Wednesday, June 5, 2013



ಶಿಲ್ಪಕಲೆಯ ಮೂಲಕ  ಜಿಲ್ಲಾ ಸಮ್ಮೇಳನಕ್ಕೆ ಮೆರಗು: ಸೋ.ಮು.ಭಾಸ್ಕರಾಚಾರ್ 

ಚಿಕ್ಕನಾಯಕನಹಳ್ಳಿ,ಜೂ.05 : ಕಲೆ, ಶಿಲ್ಪಕಲೆಯ ಬಗ್ಗೆ ಯುವಜನತೆ ಆಸಕ್ತಿ ಮೂಡಿಸಲು ಏರ್ಪಡಿಸಿರುವ ಚಿತ್ರಕಲಾ ಶಿಬಿರವು ಕಲಾವಿದರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್  ಎಂದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುಂಚಾಂಕುರ ಕಲಾ ಸಂಘ, ಹೊಯ್ಸಳ ಶಿಲ್ಪ ಕೇಂದ್ರ, ಜಕಣಾ ಶಿಲ್ಪ ಗುರು ಕುಲಾ ಹಾಗೂ ವಾಣಿ ಚಿತ್ರಕಲಾ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಿಂದ 15ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಚಿತ್ರಕಲಾ ಹಾಗೂ ಶಿಲ್ಪಕಲಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತ ಶಿಲ್ಪಕಲೆ, ಸಂಸ್ಕೃತಿಗಾಗಿ ವಿಶೇಷ ಉತ್ತೇಜನ ನೀಡುತ್ತಿದೆ, ಅನಾದಿಕಾಲದಿಂದಲೂ ನಮ್ಮ ರಾಜ ಮಹರಾಜರು ಶಿಲ್ಪಕಲೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಫಲವಾಗಿ ಬೇಲೂರು, ಹಳೆಬೀಡು, ಅಜಂತ, ಎಲ್ಲೋರ, ಪಟ್ಟದಕಲ್ಲು, ಐಹೊಳೆಯು ಜಗದ್ ವಿಖ್ಯಾತವಾಗಿವೆ. ನಮ್ಮ ಪೂರ್ವಜರು ಅತ್ಯಂತ ಬುದ್ದಿವಂತರು ಎಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿಯಾಗಿದೆ, ಕಲೆ ನಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ, ಕಲೆಯನ್ನು ಸೃಷ್ಠಿ ಮಾಡುವ ಕಲಾವಿದ ಸರ್ವ ಶ್ರೇಷ್ಠವಾದವನು ಕಲಾವಿದರು ಜಾತ್ಯಾತೀತ ಪಕ್ಷಾತೀತವಾಗಿ ಬೆಳೆಯುತ್ತಿದ್ದಾರೆ, ಶಿಲ್ಪಕಲೆ ಮಾನವನ ಬದುಕಿನ ಸಾರ್ಥಕತೆಗೆ ದಾರಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಕನ್ನಡ ಸಮ್ಮೇಳನದ ಯಶಸ್ವಿಗೆ ಎಲ್ಲರೂ ದುಡಿಯಬೇಕು, ನಮ್ಮಲ್ಲಿನ ಯುವ ಪ್ರತಿಭೆಗಳು ಧಾಮರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಡಿನ ಉತ್ತಮ ಸಂದೇಶ ನೀಡುವಂತಾಗಬೇಕಿದೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜಾನಪದ ಕಲಾ ತಂಡಗಳು ಸಂಘ ಸಂಸ್ಥೆಗಳು ತೊಡಿಸಿಕೊಂಡಾಗ ಮಾತ್ರ ತಾಲ್ಲೂಕಿನಲ್ಲಿ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ ಇದಕ್ಕೆ ನಾನು ತಮ್ಮ ಜೊತೆಯಲ್ಲಿದ್ದು ಸಮ್ಮೇಳನದ ಯಶಸ್ವಿಗಾಗಿ ದುಡಿಯುವುದಾಗಿ ತಿಳಿಸಿದರು. 
 ಮೂರು ದಿನ ನಡೆಯುವ ಸಮ್ಮೇಳನದ ಗೋಷ್ಠಿಗಳು ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಸಮ್ಮೇಳನದಲ್ಲಿ ನಡಯುವ ಗೋಷ್ಠಿಗಳು ನಾಡಿಗೆ ಉತ್ತಮ ಸಂದೇಶ ನೀಡುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯರಾದ ರಂಗಸ್ವಾಮಯ್ಯ, ಅಶೋಕ್, ಬಿ.ಇ.ಓ ಸಾ.ಚಿ.ನಾಗೇಶ್, ಸಿಡಿಪಿಓ ಅನೀಸ್ಖೈಸರ್, ತಾ.ಕಸಾಪ ಅಧ್ಯಕ್ಷ ರವಿಕುಮಾರ್,  ಪರಶಿವಮೂತರ್ಿ, ರಾಜಶೇಖರ್, ಸಿದ್ದು ಜಿ.ಕೆರೆ, ಸಿ.ಹೆಚ್.ಗಂಗಾಧರ್, ಶಿಲ್ಪಿವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ



ಚಿಕ್ಕನಾಯಕನಹಳ್ಳಿ,ಜೂ.05 : ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ, ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭವು ಜೂನ್ 19ರಿಂದ 21ರವರೆಗೆ ನಡೆಯಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣರ್ೋದ್ದಾರ ಸಮಿತಿಯ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಂಜನೇಯಸ್ವಾಮಿ ದೇವಾಲಯದ ರಾಜೋಗೋಪುರಕ್ಕೆ 45ಲಕ್ಷರೂಗಳ ವೆಚ್ಚದಲ್ಲಿ ನಿಮರ್ಿಸಲಾಗಿದೆ. ಜೂನ್ 19ರಂದು ಮಹಾಗಣಪತಿ ಪೂಜೆ, ಯಾಗಶಾಲಾ ಪ್ರವೇಶ, 20ರಂದು ದೀಪಾರಾಧನೆ, ವೇದಪಾರಾಯಣ, ಗೋಪುರಶುದ್ದಿ, ಕಳಸಸ್ಥಾಪನೆ, ಮಹಾಗಣಪತಿ ಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ ನಡೆಯಲಿವೆ.  21ರಂದು ಗೋಪುರ ದೇವತಾಪೂಜೆ, ಪ್ರಾಣಪ್ರತಿಷ್ಠೆ, ಮಹಾಪೂಜೆ, ಕಳಸದರ್ಶನ ಹಾಗೂ 8ಗಂಟೆಗೆ ವೇದಪಾರಾಯಣ, ಪ್ರತಿಷ್ಠಾಂಗ ಹೋಮಾದಿಗಳು, ಮಹಾಪೂಣರ್ಾಹುತಿ, ಗೋಪೂಜೆ ನಡೆಯಲಿದ್ದು ಮಧ್ಯಾಹ್ನ 12ಗಂಟೆಗೆ ಕಳಸ ಪ್ರತಿಷ್ಠಾ ಮಹಾ ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಲಿದೆ ಎಂದು ತಿಳಿಸಿದರು.
ಈ ಸಮಾರಂಭಕ್ಕೆ ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದಸ್ವಾಮಿಜಿ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿ.ಪಂ.ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ, ಮಾಜಿ ಶಾಸಕರುಗಳಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಮಠಾಧೀಶರು,  ಜಿ.ಪಂ. ತಾ.ಪಂ, ಪುರಸಭಾ ಸದಸ್ಯರು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ದೇವಾಲಯದ ಕನ್ವಿನರ್ ಚಂದ್ರಶೇಖರ್ಶೆಟ್ಟರು, ಸಾಹಿತಿ ಎಂ.ವಿ.ನಾಗರಾಜ್ರಾವ್, ಪ್ರಚಾರ ಸಮಿತಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಡಿವಿಪಿ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಪುರಸಭಾ ಸದಸ್ಯರದ ರಂಗಸ್ವಾಮಯ್ಯ, ಅಶೋಕ್, ಸಿ.ಆರ್.ತಿಮ್ಮಪ್ಪ, ರವಿಚಂದ್ರ, ಸಿ.ಕೆ.ಕೃಷ್ಣಮೂತರ್ಿ, ಮಾಳಿಗೆಹಳ್ಳಿ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ತಾ.ಪ.ಅಧ್ಯಕ್ಷರಾಗಿ ಕೆ.ಜೆ.ಪಿ.ಯ ಶಶಿಧರ್, ಉಪಾಧ್ಯಕ್ಷರಾಗಿ ಬಿ.ಜೆ.ಪಿ.ಯ ಎ.ಬಿ.ರಮೇಶ್ಕುಮಾರ್ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜೂ.05 : ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಚ್.ಆರ್. ಶಶಿಧರ್ ಹೊನ್ನೆಬಾಗಿ ಹಾಗೂ ಉಪಾಧ್ಯಕ್ಷರಾಗಿ ಎ.ಬಿ.ರಮೇಶ್ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಿದ್ದು ಜೆಡಿಎಸ್7 ಸದಸ್ಯರು, ಜೆ.ಡಿ.ಯುನಿಂದ ಗೆದ್ದಿದ್ದ ಸದಸ್ಯರೆಲ್ಲಾ ಒಟ್ಟಿಗೆ ಕೆ.ಜೆ.ಪಿ.ಸೇರಿದ್ದರಿಂದ 6ಜನ ಸದಸ್ಯರು ಈಗ ಕೆ.ಜೆ.ಪಿಯಲ್ಲಿದ್ದಾರೆ,  ಬಿಜೆಪಿಯಿಂದ  6ಸದಸ್ಯರು ಗೆದ್ದಿದ್ದರು. 
ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ಒಪ್ಪಂದದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ, ಒಪ್ಪಂದಂತೆ ಬಿ.ಜೆ.ಪಿ. ಉಪಾಧ್ಯಕ್ಷ ಪದವಿಯನ್ನು ಸ್ವೀಕರಿಸಿ, ಕೆ.ಜೆ.ಪಿ.ಗೆ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಟ್ಟಿದೆ. 
ನೂತನ ತಾ.ಪಂ.ಅಧ್ಯಕ್ಷ ಶಶಿಧರ್ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಆಡಳಿತದ ಮೊದಲ ಆದ್ಯತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿದ್ದು,  ತಾಲ್ಲೂಕಿನಲ್ಲಿ ಪಡಿತರ ಚೀಟಿಯ ಸಮಸ್ಯೆಯನ್ನು  ಸರಿಪಡಿಸಲು ಗ್ರಾಮ ಪಂಚಾಯ್ತಿಗಳ ಪಿಡಿಓ, ಕಾರ್ಯದಶರ್ಿಗಳ ಸಭೆ ಕರೆದು ಸಾರ್ವಜನರಿಗೆ ಪಡಿತರ ಚೀಟಿ ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ, ಅಲ್ಲದೆ ತಾಲ್ಲೂಕು ಕಛೇರಿಯಲ್ಲಿ ಸಾಮಾನ್ಯ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ನಿಂದ ಆಗುತ್ತಿರುವ ತೊಂದರೆಯೂ ಸೇರಿದಂತೆ  ತಾಲೂಕಿನ ಸಮಸ್ಯೆಗಳನ್ನೆಲ್ಲ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕು ಪಂಚಾಯಿತಿ ಆಡಳಿತ ನಡೆಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷ ರಮೇಶ್ಕುಮಾರ್ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರೆಲ್ಲರಿಗೂ ಅಭಿನಂದನೆ ತಿಳಿಸಿದ ಅವರು ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತೇವೆ, ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಉತ್ತಮ ಆಡಳಿತ ನಡೆಸುತ್ತೇವೆ ಎಂದರು. 
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಕೆಂಕೆರೆ ನವೀನ್, ವಸಂತಕುಮಾರ್, ಹೊಸಳ್ಳಿ ಜಯಣ್ಣ ಸೇರಿದಂತೆ ತಾ.ಪಂ.ಸದಸ್ಯರು ಹಾಜರಿದ್ದರು.

No comments:

Post a Comment