Wednesday, February 20, 2013

ಸುಂಟರಮಳೆ ಸಿದ್ದರಾಮೇಶ್ವರ ದೇವಾಲಯ ಪ್ರವೇಶಕ್ಕೆ                  ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಫೆ.19 : ಸುಂಟರಮೆಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ಜೀಣರ್ೋದ್ಧಾರ ನೂತನ ದೇವಾಲಯ ಪ್ರವೇಶ, ಪುನರ್ ಪ್ರಾಣ ಪ್ರತಿಷ್ಠಾನಪನಾ, ಹಾಗೂ ನೂತನ ಶಿಖರ ಕಳಶಾರೋಹಣವನ್ನು ಇದೇ 21, 22ರ ಗುರವಾರ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    21ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ, ಹೆಂಜಾರು ಭೈರವೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮದೇವಿಯವರ ಆಗಮನದೊಂದಿಗೆ ದೇವಾಲಯದ ಪ್ರಮೇಶ ನಡೆಯಲಿದೆ.
    22ರಂದು ನಡೆಯುವ ಧಾಮರ್ಿಕ ಸಮಾರಂಭದ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಯವರು ಶಿವಾಲಯದ ಗೋಪುರಕ್ಕೆ ಕಳಶಾರೋಹಣ ನೆರವೇರಲ್ಪಡುತ್ತದೆ.
    22ರಂದು ಬೆಳಗ್ಗೆ 11ಕ್ಕೆ ನಡೆಯುವ  ಧಾಮರ್ಿಕ ಸಭೆಗೆ ಕಾಯಕಯೋಗಿ ಡಾ.ಶಿವಕುಮಾರಸ್ವಾಮಿಯವರು ಆಗಮಿಸಲಿದ್ದು,  ದೇವಾಲಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾಮಿರ್ಕ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಡೆಸಲಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು  ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ, ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶಿಕೇಂದ್ರಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಉಪಸ್ಥಿತರಿರಲಿದ್ದು,
ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ದೇವಾಲಯದ ನಿಮರ್ಾತೃ ಎಸ್.ಎಲ್.ಶಾಂತಕುಮಾರ್ರವರಿಗೆ ಸನ್ಮಾನ ನಡೆಯಲಿದೆ ಎಂದರು.
    ಈ ಸಂದರ್ಭದಲ್ಲಿ ದಾನಿ ಎಸ್.ಎಲ್.ಶಾಂತಕುಮಾರ್, ತಾ.ಪಂ.ಸದಸ್ಯ ಶಶಿಧರ್, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ ಉಪಸ್ಥಿತರಿದ್ದರು.

ಯಾವ ಪಕ್ಷಕ್ಕೆ ಸೇರಬೆಕೆಂಬ ವಿಷಯದಲ್ಲಿ  ನಮ್ಮ ಕಾರ್ಯಕರ್ತರು ನನ್ನನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಫೆ.19 : ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಮೂಲಕವೇ ಚುನಾವಣೆಗೆ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    ನವೋದಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸ ಮಾತನಾಡಿದ ಅವರು ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪದರ್ಿಸಬೇಕೆಂಬ ನಮ್ಮ ನಿಧರ್ಾರವನ್ನೇ ಕಾರ್ಯಕರ್ತರು ಗೊಂದಲ ಮಾಡಿದ್ದಾರೆ, ಕೆಲವರು ಕೆಜೆಪಿ ಪಕ್ಷದಿಂದ ಸ್ಪಧರ್ಿಸಿ ಎಂದರೆ,  ಇನ್ನು ಕೆಲವರು ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿ ಎಂಬ ನಿಲುವನ್ನು ತಿಳಿಸುತ್ತಿರುವುದರಿಂದ ಚುನಾವಣೆಗೆ ಗೊಂದಲ ಏರ್ಪಟ್ಟಿದೆ ಎಂದರು.
 ಸುಂಟರಮಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯ ನೂತನ ದೇವಾಲಯಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಗಮನದಿಂದ ಯಾವುದೇ ರಾಜಕೀಯ ಬೆಳವಣಿಗೆಯಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಂದಿಕೆರೆ ಶ್ರೀ ಗವಿಶಾಂತ ವೀರಸ್ವಾಮಿಗಳ ವೈಭವದ ಜಾತ್ರೋತ್ಸವ ಆರಂಭ
ಚಿಕ್ಕನಾಯಕನಹಳ್ಳಿ,ಫೆ.19 : ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ ಫೆಬ್ರವರಿ 18ರಿಂದ 26ರವರಗೆ ಕಂದಿಕೆರೆಯಲ್ಲಿ ನಡೆಯಲಿದೆ.
18ರಂದು ವಿಘ್ನೇಶ್ವರ ಸ್ವಾಮಿಯವರಿಗೆ ಅಭಿಷೇಕ ಪೂಜೆ, 19ರಂದು ಭಜನಾಸಪ್ತಾಹ, 20ರಂದು ನವಗ್ರಹ ಸ್ವಾಮಿಗಳಿಗೆ ಮಹಾಮಂಗಳಾರತಿ, 21ರಂದು ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, 22ರಂದು ಅಂಭಾದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ, 23ರಂದು ಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ, ಸಹಸ್ತ್ರ ನಾಮಪೂಜೆ, 24ರಂದು ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ತ್ರನಾಮಪೂಜಾ, 101ಪೂಜಾಧಿಗಳು ನಡೆಯಲಿದ್ದು 25ರಂದು ಬೆಳಗ್ಗೆ ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲಿಗಳಿಗೆ ಅಭಿಷೇಕ, ಪೂಜೆ ನಿಬೂರು ಗ್ರಾಮಸ್ಥರಿಂದ ಬೆಳಗ್ಗೆ 10ಗಂಟೆಗೆ ರಥೋತ್ಸವಕ್ಕೆ ಕಳಸ ಸ್ಥಾಪನೆ ನೆರವೇರಲಿದೆ. 
26ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಸಾಧು ಸಂತರಿಗೆ ಕವದಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ
ಚಿಕ್ಕನಾಯಕನಹಳ್ಳಿ,ಫೆ.19 : ಶ್ರೀ ಪಾರ್ವತಿ ಪ್ರಸನ್ನ ರಾಮೇಶ್ವರಸ್ವಾಮಿಯವರ ಗಿರಿಜಾ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವು ಇದೇ ಫೆಬ್ರವರಿ 23ರಿಂದ ಮಾಚರ್್ 1ರವರೆಗೆ ನಡೆಯಲಿದೆ.
23ರಂದು ಮಹಾಗಣಪತಿ ಪೂಜೆ, 24ರಂದು ಪ್ರಕಾರೋತ್ಸವ, 25ರಂದು ಮಂಟಪೋತ್ಸವ, 26ರಂದು ನಿತ್ಯಹೋಮ, ಬಲಿದಾನ, ಪ್ರಾಕಾರೋತ್ಸವ, 27ರಂದು ಅವಭೃತಸ್ನಾನ, 28ರಂದು ಅನ್ನಸಂತರ್ಪಣೆ ನಡೆಯಲಿದ್ದು 1ರಂದು ಪ್ರಸನ್ನರಾಮೇಶ್ವರಸ್ವಾಮಿಯವರಿಗೆ ವಿಭೂತಿ ಅಲಂಕಾರ, ಅರಿಶಿನ ಅಲಂಕಾರ ಹಾಗೂಸಂಜೆ 6.30ಕ್ಕೆ ಭೂಕೈಲಾಸೋತ್ಸವ ನಡೆಯಲಿದೆ.

              ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ
ಚಿಕ್ಕನಾಯಕನಹಳ್ಳಿ, :ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರತ ಕಾರಣ ವಿವಿಧ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದ ಘಟನೆ ತಾಲ್ಲೂಕಿನ ಬೆಳಗುಲಿ ರಂಗನಾಥ ಸ್ವಾಮಿ ಬೆಟ್ಟದದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಬೆಳಗುಲಿ ಬೆಟ್ಟದ ಮೇಲೆ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿಯ ದೇಗುಲಕ್ಕೆ ಈಚೆಗೆ ಭಕ್ತರ ನೆರವಿನಿಂದ ನೂತನ ಗೋಪುರ ನಿಮರ್ಾಣ ಮಾಡಲಾಗಿತ್ತು. ಈ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಕಾರ್ಯಕ್ರಮವನ್ನು ಭಾನುವಾರ ಆಲಯದವತಿ ಹಾಗೂ ಏಳುಹಳ್ಳಿಗಳ ಭಕ್ತಾದಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಭಾನವಾರ ತಾಲ್ಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳನ್ನು ಆಹ್ವಾನಿಸಲಾಗಿತ್ತು.  ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ನಾಯಕರುಗಳು ಯಾವುದೇ ಸಾರ್ವಜನಿಕ ಸಂಪರ್ಕಗಳ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇರೀತಿ ಈ ಧಾಮರ್ಿಕ ಕಾರ್ಯಕ್ರಮಕ್ಕೆ ಮೊದಲಿಗೆ ಮಾಜಿ ಶಾಸಕ ಕೆ.ಎಸ್ಕಿರಣ್ಕುಮಾರ್  ಭಾನುವಾರ ಮಧ್ಯಾಹ್ನ 1-30 ಸಮಯದಲ್ಲಿ ಆಗಮಸಿದರು. ಅವರ ಹಿಂದೆ  ಸ್ಥಳೀಯ ಹಾಗೂ ಅವರ ಜೊತೆಯಲ್ಲಿದ್ದ ಬೆಂಬಲಿಗರೂ ಸಹ ಜೊತೆಗೂಡಿ ದೇವಸ್ಥಾನದ ಕಳಸಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿ ಸ್ವಲ್ಪಸಮಯವಿದ್ದು ವಾಪಸ್ ತೆರಳಿದರು. ನಂತರ ಅರ್ಧತಾಸಿನ ನಂತರ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಸಂಗಡಿಗರೊಂದಿಗೆ  ಸಹ ಬೆಟ್ಟಕ್ಕೆ ಆಗಮಿಸಿದರು.  ಅವರು ದೇವಾಲಯಕ್ಕೆ ಆಗಮಿಸಿದಾಗ ಸ್ಥಳೀಯವಾಗಿ ಅಲ್ಲಿದ್ದ ಅವರ ಬೆಂಬಲಿಗರು ಅವರನ್ನು ಸುತ್ತುವರೆದು ಆಲಯಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕೆಲ ಅಭಿಮಾನಿಗಳು ಅವರಗೆ ಜೈಕಾರ ಹಾಕಲು ಮುಂದಾದಾಗ ಮಾಧುಸ್ವಾಮಿಯವರೇ ಅದಕ್ಕೆ ತಡೆಒಡ್ಡಿದರು. ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂತಿರುಗಿದರು. ಅವರು ಹೋದ ಸ್ವಲ್ಪ ಸಮಯಕ್ಕೆ ಹಾಲಿ ಶಾಸಕ ಸಿ.ಬಿ. ಸುರೇಶ್ಬಾಬು ಬೆಟ್ಟಕ್ಕೆ ಬರುತ್ತಿದ್ದಂತಯೇ ಅಲ್ಲಿನ ವಾತಾವರಣವೇ ಬದಲಾಗಿ ಶಾಸಕರನ್ನು ವಿವಿಧ ವಾದ್ಯ ಗೋಷ್ಠಿ ಹಾಗೂ ಪರಾಕು ಮತ್ತು ಜೈಕಾರದೊಂದಿಗೆ ದೇವಾಲಯಕ್ಕೆ ಸ್ವಾಗತಿಸಿ ಪೂಜೆ ಸಲ್ಲಿಸುವವರೆಗೂ ಅವರನ್ನು ಆದರದಿಂದ ನೋಡಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ದೇವಾಲಯದಿಂದ ಹಿಂತಿರುಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆಯಿದ್ದ ಮಾಜಿ ಶಾಸಕರುಗಳ ಬೆಂಬಲಿಗರು ಹಾಲಿ ಶಾಸಕರಿಗೆ ವಿಶೇಷ ಸ್ವಾಗತ ಕೋರಿದ ಬಗ್ಗೆ ತಗಾದೆ ತೆಗೆದರು. ಮಾತಿನ ಚಕಮಕಿ ಎರಡೂ ಕಡೆಯಲ್ಲೂ  ನಡೆದು ಅದು ಮಿತಿಮೀರಿತು. ಅತೃಪ್ತರ ಒಂದು ಗುಂಪು ವಾದ್ಯ ನುಡಿಸುತ್ತಿದ್ದವರ ಮೇಲೆ ಮುಗಿಬಿದ್ದು ನಾದಸ್ವರ , ತಮಟೆ ಹಾಗೂ ಇನ್ನಿತರ ವಾದ್ಯಗಳನ್ನು ಕಿತ್ತೆಸೆದು ಅವರ ಮೇಲೆ ಕೈ ಮಾಡಿದರು. ಈ ಮಾರಾಮರಿಯು ಹಾಲಿ ಶಾಸಕರ  ಸಮ್ಮುಖದಲ್ಲಿ ನಡೆಯಿತು. ನಂತರ ಎರಡೂ ಗುಂಪುಗಳು ಸಮಾಧಾನಪಟ್ಟರೂ ಹಲವು ಮಂದಿ ಬೆಟ್ಟದ ಕೆಳಗೆ ನಡೆದ ಧಾಮರ್ಿಕ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ವಿರಳ ಭಕ್ತಾದಿಗಳ ನಡುವೆ ಸಭೆ ಮುಗಿಯಿತು.
ಈ ಧಾಮರ್ಿಕ ಕಾರ್ಯಕ್ರಮದ ಅಂಗವಾಗಿ ಬೆಳಗುಲಿ ಗ್ರಾಮ ಹಾಗೂ ಬೆಟ್ಟದ ಸನಿಹದಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಫ್ಲೆಕ್ಸ್ಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿದ್ದವು. ಈ ನಡುವೆ ಕಳಸ ಪ್ರತಿಷ್ಠಾಪನೆಯ ಅಂಗವಾಗಿ ಗ್ರಾಮದೇವತೆಗಳನ್ನು ಉತ್ಸವದ ಮೂಲಕ ಬೆಟ್ಟಕ್ಕೆ ಬರಮಾಡಿಕೊಂಡಿದ್ದು ವಾದ್ಯದವರನ್ನು ಥಳಿಸಿದ ಹಿನ್ನಲೆಯಲ್ಲಿ ವಾದ್ಯ ಕಲಾವಿದರು ಉತ್ಸವ ಮೂತರ್ಿಯನ್ನು ವಾಪಸ್ ಕರೆತರುವ ಸಮಯದಲ್ಲಿ ವಾದ್ಯ ನುಡಿಸುವುದಿಲ್ಲ ನಮಗೆ ಅವಮಾನವಾಗಿದೆ ಎಂದು ಪಟ್ಟುಹಿಡಿದ ಕಾರಣ ಸೋಮವಾರ ಸಂಜೆಯವರೆಗೂ  ಉತ್ಸವಮೂತರ್ಿಗಳು ಬೆಟ್ಟದ ಆಲಯದಲ್ಲಿಯೇ ಉಳಿಯಬೇಕಾಯಿತು. ಸಂಜೆ ಊರಿನ ಗಣ್ಯರ ಮನವೊಲಿಕೆಯಿಂದ ಉತ್ಸವಮೂತರ್ಿಗಳನ್ನು ಆಯಾ ಊರಿಗೆ ವಾದ್ಯಗೋಷ್ಠಿಯೊಂದಿಗೆ ಬಿಡಲಾಯಿತು. ಒಟ್ಟಿನಲ್ಲಿ ಧಾಮರ್ಿಕ ಕಾರ್ಯಕ್ರಮದಲ್ಲಿ ಕೆಟ್ಟ ರಾಜಕೀಯ ನುಸುಳಿದ ಪರಿಣಾಮ ಧಾಮರ್ಿಕತೆಯು ತನ್ನ ಅರ್ಥವನ್ನು ಕಳೆದುಕೊಂಡು ಘಟನೆ ಹಾಗೇ ಉಳಿಯಿತು.
 

Saturday, February 16, 2013


                        ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ    ಯೋಜನೆಗಳನ್ನು ಜಾರಿಗೆ: ಹೆಚ್.ಡಿ.ಕೆ

ಚಿಕ್ಕನಾಯಕನಹಳ್ಳಿ,ಪೆ.16 : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
    ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಯೋಗ ಮೇಳ, ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬುರವರ 43ನೇ ವರ್ಷದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ ವಿಧವೆಯರಿಗೆ, ವಿಕಲಚೇತನರಿಗೆ ಹಾಗೂ  ಮದುವೆಯಾಗದೆ ಇರುವ ಹೆಣ್ಣುಮಕ್ಕಳಿಗೆ ಒಂದುವರೆ ಸಾವಿರ ರೂಪಾಯಿ ಮಾಸಶಾಸನ, ಗಭರ್ಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರಕ್ಕಾಗಿ ಒಂದು ವರ್ಷಗಳ ಕಾಲ ತಿಂಗಳ 5ಸಾವಿರ ರೂನಂತೆ ಭತ್ಯೆ ನೀಡುವುದಾಗಿ ತಿಳಿಸಿದರಲದಲ್ಲದೆ,  ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ಪಶುಆಹಾರ ನೀಡಲಾಗುದು ಎಂದರು.
 ತಮ್ಮ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸಕರ್ಾರ ವಿವಿಧ ಸವಲತ್ತುಗಳ 9ಲಕ್ಷಕ್ಕೂ ಹೆಚ್ಚು ಮಾಸಾಶಸನಗಳನ್ನ ನಿಲ್ಲಿಸಿದೆ ನಮ್ಮ ಸಕರ್ಾರ ಅಧಿಕಾರಕ್ಕೆ ಬಂದರೆ ಪುನಃ ಆ ಎಲ್ಲಾ ಯೋಜನೆಗಳನ್ನು  ಜಾರಿಗೆ ತರುವುದಾಗಿ ತಿಳಿಸಿದರು.
    ಕೇಂದ್ರ ಸಕರ್ಾರದ ತಪ್ಪು ಆಥರ್ಿಕ ನೀತಿಯ ಕಾರಣ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಜೀವನ ನಡೆಸಲು ತತ್ತರಿಸುತ್ತಿದ್ದಾರೆ, ಖಾಸಗಿಕರಣ, ಉದಾರೀಕರಣದ ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಠಿಸುವುದು ಅಷ್ಟೋಂದು ಕಷ್ಟದ ಕೆಲಸವಲ್ಲ, ಖಾಸಗಿ ಕಂಪನಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಎಂಟು ಸಾವಿರದಿಂದ ಹತ್ತು ಸಾವಿರ ಸಂಬಳ ದೊರೆಯುತ್ತದೆ ಎಂದರಲ್ಲದೆ, ನಗರಗಳಲ್ಲಿನ ಸಿದ್ದ ಉಡುಪು ಕಾಖರ್ಾನೆಗಳಿಗೆ ಗುಳೆ ಹೋಗದಂತೆ ತಡೆಯಲು ಹೆಣ್ಣು ಮಕ್ಕಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಕಾಖರ್ಾನೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.
    ಮಾಜಿ ಸಚಿವ ಬಂಡೆಪ್ಪಕಾಶೆಂಪೂರ್ ಮಾತನಾಡಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೂ ಜೆಡಿಎಸ್ ಪಕ್ಷಕ್ಕೆ ಜನಬೆಂಬಲ ದೊರೆತಿದ್ದು ಮುಂದಿನ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಶಾಸಕರು ಆಯ್ಕೆಯಾಗಿ ಸಕರ್ಾರ ರಚಿಸುವುದಾಗಿ ತಿಳಿಸಿದರು.
    ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿದ್ದು ರಾಜ್ಯದಲ್ಲಿಯೇ ಪ್ರಥಮ. ರಾಜ್ಯ ಹಾಗೂ ಕೇಂದ್ರ ಸಕರ್ಾರಗಳ ದುರಾಡಳಿತದಿಂದ ಅಕ್ಕಿ ಬೆಲೆ ಗಗನಕ್ಕೇರಿದೆ, ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಸಂಧ್ಯಾ ಸುರಕ್ಷಾ, ವಿಕಲಚೇತನರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಭಿವೃದ್ದಿ ಕಾರ್ಯಗಳಿಗೆ ಗಮನ ಹರಿಸಿದರು ಎಂದರು.
    ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸ್ಥಳೀಯ ಪುರಸಭಾ ಚುನಾವಣೆಯನ್ನು ಸಕರ್ಾರ ಘೋಷಿಸಿದರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ನಡೆಯಬೇಕಿದ್ದ ಉದ್ಯೋಗಮೇಳ, ಆರೋಗ್ಯತಪಾಸಣಾ ಶಿಬಿರವನ್ನು ಗೋಡೆಕೆಗೆ ಸ್ಥಳಾಂತರಿಸಲಾಯಿತು. ಇದರಿಂದ ರೋಗಿಗಳಿಗೆ ಹಾಗೂ ನಿರುದ್ಯೋಗಿ ಯುವರಿಕಗೆ ತೊಂದರೆಯಾಗಿರುವುದಕ್ಕೆ  ವಿಷಾದಿಸುತ್ತೇನೆ ಎಂದರು.   
    ಕಾರ್ಯಕ್ರಮದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆಪ್ರೇಮಮಹಾಲಿಂಗಯ್ಯ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಮಾಜಿ ಜಿ.ಪಂ.ಅಧ್ಯಕ್ಷ ಆನಂದರವಿ, ಜೆಡಿಎಸ್ ಮುಖಂಡರಾದ ಮೈಲಾರಪ್ಪ, ಲಿಂಗರಾಜು, ಮಹದೇವಪ್ಪ, ಚೌಡಾರೆಡ್ಡಿ, ಶಿರಾ ತಾ.ಪಂ.ಅಧ್ಯಕ್ಷೆ ಗಂಗಮ್ಮ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೋ ಆಪರೆಟೀವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್, ತಾ.ಪಂ.ಸದಸ್ಯರಾದ ಹೇಮಾವತಿ, ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    ಕಣ್ಣಯ್ಯ ನಿರೂಪಿಸಿದರು, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ರಘುನಾಥ್ ಸ್ವಾಗತಿಸಿದರು. 

ಚಿಕ್ಕನಾಯಕನಹಳ್ಳಿ,ಫೆ.16 : ರಾಜ್ಯದಲ್ಲಿ ಸ್ಥಳೀಯ ಪುರಸಭೆ ನಗರಸಭೆ ಅಧಿಸೂಚನೆ ಸಕಾರ ಹೊರಡಿಸಿದ ಹಿನ್ನಲೆಯಲ್ಲಿ ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆಯಬೇಕಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹಾಗೂ ಸಿ.ಬಿ.ಸುರೇಶ್ಬಾಬುರವರ ಹುಟ್ಟುಹಬ್ಬವನ್ನು ಗ್ರಾಮೀಣ ಪ್ರದೇಶವಾದ ಗೋಡೆಕೆರೆಗೆ ಸ್ಥಳಾಂತರಿಸಲಾಯಿತು.
    ಇದರಿಂದ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಿರಾರು ರೋಗಿಗಳಿಗೆ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸುವರಿಗೆ ತೊಂದರೆಯಾಗಬಾರದು ಎಂದು ಮಿನಿ ವಾಹನಗಳು, ಬಸ್ಸುಗಳು ಹಾಗೂ ಲಾರಿಗಳಲ್ಲಿ ಗೋಡೆಕೆರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಉದ್ಯೊಗ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು.

Friday, February 8, 2013


ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು

                 ಚಿಕ್ಕನಾಯಕನಹಳ್ಳಿ,ಫೆ.08 : ಸಕರ್ಾರದಿಂದ ಸಿಗುವ ಸವಲತ್ತು, ಸಹಾಯಧನದ ಮಾಹಿತಿಯ ಕೊರತೆ ನೇಕಾರರಿಗಿದೆ, ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು ಅದಕ್ಕಾಗಿ ನೇಕಾರರ  ಸಂಘಟನೆ ಬಲಿಷ್ಠಗೊಂಡರೆ ಇಲಾಖೆಯ ಸೌಲಭ್ಯದ ಬಗ್ಗೆ ಅರಿವು ಮೂಡಿಸಿಕೊಡುವಲ್ಲಿ ಶ್ರಮಿಸುವುದಾಗಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಗಂಗಯ್ಯ ಹೇಳಿದರು.
 ಪಟ್ಟಣದ ಶ್ರೀ ಬನಶಂಕರಿ ಸಿಲ್ಕ್ ಹ್ಯಾಂಡ್ಲೂಮ್ ನೇಕಾರರ ಸಹಕಾರ ಸಂಘದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮಾರಾಟಗಾರರ ಸಂಘದ ವತಿಯಿಂದ  ನಡೆದ ವಿನ್ಯಾಸಗಳ ಪ್ರದರ್ಶನ ಹಾಗೂ ಬಣ್ಣ ಹಾಕುವ ಕಾರ್ಯಗಾರದಲ್ಲಿ ಮಾತನಾಡಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕಾಯರ್ಾಗಾರದಿಂದ ನೇಕಾರರಿಗೆ  ನೆರವಾಗಲಿದೆ, ಸೀರೆಗಳಿಗೆ ಬಣ್ಣ ಹಾಕುವ ಹಾಗೂ ಅದರಿಂದ ಲಾಭ ಪಡೆಯುವ ಬಗ್ಗೆ ಮಾಹಿತಿ ಪಡೆದು ತಾಂತ್ರಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರಲ್ಲದೆ ಕಾಲಕಾಲಕ್ಕೆ ಇಲಾಖೆವರು ನಡೆಸುವ ಕಾರ್ಯಕ್ರಮಕ್ಕೆ ಸಂಘದ ಆಡಳಿತ ಮಂಡಳಿ ಸ್ಪಂದಿಸಿ ನೇಕಾರರಿಗೆ ಅರಿವು ಮೂಡಿಸಿ ಅವರಿಗೆ ಆಥರ್ಿಕವಾಗಿ ಸದೃಡಗೊಳ್ಳಲು ತಿಳಿಸಬೇಕು ಅಲ್ಲದೆ ಸಕರ್ಾರದಿಂದ ನೇಕಾರರಿಗೆ ಸಿಗುವ ವಿದ್ಯುತ್ಶಕ್ತಿ ಸಹಾಯಧನದ ಮತ್ತಿತರ ಸೌಲಭ್ಯಗಳನ್ನು ಒಗ್ಗಟ್ಟಿನಿಂದ ಪಡೆಯಬೇಕು ಎಂದರು. 
ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಕೈಮಗ್ಗ ಮತ್ತು ಜವಳಿ ಇಲಾಖೆಯವರು ನಡೆಸುವಂತಹ ಕಾಯರ್ಾಗಾರದಲ್ಲಿ ನೇಕಾರರು ಪಾಲ್ಗೊಂಡರೆ ಬಟ್ಟೆಗೆ ಯಾವ ರೀತಿ ಬಣ್ಣ ಹಚ್ಚಿ, ವ್ಯಾಪಾರದ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕು ಜೊತೆಗೆ ಸಕರ್ಾರದ ಅನೇಕ ಸೌಲಭ್ಯಗಳ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು. ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಾಕರ ಸಂಘ ಸ್ವತಂತ್ರ ಪೂರ್ವದಿಂದಲೂ ಇದ್ದು ಇಲ್ಲಿನ ನೇಕಾರರು ಅನೇಕ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಇಂತಹ ಕಾಯರ್ಾಗಾರದಿಂದಲಾದರೂ ನೇಕಾರರಿಗೆ ಸೌಲಭ್ಯ ದೊರಕಲಿ ಎಂದು ಆಶಸಿದರು. 
ಸಮಾರಂಭದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಕಿರಣ್ಕುಮಾರ್, ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್, ಸಿ.ಡಿ.ರಂಗಧಾಮಯ್ಯ ಸೇರಿದಂತೆ ಹಲವರಿದ್ದರು.
ಸಕರ್ಾರಿ ವೈದ್ಯರ ಮುಷ್ಕರ

ಚಿಕ್ಕನಾಯಕನಹಳ್ಳಿ,ಫೆ.08 : ಇಂದಿನಿಂದ ಪ್ರಾರಂಭವಾಗಿರುವ ಸಕರ್ಾರಿ ವೈದ್ಯರ ಮುಷ್ಕರದಿಂದಾಗಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸಲಿಲ್ಲ, ವೈದ್ಯರುಗಳು ಕೇಂದ್ರಗಳಲ್ಲೇ ಹಾಜರಿದ್ದು ಕೇವಲ ತುತರ್ು ಸೇವೆಗಳು ಮಾತ್ರ ಲಭ್ಯವಿದ್ದವು. 
ವೈದ್ಯರ ಪ್ರಮುಖ ಬೇಡಿಕೆಗಳಾದ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವಗರ್ಾಯಿಸಬೇಕು,  ಸರಿಯಾದ ಸಮಯಕ್ಕೆ ಸಂಬಳ ಆಗಬೇಕು ಮತ್ತು ವಗರ್ಾವಣಾ ನಿಯಮಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟು ವೈದ್ಯರುಗಳು ಮುಷ್ಕರದಲ್ಲಿ ನಿರತರಾಗಿದ್ದಾರೆ. ಮುಷ್ಕರ ನಾಳೆಯೂ ಮುಂದುವರಿಯುವ ಲಕ್ಷಣವಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

Thursday, February 7, 2013


ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ

                  ಚಿಕ್ಕನಾಯಕನಹಳ್ಳಿ,ಫೆ.07 : ಮಹಿಳೆಯರು ಅಬಲೆಯರು ಎಂದು ಕೊರಗುತ್ತಾ ಮನೆಯಲ್ಲಿ ಕೂರುವ ಪರಿಸ್ಥಿತಿ ಇಂದು ನಿವಾರಣೆಯಾಗಿದೆ, ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಮರ್ಥರಿದ್ದಾರೆ ಆದರೂ, ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ್ಲ, ಮಹಿಳೆಯರು ಅರಿತು ನಡೆದರೆ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಜಿ.ಪಂ.ಸದಸ್ಯೆ ಲೋಹಿತಬಾಯಿರಂಗಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಶ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸುತ್ತುನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ನಾರಿ ಪ್ರಪಂಚದಲ್ಲಿಯೇ ಸಂಸ್ಕೃತಿಯ ಪ್ರತೀಕ, ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ  ಎಂದರಲ್ಲದೆ ಆಕೆ ತನಗೆ ಎಷ್ಟೇ ನೋವಾದರು ಪರರಿಗೆ ಕೇಡನ್ನು ಬಯಸುವುದಿಲ್ಲ, ಹುಟ್ಟಿದ ಮತ್ತು ಕೊಟ್ಟ ಮನೆಗೆ ಒಳಿತನ್ನು ಬಯಸುತ್ತಾಳೆ, ಆದರೆ ಗಂಡನ ಮನೆಯಲ್ಲಿ ಅತ್ತೆ ಮತ್ತು ನಾದಿನಿಯರು ಹೆಣ್ಣಾಗಿದ್ದರೂ ಹೊರಗಿನಿಂದ ಬಂದ ಹೆಣ್ಣಿಗೆ ತೊಂದರೆ ಕೊಡುವ ಪ್ರವೃತ್ತಿ ಇನ್ನು ಸಮಾಜದಲ್ಲಿ ಮುಂದುವರೆದಿದೆ ಎಂದರು.  ಸಕರ್ಾರ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ನೀಡುವ ಸುತ್ತುನಿಧಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ಬಡ್ಡಿ ವ್ಯವಹಾರಕ್ಕಲ್ಲ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಮಹಿಳೆಯರು ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘಗಳಲ್ಲಿ ಪಡೆಯುವ ಸಾಲವನ್ನು ದುಡಿಮೆಯ ಬಂಡವಾಳವನ್ನಾಗಿ ತೊಡಗಿಸಿದರೆ ಸಾಲ ಮರುಪಾವತಿ ಕಷ್ಟಕರವಲ್ಲ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕಿ ಸುಜಾತ ಮಾತನಾಡಿ ಮಹಿಳೆಯರು ಆಥರ್ಿಕವಾಗಿ ಅಭಿವೃದ್ದಿ ಹೊಂದಲು ಸುತ್ತುನಿದಿ ವಿತರಣೆ ಮಾಡುತ್ತಿದ್ದು ಈ ಮೂಲಕ ಅವರ ಆಥರ್ಿಕ ಮಟ್ಟ ಸುಧಾರಣೆಗೊಳ್ಳಲಿದೆ, ಹಾಗೂ ಮಹಿಳೆಯರು ಒಂದು ಸಂಘದಲ್ಲಿ ಇದ್ದು ಬೇರೆ ಬೇರೆ ಸಂಘಕ್ಕೆ ಹೋಗುವುದನ್ನು ಬಿಡಬೇಕು, ಸಂಘದ ಪ್ರತಿನಿಧಿಗಳೆಲ್ಲ ಸೇರಿ ಸಂಘದ ಏಳಿಗೆಗಾಗಿ ಒಗ್ಗೂಡಿ ಚಚರ್ಿಸಿ ಸಂಘ ಅಭಿವೃದ್ದಿ ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಸಿಡಿಪಿಓ ಅನೀಸ್ಖೈಸರ್,  ಜಿ.ಪಂ.ಸದಸ್ಯರಾದ ಮಂಜುಳ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ.ತಿಮ್ಮಯ್ಯ, ತಾ.ಪಂ.ಸದಸ್ಯರಾದ ಶಿಶಿಧರ್, ಕೆಂಕೆರೆ ನವೀನ್, ವಸಂತ್ಕುಮಾರ್, ಎಸಿಡಿಪಿಓ ಪರ್ವತಯ್ಯ, ಪರಮೇಶ್ವರಪ್ಪ, ದಯಾನಂದ್ ಉಪಸ್ಥಿತರಿದ್ದರು.


ಚಿ.ನಾ ಹಳ್ಳಿಗೆ ಇಂಜಿನಿಯರಿಂಗ್ ಕಾಲೇಜ್ಗೆ ಭರವಸೇ, ಬೇಗ ಅನುಷ್ಠನವಾಗಲಿ; ಚೇತನ್ ಪ್ರಸಾದ್
ಚಿಕ್ಕನಾಯಕನಹಳ್ಳಿ,ಪೆ.07 : ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಕರ್ಾರಿ ಪಾಲಿಟೆಕ್ನಿಕ್/ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ಪರಿಶೀಲನೆ ಮಾಡಿ ಕಾಲೇಜು ಮಂಜೂರು ಮಾಡಿಸುವುದಾಗಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಯವರು ನೀಡಿರುವ ಭರವಸೆಗೆ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಆಭಿನಂದನೆ ಸಲ್ಲಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಪ್ರಶ್ನೆಗೆ ಉತ್ತಿರಿಸಿ ರಾಜ್ಯದ ಪ್ರಸ್ತುತ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಬಗ್ಗೆ ವಿವರಿಸಿ ನೀಡಿರುವ ಭರವಸೆಯನ್ನು ಸಚಿವರು ಬೇಗ ಅನುಷ್ಠಾನಗೊಳಿಸಲಿ ಎಂದು ಚೇತನ್ಪ್ರಸಾದ್ ಮನವಿ ಮಾಡಿದ್ದಾರೆ. 
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಳೆದ ವರ್ಷಗಳಿಂದ ತಾಲ್ಲೂಕಿನಲ್ಲಿ ಇಂಜಿನಿಯರಿಂಗ್ ಹಾಗೂ ಡಿಪ್ಲೋಮ ಕಾಲೇಜು ಸ್ಥಾಪಿಸಬೇಕು ಎಂದೂ  ಅನೇಕ ಹೋರಾಟಗಳನ್ನು ನೆಡೆಸಿದ್ದು, ಮುಖ್ಯಮಂತ್ರಿ ಜಗಧೀಶ್ಶೆಟ್ಟರ್ರವರು ತಾಲ್ಲೂಕಿಗೆ ಆಗಮಿಸಿದ ಸನ್ನಿವೇಶದಲ್ಲಿ ಅ.ಭಾ.ವಿ.ಪ ಕಾರ್ಯಕರ್ತರು ಮನವಿ ಮಾಡಿದ್ದರು,  ತಾಲ್ಲೂಕಿನ ಶಾಸಕ ಸಿ.ಬಿ ಸುರೇಶ್ಬಾಬುರವರು ಬಜೆಟ್ ಅಧಿವೇಶನದಲ್ಲಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜು ಮಂಜುರೂ ಮಾಡಬೇಕು ಎಂದು ಮನವಿ ಮಾಡಿದ್ದು ನಮ್ಮ ಹೋರಾಟಕ್ಕೆ ಶಕ್ತಿ ಬಂದತ್ತಾಗಿದೆ, ತಾಲ್ಲೂಕಿಗೆ ಇಂಜಿನಿಯರಿಂಗ್ ಕಾಲೇಜು ಮಂಜುರು ಮಾಡುವುದಾಗಿ ಭರವಸೆ ನೀಡಿರುವ ಸರಕಾರಕ್ಕೆ ಹಾಗೂ ತಾಲ್ಲೂಕಿನ ಶಾಸಕರಿಗೆ ತಾಲ್ಲೂಕು ಅ.ಭಾ.ವಿ.ಪ ಆಭಿನಂದನೆಯನ್ನು ಸಲ್ಲಿಸುತ್ತದೆ. ಈ ಭರವಸೇ ಭರವಸೇಯಾಗಿ ಉಳಿಯದೆ ಅನುಷ್ಠಾನಗೋಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ರೈತ ಸಂಪರ್ಕ ಕೇಂದ್ರದ ಉದ್ಘಾಟನಾ
ಚಿಕ್ಕನಾಯಕನಹಳ್ಳಿ,ಫೆ.07 : ಕಂದಿಕೆರೆ ರೈತ ಸಂಪರ್ಕ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಇದೇ 11ರ ಸೋಮವಾರ ಬೆಳಗ್ಗೆ 11ಕ್ಕೆ ಕಂದಿಕೆರೆಯ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಗ್ರಾ.ಪಂ.ಅಧ್ಯಕ್ಷ ಸಿ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಕೃಷಿ ಯಂತ್ರೋಪಕರಣ ವಿತರಣೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸದಸ್ಯರಾದ ನಿರಂಜನಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿರುವರು.


Wednesday, February 6, 2013



ಗಾಯಗೊಂಡ ಚಿರತೆ: ಸುರಕ್ಷಿತವಾಗಿ ಬೆಂಗಳೂರಿನ ವನ್ಯಪ್ರಾಣಿ ಆಸ್ಪತ್ರೆಗೆ.
ಚಿಕ್ಕನಾಯಕನಹಳ್ಳಿ,ಫೆ.05: ಮೂರು ದಿನಗಳ ಕಾಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡುವ ಮೂಲಕ ಬೋನಿನಲ್ಲಿ ಹಿಡಿದು ಸುರಕ್ಷಿತವಾಗಿ ಬೆಂಗಳೂರಿನಲ್ಲಿರುವ ವನ್ಯಪ್ರಾಣಿಗಳ ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ   ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಶೆಟ್ಟಿಕೆರೆ ಬಳಿಯ ಮಾಕುವಳ್ಳಿ ಬಳಿಯಲ್ಲಿನ ಹಾಳುಬಾವಿಯೊಂದಕ್ಕೆ ಭಾನುವಾರ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಬೋನಿನಲ್ಲಿ ಹಿಡಿದು ಬೆಂಗಳೂರಿನ ಹೆಬ್ಬಾಳದ ವನ್ಯಪ್ರಾಣಿಗಳ ಆಸ್ಪತ್ರೆಗೆ ಸೇರಿಸಿದ್ದಾರೆ. 
ಸುಮಾರು ಎರಡು ವರೆ ವರ್ಷದ ಚಿರತೆಯು ಆಹಾರಕ್ಕಾಗಿ ಬೆಕ್ಕನ್ನು ಹಿಡಿಯುವ ರಭಸದಲ್ಲಿ ಮಾಕುವಳ್ಳಿ ಸಮೀಪದ ಹಾಳುಬಾವಿಯೊಂದಕ್ಕೆ ಬಿದ್ದ ಪರಿಣಾಮ ಚಿರತೆಯ ಕಾಲಿಗೆ ಗಾಯವಾಗಿತ್ತು, ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗುಣ ಪಡಿಸಿದ ನಂತರ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದಿದ್ದಾರೆ. 
ಈ ಕಾಯರ್ಾಚರಣೆಯಲ್ಲಿ ತಿಪಟೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರಪ್ರಸಾದ್, ಬೆಂಗಳೂರಿನ ಪಶುವೈದ್ಯಾಧಿಕಾರಿ ಡಾ.ಅರುಣ್, ಶೂಟರ್ ರಮೇಶ್, ವಲಯ ಅರಣ್ಯಾಧಿಕಾರಿ ಪಿ.ಹೆಚ್.ಮಾರುತಿ, ವಲಪಾಲಕರುಗಳು ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಹೆಚ್ಚುತ್ತಿರುವ ಕರಡಿ,ಚಿರತೆ ದಾಳಿ: ತಾಲೂಕಿನ ಹಂದನಕೆರೆ, ಹುಳಿಯಾರು ಹೋಬಳಿಗಳ ಗಡಿ ಭಾಗದಲ್ಲಿ ಕರಡಿಗಳು ಗ್ರಾಮಸ್ಥರ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ, ಕಂದಿಕೆರೆ ಹೋಬಳಿಯ ಮದಲಿಂಗನ ಕಣಿವೆ ಭಾಗ ಹಾಗೂ ಶೆಟ್ಟೀಕೆರೆ ಹೋಬಳಿಯ ಭಾಗಗಳಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದೆ, ಇದರಿಂದ ಸಾಕಷ್ಟು ಜನರಿಗೆ ಸಾವು-ನೋವುಗಳು ಸಂಭವಿಸಿದರೆ ಸಂತ್ರಸ್ಥರಿಗೆ ಜನಪ್ರತಿನಿಧಿಗಳು ಅಥವಾ ಆ ಭಾಗದ ರಾಜಕಾರಣಿಗಳು ತಮ್ಮ ಕೈಲಿದ್ದಷ್ಟು ಹಣಕೊಟ್ಟು ಪೋಟೊ ತೆಗೆಸಿಕೊಂಡು ಅದನ್ನು ಮಾಧ್ಯಮದವರಿಗೆ ಕೊಟ್ಟು ತಮ್ಮ ಪ್ರಚಾರ ಪ್ರಿಯತೆಯನ್ನು ಮೆರೆಯುತ್ತಾರೆ ಹೊರತು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ. ಇದೇ ರೀತಿ ಕಾಡು ಪ್ರಾಣಿಗಳು ನಾಡಿನೊಳಕ್ಕೆ ಬರುವುದು ಹೆಚ್ಚಾದರೆ ಹಳ್ಳಿಯಲ್ಲಿನ ಜನ,ಜಾನುವಾರುಗಳ ಪ್ರಾಣಕ್ಕೆ ಸಂಕಷ್ಟ ತಪ್ಪಿದಲ್ಲ. 

ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು
ಚಿಕ್ಕನಾಯಕನಹಳ್ಳಿಫೆ.05 : ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು ಹಾಗೂ ರಾಜ್ಯ ಬಿಜೆಪಿಯ ಜನಪರ ಕಾರ್ಯಕ್ರಮಗಳು ಜನರಿಗೆ ಅರ್ಥವಾಗಿದೆ, ನಮ್ಮ ಪ್ರಣಾಳಿಕೆಯಲ್ಲಿನ ಶೇ.85ರಷ್ಟು ಆಶ್ವಾಸನೆಗಳನ್ನ ಸಕರ್ಾರ ಈಡೇರಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಹೇಳಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ನೋವು ತರುತ್ತಿವೆ ಈ ಗೊಂದಲಗಳನ್ನು ಆಂತರಿಕವಾಗಿ ಪರಿಹಾರ ಮಾಡಿಕೊಂಡಿದ್ದರೆ ಅಭಿವೃದ್ದಿ ಹೆಚ್ಚುತ್ತಿತ್ತು, 35 ರಿಂದ 40 ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ಚುನಾವಣಾ ತಂತ್ರವಾಗಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ,  ಆಧಾರ್ ಅರಿವಿನ ಪಾದಯಾತ್ರೆಗಳನ್ನು ಮಾಡುತ್ತಿವೆ, ಜ್ವಲಂತ ಸಮಸ್ಯೆಗಳು ಇವರಿಗೆ ನೆನಪಾಗಲಿಲ್ಲ,  ಇವು ಜನರನ್ನು ದಿಕ್ಕುತಪ್ಪಿಸುವ ಕಾರ್ಯಕ್ರಮಗಳು, ನಿರಂತರವಾಗಿ ಡಿಸೆಲ್,ಪೆಟ್ರೋಲ್ ಬೆಲೆಗಳನ್ನು ಏರಿಸುತ್ತಿದ್ದು, ತಪ್ಪು ಆಥರ್ಿಕ ನೀತಿಗಳನ್ನು ಕೈಗೊಳ್ಳುತ್ತಿರುವುರಿಂದ  ಕೇಂದ್ರ ಸಕರ್ಾರವು ಜನರ ಆಕ್ರೋಶಕ್ಕೆ ತುತ್ತಾಗಿದೆ ಎಂದರು.
ಫೆಬ್ರವರಿ 28ರೊಳಗಾಗಿ  ಮತಗಟ್ಟೆಯ ಅಭಿಯಾನ ಮತ್ತು ಮಾಚರ್್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಸಕರ್ಾರದ ಸಾಧನೆಗಳನ್ನು ಮತ್ತು ಕೇಂದ್ರ ಸಕರ್ಾರದ ವೈಪಲ್ಯಗಳನ್ನು ಮತದಾರರಿಗೆ ಅರ್ಥ ಮಾಡಿಸುತ್ತೇವೆ ಎಂದು ನುಡಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಂಕರಪ್ಪ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಕವಿತಾಕಿರಣ್ಕುಮಾರ್, ಗಂಗಾಧರ್, ರಾಮಣ್ಣ, ಮುಂತಾದವರು ಉಪಸ್ಥಿತರಿದ್ದರು.
ಗುಡಿಸಲುಗಳು ಭಸ್ಮ
ಚಿಕ್ಕನಾಯಕನಹಳ್ಳಿ,ಫೆ.05 : ಪಟ್ಟಣದ ಹುಳಿಯಾರು ಗೇಟಿನ ಬಳಿ ದೊಂಬದಾಸರು ವಾಸವಾಗಿರುವ 15ಗುಡಿಸುಲುಗಳ ಪೈಕಿ 3ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಸುಮಾರು ಎರಡು ಲಕ್ಷರೂಗಳ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.
ವಾಡರ್್ ನಂ.23 ಮಾರುತಿ ನಗರದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಭಾಗ್ಯಮ್ಮ, ಜಯಮ್ಮ ಮತ್ತು ಶಿವಣ್ಣ ಎಂಬುವರ ಮನೆಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಬಹುತೇಕವಾಗಿ ಕುಟುಂಬಗಳು ಊರೂರು ಅಲೆಯುತ್ತ ಏರುಪಿನ್ನ, ಬಾಚಣಿಗೆ, ಮಾರುವ ಕಾಯಕದಲ್ಲಿ ತೊಡಗಿರುವುದರಿಂದ ಘಟನೆ ಸಂಭವಿಸಿದಾಗ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಮತ್ತು ಅಗ್ನಿಶಾಮಕ ಠಾಣೆ ಹತ್ತಿರದಲ್ಲೇ ಇದ್ದುದರಿಂದ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿ ಆಗಬಹುದಾಗಿದ್ದ ಹೆಚ್ಚು ಅನಾಹುತವನ್ನು ತಪ್ಪಿಸಿಸಿದರು ಎಂದು ತಾಲ್ಲೂಕು  ಅಲೆಮಾರಿ ಜನಾಂಗ ಸಂಘದ  ಅಧ್ಯಕ್ಷ ರಾಜಣ್ಣ ತಿಳಿಸಿದರು.  
ಘಟನೆ ನಡೆದ ಸ್ಥಳಕ್ಕೆ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಹಶೀಲ್ದಾರ್ ಗೀತ, ನಿರೀಕ್ಷಕ ರವಿಕುಮಾರ್, ಶಿವಣ್ಣ, ಶಿವಶಂಕರ್ ಮುಂತಾದವರು ಭೇಟಿ ನೀಡಿದ್ದರು. 
ಹಿಂದಿನ ಇ.ಓ.ದಯಾನಂದ್ರವರು ಸಭೆಗೆ ಕರೆಸದಿದ್ದರೆ ತಾ.ಪಂ.ಕಛೇರಿ ಮುಂದೆ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರ ಪ್ರತಿಭಟನೆಯ ಬೆದರಿಕೆ  
ಚಿಕ್ಕನಾಯಕನಹಳ್ಳಿ,ಫೆ.06 : ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ನಡೆಯಲಾಗಿದೆ ಎನ್ನಲಾದ ಏಕಪಕ್ಷೀಯ ವರ್ತನೆ ಬಗ್ಗೆ ಹಿಂದಿನ ಇ.ಓ ದಯಾನಂದ್ರವರಿಗೆ ನೋಟಿಸ್ ಜಾರಿ ಮಾಡಿರುವುದು ಕಾನೂನು ರೀತಿಯಲ್ಲಿ ಸಮರ್ಪಕವಾಗಿಲ್ಲವಾದ್ದರಿಂದ  ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಇ.ಓ ದಯಾನಂದ್ರವರನ್ನು ಸಭೆಗೆ ಕರೆಸಬೇಕು ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಕಾಯರ್ಾಲಯದ ಮುಂದೆ ತಾ.ಪಂ.ಸದಸ್ಯರು ಹಾಗೂ ಜಿ.ಪಂ.ಸದಸ್ಯರೊಡನೆ ಪ್ರತಿಭಟನೆ ಕೂರುವುದಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಯ ಎರಡನೇ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. 
ಕಳೆದ ಬಾರಿ ಜಾಗೃತಿ ಸಮಿತಿ ಸಭೆಗೆ ಹಿಂದಿನ ಇ.ಓದಯಾನಂದ್ರವರನ್ನು ಕರೆಸಿ ಸಭೆ ನಡೆಸುವಂತೆ ತಿಳಿಸಿದರೂ ಈಗ ನಡೆಯುತ್ತಿರುವ ಸಭೆಗೆ ಅವರು ಬಂದಿರದ ಬಗ್ಗೆ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಬಾಯಿ, ತಾ.ಪಂ.ಸದಸ್ಯ ಶಶಿಧರ್ ಆಕ್ಷೇಪಿಸಿದರು. 
ಕಳೆದ ಬಾರಿ ತಿಳಿಸಿದ್ದರೂ ಇ.ಓ.ದಯಾನಂದ್ರವರು ಆಗಮಿಸಿದ ಬಗ್ಗೆ ಈಗಿನ ಇ.ಓ ತಿಮ್ಮಯ್ಯರವರಿಗೆ ತರಾಟೆಗೆ ತೆಗೆದುಕೊಂಡ ಸದಸ್ಯರು ನಮ್ಮ ಕಣ್ಣೊರೆಸಲು ಇ.ಓ ರವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದರು ಆದರೆ  ಹಿಂದಿನ ಇ.ಓರೊಡನೆ ನೀವೂ ಶಾಮೀಲಾಗಿರುವುದರಿಂದ ನೋಟಿಸ್ ನೀಡುವ ವಿಷಯದಲ್ಲಿ ಸರಿಯಾಗಿ ನೀಡಿಲ್ಲ ಎಂದು ದೂರಿದರು.
ಹಿಂದಿನ ಬಾರಿ ನಡೆದ ಸಭೆಯಲ್ಲಿ ಸಭೆ ಮುಗಿದಿದ್ದರೂ ಅದರ ಜೊತೆಗೆ ಇನ್ನಿತರ ವಿಷಯಗಳನ್ನು ಸೇರಿಸಿ ಇ.ಓ, ಶಾಸಕರೊಂದಿಗೆ ಸಹಿ ಹಾಕಿರುವ ಬಗ್ಗೆ ವಿವರಣೆ ಕೇಳಿ, ನಂತರ ಈ ಬಗ್ಗೆ ಕೂಲಂಕುಶವಾಗಿ ವಿವರಣೆ ಬರಬೇಕು ಎಂದು ಸದಸ್ಯರು ಪಟ್ಟು ಹಿಡಿದಾಗ ದೂರವಾಣಿಯ ಮೂಲಕ ಶಾಸಕರನ್ನು ಇ.ಓ ಭೇಟಿ ಮಾಡಿ ಮುಂದಿನ ಸಭೆ ನಡೆಯುವ ದಿನಾಂಕವನ್ನು ಕೇಳಿ ತಿಳಿಸುತ್ತೇನೆ ಎಂದು ಸದಸ್ಯರಿಗೆ ತಿಳಿಸಿದರು.
ಸದಸ್ಯರು ದೂರುತ್ತಿರುವ ಬಗ್ಗೆ ಪತ್ರಕರ್ತರು ಇ.ಓ ತಿಮ್ಮಯ್ಯರವರನ್ನು ಸಂಪಕರ್ಿಸಿದಾಗ, ಹಿಂದಿನ ಅಜೆಂಡಾದಲ್ಲಿ ಏನು ನಡೆದಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ, ಹಿಂದಿನ ಸಭೆಯಲ್ಲಿ ನಡೆದ ಅಜೆಂಡದಲ್ಲಿ ಸದಸ್ಯರೆಲ್ಲಾ ತೀಮರ್ಾನ ಮಾಡಿ ನೀಡಿದ ವಿಷಯವನ್ನೇ ನಾನು ಹಿಂದಿನ ಇ.ಓರವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.  
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಮಂಜುಳ, ನಿಂಗಮ್ಮ ತಾ.ಪಂ.ಸದಸ್ಯರಾದ, ಶಶಿಧರ್, ನವೀನ್, ಬಿ.ಬಿ.ಪಾತೀಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಮತ್ತಿತರರು ಉಪಸ್ಥಿತರಿದ್ದರು. 

ಚಿ.ನಾ.ಹಳ್ಳಿಯಲ್ಲಿ ಶ್ರೀ.ಕ್ಷೇ.ಧರ್ಮಸ್ಥಳ ಸಂಸ್ಥೆವತಿಯಿಂದ  ಫೆ.10,11 ಅರ್ಥಗಭರ್ಿತ ಕೃಷಿ ಉತ್ಸವ
ಚಿಕ್ಕನಾಯಕನಹಳ್ಳಿ,ಫೆ.06 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಇದೇ ಫೆಬ್ರವರಿ 10 ಮತ್ತು  11ರ ಎರಡು ದಿನಗಳ ಕಾಲ ಕೃಷಿ ಉತ್ಸವ ನಡೆಯಲಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು. 
ಎರಡು ದಿನಗಳ ಕಾಲ ನಡೆಯುವ ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳುವ ರೈತರಿಗೆ, ಸಾರ್ವಜನಿಕರಿಗೆ ಸಮಗ್ರ ಕೃಷಿ ಪದ್ದತಿ, ಕುರಿ ಸಾಕಾಣಿಕೆ ಸವಾಲು ಸಾಧ್ಯತೆ , ಮೌಲ್ಯವಧರ್ಿತ ಸಾವಯುವ ಗೊಬ್ಬರ, ವಾಣಿಜ್ಯ ಮತ್ತು ಅಲ್ಪಾವಧಿ ಬೆಳೆಗಳ ಅವಕಾಶ, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಹಾಗೂ  ಮಹಿಳೆಯರು ಸುಖಿಸಂಸಾರ, ಸ್ವಾಸ್ಥ್ಯಸಮಾಜ ನಿಮರ್ಾಣದಲ್ಲಿ ಅವರ ಪಾತ್ರಗಳ ಬಗ್ಗೆ ವಿಶೇಷವಾಗಿ ತಿಳಿಯಬಹುದು ಎಂದರಲ್ಲದೆ ಈ ಸಂದರ್ಭದಲ್ಲಿ ಜಾನುವಾರು, ಶ್ವಾನ, ಮತ್ತು ಕುಕ್ಕಟ ಪ್ರದರ್ಶನ, ಪರಿಣಿತರಿಂದ ವಿಚಾರಗೋಷ್ಠಿ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು 10ರ ಸೋಮವಾರ ಬೆಳಗ್ಗೆ 10ಕ್ಕೆ ಏರ್ಪಡಿಸಿದ್ದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಟ್ರಸ್ಟಿ ಡಿ.ಸುರೇಂದ್ರಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ನಾರಾಯಣಗೌಡ ಕರಕುಶಲ ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ಬಿ.ಎಸ್.ಆರ್.ಪಕ್ಷದ ಜಿಲ್ಲಾಧ್ಯಕ್ಷ ಜಿ.ರಾಮಾಂಜನೇಯ ವಸ್ತುಪ್ರದರ್ಶನ
ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೆ.ಎಂ.ಎಲ್ ಎಸ್.ಎಲ್.ಶಾಂತಕುಮಾರ್ ಉಪಸ್ಥಿತರಿರುವರು.
ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಮೊದಲ ಗೋಷ್ಠಿಯಲ್ಲಿ 'ನಮ್ಮ ಕೃಷಿ ಬದುಕಿನಲ್ಲಿರುವ ಅವಕಾಶಗಳು, ಸಮಗ್ರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ವಿಷಯವಾಗಿ ನಡೆಯುವ ಗೋಷ್ಠಿಯಲ್ಲಿ   ಪ್ರಾ.ಸ.ಕೃ.ಬ್ಯಾಂಕ್ನ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು ಕೃಷಿ ರಂಗ ವಿಭಾಗದ ಪ್ರಸಾರ ನಿವರ್ಾಹಕ ಡಾ.ವಿಜಯ್ಅಂಗಡಿ ಸಂಪನ್ಮೂಲ ವ್ಯಕ್ತಿಗಳು.  2ರಿಂದ 3.30ರವರೆಗೆ ವಿಚಾರಗೋಷ್ಠಿ2 ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಸಂಪನ್ಮೂಲ ವ್ಯಕ್ತಿ ಪ್ರಿಸ್ಟೈನ್ ಆಗ್ಯರ್ಾನಿಕ್ ವ್ಯವಸ್ಥಾಪಕ ನಿದರ್ೇಶಕ ಕೆ.ಸಿ.ರಘು, , 3.30ರಿಂದ 4.30ರವರೆಗೆ ವಿಚಾರಗೋಷ್ಠಿ3 ಹಸಿರು ಸೇನೆಯ ಪ್ರಧಾನ ಕಾರ್ಯದಶರ್ಿ ಸತೀಶ್ಕೆಂಕೆರೆ ಅಧ್ಯಕ್ಷತೆ ವಹಿಸಲಿದ್ದು ಕೆ.ವಿ.ಕೆ ಸಂಯೋಜಕ ಡಾ.ಜಿ.ಎಂ.ಸುಜಿತ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. 
11ರ ಸೋಮವಾರ ಬೆಳಗ್ಗೆ 10ಕ್ಕೆ ಜಾನುವಾರು ಶ್ವಾನ ಮತ್ತು ಕುಕ್ಕಟ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನಡೆಸಲಿದ್ದು ಜಿ.ಹಾ.ಒಕ್ಕೂದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 11ರಿಂದ1ವಿಚಾರಗೋಷ್ಠಿ 12.30ರಿಂದ 2ನೇ ವಿಚಾರಗೋಷ್ಠಿ , 2ರಿಂದ 3ನೇ ವಿಚಾರಗೋಷ್ಠಿ ನಡೆಯಲಿದ್ದು  ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. 
ಈ ಸಂದರ್ಭದಲ್ಲಿ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ.ಬಿ.ನಾಗರಾಜು, ಉಪಾಧ್ಯಕ್ಷರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಎಸ್.ನಟರಾಜು, ಯಳನಡು ಗುರುಪ್ರಸಾದ್, ಪ್ರಕಾಶ್ ಉಪಸ್ಥಿತರಿದ್ದರು.


Friday, February 1, 2013


ವಸತಿ ಯೋಜನೆಯ ಆಯ್ಕೆಯಲ್ಲಿ ಇ.ಓ.ದಯಾನಂದರ ಅಧಿಕಾರ ದುರುಪಯೋಗ: ಜನಪ್ರತಿನಿಧಿಗಳ ಆಕ್ರೋಶ.
ಚಿಕ್ಕನಾಯಕನಹಳ್ಳಿ,ಫೆ.01: ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ  ಹಿಂದಿನ ಇ.ಓ. ದಯಾನಂದ ರವರು ಹಣ ಪಡೆದು ಏಕಪಕ್ಷೀಯವಾಗಿ ವತರ್ಿಸಿ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಸಿ ಕರ್ತವ್ಯ ಲೋಪವೆಸಗಿದ್ದಾರೆ ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯಬೇಕೆಂದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು  ಆಗ್ರಹಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ನಡೆದ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಗೆ ಜಾಗೃತಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದರು. 
  ಬಸವ ಇಂದಿರಾ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಹಿಂದಿನ ತಾಲ್ಲೂಕು ಪಂಚಾಯಿತಿ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ. ದಯಾನಂದ ರವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಮನಸೋಇಚ್ಛೆ ಹಣ ಪಡೆದು ಆಯ್ಕೆ ಮಾಡಿದ್ದಾರೆ ಎಂದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಆರೋಪ ಮಾಡಿದರು.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಕ್ಕಾಪಟ್ಟಣ ಹೋಬಳಿ ಹೊರತು ಪಡಿಸಿ ಉಳಿದ ಹೋಬಳಿಗಳನ್ನು ನಿರ್ಲಕ್ಷಿಸಿ ಬುಕ್ಕಾಪಟ್ಟಣ ಹೋಬಳಿಗೆ 1781 ಮನೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. 
ಶಿರಾ ತಾಲ್ಲೂಕಿನ ತಾ.ಪಂ.ಸದಸ್ಯ ರಂಗನಾಥಪ್ಪ ಮಾತನಾಡಿ ಕಳೆದ ಭಾರಿ 164 ಮನೆಗಳನ್ನು ಮಂಜೂರು ಮಾಡಿದ್ದು 2ನೇ ಅವಧಿಯಲ್ಲಿ ಮಂಜೂರಾತಿಗೆ ಶಾಸಕ ಸಿ.ಬಿ.ಸುರೇಶ್ಬಾಬು ವಸತಿ ಸಚಿವ ವಿ.ಸೋಮಣ್ಣರವರನ್ನು ಭೇಟಿ ಮಾಡಿ ಅತಿ ಹಿಂದುಳಿದ ಗುಡ್ಡಗಾಡು ಪ್ರದೇಶವಾದ ತಾಲ್ಲೂಕಿಗೆ ಹೆಚ್ಚುವರಿ 2000 ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ ಪರಿಣಾಮ ತಾಲ್ಲೂಕಿಗೆ ಪುನಃ 2000 ಮನೆಗಳನ್ನು ದೊರಕಿಸಲು ಸಾಧ್ಯವಾಯಿತು ಎಂದರು. 
  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಪ್ರತಿ ಗ್ರಾಮಪಂಚಾಯ್ತಿ ಗ್ರಾಮ ಸಭೆಗಳಲ್ಲಿ ಗುಡಿಸಲು ರಹಿತ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಅನುಮೋದನೆಗೆ ಕಳುಹಿಸುವಂತೆ ಎರಡು ಭಾರಿ ಸೂಚಿಸಿದ್ದರು. ಸಂಬಂಧಪಟ್ಟ ಗ್ರಾಮಪಂಚಾಯ್ತಿಗಳ ಕಾರ್ಯದಶರ್ಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ನೀಡಿದ ನಂತರ ಬುಕ್ಕಾಪಟ್ಟಣ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ  ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿದವರನ್ನು ಮಾತ್ರ ಪಟ್ಟಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಶಿರಾ ತಾ.ಪಂ. ಅಧ್ಯಕ್ಷೆ ಗಂಗಮ್ಮಸಿದ್ದಹನುಮಯ್ಯ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಾನಮ್ಮ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಾ ಗಂಗಾಧರ್, ನಿರಂಜನ್, ಜಯಣ್ಣ, ಶಶಿಧರ್, ರಮೇಶ್ ಕುಮಾರ್, ಶಿವರಾಜ್, ಲತವಿಶ್ವೇಶ್ವರಯ್ಯ, ಬುಕ್ಕಾಪಟ್ಟಣ ತಾ.ಪಂ.ಸದಸ್ಯೆ ಶೈಲಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಶಿರಾ ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ವೇದಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.   
ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ ಜೇಷ್ಟತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.01:  ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದಕ್ಕೆ ಬಡ್ತಿ ಸಂಬಂಧ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಜಿಲ್ಲಾವಾರು, ವಿಷಯವಾರು ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸೇವಾನಿರತ ಶಿಕ್ಷಕರ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಬಿಇಒ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಲಾಗಿದೆ ಇಂದು ಬಿ.ಇ.ಓ. ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
.  ಜನವರಿ 01 2013ರೊಳಗೆ ಅರ್ಹ ವಿದ್ಯಾರ್ಹತೆಯನ್ನು ಹೊಂದಿದವರು  ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಆಕ್ಷೇಪಣೆಗಳನ್ನು ಅರ್ಹ ಶಿಕ್ಷಕರುಗಳಿಂದ ಆಹ್ವಾನಿಸಲಾಗಿದೆ. ಹೊಸದಾಗಿ ಹೆಸರು ಸೇರ್ಪಡೆ ಅಥವಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಲ್ಲಿ ಅಥವಾ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಶಿಕ್ಷಕರು ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ದಿನಾಂಕ 06.02.2013 ರೊಳಗಾಗಿ ಸಲ್ಲಿಸಲು ಹಾಗೂ ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗುವುದಿಲ್ಲ ತಿಳಿಸಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಚಿ.ನಾ.ಹಳ್ಳಿ ಜಿ.ಎಫ್.ಜಿ.ಸಿ.ಯಿಂದ ಎನ್.ಎಸ್.ಎಸ್.ಶಿಬಿರ


ಚಿಕ್ಕನಾಯಕನಹಳ್ಳಿ,ಫೆ.01:  ಸಕರ್ಾರಿ ಪ್ರಥಮ ದಜರ್ೆ ಕಾಲೇಜು 2012-2013 ಸಾಲಿನ  ವಾಷರ್ಿಕ ವಿಶೇಷ ಶಿಬಿರವನ್ನು ಇದೇ ಫೆಬ್ರವರಿ 2 ರಿಂದ 8 ವರೆಗೆ 7 ದಿನಗಳ ಕಾಲ ಕಂದಿಕೆರೆಯಲ್ಲಿ ನಡೆಯಲಿದೆ. 
ಫೆಬ್ರವರಿ 2ನೇ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭವನ್ನು  ಶಾಸಕ ಸಿ.ಬಿ.ಸುರೇಶ್ಬಾಬು  ನೇರೆವೆರಿಸಿಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವಿ.ವರದರಾಜು ವಹಿಸಲಿದ್ದು ಕಾರ್ಯಕ್ರಮಾಧಿಕಾರಿಗಳಾದ ಶಿವರಾಮಯ್ಯ ಪ್ರಾಸ್ತಾವಿಕ ಮಾತಗಳನ್ನಾಡಲಿದ್ದಾರೆ.  
ಮುಖ್ಯ ಅತಿಥಿಗಳು ತಹಸೀಲ್ದಾರ್ ಎನ್. ಆರ್ ಉಮೇಶ್ ಚಂದ್ರ  ಜಿಲ್ಲಾ ಪಂಚಾಯಿತ್ ಸದಸ್ಯೆ ಲೋಹಿತ ಬಾಯಿ ಪುರಾಸಭಾಧ್ಯಕ್ಷ ಕೃಷ್ಣಮೂತರ್ಿ ತಾ.ಪಂ ಉಮಾದೇವಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಕಂದಿಕೆರೆ ಗ್ರಾ.ಪಂ. ಅಧ್ಯಕ್ಷ ಸಿ. ಲೋಕೇಶ್ ಮಾಜಿ ಜಿ.ಪಂ. ಅಧ್ಯಕ್ಷೆ ಜಯಮ್ಮ ದಾನಪ್ಪ ಶಾಂತವೀರಸ್ವಾಮಿ ಅಧ್ಯಕ್ಷ ಎನ್. ರೇವಣ್ಣ ಹಾಲು ಉತ್ಪಾತಕರ ಸಂಘದ ಅಧ್ಯಕ್ಷ ಕೆ.ನಾಗರಾಜು, ಗ್ರಾ.ಪಂ. ಸದಸ್ಯರಾದ ಕೆ.ಆರ್ ನಾಗರಾಜು, ವಸಂತಕುಮಾರ್, ಅಬ್ದುಲ್ ರಜಾಕ್ ಉಪಸ್ಥಿತರಿರುವರು. 

aPÀÌ£ÁAiÀÄPÀ£ÀºÀ½î PÉÊUÀjPÁ E¯ÁSÁªÀw¬ÄAzÀ a®ègÉ ªÁå¥ÁgÀUÁgÀjUÉ ±Á¸ÀPÀ ¹.©.¸ÀÄgÉÃ±ï ¨Á§Ä Qmï «vÀj¹zÀgÀÄ. f.¥ÀA.¸ÀzÀ¸Éå eÁ£ÀªÀÄä gÁªÀÄZÀAzÀæAiÀÄå, vÁ.¥ÀA.¸ÀzÀ¸ÀågÁzÀ ZÉÃvÀ£ÁUÀAUÁzsÀgï, ºÉêÀiÁªÀw,  PÉÊUÁjPÁ «¸ÀÛgÁuÁ¢üPÁj ¹zÀÝUÀAUÀªÀÄä ªÀÄwÛvÀgÀgÀÄ ºÁdjzÀÝgÀÄ. 
                                                    

aPÀÌ£ÁAiÀÄPÀ£ÀºÀ½î J¸ïJAJ¸ï PÁ¯ÉÃf£À «zÁåyð¤ vÀ£ÀÄ¥ÀæeÁ ¥ÀÄgÀ¸À¨sÁ PÁAiÀiÁð®AiÀÄ £ÀqɹzÀ WÀ£À vÁådå ªÀ¸ÀÄÛ ¤ªÀðºÀuÉ PÀÄjvÁV£À ¨sÁµÀt ¸ÀàzsÉðAiÀÄ°è ¥ÀæxÀªÀÄ §ºÀĪÀiÁ£À ¥ÀqÉ¢zÀÝjAzÀ UÀtgÁeÉÆåÃvÀìªÀ ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä §ºÀĪÀiÁvÀ£À «vÀj¹zÀgÀÄ. ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, G¥ÁzsÀåPÉë UÁ¬Äwæ¥ÀÄlÖtÚ, vÀºÀ²Ã¯ÁÝgï GªÉÄñïZÀAzÀæ ºÁdjzÀÝgÀÄ.
                                                      

Thursday, January 31, 2013


ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಜ.31 : ರಾಜ್ಯ ಮಟ್ಟದ ಪತ್ರಿಕೆಗಳು ತನ್ನ ಪ್ರಸಾರ ಸಂಖ್ಯೆ ಹೆಚ್ಚಿಸಲು ನಿಗಧಿಪಡಿಸಿದ್ದ ಬೆಲೆಯಷ್ಟೇ ಪ್ರಜಾಪ್ರಗತಿ ಪತ್ರಿಕೆ ನಿಗಧಿ ಪಡಿಸಿದಾಗಲೂ  ಜನ ಕೊಳ್ಳುತ್ತಿದ್ದ ಪತ್ರಿಕೆ ಪ್ರಜಾಪ್ರಗತಿ ಎಂದು ಕವಿ-ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸ್ಥಳೀಯ ಪತ್ರಿಕೆಯೊಂದು 25ವರ್ಷಗಳಿಂದ ಪತ್ರಿಕೆಯನ್ನು ಉತ್ತಮವಾಗಿ ನಡೆಸುವುದು ಸಣ್ಣ ವಿಷಯವಲ್ಲ, ಜಾತಿ ಪತ್ರಿಕೆಯಾಗಿ ಉಳಿಯದೆ ಸಮಾಜದ ಜನ ಒಪ್ಪುವ ರೀತಿಯಲ್ಲಿ ಸುದ್ದಿಗಳನ್ನು ನೀಡುತ್ತ  ರಾಜ್ಯ ಮಟ್ಟದ ಪತ್ರಿಕೆಗಳ ಸಮನಾಗಿ ಪ್ರಜಾಪ್ರಗತಿ ಪತ್ರಿಕೆ ಮುಂದಾಗುತ್ತಿದೆ.
ಗಂಟೆಗಟ್ಟಲೆ ಓದುವ ಸುದ್ದಿಗಿಂತ ಜನರಿಗೆ ಪತ್ರಿಕೆಯನ್ನು ಜನ ಬಯಸುವುದು ಸುದ್ದಿಯ ಪ್ರಮಾಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಎಷ್ಠಿರುತ್ತದೆ ಎಂಬ ಅಂಶದಿಂದ ಎಂದರಲ್ಲದೆ ಸುದ್ದಿಯನ್ನು ಜನರಿಗೆ ಮುಟ್ಟಿಸುವಾಗ ಔಚಿತ್ಯ ಇರಬೇಕು, ಲೇಖನಿಗಳು ಜನರಲ್ಲಿ ಅರಿವನ್ನು ಮೂಡಿಸುವಂತಾಗಬೇಕು ಈ ಅಂಶವನ್ನು ಪ್ರಜಾಪ್ರಗತಿ ಪತ್ರಿಕೆ ಆರಂಭ ದಿನದಿಂದಲೂ ಹೊಂದಿದೆ ಎಂದರು.
ಅಪರಾಧಿ ಆಧಾರಿತ ಪತ್ರಿಕೆಗಳು ಸಮಾಜದ ಪ್ರಭಾವವನ್ನು ಬದಲಾಯಿಸುತ್ತಿದೆ, ಪತ್ರಿಕೆಗಳಿಗೆ ಸುದ್ದಿಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಅವಶ್ಯ, ರಾಜ್ಯಮಟ್ಟದ ಪತ್ರಿಕೆಗಳು ಪಕ್ಷಗಳಿಗೆ ಮಾರಿಕೊಂಡಿವೆ, ಪತ್ರಿಕೆಗಳು ರಾಜಕಾರಣವನ್ನು ಸ್ವಾಗತಿಸದೆ, ರಾಜಕಾರಣಿಗಳನ್ನು ದೂರ ಇಟ್ಟಾಗಲೇ ಪತ್ರಿಕಾ ಧರ್ಮ ಉಳಿಯುವುದು ಎಂದರಲ್ಲದೆ 1970ರ ದಶಕದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಲಕೇಶ್ ಪತ್ರಿಕೆ ಬಂಡಾಯ, ರೈತ ಚಳುವಳಿಗಳಿಂದಾಗಿ ಪತ್ರಿಕೆ ಬೆಳೆದ ಕಾಲ ಎಂದು ತಿಳಿಸಿದರು.
ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸ್ಥಳೀಯ ಪತ್ರಿಕೆಗಳು ಅಮ್ಮನಂತೆ, ರಾಜ್ಯಪತ್ರಿಕೆಗಳು ಚಿಕ್ಕಮ್ಮನಿದ್ದಂತೆ, ಸ್ಥಳೀಯ ಪತ್ರಿಕೆ ಸ್ಥಳೀಯ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಮಗುವಿಗೆ ಶಿಕ್ಷೆ ನೀಡುವಂತೆ ಕಠಿಣ ನಿಧರ್ಾರ ತಾಳುತ್ತದೆ, ರಾಜ್ಯಮಟ್ಟದ ಪತ್ರಿಕೆಗಳು ಈ ನಿಟ್ಟಿನಲ್ಲಿ ಮೃದುಧೋರಣೆಯನ್ನು ತೆಳೆಯುತ್ತವೆ ಎಂದರಲ್ಲದೆ, ಪತ್ರಿಕೆಗಳು ಬರವಣಿಗೆ ಮತ್ತು ಬವಣೆಯನ್ನು ಎರಡು ಸಮನಾಗಬೇಕು ಎಂದರು. ಪತ್ರಿಕೆಗಳು ದರ ನಿಗಧಿಪಡಿಸುವ ಸಮಯದಲ್ಲಿ ಪತ್ರಿಕೆಗಳು ಮೌಲ್ಯವನ್ನು ಕಳೆದುಕೊಂಡವು ಎಂದರಲ್ಲದೆ ಪತ್ರಿಕೆಗಳಿಗೆ ಜಾಹಿರಾತುಗಳಿಲ್ಲದಿದ್ದರೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
 ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಪತ್ರಿಕೆಯನ್ನು ಕೊಂಡು ಓದುವ ರೂಡಿ ಬೆಳೆಸಿಕೊಳ್ಳಬೇಕು, ಇತರರು ಕೊಂಡಿರುವ ಪತ್ರಿಕೆಯನ್ನು ಅವರ ನಂತರ ಓದ ಬಹುದು ಎಂಬ ಸಂಪ್ರದಾಯವನ್ನು ಬಿಡಬೇಕು ಎಂದರು. 

Tuesday, January 29, 2013


ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ಮನವಿ
ಚಿಕ್ಕನಾಯಕನಹಳ್ಳಿ,ಜ.28 : 2004-05ರಲ್ಲಿ ಜಾತಿವಾರು ಜನಗಣತಿಗೆ ಕೇಂದ್ರ ಸಕರ್ಾರ ಅನುಮತಿ ನೀಡಿತ್ತು, ಆದರೆ ಅಲ್ಲಿಂದ ಇಲ್ಲಿಯವರೆಗೆ ಎರಡು ಮೂರು ಆಯೋಗ ವರದಿ ನೀಡಿದರೂ ಸಕರ್ಾರದ ನಿರ್ಲಕ್ಷತನದಿಂದ ಅನುಷ್ಠಾನಗೊಂಡಿಲ್ಲ, ನಾನು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮತ್ತೊಮ್ಮೆ ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ನನ್ನ ಮೊದಲನೆ ಆಯೋಗದ ಸಭೆಯಲ್ಲಿಯೇ ವರದಿ ನೀಡಿರುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜಾತಿವಾರು ಜನಗಣತಿ ವಗರ್ೀಕರಣದ ಬಗ್ಗೆ ಹಿಂದುಳಿದ ವರ್ಗಗಳ  ವಿಚಾರವಾಗಿ ಹೊಸದಾಗಿ ಸೇರಿಸುವಿಕೆ ಅಥವಾ ತೆಗೆಯುವಿಕೆಯ ಸಮಸ್ಯೆಯಿದ್ದರೆ ಕಾನೂನು ಮಿತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿಯೂ,  ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಲ್ಲಿ ಈ ವರ್ಗಗಳಿಗೆ ತೊಂದರೆ ಉಂಟಾಗಿ, ಆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ಹಿಂದುಳಿದ ವರ್ಗದ ಜಾತಿಗಳ ಸಮಸ್ಯೆ ಬಗೆಹರಿಸಲು ಸಮೀಕ್ಷೆ ಮಾಡಿ ಮುಖ್ಯಂತ್ರಿಗಳಿಗೆ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದಶರ್ಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ ಅವರು, 1972ರಲ್ಲಿ ಆರಂಭಗೊಂಡ ಆಯೋಗದಿಂದ ಇಲ್ಲಿಯವರೆಗೂ ಬೇರೆ ಯಾವ ಅಧ್ಯಕ್ಷರುಗಳು ಇಷ್ಟು ಬೇಗ ವರದಿ ನೀಡಿರುವುದಿಲ್ಲ ಎಂಬ ಬಗ್ಗೆ 
ಹಿಂದುಳಿದ ವರ್ಗಗಳ ಆಥರ್ಿಕ ಹಿನ್ನಲೆ, ಶೈಕ್ಷಣಿಕ ಹಿನ್ನಲೆ, ಆಚಾರ ವಿಚಾರ, ಪದ್ದತಿ, ಸಾಮಾಜಿಕ, ಸಂಸ್ಕಾರ ಹಿನ್ನಲೆಗಳನ್ನು ಅರಿತು ಮತ್ತೊಮ್ಮೆ ಜಾತಿ ಪುನರ್ವಿಂಗಡನೆ ಮಾಡಲು ತಿಳಿಸಿರುವುದಾಗಿ ಹಾಗೂ ಈಗಿನ ಪರಿಸ್ಥಿತಿ ಬದಲಾಗಿರುವುದರಿಂದ ಬ್ರಿಟೀಷ್ ಅಧಿಕಾರಿಗಳು ಬಹಳ ವರ್ಷದ ಹಿಂದೆ ಬರೆದಿದ್ದ ತಷ್ಟರ್ ಪುಸ್ತಕವನ್ನು ಬದಲಾಯಿಸಲು ಕುಲಶಾಸ್ತ್ರಜ್ಞರನ್ನು ಭೇಟಿ ಮಾಡಿ ವಿಶೇಷವಾಗಿರುವಂತಹ ಗ್ರಂಥವನ್ನು ರಚಿಸಲು ಮುಂದಾಗಿದ್ದು ಉನ್ನತ ಅಧ್ಯಯನ ಮಾಡಲು  ಈ ಗ್ರಂಥದಿಂದ ಪ್ರತಿಯೊಬ್ಬ ವಿದ್ಯಾಥರ್ಿಗಳಿಗೂ ಅನುಕೂಲವಾಗಲಿದೆ, ಈ ಗ್ರಂಥ ಸಿದ್ದವಾಗಲು 2ಕೋಟಿಯಷ್ಟು ಹಣ ವೆಚ್ಚವಾಗಲಿದ್ದು ಗ್ರಂಥ ಸಿದ್ದವಾಗಿ ಮಾರಾಟವಾದರೆ ಸುಮಾರು 6ಕೋಟಿಯಷ್ಟು ಲಾಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಮಡಿವಾಳ ಜನಾಂಗದ ಅಧ್ಯಕ್ಷ ಹಾಗೂ ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ,  ಎಂ.ಎಲ್.ಮಲ್ಲಿಕಾರ್ಜನಯ್ಯ, ನಾಗರಾಜು ಸೇರಿದಂತೆ ಹಲವರಿದ್ದರು.
ಆಧಾರ್ ಕಾಡರ್್ ಬಗ್ಗೆ ತಿಳಿಸಲು ಬೃಹತ್ ಪಾದಯಾತ್ರೆ
ಚಿಕ್ಕನಾಯಕನಹಳ್ಳಿ,ಜ.29:  ಆಧಾರ್ ಕಾಡರ್್ ಸವಲತ್ತುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾದಯಾತ್ರೆಯು ಫೆಬ್ರವರಿ 3ರಿಂದ ಆರಂಭಗೊಳ್ಳುವುದು, ತಿಪಟೂರಿನಲ್ಲಿ ಉದ್ಘಾಟನೆಗೊಂಡು, ಶೆಟ್ಟಿಕೆರೆ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಬರುತ್ತದೆ, 4ನೇ ತಾರೀಖು ಕಿಬ್ಬನಹಳ್ಳಿ ಮಾರ್ಗವಾಗಿ ದೊಡ್ಡಗುಣಿಯಲ್ಲಿ ತಂಗಿದ ನಂತರ 5ರಂದು ಗುಬ್ಬಿ, 6ರಂದು ಹೆಗ್ಗರೆಯಲ್ಲಿರುವ  ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಸಭೆ ನಡೆಯಲಿದ್ದು ಕೇಂದ್ರದ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ.
ಸಕರ್ಾರದಿಂದ ಜನ ಸಾಮಾನ್ಯರಿಗೆ ತಲುಪುತ್ತಿರುವ ಅನುದಾನಗಳು ಮಾಸಾಶನ ಇನ್ನಿತರ ಸಹಾಯಧವನ್ನು ನೇರವಾಗಿ ತಲುಪಲು ಮಹತ್ವಾಕಾಂಕ್ಷಿ ವ್ಯವಸ್ಥೆಯೊಂದನ್ನು ಕಾಂಗ್ರೇಸ್ ಸಕರ್ಾರ ಜಾರಿಗೊಳಿಸಿದೆ. ಇನ್ನು ಮುಂದೆ ಫಲನುಭಾವಿಗಳು ಆಧಾರ್ ಕಾಡರ್್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಅವರ ಬ್ಯಾಂಕ್ ಖಾತೆಗೆ ಸಮೀಕರಿಸಿ ಅದರ ಮೂಲಕ ಫಲಾನುಭವಿಗಳಿಗೆ ತಲುಪಬೇಕಾದ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಬಹುದಾಗಿದೆ, ಉದ್ಯೋಗ ಖಾತ್ರಿ ಯೋಜನೆಯಡಿ ಸವಲತ್ತು ಪಡೆಯುತ್ತಿರುವವರು, ವೃದ್ದಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲರ ವೇತನ, ಶಾಲಾ ಶಿಕ್ಷಕರು ಮತ್ತು ವಿದ್ಯಾಥರ್ಿಗಳ ವಿದ್ಯಾಥರ್ಿ ವೇತನ ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಸೇರಿದಂತೆ ನಿಧರ್ಿಷ್ಟ ಅವಧಿಗೆ ಸಂಬಳದ ರೂಪದಲ್ಲಿ ಹಣ ಪಡೆಯುತ್ತಿರುವವರು ಹಾಗೂ ಇತರ ಸೌಲಭ್ಯ ಪಡೆಯಲು ಆಧಾರ್ ಅವಶ್ಯಕತೆಯಾಗಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸಕರ್ಾರ ದಿಟ್ಟ ಹೆಜ್ಜೆ ಇಟ್ಟಿದ್ದು ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್.ನಾರಾಯಣ್, ಬಿ.ಲಕ್ಕಪ್ಪ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕ ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ತುಮಕೂರು ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಆರ್.ರಾಜೇಂದ್ರ,  ಯುವ  ಮುಖಂಡರುಗಳಾದ ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ವಾಸು ಸೇರಿದಂತೆ ಹಲವರಿದ್ದರು.
aPÀÌ£ÁAiÀÄPÀ£ÀºÀ½îAiÀÄ MPÀ̰UÀ ¸ÀªÀÄÄzÁAiÀÄzÀªÀgÀÄ D¢ZÀÄAZÀ£ÀVj ªÀĺÁ¸ÀA¸ÁÜ£À ¦ÃoÁzsÀåPÀëgÁzÀ ¨Á®UÀAUÁzsÀgÀ£ÁxÀ¸Áé«ÄUÀ¼À ¨sÀPÀÛ ¸ÀAUÀªÀÄ ¥ÀÄuÁågÁzsÀ£À ¸ÀªÀÄgÀA¨sÀPÉÌ vÉgÀ¼À®Ä ±Á¸ÀPÀ ¹.©.¸ÀÄgÉñï¨Á§Ä 30§¸ïUÀ¼À ªÀåªÀ¸ÉÜ PÀ°à¹zÀÝgÀÄ.  D¢ZÀÄAZÀ£ÀVjUÉ vÉgÀ¼ÀªÀ ¨sÀPÀÛjUÉ ©¼ÉÆÌqÀĪÀ ¸ÀAzÀ¨sÀðzÀ°è  MPÀ̰UÀ ¸ÀªÀÄÄzÁAiÀÄzÀªÀgÁzÀ ªÀiÁf f.¥ÀA.¸ÀzÀ¸Àå ¤AUÀ¥Àà, ªÀiÁf. UÁæ.¥ÀA.¸ÀzÀ¸Àå £ÁUÀgÁdÄ, ©.J¸ï.¤AUÀ¥Àà, ºÉZï.©.J¸ï.£ÁgÁAiÀÄtUËqÀ, mË£ï ¨ÁåAPï ªÀiÁf CzsÀåPÀë ¹.J¸ï.£ÀlgÁeï G¥À¹ÜvÀjzÀÝgÀÄ.



ಪ್ರಜಾಪ್ರಗತಿಗೆ 25ರ ಸಂಭ್ರಮ
ಚಿಕ್ಕನಾಯಕನಹಳ್ಳಿ,ಜ.29: ಪ್ರಜಾಪ್ರಗತಿ ಓದುಗರ ಬಳಗ ಹಾಗೂ ರೋಟರಿ ಕ್ಲಬ್ ವತಿಯಿಂದ ಇದೇ30ರಂದು(ಇಂದು) ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮವನ್ನು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು,  ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ವಹಿಸಲಿದ್ದು, ಉದ್ಘಾಟನೆಯನ್ನು ಕವಿ-ಲೇಖಕ ಎಸ್.ಜಿ.ಸಿದ್ದರಾಮಯ್ಯ ನೆರವೇರಿಸಲಿದ್ದಾರೆ, ಸಮಾರಂಭದಲ್ಲಿ  ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣನವರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು, 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಮಾತನಾಡಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಎಂ.ಸಿ.ಲಲಿತ, ಬಿ.ಇ.ಓ ಸಾ.ಚಿ.ನಾಗೇಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಉಪಸ್ಥಿತರಿರುವರು.

Sunday, January 27, 2013


ಸಮಾನತೆಯ ಭಾತೃತ ಕಾಪಾಡಿ : ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಜ.26 : ಸಮಜದಲ್ಲಿ ನಡೆಯುತ್ತಿರುವ ದುರ್ಘಟನೆಗಲು ತಪ್ಪಿ, ಸಮಾಜ ಸಮಾನತೆಯ ಭಾತೃತ್ವದಿಂದ ಬಾಳಿದಾಗ ಡಾ.ಬಿ.ಆರ್.ಅಂಭೇಡ್ಕರ್ ರಚಿಸಿರುವ ಸಂವಿಧಾನದ ಸಾರ್ಥಕತೆ ಹೆಚ್ಚುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 64ನೇ ಗಣರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು, ಸಂವಿದಾನದಲ್ಲಿರುವ ಅಂಶವನ್ನು ಅರ್ಥಪೂರ್ಣವಾಗಿ ಆಚರಿಸಿ ಅದರ ಗೌರವ ಹೆಚ್ಚಿಸಬೇಕು ಎಂದರಲ್ಲದೆ ಯುವಶಕ್ತಿ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದರು.  
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಸಂವಿಧಾನದ ತತ್ವದ ಮೂಲಕ ಸಕರ್ಾರ ಆಡಳಿತ ವ್ಯವಸ್ಥೆ ಹೊಂದಿದೆ ಈ ಮೂಲಕ ಸಮಾಜದ ಐಕ್ಯತೆಯನ್ನು ಎಲ್ಲರ ಸಹಯೋಗದ ವಿಶ್ವಾಸಗಳಿಸಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಮಾಜದ ಎಲ್ಲರೂ ಭ್ರಾತೃತ್ವ, ಐಕ್ಯತೆಯಿಂದ ಬಾಳುವಂತೆ ಕರೆ ನೀಡಿದರು.
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ 64ನೇ ಗಣರಾಜ್ಯೋತ್ಸವವನ್ನು ಇಡೀ ದೇಶಾದ್ಯಂತ ಆಚರಿಸುತ್ತಿದ್ದು, ಸಂವಿಧಾನದ ತತ್ವದಂತೆ ಎಲ್ಲರು ತಲೆಭಾಗಬೇಕು ಎಂದರು.
ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾಲಯದ 2011-12ನೇ ಸಾಲಿನ ಘಟಿಕೋತ್ಸವದಲ್ಲಿ ಸಮಾಜ ಕಾರ್ಯ ವಿಭಾಗದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ನಂದಿನಿ, ನೇತ್ರಾವತಿ, ಪ್ರತಿಭಾನಾಯಕಿ, ನಂದಿನಿ ಹಾಗೂ ಷಟಲ್ ಮತ್ತು ಜಾವೆಲಿನ್  ಸ್ಪಧರ್ೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ತೀರ್ಥಪುರ ಸಕರ್ಾರಿ ಪ್ರೌಡಶಾಲೆಯ  ಉಷಾ,  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಬಾಲ ವಿಜ್ಞಾನಿ ಪ್ರಶಸ್ತಿ ಪಡೆದ ಅಂಭೇಡ್ಕರ್ ಪ್ರೌಡಶಾಲೆಯ ಡಿ.ಭವ್ಯ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಉಪಸ್ಥಿತರಿದ್ದರು.


ಸಂಗೊಳ್ಳಿರಾಯಣ್ಣರ ಬಗ್ಗೆ ಅರಿಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜ.26 : ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಸಂಗೊಳ್ಳಿರಾಯಣ್ಣರ ಬಗ್ಗೆ ಇಡೀ ದೇಶಕ್ಕೆ ತಿಳಿಸುವ ಸಲುವಾಗಿ ಸಂಗೊಳ್ಳಿರಾಯಣ್ಣರ ಚಿತ್ರಕ್ಕೆ ಶ್ರಮಪಟ್ಟಿರುವುದಾಗಿ ಚಿತ್ರದ ಸಂಭಾಷಣಾಕಾರ ಕೇಶವಾದಿತ್ಯ ತಿಳಿಸಿದರು.
ಪಟ್ಟಣದ ರೇವಣಪ್ಪನ ಮಠದಲ್ಲಿ ನಡೆದ  ಸಂಗೊಳ್ಳಿರಾಯಣ್ಣರ 182ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸಂಗೊಳ್ಳಿರಾಯಣ್ಣ ಮಾಡಿದ ತ್ಯಾಗದ ಬಗ್ಗೆ ಅಲ್ಲಿನ ಜನತೆಗೆ ಮಾತ್ರ ತಿಳಿದಿತ್ತು, ಈ ಬಗ್ಗೆ ಇಡೀ ಪ್ರಪಂಚದ ಜನತೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಾಗೂ ರಾಯಣ್ಣನವರಿಗೆ ದೇಶದ ಬಗ್ಗೆ ಇದ್ದ ಭಕ್ತಿಯನ್ನು ತಿಳಿಸಲು ಚಿತ್ರಕ್ಕೆ ಶ್ರಮಿಸಿರುವುದಾಗಿ  ತಿಳಿಸಿದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಂಗೊಳ್ಳಿರಾಯಣ್ಣ ದೇಶಕ್ಕಾಗಿ ಇತಿಹಾಸ ನಿಮರ್ಿಸಿದವರು, ಅಂತಹ ಇತಿಹಾಸ ಪುರುಷರನ್ನು ಈಗಿನ ಯುವಶಕ್ತಿ ಆದರ್ಶವಾಗಿಟ್ಟುಕೊಳ್ಳಬೇಕು ಎಂದರಲ್ಲದೆ ಸಿ.ಎಲ್.ರವಿಕುಮಾರ್ರವರು ಸಂಗೊಳ್ಳಿರಾಯಣ್ಣನವರು ಸುಮಾರು 15ವರ್ಷದಿಂದ ಈ ರಾಯಣ್ಣರ ನೆನಪು ಮಾಡಿಕೊಂಡು ಮಕ್ಕಳಲ್ಲಿ ಸ್ಪೂತರ್ಿ ತುಂಬುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾಜಿ ಪುರಸಭಾಧ್ಯಕ್ಷ ಕೆ.ರಾಮಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ,  ತುರುವೇಕೆರೆ ನರಸಿಂಹಮೂತರ್ಿ, ಪ್ರೊ.ಧನಪಾಲ್ ಉಪಸ್ಥಿತರಿದ್ದರು.

aPÀÌ£ÁAiÀÄPÀ£ÀºÀ½î vÁ®ÆèQ£À zÉÆqÉØuÉÚUÉgÉ ¸À«ÄÃ¥À«gÀĪÀ ¨É®UÀÆj£À°è £ÀqÉAiÀÄÄwÛgÀĪÀ PÉÆÃn gÀÄzÀæ ªÀĺÁAiÀiÁUÀ PÁAiÀÄðPÀæªÀÄzÀ°è PÀÄ¥ÀÆàj£À qÁ.AiÀÄwñÀégÀ²ªÁZÁAiÀÄð¸Áé«Ä ¨sÁUÀªÀ»¹ gÀÄzÁæQë ²ªÀ°AUÀPÉÌ ¨sÀQÛ ¸ÀªÀĦð¹zÀgÀÄ.

aPÀÌ£ÁAiÀÄPÀ£ÀºÀ½îAiÀÄ §£À±ÀAPÀj zÉêÁ®AiÀÄzÀ°è §£ÀzÀ ºÀÄtÂÚªÉÄ ¥ÀæAiÀÄÄPÀÛ zÉëUÉ «±ÉõÀ C®APÁgÀzÉÆA¢UÉ ¥ÀlÖtzÀ ¥ÀæªÀÄÄR ©Ã¢AiÀÄ°è §£À±ÀAPÀj CªÀÄä£ÀªÀgÀ gÀxÉÆÃvÀìªÀªÀÅ «dÈA¨sÀuɬÄAzÀ £ÉgÀªÉÃjvÀÄ. 

aPÀÌ£ÁAiÀÄPÀ£ÀºÀ½îAiÀÄ ²°à «±Àé£ÁxïgÀªÀgÀ£ÀÄß vÀĪÀÄPÀÆj£À°è £ÀqÉzÀ UÀtgÁeÉÆåÃvÀìªÀ ¸ÀAzÀ¨sÀðzÀ°è f¯Áè DqÀ½vÀ ªÀw¬ÄAzÀ ¸À£Á䤸À¯Á¬ÄvÀÄ. F ¸ÀAzÀ¨sÀðzÀ°è ¸ÀaªÀ ¸ÉÆUÀqÀÄ ²ªÀtÚ, «zsÁ£À ¥ÀjµÀvï ¸ÀzÀ¸Àå qÁ.JA.Dgï.ºÀİ£ÁAiÀÄÌgï, f.¥ÀA.CzsÀåPÉë ¥ÉæÃªÀĪÀĺÁ°AUÀ¥Àà, £ÀUÀgÀ¸À¨sÉAiÀÄ ¥Àæ¨sÁgÀ CzsÀåPÀë C¸ÀèA¥ÁµÀ ¸ÉÃjzÀAvÉ UÀtågÀÄ ºÁdjzÀÝgÀÄ.

Thursday, January 24, 2013


ಗುಳೇ ಹೋಗುವುದನ್ನು ಬಿಟ್ಟು ಉಪ ಕಸಬುಗಳಿಗೆ ಮಾರುಹೋಗಿ
ಚಿಕ್ಕನಾಯಕನಹಳ್ಳಿ,ಜ.23 : ರೈತರಿಗೆ ಕೃಷಿ ಕೈಕೊಟ್ಟಾಗ ಪಟ್ಟಣದ ಪ್ರದೇಶಕ್ಕೆ ಗುಳೇ ಹೋಗಿ ಕಷ್ಟ ಪಡುವುದಕ್ಕಿಂತ ಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಸಾಲವನ್ನು ಪಡೆದುಕೊಂಡು ಹಳ್ಳಿಯಲ್ಲೇ ಸಣ್ಣಪುಟ್ಟ ವ್ಯಾಪಾರ ಅಥವಾ ಉಪಕಸುಬುಗಳನ್ನು ಮಾಡಿ, ಆ ಮೂಲಕ ರೈತರು ತಮ್ಮ ಆಥರ್ಿಕ ಮಟ್ಟ ಸುಧಾರಿಸಿಕೊಳ್ಳಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು.
 ತಾಲ್ಲೂಕಿನ ರಾಮನಹಳ್ಳಿಯಲ್ಲಿ ನಡೆದ ರೈತರಿಗೆ ಸಾಲ ಸೌಲಭ್ಯದ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ತೆರಳುವವರ ಜೀವನ ಕಷ್ಟಕರವಾಗಿರುತ್ತದೆ, ತಮ್ಮ ಹುಟ್ಟಿದ ಊರಿನಲ್ಲೇ ಕೃಷಿ ಜೊತೆಗೆ ಸಣ್ಣಪುಟ್ಟ ವ್ಯಾಪಾರ ಮಾಡಿದರೆ ತಮ್ಮ ತಂದೆ, ತಾಯಿ, ಕುಂಟುಂಬವನ್ನು ನೋಡಿಕೊಂಡು  ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದರಲ್ಲದೆ ತಾಲ್ಲೂಕಿನ ಎಲ್ಲಾ ರೈತರಿಗೂ ನನ್ನ ನಿದರ್ೇಶಕನ ಅವಧಿಯಲ್ಲಿ ಸಾಲ ಕೊಡಿಸಿದ್ದು ಈ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ ಅವರಿಗೆ ಪುನಃ ಬಡ್ಡಿ ರಹಿತ ಸಾಲ ಕೊಡಿಸುತ್ತಿರುವುದಾಗಿಯೂ ಹಾಗೂ ಹಲವು ರೈತರಿಗೆ ಸಾಲ ಮನ್ನ ಆಗಿರುವ ಬಗ್ಗೆಯೂ ತಿಳಿಸಿದರು.
ಈ ಭಾಗದ ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಶೆಟ್ಟಿಕೆರೆಯ ಸಾಸಲಿನ ಮೂಲಕ ತಾಲ್ಲೂಕಿನ ಹಲವು ಕೆರೆಗಳಿಗೆ ಕುಡಿಯುವ ನೀರು ದೊರಕಲಿದೆ, ಆ ನೀರನ್ನು ಗುಡ್ಡಗಾಡು ಪ್ರದೇಶಗಳಿಗೂ ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿರುವುದಾಗಿ ತಿಳಿಸಿದರು. ಈ ಭಾಗಕ್ಕೆ ನೀರನ್ನು ಹರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಹೋರಾಟ ಮಾಡುವುದಾಗಿಯೂ ತಿಳಿಸಿದರು.
ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಡಿಸಿಸಿ ಬ್ಯಾಂಕ್ನ ಠೇವಣಿ ಹಣದಲ್ಲಿ ನೀಡುತ್ತಿದ್ದು ರೈತರು ತಮ್ಮ ಠೇವಣಿಗಳನ್ನು ಬೇರೆ ಬ್ಯಾಂಕ್ಗಳಲ್ಲಿ ಇಡುವ ಬದಲು ನಮ್ಮ ಬ್ಯಾಂಕಿನಲ್ಲೇ ಇಟ್ಟರೆ ರೈತರಿಗೂ ಅನುಕೂಲವಾಗುತ್ತದೆ ಎಂದರು.
ಗುಡ್ಡಗಾಡು ಪ್ರದೇಶಗಳ ಸಹಕಾರ ಬ್ಯಾಂಕ್ಗಳಿಗೆ ಮಾತ್ರ ರಾಜ್ಕುಮಾರ್ ಸಾಲ ಸೌಲಭ್ಯವನ್ನು ಕೊಡಿಸುತ್ತಾರೆ ಇತರೆ ಬ್ಯಾಂಕ್ಗಳಿಗೆ  ಆ ಸೌಲಭ್ಯ ನೀಡುವುದಿಲ್ಲ ಎಂಬ ಆರೋಪ ನನ್ನ ಮೇಲಿದೆ ಆದರೆ ತಾಲ್ಲೂಕಿನ ಹೋಬಳಿಗಳ ಹಲವು ಸಹಕಾರ ಬ್ಯಾಂಕ್ಗಳಿಗೆ ಸಾಲಸೌಲಭ್ಯ ಕೊಡಿಸಿರುವುದಾಗಿ ತಿಳಿಸಿದರು.
ರಾಮನಹಳ್ಳಿ ಸಹಕಾರ ಬ್ಯಾಂಕ್ಗೆ ಮೊದಲು 75ಸಾವಿರ ಸಾಲ ಕೊಡಿಸಿದ್ದು, ಈಗ ಈ ಬ್ಯಾಂಕ್ಗೆ 20ಲಕ್ಷರೂ ಸಾಲ ಪಡೆದಿದೆ. ಒಟ್ಟಾರೆ ಈ ಸಂಸ್ಥೆ ಅಭಿವೃದಿಯಾಗಿ 3ಕೋಟಿಯಷ್ಟು ವ್ಯವಹಾರ ನಡೆಸುತ್ತಿದ್ದು ಈ ಭಾಗದಲ್ಲಿ 96ಲಕ್ಷರೂ ಗಳಷ್ಟು ರೈತರ ಸಾಲ ಮನ್ನಾ ಆಗಿದೆ ಎಂದರು.
 ಟಿ.ಎ.ಪಿ.ಸಿ.ಎಂ.ಎಸ್ ನಿದರ್ೇಶಕ ಆರ್.ಬಿ.ಕುಮಾರ್ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗಿರುವ ಸಾಲವನ್ನು ರೈತರು ದುರುಪಯೋಗ ಪಡಿಸಿಕೊಳ್ಳದೆ ಸಾಲದಿಂದ ಲಾಭ ಪಡೆಯುವ ಬಗ್ಗೆ ತಿಳಿಸಿದರು.
ಸ್ಥಳೀಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೋಗಣ್ಣ ಮಾತನಾಡಿ  ಈ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚು ಬಡವರು ಇರುವುದರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ನಿದರ್ೇಶಕ ರಾಜ್ಕುಮಾರ್ರವರ ನೆರವಿನಿಂದ ಬೆಳೆಸಾಲ, ವ್ಯಾಪಾರ ಸಾಲದ ಸೌಲಭ್ಯ ನೀಡಿ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ರಾಮನಹಳ್ಳಿ ನಿದರ್ೇಶಕ ಆರ್.ಕೇಶವಮೂತರ್ಿ, ಆರ್.ಜಿ.ಕುಮಾರಸ್ವಾಮಿ, ಉಮಾದೇವಿ, ರಘು, ನರಸಿಂಹಮೂತರ್ಿ ಉಪಸ್ಥಿತರಿದ್ದರು.

Wednesday, January 23, 2013



ಸಕರ್ಾರಿ ಕ್ಯಾಮರಗಳ ದುರ್ಬಳಕೆ: ಗ್ರಾಮೀಣ ಪೊಟೋಗ್ರಾಫರ್ಗಳ ಕೆಲಸಕ್ಕೆ ಕುತ್ತು
                            
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮ ಪಂಚಾಯಿತಿಗಳ ಕೆಲಸಗಳಿಗೆ ಪೋಟೋ ತೆಗೆಯಲು ಸಕರ್ಾರದವರು ನೀಡಿರುವ ಕ್ಯಾಮಾರಗಳು ದುರ್ಬಳಕೆಯಾಗುತ್ತಿದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ  ಆರೋಪಿಸಿದೆ.
  ಸಕರ್ಾರ ವಿವಿಧ ಇಲಾಖೆಗಳಿಗೆ ಕ್ಯಾಮಾರ ನೀಡಿರುವುದು ತಮ್ಮ ಇಲಾಖೆಗಳ ಕೆಲಸಕ್ಕೆ ಮಾತ್ರ  ಆದರೆ ಈ ಕ್ಯಾಮಾರದಿಂದ ಕೆಲವರು ತಮ್ಮ ಹಳ್ಳಿಗಳಲ್ಲಿ ನಡೆಯುವ ಸಣ್ಣ ಪುಟ್ಟ ಶುಭ ಸಮಾರಂಭಗಳ ಪೋಟೋ ಮತ್ತು ವಿಡಿಯೋಗಳನ್ನು ತೆಗೆದು ಕೈಯಿಗೆ ಬಂದಷ್ಟು ಕಾಸು ಮಾಡಿ ಗ್ರಾಮಾಂತರ ಛಾಯಾಗ್ರಹಕರ ಕೆಲಸಕ್ಕೆ ತೊಂದರೆ ಪಡಿಸುತ್ತಿದ್ದಾರೆ ಅದನ್ನು ತಪ್ಪಿಸಬೇಕೆಂದು  ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯರವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಅಪರ್ಿಸಿದರು.
ಗ್ರಾಮಾಂತರ ಛಾಯಾಗ್ರಹಹಕರು ಹಳ್ಳಿಗಳಿಗೆ ಹೋಗಲಾರದಂತಹ ಸ್ಥಿತಿಯನ್ನು ಗ್ರಾಮ ಪಂಚಾಯಿತಿ ನೌಕರರು ಮಾಡುತ್ತಿರುವುದು ದಿನ ನಿತ್ಯ ನಡೆಯುವ ವಿಚಾರವಾಗಿದೆ, ಅಲ್ಲದೆ ಬಡ ಛಾಯಾಗ್ರಾಹಕರುಗಳು ಪರಿಚಯವಿರುವವರ ಗ್ರಾಂಟ್ ಮನೆ ಪೋಟೋಗಳನ್ನು ತೆಗೆದರೆ ನಾವು ಸ್ವೀಕರಿಸುವುದಿಲ್ಲ, ನಮ್ಮ ಕ್ಯಾಮರಾದಲ್ಲಿಯೇ ಪೋಟೋ ತೆಗೆಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಬಿಲ್ ಕೊಡುವುದಿಲ್ಲ ಎಂದು ಫಲಾನುಭವಿಗಳಿಗೆ ಹೆದರಿಸುತ್ತಿದ್ದಾರೆ, ಗ್ರಾಮ ಪಂಚಾಯ್ತಿ ನೌಕರುಗಳು ಸಕರ್ಾರಿ ಸಂಬಳ ತೆಗೆದುಕೊಂಡು  ಜೊತೆಗೆ ಕ್ಯಾಮರಾ ಬಳಸಿ ಎಲ್ಲಾ ವ್ಯವಹಾರವನ್ನು ನೌಕರರೆ ಮಾಡುತ್ತ ನಮ್ಮ ಛಾಯಾಗ್ರಾಹಕರ ಕೆಲಸ ಮತ್ತು ಜೀವನಕ್ಕೆ ತೊಂದರೆ ಪಡಿಸುತ್ತಿದ್ದಾರೆ ಆದ್ದರಿಂದ ಇಂದಿನಿಂದಲೇ ಆದೇಶವನ್ನು ಜಾರಿ ಮಾಡಿ ಗ್ರಾಮ ಪಂಚಾಯ್ತಿಯ ನೌಕರರಿಗೆ ಸಕರ್ಾರಿ ಕೆಲಸದ ಹೊರತು ಬೇರೆ ಪೋಟೋಗಳು, ವಿಡಿಯೋಗಳನ್ನು ಚಿತ್ರಿಕರಿಸಿದರೆ ಕ್ರಮ ಕೈಗೊಳ್ಳುತ್ತೇವೆಂದು ಆದೇಶ ಹೊರಡಿಸಬೇಕೆಂದು ಹಾಗೇನಾದರೂ ನಿಮ್ಮ ಆದೇಶವನ್ನು ಮೀರಿ ತಮ್ಮ ಕೈಚಳಕ ತೋರಿದರೆ ಸಂಘ ಗಂಬೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಮನವಿ ಪತ್ರದಲ್ಲಿ ತಿಳಿಸಿದೆ. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೃತ್ಯಂಜಯ, ಸದಸ್ಯರುಗಳಾದ ಸಿದ್ದು.ಜಿ.ಕೆರೆ, ಮಂಜುನಾಥ್, ಸಂಜಯ್, ರಂಗನಾಥಬಾಬು, ಗೋಪಾಲಚಾರ್, ವಿಜಿ.ಪ್ರಭು, ಹಂಪೇಶ್, ಈಶ್ವರ್, ಹರೀಶ್, ನವೀನ್, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆ ಆಚರಿಸಿದ ಆಟೋಚಾಲಕರು
ಚಿಕ್ಕನಾಯಕನಹಳ್ಳಿ,ಜ.23 : ದೇಶ ಭಕ್ತ, ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆಯನ್ನು ಆಚರಿಸುತ್ತಿರುವುದು ಹಾಗೂ  ಆಟೋ ಚಾಲಕರು ತಮ್ಮ ಸಂಘಟನೆಯ ಶಕ್ತಿಯಾಗಿ ಬೋಸ್ರವರ ಹೆಸರನ್ನು ಬಳಿಸಿಕೊಳ್ಳುವ ಮೂಲಕ  ಶ್ರಮಿಕ ವರ್ಗದವರು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ರೋಟರಿ ಅಧ್ಯಕ್ಷ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ನಡೆದ ಸುಭಾಷ್ ಚಂದ್ರಬೋಸ್ ಜನ್ಮದಿನಾಚಾರಣೆ, ರಸ್ತೆಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 
ಅಶಕ್ತರಿಗೆ ಮತ್ತು ಆಥರ್ಿಕ ಬಲಹೀನರ ಅನಾರೋಗ್ಯಕ್ಕೆ ಸ್ಪಂದಿಸುತ್ತಾ, ಮಾನವೀಯತೆಯ ನೆಲೆಗಟ್ಟಿನಲ್ಲಿ ನಡೆದುಕೊಳ್ಳುವ ಮೂಲಕ ಆಟೋ ಚಾಲಕರು ತಮ್ಮ ಸಂಘಕ್ಕೆ ಇಟ್ಟಿರುವ ಹೆಸರನ್ನು ಸಾರ್ಥಕ ಪಡಿಸಿಕೊಳ್ಳಬೇಕು, ಆ ಮೂಲಕ ಸುಭೋಷ್ ಚಂದ್ರ ಬೋಸ್ರವರ ಆಶಯಗಳಿಗೆ ಸ್ಪಂದಿಸುತ್ತಾ ಸಂಘಟಿತರಾಗಬೇಕು  ಎಂದರು.
ಇಪ್ಪತ್ತು ವರ್ಷಗಳ ಹಿಂದೆ ಎರಡು ಆಟೋಗಳನ್ನು ಹೊಂದಿದ್ದ ಪಟ್ಟಣ, ಈಗ ಇನ್ನೂರ ಐವತ್ತಕ್ಕೂ ಹೆಚ್ಚು ಆಟೋಗಳನ್ನು ಹೊಂದುವ ಮೂಲಕ  ಸಂಘಟನೆಗೊಂಡಿರುವುದು ಪಟ್ಟಣ ಬೆಳೆಯುತ್ತಿರುವ ವೇಗಕ್ಕೊಂದು ಮಾಪನವಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಆಟೋ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು, ಚಾಲನೆ ಮಾಡುವಾಗ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವತರ್ಿಸಿದರೆ ಪ್ರಯಾಣಿಕರು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ ಎಂದರಲ್ಲದೆ, ಪುರಸಭೆ ವತಿಯಿಂದ ನಿವೇಶನ ಹಂಚಿಕೆಯ ಚಚರ್ೆ ನಡೆಯುತ್ತಿದೆ, ಆಥರ್ಿಕವಾಗಿ ಹಿಂದುಳಿದವರು ನಿವೇಶನಗಳಿಗೆ ಅಜರ್ಿ ಹಾಕಿಕೊಂಡರೆ ಇಂತಹ ಅಜರ್ಿಗಳನ್ನು ಪರಿಗಣಿಸಲಾಗುವುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ರಸ್ತೆ ಸುರಕ್ಷತೆ ಸಪ್ತಾಹದ ಬಗ್ಗೆ ಮಾತನಾಡಿ, ಚಾಲಕರು ರಸ್ತೆ ಸುರಕ್ಷೆಯನ್ನು ಪಾಲಿಸದೆ ಚಾಲನೆ ಮಾಡಿದ್ದರಿಂದ ಒಂದು ವರ್ಷದಲ್ಲಿ  ತಾಲ್ಲೂಕಿನಲ್ಲಿ 27ಅಪಘಾತಗಳು ನಡೆದು 34ಜನರ ಪ್ರಾಣಹಾನಿಯಾಗಿದೆ, ಚಾಲನೆ ಮಾಡುವವರು ಆರ್.ಟಿ.ಓ ಕಛೇರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು ತಮ್ಮ ವಾಹನಕ್ಕೆ ವಿಮೆ ಮಾಡಿಸಿದರೆ ಅಪಘಾತವಾದರೆ ಅದರಿಂದ ಸಹಾಯವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಸಮವಸ್ತ್ರವನ್ನು ಧರಿಸಲು ತಿಳಿಸಿದರು.
ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್ ಮಾತನಾಡಿ ಸಾರ್ವಜನಿಕರು ಪೋಲಿಸರು ಮತ್ತು ಚಾಲಕರು ಧರಿಸುವ ಯೂನಿಫಾರಂನಲ್ಲಿ ನಂಬಿಕೆ ಇಟ್ಟಿದ್ದಾರೆ, ಈ ನಂಬಿಕೆಯಿಂದಲೇ ಮಹಿಳೆಯರು ಆಟೋಗಳಲ್ಲಿ ಪ್ರಯಾಣಿಸುವುದು ಎಂದರಲ್ಲದೆ ಚಾಲಕರು ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ವಿಚಾರಿಸಿ ಪ್ರಯಾಣಿಸಬೇಕು, ಪೋಲಿಸರಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಹಾಗೂ ಡಿ.ಎಸ್.ಎಸ್.ಮುಖಂಡ,ಆಟೊ ಚಾಲಕ ಲಿಂಗದೇವರು ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಕೃಷ್ಣಮುತರ್ಿ, ಬಿ.ಇ.ಓ ಸಾ.ಚಿ.ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್, ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು. 

Monday, January 21, 2013


ಮಧುಮೇಹ ನಿವಾರಣೆಗೆ ಆರ್ಕ ಬೆಳೆ ರಾಮಬಾಣ: ಡಾ.ಖಾದರ್

ಚಿಕ್ಕನಾಯಕನಹಳ್ಳಿ,ಜ.20 : ರೋಗ ನಿವಾರಕ, ಮಧುಮೇಹ ನಿವಾರಣೆಗೆ  ರಾಮಬಾಣವಾಗಿರುವ ಆರ್ಕ ಬೆಳೆಗೆ ನಗರ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆ ಕೇಳಿಬರುತ್ತಿದೆ, ಕೆಲವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಈ ಬೆಳೆಗೆ ಮುಂದಿನ ಹತ್ತು ವರ್ಷದಲ್ಲಿ ಉತ್ತಮ ಬೆಲೆ ಸಿಗಲಿದ್ದು ರೈತರು ಆರ್ಕ ಬೆಳೆಯನ್ನು ಹೆಚ್ಚು ಬೆಳೆಯಬೇಕು  ಎಂದು ವಿಜ್ಞಾನಿ ಡಾ.ಖಾದರ್ ತಿಳಿಸಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ನಡೆದ ಸಿರಿಧಾನ್ಯ ಮಹತ್ವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಆರ್ಕ ಬೆಳೆಯು ರೋಗ ನಿವಾರಣೆ ಮಾಡುವ ಬೆಳೆ, ಈ ಬೆಳೆಯನ್ನು ಜೀವಿಯು ತನ್ನ ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತ ಎಂದರು.
ಹಲವು ಟಿ.ವಿ ಮಾಧ್ಯಮಗಳು ಜಾಹಿರಾತುಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತವೆ ಆದರೆ ಈ ಜಾಹಿರಾತುಗಳು ಕೇವಲ ಕಂಪನಿಗಳ ಅಭಿವೃದ್ದಿಗಾಗಿಯೇ ಹೊರತು ಜೀವಿಯ ಆರೋಗ್ಯ ವೃದ್ದಿಸುವುದಕ್ಕಾಗಿಯಲ್ಲ ಎಂದು ತಿಳಿಸಿದರು.
ಬೇಕರಿ ಅಂಗಡಿಗಳು ನಗರದಿಂದ ಹಳ್ಳಿಗಳಿಗೂ ಬಂದಿವೆ, ಈ  ಉತ್ಪನ್ನಗಳು ಹೆಚ್ಚು ವೈರಾಣು, ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ ಇದರಿಂದ ಆರೋಗ್ಯ ಹದಗೆಟ್ಟು ಹಳ್ಳಿಯ ಮಕ್ಕಳು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಎಂದರು..
ಆರ್ಕ ಬೆಳೆಗೆ ಕಿರುಧಾನ್ಯ ಎಂಬ ಪದವನ್ನು ಕರೆಯುವುದನ್ನು ಬಿಟ್ಟು ಅದಕ್ಕೆ ಸಿರಿಧಾನ್ಯ ಎಂಬ ಪದ ಬಳಸಿದರೆ ಆರ್ಕ ಬೆಳೆಗೆ ನೀಡುವ ಮಹತ್ವ ಹೆಚ್ಚುತ್ತದೆ ಎಂದರು. 
ಸಮಾರಂಭದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಯತಿರಾಜು, ಕಾರ್ಯದಶರ್ಿ ರಾಮಕೃಷ್ಣಪ್ಪ, ಪ್ರಾಂಶುಪಾಲರಾದ ಎನ್.ಇಂದಿರಮ್ಮ, ರಘುಗೋಪಾಲನಹಳ್ಳಿ, ಚಂದ್ರಶೇಖರ್ಬಾಳೆ, ಆರ್ಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಮ್.ಬಸವರಾಜು, ಜಗದೀಶ್ವರ್ ಸೇರಿದಂತೆ ಆರ್ಕ ಬೆಳೆಗಾರರ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವಿ.ಎಸ್.ಎಸ್.ಎನ್.ಗಳು ಡಿ.ಸಿ.ಸಿ.ಬ್ಯಾಂಕ್ಗೆ ಠೇವಣಿ ಸಂಗ್ರಹಿಸಲು ಮುಂದಾಗಬೇಕು:
ಚಿಕ್ಕನಾಯಕನಹಳ್ಳಿ,ಜ.21 : ರೈತರು, ಸಂಘ ಸಂಸ್ಥೆಗಳು ಡಿಸಿಸಿ ಬ್ಯಾಂಕ್ನ್ನು ಕೇವಲ ಸಾಲ ಕೊಡುವ ಸಂಸ್ಥೆಯನ್ನಾಗಿಸಿಕೊಳ್ಳದೆ ಠೇವಣಿಯನ್ನು ನಮ್ಮ ಬ್ಯಾಂಕಿನಲ್ಲಿ ಇಡುವಂತೆ  ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಕರೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರ ನಿದರ್ೇಶನದಂತೆ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ 32ಲಕ್ಷದ 25ಸಾವಿರ ರೂ ಸಾಲವನ್ನು ಇಂದು ವಿತರಿಸಲಾಗಿದೆ. ಸಂಘದ 216ಸದಸ್ಯರಿಗೆ ಈ ಸೌಲಭ್ಯ ದೊರಕಲಿದೆ ಎಂದರು.
ರೈತರು ಹಾಗೂ ಸಂಘ ಸಂಸ್ಥೆಗಳವರು, ತಮ್ಮ ಸಂಸ್ಥೆ ಅಭಿವೃದ್ದಿ ದೃಷ್ಠಿಯಿಂದ ಸಾಲ ಪಡೆದುಕೊಳ್ಳುವ ಜೊತೆಗೆ ಠೇವಣಿಯನ್ನು ಸಂಗ್ರಹಿಸಬೇಕು, ನೀವು ಇಡುವ ಠೇವಣಿಯಿಂದಲೇ ಬ್ಯಾಂಕ್ ಸಾಲ ವಿತರಿಸುತ್ತಿದೆ ಎಂದರಲ್ಲದೆ ಸಾಲ ವಿತರಣೆಯನ್ನು ವಿಸ್ತರಿಸುವ ದೃಷ್ಠಿಯಿಂದ ಚಿನ್ನಾಭರಣಗಳ ಸಾಲ, ಅಡಕೆ ಅಡಮಾನ ಸಾಲವನ್ನು ನೀಡಲು ಸಂಘಗಳಿಗೆ ತಿಳಿಸುತ್ತಿದ್ದು ಈ ರೀತಿಯ ಸಾಲವನ್ನು ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದ ಹಲವು ಸಂಘಗಳು ನೀಡುತ್ತಿವೆ ಎಂದರು.
  ಶೆಟ್ಟೀಕೆರೆ ಪ್ರಾಥಮಕ ಸಹಕಾರ ಸಂಘಕ್ಕೆ ಈಗ ನೀಡುತ್ತಿರುವ ಸಾಲದ ಜೊತೆಗೆ ಜೂನ್ ತಿಂಗಳಿನಲ್ಲಿ ಇನ್ನಷ್ಟು ಸಾಲ ನೀಡುವ ಹಾಗೂ ಸಂಘಕ್ಕೆ  ಸೇಫ್ ಲಾಕರ್ ನೀಡುವುದಾಗಿ ಭರವಸೆ ನೀಡಿದರು.
ಶೆಟ್ಟಿಕೆರೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ಸಂಘಕ್ಕೆ ಈ ಹಿಂದೆ 18ಲಕ್ಷ ರೂ ನೀಡಿದ್ದ ಸಾಲದ ನಂತರ ರಾಜ್ಕುಮಾರ್ ರವರ ಸಹಾಯದಿಂದ 32ಲಕ್ಷ 25ಸಾವಿರ ರೂ ದೊರಕಿರುವುದು ಸಂಘಕ್ಕೆ ಹೆಗ್ಗಳಿಕೆ ಎಂದರು.
ರಾಮನಹಳ್ಳಿ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಆರ್.ಕೇಶವಮೂತರ್ಿ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಇಡೀ ತಾಲ್ಲೂಕಿನಲ್ಲಿ ನೀಡಿರುವ 11ಕೋಟಿ ರೂ ನಷ್ಟು ಸಾಲ ಮನ್ನವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬ್ಯಾಂಕ್ನ ನಿದರ್ೇಶಕರಾದ ನಾಗರಾಜು, ರಾಜಣ್ಣ, ಭೈರೇಶ್, ಎಂ.ಎನ್.ನಾಗರಾಜು, ಕಮಲಮ್ಮ ಸೇರಿದಂತೆ ಹಲವರಿದ್ದರು.


aPÀÌ£ÁAiÀÄPÀ£ÀºÀ½î vÁ®ÆPÀÄ ¸Á¸À®Ä UÁæªÀÄzÀ°è £ÀqÉzÀ ¥ËæqsÀ±Á¯Á EAVèÃµï ¨sÁµÁ ¨ÉÆÃzsÀPÀgÀ PÁAiÀiÁðUÁgÀªÀ£ÀÄß ©EN ¸Á.a. £ÁUÉñï GzÁÏn¹zÀgÀÄ. ²PÀët vÀdÕ UÀÄgÀÄ£Áxï §rUÉÃgï, «µÀAiÀÄ ¥Àj«ÃPÀëPÀgÁzÀ gÀÆ¥À, ¸Á¸À®Ä ZÀAzÀætÚ G¥À¹ÜvÀjzÀÝgÀÄ.


ರೋಟರಿ ಸಂಸ್ಥೆ, ಆಟೋ ಚಾಲಕರ ಸಂಘದ ವತಿಯಿಂದ ನಾಳೆ ವಿವಿಧ ಕಾರ್ಯಕ್ರಮಗಳು
ಚಿಕ್ಕನಾಯಕನಹಳ್ಳಿ,ಜ.21 : ಸುಭಾಷ್ ಚಂದ್ರಭೋಸ್ ಜನ್ಮದಿನಾಚರಣೆ, ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಚಾರಣೆ ಸಮಾರಂಭವನ್ನು ಇದೇ 23ರ ಬುಧವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಪ್ರತಾಪ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೆಂಗಳೂರಿನ ಸಿಪಿಐ ಸಿ.ಆರ್.ರವೀಶ್ ಹಾಗೂ ಚಿ.ನಾ.ಹಳ್ಳಿ ಸಿಪಿಐ ಕೆ.ಪ್ರಭಾಕರ್  ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಲಿದ್ದು ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಬಿ.ಇ.ಓ ಸಾ.ಚಿ.ನಾಗೇಶ್ ಆಟೋ ಚಾಲಕರಿಗೆ ಸನ್ಮಾನ ಮಾಡಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಎನ್.ಆರ್.ಉಮೇಶ್ಚಂದ್ರ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ರೋಟರಿ ಕಲ್ಬ್ ಕಾರ್ಯದಶರ್ಿ ಎಂ.ದೇವರಾಜು, ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್, ವೈದ್ಯಾಧಿಕಾರಿ ಡಾ.ಶಿವಕುಮಾರ್, ಕನ್ನಡ ಸಂಘ ವೇದಿಕೆಯ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಹಾಗೂ ತಾಲ್ಲೂಕಿನ ಸಮಸ್ತ ಆಟೋ ಚಾಲಕರು ಮತ್ತು ಸಂಘದ ಅಧ್ಯಕ್ಷ , ಪದಾಧಿಕಾರಿಗಳು ಉಪಸ್ಥಿತರಿರುವರು.

Saturday, January 19, 2013


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 125 ಸ್ಥಾನ: ಸಂತೋಷ್ಲಾಡ್
                                           
ಚಿಕ್ಕನಾಯಕನಹಳ್ಳಿ,ಜ19 : ಜೆ.ಡಿ.ಎಸ್ನ 20ತಿಂಗಳ ಅವಧಿ, ಬಿಜೆಪಿಯ ನಾಲ್ಕುವರೆವರ್ಷದ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಅಭಿವೃದ್ದಿ ಕಾರ್ಯಗಳು ಆಗದೆ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ, ಬರೀ ಇವರ  ಕಿತ್ತಾಟವನ್ನು ನೋಡಿ ಜನತೆ ಬೇಸತ್ತಿದ್ದಾರೆ ಆದ್ದರಿಂದ  ರಾಜ್ಯದ ಜನತೆ ಮುಂದೆ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ತಿಳಿಸಿದರು.
ತಾಲೂಕಿನ  ಕಾಂಗ್ರೆಸ್ ಕಾರ್ಯಕರ್ತರ ಮನೆಬಾಗಿಲಿಗೆ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜುರವರ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನೂತನವಾಗಿ ಉದಯಿಸಿರುವ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಏಕ ವ್ಯಕ್ತಿಗಳ  ಸ್ವಹಿತಾಸಕ್ತಿಗಾಗಿ ಆರಂಭವಾಗಿದೆ, ರಾಜ್ಯದ ಜನರ ಹಿತರಕ್ಷಣೆಗಾಗಿ ಅಲ್ಲ ಇದರಿಂದ ಈ ಬಾರಿಯ ಚುನಾವಣೆಯ ನಂತರ ಕೆಜೆಪಿ ಮತ್ತು ಬಿಎಸ್ಆರ್ ಎರಡೂ ಪಕ್ಷವು ರಾಜ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವುದಿಲ್ಲವೆಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಬಯಕೆ ರಾಜ್ಯದ ಜನತೆಯಲ್ಲಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೂ ಪ್ರವಾಸ ಮಾಡಿದಾಗ ಇಲ್ಲಿಯೂ ಕಾಂಗ್ರೆಸ್ ಪಕ್ಷದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಯಕರ್ತರುಗಳ ಮನೆಗೆ ಭೇಟಿ ನೀಡಿದಾಗ ಬಂದ  ಅಭಿಪ್ರಾಯಗಳು ಇವು  ಎಂದರು.
ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್: ತಾಲ್ಲೂಕಿನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಹೊರಗಡೆಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರ ಕಾರಣದಿಂದಾಗಿ ಪಕ್ಷ ಹಿಂದುಳಿದಿರವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ಲಾಡ್, ಈ ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್ ನೀಡಲು ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದ ಅವರು ರಾಹುಲ್ಗಾಂಧಿರವರು ದೇಶಾದ್ಯಂತ ಯುವಶಕ್ತಿಗೆ ಆದ್ಯತೆ ನೀಡುತ್ತಿದ್ದು, ರಾಜ್ಯದಲ್ಲೂ ಯುವಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯತೆ ಸಿಗುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮುಖಂಡರಾದ ಸತೀಶ್ಸಾಸಲು ಉಪಸ್ಥಿತರಿದ್ದರು.

ತೆಂಗು ಅಭಿವೃದ್ದಿ ತರಬೇತಿ ಕಾಯರ್ಾಗಾರದಲ್ಲಿ ಸಲಕರಣೆಯ ಪರಿಕರಗಳ ವಿತರಣೆ
ಚಿಕ್ಕನಾಯಕನಹಳ್ಳಿ,ಜ.19 : ರೈತರು ಉತ್ಪಾದಿಸಿದ ಬೆಳೆಯನ್ನು ವಿದ್ಯಾವಂತರು ಮಾರುಕಟ್ಟೆಗೆ ತಂದು ಮಾರುಕಟ್ಟೆಯಲ್ಲಿರುವ ಬೆಲೆಯ ಸ್ಥಿತಿಗತಿ ತಿಳಿದು ಮಾರಾಟ ಮಾಡಿದರೆ ರೈತರು ತಮಗೆ ಆಗುವ ನಷ್ಟವನ್ನು ತಪ್ಪಿಸಿಕೊಂಡು ತಮ್ಮ ಆಥರ್ಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ತೆಂಗು ಅಭಿವೃದ್ದಿ ಮಂಡಳಿ ಯೋಜನೆಯಡಿ ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರ ಕಾರ್ಯಕ್ರಮದಲ್ಲಿ ಹಂದನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಫಲಾನುಭವಿ ರೈತರಿಗೆ ಗೊಬ್ಬರ, ಸಲಕರಣೆಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಗಡಿ ಭಾಗದಲ್ಲಿರುವ ರೈತರಿಗೆ ಅನುಕೂಲವಾಗಲೆಂದು 60ಜನ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗಿದೆ, ಎಲ್ಲಾ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗೆ ಹೆಚ್ಚಿನ ಸವಲತ್ತು ನೀಡಿದ್ದು, ಈ ಬೆಳೆಯಲ್ಲಿ ತೆಂಗು ಜೀವನಾಡಿಯ ಬೆಳೆಯಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾದರೆ ಹಂದನಕೆರೆ ಹೋಬಳಿಗೆ ಪಂಚನಹಳ್ಳಿ ಭಾಗದಿಂದ ಶಾಶ್ವತವಾದ ನೀರನ್ನು ತರಿಸಲಾಗುವುದು ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ರೈತರು ತೆಂಗು ಬೆಳೆಯನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಆಥರ್ಿಕವಾಗಿ ಸದೃಡರಾಗಿ ತೋಟಗಾರಿಕೆ ಇಲಾಖೆ ಯೋಜನೆಯಡಿ ನೀಡಿರುವ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರಾಮಚಂದ್ರಣ್ಣ, ದುಗಡಿಹಳ್ಳಿ ಗಂಗಾಧರಪ್ಪ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿಯಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.19: ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು  ತಿಪಟೂರಿನಿಂದ  ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದ ಸಭೆಯನ್ನು ನಡೆಸಲಿದ್ದು, ಸಂಘಟನೆಯಲ್ಲಿರುವ ಲೋಪದೋಷಗಳನ್ನು ಕಾರ್ಯಕರ್ತರು ಸರಿಪಡಿಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ನಾರಾಯಣ್, ಬಿ.ಲಕ್ಕಪ್ಪ,   ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ಸೀಮೆಣ್ಣೆ ಕೃಷ್ಣಯ್ಯ,  ಕೃಷ್ಣೇಗೌಡ ಉಪಸ್ಥಿತರಿದ್ದರು. 


ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ   ತಾಲೂಕು  ಕೃಷಿ ಉತ್ಸವ:
ಚಿಕ್ಕನಾಯಕನಹಳ್ಳಿ,ಜ.19 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವವದ ಕೃಷಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ವಕೀಲ ಎಮ್.ಬಿ.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಶ್ರೀ.ಕ್ಷೇ.ಧ.ಯೋ. ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು.
ಫೆಬ್ರವರಿ 10, 11 ರಂದು ಪಟ್ಟಣದಲ್ಲಿ ನಡೆಯುವ ಕೃಷಿ ಉತ್ಸವದ ಯಶಸ್ವಿಗೆ  ಸಮಿತಿಯನ್ನು ರಚಿಸಿದ್ದು,  ಉಪಾಧ್ಯಕ್ಷರುಗಳಾಗಿ ಸಿ.ಡಿ.ಚಂದ್ರಶೇಖರ್, ಶಶಿಧರ್, ವಿಶ್ವನಾಥ್ಅಣೆಕಟಟೆ, ಅರುಣ್ಕುಮಾರ್, ಬಸವರಾಜು, ಮಲ್ಲೇಶಯ್ಯ, ಸಿ.ವಿ.ಚಂದ್ರಣ್ಣ, ಗಂಗಾಧರ್, ಸತೀಶ್ಕೆಂಕೆರೆ, ಗುರುಪ್ರಸಾದ್, ಸುರೇಶ್, ನಿರಂಜನಮೂತರ್ಿ, ನಾಗೇಶಪ್ಪ, ರಾಮಚಂದ್ರಯ್ಯ, ರಾಜಕುಮಾರ್, ಲಿಂಗರಾಜು, ಪ್ರಕಾಶ್, ಶಶಿಕುಮಾರ್, ಕೃಷ್ಣಮೂತರ್ಿ, ನವನಾಜು, ನರಸಿಂಹಮೂತರ್ಿ, ಕೃಷ್ಣಪ್ಪ, ಗೌರವ ಸಲಹೆಗಾರರಾಗಿ ಕ್ಷೇ.ಧ.ಗ್ರಾ.ಯೋಜನೆಯ ನಿದರ್ೇಶಕ ಪುರುಷೋತ್ತಮ್, ಮುಖ್ಯ ಸಲಹೆಗಾರರಾಗಿ ರಾಜಕುಮಾರ್ಸಿಂಗದಹಳ್ಳಿ, ಗುರುಪ್ರಸಾದ್ ಕಂದಿಕೆರೆ, ಪ್ರಧಾನ ಕಾರ್ಯದಶರ್ಿಯಾಗಿ ಕ್ಷೇ.ಧ.ಗ್ರಾ.ಯೋ.ಯೋಜನಾಧಿಕಾರಿ ರೋಹಿತಾಕ್ಷ, ಕಾರ್ಯದಶರ್ಿಯಾಗಿ ರವಿಕುಮಾರ್, ಕೋಶಾಧಿಕಾರಿಯಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, January 17, 2013


ಯುವಶಕ್ತಿಗೆ ಆದರ್ಶ ಪುರುಷ ಸ್ವಾಮಿವಿವೇಕಾನಂದ
                                         
ಚಿಕ್ಕನಾಯಕನಹಳ್ಳಿ,ಜ.17 : ಯುವಶಕ್ತಿಗೆ ಆದರ್ಶ ಪುರುಷನಾಗಿ ಸಾದನೆಯ ಛಲವನ್ನು ಮೈಗೂಡಿಸಿಕೊಂಡು ಯುವಕರಿಗೆ ಗೆಲುವಿನ ಉತ್ಸಾಹ ತುಂಬುತ್ತಿದ್ದ ಸ್ವಾಮಿವಿವೇಕಾನಂದರಂತಹ ಆದರ್ಶ ಪುರಷನ ಅವಶ್ಯಕತೆ ಇಂದಿಗೂ ಅಗತ್ಯವಿದೆ ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
  ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ವಿವೇಕಾನಂದರ 150ನೇ ಜನ್ಮದಿನಚಾರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಯುವಕರಿಗೆ ಸ್ಪೂತರ್ಿ ತುಂಬಿ ದೇಶವನ್ನು ಸದೃಡವಾಗಿ ಕಟ್ಟುತ್ತಿದ್ದರು ಎಂದರಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ, ಪಾಕಿಸ್ತಾನದ ಸೈನ್ಯದಿಂದ ನಡೆಯುತ್ತಿರುವ ಕೃತ್ಯಗಳನ್ನು ತಡೆಗಟ್ಟಲು ವಿವೇಕಾನಂದರ ವಾಣಿಯನ್ನು ಯುವಕರು ಅಥರ್ೈಸಿಕೊಳ್ಳಬೇಕಿದೆ ಎಂದರಲ್ಲದೆ, ಶಿಸ್ತು, ಸಂಯಮದ ಭಾವನೆಯನ್ನು ರೂಪಿಸುವುದು, ದೇಶಭಕ್ತಿ ಮೂಡಿಸುವುದರ ಜೊತೆಗೆ ಸಮಾಜ ತಿದ್ದುವಲ್ಲಿ ಯುವಶಕ್ತಿ ಮುಂದಾಗಬೇಕು ಎಂದರು. ಮಹಿಳೆ ವಿದ್ಯಾವಂತರಾದರೆ  ಸಮಾಜ ತಿದ್ದುವಕಾರ್ಯ ನಡೆಯುತ್ತದೆ ಎಂದರು.
 ಕಳೆದ ಬಾರಿ ನಡೆದ ಉದ್ಯೋಗಮೇಳದಲ್ಲಿ ತಾಲ್ಲೂಕಿನ 2600 ವಿದ್ಯಾವಂತರಿಗೆ ಉದ್ಯೋಗ ದೊರಕಿದ್ದು, ಈ ಬಾರಿಯೂ ಫೆ.16ರಂದು ಉದ್ಯೋಗ ಮೇಳ ನಡೆಯಲಿದೆ ನಿರುದ್ಯೋಗಿ ಯುವಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಭಾವಿಪ ಜಿಲ್ಲಾ ಸಂಘಟನಾ ಕಾರ್ಯದಶರ್ಿ ವೆಂಕಟೇಶ್ ಉಪನ್ಯಾಸ ನೀಡಿ, ಸಿಡಿಲ ಸಂತನಾಗಿ ಧಾಮರ್ಿಕ ಗುರುವಾಗಿ ಯುವಶಕ್ತಿಯನ್ನು ಎಚ್ಚರಗೊಳಿಸಿದವರು ವಿವೇಕಾನಂದರು, ಸಾಮಾನ್ಯ ಸನ್ಯಾಸಿಯಾಗಿ ಅಮೇರಿಕದ ಚಿಕಾಗೋದಲ್ಲಿ ನಡೆದ ಧಾಮರ್ಿಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಪಂಚವೇ ಮೆಚ್ಚುವಂತೆ ಬದಲಾದ ವಿವೇಕಾನಂದರು ಭಾರತ ದೇಶದ ಆಸ್ತಿ, ಇವರು ಇತಿಹಾಸ ಬದಲಾವಣೆ ಮಾಡಿದ ಸಂತ ಎಂದರಲ್ಲದೆ ವಿವೇಕಾನಂದರ ವಾಣಿಯಿಂದ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣೆಯಾಗಿ ಸ್ವಾತಂತ್ರ್ಯಕ್ಕೆ ಧುಮುಕಿದರು, ಅಣ್ಣ ಹಜಾರೆರವರು ಭ್ರಷ್ಠಾಚಾರದ ವಿರುದ್ದ ಹೋರಾಟ ಮಾಡಿದರು, ವಿವೇಕಾನಂದರು ಯುವಶಕ್ತಿಯನ್ನು ಕಬ್ಬಿಣದ ಮಾಂಸಖಂಡ ಹಾಗೂ ಉಕ್ಕಿನ ವ್ಯಕ್ತಿಗಳಾಗುವಂತೆ ಕರೆ ನೀಡಿದ್ದರು.
ಎ.ಬಿ.ವಿ.ಪಿ. ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಯುವಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದ ವಿವೇಕಾನಂದರು ದೇಶದ ಅಭಿವೃದ್ದಿಯನ್ನು ಅವರಿಂದ ಮನಗಂಡಿದ್ದರು, ವಿವೇಕಾನಂದರು ಹೇಳುವಂತೆ ನಿಂದಿಸುವವರು ಇದ್ದರೆ ಅಭಿವೃದ್ದಿ ಸಾಧ್ಯ ಎಂಬ ಮಾತು ನಿಜವಾದದ್ದು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ 1863ರಲ್ಲಿ ಜನಿಸಿದ ವಿವೇಕಾನಂದರು ತಮ್ಮ 39 ವರ್ಷದ ಅಲ್ಪಾವದಿಯಲ್ಲೇ ಮಹತ್ತರ ಸಾದನೆ ಮಾಡಿ ಇಂದಿಗೂ ಯುವಶಕ್ತಿಗೆ ಮಾದರಿಯಾಗಿರುವ ವಿವೇಕಾನಂದರ ವಿಚಾರಧಾರೆ ಉತ್ತಮವಾದುದು, ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಉತ್ತಮ ವ್ಯಕ್ತಿಯಾಗಿ ಬದುಕಿದರು ಎಂದರು.
ಸಮಾರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ತಾ.ಎ.ಬಿ.ವಿ.ಪಿ. ಅಧ್ಯಕ್ಷ ನಂದೀಶ್ಬಟ್ಲೇರಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ ಸ್ವಾಗತಿಸಿದರೆ, ನಗರ ಕಾರ್ಯದಶರ್ಿ ದಿಲೀಪ್ ನಿರೂಪಿಸಿದರೆ, ಲಕ್ಷ್ಮೀಶ್ ವಂದಿಸಿದರು.

ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ಸುವರ್ಣ ಸಂಚಿಕೆಯನ್ನು ಬಿಡುಗಡೆ
aPÀÌ£ÁAiÀÄPÀ£ÀºÀ½îAiÀÄ ²æÃ ¸ÀvÀåUÀt¥Àw ¸ÁªÀðd¤PÀgÀ vÀgÀÄtgÀ ¸ÀAWÀzÀ LªÀvÀÛ£Éà ªÀµÁðZÀgÀuÉ ¸ÀªÀiÁgÀA¨sÀzÀ°è ¸ÀAWÀzÀ K½UÉUÉ zÀÄrzÀ ¸ÀAWÀzÀ PÁAiÀÄðzÀ²ð ¹.PÉ.«±ÉéñÀégÀAiÀÄå, gÀvÀߪÀÄ䧸ÀªÀAiÀÄå, ¹.§¸ÀªÀgÁdÄgÀªÀgÀ£ÀÄß ¸À£Á䤸À¯Á¬ÄvÀÄ. F ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä, ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, ¸ÁÜ¬Ä ¸À«Äw CzsÀåPÀë JA.J£ï.¸ÀÄgÉñï, mË£ï ¨ÁåAPï CzsÀåPÀë ¹.J¸ï.gÀªÉÄñï, J.¦.JA.¹ ¸ÀzÀ¸Àå ¹.JªÀiï.gÀAUÀ¸Áé«Ä ºÁdjzÀÝgÀÄ.

ಚಿಕ್ಕನಾಯಕನಹಳ್ಳಿ,ಜ.17 :  ಶ್ರೀ ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ವತಿಯಿಂದ 1962 ರಲ್ಲಿ ಪ್ರಾರಂಭವಾದ ಸಂಘ 50 ವರ್ಷಗಳನ್ನು ಪೂರೈಸಿದ ಸವಿ ನೆನಪಿಗಾಗಿ  ಸಂಘ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿತು.
 ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಿ ಮಾತನಾಡಿ, ಕಳೆದ 50 ವರ್ಷಗಳಿಂದ ವಿಘ್ನೇಶ್ವರನನ್ನು ಪ್ರತಿ ವರ್ಷವೂ ಗಣೇಶ ಚತುಥರ್ಿಯಂದು ಪ್ರತಿಷ್ಟಾಪಿಸಿ 20 ದಿನಗಳ ವರೆಗೆ ನಡೆಯುತ್ತಿದ್ದ ಘತವೈಭವವನ್ನು ಸ್ಮರಿಸಿಕೊಂಡರಲ್ಲದೆ, ಈ ಕಾರ್ಯಕ್ಕೆ ದುಡಿದ 50 ಜನ ಹಿರಿಯ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಮ್ಮದಾನಪ್ಪ ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಸುವರ್ಣ ಸಂಚಿಕೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಬಿಡುಗಡೆಮಾಡಿದರು.
 ಸಮಾರಂಭದಲ್ಲಿ ಪುರಸಭಾಧ್ಯಕ್ಷರಾದ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರದೇವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಸುರೇಶ್. ಪುರಸಭೆ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಲ್.ದೊಡ್ಡಯ್ಯ, ಸಿ.ಟಿ.ವರದರಾಜು, ಮಹಮದ್ ಖಲಂದರ್ ಸಂಸ್ಥೆಯ ಕಾರ್ಯದಶರ್ಿ ಸಿ.ಟಿ.ವಿಶ್ವೇಶ್ವರಯ್ಯ  ಸದಸ್ಯರಾದ ಚಂದ್ರಶೇಖರ ಗುಪ್ತ, ರಾಮಯ್ಯ, ಆನಂದ್, ಹಾಜರಿದ್ದರು. 
ಸಮಾರಂಭದಲ್ಲಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಸಿ.ಎಸ್.ನಟರಾಜ್ ನಿರೂಪಿಸಿದರೆ, ಕಣ್ಣಯ್ಯ ವಂದಿಸಿದರು.