Monday, July 5, 2010





ಬಂದ್ ಸಂಪೂರ್ಣ ಯಶಸ್ವಿ: ಎ.ಟಿ.ಎಂ.ವಹಿವಾಟಿಗಿಲ್ಲ ಅಡ್ಡಿ
ಚಿಕ್ಕನಾಯಕನಹಳ್ಳಿ,ಜು.5: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬಿ.ಜೆ.ಪಿ. ಕರೆನೀಡಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಸ್ವಯಂ ಘೋಷಿತವಾಗಿ ನಡೆಸಿದ್ದರಿಂದ ಶಾಂತರೀತಿಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗಿನಿಂದಲೇ ಆರಂಭಗೊಂಡ ಬಂದ್ ಪ್ರಕ್ರಿಯೆಯಿಂದಾಗಿ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ, ಬಸ್ ಗಳು ರಸ್ತೆಗೆ ಇಳಿಯಲಿಲ್ಲ, ಶಾಲಾ ಕಾಲೇಜ್ಗಳು ಮುಚ್ಚಿದ್ದವು, ಸಕರ್ಾರಿ ಕಛೇರಿಗಳು ಬಹುತೇಕ ಬಾಗಿಲು ಮುಚ್ಚಿದ್ದವು, ವಕೀಲರ ಸಂಘ ಬಂದ್ಗೆ ಬೆಂಬಲ ಘೋಷಿಸಿದ್ದರಿಂದ ಕೋಟರ್್ ಕಲಾಪ ನಡೆಯಲಿಲ್ಲ, ಕೇಂದ್ರ ಸಕರ್ಾರ ಕಛೇರಿಗಳು ಬಾಗಿಲು ಮುಚ್ಚಿದ್ದವು, ಬ್ಯಾಂಕ್ಗಳಲ್ಲಿ ಆರಂಭದಲ್ಲಿ ಸ್ವಲ್ಪ ಮಟ್ಟಿನ ವ್ಯವಹಾರ ನಡೆಯಿತಾದರೂ ಬಿ.ಜೆ.ಪಿ.ಕಾರ್ಯಕರ್ತರು ಬ್ಯಾಂಕ್ಗೆ ತೆರಳಿ ಬಾಗಿಲು ಹಾಕಿಸಿದರು, ಕೆನರಾ ಬ್ಯಾಂಕ್ನ ಎ.ಟಿ.ಎಂ. ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿತು.
ಆರಂಭದಲ್ಲಿ ರಸ್ತೆಗಳಲ್ಲಿ ಟೈರಿಗೆ ಬೆಂಕಿ ಹಚ್ಚುವ ಕೆಲಸ ನೆಡಿಯಿತು, ಹಾಲಿನ ಡೈರಿ, ಮೆಡಿಕಲ್ ಷಾಪ್ಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬೀಗ ಮುದ್ರೆಗೊಂಡಿದ್ದರಿಂದ ರಸ್ತೆ ಎಲ್ಲಾ ಬಿಕೊ ಎನ್ನುತಿದ್ದವು.
ಬಂದ್ನಲ್ಲಿ ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸಮೂತರ್ಿ,ಪುರಸಭಾ ಸದಸ್ಯರುಗಳಾದ ಈಶ್ವರ್ ಭಾಗವತ್, ಎಂ.ಎಸ್.ರವಿಕುಮಾರ್, ಲಕ್ಷ್ಮಯ್ಯ, ವಿ.ಆರ್.ಮೇರುನಾಥ್, ಎಚ್.ಸಿದ್ದರಾಮಯ್ಯ, ನಗರ ಘಟಕ ಅಧ್ಯಕ್ಷ ಚೇತನ ಬಾಳೇಕಾಯಿ, ಎ.ಬಿ.ವಿ.ಪಿ. ಪದಾಧಿಕಾರಿಗಳಾದ ಚೇತನ ಪ್ರಸಾದ್, ಅಣೇಕಟ್ಟೆ ರಾಕೇಶ್, ಆನಂದ್, ಹರ್ಷ, ಮುಂತಾದವರು ಭಾಗವಹಿಸಿದ್ದರು.

ಅಕ್ರಮ ಮರಳು ತಡೆಯಲು ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ ಗ್ರಾಮ ಲೆಕ್ಕಿಗ
ಚಿಕ್ಕನಾಯಕನಹಳ್ಳಿ,ಜು.05: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ್ನು ತಡೆಯಲು ಹೋದ ಇಬ್ಬರು ಗ್ರಾಮ ಲೆಕ್ಕಿಗರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಲು ಯತ್ನಿಸಿದರೆಂದು ಇಬ್ಬರು ಟ್ರ್ಯಾಕ್ಟರ್ ಕಾಮರ್ಿಕರನ್ನು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪೊಲೀಸರ ವಶಕ್ಕೆ ನೀಡಿದರು.
ಪಟ್ಟಣದ ಹೊರವಲಯದ ಮೇಲನಹಳ್ಳಿ ಕೆರೆಯ ಪಕ್ಕದಲ್ಲಿ 4.5 ಕೋಟಿ ರೂ ಅಂದಾಜಿನಲ್ಲಿ ಎ.ಪಿ.ಆರ್.ಪ್ರಾಜೆಕ್ಟ್ ನವರು ನಡೆಸುತ್ತಿರುವ ಮುರಾಜರ್ಿ ವಸತಿ ಶಾಲಾ ಕಾಮಗಾರಿಗೆ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆಯಲು ಹೋದ ಗ್ರಾಮ ಲೆಕ್ಕಿಗರಾದ ನೀಲಕಂಠಪ್ಪ ಹಾಗೂ ಉಮಾಪತಿ ಎಂಬ ಇಬ್ಬರು ಟ್ರ್ಯಾಕ್ಟರ್ಗಳನ್ನು ತಡೆದು ಮರಳನ್ನು ಎಲ್ಲಿಂದ ತಂದಿರುವವರೆಂಬುದರ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಟ್ರ್ಯಾಕ್ಟರ್ ಚಾಲಕ ಸೇರಿದಂತೆ ಇನ್ನಿತರ ಕಾಮರ್ಿಕರು, ಗ್ರಾಮ ಲೆಕ್ಕಿಗರನ್ನು ನೂಕಾಡಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಿಗೂ ಟ್ರ್ಯಾಕ್ಟರ್ ಕಾಮರ್ಿಕರಿಗೂ ಮಾತಿಗೆ ಮಾತು ಬೆಳೆದು ವಿ.ಎ.ನೀಲಕಂಠಪ್ಪ ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ್ದಾರೆ ಈ ಸನ್ನಿವೇಶದಲ್ಲಿ ಗ್ರಾಮಸ್ಥರು ನೀಲಕಂಠಪ್ಪ ಹಾಗೂ ಉಮಾಪತಿಯವರ ರಕ್ಷಣೆಗೆ ನಿಂತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಸಿ.ಕಾಂತರಾಜು 70 ಟ್ರ್ಯಾಕ್ಟರ್ ಮರಳನ್ನು ಜಪ್ತಿ ಮಾಡಿ, ಮರಳು ಹೊಡೆದ ಟ್ರಿಪ್ ಶೀಟ್ನ್ನು ವಶ ಪಡಿಸಿಕೊಂಡು, ಸಕರ್ಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹಾಗೂ ಅಕ್ರಮ ಮರಳು ಸಾಗಣಿಕೆ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿ ಆರೋಪಿಗಳಾದ ರಮೇಶ್ ಹಾಗೂ ಕರಿನಾಯ್ಕ ಎಂಬವವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Saturday, July 3, 2010



ನಾಡು ನುಡಿಯನ್ನು ಗೌರವಿಸುವವರೇ ನಿಜವಾದ ದೇಶಭಕ್ತರು: ದೇ.ಜ.ಗೌ.
ಚಿಕ್ಕನಾಯಕನಹಳ್ಳಿ,ಜು.3: ನಾಡು ನುಡಿಯ ಬಗ್ಗೆ ಅಭಿಮಾನ ಬೆಳಸಿಕೊಳ್ಳುವುದು ಎಲ್ಲರ ಕರ್ತವ್ಯ, ವ್ಯವಹಾರದ ದೃಷ್ಟಿಯಿಂದ ಎಲ್ಲಾ ಭಾಷೆ ಬೇಕು ನಿಜ ಆದರೆ ತಾಯಿ ಭಾಷೆ ಇವೆಲ್ಲಕ್ಕೂ ಶ್ರೇಷ್ಠವಾದದ್ದು, ತಾನು ಹುಟ್ಟಿದ ಭೂಮಿ ಪುಣ್ಯ ಕ್ಷೇತ್ರವೆಂಬುದನ್ನು ಪ್ರತಿಯೊಬ್ಬರು ಅರಿತಾಗಲೇ ದೇಶ ಭಕ್ತಿ ಮೂಡಲು ಸಾಧ್ಯ ಅದನ್ನು ಇಂದಿನ ಯುವಕರಿಗೆ ಕಲಿಸಬೇಕು ಎಂದು ಕನರ್ಾಟಕ ರತ್ನ ಡಾ.ದೇ.ಜವರೇಗೌಡ ಕರೆ ನೀಡಿದರು.
ತಾಲೂಕು ಸಾಹಿತ್ಯ ಪರಿಷತ್ತು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಎಂ.ವಿ.ನಾಗರಾಜ್ ರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸರಸ್ವತಿಯ ಬಾಹುಗಳಲ್ಲಿ ಯಾವುದು ಶಕ್ತಿಶಾಲಿಯಾದ ಬಹು ಎಂಬುದನ್ನು ಹೇಳುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟವಾದ ಕೆಲಸ ಭಾಷೆಗಳ ವಿಷಯದಲ್ಲೂ ಸಹ ಎಂದ ಅವರು, ಮಾತೃ ಭಾಷೆಯನ್ನು ಸರಸ್ವತಿಗೆ ಹೋಲಿಸಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಸೃಜನಶೀಲ ಮನಸ್ಸುಗಳು ಮಾತ್ರ ಉತ್ತಮ ಕೆಲಸವನ್ನು ಮಾಡಬಲ್ಲವು ಎಂದರಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಸೃಜನಶೀಲ ಮನಸ್ಸುಗಳು ಅಧಿಕವಾಗಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ರವರ ಹಿಂದಿ ಸಾಹಿತ್ಯ ಚರಿತ್ರೆ ಮೌಲ್ಯಯುತ ಗ್ರಂಥ ಇದನ್ನು ಲೇಖಕ ಸುಮಾರು ನಲವತ್ತು ವರ್ಷಗಳ ತನ್ನ ಅಧ್ಯಯನವನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಹಿಂದಿ ಸಾಹಿತ್ಯದ ಪ್ರತಿಯೊಂದು ಯುಗವನ್ನು ಉತ್ತಮವಾಗಿ ದಾಖಲಿಸುತ್ತಾ ಹೋಗಿದ್ದಾರೆ ಎಂದರಲ್ಲದೆ, ಹಿಂದಿ ಸಾಹಿತ್ಯ ಚರಿತ್ರೆಯನ್ನು ತನ್ನ ಮಾತೃಭಾಷೆಯಲ್ಲಿ ಬರೆಯುವ ಮೂಲಕ ಈ ಎರಡೂ ಭಾಷೆಗಳ ಕೊಂಡಿಯಂತೆ ಕೆಲಸ ಮಾಡಿದ್ದಾರೆ ಎಂದರು. ಈ ಪುಸ್ತಕವನ್ನು ಪ್ರತಿಯೊಬ್ಬ ಹಿಂದಿ ಸಾಹಿತ್ಯಾಸಕ್ತರು ಓದಲೇ ಬೇಕಾದಂತಹ ಕೃತಿಯೆಂದರು.
ಕು.ವೆಂ.ಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಮಾತನಾಡಿ, ಸಂಶೋಧನೆ, ಅಧ್ಯಯನ ಮತ್ತು ವಿಶ್ಲೇಷಣೆ ಈ ಮೂರು ಗುಣಗಳನ್ನು ಹೊಂದಿರುವ ಪುಸ್ತಕಗಳು ಮಾತ್ರ ಉತ್ತಮ ಕೃತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಈ ಕೃತಿಯಲ್ಲಿ ಈ ಅಂಶವನ್ನು ಮನಗಂಡಿದ್ದೇನೆ ಎಂದರು.
ಹಿಂದಿ ಮತ್ತು ಕನ್ನಡ ಎರಡೂ ಭಾಷೆಯನ್ನು ಅಧ್ಯಯನ ಮಾಡಿರುವುದರಿಂದ ಈ ಕೃತಿಯನ್ನು ನಾನು ಮುಕ್ತವಾಗಿ ವಿಮಶರ್ೆ ಮಾಡಿದ್ದೇನೆ ಎಂದ ಅವರು, ಹಿಂದಿ ಸಾಹಿತ್ಯದಲ್ಲಿ ಬರುವ ಪ್ರತಿಯೊಂದು ಯುಗವನ್ನು ವಿಶ್ಲೇಷಣಾತ್ಮಕವಾಗಿ ಇಲ್ಲಿ ದಾಖಲಾಸಲಾಗಿದೆ ಎಂದರು.
ಲೇಖಕ ಪ್ರೊ.ನಾ.ದಯಾನಂದ ಮಾತನಾಡಿ, ಈ ಕೃತಿಯ ಪ್ರತಿಯೊಂದು ಹೆಜ್ಜೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಹಿಂದಿ ಸಾಹಿತ್ಯ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಹಿಂದಿ ಬಾರದವರೂ ಈ ಗ್ರಂಥವನ್ನು ಅವಲೋಕಿಸಿದರೆ ಈ ಸಾಹಿತ್ಯ ಚರಿತ್ರೆಯ ಬಗ್ಗೆ ಅಧಿಕೃತವಾಗಿ ಮಾತನಾಡಬಹುದಾದಂತಹ ಶಕ್ತಿಯನ್ನು ಪಡೆಯುತ್ತಾನೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಈ ತಾಲೂಕಿನ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಎಂ.ವಿ.ನಾಗರಾಜ್ ರಾವ್ ಅವರು ಇನ್ನಿಷ್ಟು ಸಾಹಿತ್ಯ ಸೇವೆಯನ್ನು ಮಾಡಲಿ ಎಂದರು.
ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ದೇ.ಜವರೇಗೌಡ ಅವರಿಗೆ ತಾಲೂಕಿನ ಪರವಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ಗೌರವಾರ್ಪಣೆ ಸಲ್ಲಿಸಿದರು. ಹೇಮಂತ ಸಾಹಿತ್ಯದ ಮಾಲೀಕ ವೆಂಕಟೇಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗಮಣಿ ತಂಡ ಪ್ರಾಥರ್ಿಸಿದರು, ಎಂ.ವಿ.ನಾಗರಾಜ್ ರಾವ್ ಸ್ವಾಗತಿಸಿದರೆ, ಸಿ.ಗುರುಮೂತರ್ಿ ಕೊಟ್ಟಿಗೆಮನೆ ನಿರೂಪಿಸಿದರು, ಅಣಪ್ಪ ವಂದಿಸಿದರು.

Friday, July 2, 2010

ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯ ಧನ ವಿತರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.02(1): ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ 2009-10ನೇ ಸಾಲಿನ ರಾಜ್ಯವಲಯ ನೇಕಾರರ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯಧನ ವಿತರಣಾ ಸಮಾರಂಭವನ್ನು ಜುಲೈ 3ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಎಸ್.ಆರ್.ಎಸ್ ಸೊಸೈಟಿ ಮುಭಾಗ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ವಿದ್ಯಾಥರ್ಿ ವೇತನ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ವಹಿಸಲಿದ್ದು ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ ಸಹಾಯಧನ ವಿತರಿಸಲಿದ್ದು ಸಹಕಾರ ಸಂಘದ ಉಪನಿಬಂಧಕ ಆರ್.ಲೋಕೇಶ್ ಯಶಸ್ವಿನಿಕಾಡರ್್ ವಿತರಣೆ ಮಾಡಲಿದ್ದಾರೆ. ಜವಳಿ ಇಲಾಖೆ ಉಪನಿದರ್ೇಶಕ ಸುನೀಲ್ ಉಣ್ಣೆಉತ್ಪನ್ನಗಳ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಾಧ್ಯಾಪಕ ಡಾ.ಸಿ.ತಿಪ್ಪೇರುದ್ರಯ್ಯ, ಸಹಾಯಕ ಉಪನಿಬಂಧಕ ಕಾಂತರಾಜು, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸ್ಥಳೀಯ ತಹಶೀಲ್ದಾರ್ ಟಿ.ಸಿ. ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಬಿ.ಇ.ಓ ಪ್ರಭುಸ್ವಾಮಿ, ಶಿವಾನಂದ್, ಮುಕುಂದಯ್ಯ, ಶಿವಣ್ಣ, ಸಿ.ಕೆ.ಲೋಕೇಶ್, ಸುಲೋಚನಗುರುಲಿಂಗಯ್ಯ ಉಪಸ್ಥಿತರಿರುವರು.

Wednesday, June 30, 2010

ವಿದ್ಯಾಥರ್ಿ ವೇತನಾ ವಿತರಣಾ ಮತ್ತು ಸನ್ಮಾನ ಸಮಾರಂಭ
ಚಿಕ್ಕನಾಯಕನಹಳ್ಳಿ,ಜೂ.30: ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿ ವತಿಯಿಂದ ವಿದ್ಯಾಥರ್ಿ ವೇತನ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ಜುಲೈ 3ಶನಿವಾರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದು ಸಮಾರಂಭದಲ್ಲಿ ವಿರೇಶಾನಂದ ಸರಸ್ವತಿ ಸ್ವಾಮಿ ಆಶೀರ್ವಚನ ನೀಡಲಿದ್ದು ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್.ಸೂರ್ಯನಾರಾಯಣ, ಶಿರಾ ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್ ಛೇರಮನ್ ಎಂ.ಚಿದಾನಂದ, ಬಿ.ಬಿ.ಎಂ.ಪಿ ಕಂದಾಯಧಿಕಾರಿ ಅವಿನಾಶ್ಬಾಬು, ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಎಸ್.ಶಂಕರಪ್ಪ, ಸಾಹಿತಿ ಆರ್.ಬಸವರಾಜು, ಕುರುಬರ ಶ್ರೇಣಿ ಶಾಲೆ ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಜಿ.ರಂಗಯ್ಯ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ ಭಾಗವತ್ ಉಪಸ್ಥಿತರಿದ್ದು ಸಮಾರಂಭದಲ್ಲಿ ನಿವೃತ್ತ ಲೇಡಿಸ್ ಸೋಷಿಯಲ್ ಎಜುಕೇಶನ್ ಆರ್ಗನೈಜರ್ ಎನ್.ಗಂಗಾದೇವಿ, ಇನ್ನರ್ವೀಲ್ ಮಾಜಿ ಅಧ್ಯಕ್ಷೆ ಪುಷ್ಪವಾಸುದೇವ್, ಶಿಕ್ಷಕ ಎನ್.ಲಕ್ಷ್ಮೀನಾರಾಯಣ, ಬನಶಂಕರಿ ದೇವಸ್ಥಾನ ಅರ್ಚಕ ಮಹೇಶ್, ಯಕ್ಷಗಾನ ಕಲಾವಿದ ಸಿ.ಎ.ಕುಮಾರಸ್ವಾಮಿಯವರಿಗೆ ಸನ್ಮಾನಿಸಲಿದ್ದು ನಯನ, ರಾಘವೇಂದ್ರ, ಭಾನುಪ್ರಕಾಶ್ರವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಿರುವರು.

ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜೂ.30: ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಹಾಗೂ ಉದ್ಘಾಟನಾ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಸಂಘದ ನಾಮಫಲಕ ಅನಾವರಣಗೊಳಿಸಿದ್ದಾರೆ.
ತಾ.ವೀ.ನೌ.ಕ್ಷೇ,ಸಂಘದ ಅಧ್ಯಕ್ಷ ಟಿ.ಜಯಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ ಭಾಷಣ ಮಂಡಿಸಲಿದ್ದು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇ.ಓ ಡಾ.ವಿ.ವೇದಮೂತರ್ಿ, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಸಮನ್ವಯಾಧಿಕಾರಿ ಹೆಚ್.ಎಸ್.ಸಿದ್ದರಾಜು, ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ, ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ಉಪನಿರೀಕ್ಷಕ ಎಸ್.ವಿ.ಶಿವಕುಮಾರ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾ.ವೀ.ಲಿಂ.ನೌ.ನೌ.ಕ್ಷೇ ಸಂಘದ ರಾಜಾಧ್ಯಕ್ಷ ಬಸವಲಿಂಗಯ್ಯ, ಗೌರವಾಧ್ಯಕ್ಷ ಎಸ್.ಬಿ.ಶಶಿಧರ್, ಕಾರ್ಯದಶರ್ಿ ಬಿ.ನಿರಂಜನ್, ತಾಲೂಕು ಗೌರವಾಧ್ಯಕ್ಷ ಆರ್.ಎಂ.ಶೇಖರಯ್ಯ, ಜಿಲ್ಲಾ ಕಾರ್ಯದಶರ್ಿ ಎಂ.ಬಿ.ಶಿವಶಂಕರಪ್ಪ, ಪ್ರಧಾನ ಕಾರ್ಯದಶರ್ಿ ಬಾಲಚಂದ್ರ ಉಪಸ್ಥಿತರಿರುವರು.

ಹಿಂದಿ ಸಾಹಿತ್ಯ ಮತ್ತು 14 ಪುಸ್ತಕಗಳ ಅನಾವರಣ ಸಮಾರಭ
ಚಿಕ್ಕನಾಯಕನಹಳ್ಳಿ,ಜೂ.30: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೇಮಂತ ಸಾಹಿತ್ಯ ವತಿಯಿಂದ ಎಂ.ವಿ.ನಾಗರಾಜರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಮತ್ತು ಇತರ 14 ಪುಸ್ತಕಗಳ ಅನಾವರಣ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಬೆಳಿಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಭಾಲಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಕುಲಪತಿ ಡಾ.ದೇ.ಜವರೇಗೌಡ ಕೃತಿ ಅನಾವರಣಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಕೃತಿ ಪರಿಚಯ ಮಾಡಲಿದ್ದು ಲೇಖಕ ನಾ.ದಯಾನಂದ್ ಮತ್ತು ಸಾಹಿತಿ ಆರ್.ಬಸವರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಲೇಖಕ ಎಂ.ವಿ.ನಾಗರಾಜ್ರಾವ್ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿಂದಿ ಸಾಹಿತ್ಯ ಚರಿತ್ರೆ, ಪುರಾಣ ಪ್ರಸಿದ್ದ 101 ಕಥೆಗಳು, ಏಕಾಂಕ ನಾಟಕ, ಆಹುತಿ, ವಿಶ್ವಬಾಹು ಪರುಶುರಾಮ, ಕಂಪನ, ನಾಲ್ಕನೆಯ ಆಯಾಮ, ವಿಶ್ವವಿಖ್ಯಾತ ಲೇಖಕರ ಕಥೆಗಳು, ಜಗತ್ತಿನ ಪ್ರಸಿದ್ದ ಜನಪದ ಕಥೆಗಳು, ಸಂಶೋಧನೆಗಳು, ನೂಪುರ, ಶೃಂಗಾರಶಯ್ಯೆ, ಸಂಭವ, ಕಪ್ಪು ಗುಲಾಬಿ, ವಿಶ್ವವಿಖ್ಯಾತ ಲೇಖಕರ ಆರು ಕಾದಂಬರಿಯ 14 ಪುಸ್ತಕಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಅಧ್ಯಕ್ಷರಾದ ಮಾ.ಚಿ.ಕೈಲಾಸನಾಥ್, ಎಸ್.ಶ್ರೀನಿವಾಸಮೂತರ್ಿ, ಡಿ.ಎಸ್.ಶ್ಯಾಮಸುಂದರ್, ಎಚ್.ಎಸ್.ಶಿವಲಿಂಗಯ್ಯ, ಜಿ.ಗೋವಿಂದರಾಜ್, ಎಸ್.ಎ.ನಭಿ, ಡಾ.ಸಿ.ಎಂ.ಸುರೇಶ್, ಎಂ.ಎಲ್.ಮಲ್ಲಿಕಾಜರ್ುನಯ್ಯ, ಸಿ.ಎನ್.ಮರುಳರಾಧ್ಯ, ಸಿ.ಎಂ.ಶಂಕರಮೂತರ್ಿ, ಎಂ.ಎನ್.ಗಂಗಾಧರ್, ಸಿ.ಎಲ್.ಜಯದೇವ್, ಡಾ.ಜಿ.ಪ್ರಶಾಂತಕುಮಾರಶೆಟ್ಟಿ, ಕೆ.ವಿ.ಕುಮಾರ್, ಎನ್.ಶ್ರೀಕಂಠಯ್ಯರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಮತ್ತು ಹೇಮಂತ ಸಾಹಿತ್ಯ ಪ್ರಕಾಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ.


Tuesday, June 29, 2010

ಚಿಕ್ಕನಾಯಕನಹಳ್ಳಿ,ಜೂ.29(1): ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಸಮಾರಂಭವನ್ನು ಇದೇ ಜೂನ್ 30ರ(ಇಂದು) ಸಂಜೆ 6ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಗ್ರಾಮಪಂಚಾಯಿತಿ ಕಾರ್ಯದಶರ್ಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಮಾರಂಭದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ, ಮೆದುಳು ಜ್ವರ ಹರಡಲು ಕಾರಣಗಳು, ನಿಯಂತ್ರಣೋಪಾಯಗಳು ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಬಗ್ಗೆ ಮತ್ತು ಮಲೇರಿಯಾ ನಿಯಂತ್ರಿಸಲು ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಚಿಕ್ಕನಾಯಕನಹಳ್ಳಿ,ಜೂ.29: ಮತದಾರರ ಪಟ್ಟಿಯಲ್ಲಿ ಹೆಸರು ದಾಖಲೆಯಾಗಿದ್ದು ಭಾವಚಿತ್ರಗಳು ಮುದ್ರಣವಾಗದೆ ಇರುವಂತಹ ಮತದಾರರು ತಮ್ಮ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರವನ್ನು ನಿಮ್ಮ ಮತಗಟ್ಟೆಯಲ್ಲಿರುವ ಮತಗಟ್ಟೆ ಅಧಿಕಾರಗಳಿಗೆ ನೀಡಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯಲು ತಹಸೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುತಿನ ಚೀಟಿಯು ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಮತ್ತು ಇತರೆ ಸಕರ್ಾರ ಸವಲತ್ತುಗಳಿಗೂ ಭಾವಚಿತ್ರ ಗುರುತಿನ ಕಾಡರ್ು ಕಡ್ಡಾಯವಾಗಿದ್ದು ಜೂನ್ 1ರಿಂದ ಈ ಕಾರ್ಯ ನಡೆಯುತ್ತಿದೆ, ತಮ್ಮ ಹತ್ತಿರದ ಗ್ರಾಮಲೆಕ್ಕಿಗರಿಗೆ, ರಾಜಸ್ವ ನಿರೀಕ್ಷಕರಿಗೆ, ನಾಡ ಕಛೇರಿಗೆ ಅಥವಾ ತಾಲೂಕು ಕಛೇರಿಗೆ ತಲುಪಿಸುವಂತೆ ತಿಳಿಸಿದ್ದು ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಕ್ಷೇಪಣೆ, ಬಿಡತಕ್ಕುವುಗಳು, ಹೆಸರು ಭಾವಚಿತ್ರಗಳ ತಿದ್ದುಪಡಿ ಹಾಗೂ ವಗರ್ಾವಣೆಗೆ ಅವಕಾಶವಿದ್ದು ಸೇರ್ಪಡೆಗೆ ನಮೂನೆ-6, ವಗರ್ಾವಣೆಗೆ-6(ಎ), ಆಕ್ಷೇಪಣೆ, ಬಿಡತಕ್ಕವುಗಳಿಗೆ-7 ತಿದ್ದುಪಡಿಗೆ-8 ರಲ್ಲಿ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಸಂಬಂದಿಸಿದ ಮತಗಟ್ಟೆಯಲ್ಲಿರುವ ನಿದರ್ಿಷ್ಠಾದಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಾಯರ್ಾಲಯ, ಕಂದಾಯ ತನಿಖಾಧಿಕಾರಿಗಳ ಕಾಯರ್ಾಲಯ, ಗ್ರಾಮ ಲೆಕ್ಕಿಗರ ಕಾಯರ್ಾಲಯದಲ್ಲಿ ಪಡೆಯಬಹುದಾಗಿರುತ್ತದೆ.

Monday, June 28, 2010

ಚಿಕ್ಕನಾಯಕನಹಳ್ಳಿ,ಜೂ.28: ಯು.ಪಿ.ಎ ಸಕರ್ಾರದಲ್ಲಿ ಮನಮೋಹನ್ ಸಿಂಗ್, ಚಿದಂಬರಂ, ಶರಾದ್ಪವಾರ್, ಎಸ್.ಎಂ.ಕೃಷ್ಣರಂತಹ ಆಥರ್ಿಕ ತಜ್ಞರಿದ್ದು ಸಾರ್ವಜನಿಕರ ದಿನನಿತ್ಯ ಅಗತ್ಯವಾದ ತೈಲಗಳ ಬೆಲೆಗಳನ್ನು ಏರಿಸಿರುವದು ಖಂಡನೀಯ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ಪ್ರತಿಭಟನೆಂ ನೇತೃತ್ವ ವಹಿಸಿ ಮಾತನಾಡಿದ ಅವರು ಯು.ಪಿ.ಏ ಸಕರ್ಾರವು ತೈಲಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರದ ಬೆಲೆಯೂ ಏರಿಕೆಯಾಗುವ ಸಂಭವ ಹೆಚ್ಚಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಬಡವ ಮತ್ತು ಮಧ್ಯಮ ವರ್ಗದವರ ಜೀವನ ಕೆಳಸ್ಥರದಲ್ಲಿ ಸಾಗುವ ಭೀತಿ ಕಾಡುತ್ತಿದೆ ಎಂದ ಅವರು ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಲಿದ್ದು ಬೆಲೆ ಇಳಿಕೆ ಮಾಡುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಆಗ್ರಹಿಸಿದರು.
ತಾಲೂಕು ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಕೇವಲ 3 ಬಾರಿ ಮಾತ್ರ ತೈಲ ಬೆಲೆಗಳನ್ನು ಹೆಚ್ಚಿಸಿದ್ದರು ಆದರೆ ಯು.ಪಿ.ಏ ಸಕರ್ಾರ ಅಧಿಕಾರಕ್ಕೆ ಬಂದಾಗ ಹಲವು ಬಾರಿ ತೈಲದ ಉತ್ಪನ್ನಗಳನ್ನು ಅತ್ಯಧಿಕ ಬೆಲೆ ಏರಿಸಿ ಜನಸಾಮಾನ್ಯರಿಗೆ ಆಥರ್ಿಕ ಹೊರೆ ನೀಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ತಾ.ಪಂ.ಸದಸ್ಯ ಶಿವನಂಜಪ್ಪ, ಜಯದೇವಪ್ಪ, ಅ.ಭಾ.ವಿ.ಪ ತಾಲೂಕು ಘಟಕದ ಅಧ್ಯಕ್ಷ ರಾಕೇಶ್, ಕಾರ್ಯದಶರ್ಿ ಚೇತನ್ಪ್ರಸಾದ್ ಹಾಜರಿದ್ದರು.
1ಚಿಕ್ಕನಾಯಕನಹಳ್ಳಿ,ಜೂ.28: ಯು.ಪಿ.ಎ ಸಕರ್ಾರದಲ್ಲಿ ಮನಮೋಹನ್ ಸಿಂಗ್, ಚಿದಂಬರಂ, ಶರಾದ್ಪವಾರ್, ಎಸ್.ಎಂ.ಕೃಷ್ಣರಂತಹ ಆಥರ್ಿಕ ತಜ್ಞರಿದ್ದು ಸಾರ್ವಜನಿಕರ ದಿನನಿತ್ಯ ಅಗತ್ಯವಾದ ತೈಲಗಳ ಬೆಲೆಗಳನ್ನು ಏರಿಸಿರುವದು ಖಂಡನೀಯ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ಪ್ರತಿಭಟನೆಂ ನೇತೃತ್ವ ವಹಿಸಿ ಮಾತನಾಡಿದ ಅವರು ಯು.ಪಿ.ಏ ಸಕರ್ಾರವು ತೈಲಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರದ ಬೆಲೆಯೂ ಏರಿಕೆಯಾಗುವ ಸಂಭವ ಹೆಚ್ಚಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಬಡವ ಮತ್ತು ಮಧ್ಯಮ ವರ್ಗದವರ ಜೀವನ ಕೆಳಸ್ಥರದಲ್ಲಿ ಸಾಗುವ ಭೀತಿ ಕಾಡುತ್ತಿದೆ ಎಂದ ಅವರು ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಲಿದ್ದು ಬೆಲೆ ಇಳಿಕೆ ಮಾಡುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಆಗ್ರಹಿಸಿದರು.
ತಾಲೂಕು ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಕೇವಲ 3 ಬಾರಿ ಮಾತ್ರ ತೈಲ ಬೆಲೆಗಳನ್ನು ಹೆಚ್ಚಿಸಿದ್ದರು ಆದರೆ ಯು.ಪಿ.ಏ ಸಕರ್ಾರ ಅಧಿಕಾರಕ್ಕೆ ಬಂದಾಗ ಹಲವು ಬಾರಿ ತೈಲದ ಉತ್ಪನ್ನಗಳನ್ನು ಅತ್ಯಧಿಕ ಬೆಲೆ ಏರಿಸಿ ಜನಸಾಮಾನ್ಯರಿಗೆ ಆಥರ್ಿಕ ಹೊರೆ ನೀಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ತಾ.ಪಂ.ಸದಸ್ಯ ಶಿವನಂಜಪ್ಪ, ಜಯದೇವಪ್ಪ, ಅ.ಭಾ.ವಿ.ಪ ತಾಲೂಕು ಘಟಕದ ಅಧ್ಯಕ್ಷ ರಾಕೇಶ್, ಕಾರ್ಯದಶರ್ಿ ಚೇತನ್ಪ್ರಸಾದ್ ಹಾಜರಿದ್ದರು.

ಚಿಕ್ಕನಾಯಕನಹಳ್ಳಿ,ಜೂ.28: ಬಿ.ಸಿ.ಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದಲ್ಲಿ 2010-11 ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾಥರ್ಿನಿಯರಿಂದ ಪ್ರವೇಶಕ್ಕಾಗಿ ಅಜರ್ಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾಥರ್ಿನಿಲಯಕ್ಕೆ ಪ್ರವೇಶ ಪಡೆಯಬಯಸುವ ವಿದ್ಯಾಥರ್ಿಗಳು ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋಸರ್್ಗಳಾದ ಪಿ.ಯು.ಸಿ, ಪದವಿ, ವೃತ್ತಿಶಿಕ್ಷಣ, ಕೋಸರ್್ಗಳು ಇತ್ಯಾದಿಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು ಮತ್ತು ವಿದ್ಯಾಥರ್ಿ ನಿಲಯಗಳು ಇರುವ ಸ್ಥಳಗಳು ಕಾಲೇಜುಗಳಿಂದ 5ಕಿ.ಮೀ ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾವುದು. ಸ್ಥಳೀಯ ವಿದ್ಯಾಥರ್ಿಗಳು ಪ್ರವೇಶಕ್ಕೆ ಅನರ್ಹರು.
ಈ ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ವರ್ಗ 2ಎ, 2ಬಿ, 3ಎ, ಮತ್ತು 3ಬಿ ವರ್ಗ, ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳ ಕುಟುಂಬದ ವಾಷರ್ಿಕ ವರಮಾನ ಮಿತಿ 15ಸಾವಿರ, ಹಾಗೂ ಪ್ರವರ್ಗ1, ಎಸ್.ಸಿ, ಮತ್ತು ಎಸ್.ಟಿ ವಿದ್ಯಾಥರ್ಿಗಳಿಗೆ 50920 ಗಳನ್ನು ನಿಗದಿಪಡಿಸಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವೇಶ ಬಯಸುವ ವಿದ್ಯಾಥರ್ಿಗಳು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5ಗಂಟೆಯೊಳಗಾಗಿ ನಿಲಯ ಪಾಲಕರಿಗೆ ಸಲ್ಲಿಸಬೇಕೆಂದು ಕಾರ್ಯನಿವರ್ಾಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5ಸಾವಿರ, ಹಾಗೂ ಪ್ರವರ್ಗ1, ಎಸ್.ಸಿ, ಮತ್ತು ಎಸ್.ಟಿ ವಿದ್ಯಾಥರ್ಿಗಳಿಗೆ 50920 ಗಳನ್ನು ನಿಗದಿಪಡಿಸಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವೇಶ ಬಯಸುವ ವಿದ್ಯಾಥರ್ಿಗಳು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5ಗಂಟೆಯೊಳಗಾಗಿ ನಿಲಯ ಪಾಲಕರಿಗೆ ಸಲ್ಲಿಸಬೇಕೆಂದು ಕಾರ್ಯನಿವರ್ಾಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, June 24, 2010

10 ಗ್ರಾ.ಪಂ.ಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.24: ತಾಲೂಕಿನ 28 ಗ್ರಾ.ಪಂ.ಗಳ ಪೈಕಿ 10 ಗ್ರಾ.ಪಂಗಳಿಗೆ ಮೊದಲ ದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯಿಗೆ ಚಾಲನೆ ನೀಡಿದೆ.
ಗ್ರಾ.ಪಂ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರುಗಳು ರಾಜೀಸೂತ್ರಕ್ಕೆ ಮೊರೆಹೋಗಿದ್ದು, ಬಹುತೇಕ ಕಡೆ ಜೆ.ಡಿ.ಎಸ್. ಬಿ.ಜೆ.ಪಿ. ಜೆ.ಡಿ.ಯು. ಬೆಂಬಲಿತರಿಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ.
ಜೆ.ಡಿ.ಎಸ್. ಸ್ವತಂತ್ರವಾಗಿ ಕೆಲವು ಕಡೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದರೆ, ಜೆ.ಡಿ.ಯು ಒಂದು ಕಡೆ ಸ್ವತಂತ್ರವಾಗಿ ಆಯ್ಕೆಯಾಗಿದೆ, ಬಿ.ಜೆ.ಪಿ. ಮಾತ್ರ ಜೆ.ಡಿ.ಎಸ್.ನ ಜೊತೆ ಬಹುತೇಕ ಕಡೆ ಸಹೋದರತೆ ಮೆರೆದಿದೆ.
ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಕುಶಾಲ, ಉಪಾಧ್ಯಕ್ಷರಾಗಿ ಗಂಗಾಧರ್, ಚೌಳಕಟ್ಟೆ ಗ್ರಾ.ಪಂ.ಯಲ್ಲಿ ಅಧ್ಯಕ್ಷರಾಗಿ ಮಂಜುಳ, ಉಪಾಧ್ಯಕ್ಷರಾಗಿ ಸಿ.ಎಂ.ಶಶಿಕಲಾ, ದಸೂಡಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ, ಉಪಾಧ್ಯಕ್ಷರಾಗಿ ಪ್ರಕಾಶ್, ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಉಪಾಧ್ಯಕ್ಷೆ ರಂಗಮ್ಮ, ದುಗಡಿಹಳ್ಳಿ ವೀಣಾ ಉಪಾಧ್ಯಕ್ಷ ದಯಾನಂದ, ಕೆಂಕೆರೆ ಗ್ರಾ.ಪಂ. ಅಧ್ಯಕ್ಷ ತೋನಿ ಗೌಡಯ್ಯ ಉಪಾಧ್ಯಕ್ಷೆ ನೇತ್ರಾವತಿ, ಬರಕನಾಳ್ ಗ್ರಾ.ಪಂ. ರಮೇಶ್ ಉಪಾಧ್ಯಕ್ಷೆ ಮಂಜುಳ, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀದೇವಿ ಉಪಾಧ್ಯಕ್ಷರಾಗಿ ರಾಜಮ್ಮ, ಕೋರಗೆರೆ ಗ್ರಾ.ಪಂ.ಅಧ್ಯಕ್ಷ ಯತೀಶ್ ಉಪಾಧ್ಯಕ್ಷ ಗಂಗಣ್ಣ, ದೊಡ್ಡಬಿದರೆ ಗ್ರಾ.ಪಂ. ಇಂದ್ರಮ್ಮ ಉಪಾಧ್ಯಕ್ಷ ಅರುಣ್ಕುಮಾರ್ ಆಯ್ಕೆಯಾಗಿದ್ದಾರೆ
ಬರಕನಾಳ್ನಲ್ಲಿ ಕೆಲವು ಕಾಲ ಜಡಿ ಮಳೆಯ ನಡುವೆಯೂ ಬಿಸಿ ವಾತಾವರಣ ಉಂಟಾಗಿದ್ದು ಬಿಟ್ಟರೆ ಉಳಿದೆಲ್ಲಾ ಕಡೆ ಚುನಾವಣೆ ಶಾಂತಯುತವಾಗಿ ನಡೆದಿದೆ.
ಜೂನ್ 25ರ ಶುಕ್ರವಾರ(ಇಂದು) 9 ಗ್ರಾ.ಪಂ.ಗಳಿಗೆ ಚುನಾವಣೆ
ಹೊಯ್ಸಳ ಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಇ.ಓ. ಡಾ.ವೇದಮೂತರ್ಿ, ಹುಳಿಯಾರು ಗ್ರಾ.ಪಂ. ಚುನಾವಣಾಧಿಕಾರಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ, ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ, ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ, ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ, ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ, ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್, ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್

ಮರುಮೌಲ್ಯಮಾಪನದಿಂದಾಗಿ ಬಡಕೆಗುಡ್ಲು ಶಾಲೆ ಫಲಿತಾಂಶ ಶೇ.100
ಚಿಕ್ಕನಾಯಕನಹಳ್ಳಿ,ಜು.24: ತಾಲೂಕಿನ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಶೇ.100ರ ಫಲಿತಾಂಶ ಲಭಿಸಿದೆ, ಅನುತೀರ್ಣಗೊಂಡಿದ್ದ ವಿದ್ಯಾಥರ್ಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಉತ್ತೀರ್ಣಗೊಂಡಿದ್ದಾರೆ.
ಬಡಕೆಗುಡ್ಲು ಜಿ.ಎಚ್.ಎಸ್.ನ ಒಟ್ಟು ವಿದ್ಯಾಥರ್ಿಗಳು 22 ಇದ್ದು ಇದರಲ್ಲಿ 21 ವಿದ್ಯಾಥರ್ಿಗಳು ಮೇ ನಲ್ಲಿ ಬಂದ ಫಲಿತಾಂಶದಲ್ಲಿ ಉತ್ತೀರ್ಣಗೊಂಡಿದ್ದರು ಇದರಿಂದಾಗಿ ಶಾಲೆ ಫಲಿತಾಂಶ ಶೇ.96 ಆಗಿತ್ತು, ಅನುತ್ತೀರ್ಣಗೊಂಡಿದ್ದ ಒಬ್ಬಾಕೆ ಮರು ಮೌಲ್ಯಮಾಪನಕ್ಕೆ ಮೊರೆಹೋಗಿದ್ದರು, ಈಗ ಆಕೆಯು ಉತ್ತೀರ್ಣಗೊಂಡಿರುವುದರಿಂದ ಶಾಲೆಯ ಫಲಿತಾಂಶ ಶೇ.100 ಮುಟ್ಟಿದೆ.
ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಪೋಷಕರು ಶಾಲೆಯ ಎಚ್.ಎಂ. ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

Wednesday, June 23, 2010

ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವು
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಹೊರವಲಯದ ಹೊಸಹಳ್ಳಿ ಬಳಿ
ಲಾರಿಯೊಂದು ಯುವಕನ ತಲೆಯ ಮೇಲೆ ಹರಿದ ಪರಿಣಾಮ ಮೋಹನ್(17) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೊಸಹಳ್ಳಿಯ ಮೋಹನ್ ತೋಟವೊಂದರಲ್ಲಿ ಕೆಲಸ ಮಾಡಿ ಸೈಕಲ್ನಲ್ಲಿ ಮನೆಗೆ ವಾಪಸ್ ಬರುವಾಗ ಚಿ.ನಾ.ಹಳ್ಳಿ ಕಡೆಯಿಂದ ಬಂದ ಲಾರಿಯ ಹೊಡತಕ್ಕೆ ಸಿಕ್ಕ ಯುವಕ ಆಯ ತಪ್ಪಿ ನೆಲಕ್ಕೆ ಉರುಳಿದ್ದಾನೆ ಇದೇ ಸಂದರ್ಭದಲ್ಲಿ ಲಾರಿಯ ಚಕ್ರ ಮೋಹನನ ತಲೆಯ ಮೇಲೆ ಹರಿದು ಸಾವನ್ನಿಪ್ಪಿದ್ದಾನೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.
ಅಂಬೇಡ್ಕರ್ ಶಾಲೆಯಲ್ಲಿ ವಿದ್ಯಾಥರ್ಿ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಡಾ.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ವಿದ್ಯಾಥರ್ಿ ಸಂಘದ ಉದ್ಘಾಟನೆ, ಉಚಿತ್ ನೋಟ್ ಬುಕ್ ಗಳ ವಿತರಣೆ ಹಾಗೂ ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು.
ಸಂಸ್ಥೆಯ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಿದರು. ಜಾನಪದ ಕಲಾವಿದ ರಂಗಯ್ಯ ಗೀತೆಗಳನ್ನು ಹಾಡಿದರು, ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಂ.ಆನಂದ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಸಿ.ಎಸ್.ದೇವರಾಜು ಸ್ವಾಗತಿಸಿದರೆ, ಕೆ.ಎನ್.ರಾಮಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಮುದ್ದರಂಗಪ್ಪ ವಂದಿಸಿದರು.


Sunday, June 20, 2010

ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶನ ಸಾವು
ಚಿಕ್ಕನಾಯಕನಹಳ್ಳಿ,ಜೂ.20: ಸಿಂಗದಹಳ್ಳಿಯ ಕ್ಷೇತ್ರದ ಸದಸ್ಯ ಗಿರೀಶ್(28) ಹೃದಾಯಘಾತದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
ತೀರ್ಥಪುರ ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶ್, ಈ ಪಂಚಾಯಿತಿಯಿಂದ ಗೆದ್ದ ಸದಸ್ಯರಲ್ಲಿ ಒಂದು ಗುಂಪಿನೊಂದಿಗೆ ಪ್ರವಾಸಕ್ಕೆ ಹೊರಟಿರುವುದಾಗಿ ರಾತ್ರಿ ಮನೆಗೆ ತಿಳಿಸಿದ್ದ. ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ತಂಗಿದ್ದು ಬೆಳಗ್ಗೆ ಬಾಹಿರ್ದಸೆಗೆಂದು ಹೊರಟಾಗ ಗೊಲ್ಲರಹಟ್ಟಿಯಲ್ಲಿ ಸಾವನ್ನಪ್ಪಿದ್ದಾನೆ,
ಜೆ.ಡಿ.ಎಸ್. ಗುಪಿನೊಂದಿಗೆ ಗುರುತಿಸಿಕೊಂಡಿದ್ದ ಗಿರೀಶ್ ಉಪಾಧ್ಯಕ್ಷನಾಗುವ ಎಲ್ಲಾ ಅವಕಾಶವನ್ನು ಹೊಂದಿದ್ದು, ಈತನೇ ಉಪಾಧ್ಯಕ್ಷ ಎಂಬ ಮಾತು ಕೇಳಿ ಬರುತ್ತಿತ್ತು. ಈತ ವಾಸವಾಗಿದ್ದು ಸಿಂಗದಹಳ್ಳಿಯಲ್ಲಿ ಆದರೆ ಸಾವನ್ನಪ್ಪಿರುವುದು ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ಈಗಾಗಿ ಈತನ ಸಾವಿನ ಸುತ್ತ ಹಲವು ಅನುಮಾನಗಳು ಉದ್ಭವವಾಗಿದ್ದು ಪೋಲೀಸರು ಈ ಪ್ರಕರಣವನ್ನು ಅಸಹಜ ಸಾವೆಂದು ಪರಿಗಣಿಸಿ ವೈದ್ಯರಿಂದ ಶವ ಪರೀಕ್ಷೆ ನಡೆಸಿದ್ದಾರೆ.

ವಿದ್ಯುತ್ ತಂತಿಯಿಂದ ಆಗಿರುವ ತೊಂದರೆ ತಪ್ಪಿಸಿ, ನಿರಾಳವಾಗಿ ಬದುಕಲು ಬಿಡಿ
ಚಿಕ್ಕನಾಯಕನಹಳ್ಳಿ,ಜೂ.20: ಅನಗತ್ಯದ ಕಡೆ ವಿದ್ಯುತ್ ಕಂಬಗಳನ್ನು ನೆಟ್ಟು ತಂತಿ ಎಳೆದಿದ್ದು ಈ ತಂತಿಯಲ್ಲಿ ಅರಿಯುವ ವಿದ್ಯುತ್ಗೆ ಮರಗಳ ಕೊಂಬೆ ತಗುಲಿ ಬೆಂಕಿಯ ಕಿಡಿ ಪದೇ ಪದೇ ಬರುತ್ತಿರುವುದಲ್ಲದೆ, ಈ ಸ್ಥಳದಲ್ಲಿ ವಿದ್ಯುತ್ ಅವಗಡಗಳು ಸಂಭವಿಸುತ್ತಿದ್ದು ಇಲ್ಲಿನ ಸುಮಾರು 20 ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತರಬೇನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ತರಬೇನಹಳ್ಳಿಯಲ್ಲಿನ ಶಂಕರಪ್ಪ ಎಂಬುವರ ಮನೆಯ ಮುಂದೆ ಹತ್ತು ವರ್ಷಗಳ ಹಿಂದೆ ಬೋರ್ ವೆಲ್ ಒಂದಕ್ಕೆ ವಿದ್ಯುತ್ ಸಂಪರ್ಕಕೊಡುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದ್ದು, ಈಗ ಆ ಬೋರ್ವೆಲ್ ನಲ್ಲಿ ನೀರು ಇಲ್ಲದ ಕಾರಣ ಕಳೆದ ಐದಾರು ವರ್ಷಗಳಿಂದ ಆ ಬೋರ್ವೆಲ್ನ್ನು ಮುಚ್ಚಲಾಗಿತ್ತು, ಆಗಿನಿಂದಲೂ ಇಲ್ಲಿದ್ದ ಟಿ.ಸಿ. ಮರಗಿಡಗಳಿಂದ ಆವೃತ್ತವಾಗಿ, ಇಲ್ಲಿಂದ ಹೋದ ತಂತಿಯ ಮಾರ್ಗದಲ್ಲೂ ಗಿಡ ಮರಗಳು ಬೆಳೆದು ನಿಂತಿವೆ, ಈ ಲೈನ್ ಅವಶ್ಯಕತೆಯೇ ಇಲ್ಲದಂತಾಗಿದೆ, ಹಾಗಾಗಿ ಈ ಲೈನ್ ತೆಗೆಯುವಂತೆ ಹಲವು ಬಾರಿ ಬೆಸ್ಕಾಂನವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುವ ಅನ್ನೂಪೂರ್ಣಮ್ಮ, ನಮಗೆ ರಾತ್ರಿ ಸಂದರ್ಭದಲ್ಲಿ ಈಚೆ ಬರುವುದಕ್ಕೆ ಹೆದರಿಕೆ ಯಾಗುತ್ತದೆ ಎನ್ನುತ್ತಾ ಮೊನ್ನೆ ರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗುಲಿ ಬೆಂಕಿ ಕಿಡಿಗಳು ಬಂದವು, ಅಲ್ಲದೆ ಸೈರನ್ ತರ ಶಬ್ದವೂ ಬಂತು ಈ ಬಗ್ಗೆ ಬೆಸ್ಕಾಂನವರಿಗೆ ದೂರು ನೀಡಿದರೆ ಅವರು ಘಟನೆ ನಡೆದ ಮೂರು ದಿನ ಕಳೆದನಂತರ ಬಂದು ಕಂಬದಲ್ಲಿ ಪಿಂಗಾಣಿಯ ಬಟ್ಟಲಿನಂತಹ ವಸ್ತುವೊಂದನ್ನು ಹಾಕಿ ಹೋದರೆ ವಿನಃ ಆ ಲೈನ್ನ ವಿದ್ಯುತ್ನ್ನು ಸ್ಥಗಿತಗೊಳಿಸಲಿಲ್ಲ ತಕ್ಷಣವೇ ನಮಗೆ ಈ ಕಿರಿಕಿರಿಯಿಂದ ತಪ್ಪಿಸಿ, ಭಯದ ವಾತಾವರಣವನ್ನು ದೂರ ಮಾಡಿ ನಿರಾಳವಾದ ಬದುಕನ್ನು ನಡೆಸುವಂತೆ ಕಲ್ಪಿಸಿಕೊಡುವಂತೆ ಬೆಸ್ಕಾಂನ ಅಧಿಕಾರಿಗಳನ್ನು ತರಬೇನಹಳ್ಳಿಯ 20 ಕುಟುಂಬಗಳು ಕೋರಿಕೊಂಡಿವೆ.
ವಿದ್ಯುತ್ ತಂತಿ ಕದಿಯಲು ಹೋಗಿ ಸಾವು
ಚಿಕ್ಕನಾಯಕನಹಳ್ಳಿ,ಜು.20: ವಿದ್ಯುತ್ ತಂತಿ ಕದಿಯಲು ಹೋದ ವ್ಯಕ್ತಿಯೊಬ್ಬ ಕಂಬದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಿಮ್ಮನಹಳ್ಳಿಯ ಬಳಿ ನಡೆದಿದೆ.
ತಿಮ್ಮನಹಳ್ಳಿಯಿಂದ ಗಂಟೇನಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ವಿದ್ಯುತ್ ಕಂಬಗಳಿಗೆ ಹಾಕಿದ್ದ ವಿದ್ಯುತ್ ತಂತಿಯನ್ನು ಬಿಚ್ಚಲು ಹೋಗಿ ಕಂಬದ ಮೇಲಿಂದ ಬಿದ್ದು ತೀವ್ರವಾಗಿ ಪೆಟ್ಟು ತಿಂದ ಕೃಷ್ಣಪ್ಪ ಎಂಬಾತ ಸಾವನ್ನಪ್ಪಿದ್ದಾನೆ.
ಗುಬ್ಬಿ ತಾಲೂಕು ಹಾಗಲ್ವಾಡಿ ಹೋಬಳಿಯ ಕುರಿಹಳ್ಳಿಯವನಾದ ಈತ ವಿದ್ಯುತ್ ತಂತಿ ಕದಿಯುವ ಕೆಲಸವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು ಈ ಸಲುವಾಗಿ ದಂಡನೆಗೂ ಒಳಗಾಗಿದ್ದೆನೆಂದು ಪೊಲೀಸ್ ಮೂಲಗಳು ತಿಳಿಸಿವೆ.

Friday, June 18, 2010

ಆಶಾ ಕಾರ್ಯಕರ್ತರನ್ನು ಸಕರ್ಾರಿ ನೌಕರರೆಂದು ಪರಿಗಣಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಜೂ.18: ಆಶಾ ಕಾರ್ಯಕರ್ತರ ಸೇವೆಗೆ ತಕ್ಕಂತೆ ಪ್ರೋತ್ಸಾಹ ಧನ ನೀಡುವುದು ತುಂಬಾ ಕಡಿಮೆಯಾಗಿದ್ದು ಅದನ್ನು ಕೊಡಲು ಸಹ ವಿಳಂಬಾಗುತ್ತಿದೆ ಮತ್ತು ಆಶಾ ಕಾರ್ಯಕತೆರ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯವು ನಿಲ್ಲಬೇಕು ಎಂದು ರಾಜ್ಯ ಆಶಾ ಕಾರ್ಯಕರ್ತರ ನಾಯಕ ಕಾಂ.ಎನ್.ಶಿವಣ್ಣ ಒತ್ತಾಯಿಸಿದರು.
ಪಟ್ಟಣದ ಸಿವಿಲ್ ಬಸ್ನಿಲ್ದಾಣದಿಂದ ತಾಲೂಕು ಕಛೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಾತನಾಡಿದ ಅವರು, ಆಶಾ ಕಾರ್ಯಕತರ್ೆಯರು ತೀರ ಬಡತನದಿಂದ ಬಂದಿರುವ ಕುಟುಂಬದವರಾಗಿದ್ದು ಅಬಲೆಯರನ್ನು ಸಬಲೆಯರನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವ ಸಕರ್ಾರ, ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವವರಿಗೆ ಏಕೆ ಇನ್ನೂ ಬೇಡಿಕೆಗಳನ್ನು ಈಡೇರಿಸಿಲ್ಲ, ಈಗಾಗಲೇ ಕಾರ್ಯಕತರ್ೆಯರು ಹಲವು ಬೇಡಿಕೆಗಳನ್ನು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಅಜಾದ್ರವರಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ, ರಾಜ್ಯದ ಆರೋಗ್ಯ ಸಚಿವ ಶ್ರೀ ರಾಮಲು ಗಣಿಗಾರಿಕೆಯ ಕಡೆ ಗಮನ ಹರಿಸುತ್ತಾರೆ ಹೊರೆತು, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕತರ್ೆಯರ ಬೇಡಿಕೆಗಳನ್ನು ಈಡೇರಿಸಲು ಏಕೆ ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. ಆಶಾ ಕಾರ್ಯಕತರ್ೆಯರನ್ನು ಪೂರ್ಣ ಕಾಲದ ಸಕರ್ಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಆಸ್ಪತ್ರೆಗಳಿಗೆ ಹೋಗಿ ಬರಲು ಸಾರಿಗೆ ವೆಚ್ಚವನ್ನು ಮುಂಗಡವಾಗಿ ಕೊಡಬೇಕು, ಮತ್ತು ತುತರ್ುಸೇವೆಯೂ ಸೇರಿದಂತೆ ಅಗತ್ಯ ತರಬೇತಿಯ ನೀಡಿ, ಭವಿಷ್ಯ ನಿಧಿ, ಪಿಂಚಣಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆಶಾ ಕಾರ್ಯಕತರ್ೆಯರನ್ನು ಒಳಪಡಿಸಬೇಕು ಎಂದರು. ಹಳ್ಳಿಯಿಂದ ಬರುವ ಗಭರ್ಿಣಿ ಸ್ತ್ರೀಯರಿಗೆ ಹೆರಿಗೆಯನ್ನು ತಾಲೂಕು ಕೇಂದ್ರದಲ್ಲಿಯೇ ಮಾಡಬೇಕು ಮತ್ತು ದೇಶಾದ್ಯಂತ ಜನನಿ ಸುರಕ್ಷಾ ಯೋಜನೆಯನ್ನು ಜಾರಿ ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್, ಆಶಾ ಕಾರ್ಯಕತರ್ೆಯರ ಸ್ಥಳೀಯ ಅಧ್ಯಕ್ಷೆ ಲೋಲಾಕ್ಷಮ್ಮ, ಕಾರ್ಯದಶರ್ಿ ರಾಜಮ್ಮ, ಪ್ರಧಾನ ಕಾರ್ಯದಶರ್ಿ ಯೋಗೇಶ್ ಉಪಸ್ಥಿತರಿದ್ದರು.

ಕೃಷಿಕ ಸಮಾಜದ ಸಭೆಗೆ 18 ಇಲಾಖೆಗಳ ಅಧಿಕಾರಿಗಳು ಬರುವುದು ಕಡ್ಡಾಯ
ಚಿಕ್ಕನಾಯಕನಹಳ್ಳಿ,ಜೂ.18: ತಾಲೂಕು ಕೃಷಿಕ ಸಮಾಜದ ವ್ಯಾಪ್ತಿಗೆ ಶಿಕ್ಷಣ, ಕಂದಾಯ, ಅರಣ್ಯ, ಕೃಷಿ ಸೇರಿದಂತೆ 18 ಇಲಾಖೆಗಳ ಒಳಪಟ್ಟಿದ್ದು ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಹಾಜರಿದ್ದು ಮಾಹಿತಿ ನೀಡುವಂತೆ ನೋಡಿಕೊಳ್ಳಲು ಸಹಾಯಕ ಕೃಷಿ ನಿದರ್ೇಶಕರಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಹೆಚ್.ದೊಡ್ಡೆಗೌಡರು ಸೂಚನೆ ನೀಡಿದರು.
ಸಹಾಯಕ ಕೃಷಿ ನಿದರ್ೇಶಕರ ಕಛೇರಿಯಲ್ಲಿ ನಡೆದ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದರು.
ಕೃಷಿಕ ಸಮಾಜದ ಸಭೆಗೆ ಅಧಿಕಾರಿಗಳು ಆಗಮಿಸದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಗಳಿಗೆ ಕಡ್ಡಾಯವಾಗಿ ಆಗಮಿಸುವುದರ ಜೊತೆಗೆ ಇಲಾಖೆ ವತಿಯಿಂದ ಸಂಪೂರ್ಣ ಮಾಹಿತಿ ತರಬೇಕೆಂದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ನಾಗರಾಜು ಮಾತನಾಡಿ ತಾಲೂಕಿನಲ್ಲಿ ಗೊಬ್ಬರ ದರದಲ್ಲಿ ಏರುಪೇರಾಗುತ್ತಿದ್ದು ರೈತರಿಗೆ ಹೆಚ್ಚಿನ ಹೊರೆ ಬೀಳುತ್ತಿರುವ ಬಗ್ಗೆ ಗಮನ ಸೆಳೆದರು.
ತಾಲೂಕು ಕೃಷಿಕ ಸಮಾಜದ ಕಾರ್ಯದಶರ್ಿ ಆರ್.ಸಿ.ಮಹೇಶ್ ಮಾತನಾಡಿ ಕೃಷಿ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡುವಲ್ಲಿ ವಿಳಂಬವಾಗುತ್ತಿದ್ದು ರೈತರಿಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಕೆ.ನಾಗಣ್ಣ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು, ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ಅಶ್ವತ್ನಾರಾಯಣ ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ, ಮೋಹನ್ಕುಮಾರ್ ನಿರೂಪಿಸಿ ವಂದಿಸಿದರು.



Wednesday, June 16, 2010

ಪರಿಸರ ಅಭಿವೃದ್ದಿ ಸಮಿತಿಯಲ್ಲಿ ಹತ್ತು ಕೋಟಿ ರೂ
ಚಿಕ್ಕನಾಯಕನಹಳ್ಳಿ,ಜೂ.16: ಪರಿಸರ ಅಭಿವೃದ್ದಿ ಸಮಿತಿಗೆ ಗಣಿ ಮಾಲೀಕರುಗಳಿಂದ ಟನ್ಗೆ 15 ರೂ ನಂತೆ ಸಂಗ್ರಹಿಸಿದ ಹಣ ಹತ್ತು ಕೋಟಿ ಮುಟ್ಟಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಪರಿಸರ ಅಭಿವೃದ್ದಿ ಸಮಿತಿ ವತಿಯಿಂದ ರೈತರಿಗೆ ಹಾಗೂ ವಿದ್ಯಾಥರ್ಿಗಳಿಗೆ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.
ಈ ಹಣದಲ್ಲಿ ಇಲ್ಲಿಯವರೆಗೆ ಗಣಿಗಾರಿಕೆಯಿಂದ ನೊಂದ 16 ಹಳ್ಳಿಗಳ 376 ರೈತರಿಗೆ 11 ಲಕ್ಷದ 72 ಸಾವಿರ ರೂ ಪರಿಹಾರ ರೂಪದಲ್ಲಿ ವಿತರಿಸಲಾಗಿದೆ, ಉನ್ನತ ಶಿಕ್ಷಣ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿಗಳಿಗೆ 15 ಲಕ್ಷದ 33 ಸಾವಿರ ರೂಗಳ ಚೆಕ್ ವಿತರಣೆ ಮಾಡಲಾಗಿದೆ ಎಂದರು.
ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ರೈತರಿಗೆ ಪಶು ಸಂಗೋಪಾನೆ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ 30 ಲಕ್ಷದ 27 ಸಾವಿರ ರೂ ವೆಚ್ಚ ಮಾಡಲಾಗುತ್ತಿದೆ ಎಂದರಲ್ಲದೆ, ಇನ್ನೂ 9 ಕೋಟಿ ರೂಗಳು ಬ್ಯಾಂಕ್ನಲ್ಲಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ, 170 ಉನ್ನತ ಶಿಕ್ಷಣ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದರಲ್ಲದೆ, ಇನ್ನೂ ಕೆಲವು ಗ್ರಾಮಗಳಾದ ಕೋಡಿಹಳ್ಳಿ, ಭಾವನಹಳ್ಳಿ, ಹೊಸಹಳ್ಳಿ ಗ್ರಾಮಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ ಎಂದರು.
ಈಗ ಪರಿಸರ ಅಭಿವೃದ್ದಿ ನಿಧಿಯಿಂದ ನೀರಾವರಿಗೆ 5 ಕೋಟಿಯನ್ನು ಕೆನರಾ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ, ಎಸ್.ಬಿ.ಎಂ.ನ ಉಳಿತಾಯ ಖಾತೆಯಲ್ಲಿ 3 ಕೋಟಿ 83 ಲಕ್ಷ ರೂ ಹಣವಿದೆ ಅಲ್ಲದೆ ಈ ಹಣಗಳಿಂದ 21 ಲಕ್ಷ ರೂ ಬಡ್ಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ರುದ್ರೇಶ್, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಕಾರ್ಯದಶರ್ಿ ಸಾಯಿಬಾಬ, ತಾ.ಪಂ.ಇ.ಓ, ಡಾ.ವೇದಮೂತರ್ಿ, ಸಿ.ಡಿ.ಪಿ.ಓ, ಅನೀಸ್ ಖೈಸರ್, ಸಮಾಜ ಕಲ್ಯಾಣಾಧಿಕಾರಿ ಸಯದ್ ಮುನೀರ್, ಸಿ.ಪಿ.ಐ, ಪಿ.ರವಿಪ್ರಸಾದ್ ಮುಂತಾದವರು ಹಾಜರಿದ್ದರು.
ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆ ವೇಳಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಜು.16: ತಾಲೂಕಿನ 28 ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗಳು ಇದೇ 24 ರಿಂದ 26 ರವರೆಗೆ ಒಟ್ಟು ಮೂರು ದಿನ 9 ಜನ ಚುನಾವಣಾಧಿಕಾರಿಗಳು ನಡೆಸಿಕೊಡಲಿದ್ದಾರೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಜೂನ್ 24 ರಂದು 10 ಗ್ರಾ.ಪಂ.ಗಳಿಗೆ ಚುನಾವಣೆ ಹಾಗೂ ನೇಮಕ ಗೊಂಡಿರುವ ಚುನಾವಣಾಧಿಕಾರಿಗಳು
1) ದಸೂಡಿ ಗ್ರಾ.ಪಂ. ಚುನಾವಣಾಧಿಕಾರಿ ತಾ.ಪಂ. ಇ.ಓ. ಡಾ.ವೇದಮೂತರ್ಿ
2) ಕೆಂಕೆರೆ ಗ್ರಾ.ಪಂ. ಚುನಾವಣಾಧಿಕಾರಿ ಸ.ತೋಟಗಾರಿಕೆ ನಿದರ್ೇಶಕ ಕೃಷ್ಣಪ್ಪ
3) ಕೋರಗೆರೆ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ (ಜಿ.ಪಂ.) ಮಲ್ಲೇಶಯ್ಯ
4) ಚೌಳಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಕೃಷಿ ಅಧಿಕಾರಿ ರಂಗಸ್ವಾಮಿ
5) ತಿಮ್ಮಲಾಪುರ ಗ್ರಾ.ಪಂ. ಚುನಾವಣಾಧಿಕಾರಿ ಮೀನುಗಾರಿಕೆ ಸ.ನಿ. ಉಮೇಶ್
6) ದೊಡ್ಡಬಿದರೆ ಗ್ರಾ.ಪಂ. ಚುನಾವಣಾಧಿಕಾರಿ ಬಿ.ಇ.ಓ. ಬಿ.ಜೆ.ಪ್ರಭುಸ್ವಾಮಿ
7) ಬರಕನಾಳ್ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ.(ಪಿ.ಡಬ್ಲೂ.ಡಿ) ಭಾಸ್ಕರಾಚಾರ್ಯ
8) ಶೆಟ್ಟೀಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
9) ದುಗಡಿಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ. ಅನೀಸ್ ಖೈಸರ್
10) ಗೋಡೆಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
ಜೂನ್ 25ರ ಶುಕ್ರವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
11) ಹೊಯ್ಸಳ ಕಟ್ಟೆ ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
12) ಹುಳಿಯಾರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
13) ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
14) ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
15) ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
16) ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
17) ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
18) ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
19) ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
ಜೂನ್ 26ರ ಶನಿವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
20) ಹಂದನಕೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
21) ರಾಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
22) ಬೆಳಗುಲಿ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
23) ಬರಗೂರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
24) ಮಲ್ಲಿಗೆರೆ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
25) ಹೊನ್ನೇಬಾಗಿ ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
26) ತೀರ್ಥಪುರ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
27) ಜೆ.ಸಿ.ಪುರ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
28) ಗಾಣಧಾಳು ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
ಹಿರಿಯ ವಿದ್ಯಾಥರ್ಿ ಸಂಘದ ಕಾರ್ಯ ಶ್ಲಾಘನೀಯ: ಬಿ.ಇ.ಓ
ಚಿಕ್ಕನಾಯಕನಹಳ್ಳಿ,ಜೂ.16: ಶತಮಾನ ಕಂಡ ಸಕರ್ಾರಿ ಶಾಲೆಯ ಹಿರಿಯ ವಿದ್ಯಾಥರ್ಿಗಳು ತಮ್ಮ ಶಾಲೆಯ ಹಾಗೂ ವಿದ್ಯಾಥರ್ಿಗಳ ಏಳಿಗೆಗೆ ಶ್ರಮಿಸುತ್ತಿರುವುದು ಮೇಲ್ಪಂಕ್ತಿಯಾಗಿದೆ ಎಂದು ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಕುರುಬರಶ್ರೇಣಿಯಲ್ಲಿ ನಡೆದ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 100 ವರ್ಷ ಪೂರೈಸಿರುವ ಈ ಶಾಲೆಯ ಶತಮಾನೋತ್ಸವ ಇತ್ತೀಚಿಗೆ ಆಚರಿಸಿ ಶಾಲೆಯ ಸವರ್ೋತಮುಖ ಅಭಿವೃದ್ದಿಯ ಉದ್ದೇಶದಿಂದ ರೂಪುಗೊಂಡಿರುವುದು ಹರ್ಷದಾಯಕ ಎಂದರಲ್ಲದೆ, ಇಲ್ಲಿನ ಹಿರಿಯ ವಿದ್ಯಾಥರ್ಿಗಳ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಂಘ 2ಲಕ್ಷ ಹಣ ಸೇರಿಸಿ ಆಥರ್ಿಕವಾಗಿ ಸದೃಡವಾಗಿದೆ. ಹಿರಿಯ ವಿದ್ಯಾಥರ್ಿಯೊಬ್ಬರು ಶಾಲೆಗೆ ಈಗಾಗಲೇ ನಿವೇಶನವೊಂದನ್ನು ನೀಡಿದ್ದು ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗೆ ಒಂದು ಕೊಠಡಿ ಮಂಜೂರು ಮಾಡಿದೆ ಎಂದರು. ಸಕರ್ಾರ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಸಹಾಯದ ಜೊತೆಗೆ ಸಂಘ ಸಂಸ್ಥೆಗಳು ಮುಂದೆ ಬಂದು ಕೈ ಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜಿ.ರಂಗಯ್ಯ ಮಾತನಾಡಿ ಈಗಾಗಲೇ 400 ಸದಸ್ಯರನ್ನು ಒಳಗೊಂಡಿರುವ ಸಂಘವು ಈ ಶಾಲೆಯನ್ನು ಉತ್ತಮ ಮಾದರಿ ಶಾಲೆಯನ್ನಾಗಿ ಮಾಡುವ ಹೆಗ್ಗುರಿಯನ್ನು ಹೊಂದಿದೆ ಎಂದರಲ್ಲದೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು. ಸಮಾರಂಭದಲ್ಲಿ 195 ವಿದ್ಯಾಥರ್ಿಗಳಿಗೆ ನೋಟ್ಬುಕ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂತರ್ಿ, ಹಿರಿಯ ವಿದ್ಯಾಥರ್ಿಗಳ ಸಂಘದ ಕಾರ್ಯದಶರ್ಿ ಕೆ.ಜಿ.ರಾಜೀವಲೋಚನ, ಶಂಕರಪ್ಪ, ಕೃಷ್ಣಾಚಾರ್, ಲೀಲಾವತಿರಾಜ್ಕುಮಾರ್, ಬನಶಂಕರಯ್ಯ, ಪಾಂಡುರಂಗಯ್ಯ ಉಪಸ್ಥಿತರಿದ್ದರು. ಶಿಕ್ಷಕ ಕೆ.ಶಿವಕುಮಾರ್ ಸ್ವಾಗತಿಸಿ ದ್ರಾಕ್ಷಾಯಣಮ್ಮ ವಂದಿಸಿದರು.
ಕನಕ ಸೇವಾ ಸಮಿತಿಗೆ ನೂತನ ನಿದರ್ೇಶಕರುಗಳು
ಚಿಕ್ಕನಾಯಕನಹಳ್ಳಿ,ಜು.16: ಪಟ್ಟಣದ ಕನಕ ಸೇವಾ ಸಮಿತಿಗೆ 15 ಜನ ನೂತನ ನಿದರ್ೇಶಕರುಗಳು ಚುನಾವಣೆಯ ಮೂಲಕ ಆಯ್ಕೆಗೊಂಡಿದ್ದಾರೆ.
ಬೀರಯ್ಯ(ಅಡಿಕೆ), ಸಿ.ಟಿ.ಗುರುಮೂತರ್ಿ ಸೀಮೆಣ್ಣೆ, ಸಿ.ಎಂ.ಬೀರಲಿಂಗಯ್ಯ, ಸಿ.ಜಿ.ಚಂದ್ರಶೇಖರ್, ಸಿ.ಎಂ.ರಮೇಶ್, ಕ್ಯಾಪ್ಟನ್ ಸೋಮಶೇಖರ್, ಪರಮೇಶ್, ಸಿ.ಎಸ್.ಬಸವರಾಜು, ಸಿ.ಬಿ.ಲಿಂಗರಾಜು, ಸಿ.ಎಸ್.ರಘು, ಸುದರ್ಶನ್, ಸಿ.ಎಸ್.ಪುಷ್ಪಲತ, ಸಿ.ಪಿ.ಮಹೇಶ್, ಗೋವಿಂದಯ್ಯ, ಸಿ.ಎಸ್.ರಾಜಣ್ಣ ಆಯ್ಕೆಯಾಗಿದ್ದಾರೆ.



ಆರ್.ಟಿ.ಓ.ಇನ್ಸ್ಪೆಕ್ಟರ್ ಕಾರು ಢಿಕ್ಕಿ: ಸ್ಥಳದಲ್ಲೇ ಒಬ್ಬ ಸಾವು
ಚಿಕ್ಕನಾಯಕನಹಳ್ಳಿ,ಜು.16: ತರಬೇನಹಳ್ಳಿಯ ಬಳಿ ಎರಡು ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪಿದರೆ ಮತ್ತೋರ್ವನ ಕಾಲು ಮುರಿದಿದೆ.
ಬೀದರ್ ಜಿಲ್ಲೆಯ ಆರ್.ಟಿ.ಓ. ಇಲಾಖೆಯ ಇನ್ಸ್ಪೆಕ್ಟರ್ ಕೃಷ್ಣೇಗೌಡ ಎಂಬುವರ ಸ್ಕೋಡಾ ಆಕ್ಟೀವ ವಾಹನ, ಕಲ್ಕತ್ತದ ಗಣಿ ಉದ್ಯಮಿ ವಿಜಯಕಾಂತ ಶರ್ಮನ ಬುಲೆರೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿಜಯಕಾಂತ ಶರ್ಮ ಸ್ಥಳದಲ್ಲೇ ಸಾವನ್ನಪಿದ್ದಾನೆ, ಇನ್ಸ್ ಪೆಕ್ಟರ್ ಕೃಷ್ಣೇಗೌಡನ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕೊಂಡೊಯ್ಯಲಾಗಿದೆ.
ಅಜ್ಜಿಯ ತಲೆಗೆ ಹೊಡೆದು ಸರ ಅಪಹರಣ: ಪಟ್ಟಣದ ಹೊರವಲಯದ ಮೇಲನಹಳ್ಳಿ ವಾಸಿ ಲಕ್ಷ್ಮೀದೇವಮ್ಮ(60) ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅಪರಚಿತ ಯುವಕನೊಬ್ಬ ಕುಡುಗೋಲಿನಿಂದ ಅಜ್ಜಿಯ ತಲೆಗೆ ಬಲವಾಗಿ ಹೊಡೆದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾನೆ. ಲಕ್ಷ್ಮೀದೇವಮ್ಮ ನವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಎರಡು ಪ್ರಕರಣಗಳನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೆಸರು ಬೆಳೆಗೆ ಕೀಟ ಭಾದೆ, ನಿಯಂತ್ರಣಕ್ಕೆ ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಜು.16: ರೈತರು ಭಿತ್ತಿರುವ ಹೆಸರು ಬೆಳೆ ಹೂ ಮತ್ತು ಕಾಯಿ ಹಂತದಲ್ಲಿದ್ದು ಈ ಬೆಳೆಗೆ ತಂಬಾಕು ಹುಳು ಮತ್ತು ಕೊಂಡ್ಲಿ ಹುಳುವಿನ ಬಾಧೆ ಹೆಚ್ಚಾಗಿದೆ ಈ ಸಂಬಂಧ ರೈತರು ಮುಂಜಾಗ್ರತೆ ವಹಿಸಬೇಕೆಂದು ಕೃಷಿ ಸಹಾಯಕ ನಿದರ್ೇಶಕರು ತಿಳಿಸಿದ್ದಾರೆ.
ತಾಲೂಕಿನ 5283 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತಿದ್ದು ಇದರಲ್ಲಿ ಸುಮಾರು 780 ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹೂವಿನ ಮತ್ತು ಕಾಯಿಯ ಹಂತದಲ್ಲಿದ್ದು ಇದಕ್ಕೆ ಹತ್ತಿರುವ ಕೀಟಗಳನ್ನು ನಿಯಂತ್ರಿಸಲು ರೈತರು ಈ ಕೆಳಗಿನ ಕ್ರಮ ಕೈಗೊಳ್ಳಬೇಕಿದೆ.
ತಂಬಾಕು ಹುಳುಗಳನ್ನು ಹತೋಟಿ ತರುವ ನೈಸಗರ್ಿಕ ವಿಧಾನವೆಂದರೆ ಗುಂಪಾಗಿರುವ ತಂಬಾಕು ಹುಳುವಿನ ಮೊಟ್ಟೆಗಳನ್ನು ಮತ್ತು ಮರಿಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು ಒಂದು ಕ್ರಮವಾದರೆ, ರಾಸಾಯನಿಕಗಳಿಂದ ಹತೋಟಿ ಮಾಡಲು ಒಂದು ಲೀಟರ್ ನೀರಿನಲ್ಲಿ ಮಿಥೋಮಿಲ್ 40 ಎಸ್.ಪಿ. ಕರಗುವ ಪುಡಿಯನ್ನು ಬೆರಸಿ ಸಿಂಪಡಿಸುವುದು ಅಥವಾ ಒಂದು ಲೀಟರ್ ನೀರಿನಲ್ಲಿ ಇಂಡಾಕ್ಸ ಕಾಬರ್್ 14.5 ಎಸ್.ಪಿ.ಯನ್ನು 5 ಮಿಲಿ ಬೆರಸಿ ಸಿಂಪಡಿಸಬಹುದು, ನೋವಲ್ಯೂರಾನ್ 10 ಇಸಿ ಯ 5 ಮಿಲಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿದರೆ ತಂಬಾಕು ಹುಳುಗಳನ್ನು ನಿಯಂತ್ರಿಸಬಹುದು.
ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಷಣ ಬಳಸುವುದು ಸೂಕ್ತವಾಗಿದ್ದು, ಈ ವಿಷಪಾಷಣವನ್ನು ತಯಾರಿಸುವ ಕ್ರಮವೆಂದರೆ ಗೋಧಿ ಹಿಟ್ಟು ಅಥವಾ ಬೂಸಾ ಅಥವಾ ಅಕ್ಕಿ ತೌಡು 10 ಕಿ.ಗ್ರಾಂ.ಗೆ ಒಂದು ಕಿ.ಗ್ರಾ. ಬೆಲ್ಲವನ್ನು ನೀರಿನಲ್ಲಿ ನೆನಸಿದ್ದು, ಈ ಬೆಲ್ಲದ ನೀರಿಗೆ ಹಿಟ್ಟನ್ನು ಕಲಿಸಿ ಸಣ್ಣ ಸಣ್ಣ ಉಂಡೆ ಮಾಡುವುದು ಅದಕ್ಕೆ 150 ಗ್ರಾಂ ಮೆಧೋಮಿಲ್ 40 ಎಸ್.ಪಿ.ಕೀಟನಾಶಕ ಮಿಶ್ರಣ ಮಾಡಿ ಸಂಜೆ 5 ಗಂಟೆಯ ನಂತರ ಹೊಲದಲ್ಲಿ ಎರಚಿ ಹುಳುಗಳನ್ನು ನಾಶ ಪಡಿಸಬಹುಬು.
ಕೊಂಡ್ಲಿಹುಳು, ಕಾಯಿ ಕೊರಕ ಮತ್ತು ಸ್ಪಿಂಜ್ಡ್ ಮಾಥ್ ಹತೋಟಿ ಕ್ರಮ: ಇವುಗಳ ಹತೋಟಿಗೆ ಕ್ಲೋರೋ ಫೈರಿಫಾಸ್ ಅಥವಾ ಎಂಡೋಸಲ್ಪಾನ್ ಅಥವಾ ಕ್ವಿನಲ್ ಫಾಸ್ ಅಥವಾ ಮನೋ ಕ್ರೋಟೋಫಾಸ್ ಇವುಗಳಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿಗೆ 2 ಮಿಲಿ ಯನ್ನು ಬೆರಸಿ ಸಿಂಪರಣೆ ಮಾಡುವುದು ಒಂದು ಎಕರೆ ಪ್ರದೇಶಕ್ಕೆ 250 ಲೀಟರ್ ಸಿಂಪರಣಾದ್ರಾವಣ ಬಳಸುವುದು ಸೂಕ್ತ ಎಂದಿದ್ದಾರೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪಕರ್ಿಸಲು ಕೋರಿದ್ದಾರೆ

Saturday, June 12, 2010

ಕಡಿಮೆ ಕೂಲಿ ಎಂದು ಎಳೆಯರನ್ನು ಸೇರಿಸಿಕೊಂಡರೆ ಆಪತ್ತು ನಿಶ್ಚಿತ

ಚಿಕ್ಕನಾಯಕನಹಳ್ಳಿ,ಜೂ.12: ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಅಸಮರ್ಥರಾಗುತ್ತಾ ತಪ್ಪು ದಾರಿ ಹಿಡಿಯುತ್ತಾರೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪಾ ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆಯ ಆವರಣದಲ್ಲಿ ನಡೆದ ಬಾಲ ಕಾಮರ್ಿಕ ನಿಷೇಧ ದಿನಾಚರಣೆಯ ಅರಿವು ಶಿಬಿರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಖರ್ಾನೆ ಹೋಟೆಲ್ಗಳಲ್ಲಿ ಮಕ್ಕಳು ದುಡಿಯುತ್ತಿರುವ ವಿಷಯ ಹೆಚ್ಚಾಗಿ ಶಾಲಾ ಮಕ್ಕಳಿಗೆ ತಿಳಿದಿರುತ್ತದೆ ಆ ವಿಷಯವನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿಸಬೇಕು ಎಂದರಲ್ಲದೆ, ಬಾಲ ಕಾಮರ್ಿಕರಾಗಿ ದುಡಿಯುತ್ತಿರುವ ಮಕ್ಕಳಿಗೆ ವಿದ್ಯಾಯಭ್ಯಾಸದ ಬಗ್ಗೆ ಹುರಿದುಂಬಿಸಿ ಅವರೂ ಸಹ ಶಿಕ್ಷಣ ಪಡೆಯಲು ಸಹಕರಿಸಬೇಕು ಎಂದರು.
ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಮಾತನಾಡಿ ಶಿಕ್ಷಣ ಇಲಾಖೆಗೆ ಸದಾ ಕಾನೂನು ಸೇವಾ ಸಮಿತಿ ಸ್ಪಂದಿಸುತ್ತ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಮಕ್ಕಳಿಗೆ ಕಾನೂನಿನ ಬಗ್ಗೆ ಜಾಗೃತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಪೋಷಕರು ಮಕ್ಕಳ ಆಶೋತ್ತರಗಳಿಗೆ ಸ್ಪಂದಿಸಿ 18ವರ್ಷದ ವರೆವಿಗೂ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿ ದೇಶದ ಒಳಿತಿನ ಭದ್ರ ಬುನಾದಿಗೆ ಮುಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಬಾಲ ಕಾಮರ್ಿಕರ ಮನೆಯ ಆಥರ್ಿಕ ಪರಿಸ್ಥಿತಿಯನ್ನು ಕಾಖರ್ಾನೆಯ ಮಾಲೀಕರು ಗಮನಿಸಿ ಅಂತವರ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಇಂತಹ ಮಾಲೀಕರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದ ಅವರು, ತೊಂದರೆ ಎದುರಿಸುತ್ತಿರುವ ಮಕ್ಕಳಿಗೆ ವಿದ್ಯಾಬ್ಯಾಸದ ಸಹಾಯ ನೀಡುವ ಮೂಲಕ ಬಾಲ ಕಾಮರ್ಿಕ ಪದ್ದತಿಯನ್ನು ತೊಡೆದು ಹಾಕಬೇಕು ಎಂದರು.
ವಕೀಲ ಎನ್.ಎನ್.ಶ್ರೀಧರ್ ಮಾತನಾಡಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಮಕ್ಕಳ ಮತ್ತು ದೇಶದ ಭವಿಷ್ಯ ಹಾಳಾಗುತ್ತದೆ, ಕಡಿಮೆ ಸಂಭಾವನೆಯನ್ನು ನೀಡಬಹುದು ಮತ್ತು ಹೆಚ್ಚು ಕೆಲಸವನ್ನು ಬಾಲ ಕಾಮರ್ಿಕರಿಂದ ತೆಗೆದುಕೊಳ್ಳ ಬಹುದೆಂಬ ಕಾರಣದಿಂದ ಮಕ್ಕಳನ್ನು ಮಾಲೀಕರು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಈ ಹವ್ಯಾಸ ನಿಲ್ಲಬೇಕು ಅವರನ್ನು ಶಾಲೆಗೆ ಕರೆತರಬೇಕೆಂದು ಹೇಳಿದರು.
ಸಮಾರಂಭದಲ್ಲಿ ವಕೀಲರ ಸಂಘದ ಕಾರ್ಯದಶರ್ಿ ಹೆಚ್.ಎಸ್.ಜ್ಞಾನಮೂತರ್ಿ, ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಮಯ್ಯ, ಎ.ಸಿ.ಡಿ.ಪಿ.ಓ ಪರ್ವತಯ್ಯ ವಕೀಲರಾದ ಎಂ.ಮಹಾಲಿಂಗಯ್ಯ, ಲೋಕೇಶ್, ನಾಗರಾಜು, ಕೆ.ಸಿ.ವಿಶ್ವನಾಥ್, ದಿಲೀಪ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಟಿ.ಗಾಯಿತ್ರಿ ಸ್ವಾಗತಿಸಿದರೆ ಎಂ.ಸತೀಶ್ ನಿರೂಪಿಸಿ ವಂದಿಸಿದರು.