Tuesday, November 15, 2011



ಪ್ರತಿಭೆಗಳನ್ನು ಗುರುತಿಸಿದರೆ ದೇಶದ ಪ್ರತಿಭಾವಂತ ಮಕ್ಕಳಾಗುತ್ತಾರೆ 
ಚಿಕ್ಕನಾಯಕನಹಳ್ಳಿ,ನ.15 : ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಆ ಪ್ರತಿಭೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಿಬೇಕೆಂದು ಎಂದು ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ಕೆ.ಎಂ.ಪಿ.ಜಿ.ಎಸ್ ಶಾಲೆಯಲ್ಲಿ ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಹಾಗೂ ಕನಕದಾಸ ಜಯಂತಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭೆಗಳನ್ನು ಗುರುತಿಸಿದರೆ ಮುಂದೆ ಆ ಮಕ್ಕಳು ಪ್ರತಿಭಾವಂತ ಮಕ್ಕಳಾಗಿ ದೇಶದ ಉನ್ನತಿಗೆ ಮುಂದಾಗುವರು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಮ್ಮರವರು ಮಾತನಾಡಿ ಮಕ್ಕಳು ನೆಹರೂರವರ ಗುಣಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ವಿಜೇತರಾದ ಮಕ್ಕಳಿಗೆ ಪುರಸಭಾ ಸದಸ್ಯರಾದ ಸಿ.ಎಲ್.ಕೃಷ್ಣಮೂತರ್ಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ನಾಗರತ್ನ ಸ್ವಾಗತಿಸಿದರೆ ತುಳಸಿ ನಿರೂಪಿಸಿ ಪುಟ್ಟಮ್ಮ ವಂದಿಸಿದರು.

No comments:

Post a Comment