Wednesday, December 7, 2011


ಹನುಮಜಯಂತಿ ಪ್ರಯುಕ್ತ ವಿಶೇಷ ಅಲಂಕಾರ 
ಚಿಕ್ಕನಾಯಕನಹಳ್ಳಿ,ಡಿ.07  : ಹನುಮಜಯಂತಿ ಪ್ರಯುಕ್ತ  ಪಟ್ಟಣದ ಶ್ರೀ ಬಲಮುರಿ ಗಣಪತಿ, ಶ್ರೀ ಯೋಗಾಂಜನೇಯಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಇದೇ 8ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8ಕ್ಕೆ ಸ್ವಾಮಿಯವರಿಗೆ ಅಭಿಷೇಕ, ಹಾಗೂ ಮದ್ಯಾಹ್ನ 12ಕ್ಕೆ ಸ್ವಾಮಿಯವರಿಗೆ ಬೆಳ್ಳಿ ಕಿರೀಟ ಧಾರಣೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯೋಗಾಂಜನೇಯ ಸಮಿತಿ ತಿಳಿಸಿದೆ.
ಶ್ಯಾವಿಗೆಹಳ್ಳಿಯಲ್ಲಿ ಹನುಮಜಯಂತಿ :  ಕಸಾಬಾ ಹೋಬಳಿ ಶ್ಯಾವಿಗೆಹಳ್ಳಿಯಲ್ಲೂ ಸಹ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಜಿ.ತಿಮ್ಮಯ್ಯ ತಿಳಿಸಿದ್ದಾರೆ.


No comments:

Post a Comment