Monday, December 5, 2011


ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು
ಚಿಕ್ಕನಾಯಕನಹಳ್ಳಿ,ಡಿ.05 : 2011-12ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಇದೇ 8ರ ಗುರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಜಿ.ಪಂ.ಸದಸ್ಯರಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತೀಮ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ



ಚಿಕ್ಕನಾಯಕನಹಳ್ಳಿ,ಡಿ.05 : ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಇದೇ 8ರಿಂದ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಲೋಕೇಶ್ ತಿಳಿಸಿದ್ದಾರೆ.

ಮಡಿವಾಳ ಸಮಾಜದವರು ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ
ಚಿಕ್ಕನಾಯಕನಹಳ್ಳಿ,ಡಿ.05 : ಮಡಿವಾಳ ಜನಾಂಗದವರು ತಮ್ಮ ಉಪಜಾತಿಗಳನ್ನು ನಮೂದಿಸದೆ ಎಲ್ಲರೂ ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ ಮಡಿವಾಳ ಸಮಾಜದ ಮುಖಂಡ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರ ಸೂಚನೆಯಂತೆ ಸಮಾಜದ ಎಲ್ಲಾ ಭಾಂದವರು ಜಾತಿಗಣತಿಯ ಸಂದರ್ಭದಲ್ಲಿ ಸ್ಪಷ್ಟವಾಗಿ ಮಡಿವಾಳ ಎಂದೇ ನಮೂದಿಸುವಂತೆ ಕೋರಲಾಗಿದೆ.

No comments:

Post a Comment