raveeshpiksp@gmail.com
ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಈ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು ೧. ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ ೨. ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ ೩. ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ ೪.ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ ೫. ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ ೬. ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ ೭. ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ ೮. ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ ೯. ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಈ ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ಈ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ವ ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ
ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಈ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು ೧. ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ ೨. ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ ೩. ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ ೪.ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ ೫. ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ ೬. ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ ೭. ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ ೮. ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ ೯. ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಈ ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ಈ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ವ ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ
No comments:
Post a Comment