Wednesday, March 18, 2015


ಚಿಕ್ಕನಾಯಕನಹಳ್ಳಿ :ಕೆ.ಬಿ.ಕ್ರಾಸ್ ಕಡೆಯಿಂದ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ

ಚಿಕ್ಕನಾಯಕನಹಳ್ಳಿ : ಕೆ.ಬಿ.ಕ್ರಾಸ್ ಕಡೆಯಿಂದ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಿನಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಲಾರಿ ಚಾಲಕ ಸೇರಿದಂತೆ ನಾಲ್ಕು ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಗಾಯಗೊಂಡ ಅಂಕನಬಾವಿ ಪುಟ್ಟನಾಯ್ಕ(24) ಹುಳಿಯಾರು ಬಳ್ಳೆಕಟ್ಟೆ ಗ್ರಾಮದ ಪ್ರದೀಪ (18), ವೆಂಕಟೇಶ (29) ಚಂದ್ರಯ್ಯ(46) ಇವರನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಟೋ 
ಚಿಕ್ಕನಾಯಕನಹಳ್ಳಿ ಮೂಲಕ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. 



No comments:

Post a Comment