Saturday, November 26, 2011



ತಾಲ್ಲೂಕಿನ ಸಾಹಿತಿಗಳ ನೇತೃತ್ವದಲ್ಲಿ ಬಾಳಠಾಕ್ರೆರ ಅವಹೇಳನಕಾರಿ ಹೇಳಿಕೆಯ ವಿರುದ್ದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.26 : ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರಕಂಬಾರರ ವಿರುದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ಬಾಳಠಾಕ್ರೆ ನೀಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ದ ಹಾಗೂ ಬೆಳಗಾವಿ ಮಹಾನಗರಪಾಲಿಕೆಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಕನ್ನಡಭಿಮಾನಿಗಳಿಂದ ಸೋಮವಾರ 28ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯು ಕನ್ನಡ ಸಂಘ ವೇದಿಕೆಯಿಂದ ಮದ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಆರ್.ಬಸವರಾಜು, ಕನರ್ಾಟಕ ರಕ್ಷಣಾ ವೇದಿಕೆ, ಕನ್ನಡ ಸಂಘ, ವಿದ್ಯಾಥರ್ಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನವಂಬರ್ ಒಂದರಂದು ಕನ್ನಡ ನಾಡಿನ ಆರುಕೋಟಿ ಕನ್ನಡಿಗರು ಅತ್ಯಂತ ವೈಭವಯುತವಾಗಿ ಕನರ್ಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದರೆ ನಮ್ಮ ನಾಡಿನ ಭಾಗವೇ ಆದ ಬೆಳಗಾವಿ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ರವರು ಕರಾಳದಿನವನ್ನು ಆಚರಿಸಿ ಕನ್ನಡಾಂಬೆಗೆ ದ್ರೋಹವೆಸಗಿದ್ದು ಇವುಗಳನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.


No comments:

Post a Comment