Wednesday, March 28, 2012


ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಮಾ.28 : ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆ ಏರ್ಪಡಿಸುವ ಬಗ್ಗೆ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಸಮಸ್ತ ಕಾಂಗ್ರೆಸ್ ಮುಖಂಡರುಗಳ ಮತ್ತು ಕಾರ್ಯಕರ್ತರುಗಳ ಪೂರ್ವಭಾವಿ ಸಭೆಯನ್ನು ಇದೇ 29ರ ಗುರವಾರ ಸಂಜೆ 4ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ ಎಂದು ಚಿನಾಹಳ್ಳಿ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏಪ್ರಿಲ್ 10ರ ಮಂಗಳವಾರ ಸಂಜೆ 4ಗಂಟೆಗೆ ನಡೆಯಲಿರುವ ಚಿನಾಹಳ್ಳಿ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಮತ್ತು ಇತರ ನಾಯಕರುಗಳು, ಭಾಗವಹಿಸಲಿರುವ ಸಭೆಯ ರೂಪು ರೇಷೆಗಳನ್ನು ಚಚರ್ಿಸಿ ನಿರ್ಧರಿಸಲಾಗುವುದು. ಈ ಸಭೆಯು ಅಚ್ಚುಕಟ್ಟಾಗಿ ರೂಪಿಸಲು ಕಾರ್ಯಕರ್ತರು ಮತ್ತು ಮುಖಂಡರುಗಳು ಈ ಪೂರ್ವಭಾವಿ ಸಭೆಯಲ್ಲಿ  ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

ವಿದ್ಯುತ್ ವ್ಯತ್ಯಯ
ಚಿಕ್ಕನಾಯಕಹಳ್ಳಿ,ಮಾ.28 : ತಾಲ್ಲೂಕಿನ ಉಪವಿಭಾಗದ ತಿಮ್ಮನಹಳ್ಳಿ 110/11 ಕೆ.ವಿ ಉಪಕೇಂದ್ರದಲ್ಲಿ ಮತ್ತು ಹಂದನಕೆರೆ 110/11 ಕೆ.ವಿ ಉಪಕೇಂದ್ರದಲ್ಲಿ ಇದೇ ಮಾಚರ್್ 30 ಮತ್ತು 31ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ತುತರ್ು ನಿರ್ವಹಣಾ ಕಾರ್ಯವಿರುವುದರಿಂದ, ಈ ಎರಡೂ ಉಪಕೇಂದ್ರಗಳಿಂದ ಪೂರಕವಾಗುತ್ತಿರುವ 11.ಕೆ.ವಿ ಮಾರ್ಗಗಳಿಗೆ ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವಾಗಿದ್ದು ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಬೆವಿಕಂ. ಸಹಾಯಕ ಕಾರ್ಯನಿವರ್ಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:

Post a Comment