Friday, May 27, 2016


ಶಾಲೆಗಳಿಗೆ ಪಠ್ಯಪುಸ್ತಕ ಕೊಂಡೊಯ್ದ ಶಿಕ್ಷಕರು
ಚಿಕ್ಕನಾಯಕನಹಳ್ಳಿ,ಮೇ.27 : 2016-17ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಅಧಿಕೃತವಾಗಿ ಶನಿವಾರ ಪ್ರಾರಂಭವಾಗುತ್ತಿದ್ದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ಶಿಕ್ಷಕರು ತಮ್ಮ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಕೊಂಡೊಯ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಮಾತನಾಡಿ,ಶಿಕ್ಷಕರು ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳ ಸ್ವಾಗತಕ್ಕೆ ಅಣಿಗೊಳಿಸಿಕೊಳ್ಳಬೇಕು.ಪಠ್ಯಪುಸ್ತಕ ಹಾಗೂ ಸಮವಸ್ತ್ರ ವನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ.ವಿದ್ಯಾಥರ್ಿಗಳು ದಾಖಲಾದ ತಕ್ಷಣ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲು ಸೂಚಿಸಲಾಗಿದೆ ಎಂದರು.
  ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಈಗಾಗಲೇ ಶಾಲಾ ದಾಖಲಾತಿ ಆಂದೋಲನವನ್ನು ತಾಲ್ಲೂಕಿನಾದ್ಯಂತ ನಡೆಸಲಾಗಿದೆ. ಬೇಸಿಗೆಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ ಎಂದರು.
 ಹುಳಿಯಾರು ಹೋಬಳಿ ಸಮನ್ವಯಾಧಿಕಾರಿ ಶಾಂತಪ್ಪ ಮಾತನಾಡಿ,ಈಗಾಗಲೇ ಶೇ.95ಭಾಗ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ.ಸಕರ್ಾರಿ ಶಾಲೆಗಳಿಗೆ ಈಗಾಗಲೆ ಪುಸ್ತಕಗಳು ತಲುಪಿದ್ದು, ಅನುದಾನಿತ ಶಾಲೆಗಳಿಗೆ ಇಂದು ವಿತರಿಸಲಾಗುತ್ತಿದೆ ಎಂದರು.
ಉದರ್ು ಪಠ್ಯಪುಸ್ತಕಗಳ ಕೊರತೆ : ಐದನೇ ತರಗತಿಯ ಕೋಸರ್್-1, ಉದರ್ು ಮಾಧ್ಯಮದ 6ನೇ ತರಗತಿಯ ಇಂಗ್ಲೀಷ್ ಮಾಧ್ಯಮದ ಕೋಸರ್್-2, ಉದರ್ು ಪ್ರಥಮ ಭಾಷೆ, 9ನೇ ತರಗತಿಯ ಉದರ್ು ಪ್ರಥಮ ಭಾಷೆ, ಗಣಿತ, ವಿಜ್ಞಾನ, ಸಮಾಜವಿಜ್ಞಾನ ಹಾಗೂ 10ನೇ ತರಗತಿ ಆಂಗ್ಲ ಭಾಷೆ ಗಣಿತ ಮತ್ತು ವಿಜ್ಞಾನ ಪುಸ್ತಕಗಳು ಸರಬರಾಜಾಗಿಲ್ಲ ಎಂದು ವಿವರ ನೀಡಿದರು.

ಕಾಳಿದಾಸ ಪತ್ತಿನ ಸಹಕಾರ ಸಂಘದ ಆಡಳಿತ ರದ್ದಿಗೆ ಹೈಕೋಟರ್್ ತಡೆಯಾಜ್ಞೆ
ಚಿಕ್ಕನಾಯಕನಹಳ್ಳಿ:,ಮೇ.27 :  ಪಟ್ಟಣದ ಕಾಳಿದಾಸ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ತಿಪಟೂರು ಸಹಕಾರ ಸಂಘಗಳ ಸಹಾಯಕ ನಿರ್ಭಂದಕರು ರದ್ದುಪಡಿಸಿ ಹೊರಡಿಸಿದ್ದ ಆದೇಶಕ್ಕೆ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸಂಘದ ಅಧ್ಯಕ್ಷ ಸಿ.ಪಿ.ಜಯದೇವ್ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಚರ್್ 23ರಂದು  ಸಹಕಾರ ಸಂಘಕ್ಕೆ 11 ನಿದರ್ೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಏಪ್ರಿಲ್ 10ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಪಿ.ಜಯದೇವ್ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳ ಆಯ್ಕೆಯಾಗಿದ್ದರು.
 ಏಪ್ರಿಲ್ 13ರಂದು ಸಂಘದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಎಸ್.ಭಾಸ್ಕರಪ್ಪ, ಸಿ.ಕೆ.ಮಲ್ಲಿಕಾಜರ್ುನಸ್ವಾಮಿ, ರಾಜಮ್ಮ, ಸಿ.ಹೆಚ್.ದಯಾನಂದ, ಎ.ಸೋಮಶೇಖರ್ ಇವರುಗಳು ರಾಜೀನಾಮೆ ನೀಡಿದ್ದರು. ಮಂಡಳಿ ಸದಸ್ಯರ ಸಂಖ್ಯೆ 5ಕ್ಕೆ ಕುಸಿದಿದ್ದರ ಹಿನ್ನೆಲೆಯಲ್ಲಿ ತಿಪಟೂರು ಸಹಕಾರ ಸಂಘಗಳ ಸಹಾಯಕ ನಿರ್ಭಂದಕರು ಮಂಡಳಿಯನ್ನು ಮೇ.6ರಂದು ರದ್ದುಪಡಿಸಿ ಆದೇಶ ಹೊರಡಿಸಿದ್ದರು.
ಉಳಿದ 5 ಸದಸ್ಯ ಬಲದ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಉಚ್ಛನ್ಯಾಯಾಲಯ ಮೇ.25ರಂದು ಮಂಡಳಿ ರದ್ದತಿಗೆ  ಆರು ವಾರಗಳ ತಡೆಯಾಜ್ಞೆ ಹೊರಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಕನ್ನಡ ಶಾಲೆ ಉಳಿಸಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.27 ; ಕನ್ನಡ ಶಾಲೆಗಳನ್ನು ಉಳಿಸಿ ಕಾರ್ಯಕ್ರಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅತಿ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಸಾಹಿತ್ಯ ಪರಿಷತ್ ಸಕರ್ಾರಿ ಶಾಲೆಗಳ ದಾಖಲಾತಿ ಆಂದೋಲನದಲ್ಲಿ ಭಾಗಿಯಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಎನ್.ಇಂದಿರಮ್ಮ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿಗೆ 'ಕನ್ನಡ ಶಾಲೆಗಳನ್ನು ಉಳಿಸಿ' ಕರಪತ್ರ ಹಸ್ತಾಂತರಿಸಿ ಮಾತನಾಡಿದರು.
  ಕ್ಷೇತ್ರ ಶಿಕ್ಷಣಾಧಿಕಾರಿ ಕೃಷಮೂತರ್ಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಆಂದೋಲನ ಸಹಕಾರಿಯಾಗಲಿದೆ. ತಾಲ್ಲೂಕು ಕಸಾಪ ಘಟಕ ದಾಖಲಾತಿ ಆಂದೋಲನಕ್ಕೆ ಕೈಜೋಡಿಸಿರುವುದು ಸಂತಸದ ವಿಚಾರ ಎಂದರು.
 ತಾಲ್ಲೂಕಿನ ಹಂದನಕೆರೆ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹಂದನಕೆರೆ ಹೋಬಳಿ ಘಟಕ: ಅಧ್ಯಕ್ಷ ಎಚ್.ಅನಂತಯ್ಯ, ಕಾರ್ಯದಶರ್ಿಗಳು  ಎ.ಸೋಮಶೇಖರಯ್ಯ, ಆರ್.ಶಿವಣ್ಣ. ಖಜಾಂಚಿ : ಲಕ್ಷ್ಮೀಕಾಂತರಾಜು. ಮಹಿಳಾ ಪ್ರತಿನಿಧಿ : ಗೌರಮ್ಮ. ಇಲಾಖೆಗಳ ಪ್ರತಿನಿಧಿ ಎನ್.ಪಿ.ಕುಮಾರಸ್ವಾಮಿ. ಸಂಘಸಂಸ್ಥೆಗಳ ಪ್ರತಿನಿಧಿ : ಎಚ್.:ಹನುಮಂತಯ್ಯ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಪ್ರತಿನಿಧಿ :ಎಚ್.ದುರ್ಗಯ್ಯ. ಸದಸ್ಯರುಗಳು: ಹೆಚ್.ಬಿ.ರಂಗನಾಥ್, ವೈ.ನಾಗರಾಜು, ಕೆ.ಯೋಗಮೂತರ್ಿ, ದೇವರಹಳ್ಳಿಶ್ರೀಧರ್, ಕೆ.ಪಿ.ಪ್ರಹ್ಲಾದ್, ಹೆಚ್.ಆರ್.ವೆಂಕಟೇಶ್. 
ಸಮಿತಿ ಸದಸ್ಯರುಗಳು: ಕನ್ನಡ ಭವನ : ಎನ್.ಭೋಜಪ್ಪ, ಸಿ.ದಾನಪ್ಪ, ಡಿ.ಕೆ.ಗಜೇಂದ್ರಕುಮಾರ್, ಸಾಹಿತ್ಯ: ಎಸ್.ಆರ್.ನಾಗರಾಜ್, ಜಿ.ಧನಂಜಯ, ಎಂ.ಆರ್.ಜಯದೇವ್, ಸಂಘಟನಾ ಸಮಿತಿ : ಎಸ್.ಸೋಮಶೇಖರಯ್ಯ, ಎಂ.ಕಾಂತರಾಜ್, ಎಚ್.ವಿ.ಸಿದ್ದಯ್ಯ, ಎಂ.ಜಯರಾಂ, ಎಚ್.ಕೃಷ್ಣಪ್ಪ, ಕನ್ನಡ ಶಾಲೆ ಉಳಿಸಿ ಸಮಿತಿ : ಎನ್.ತಮ್ಮಯ್ಯ, ಎಂ.ಮಂಜುನಾಥ್, ಎಚ್.ಪಿ.ರಮೇಶ್, ಮಹಿಳಾ ಸಬಲೀಕರಣ ಸಮಿತಿ : ರೇಣುಕಮ್ಮ, ಮಂಗಳಗೌರಮ್ಮ, ಮಹಾಲಕ್ಷ್ಮಮ್ಮ, ಲಕ್ಕಮ್ಮ ಆಯ್ಕೆಯಾಗಿದ್ದಾರೆ. 

ಮಳೆಗಾಗಿ ಮುಸ್ಲಿಂ ಬಾಂಧವರ ಪ್ರಾರ್ಥನೆ
ಚಿಕ್ಕನಾಯಕನಹಳ್ಳಿ,ಮೇ.27 : ಭೂಮಿ ತಂಪಾಗಿ ಸಕಲ ಜೀವರಾಶಿಗಳಿಗೂ ನೀರನ್ನು ಒದಗಿಸುವ ಮಳೆಯು ಅತ್ಯವಶ್ಯಕವಾಗಿದ್ದು ಮಳೆರಾಯನ ಆಗಮನಕ್ಕಾಗಿ ಪಟ್ಟಣದ ಮುಸ್ಲಿಂ ಬಾಂಧವರು ಪಟ್ಟಣದ ಕೆರೆಯ ಅಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಕೆರೆಯ ಅಂಗಳದಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯ ಮಸೀದಿಯ ಗುರುಗಳಾದ ಮುಜಾವಿದ್ ಆಲಂ, ಎಲ್ಲ ಜೀವಿಗಳಿಗೂ ನೀರು ಅಗತ್ಯವಾಗಿ ಬೇಕಾಗಿದ್ದು ಈ ಬಾರಿ ಮಳೆಯು ಇದುವರೆಗೆ ಬಾರದ ಕಾರಣ ನಾವೆಲ್ಲರೂ ಸಾಮೂಹಿಕವಾಗಿ ದೇವರನ್ನು ಪ್ರಾಥರ್ಿಸುತ್ತಿದ್ದು ಇನ್ನುಮಂದಾದರು ಆ ದೇವರು ಸಕಾಲದಲ್ಲಿ ಮಳೆಯನ್ನು ಕರುಣಿಸಲಿ ಎಂದರು.
ಪುರಸಭಾಸದಸ್ಯ ಖಲಂದರ್ ಸಾಬ್ ಮಾತನಾಡಿ, ಮಳೆಯು ಕೇವಲ ರೈತರಿಗಷ್ಟೇ ಬೇಕಾಗಿಲ್ಲ, ಎಲ್ಲರಿಗೂ ನೀರಿನ ಅವಶ್ಯಕತೆ ಇದ್ದು ಇಂತಹ ನೀರನ್ನು ನೀಡುವ ಮಳೆ ಈ ಬಾರಿ ಕೈಕೊಟ್ಟಿದೆ ಅದ್ದರಿಂದ ನಾವೆಲ್ಲ ಮುಸ್ಲೀಂರು ಸೇರಿ ನಮ್ಮ ದೇವರನ್ನು ಪ್ರಾಥರ್ಿಸುತ್ತಿದ್ದೇವೆ ಈಗಾಗಲೇ ಬೋರ್ವೆಲ್ಗಳಲ್ಲಿ ಸಾವಿರ ಅಡಿಗಳಷ್ಟು ಆಳಕ್ಕೆ ನೀರು ಹೋಗಿದ್ದು ಅಂತರ್ಜಲ ಬತ್ತಿದೆ ಈಗಿನ ವಾತವರಣವೇ ಮುಂದುವರೆದರೆ ಮುಂದೆ ಭಿಕರ ಬರಗಾಲವನ್ನು ಎದುರಿಸಬೇಕಾಗುತ್ತದೆ ಅದ್ದರಿಂದ ಆದೇವರು ಮಳೆಯನ್ನು ನೀಡಲೀ ಎಂದು ಪ್ರಾಥರ್ಿಸಿದರು.
ಪ್ರಾರ್ಥನೆಯ ವೇಳೆ ಜಾಮೀಯ ಮಸೀದಿಯ ಅಧ್ಯಕ್ಷ ಆಲಂಸಾಬ್, ಕಾರ್ಯದಶರ್ಿ ಜಹೀರ್ಅಹಮದ್ ಸೇರಿದಂತೆ ಪಟ್ಟಣದ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಒಣ ಹುಲ್ಲಿನ ಬಣವೆಗೆ ಬೆಂಕಿ
ಚಿಕ್ಕನಾಯಕನಹಳ್ಳಿ,ಮೇ.27 : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ನಾಗೇನಹಳ್ಳಿಯ ರೈತ ಜಗದೀಶ್ ಎಂಬುವವರ ಒಣ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಠವಾಗಿದೆ.
ಸುಮಾರು 2ಟ್ರಾಕ್ಟರ್ನಷ್ಟು ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಪಕ್ಕದಲ್ಲಿದ್ದ ಒಂದು ಹುಣಸೆ ಮರ, ಒಂದು ತಪಸ್ವಿ ಮರ ಸುಟ್ಟು ಹೋಗಿದ್ದು ಸುಮಾರು ರೂ.25ಸಾವಿರ ನಷ್ಠ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment