಳಿಯದಂತೆ ನೋಡಿಕೊಳ್ಳುತ್ತಿದ್ದರಲ್ಲದೆ, ಜನರ ಕಷ್ಠ ಸುಖಗಳಿಗೆ ಸ್ಪಂದಿಸುತ್ತಿದ್ದರು ಅದೇ ಗುಣ ಅವರ ಮಗನಾದ ಸುರೇಶ್ ಬಾಬುವಿಗೂ ಇದೆ, ತಂದೆಯಂತೆ ಮಗ ಎಂಬ ಗಾದೆಯನ್ನು ಇವರು ನಿಜ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಂಗಸ್ವಾಮಯ್ಯ, ರಾಜಣ್ಣ ಉಪಸ್ಥಿತರಿದ್ದರು.

ಗಾಂಧಿಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾ.ಪಂ.ಅಧ್ಯಕ್ಷರ ಬಹಿಷ್ಕಾರ: ಒಕ್ಕೂಟದ ಹೇಳಿಕೆ
ಚಿಕ್ಕನಾಯಕನಹಳ್ಗ್ಭಿ,ಸೆ.26 : ಗ್ರಾಮಪಂಚಾಯ್ತಿಗಳ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯು 3 ವರ್ಷದಿಂದ ವಿಳಂಬಗತಿಯಲ್ಲಿರುವುದರಿಂದ ಗಾಂಧಿಜಯಂತಿಯಂದು ಕ್ರಿಯಾ ಯೋಜನೆಗೆ ನಡೆಸುವ ಗ್ರಾಮಸಭೆಗೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಸಭೆಯನ್ನು ಬಹಿಷ್ಕರಿಸತ್ತೇವೆ ಎಂದು ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷೆ ಕುಶಾಲಮರಿಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಯಂತಿ ದಿನ ಗ್ರಾಮಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಕರಡು ತಯಾರಿಸಲು ಸುತ್ತೋಲೆ ಬಂದಿದೆ, ಕಳೆದ 2010-11ನೇ ಸಾಲಿನಲ್ಲಿ ತಯಾರಿಸಿದ್ದ ಕ್ರಿಯಾ ಯೋಜನೆಯೇ ಇನ್ನೂ ಪರಿಪೂರ್ಣವಾಗಿಲ್ಲ, 11-12ನೇ ಸಾಲಿನಲ್ಲಿ ತಯಾರಿಸಿದ ಯೋಜನೆ ಪ್ರಾರಂಭಿಸಿಯೇ ಇಲ್ಲ, ಈಗ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸಲು ಗ್ರಾ.ಪಂ.ಗಳಿಗೆ ಅಸಮಾಧಾನವಾಗಿದೆ ಎಂದು ತಿಳಿಸಿದವ ಅವರು, ಈ ಹಿಂದಿನ ಕ್ರಿಯಾ ಯೋಜನೆಗಳ ವಿಚಾರದಲ್ಲಿ ಗ್ರಾ.ಪಂ. ಪಿಡಿಓ ಮತ್ತು ಕಾಯರ್ಾದಶರ್ಿಗಳನ್ನು ವಿಚಾರಿಸಿದರೆ ನಮಗೆ ಸಕರ್ಾರದಿಂದ ಆದೇಶ ಬಂದಿಲ್ಲ ಎಂದು ಮೇಲಧಿಕಾರಿಗಳನ್ನು ತೋರಿಸಿ ಕೈ ತೊಳೆದಕೊಳ್ಳುತ್ತಾರೆ ಎಂದರು. 10-11ನೇ ಸಾಲಿನ ಮತ್ತು 11-12ನೇ ಸಾಲಿನ ಕ್ರಿಯಾ ಯೋಜನೆ ಪೂರ್ಣಗೊಳ್ಳದೆ 12-13ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆಗಳಿಗೆ ಸುತ್ತೋಲೆ ಕಳುಹಿಸಿರುವುದನ್ನು ಗ್ರಾ.ಪಂ. ಒಕ್ಕೂಟ ತಿರಸ್ಕರಿಸುತ್ತದೆ. ಹೊರ ರಾಜ್ಯಗಳಲ್ಲಿ ಗ್ರಾ.ಪಂ.ಅಭಿವೃದ್ದಿಗೆ ಕೇಂದ್ರ ಸಕರ್ಾರದಿಂದ 15 ರಿಂದ 16 ಸಾವಿರ ಕೋಟಿ ರೂ ಬಳಕೆಯಾಗುತ್ತದೆ, ಆದರೆ ನಮ್ಮ ರಾಜ್ಯದಲ್ಲಿ ಕೇಂದ್ರ ಸಕರ್ಾರ ಬಿಡುಗಡೆಗೊಳಿಸುವ ಗ್ರಾಮೀಣ ಅಭಿವೃದ್ದಿ ಅನುದಾನವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಇನ್ನೆರಡು ಮೂರು ದಿನಗಳೊಳಗೆ ಹಿಂದಿನ ಕ್ರಿಯಾ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳದಿದ್ದರೆ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಕರಡು ತಯಾರಿಸುವುದನ್ನು ಗ್ರಾಮಸಭೆಗಳಲ್ಲಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬರಗೂರು ಬಸವರಾಜು, ಉಷಾ, ಕಲ್ಪನಾ ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗಾಗಿ ಎಲ್ಲರ ಒಲವು ಅಗತ್ಯ
ಚಿಕ್ಕನಾಯಕನಹಳ್ಳಿ,ಸೆ.30 : ವಿದ್ಯಾಥರ್ಿಗಳು ಎಸ್.ಡಿ.ಎಂ.ಸಿ, ಶಿಕ್ಷಕವರ್ಗ ಹಾಗೂ ಪೋಷಕರ ಒಲವನ್ನು ಗಳಿಸಿ ಅವರ ಮಾರ್ಗದರ್ಶನದಂತೆ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿ.ನಂಜಯ್ಯ ಸಲಹೆ ನೀಡಿದರು.
ಪಟ್ಟಣದ ಎಂ.ಎಚ್.ಪಿ.ಎಸ್ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ಆಯಾ ಮಕ್ಕಳ ಉತ್ತರ ಪತ್ರಿಕೆಗಳೊಂದಿಗೆ ಚಚರ್ೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿಗೆ ಶ್ರಮಿಸಬೇಕೆಂದು ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಹಲವು ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿ.ಬಿ.ಲೋಕೇಶ್ ಮಾತನಾಡಿ ಶೇ.75ರಷ್ಟು ರೈತರ ಹಾಗೂ ಬಡಕೂಲಿ ಕಾಮರ್ಿಕರ ಮಕ್ಕಳು ಸಕರ್ಾರಿ ಶಾಲೆಯಲ್ಲಿ ಓದುತ್ತಿರುವುದರಿಂದಲೇ ಸಕರ್ಾರಿ ಶಾಲೆಗಳು ಈಗಲೂ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿರುವುದು ಎಂದ ಅವರು ಪೋಷಕರು ಶಾಲೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕ್ರೀಡೆ, ಇನ್ನಿತರ ಚಟುವಟಿಕೆಗಳ ಬಗ್ಗೆ ಶಿಕ್ಷಕರೊಂದಿಗೆ ಚಚರ್ಿಸಬೇಕು ಮತ್ತು ಪೋಷಕರು ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಿ ಸಕರ್ಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ ಅವರು ಮಕ್ಕಳು ಅತಿ ಹೆಚ್ಚಾಗಿ ಟಿವಿ ನೋಡುವುದನ್ನು ತಪ್ಪಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಿಸುತ್ತಾ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಪೋಷಕರು ಮನೆಯಲ್ಲಿ ಮತ್ತೊಮ್ಮೆ ತಿಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶರವರು ಆಗಮಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪರಿಶೀಲಿಸಿ, ವಸ್ತು ಪ್ರದರ್ಶನ ವೀಕ್ಷಿಸಿ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಕೆ.ಪಿ.ಚೇತನ, ಧನಪಾಲ್, ಮಾರ್ಗದಶರ್ಿ ಶಿಕ್ಷಕ ಬಸವರಾಜು, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಗದೀಶ್ ಹೆಚ್.ಸ್ವಾಗತಿಸಿದರೆ, ಎಸ್.ಕೆ.ವಿಜಯ್ಕುಮಾರ್ ನಿರೂಪಿಸಿದರು.


ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೆ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಸೆ.30 : ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೇ ವರ್ಷದ ವಾಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು (ಇಂದು) ಅಕ್ಟೋಬರ್ 1ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದು ಖುಷಿ ಸಂಸ್ಕೃತಿ ಕೇಂದ್ರದ ಆಚಾರ್ಯ ರಂಗಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಉಮೇಶ್ಚಂದ್ರ, ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮರಾಮಯ್ಯ, ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ವಿಶೇಷ ಆಹ್ವಾನಿತರಾಗಿ ರಾ.ಸ.ಪ್ರಾ.ಶಾ.ಶಿ.ಶಿಸಂಘದ ಅಧ್ಯಕ್ಷ ರಮಾದೇವಿ, ಕಾರ್ಯದಶರ್ಿ ಶಂಕರಮೂತರ್ಿ, ಖಜಾಂಚಿ ಟಿ.ಮನೋರಮಾ, ಮುಖ್ಯಶಿಕ್ಷಕರಾದ ಗೊವಿಂದರಾಜು, ತಾ.ಪ್ರೌ.ಶಾ.ಸ.ಶಿ.ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಪ್ರೌ.ಶಾ.ಶಿ.ಸಂಘದ ಕಾರ್ಯದಶರ್ಿ ತಿಮ್ಮಯ್ಯ ಉಪಸ್ಥಿತರಿರುವರು.

No comments:

Post a Comment