Tuesday, November 22, 2011


ತಾಲ್ಲೂಕಿನ ಅಭಿವೃದ್ದಿಗಾಗಿ ನಮ್ಮಗಳ ಸಹಕಾರ ಇದ್ದೇ ಇರುತ್ತದೆ : ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.22 : ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡುತ್ತೇವೆ ಹೊರತು,  ತಾಲ್ಲೂಕಿನ ಕೀತರ್ಿ ಹೆಚ್ಚುವಂತಹ ಯಾವುದೇ ಕೆಲಸಕ್ಕೆ ಪ್ರೋತ್ಸಾಹ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ಇದ್ದೇ ಇರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಲಕ್ಷ ದೀಪೋಪತ್ಸವದ ಅಂಗವಾಗಿ ಶ್ರೀ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ  ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,  ಇಂತಹ ಟೂನರ್ಿಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ, ಆಗಲೇ ಟೂನರ್ಿಗಳು ಯಶಸ್ವಿಯಾಗುವುದು. ಕ್ರೀಡೆಯಿಂದ ದೈಹಿಕವಾಗಿ ಶಕ್ತಿ ತುಂಬುತ್ತದಲ್ಲದೆ ಕ್ರೀಡಾಸ್ಫಧರ್ಿಯ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಶ್ರೀ ಮೃತ್ಯುಂಜಯದೇಶಿಕೇಂದ್ರ ಶ್ರೀಗಳು ಮಾತನಾಡಿ ಕ್ರೀಡೆಯು ಮುಂದುವರಿದಂತೆ ಕ್ರೀಡಾಭಿಮಾನಿಗಳು ಹೆಚ್ಚಬೇಕು ಆಗಲೇ ಕ್ರೀಡೆಗೆ ಪ್ರೋತ್ಸಾಹ ಹೆಚ್ಚಿದಂತೆ, ಆಂಗ್ಲರ ಕ್ರಿಕೆಟ್ಟಿನಿಂದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಇವುಗಳ ಬೆಳೆಸಬೇಕಾದರೆ ಪ್ರೋತ್ಸಾಹಕರೊಂದಿಗೆ ಇದರ ಅಭಿಮಾನಿಗಳು ಹೆಚ್ಚಬೇಕು ಎಂದರು.
ಬೆಂಗಳೂರು ವಲಯದ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಮಾತನಾಡಿ ಕ್ರೀಡೆಗೆ ಜಾತಿ, ಮತ, ಅಂತಸ್ಥು ಇಲ್ಲದೆ ಗುರುತಿಸುವಂತಹದು ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಭವಿಷ್ಯಕ್ಕೂ ದಾರಿ ಮಾಡಿಕೊಳ್ಳಿ ಎಂದ ಅವರು ಕಬಡ್ಡಿ, ಖೋ-ಖೋ ಇಂತಹ ಗ್ರಾಮೀಣ ಆಟಗಳು ಹೆಚ್ಚಿಗೆ ಖಚರ್ಿಲ್ಲದೆ ನಡೆಯುವಂತಹ ಆಟಗಳು ಇವುಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.
  ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಮಾತನಾಡಿ ರಾಜ್ಯಮಟ್ಟದ ಕ್ರೀಡೆಯು ನಡೆಯುತ್ತಿದ್ದು  ಮುಂದಿನ ಬಾರಿ  ರಾಷ್ಟ್ರಮಟ್ಟದ ಕ್ರೀಡೆ ನಡೆಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಲಾ.ಬ.ಶಾ.ಕ್ರೀ.ಸಂಘದ ಗೌರವಾಧ್ಯಕ್ಷ ಆದರ್ಶಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಸುರೇಶ್ಹಳೇಮನೆ, ಸಿ.ಡಿ.ಪಿ.ಓ ಅನೀಸ್ ಖೈಸರ್ ಉಪಸ್ಥಿತರಿದ್ದರು.


ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ಉಚಿತ ಟೈಲರಿಂಗ್ ತರಬೇತಿ 
ಚಿಕ್ಕನಾಯಕನಹಳ್ಳಿ,ನ.22 : ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ತರಬೇತಿ ಶಿಕ್ಷಣ ನೀಡಿ ಅವರಿಗೆ ದೊಡ್ಡ-ದೊಡ್ಡ ಗಾಮರ್ೆಂಟ್ಸ್ಗಳಲ್ಲಿ ಕೆಲಸ ನೀಡವ ಉದ್ದೇಶವನ್ನು ಅಹೆಡ್ ಸಂಸ್ಥೆ ಹೊಂದಿದೆ ಎಂದು ಪ್ರೊಸಲ್ಯೂಷನ್ಸ್ ನಿದರ್ೇಶಕ ಜಿ.ಎಚ್.ಸೋಮಶೇಖರ್ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಅಮ್ರಿತ್ ಸಿದ್ದ ಉಡುಪುಗಳ ಹೊಲಿಗೆ ತರಬೇತಿ ಶಿಕ್ಷಣ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣುಮಕ್ಕಳು ತಮ್ಮ ಜೀವನದ ಆಥರ್ಿಕತೆಯನ್ನು ಸುಧಾರಿಸಲು ಉದ್ಯೋಗದ ಅವಶ್ಯಕತೆ ಇದೆ, ಅವರಿಗಾಗಿ ಸಂಸ್ಥೆಯು 30 ದಿನಗಳ ಉಚಿತ ತರಬೇತಿ ಹಾಗೂ ಊಟದ ಸೌಲಭ್ಯವನ್ನು ಕೂಡ ಒದಗಿಸುತ್ತದೆ ಎಂದ ಅವರು ರಾಜ್ಯದ 25 ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಸಂಸ್ಥೆಯು ಪ್ರತಿ ಕೇಂದ್ರದಲ್ಲೂ ಒಂದು ಸಾವಿರ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವ ಗುರಿ ಹೊಂದಿದೆ. ಈ ಸೌಲಭ್ಯವು ಹೆಂಗಸರಿಗೆ ಮಾತ್ರವಲ್ಲದೆ ಗಂಡಸರಿಗೂ ತರಬೇತಿ ನೀಡಲಿದೆ ಆದರೆ ಹೆಂಗಸರಿಗೆ ಹೆಚ್ಚಿನ ಆಧ್ಯತೆ ಇದೆ, ಅವರಿಗೆ ತರಬೇತಿ ನೀಡಿ ಬೆಂಗಳೂರು, ತುಮಕೂರು ಇನ್ನಿತರ ಸ್ಥಳಗಳಲ್ಲಿ ಉದ್ಯೋಗ ಕೊಡಿಸುವ ವಿಶ್ವಾಸ ವ್ಯಕ್ತಪಡಿಸದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತರಬೇತಿ ಪಡೆದವರು ಉದ್ಯೋಗ ಪಡೆದ ಮೇಲೆ ದುಡಿಯುತ್ತೇನೆಂಬ ಅಹಃನಿಂದ  ಬೀಗಬಾರದು, ಪ್ರತಿಯೊಬ್ಬರು ಇನ್ನಬ್ಬರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದ ಅವರು ಈ ತರಬೇತಿಯಿಂದಾಗಿ ತಾಲ್ಲೂಕಿನ ಹಲವರಿಗೆ ಉದ್ಯೋಗ ದೊರಕುವ ಭರವಸೆ ಇದೆ ಎಂದರು.
ಸಮಾರಂಭದಲ್ಲಿ ಪ್ರಸೊಲ್ಯೂಷನ್ ನಿದರ್ೇಶಕ ಚಂದ್ರಶೇಖರ್, ಪುರಸಭಾ ಸದಸ್ಯರಾದ ರವಿ(ಮೈನ್ಸ್), ರಾಜಣ್ಣ, ಎಂ.ಎನ್.ಸುರೇಶ್, ಸಿ.ಪಿ.ಚಂದ್ರಶೇಖರಶೆಟ್ಟರು, ಸಿ.ಡಿ.ಪಿ.ಓ ಅನೀಸ್ಖೈಸರ್  ಮುಂತಾದವರು ಉಪಸ್ಥಿತರಿದ್ದರು.




ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ 
ಚಿಕ್ಕನಾಯಕನಹಳ್ಳಿ,ನ.22 : ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 29ರ ಮಂಗಳವಾರ ಬೆಳಗ್ಗೆ 9ಕ್ಕೆ ತಾಲ್ಲೂಕಿನ ಹಂದನಕೆರೆ ಹೋಬಳಿಯ ಪಾಪನಕೊಣ ಗ್ರಾಮದಲ್ಲಿ  ಏರ್ಪಡಿಸಲಾಗಿದೆ ಎಂದು ಕನಕ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಆರ್.ಗಂಗಾಧರಯ್ಯ ತಿಳಿಸಿದ್ದಾರೆ.
ಶ್ರೀ ಕನಕ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಶ್ರೀ ಈಶ್ವರಾನಂದಪುರಿಸ್ವಾಮಿಗಳು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಗ್ರಾ.ಸಂಘದ ಗೌರವಾಧ್ಯಕ್ಷ ಪಿ.ಆರ್.ಗಂಗಾಧರ್, ಜಿಲ್ಲಾ ಜಿ.ಪಂ.ಯೋಜನಾ ನಿದರ್ೇಶಕ ಆಂಜನಪ್ಪ, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ಕುರುಬ ಜನಾಂಗದ ರಾಜ್ಯ ಸಮಿತಿ ಉಪಾಧ್ಯಕ್ಷೆ ಮಂಜುಳ ನಾಗರಾಜು, ಮಹಾನಗರಪಾಲಿಕೆ ನಾಗರಾಜು, ಎಂ.ಶಿವರಾಜು, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತುರುವೇಕೆರೆ ಕು.ಸಂಘದ ಹೆಚ್.ಕೆ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುರುಬರ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕೊಟಿಗೆಮನೆ ನ್ಯೂಸ್ನೆಟ್ನ ಸಿ.ಗುರುಮೂತರ್ಿ ಜೆ.ಡಿ.ಎಸ್.ಮುಖಂಡ ಎನ್.ಜಿ.ಶಿವಣ್ಣ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಹಶೀಲ್ದಾರ್ಗಳಾದ  ಎನ್.ಆರ್.ಉಮೇಶ್ಚಂದ್ರ, ವಿಜಯ್ಕುಮಾರ್, ನಿವೃತ್ತ ಸಹಕಾರ ಸಂಘದ ಎಸ್.ಡಿ.ಜಯಕುಮಾರ್, ಸಿ.ಪಿ.ಐ ಕೆ.ಪ್ರಭಾಕರ್ ಮುಂತಾದವರು ಉಪಸ್ಥಿತರಿರುವರು.

ುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ
ಚಿಕ್ಕನಾಯಕನಹಳ್ಳಿ,ನ.22 : ಪಟ್ಟಣದ ಪುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ ಅಧಿಕಾರ ವಹಿಸಿದ್ದಾರೆ.
ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪರವರು ವಗರ್ಾವಣೆಗೊಂಡಿದ್ದು ಅವರ ಸ್ಥಾನಕ್ಕೆ ಟಿ.ಆರ್.ವೆಂಕಟೇಶಶೆಟ್ಟಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ, ಇವರು ಈ ಹಿಂದೆ ತುರುವೇಕೆರೆ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ವೇದಿಕೆ ಧೈರ್ಯ ತುಂಬಿದರೆ ಉತ್ತಮ : ಸಿ.ಬಿ.ಎಲ್ 
ಚಿಕ್ಕನಾಯಕನಹಳ್ಳಿ,ನ.22 :  ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವೇದಿಕೆಯ ಧೈರ್ಯ ತುಂಬಿದರೆ ಮುಂದೆ ಉನ್ನತ ಸ್ಥಾನಗಳನ್ನು ಏರಿದಾಗ ಅವರಿಗೆ ಈ ವೇದಿಕೆ ಉತ್ತಮ ದಾರಿಯಾಗಿ ರೂಪುಗೊಳ್ಳುತ್ತದೆ ಎಂದು ಪತ್ರಕರ್ತ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳು  ದೇಶದ ಆಸ್ತಿ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸಬೇಕು. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದ ಅವರು ತಾಲ್ಲೂಕು ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟಕ್ಕೆ ಸ್ಪಧರ್ೆಸಿ ತಾಲ್ಲೂಕಿಗೆ ಕೀತರ್ಿ ತರಲೇಂದು ಆಶಿಸಿದರು.
ಪುರಸಭಾ ಅಧ್ಯಕ್ಷರಾದ ದೊರೆಮುದ್ದಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ  ಪ್ರತಿಭೆಯು ಮಕ್ಕಳ ವಿಕಾಸಕ್ಕೆ ಪೂರಕವಾದ ವೇದಿಕೆಯಾಗಿದೆ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಉಜ್ವಲವಾಗಿ ಬೆಳೆಯಲಿ ಎಂದು ಹೇಳಿದರು. 
  ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್ ಮಾತನಾಡಿ  ಸಕರ್ಾರ ಶಿಕ್ಷಣಕ್ಕಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಕಾರ್ಯಕ್ರಮಗಳು ಪ್ರಯೋಜನವಾಗುತ್ತಿಲ್ಲ, ಮಕ್ಕಳು ಇಂತಹ ಪ್ರತಿಭಾ ಕಾರಂಜಿಯ ಮೂಲಕ ಪಠ್ಯವನ್ನು ಆಧರಿಸಿಕೊಂಡು ಕಲಾತ್ಮಕತೆಯನ್ನು ಬೆಳೆಸಿಕೊಳ್ಳಲು ಹಾಗೂ ಅವರ ಪ್ರತಿಭೆಯ ಹೊರಹೊಮ್ಮಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
 ವೇದಿಕೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ,  ಸಿ.ಆರ್.ಪಿ.ದುರ್ಗಯ್ಯ ಶಾಲಾ ಮುಖ್ಯೋಪಾಧ್ಯಾಯಿನಿ  ಚೇತನ, ಮುಂತಾದವರು ಉಪಸ್ಥಿತರದ್ದರು.
ಸಮಾರಂಭದಲ್ಲಿ  ಮಲ್ಲಿಕಾಜರ್ುನ್ ಪ್ರಾಥರ್ಿಸಿ, ದುರ್ಗಯ್ಯ ಸ್ವಾಗತಿಸಿದರೆ ವಿಜಯ್ಕುಮಾರ್ ನಿರೂಪಿಸಿ ಪಾಂಡುರಂಗಯ್ಯ ವಂದಿಸಿದರು.  


No comments:

Post a Comment