ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಠಾನ ತೃಪ್ತಿದಾಯಕವಾಗಿಲ್ಲಚಿಕ್ಕನಾಯಕನಹಳ್ಳಿ,ಸೆ.09 : ಸಕರ್ಾರ ಜಾರಿಗೆ ತಂದಿರುವ ಶಾಲೆಗೊಂದು ವನ ಕಾರ್ಯಕ್ರಮ ಯಶಸ್ವಿಯಾಗದ ಬಗ್ಗೆ ಆಕ್ಷೇಪಿಸಿದ ಅವರು ಶಾಲೆಗಳಲ್ಲಿ ಸಣ್ಣದೊಂದು ಉದ್ಯಾನವನದಂತೆ ಸಸಿಗಳನ್ನು ನೆಟ್ಟು ಯಶಸ್ವಿಗೊಳಿಸಲು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪಶು ಇಲಾಖೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪ್ರತಿಬಾರಿ ಆಕ್ಷೇಪಣೆಗಳು ಕೇಳಿಬರುತ್ತಿದ್ದು ಇದರ ಬಗ್ಗೆ ಗಮನ ಹರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಕರ್ಾರಿ ಕಾರ್ಯಕ್ರಮಗಳು, ಉದ್ಘಾಟನೆಗೊಳ್ಳುವ ಹಲವು ಸಮಾರಂಭಗಳನ್ನು ಏರ್ಪಡಿಸುವ ಮುನ್ನ ತಹಶೀಲ್ದಾರ್, ತಾ.ಪಂ.ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಂಭಂದಪಟ್ಟ ಜನಪ್ರತಿನಿಧಿಗಳಿಗೆ ಖಡ್ಡಾಯವಾಗಿ ತಿಳಿಸಿ ಆನಂತರ ಕಾರ್ಯಕ್ರಮ ಏರ್ಪಡಿಸಬೇಕೆಂದು ತಾಲ್ಲೂಕು ಇಲಾಖಾಧಿಕಾರಿಗಳಿಗೆ ಇ.ಓ.ಎನ್.ಎಂ.ದಯಾನಂದ್ ಸೂಚಿಸಿದರು.ತಾಲ್ಲೂಕಿನ ಇಲಾಖಾಧಿಕಾರಿಗಳು ತಮಗೆ ಬೇಕಾದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳಿಗೆ, ತಮ್ಮ ಮೇಲಾಧಿಕಾರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿಸದೆ ಇಲಾಖಾ ಸಮಾರಂಭಗಳನ್ನು ಏರ್ಪಡಿಸಿ ಸಮಾರಂಭ ಕೆಲವು ದಿನಗಳಿವೆ ಎಂದಾಗ ತಿಳಿಸಲು ಬರುತ್ತಾರೆ ಎಂದು ಆರೋಪಿಸಿದ ಅವರು, ಈ ರೀತಿಯ ಕಾರ್ಯಗಳು ನಡೆಯಬೇಕಾದರೆ ಮುಂಚಿತವಾಗಿ ತಹಶೀಲ್ದಾರ್ರವರಿಂದ ಮೊದಲು ಅನುಮತಿ ಪಡೆದು ನಂತರ ಶಾಸಕರಿಂದ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿ, ಸಮಾರಂಭ ನಡೆಯುವ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಆನಂತರ ಸಮಾರಂಭವನ್ನು ಏರ್ಪಡಿಸಿ ಶಿಷ್ಠಾಚಾರ ಪಾಲಿಸಬೇಕು ಎಂದು ತಿಳಿಸಿದರು.ತೋಟಗಾರಿಕೆಯ ವ್ಯಾಪ್ತಿಯಲ್ಲಿ ಕೆಂಪುಮೂತಿ ಹುಳುವಿನಿಂದ ತೆಂಗಿನ ಬೆಳೆಗೆ ಹಾನಿಯುಂಟಾಗುತ್ತಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹಳ್ಳಿಕೆರೆಪುರ, ಸೊಂಡೇನಹಳ್ಳಿ ಗ್ರಾಮಗಳಲ್ಲಿ 25ಎಕರೆಯಷ್ಟು ಬೆಳೆಯು ಹುಳುವಿನಿಂದ ನಾಶವಾಗಿದ್ದು ಇದರ ಬಗ್ಗೆ ಜನಜಾಗೃತಿಯನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಕೆಂಪುಮೂತಿ ಹುಳುವಿನಿಂದ ಬೆಳೆಯಲ್ಲಿ ಏರುಪೇರು ಉಂಟಾದರೆ ಹೋಬಳಿ ಮಟ್ಟದಲ್ಲಿ ಸಹಾಯಕ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೆ ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತೋಟಗಾರಿಕಾ ಇಲಾಖಾಧಿಕಾರಿ ತಿಳಿಸಿದರು.ಸಮಾರಂಭದಲ್ಲಿ ತಾ.ಪಂ.ಅದ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್ ಹಾಗೂ ತಾಲ್ಲೂಕು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಸುದ್ದಿ ವಾಹಕ ............................................................................................................................... ......................................................... feed back: chiguru_2020@rediffmail.com
Friday, September 9, 2011
Thursday, September 8, 2011


ಸೆ.17 ರಂದು ಚಿ.ನಾ.ಹಳ್ಳಿ ನಾಲ್ಕನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಸೆ.08 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಇದೇ 17ರ ಶನಿವಾರ ಬೆಳಗ್ಗೆ 08.15 ಆರಂಭಗೊಳಲಿದೆ, ಸಮ್ಮೇಳನಾಧ್ಯಕರಾದ ಪ್ರೊ.ನಾ.ದಯಾನಂದರವರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವೈವಿಧ್ಯಮ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.15ಕ್ಕೆ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅರಳೇಪೇಟೆ, ನೆಹರು ಸರ್ಕಲ್, ತಾತಯ್ಯನ ಗೋರಿ ಮಾರ್ಗವಾಗಿ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಅವರನ್ನು ಮೆರವಣಿಗೆಯಲ್ಲಿ ಬಯಲು ರಂಗಮಂದಿರಕ್ಕೆ ಕರೆತರಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಬಸವರಾಜಪ್ಪ ನೆರವೇರಿಸುವರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪುರಸಭಾ ಸದಸ್ಯರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಹಾಜರಿರುವರು. . ಬೆಳಗ್ಗೆ 10.45ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಕವಿ ಡಾ.ಸಾ.ಶಿ.ಮರುಳಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ತಾಲ್ಲೂಕಿನ 3ನೇ ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಂ.ವಿ.ನಾಗರಾಜ್ರಾವ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವರು.ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪ-ಸಿ.ಡಿ ಬಿಡುಗಡೆ ಮಾಡಲಿದ್ದು ಹಿರಿಯ ಸಾಹಿತಿ ಡಾ.ಅಬ್ದುಲ್ ಹಮೀದ್ ಪುಸ್ತಕ ಮಳಿಗೆಗಳ ಉದ್ಗಾಟನೆ ನೆರವೇರಿಸಲಿದ್ದು ಕವಿ ಹಾಗೂ ಲೇಖಕ ಪ್ರೊ.ನಾ.ದಯಾನಂದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರತ್ನರಾವ್, ಜಯಮ್ಮ, ಭಾರತಿ ನಟರಾಜ್, ಸರಸ್ವತಮ್ಮ, ಪದ್ಮವರದರಾಜು, ಸುಲೋಚನಮ್ಮ, ಜಯಮ್ಮ ವೇದಮೂತರ್ಿ, ನಾಗರಾಜು, ಲಕ್ಕಮ್ಮ, ಬೆನಕನಕಟ್ಟೆ ಬಿ.ಪಿ.ಚನ್ನಪ್ಪ, ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಜೋಡಿಕಲ್ಲೇನಹಳ್ಳಿಶಿವಪ್ಪ, ಅನ್ಸರ್ಪಾಷ, ಕೆ.ಎನ್.ಶಂಕರಲಿಂಗಯ್ಯ, ಬಿ.ಎಲ್.ಪಂಕಜ ಚಂದ್ರಶೇಖರ್, ರಂಗಪ್ಪ ಇವರುಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಗ್ರಾಮೀಣ ವಿಭಾಗದ ಅಧ್ಯಕ್ಷ ಜಿ.ಇಂದ್ರಕುಮಾರ್ ಹಾಗೂ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್.ಬಸವರಾಜ್ರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು, ಎಂ.ವಿ.ನಾಗರಾಜರಾವ್ರವರ ಸಾವಿರಾರು ನುಡಿಮುತ್ತುಗಳು, ಸೂಕ್ತಿಕೋಶ, ಪ್ರೊ. ನಾ.ದಯಾನಂದರವರ ಜಂಗಮ ಮಂಡೆವಿಶೇಷ ಆಹ್ವಾನಿತರಾಗಿ ತಾ.ಪಂ.ಇಓ ಎನ್.ಎಂ.ದಯಾನಂದ್, ಟಿ.ಸಿ.ಕಾಂತರಾಜು, ಬಿಇಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ಬೆಂಗಳೂರಿನ ಹೇಮಂತ ಸಾಹಿತ್ಯದ ವೆಂಕಟೇಶ್, ಕೈಗಾರಿಕೋದ್ಯಮಿ ಎನ್.ಎಂ.ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಪಾಲ್ಗೊಳ್ಳುವರು.
ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರವನ್ನಾಗಿಸಿಕೊಂಡಿದ್ದವರು, ಈಗ ಎ.ಟಿ.ಎಂ.ನ್ನಾಗಿಸಿಕೊಂಡಿದ್ದಾರೆ.ಚಿಕ್ಕನಾಯಕನಹಳ್ಳಿ,ಸೆ.8 : ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸಿಕೊಂಡಿದ್ದ ಕೆಲವು ಗಂಡಸರು, ಈಗ ಸ್ತ್ರೀಶಕ್ತಿ ಸಂಘದಿಂದ ಹಣವನ್ನು ತಂದುಕೊಡುವ ಎ.ಟಿ.ಎಂ.ಗಳನ್ನಾಗಿಸಿಕೊಂಡಿರುವ ಬಗ್ಗೆ ಮಹಿಳೆಯರು ಜಾಗೃತಿವಹಿಸಬೇಕೆಂದು ಪುರಸಭಾ ಸದಸ್ಯೆ ಸಿ.ಎಂ.ರೇಣುಕಮ್ಮ ಹೇಳಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸ್ಥಳೀಯ ಗ್ರಾಮಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊಟಮ್ಮನವರು ಅಂದು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಕೆಲವು ಜನ ಗಂಡಸರು ಸಂಘದಿಂದ ತರುವ ಹಣವನ್ನು ಉಪಯೋಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ, ಇನ್ನೂ ಕೆಲವು ದಂಪತಿಗಳು ಕಷ್ಟದ ದುಡಿಮೆಯಿಂದ ಹಾಗೂ ಬುದ್ದಿವಂತಿಕೆಯಿಂದ ಬದುಕು ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಇಂದಿನ ಯುಗಕ್ಕೆ ತಕ್ಕಂತೆ ಬದುಕುತ್ತಿರುವದನ್ನು ಸಹಿಸದ ಕೆಲವು ಕುಹಿಕಿಗಳು ಟೀ ಅಂಗಡಿ ಮುಂದೆ ಕುಳಿತು ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಹೋಗುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿಕೊಂಡು ಅವಹೇಳನ ಮಾಡುವುದು ತರವಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ಪುರುಷರು ಮತ್ತು ಮಹಿಳೆಯರು ಪ್ರತಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ನೆರವಾದರೆ ಸಮಾಜ ಮುಂದೆ ಬರುತ್ತದೆ, ಒಬ್ಬ ಪುರುಷನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷನು ಇರುತ್ತಾರೆ ಎಂದು ಹೇಳಿದರು. ಗಂಡು ಹೆಣ್ಣು ಸಮಾನವಾಗಿ ಯೋಚಿಸುವ ಕುಟುಂಬಗಳು ಸುಖವಾಗಿವೆ, ಅಂತಹ ಕುಟುಂಬದ ಮಕ್ಕಳು ಒಳ್ಳೆಯ ಬದುಕನ್ನು ರೂಢಿಸಿಕೊಳ್ಳುತ್ತಾರೆ. ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳು ಅಲ್ಲ ಸಮರಸವೇ ಜೀವನವೆಂಬುದನ್ನು ಅರಿತು ಬಾಳಬೇಕೆಂದರು. ಜ್ಞಾನನಿಧಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಜಿ ರಾಜ್ ಮಾತನಾಡಿ ಮಹಿಳೆಯರು ಸಂಘಗಳಿಗೆ ಸೇರಿ ಉಳಿತಾಯದ ಮನೋಭಾವನೆಯನ್ನು ಅರಿತುಕೊಂಡವರ ಜೀವನ ಸುಧಾರಿಸುತ್ತಿದ್ದಾರೆ ಎಂದರು. ಮಹಿಳೆಯರು ಒಗ್ಗಟ್ಟಾಗಿ ತಮ್ಮ ಸಂಘದ ಬಗ್ಗೆ ಇರುವ ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕೆಂದರಲ್ಲದೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಾಟೆ ಮಾಡಿಕೊಳ್ಳಬೇಡಿ, ತಮ್ಮ ಸಂಘದಿಂದ ಸಾಲವನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಆಥರ್ಿಕವಾಗಿ ಸದೃಡವಾಗಿ ಎಂದು ಹೇಳಿದ ಅವರು, ಹಿಂದೆ ಗಂಡಸರು ದುಡಿಮೆ ಮಾಡಿಕೊಂಡು ಬಂದರೆ ಜೀವನ ನಡೆಯುತ್ತಿತ್ತು ಇಲ್ಲವಾದರೆ ತುತ್ತು ಅನ್ನಕ್ಕೂ ಬಡತನವಿತ್ತು ಆದರೆ ಈಗ ಮಹಿಳೆಯರು ಸಂಸಾರದ ಜವಾಬ್ದಾರಿ ಹೊತ್ತು ವ್ಯವಹಾರದೊಂದಿಗೆ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದಾರೆ ಎಂದರು. ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನಾಧಿಕಾರಿ ಲೋಹಿತಾಶ್ವ ಮಾತನಾಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇದ್ದರೆ ನಮ್ಮ ಸ್ವಯಂಸೇವಕರು ಪ್ರತಿ ಸಂಘದಲ್ಲೂ ಇರುತ್ತಾರೆ ಅವರ ಬಳಿ ಮಾಹಿತಿ ಪಡೆದು ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದ ಅವರು ಸ್ವಸಹಾಯ ಸಂಘಗಳು ಒಂದುಗೂಡಿ ಯೋಜನೆಯ ಬಗ್ಗೆ ಇತರರಿಗೆ ತಿಳಿಸುತ್ತಾ ತಾವು ಅಭಿವೃದ್ದಿ ಹೊಂದಲು ಕರೆ ನೀಡಿದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರುಕ್ಮಿಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ರವಿಕುಮಾರ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾಳಿಗೆಮನೆಯಿಂದ ಮಾನಸಗಂಗೋತ್ರಿಯವರಿಗೆ ಏರಿಬಂದವರು ಡಾ.ರಾಧಾಕೃಷ್ಣನ್ಚಿಕ್ಕನಾಯಕನಹಳ್ಳಿ,ಸೆ.08 : ನಮ್ಮ ದೇಶ ಗುರುಪರಂಪರೆಯಿಂದ ಕೂಡಿದ್ದು ಆ ಪರಂಪರೆಯ ಶಿಕ್ಷಣವೆಂಬ ಸೌರವ್ಯೂಹದಲ್ಲಿ ತಿರುಗುವ ಮಿನುಗುತಾರೆ ಶಿಕ್ಷಕ, ಅವನು ವ್ಯಕ್ತಿಯ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಕಾರ್ಯ ಮುಂದುವರಿಸುತ್ತಾನೆ ಎಂದು ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ರಾಜಕುಮಾರ್ ಹೇಳಿದರು.ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಡಾಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಷಯ ಜ್ಞಾನವನ್ನು ಪಡೆದವನು ಶಿಕ್ಷಕ, ಮಾಳಿಗೆಯ ಮನೆಯಿಂದ ಮಾನಸಗಂಗೋತ್ರಿಯವರೆಗೆ ಏರಿ ಬಂದವರು ರಾಧಾಕೃಷ್ಣನ್, ಯುವ ಶಕ್ತಿಯನ್ನು ಒಗ್ಗೂಡಿಸಿ ರಾಷ್ಟ್ರ ಕಟ್ಟಿದವರಾಗಿ, ಶಿಕ್ಷಕರಾಗಿ ಉಪಕುಲಪತಿಯಾಗಿ ದೇಶದ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ, ದೇಶವಿದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಪಸರಿಸಿದ ದಷ್ಟಾರಾಗಿ ಎತ್ತರಕ್ಕೆ ಏರಿದವರು ಡಾ ಎಸ್.ರಾಧಾಕೃಷ್ಣನ್. ವಿದ್ಯಾಥರ್ಿಗಳು ಸಮುದಾಯದ ಎಲ್ಲರೊಂದಿಗೆ ಬೆರೆಯುವಂತಾಗಬೇಕು ಮಾನವ ಜನಾಂಗವನ್ನು ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕೆ.ಸಿ. ಬಸಪ್ಪನವರು ಮಾತನಾಡಿ ಜಗತ್ತಿಗೆ ಕನಸುಗಳನ್ನು ಮಾರಾಟ ಮಾಡುವವನೆ ಶಿಕ್ಷಕ, ಶಿಕ್ಷಕ ಕಲಾಕೃತಿಯಾಗಿ ಉಳಿಯಬೇಕು, ನಿಷ್ಠೆ ಸ್ವಯಂಸಿದ್ದತೆ ತಾನು ತಿಳಿದದ್ದನ್ನೆಲ್ಲಾ ವಿದ್ಯಾಥರ್ಿಗಳಿಗೆ ತಿಳಿಸುವನಾಗಬೇಕು. ಅನ್ವಯತೆಯನ್ನು ಚಲನಶೀಲವನ್ನಾಗಿಸಿಕೊಳವುದೇ ಶಿಕ್ಷಕ ಸಮುದಾಯ ಎಂದು ನುಡಿದ ಅವರು ಜಗತ್ತಿನ ಯಾವ ಶಕ್ತಿಯು ಶಿಕ್ಷಕ ಶಕ್ತಿಗೆ ಸಮನಾಗಲಾರದು. ಶಿಕ್ಷಕ ಏನು? ಎಲ್ಲಿದೆ? ಎಂಬ ಪ್ರಶ್ನೆಗಳ ಮೂಲಕ ಒಬ್ಬ ವ್ಯಕ್ತಿಯನ್ನು ಬೆಳಸುವವನು. ಶಿಕ್ಷಕ ಅನುಮಾನಗಳನ್ನು ಪರಿಹರಿಸುವವನಾಗಬೇಕು ಶಿಕ್ಷಕ ಹಣದ ದಾಹವನ್ನು ಬಿಟ್ಟು ಜ್ಞಾನ ನೀಡುವವನಾಗುವ ಜೊತೆಗೆ ನಿರಂತರವಾದ ಅಧ್ಯಯನಶೀಲನಾಗಿ ವಿಷಯಗಳನ್ನು ಅನ್ವಯಶೀಲಗೊಳಿಸಬೇಕು. ವಿದ್ಯಾಥರ್ಿಗಳು ನಿರಂತರವಾಗಿ ಜ್ಞಾನದಾಹಿಗಳಾಗಬೇಕು ಆಗ ಮಾತ್ರ ಈ ಆಚರಣೆ ಅರ್ಥ ಪೂರ್ಣ ಎಂದರು. ಉಪನ್ಯಾಸಕ ಪ್ರೊ.ಆರ್.ಎಂ. ಶೇಖರಯ್ಯ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿ ಡಾಎಸ್. ರಾಧಾಕೃಷ್ಣನ್ ಅವರ ಆದರ್ಶಗಳು ಬದುಕಿಗೆ ಇಂಬು ನೀಡಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಪ್ರೊ. ಬಿ.ಎಸ್. ಬಸವಲಿಂಗಯ್ಯ ಉಪಸ್ಥಿತರಿದ್ದರು.
ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರವನ್ನಾಗಿಸಿಕೊಂಡಿದ್ದವರು, ಈಗ ಎ.ಟಿ.ಎಂ.ನ್ನಾಗಿಸಿಕೊಂಡಿದ್ದಾರೆ.ಚಿಕ್ಕನಾಯಕನಹಳ್ಳಿ,ಸೆ.8 : ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸಿಕೊಂಡಿದ್ದ ಕೆಲವು ಗಂಡಸರು, ಈಗ ಸ್ತ್ರೀಶಕ್ತಿ ಸಂಘದಿಂದ ಹಣವನ್ನು ತಂದುಕೊಡುವ ಎ.ಟಿ.ಎಂ.ಗಳನ್ನಾಗಿಸಿಕೊಂಡಿರುವ ಬಗ್ಗೆ ಮಹಿಳೆಯರು ಜಾಗೃತಿವಹಿಸಬೇಕೆಂದು ಪುರಸಭಾ ಸದಸ್ಯೆ ಸಿ.ಎಂ.ರೇಣುಕಮ್ಮ ಹೇಳಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸ್ಥಳೀಯ ಗ್ರಾಮಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊಟಮ್ಮನವರು ಅಂದು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಕೆಲವು ಜನ ಗಂಡಸರು ಸಂಘದಿಂದ ತರುವ ಹಣವನ್ನು ಉಪಯೋಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ, ಇನ್ನೂ ಕೆಲವು ದಂಪತಿಗಳು ಕಷ್ಟದ ದುಡಿಮೆಯಿಂದ ಹಾಗೂ ಬುದ್ದಿವಂತಿಕೆಯಿಂದ ಬದುಕು ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಇಂದಿನ ಯುಗಕ್ಕೆ ತಕ್ಕಂತೆ ಬದುಕುತ್ತಿರುವದನ್ನು ಸಹಿಸದ ಕೆಲವು ಕುಹಿಕಿಗಳು ಟೀ ಅಂಗಡಿ ಮುಂದೆ ಕುಳಿತು ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಹೋಗುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿಕೊಂಡು ಅವಹೇಳನ ಮಾಡುವುದು ತರವಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ಪುರುಷರು ಮತ್ತು ಮಹಿಳೆಯರು ಪ್ರತಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ನೆರವಾದರೆ ಸಮಾಜ ಮುಂದೆ ಬರುತ್ತದೆ, ಒಬ್ಬ ಪುರುಷನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷನು ಇರುತ್ತಾರೆ ಎಂದು ಹೇಳಿದರು. ಗಂಡು ಹೆಣ್ಣು ಸಮಾನವಾಗಿ ಯೋಚಿಸುವ ಕುಟುಂಬಗಳು ಸುಖವಾಗಿವೆ, ಅಂತಹ ಕುಟುಂಬದ ಮಕ್ಕಳು ಒಳ್ಳೆಯ ಬದುಕನ್ನು ರೂಢಿಸಿಕೊಳ್ಳುತ್ತಾರೆ. ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳು ಅಲ್ಲ ಸಮರಸವೇ ಜೀವನವೆಂಬುದನ್ನು ಅರಿತು ಬಾಳಬೇಕೆಂದರು. ಜ್ಞಾನನಿಧಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಜಿ ರಾಜ್ ಮಾತನಾಡಿ ಮಹಿಳೆಯರು ಸಂಘಗಳಿಗೆ ಸೇರಿ ಉಳಿತಾಯದ ಮನೋಭಾವನೆಯನ್ನು ಅರಿತುಕೊಂಡವರ ಜೀವನ ಸುಧಾರಿಸುತ್ತಿದ್ದಾರೆ ಎಂದರು. ಮಹಿಳೆಯರು ಒಗ್ಗಟ್ಟಾಗಿ ತಮ್ಮ ಸಂಘದ ಬಗ್ಗೆ ಇರುವ ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕೆಂದರಲ್ಲದೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಾಟೆ ಮಾಡಿಕೊಳ್ಳಬೇಡಿ, ತಮ್ಮ ಸಂಘದಿಂದ ಸಾಲವನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಆಥರ್ಿಕವಾಗಿ ಸದೃಡವಾಗಿ ಎಂದು ಹೇಳಿದ ಅವರು, ಹಿಂದೆ ಗಂಡಸರು ದುಡಿಮೆ ಮಾಡಿಕೊಂಡು ಬಂದರೆ ಜೀವನ ನಡೆಯುತ್ತಿತ್ತು ಇಲ್ಲವಾದರೆ ತುತ್ತು ಅನ್ನಕ್ಕೂ ಬಡತನವಿತ್ತು ಆದರೆ ಈಗ ಮಹಿಳೆಯರು ಸಂಸಾರದ ಜವಾಬ್ದಾರಿ ಹೊತ್ತು ವ್ಯವಹಾರದೊಂದಿಗೆ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದಾರೆ ಎಂದರು. ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನಾಧಿಕಾರಿ ಲೋಹಿತಾಶ್ವ ಮಾತನಾಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇದ್ದರೆ ನಮ್ಮ ಸ್ವಯಂಸೇವಕರು ಪ್ರತಿ ಸಂಘದಲ್ಲೂ ಇರುತ್ತಾರೆ ಅವರ ಬಳಿ ಮಾಹಿತಿ ಪಡೆದು ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದ ಅವರು ಸ್ವಸಹಾಯ ಸಂಘಗಳು ಒಂದುಗೂಡಿ ಯೋಜನೆಯ ಬಗ್ಗೆ ಇತರರಿಗೆ ತಿಳಿಸುತ್ತಾ ತಾವು ಅಭಿವೃದ್ದಿ ಹೊಂದಲು ಕರೆ ನೀಡಿದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರುಕ್ಮಿಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ರವಿಕುಮಾರ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾಳಿಗೆಮನೆಯಿಂದ ಮಾನಸಗಂಗೋತ್ರಿಯವರಿಗೆ ಏರಿಬಂದವರು ಡಾ.ರಾಧಾಕೃಷ್ಣನ್ಚಿಕ್ಕನಾಯಕನಹಳ್ಳಿ,ಸೆ.08 : ನಮ್ಮ ದೇಶ ಗುರುಪರಂಪರೆಯಿಂದ ಕೂಡಿದ್ದು ಆ ಪರಂಪರೆಯ ಶಿಕ್ಷಣವೆಂಬ ಸೌರವ್ಯೂಹದಲ್ಲಿ ತಿರುಗುವ ಮಿನುಗುತಾರೆ ಶಿಕ್ಷಕ, ಅವನು ವ್ಯಕ್ತಿಯ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಕಾರ್ಯ ಮುಂದುವರಿಸುತ್ತಾನೆ ಎಂದು ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ರಾಜಕುಮಾರ್ ಹೇಳಿದರು.ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಡಾಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಷಯ ಜ್ಞಾನವನ್ನು ಪಡೆದವನು ಶಿಕ್ಷಕ, ಮಾಳಿಗೆಯ ಮನೆಯಿಂದ ಮಾನಸಗಂಗೋತ್ರಿಯವರೆಗೆ ಏರಿ ಬಂದವರು ರಾಧಾಕೃಷ್ಣನ್, ಯುವ ಶಕ್ತಿಯನ್ನು ಒಗ್ಗೂಡಿಸಿ ರಾಷ್ಟ್ರ ಕಟ್ಟಿದವರಾಗಿ, ಶಿಕ್ಷಕರಾಗಿ ಉಪಕುಲಪತಿಯಾಗಿ ದೇಶದ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ, ದೇಶವಿದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಪಸರಿಸಿದ ದಷ್ಟಾರಾಗಿ ಎತ್ತರಕ್ಕೆ ಏರಿದವರು ಡಾ ಎಸ್.ರಾಧಾಕೃಷ್ಣನ್. ವಿದ್ಯಾಥರ್ಿಗಳು ಸಮುದಾಯದ ಎಲ್ಲರೊಂದಿಗೆ ಬೆರೆಯುವಂತಾಗಬೇಕು ಮಾನವ ಜನಾಂಗವನ್ನು ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕೆ.ಸಿ. ಬಸಪ್ಪನವರು ಮಾತನಾಡಿ ಜಗತ್ತಿಗೆ ಕನಸುಗಳನ್ನು ಮಾರಾಟ ಮಾಡುವವನೆ ಶಿಕ್ಷಕ, ಶಿಕ್ಷಕ ಕಲಾಕೃತಿಯಾಗಿ ಉಳಿಯಬೇಕು, ನಿಷ್ಠೆ ಸ್ವಯಂಸಿದ್ದತೆ ತಾನು ತಿಳಿದದ್ದನ್ನೆಲ್ಲಾ ವಿದ್ಯಾಥರ್ಿಗಳಿಗೆ ತಿಳಿಸುವನಾಗಬೇಕು. ಅನ್ವಯತೆಯನ್ನು ಚಲನಶೀಲವನ್ನಾಗಿಸಿಕೊಳವುದೇ ಶಿಕ್ಷಕ ಸಮುದಾಯ ಎಂದು ನುಡಿದ ಅವರು ಜಗತ್ತಿನ ಯಾವ ಶಕ್ತಿಯು ಶಿಕ್ಷಕ ಶಕ್ತಿಗೆ ಸಮನಾಗಲಾರದು. ಶಿಕ್ಷಕ ಏನು? ಎಲ್ಲಿದೆ? ಎಂಬ ಪ್ರಶ್ನೆಗಳ ಮೂಲಕ ಒಬ್ಬ ವ್ಯಕ್ತಿಯನ್ನು ಬೆಳಸುವವನು. ಶಿಕ್ಷಕ ಅನುಮಾನಗಳನ್ನು ಪರಿಹರಿಸುವವನಾಗಬೇಕು ಶಿಕ್ಷಕ ಹಣದ ದಾಹವನ್ನು ಬಿಟ್ಟು ಜ್ಞಾನ ನೀಡುವವನಾಗುವ ಜೊತೆಗೆ ನಿರಂತರವಾದ ಅಧ್ಯಯನಶೀಲನಾಗಿ ವಿಷಯಗಳನ್ನು ಅನ್ವಯಶೀಲಗೊಳಿಸಬೇಕು. ವಿದ್ಯಾಥರ್ಿಗಳು ನಿರಂತರವಾಗಿ ಜ್ಞಾನದಾಹಿಗಳಾಗಬೇಕು ಆಗ ಮಾತ್ರ ಈ ಆಚರಣೆ ಅರ್ಥ ಪೂರ್ಣ ಎಂದರು. ಉಪನ್ಯಾಸಕ ಪ್ರೊ.ಆರ್.ಎಂ. ಶೇಖರಯ್ಯ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿ ಡಾಎಸ್. ರಾಧಾಕೃಷ್ಣನ್ ಅವರ ಆದರ್ಶಗಳು ಬದುಕಿಗೆ ಇಂಬು ನೀಡಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಪ್ರೊ. ಬಿ.ಎಸ್. ಬಸವಲಿಂಗಯ್ಯ ಉಪಸ್ಥಿತರಿದ್ದರು.
Monday, September 5, 2011


ಮೌಢ್ಯತೆಯಿಂದ ದೂರವಾಗಿ, ಶಿಕ್ಷಣ ಪಡೆಯುವುದರೊಂದಿಗೆ ಮುಖ್ಯವಾಹಿನಿಗೆ ಬನ್ನಿ
ಚಿಕ್ಕನಾಯಕನಹಳ್ಳಿ,ಸೆ.05 : ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಮೂಲಕ ಭವಿಷ್ಯದ ಯಾದವ ಸಮಾಜವನ್ನು ಕಟ್ಟಲು ಮುಂದಾಗಿರಿ ಎಂದು ಚಿತ್ರದುರ್ಗ ಕೃಷ್ಣ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣಯಾದವಾನಂದಸ್ವಾಮಿ ಹೇಳಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಯಾದವ ವಿದ್ಯಾಥರ್ಿ ನಿಲಯದ ಶಂಕುಸ್ಥಾಪನೆ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಮೌಢ್ಯತೆ ಆವರಿಸಿಕೊಂಡಿರುವ ಈ ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ಜೊತೆಗೆ ಶಿಕ್ಷಣದಿಂದ ಅಭಿವೃದ್ದಿ ಹೊಂದಿರುವ ಯುವಕ ಪಡೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜವನ್ನು ಕಟ್ಟಲು ಅಣಿಯಾಗುವುದಾಗಿ ತಿಳಿಸಿದ ಅವರು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗುವ ಮೂಲಕ ಸಂಘ ಶಕ್ತಿಯನ್ನು ಪ್ರದಶರ್ಿಸುವ ಕಾಲ ಬಂದೊದಗಿದೆ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಲು ಶ್ತಮಿಸುತ್ತೇನೆ ಎಂದರು. ಹಾಸ್ಟಲ್ ಕಟ್ಟಲು ಶಾಸಕರಾದ ಸಿ.ಬಿ.ಸುರೇಶ್ ಬಾಬು ಮೂರು ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದ್ದು ಅವರ ಸಕರ್ಾರಿ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕೋರಲಾಗುವುದು ಎಂದರು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎರಡು ಲಕ್ಷ ರೂಗಳನ್ನು ಕೊಡುವುದಾಗಿ ವಾಗ್ದಾನವನ್ನು ನೀಡಿದ್ದಾರೆ ಇಲ್ಲಿನ ಸಮಾಜದ ಮುಖಂಡರು ಘೋಷಿಸಿರುವ ಹಣವನ್ನು ಸಂಗ್ರಹಿಸುವ ಜೊತೆಗೆ ಅದನ್ನು ಯೋಗ್ಯ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಹೋಗಬೇಕು ಎಂದರಲ್ಲದೆ ಪಾದಯಾತ್ರೆ ಮೂಲಕ ಇನ್ನಷ್ಟು ಹಣ ಸಂಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ಎ.ಕೃಷ್ಣಪ್ಪ ಮಾತನಾಡಿ ಪ್ರತಿಯೊಂದು ಸಮಾಜ ಬೆಳೆಯಲು ಶಿಕ್ಷಣ ಅತ್ಯಗತ್ಯವಾಗಿದ್ದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ, ನಮ್ಮ ಜನಾಂಗದವರಿಗೆ ಶಿಕ್ಷಣಕ್ಕಾಗಿ ಕೇವಲ ಭಾರತದಾದ್ಯಂತ 16ರಷ್ಟು ಹಾಸ್ಟಲ್ಗಳಿವೆ ಎಂದರಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ ಒಂದು ಲಕ್ಷರೂ ತಾಲ್ಲೂಕು ಮಟ್ಟದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ 50ಸಾವಿರ ರೂ ನೀಡಲಿದ್ದು ಈಗ ರೂಪುಗೊಳ್ಳುತ್ತಿರುವ ಹಾಸ್ಟಲ್ಗೆ ತಾನು ಒಂದು ಲಕ್ಷ ಹಣ ನೀಡುವುದಾಗಿ ಆ ಹಣವನ್ನು ಹಾಸ್ಟಲ್ ಕಾಮಗಾರಿಯ ಅಭಿವೃದ್ದಿ ನೋಡಿ ನೀಡುತ್ತೇನೆ ಎಂದರು. ಕನರ್ಾಟಕ ರಾಜ್ಯದಲ್ಲಿ ಮಠಗಳು ನೀಡುತ್ತಿರುವ ಶಿಕ್ಷಣಾಸಕ್ತಿಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಮಠ ಮಾನ್ಯಗಳು ಈ ರೀತಿಯಲ್ಲಿ ಮಾಡುತ್ತಿರುವ ಸೇವೆಯನ್ನು ನಾವು ಪ್ರಶಂಸಿಸಲೇ ಬೇಕಾಗಿದೆ ಎಂದರಲ್ಲದೆ ಭಾರತದಾದ್ಯಂತ ಯಾದವ ಸಮಾಜ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದು ಇವರೆಲ್ಲಾ ಒಗ್ಗೂಡಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಯಾದವ ಸಮಾಜದಲ್ಲಿ ಗುರಿ ಮತ್ತು ಗುರು ಒಟ್ಟಿಗೆ ದೊರಕಿರುವುದು ಉತ್ತಮ ಸಂಗತಿ, ಸಮಾಜವನ್ನು ಬೆಳಸಬೇಕಾದರೆ ಸ್ವಾಮೀಜಿಯ ಮಾರ್ಗದರ್ಶನದಂತೆ ಮುನ್ನೆಡೆಯಬೇಕಾಗಿದ್ದು ಜನಾಂಗದಲ್ಲಿರುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಗ್ಗಟ್ಟಾಗಬೇಕು ಎಂದರು. ಯಾದವ ಸಮಾಜದ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಕುಲ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದು, ಸಕರ್ಾರಕ್ಕೆ ಈ ವರದಿ ಬಂದನಂತರ ಸದನದಲ್ಲಿ ಚಚರ್ಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅರಿವನ್ನು ಮೂಡಿಸುವವರೇ ನಮ್ಮ ಗುರು ಅವರ ಮಾರ್ಗದರ್ಶನದಂತೆ ಸಂಘಟನೆಯನ್ನು ಬೆಳೆಸಿದಾಗ ಸಮಾಜದ ಛಾಪನ್ನು ಮೂಡಿಸಬಹುದಾಗಿದೆ, ಹಲವು ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದ್ದು ಈಗಲಾದರೂ ನಾವೆಲ್ಲರೂ ಶಿಕ್ಷಣ ಕ್ರಾಂತಿಯನ್ನು ಮೊಳಗಿಸೋಣ ಎಂದರು.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಹಾಸ್ಟಲ್ ಸೌಲಭ್ಯಕ್ಕೆ ಈಗ ದೊರಕಿರುವ ಸಹಾಯ ಧನವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.. ಸಮಾರಂಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಅಕ್ಕಲಪ್ಪಯಾದವ್, ಜಿ.ಪಂ.ಸದಸ್ಯರಾದ ಹೆಚ್. ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮ ರಾಮಯ್ಯ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಾ.ಪಂ.ಸಸ್ಯರುಗಳಾದ ಜಗದೀಶ್, ಲತಾಕೇಶವಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸತೀಶ್ಸಾಸಲು, ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಗೋವಿಂದಯ್ಯ ಸ್ವಾಗತಿಸಿದರು.
ಚಿಕ್ಕನಾಯಕನಹಳ್ಳಿ,ಸೆ.05 : ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಮೂಲಕ ಭವಿಷ್ಯದ ಯಾದವ ಸಮಾಜವನ್ನು ಕಟ್ಟಲು ಮುಂದಾಗಿರಿ ಎಂದು ಚಿತ್ರದುರ್ಗ ಕೃಷ್ಣ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣಯಾದವಾನಂದಸ್ವಾಮಿ ಹೇಳಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಯಾದವ ವಿದ್ಯಾಥರ್ಿ ನಿಲಯದ ಶಂಕುಸ್ಥಾಪನೆ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಮೌಢ್ಯತೆ ಆವರಿಸಿಕೊಂಡಿರುವ ಈ ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ಜೊತೆಗೆ ಶಿಕ್ಷಣದಿಂದ ಅಭಿವೃದ್ದಿ ಹೊಂದಿರುವ ಯುವಕ ಪಡೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜವನ್ನು ಕಟ್ಟಲು ಅಣಿಯಾಗುವುದಾಗಿ ತಿಳಿಸಿದ ಅವರು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗುವ ಮೂಲಕ ಸಂಘ ಶಕ್ತಿಯನ್ನು ಪ್ರದಶರ್ಿಸುವ ಕಾಲ ಬಂದೊದಗಿದೆ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಲು ಶ್ತಮಿಸುತ್ತೇನೆ ಎಂದರು. ಹಾಸ್ಟಲ್ ಕಟ್ಟಲು ಶಾಸಕರಾದ ಸಿ.ಬಿ.ಸುರೇಶ್ ಬಾಬು ಮೂರು ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದ್ದು ಅವರ ಸಕರ್ಾರಿ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕೋರಲಾಗುವುದು ಎಂದರು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎರಡು ಲಕ್ಷ ರೂಗಳನ್ನು ಕೊಡುವುದಾಗಿ ವಾಗ್ದಾನವನ್ನು ನೀಡಿದ್ದಾರೆ ಇಲ್ಲಿನ ಸಮಾಜದ ಮುಖಂಡರು ಘೋಷಿಸಿರುವ ಹಣವನ್ನು ಸಂಗ್ರಹಿಸುವ ಜೊತೆಗೆ ಅದನ್ನು ಯೋಗ್ಯ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಹೋಗಬೇಕು ಎಂದರಲ್ಲದೆ ಪಾದಯಾತ್ರೆ ಮೂಲಕ ಇನ್ನಷ್ಟು ಹಣ ಸಂಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ಎ.ಕೃಷ್ಣಪ್ಪ ಮಾತನಾಡಿ ಪ್ರತಿಯೊಂದು ಸಮಾಜ ಬೆಳೆಯಲು ಶಿಕ್ಷಣ ಅತ್ಯಗತ್ಯವಾಗಿದ್ದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ, ನಮ್ಮ ಜನಾಂಗದವರಿಗೆ ಶಿಕ್ಷಣಕ್ಕಾಗಿ ಕೇವಲ ಭಾರತದಾದ್ಯಂತ 16ರಷ್ಟು ಹಾಸ್ಟಲ್ಗಳಿವೆ ಎಂದರಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ ಒಂದು ಲಕ್ಷರೂ ತಾಲ್ಲೂಕು ಮಟ್ಟದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ 50ಸಾವಿರ ರೂ ನೀಡಲಿದ್ದು ಈಗ ರೂಪುಗೊಳ್ಳುತ್ತಿರುವ ಹಾಸ್ಟಲ್ಗೆ ತಾನು ಒಂದು ಲಕ್ಷ ಹಣ ನೀಡುವುದಾಗಿ ಆ ಹಣವನ್ನು ಹಾಸ್ಟಲ್ ಕಾಮಗಾರಿಯ ಅಭಿವೃದ್ದಿ ನೋಡಿ ನೀಡುತ್ತೇನೆ ಎಂದರು. ಕನರ್ಾಟಕ ರಾಜ್ಯದಲ್ಲಿ ಮಠಗಳು ನೀಡುತ್ತಿರುವ ಶಿಕ್ಷಣಾಸಕ್ತಿಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಮಠ ಮಾನ್ಯಗಳು ಈ ರೀತಿಯಲ್ಲಿ ಮಾಡುತ್ತಿರುವ ಸೇವೆಯನ್ನು ನಾವು ಪ್ರಶಂಸಿಸಲೇ ಬೇಕಾಗಿದೆ ಎಂದರಲ್ಲದೆ ಭಾರತದಾದ್ಯಂತ ಯಾದವ ಸಮಾಜ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದು ಇವರೆಲ್ಲಾ ಒಗ್ಗೂಡಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಯಾದವ ಸಮಾಜದಲ್ಲಿ ಗುರಿ ಮತ್ತು ಗುರು ಒಟ್ಟಿಗೆ ದೊರಕಿರುವುದು ಉತ್ತಮ ಸಂಗತಿ, ಸಮಾಜವನ್ನು ಬೆಳಸಬೇಕಾದರೆ ಸ್ವಾಮೀಜಿಯ ಮಾರ್ಗದರ್ಶನದಂತೆ ಮುನ್ನೆಡೆಯಬೇಕಾಗಿದ್ದು ಜನಾಂಗದಲ್ಲಿರುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಗ್ಗಟ್ಟಾಗಬೇಕು ಎಂದರು. ಯಾದವ ಸಮಾಜದ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಕುಲ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದು, ಸಕರ್ಾರಕ್ಕೆ ಈ ವರದಿ ಬಂದನಂತರ ಸದನದಲ್ಲಿ ಚಚರ್ಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅರಿವನ್ನು ಮೂಡಿಸುವವರೇ ನಮ್ಮ ಗುರು ಅವರ ಮಾರ್ಗದರ್ಶನದಂತೆ ಸಂಘಟನೆಯನ್ನು ಬೆಳೆಸಿದಾಗ ಸಮಾಜದ ಛಾಪನ್ನು ಮೂಡಿಸಬಹುದಾಗಿದೆ, ಹಲವು ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದ್ದು ಈಗಲಾದರೂ ನಾವೆಲ್ಲರೂ ಶಿಕ್ಷಣ ಕ್ರಾಂತಿಯನ್ನು ಮೊಳಗಿಸೋಣ ಎಂದರು.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಹಾಸ್ಟಲ್ ಸೌಲಭ್ಯಕ್ಕೆ ಈಗ ದೊರಕಿರುವ ಸಹಾಯ ಧನವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.. ಸಮಾರಂಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಅಕ್ಕಲಪ್ಪಯಾದವ್, ಜಿ.ಪಂ.ಸದಸ್ಯರಾದ ಹೆಚ್. ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮ ರಾಮಯ್ಯ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಾ.ಪಂ.ಸಸ್ಯರುಗಳಾದ ಜಗದೀಶ್, ಲತಾಕೇಶವಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸತೀಶ್ಸಾಸಲು, ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಗೋವಿಂದಯ್ಯ ಸ್ವಾಗತಿಸಿದರು.
ಶಿಕ್ಷಕ ಎಸ್.ಕೆ.ವಿಜಯ ಕುಮಾರ್ ನಿರೂಪಿಸಿದರು.ದೇಶದ ಭವಿಷ್ಯವನ್ನು ಶಾಲಾ ಕೊಠಡಿಯಲ್ಲಿ ಯೋಜಿಸುವವನೆ ಶಿಕ್ಷಕ: ಎನ್.ಎನ್.
ಚಿಕ್ಕನಾಯಕನಹಳಳಿ,ಸೆ.05: ಶಿಕ್ಷಕರು ಶಾಲೆಗಳಲ್ಲಿ ಬೋಧನೆ ಜೊತೆಗೆ ಮಕ್ಕಳ ಮನಸ್ಸನ್ನು ಕಟ್ಟಲು ಮುಂದಾದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದು ಎಂದು ಚಿಕ್ಕನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಪಟ್ಟಣದ ಸಕರ್ಾರಿ ಪ್ರೌಡಾಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ನನ್ರವರ 123ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚಾರಣೆಯಲ್ಲಿ ಮಾತನಾಡಿ 5,6 ನೇ ವರ್ಷದ ಮಕ್ಕಳಲ್ಲಿ ಅಗಾದವಾದ ಜ್ಞಾಪನಾಶಕ್ತಿ ಇದ್ದು 2000 ಪದಗಳನ್ನು ಸಂಗ್ರಹಿಸುವ ಶಕ್ತಿ ಇರುತ್ತದೆ. ಇಂತಹ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿಯಾದ ಜಾನಪದ ಕಲೆಗಳು, ನೃತ್ಯ, ಕೋಲಾಟ ಸುಗ್ಗಿ ಕುಣಿತ ಇವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ಟಿ.ವಿ. ಮಾಧ್ಯಮಗಳು ನಮ್ಮ ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಿನಿಮಾ ಹಾಗೂ ಟಿವಿ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳನ್ನು ಪ್ರತಿಭೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದ್ದರೂ ಇದನ್ನು ಪ್ರತಿಭಟಿಸುವ ಶಕ್ತಿ ನಮ್ಮ ಹೆಣ್ಣು ಮಕ್ಕಳಲ್ಲಿ ಕಡಿಮೆಯಾಗಿದೆ ಎಂದು ವಿಷಾಧಿಸಿದ ಅವರು ಮನುಷ್ಯ ಮನುಷ್ಯರಲ್ಲಿರುವ ಸಂಬಂಧಗಳು ಕಡಿಮೆಯಾಗುತ್ತಿವೆ, ಶಿಕ್ಷಕರು ಪ್ರತಿ ದಿನ ಪ್ರತಿ ಕ್ಷಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಆತ್ಮ ವಿಮಷರ್ೆ ಮಾಡುವಂತಹವರು ಮಾತ್ರ ಶಿಕ್ಷಕ ವೃತ್ತಿಗೆ ಅರ್ಹರು ಎಂದ ಅವರು, ಶಿಕ್ಷರು ತಾವು ಮಕ್ಕಳಿಗೆ ಪಾಠ ಹೇಳುವ ಮುನ್ನ ಪುಸ್ತಕಗಳನ್ನು ಅಭ್ಯಸಿಸಿದ ನಂತರ ಭೋದಿಸಿ, ದುಶ್ಚಟಗಳಿಂದ ದೂರವಿದ್ದು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಕಲಿಸುವ ಕಡೆ ಗಮನ ಹರಿಸಬೇಕಾಗಿದೆ. ರಾಧಾಕೃಷ್ಣನ್ರವರನ್ನು ಅವರ ಜಯಂತಿ ದಿನದಂದು ಮಾತ್ರ ಸ್ಮರಿಸುವುದಲ್ಲ ಶಿಕ್ಷಕರಾದವರು ಪ್ರತಿಕ್ಷಣ ನೆನಪಿಸಿಕೊಳ್ಳುವುದು ಶಿಕ್ಷಕನ ಕರ್ತವ್ಯ, ಶಿಕ್ಷಕ ಸದಾ ಅಧ್ಯಯನ ಶೀಲರಾಗಬೇಕು, ಸಭೆ ಸಮಾರಂಭಗಳು ಹೂವಿನ ಹಾರದ ಬದಲು ಡಾ.ರಾಧಕೃಷ್ಣರವರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಿ ಎಂದು ಸಲಹೆ ನೀಡಿದರು. ಸಮಾಜ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಕೃಕಜ್ಞತೆಯಿಂದ ಸ್ಮರಿಸಬೇಕು, ಅವರೆ ಅಕ್ಷರವನ್ನು ಕಲಿಸುವವರು ಶಿಕ್ಷಕರು ವಿದ್ಯಾಥರ್ಿಗಳು ಕೇಳುವ ಪ್ರಶ್ನೆಗೆ ಉತ್ತರ ತಿಳಿಯದಿದ್ದಲ್ಲಿ ಗದರಿಸದೆ ತಿಳಿದು ಹೇಳಬೇಕು. ಸಮಾರಂಭದಲಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣಗೊಳಿಸಿದರು. ತಾ.ಪಂ.ಉಪಾಧ್ಯಕ್ಷ ಬಿ.ಬಿ.ಪಾತೀಮ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಡಶಾಲಾ ಹಾಗೂ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು. ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮ, ನಿಂಗಮ್ಮ, ಮಂಜುಳ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ದಯಾನಂದ್, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಬಿ.ಇ.ಓ ಸಾ.ಚಿ.ನಾಗೇಶ್ ಉಪಸ್ಥಿತರಿದ್ದರು.
Sunday, September 4, 2011



. ಹೊಂಗೆ ಬೆಳೆದು ಬಂಗಾರದ ಬೆಲೆ ಪಡೆಯಿರಿ್ಡ ಹೊಂಗೆಬೀಜದ ಎಣ್ಣೆ ಉತ್ಪಾದನಾ ಘಟಕದಲ್ಲಿ ತಜ್ಞರ ಅಭಿಮತ್ಡ ಸ್ವಾವಲಂಭನೆಗಾಗಿ ಜೈವಿಕ ಇಂಧನಕ್ಕೆ ಮೊರೆ ಹೊಗಲು ಕರೆ್ಡ ಪೆಟ್ರೋಲಿಯಂ ಉತ್ಪನ್ನಗಳಿಗೆ ಪಯರ್ಾಯವಾಗಿ ಜೈವಿಕ ಇಂಧನಚಿಕ್ಕನಾಯಕನಹಳ್ಳಿ,ಸೆ.3 : ಹೊಂಗೆಬೀಜವನ್ನು ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕೇವಲ 8ರೂಗಳಿಗೆ ಮಾರುವ ಬದಲು ಬೀಜದಿಂದ ಎಣ್ಣೆ ತೆಗೆಯುವ ಮೂಲಕ ಜೈವಿಕ ಇಂಧನವಾಗಿ ಪರಿವತರ್ಿಸಿ ಮಾರಾಟ ಮಾಡಿದರೆ ಅತಿಹೆಚ್ಚು ಲಾಭವನ್ನು ಪಡೆದು ಆಥರ್ಿಕವಾಗಿ ಸದೃಡರಾಗಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶ್ಯಾಮಸುಂದರ ಜೋಶಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಾಲುಗೊಣ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜೈವಿನ ಇಂದನ ಉದ್ಯಾನ ಹಾಗೂ ಭಾರತೀಯ ಜೈವಿಕ ತಂತ್ರಜ್ಞಾನ ಸಂಸ್ಥೆ ವತಿಯಿಂದ ನಡೆದ ಜೈವಿನ ಎಣ್ಣೆ ಉತ್ಪಾದನಾ ಘಟಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನೈಸಗರ್ಿಕ ವಸ್ತು ಹೊಂಗೆಬೀಜದಿಂದ ಹೆಚ್ಚು ಲಾಭ ಪಡೆಯುವುದು ಕಷ್ಠವಿದೆ, ಕಚ್ಚಾ ಬೀಜನವನ್ನು ಯಂತ್ರದ ಬಳಸಿ ಎಣ್ಣೆ ತೆಗೆದರೆ ಅಷ್ಠೇ ಲಾಭವನ್ನು ಇನ್ನು ಮುಂದೆ ರೈತರು ಪಡೆಯಬಹುದು, ತಾವು ಉತ್ಪಾದಿಸಿದ ಹೊಂಗೆಬೀಜವನ್ನು ಈ ರೀತಿ ತಯಾರಿಸಿದ ಎಣ್ಣೆಯನ್ನು ವಿದ್ಯುತ್ ಬಳಕೆಯಲ್ಲಿ, ವಾಹನ ಚಲಿಸಲು ಇನ್ನಿತರ ಇಂಧನ ವಸ್ತುವಾಗಿ ಬಳಸಬಹುದಾಗಿದ್ದು ತಮಗೆ ಬೇಕಾದಷ್ಟು ಇಂಧನ ಶಕ್ತಿಯನ್ನು ಉಪಯೋಗಿಸಬಹುದು ಎಂದರು. ಈ ಶಕ್ತಿಯ ಉಪಯೋಗಕ್ಕಾಗಿ ಇನ್ನು 5 ವರ್ಷದಲ್ಲಿ ಸುಮಾರು 15ಟನ್ ಹೆಚ್ಚು ಹೊಂಗೆಬೀಜ ಉತ್ಪಾದನೆಯನ್ನು ಮಾಡಿದರೆ ದೇಶದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದಂತಾಗಲಿದೆ, ಅಲ್ಲದೆ ಬೇರೆ ಬೇರೆ ದೇಶಗಳಿಂದ ತರುವ ಪೆಟ್ರೋಲಿಯಂ ವಸ್ತುಗಳ ಬೆಲೆಯೂ ಸಹ ಕಡಿಮೆಯಾಗಲಿದೆ ಎಂದರು. ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ.ಚಂದ್ರಕಾಂತ್ ಮಾತನಾಡಿ ಈ ಯಂತ್ರದ ಮೂಲಕ ಜೈವಿನ ಇಂಧನವು ದೈನಿಕ ಇಂಧನವಾಗಬೇಕು ಆಗ ಪ್ರತಿಯೊಬ್ಬರಿಗೂ ಇಂಧನ ಕೊರತೆ ಉಂಟಾಗದೆ ದೇಶ ಆಥರ್ಿಕವಾಗಿ ಮುಂದುವರಿಯಲಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು. ತು.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಮಾತನಾಡಿ ಇತ್ತೀಚಿಗೆ ಕಲೆಬೆರಕೆ ವಸ್ತುಗಳು ಹೆಚ್ಚಾದರೂ ಅವುಗಳಿಗೆ ಬೆಲೆ ಹೆಚ್ಚುತ್ತಿದೆ ಇದರಿಂದ ಬಡವರು ತೀರಾ ಸಂಕಷ್ಠಕ್ಕೆ ದೂಡಲ್ಪಡುತ್ತಿದ್ದಾರೆ ಇಂತಹವುಗಳನ್ನು ಹೋಗಲಾಡಿಸಬೇಕಾದರೆ ಗ್ರಾಮಸ್ಥರು ಒಗ್ಗಟ್ಟಾಗಿ ಕೈಜೋಡಿಸಿ ತಮ್ಮಲ್ಲಿರುವ ಬೆಳೆಯ ಉತ್ಪಾದನೆಯನ್ನು ಹೆಚ್ಚಾಗಿ ತಯಾರಿಸಿ ತಮ್ಮ ಸಮಸ್ಯೆಗಳನ್ನು ಯಾರ ಹಂಗಿಲ್ಲದೆ ತಾವೇ ಪರಿಹರಿಸಿಕೊಂಡರೆ ತಮ್ಮ ಗ್ರಾಮವೇ ದೇಶಕ್ಕೆ ಮಾದರಿಯಾಗುತ್ತದೆ ಎಂದರಲ್ಲದೆ, ತುಮಕೂರು ಹಾಲು ಒಕ್ಕೂಟವು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದು ಅದರಿಂದಲೇ ಇಂದು 4ಲಕ್ಷಕ್ಕೂ ಹೆಚ್ಚು ಹಾಲು ಜಿಲ್ಲೆಯಲ್ಲಿ ಸರಬರಾಜಾಗುತ್ತಿದ್ದು 5ಕೋಟಿಯಷ್ಠು ಬಡವಾಡಿ ನೀಡುತ್ತಾ 400 ಕೋಟಿ ವ್ಯವಹಾರ ನಡೆಯುತ್ತಿದ್ದು ಇದನ್ನು ಇನ್ನು ಹೆಚ್ಚಿಸುವ ಗುರಿ ಹೊಂದಿದೆ ಒಕ್ಕೂಟ ಎಂದರು.ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಉದ್ಘಾಟನೆಗೊಂಡಿರುವ ಯಂತ್ರಗಳನ್ನು ರೈತರು ಒಳ್ಳೆಯ ನಿಟ್ಟಿನಲ್ಲಿ ಉಪಯೋಗಿಸಿದರೆ ಯಾರನ್ನು ಅವಲಂಬಿಸದೆ ತಮಗೆ ತಾವೇ ಸ್ವಾವಲಂಬಿಗಳಾಗುತ್ತೇವೆ, ಇದಕ್ಕಾಗಿ ಸಹಕಾರಿ ಸಂಘಗಳು ಮುಂದೆ ಬಂದು ಇಂತಹ ಯಂತ್ರಗಳನ್ನು ಒಗ್ಗಟ್ಟಿನಿಂದ ಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮದಲ್ಲಿರುವ ತೊಳಲಾಟಗಳನ್ನು ಗ್ರಾಮಸ್ಥರೇ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಂಡರೆ ತಾವು ಗ್ರಾಮದ ಅಭಿವೃದ್ದಿಗೆ
ಮುಂದಾಗುತ್ತೇವೆ ಎಂದರು. ಸಮಾರಂಭದಲ್ಲಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರಾಜಣ್ಣ, ಶಿವನಂಜಪ್ಪ ಮುಂತಾದವರಿದ್ದರು.
ಚಿ.ನಾ.ಹಳ್ಳಿ.ಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಚಿಕ್ಕನಾಯಕನಹಳ್ಳಿ,ಸೆ.3 : ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 124ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಇದೇ 5ರ ಸೋಮವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಸಮಾರಂಭವನ್ನು ಕೆ.ಎಂ.ಹೆಚ್.ಪಿ.ಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ. ರಾಧಕೃಷ್ಣರವರ ಭಾವಚಿತ್ರವನ್ನು ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಪ್ರಾಂಶುಪಾಲ ಎನ್.ನಾಗಪ್ಪ ಸಮಾರಂಭ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್ ಉತ್ತಮ ಶಿಕ್ಷಕ ಪ್ರಶಸ್ತಿ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಶಾಸಕರುಗಳು, ಜಿ.ಪಂ.ಸದಸ್ಯರುಗಳು ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿರುವರು.
ಜಾನುವಾರುಗಳ ಮೇವಿಗೂ ತತ್ವಾರಚಿಕ್ಕನಾಯಕನಹಳ್ಳಿ,ಸೆ.3 ; ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ರೈತರು ಕಂಗಾಲಾಗಿದ್ದಾರೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದು ಸತತ ಬರಗಾಲದಿಂದ ಪರಿತಪಿಸುತ್ತಿದ್ದಾರೆ ಜಾನುವಾರುಗಳಿಗೆ ಮೇವಿಲ್ಲದೆ ಅವುಗಳು ಕಟುಕರ ಪಾಲಾಗಿದ್ದು ತಾಲ್ಲೂಕಿನ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಆದ್ದರಿಂದ ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಗ್ರಾ.ಪಂ.ಸದಸ್ಯೆ ಶಶಿಕಲಾ ಆಗ್ರಹಿಸಿದ್ದಾರೆ.
Wednesday, August 31, 2011
ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ತಮ್ಮ ಬದುಕಿಗಾಗಿ ಅಳವಡಿಸಿಕೊಳ್ಳಿ : ಕೆ.ಎನ್.ರಂಗನಾಥ್ಚಿಕ್ಕನಾಯಕನಹಳ್ಳಿ,ಆ.31 ; ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ಅದನ್ನು ಕೇವಲ ವೃತ್ತಿಗಾಗಿ ಅವಲಂಬಿಸದೆ ತಮ್ಮ ಜೀವನದ ಬದುಕಿಗಾಗಿ ಅಳವಡಿಸಿಕೊಳ್ಳಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಆರ್.ರಂಗನಾಥ್ ಹೇಳಿದರು. ತಾಲ್ಲೂಕಿನ ಕಾತ್ರಿಕೆಹಾಳ್ ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗೂ ಇಕೋಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ವಿದ್ಯಾಥರ್ಿಗಳೇ ದೇವರು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದೇ ನಿಜವಾದ ಸೇವೆಯಾಗಿದೆ, ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು, ಈ ದಿನಗಳಲ್ಲಿ ಹಳ್ಳಿಗಾಡಿನ ವಿದ್ಯಾಥರ್ಿಗಳೇ ಹೆಚ್ಚಿನ ಪ್ರಗತಿ ಸಾಧಿಸುತ್ತಿರುವುದು. ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ಅತ್ಯಂತ ಮುಖ್ಯವಾಗಿದ್ದು ಅದರ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪರಿಸರವನ್ನು ಹಾಳುಮಾಡಬೇಡಿ, ಸಂರಕ್ಷಿಸಿ ಎಂದು ಕರೆ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ಮಾತನಾಡಿ ಮರಗಳನ್ನು ಕಡಿದರೆ ನಮ್ಮ ಉಸಿರೇ ನಿಂತು ಹೋದಂತೆ. ಗಾಳಿಗಾಗಿ, ಮಳೆಗಾಗಿ, ಬದುಕಿಗಾಗಿ ಕಾಡುಗಳು ಬೇಕು. ಇಲ್ಲಿನ ಬೆಟ್ಟಗುಡ್ಡಗಳು ಅಮೂಲ್ಯ ಖನಿಜ ಸಂಪತ್ತಿನ ಗಣಿಗಳು ಇವುಗಳ ರಕ್ಷಣೆಯ ಜವಾಬ್ದಾರಿ ನಮ್ಮದು, ಪರಿಸರವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳೋಣ ಎಂದರು. ಮಾಜಿ ಪುರಸಭಾ ಸದಸ್ಯ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪರಿಸರ ಕುರಿತು ಇಡೀ ಜಗತ್ತೇ ಚಿಂತಿಸುವ ಕಾಲ ಬಂದಿದೆ, ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರೀಂ ಕೋಟರ್್ ಆದೇಶಿಸಿರುವುದು ಸಮಾಧಾನಕರ ವಿಷಯ ಎಂದರಲ್ಲದೆ ಸ್ಥಳೀಯ ಪರಿಸರ ಅಭಿವೃದ್ದಿಗೆ ಕೂಡಿ ಶ್ರಮಿಸೋಣ ಎಂದರು. ತೀರ್ಥಪುರ ಪಂಚಾಯ್ತಿಯ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕಾಲೇಜಿನ ಕೆಲಸಗಳಿಗೆ ನಾವು ಎಂದೆಂದಿಗೂ ಸಹಕರಿಸುತ್ತೇವೆ ಎಂದರು. ಸಮಾರಂಭದಲ್ಲಿ ಪಂಚಾಯ್ತಿಯ ಉಪಾಧ್ಯಕ್ಷ ಗೋವಿಂದರಾಜು, ಪ್ರಾಚಾರ್ಯರಾದ ಎನ್.ಇಂದಿರಮ್ಮ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕ ಲಕ್ಷ್ಮಯ್ಯ ಸ್ವಾಗತಿಸಿದರೆ ಮೇ.ನಾ.ತರಂಗಿಣಿ ನಿರೂಪಿಸಿ, ನಾಗಮ್ಮ ವಂದಿಸಿದರು.
Tuesday, August 30, 2011

ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.30 : ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ. ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ನರಸಿಂಹಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.
ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಿಚಿಕ್ಕನಾಯಕನಹಳ್ಳಿ,ಆ.30 : ಸಾರ್ವಜನಿಕರು ನೈಸಗರ್ಿಕ ಬಣ್ಣಗಳಿಂದ ಕೂಡಿದ ಚಿಕ್ಕ ಗಣೇಶ ಮೂತರ್ಿಗಳನ್ನು ಪೂಜಿಸಿ ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಬೇಕೆಂದು ಪುರಸಭಾ ಕಾಯರ್ಾಲಯ ಪ್ರಕಟಣೆಯಲ್ಲಿ ಕೋರಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಪುರಸಭಾ ಕಾಯರ್ಾಲಯ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದ್ದು ಪ್ಲಾಷ್ಪರ್ ಆಫ್ ಪ್ಯಾರೀಸ್ನಿಂದ ನಿಮರ್ಾಣಗೊಂಡ ಗಣೇಶ ಮೂತರ್ಿಗಳನ್ನು ಬಳಕೆ ಮಾಡದೆ ಜೇಡಿ ಮಣ್ಣಿಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸುವುದು, ಗಣೇಶ ಮೂತರ್ಿಗಳನ್ನು ವಿಸಜರ್ಿಸುವ ಮುನ್ನ ಹೂವು, ವಸ್ತ್ರ ಮುಂತಾದ ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕಾರಿಕ ವಸ್ತುಗಳು( ಕಾಗದ ಮತ್ತು ಪ್ಲಾಸ್ಟಿಕ್) ಮುಂತಾದವುಗಳನ್ನು ತೆಗೆಯಬೇಕು, ಜೈವಿಕ ಕ್ರಿಯೆಗೆ ಒಳಪಡುವ ವಸ್ತುಗಳನ್ನು ಪ್ರತ್ಯೇಕಿಸಬೇಕು, ಗಣೇಶ ವಿಗ್ರಹಕ್ಕೆ ಬಳಸಿರುವ ರಾಸಾಯನಿಕ ಬಣ್ಣಗಳಲ್ಲಿ ಕ್ರೋಮಿಯಂ, ಸೀಸ, ಸತು ಮತ್ತು ತಾಮ್ರದ ಅಂಶಗಳಿದ್ದು ಗಣೇಶ ಮೂತರ್ಿಗಳನ್ನು ಕರೆ ಬಾವಿ, ಜಲಮೂಲಗಳಿಗೆ ಹಾಕಿದರೆ ನೀರಿನ ಗುಣ ಮಟ್ಟ ಕಲುಷಿತಗೊಳ್ಳುತ್ತದೆ, ನೀರಿನ ಮಾಲಿನ್ಯ ಉಂಟಾಗಿ ನೀರಿನ ಜಲಚರ ಜೀವಿಗಳಿಗೆ ತೊಂದರೆ ಉಂಟಾಗಲಿದ್ದು ಆದ್ದರಿಂದ ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿರುವುದರಿಂದ ಗಣೇಶ ವಿಸರ್ಜನೆಯನ್ನು ಕೆರೆಯಲ್ಲಿ ಮಾಡಬಾರದೆಂದು ಕೋರಿದ್ದಾರೆ.
ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಿಚಿಕ್ಕನಾಯಕನಹಳ್ಳಿ,ಆ.30 : ಸಾರ್ವಜನಿಕರು ನೈಸಗರ್ಿಕ ಬಣ್ಣಗಳಿಂದ ಕೂಡಿದ ಚಿಕ್ಕ ಗಣೇಶ ಮೂತರ್ಿಗಳನ್ನು ಪೂಜಿಸಿ ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಬೇಕೆಂದು ಪುರಸಭಾ ಕಾಯರ್ಾಲಯ ಪ್ರಕಟಣೆಯಲ್ಲಿ ಕೋರಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಪುರಸಭಾ ಕಾಯರ್ಾಲಯ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದ್ದು ಪ್ಲಾಷ್ಪರ್ ಆಫ್ ಪ್ಯಾರೀಸ್ನಿಂದ ನಿಮರ್ಾಣಗೊಂಡ ಗಣೇಶ ಮೂತರ್ಿಗಳನ್ನು ಬಳಕೆ ಮಾಡದೆ ಜೇಡಿ ಮಣ್ಣಿಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸುವುದು, ಗಣೇಶ ಮೂತರ್ಿಗಳನ್ನು ವಿಸಜರ್ಿಸುವ ಮುನ್ನ ಹೂವು, ವಸ್ತ್ರ ಮುಂತಾದ ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕಾರಿಕ ವಸ್ತುಗಳು( ಕಾಗದ ಮತ್ತು ಪ್ಲಾಸ್ಟಿಕ್) ಮುಂತಾದವುಗಳನ್ನು ತೆಗೆಯಬೇಕು, ಜೈವಿಕ ಕ್ರಿಯೆಗೆ ಒಳಪಡುವ ವಸ್ತುಗಳನ್ನು ಪ್ರತ್ಯೇಕಿಸಬೇಕು, ಗಣೇಶ ವಿಗ್ರಹಕ್ಕೆ ಬಳಸಿರುವ ರಾಸಾಯನಿಕ ಬಣ್ಣಗಳಲ್ಲಿ ಕ್ರೋಮಿಯಂ, ಸೀಸ, ಸತು ಮತ್ತು ತಾಮ್ರದ ಅಂಶಗಳಿದ್ದು ಗಣೇಶ ಮೂತರ್ಿಗಳನ್ನು ಕರೆ ಬಾವಿ, ಜಲಮೂಲಗಳಿಗೆ ಹಾಕಿದರೆ ನೀರಿನ ಗುಣ ಮಟ್ಟ ಕಲುಷಿತಗೊಳ್ಳುತ್ತದೆ, ನೀರಿನ ಮಾಲಿನ್ಯ ಉಂಟಾಗಿ ನೀರಿನ ಜಲಚರ ಜೀವಿಗಳಿಗೆ ತೊಂದರೆ ಉಂಟಾಗಲಿದ್ದು ಆದ್ದರಿಂದ ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿರುವುದರಿಂದ ಗಣೇಶ ವಿಸರ್ಜನೆಯನ್ನು ಕೆರೆಯಲ್ಲಿ ಮಾಡಬಾರದೆಂದು ಕೋರಿದ್ದಾರೆ.
Monday, August 29, 2011

ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಕೊಳ್ಳಿ : ತಹಶೀಲ್ದಾರ್ ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಆ.29 : ಗ್ರಾಮೀಣ ಪ್ರದೇಶಗಳ ಪಡಿತರ ಚೀಟಿಗಳನ್ನು ಪಂಚಾಯ್ತಿಗಳಲ್ಲಿನ ಪಂಚತಂತ್ರ ವ್ಯವಸ್ಥೆಯಲ್ಲಿ, ಮನೆ ಸಂಖ್ಯೆಗೆ ಪಡಿತರ ಚೀಟಿ ಹೊಂದಾಣಿಕೆ ಮಾಡುವ ಕಾರ್ಯ ನಡೆಯುತ್ತಿದ್ದು ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗೆ ಈ ವ್ಯವಸ್ಥೆ ಹೊಂದಾಣಿಕೆ ಮಾಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಉಮೇಶ್ಚಂದ್ರ ತಿಳಿಸಿದ್ದಾರೆ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಅಂತಹ ಪಡಿತರ ಚೀಟಿಗಳಿಗೆ ಸೆಪ್ಟಂಬರ್ 2011ರ ಮಾಹೆಯಿಂದ ಪಡಿತರ ಹಾಗೂ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುತ್ತದೆ ಆದ್ದರಿಂದ ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಮನೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,ಆ.29 : ಗ್ರಾಮೀಣ ಪ್ರದೇಶಗಳ ಪಡಿತರ ಚೀಟಿಗಳನ್ನು ಪಂಚಾಯ್ತಿಗಳಲ್ಲಿನ ಪಂಚತಂತ್ರ ವ್ಯವಸ್ಥೆಯಲ್ಲಿ, ಮನೆ ಸಂಖ್ಯೆಗೆ ಪಡಿತರ ಚೀಟಿ ಹೊಂದಾಣಿಕೆ ಮಾಡುವ ಕಾರ್ಯ ನಡೆಯುತ್ತಿದ್ದು ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗೆ ಈ ವ್ಯವಸ್ಥೆ ಹೊಂದಾಣಿಕೆ ಮಾಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಉಮೇಶ್ಚಂದ್ರ ತಿಳಿಸಿದ್ದಾರೆ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಅಂತಹ ಪಡಿತರ ಚೀಟಿಗಳಿಗೆ ಸೆಪ್ಟಂಬರ್ 2011ರ ಮಾಹೆಯಿಂದ ಪಡಿತರ ಹಾಗೂ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುತ್ತದೆ ಆದ್ದರಿಂದ ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಮನೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Sunday, August 28, 2011

ಜೈ ಹೋ, ಅಣ್ಣಾ ಜೈ ಹೋ
ಮಹಾತ್ಮ ಗಾಂಧೀಜಿಯಂತಾದ ಅಣ್ಣಾ ಹಜಾರೆ
ಪಾಂಡುರಂಗ.ಜೆ
ಪಾಂಡುರಂಗ.ಜೆ
ಚಿಕ್ಕನಾಯಕನಹಳ್ಳಿ :ಭಾರತಕ್ಕೆ ದೊರಕಿದ ಎರಡನೇ ಮಹಾತ್ಮ ಗಾಂಧೀ, ಎರಡನೇ ಸ್ವತಂತ್ರ ಸಂಗ್ರಾಮ ಸೃಷ್ಠಿಸಿದ ಕತೃ ಅಣ್ಣಾ ಹಜಾರೆರವರಿಗೆ ಜೈ ಹೋ, ಜೈ ಹೋ ಎಂಬ ಕೂಗು ದೇಶದಲ್ಲೆಲ್ಲಾ ಮೊಳಗುತ್ತಿದೆ.ಗಾಂಧೀಜಿಯವರ ತತ್ವಗಳಂತೆ ಶಾಂತಿ, ಅಹಿಂಸೆಯನ್ನು ಪಾಲಿಸಿ ಭ್ರಷ್ಠಾಚಾರ ನಿಮರ್ೂಲನೆಗಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರಲು ಉಪವಾಸ ಸತ್ಯಾಗ್ರಹ ನಡೆಸಿ ಗಾಂಧೀಯವರಂತೆ ಉತ್ತಮ ನಾಯಕತ್ವದೊಂದಿಗೆ ಭ್ರಷ್ಠಾಚಾರದ ವಿರುದ್ದ ಸಮಾಜವನ್ನು ಕಟ್ಟಿ ಜನಸಮಾನ್ಯರ ಮುಂದಿನ ದಿನಗಳ ಭವಿಷ್ಯಕ್ಕೆ ದಿಕ್ಕು ತೋರಿಸಿದ ಗಾಂದಿವಾಧಿ ಹಜಾರೆರವರ ಜೀವನವನ್ನು ಅವಲೋಕಿಸಿ ಅವರಂತೆ ನಾಯಕತ್ವದ ಗುಣಗಳನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ. ಕಿಶನ್ ಬಾಬರೋ ಹಜಾರೆರವರು ಮಹಾರಾಷ್ಟ್ರ ರಾಜ್ಯ ಅಹಮದ್ನಗರದ ಬಿನ್ಗಾರ್ನಲ್ಲಿ ಜನವರಿ 15 1940ರಂದು ಜನಿಸಿದರು. ಅವರು 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಭಾರತೀಯ ಸೇನೆಯ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸಿದರು. ಸೇನೆಯಲ್ಲಿದ್ದಾಗಲೇ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಆಚಾರ್ಯ ವಿನೊಬಾಬಾವೆರವರ ಲೇಖನ, ಪುಸ್ತಕಗಳನ್ನು ಓದಿ ಸ್ಪೂತರ್ಿಗೊಂಡು 1975ರಲ್ಲಿ ಸೇನೆಕಾರ್ಯಕ್ಕೆ ಸ್ವಯಂ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿದರು. ಗ್ರಾಮಕ್ಕೆ ಮರಳಿದ ಅವರು ಗ್ರಾಮದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮುಂದಾದರು, ಅಲ್ಲಿನ ಗ್ರಾಮಸ್ಥರನ್ನು ಒಗ್ಗೂಡಿಸಿ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸತ್ಯಾಗ್ರಹ ಆರಂಭಿಸಿದರು, ಇಲ್ಲಿಂದ ಹಜಾರೆರವರು ಸತ್ಯಾಗ್ರಹ ಆರಂಭಿಸಿ ಆ ಗ್ರಾಮದಲ್ಲಿ ಮಧ್ಯಪಾನ, ಧೂಮಪಾನ ನಿಷೇಧಿಸಿ ಗ್ರಾಮಗಳಿಗೆ ಮಾದರಿಯದರು, ಈ ಮೂಲಕ ಸತ್ಯಾಗ್ರಹ ಆರಂಭಿಸಿದ ಅವರು ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ತೊಲಗಿಸಲು ಕೇಂದ್ರ ಸಕರ್ಾರದ ವಿರುದ್ದ ನಿಂತು ಭ್ರಷ್ಠಾಚಾರವನ್ನು ಹೋಗಲಾಡಿಸಲು ಮೊದಲ ಬಾರಿ ಸತ್ಯಾಗ್ರಹ ನಡೆಸಿದರು ಈ ಸಂದರ್ಭದಲ್ಲಿ ಅಣ್ಣಾರವರಿಗೆ ಲಕ್ಷಗಟ್ಟಲೆ ಬೆಂಬಲ ಸೂಚಿಸಿದರೂ ಕೇಂದ್ರ ಸಕರ್ಾರಕ್ಕೆ ಆಗಷ್ಟ್ 15ನೇ ತಾರೀಖಿನೊಳಗೆ ಜನಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಕಾಲವಕಾಶ ನೀಡಿದ್ದರು. ಅಣ್ಣಾರವರು ನೀಡಿದ್ದ ಕಾಲವಕಾಶ ಮುಗಿದರೂ ಸಕರ್ಾರ ಮಸೂದೆಯನ್ನು ಅಂಗೀಕರಿಸದಿದ್ದಾಗ ಹಜಾರೆರವರು ಶಾಂತಿಯುತವಾಗಿ 13 ದಿನ 288 ಗಂಟೆಯ ವರೆಗೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಕಿರಣ್ಬೇಡಿ, ಸಂತೋಷ್ಹೆಗಡೆ ಇನ್ನಿತರರ ಅಣ್ಣಾ ಬೆಂಬಲಿಗರು ದೇಶದಲ್ಲೆಲ್ಲ ಹಜಾರೆರವರ ನಾಯಕತ್ವದೊಂದಿಗೆ ಬೆಂಬಲಿಸಿ ಸಕರ್ಾರಕ್ಕೆ ನಡುಕ ಹುಟ್ಟಿಸಿ ಮಸೂದೆ ಅಂಗೀಕಾರವನ್ನು ಜಾರಿಗೆ ತರಲು ಒತ್ತಾಯಿಸಿ ಅದರಲ್ಲಿ ವಿಜಯಶಾಲಿಯಾದರು. ಇವುಗಳನ್ನೆಲ್ಲ ಗಮನಿಸಿದರೆ ಗಾಂಧಿ ತತ್ವಗಳ ಅಹಿಂಸೆ, ಶಾಂತಿ ಮಂತ್ರ ಹಾಗೂ ಜನಶಕ್ತಿಯಿಂದ ಯಾವುದೇ ಅನ್ಯಾಯದ ವಿರುದ್ದ ಹೋರಾಡಿದರೆ ಗೆಲುವು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಹಜಾರೆರವರು ಸಾಬೀತುಪಡಿಸಿದ್ದಾರೆ, ಏನಾದರೂ ಸರಿ ಮಹಾತ್ಮ ಗಾಂಧಿಜಿಯಂತೆ, ಎರಡನೇ ಗಾಂಧಿಯಾಗಿ ಪ್ರಬಲ ಅಣ್ವಸ್ತ್ರದಂತೆ ಅಣ್ಣಾ ಹಜಾರೆರವರ ನಾಯಕತ್ವ ದೇಶದ ಜನತೆಗೆ ದೊರಕಿ ಭ್ರಷ್ಟಚಾರಿಗಳಿಗೆ ನಡುಕ ಹುಟ್ಟಿಸಿರುವ ಅಣ್ಣಾರವರಿಗೆ ಇದುವೇ ನಮ್ಮ ಜೈ ಹೋ.
Saturday, August 27, 2011
ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟಬೇಕು ಚಿಕ್ಕನಾಯಕನಹಳ್ಳಿ,ಆ.26: ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟುವ ಹೊಣೆ ಹೊತ್ತಿರುವ ನಾವು, ಶಿಕ್ಷಣವನ್ನು ನೀಡುವ ಜೊತೆಗೆ ಮಕ್ಕಳ ಭವಿಷ್ಯದ ಬದುಕಿಗೆ ಅಗತ್ಯವಿರುವ ಉದ್ಯೋಗದ ಭದ್ರತೆಯನ್ನು ನೀಡುವುದು ಅವಶ್ಯವೆಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮೇಲನಹಳ್ಳಿ ಮೊರಾಜರ್ಿ ದೇಸಾಯಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಇಲಾಖೆಯ ಮೊರಾಜರ್ಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.94 ರಷ್ಟು ಬಂದಿರುವುದು ಸಕರ್ಾರಿ ವಸತಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಿದೆ ಎಂದರಲ್ಲದೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವಲ್ಲಿ ಸಕರ್ಾರ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಈ ಶಾಲೆಗಳಿಗೆ ಅಗತ್ಯವಿರುವ ಒಳಾಂಗಣ ಕ್ರೀಡಾಂಗಣ ಹಾಗೂ ಸುಸಜ್ಜಿತ ಗ್ರಂಥಾಲಯವನ್ನು ಮಂಜೂರು ಮಾಡುವುದಾಗಿ ತಿಳಿಸಿದರು.ನಾವು ಓದುವ ಕಾಲದಲ್ಲಿ ಶಾಲೆಗಳಲ್ಲಿ ಇಷ್ಟೋಂದು ಸವಲತ್ತುಗಳಿರಲಿಲ್ಲ, ಶಾಲೆಗಳಲ್ಲಿ ಕುಳಿತುಕೊಳ್ಳಲು ಮಣಿಗಳಾಗಲಿ, ಶಿಕ್ಷಕರಿಗೆ ಖುಚರ್ಿಗಳಿಗೂ ತತ್ವಾರವಿತ್ತು. ಈಗ ಆಗಿಲ್ಲ ಸರ್ವಶಿಕ್ಷಣ ಯೋಜನೆಯಿಂದಾಗಿ ಎಲ್ಲಾ ಸಕರ್ಾರಿ ಶಾಲೆಗಳು ಉತ್ತಮವಾಗಿವೆ ಎಂದರಲ್ಲದೆ, ಸಕರ್ಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಇಷ್ಟೇಲ್ಲಾ ಸೌಲಭ್ಯ ನೀಡುತ್ತಿದೆ ಎಂದರು, ಅಬ್ದುಲ್ ಕಲಾಂರವರು ತಮ್ಮ ಶಿಕ್ಷಣ ಸಂದರ್ಭದಲ್ಲಿ ಮನೆಗಳಿಗೆ ಪತ್ರಿಕೆಯನ್ನು ಸರಬರಾಜು ಮಾಡುವ ಮೂಲಕ ಅದರಲ್ಲಿ ಬಂದ ಹಣದಲ್ಲಿ ತಮ್ಮ ಶಿಕ್ಷಣವನ್ನು ನಡೆಸುತ್ತಿದ್ದರು ಎಂದರಲ್ಲದೆ, ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ಅಬ್ದುಲ್ ಕಲಾಂರಂತಹ ವ್ಯಕ್ತಿತ್ವ ಉಳ್ಳವರಾಗಬೇಕೆಂದರು,ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಈ ಶಾಲೆಯ ವಾತಾವರಣ ಸುಂದರವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಪಟ್ಟಣದ ಹೊರವಲಯದಲ್ಲಿರುವುದು ಮತ್ತು ಕೆರೆ ಪಕ್ಕದಲ್ಲಿರುವುದರಿಂದ ಮಕ್ಕಳ ಭದ್ರತೆಗೂ ಹೆಚ್ಚು ಒತ್ತು ನೀಡಬೇಕೆಂದರು. ಚಿಕ್ಕನಾಯಕನಹಳ್ಳಿಗೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಪ್ರಾರಂಭಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಇದಕ್ಕೆ ಸಚಿವರು ಅನುಮತಿ ನೀಡಬೇಕೆಂದರಲ್ಲದೆ, ಹಂದನಕೆರೆ, ಕಾತ್ರಿಕೆಹಾಳ್ ಮತ್ತು ಶೆಟ್ಟೀಕೆರೆಗಳಿಗೆ ವಿದ್ಯಾಥರ್ಿ ನಿಲಯವನ್ನು ಆರಂಭಿಸಲು ಸಚಿವರು ಒಪ್ಪಿಗೆ ನೀಡಬೇಕೆಂದರು.ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬರುವ ಹೆಚ್ಚಿನ ಸವಲತ್ತುಗಳನ್ನು ನೀಡಬೇಕೆಂದರು.ಕಾರ್ಯಕ್ರಮದಲ್ಲಿ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರುಗಳಾದ ಜಿ. ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ತಾ.ಪಂ. ಉಪಾಧ್ಯಕ್ಷೆ ಬಿಬಿ ಫಾತಿಮಾ, ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಎಚ್.ಆರ್.ಶಶಿಧರ್, ಎಂ.ಎಂ.ಜಗಧೀಶ್, ನಿರಂಜನಮೂತರ್ಿ, ಹೊನ್ನೆಬಾಗಿ ಅಧ್ಯಕ್ಷರಾದ ಕಲ್ಪನಾ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಶರತ್ಕುಮಾರ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಸ್ವಾಗತಿಸಿದರೆ, ಶ್ಯಾಮ್ ಸುಂದರ್ ವಂದಿಸಿದರು.
Friday, August 26, 2011

ಇಂದು ಮೊರಾಜರ್ಿ ದೇಸಾಯಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ
ಈ ನಿಟ್ಟಿನಲ್ಲಿ ಸಕರ್ಾರ ತಾಲ್ಲೂಕಿಗೆ ಒಂದರಂತೆ ಇಂತಹ ಶಾಲೆಗಳನ್ನು ಆರಂಭಿಸಿದೆ, ಈ ಪೈಕಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಮೇಲನಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿಮರ್ಿಸಿರುವ ಮೊರಾಜರ್ಿದೇಸಾಯಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ.
ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಈ ಕಟ್ಟಡವನ್ನು ಇದೇ 27ರಂದು (ಇಂದು) ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 250 ವಿದ್ಯಾಥರ್ಿಗಳ ವಾಸ್ತವ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಮರ್ಿಸಿರುವ ಸುಸಜ್ಜಿತ ಈ ಕಟ್ಟಡ ನಾಲ್ಕುವರೆ ಎಕರ ಪ್ರದೇಶದಲ್ಲಿ ಹರಡಿಕೊಂಡಿದೆ. ಒಂದುವರೆ ಎಕರೆ ಪ್ರದೇಶದಲ್ಲಿ 6 ಬ್ಲಾಕ್ಗಳಲ್ಲಿ ಕಟ್ಟಡ ರೂಪುಗೊಂಡಿದ್ದರೆ 3 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಸಿದ್ದವಾಗಿದೆ.
ನಾಲ್ಕು ಕೋಟಿ ಅರವತ್ತು ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿರುವ ಈ ಶಾಲೆ ಆರು ಬ್ಲಾಕ್ಗಳನ್ನು ಹೊಂದಿದೆ. ಶಾಲಾ ಸಂಕಿರ್ಣ, ಬಾಲಕರ ವಸತಿ ಗೃಹ, ಅಡುಗೆ ಮತ್ತು ಭೋಜನ ಶಾಲೆ, ಬಾಲಕಿಯರ ಗೃಹ, ಬೋಧಕ ವಸತಿ ಗೃಹ, ಬೋಧಕೇತರ ವಸತಿ ಗೃಹಗಳೆಂದು ವಿಂಗಡಿಸಲಾಗಿದೆ.
ಶಾಲಾ ಸಂಕಿರ್ಣವು ಒಂದು ನೂರು ಚದುರದ ವಿಶಾಲ ಕಟ್ಟಡದಲ್ಲಿ ಹರಡಿಕೊಂಡಿದ್ದು 12 ವಿಶಾಲ ಕೊಠಡಿಗಳಿವೆ. 4 ದೊಡ್ಡ ಕ್ಲಾಸ್ ರೂಂಗಳಿವೆ ಒಂದು ಪ್ರಯೋಗಾಲಯ, ಒಂದು ಗ್ರಂಥಾಲಯ ಒಂದು ಕಂಪ್ಯೂಟರ್ ಹಾಲ್, ಒಂದು ಯೋಗ ಕೊಠಡಿ, ಪ್ರಿನ್ಸಿ ಆಫೀಸ್, ಸ್ಟಾಪ್ ರೂಂ, ಸ್ಟೋರ್ ರೂಂಗಳನ್ನು ಒಳಗೊಂಡಿದೆ.
ಬಾಲಕರ ವಸತಿ ಗೃಹವು 80 ಚದುರ ಕಟ್ಟಡವೊಂದಿದ್ದು 12 ರೂಂಗಳನ್ನು ಹೊಂದಿದೆ, ಬಾಲಕರು ಓದಲು ಹಾಗೂ ಮಲಗಲು ವಿಶಾಲವಾದ ಪ್ರದೇಶ ಇದಾಗಿದೆ. ಅಡುಗೆ ತಯಾರಿಸಲು ಹಾಗೂ ಊಟ ಮಾಡಲು 35 ಚದುರದಲ್ಲಿ ಕಟ್ಟಲಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಕುಳಿತು, ಊಟ ಮಾಡುವ ವ್ವವಸ್ಥೆ ಇದೆ.
ಬಾಲಕಿಯರ ವಸತಿ ಗೃಹವು 80 ಚದುರ ಇದ್ದು 12 ಕೊಠಡಿಗಳಿವೆ, ಇದರ ಪಕ್ಕ ಬೋಧಕರ ವಸತಿ ಗೃಹಗಳಿವೆ ಡಬಲ್ ಬೆಡ್ ರೂಂನ 4 ಮನೆಗಳ 28 ಚದುರ ವಿಶಾಲತೆಯನ್ನು ಹೊಂದಿದೆ. ಬೋಧಕೇತರರ ವಸತಿಗಾಗಿ ಸಿಂಗಲ್ ಬೆಡ್ರೂಂನ 4 ಮನೆಗಳು 15 ಚದುರದಲ್ಲಿದೆ.
ಶೌಚದ ನೀರು ಪುನರ್ ಬಳಕೆ : ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಶೌಚಾಲಯಕ್ಕೆ ಬಳಸುವ ನೀರನ್ನು ಪುನ: ಬಳಸಲು ಯೋಗ್ಯವಾಗುವಂತೆ ಮಾಡುವ ಡಿವ್ಯಾಟ್ ತಂತ್ರಜ್ಞಾನವನ್ನು ಬಳಸಿದ್ದು ಈ ತಂತ್ರಜ್ಞಾನವನ್ನು ಅಳವಡಿಸಲು ನ್ಯೂಜಿಲೆಂಡ್ನ ಇಂಜನಿಯರ್ರವರನ್ನು ಇಲ್ಲಿಗೆ ಕರೆಯಿಸಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಕಟ್ಟಡದ ವಿಶೇಷವಾಗಿದೆ. ಮೊರಾಜರ್ಿ ಶಾಲೆಗಳ ಕಟ್ಟಡಗಳ ಪೈಕಿ ರಾಜ್ಯದ ಯಾವುದೇ ಭಾಗದಲ್ಲಿ ಈ ತರಹದ ತಂತ್ರಜ್ಞಾನವನ್ನು ಅಳವಡಿಸಿಲ್ಲ, ಇದೇ ಮೊದಲು ಮೇಲನಹಳ್ಳಿ ಶಾಲೆಗೆ ಅಳವಡಿಸಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿಮುದ್ದುಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಜಲ ಮರು ಪೂರ್ಣ, ಸೋಲಾರ್ ಅಳವಡಿಕೆಯಂತಹ ಪರಿಸರ ಸ್ನೇಹಿ ಕ್ರಮಗಳನ್ನು ಈ ಕಟ್ಟಡ ಹೊಂದಿದೆ.
ಇಷ್ಟು ಚೆಂದದ ಕಟ್ಟಡವನ್ನು ಇದೇ 27ರಂದು ಮಧ್ಯಾಹ್ನ 3ಕ್ಕೆ ಮಕ್ಕಳ ಉಪಯೋಗಕ್ಕೆ ಸಚಿವ ಎ.ನಾರಾಯಣಸ್ವಾಮಿ ವಿನಿಯೋಗಿಸಲು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಜಿ.ಪಂ.ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜಯ್ಯ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳು ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳು ಈ ಶಾಲೆಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ನಾಲ್ಕುವರೆ ಎಕರೆ ಪ್ರದೇಶದಲ್ಲಿ 4.60 ಕೋಟಿ ರೂಗಳ ಕಟ್ಟಡ
- ಶೌಚಾಲಯದ ನೀರು ಪುನರ್ ಬಳಕೆಯ ತಂತ್ರಜ್ಞಾನ
- ಸಮಾಜ ಕಲ್ಯಾಣ ಇಲಾಖೆಯ ಸಚಿವರಿಂದ ಉದ್ಘಾಟನೆ
ಈ ನಿಟ್ಟಿನಲ್ಲಿ ಸಕರ್ಾರ ತಾಲ್ಲೂಕಿಗೆ ಒಂದರಂತೆ ಇಂತಹ ಶಾಲೆಗಳನ್ನು ಆರಂಭಿಸಿದೆ, ಈ ಪೈಕಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಮೇಲನಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿಮರ್ಿಸಿರುವ ಮೊರಾಜರ್ಿದೇಸಾಯಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ.
ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಈ ಕಟ್ಟಡವನ್ನು ಇದೇ 27ರಂದು (ಇಂದು) ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 250 ವಿದ್ಯಾಥರ್ಿಗಳ ವಾಸ್ತವ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಮರ್ಿಸಿರುವ ಸುಸಜ್ಜಿತ ಈ ಕಟ್ಟಡ ನಾಲ್ಕುವರೆ ಎಕರ ಪ್ರದೇಶದಲ್ಲಿ ಹರಡಿಕೊಂಡಿದೆ. ಒಂದುವರೆ ಎಕರೆ ಪ್ರದೇಶದಲ್ಲಿ 6 ಬ್ಲಾಕ್ಗಳಲ್ಲಿ ಕಟ್ಟಡ ರೂಪುಗೊಂಡಿದ್ದರೆ 3 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಸಿದ್ದವಾಗಿದೆ.
ನಾಲ್ಕು ಕೋಟಿ ಅರವತ್ತು ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿರುವ ಈ ಶಾಲೆ ಆರು ಬ್ಲಾಕ್ಗಳನ್ನು ಹೊಂದಿದೆ. ಶಾಲಾ ಸಂಕಿರ್ಣ, ಬಾಲಕರ ವಸತಿ ಗೃಹ, ಅಡುಗೆ ಮತ್ತು ಭೋಜನ ಶಾಲೆ, ಬಾಲಕಿಯರ ಗೃಹ, ಬೋಧಕ ವಸತಿ ಗೃಹ, ಬೋಧಕೇತರ ವಸತಿ ಗೃಹಗಳೆಂದು ವಿಂಗಡಿಸಲಾಗಿದೆ.
ಶಾಲಾ ಸಂಕಿರ್ಣವು ಒಂದು ನೂರು ಚದುರದ ವಿಶಾಲ ಕಟ್ಟಡದಲ್ಲಿ ಹರಡಿಕೊಂಡಿದ್ದು 12 ವಿಶಾಲ ಕೊಠಡಿಗಳಿವೆ. 4 ದೊಡ್ಡ ಕ್ಲಾಸ್ ರೂಂಗಳಿವೆ ಒಂದು ಪ್ರಯೋಗಾಲಯ, ಒಂದು ಗ್ರಂಥಾಲಯ ಒಂದು ಕಂಪ್ಯೂಟರ್ ಹಾಲ್, ಒಂದು ಯೋಗ ಕೊಠಡಿ, ಪ್ರಿನ್ಸಿ ಆಫೀಸ್, ಸ್ಟಾಪ್ ರೂಂ, ಸ್ಟೋರ್ ರೂಂಗಳನ್ನು ಒಳಗೊಂಡಿದೆ.
ಬಾಲಕರ ವಸತಿ ಗೃಹವು 80 ಚದುರ ಕಟ್ಟಡವೊಂದಿದ್ದು 12 ರೂಂಗಳನ್ನು ಹೊಂದಿದೆ, ಬಾಲಕರು ಓದಲು ಹಾಗೂ ಮಲಗಲು ವಿಶಾಲವಾದ ಪ್ರದೇಶ ಇದಾಗಿದೆ. ಅಡುಗೆ ತಯಾರಿಸಲು ಹಾಗೂ ಊಟ ಮಾಡಲು 35 ಚದುರದಲ್ಲಿ ಕಟ್ಟಲಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಕುಳಿತು, ಊಟ ಮಾಡುವ ವ್ವವಸ್ಥೆ ಇದೆ.
ಬಾಲಕಿಯರ ವಸತಿ ಗೃಹವು 80 ಚದುರ ಇದ್ದು 12 ಕೊಠಡಿಗಳಿವೆ, ಇದರ ಪಕ್ಕ ಬೋಧಕರ ವಸತಿ ಗೃಹಗಳಿವೆ ಡಬಲ್ ಬೆಡ್ ರೂಂನ 4 ಮನೆಗಳ 28 ಚದುರ ವಿಶಾಲತೆಯನ್ನು ಹೊಂದಿದೆ. ಬೋಧಕೇತರರ ವಸತಿಗಾಗಿ ಸಿಂಗಲ್ ಬೆಡ್ರೂಂನ 4 ಮನೆಗಳು 15 ಚದುರದಲ್ಲಿದೆ.
ಶೌಚದ ನೀರು ಪುನರ್ ಬಳಕೆ : ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಶೌಚಾಲಯಕ್ಕೆ ಬಳಸುವ ನೀರನ್ನು ಪುನ: ಬಳಸಲು ಯೋಗ್ಯವಾಗುವಂತೆ ಮಾಡುವ ಡಿವ್ಯಾಟ್ ತಂತ್ರಜ್ಞಾನವನ್ನು ಬಳಸಿದ್ದು ಈ ತಂತ್ರಜ್ಞಾನವನ್ನು ಅಳವಡಿಸಲು ನ್ಯೂಜಿಲೆಂಡ್ನ ಇಂಜನಿಯರ್ರವರನ್ನು ಇಲ್ಲಿಗೆ ಕರೆಯಿಸಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಕಟ್ಟಡದ ವಿಶೇಷವಾಗಿದೆ. ಮೊರಾಜರ್ಿ ಶಾಲೆಗಳ ಕಟ್ಟಡಗಳ ಪೈಕಿ ರಾಜ್ಯದ ಯಾವುದೇ ಭಾಗದಲ್ಲಿ ಈ ತರಹದ ತಂತ್ರಜ್ಞಾನವನ್ನು ಅಳವಡಿಸಿಲ್ಲ, ಇದೇ ಮೊದಲು ಮೇಲನಹಳ್ಳಿ ಶಾಲೆಗೆ ಅಳವಡಿಸಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿಮುದ್ದುಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಜಲ ಮರು ಪೂರ್ಣ, ಸೋಲಾರ್ ಅಳವಡಿಕೆಯಂತಹ ಪರಿಸರ ಸ್ನೇಹಿ ಕ್ರಮಗಳನ್ನು ಈ ಕಟ್ಟಡ ಹೊಂದಿದೆ.
ಇಷ್ಟು ಚೆಂದದ ಕಟ್ಟಡವನ್ನು ಇದೇ 27ರಂದು ಮಧ್ಯಾಹ್ನ 3ಕ್ಕೆ ಮಕ್ಕಳ ಉಪಯೋಗಕ್ಕೆ ಸಚಿವ ಎ.ನಾರಾಯಣಸ್ವಾಮಿ ವಿನಿಯೋಗಿಸಲು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಜಿ.ಪಂ.ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜಯ್ಯ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳು ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳು ಈ ಶಾಲೆಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Thursday, August 25, 2011
ಕಂಬಳಿ ನೇಯ್ಗೆಯಲ್ಲಿ ತಾಲ್ಲೂಕಿಗೆ ಉತ್ತಮ ಹೆಸರಿದೆ ಚಿಕ್ಕನಾಯಕನಹಳ್ಳಿ,ಆ.25 :
ರಾಜ್ಯಕ್ಕೆ ತಾಲ್ಲೂಕಿನ ಕಂಬಳಿ ನೇಯ್ಗೆಯ ನೇಕಾರರು ಉತ್ತಮ ಕೊಡುಗೆ ನೀಡಿದ್ದು ಅದನ್ನು ಉಳಿಸಲು ನೇಕಾರರು ತರಬೇತಿ ಮೂಲಕ ಇತರರಿಗೆ ನೇಕಾರಿಕೆಯ ಬಗ್ಗೆ ತಿಳಿಸಿ ನೇಕಾರಿಕೆಯನ್ನು ಉಳಿಸಬೇಕು ಎಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಹೇಳಿದರು. ಪಟ್ಟಣದ ಕಂಬಳಿ ಸೊಸೈಟಿಯಲ್ಲಿ ನಡೆದ ಕ್ಲಸ್ಟರ್ ಯೋಜನೆಯ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನೇಕಾರಿಕೆ ಉಳಿಯಬೇಕೆಂದರೆ ನೇಕಾರರು ಇತರರಿಗೆ ನೇಯ್ಗೆಯ ಬಗ್ಗೆ ತರಬೇತಿ ನೀಡಿ ಜವಳಿ ಉದ್ಯಮವನ್ನು ಉಳಿಸಿ ಮುಂದಿನ ಪೀಳಿಗೆಗೆ ನೇಯ್ಗೆಯ ಬಗ್ಗೆ ತಿಳುವಳಿಕೆ ನೀಡಬೇಕು ಎಂದ ಅವರು ನೇಕಾರರಿಗೆ ಸಕರ್ಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ತಿಳಿಸಬೇಕು ಎಂದರು. ಜವಳಿ ಇಲಾಖೆಯ ಉಪನಿದರ್ೇಶಕ ಸುನಿಲ್ಕುಮಾರ್ ಮಾತನಾಡಿ ಇಲಾಖೆಯವರು ಜಿಲ್ಲಾದ್ಯಂತ ನೇಕಾರರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ, ಆದ್ದರಿಂದ ನೇಕಾರರು ಈ ಸೌಲಭ್ಯದ ಬಗ್ಗೆ ಗಮನಿಸಿ ಆಥರ್ಿಕವಾಗಿ ಸದೃಡರಾಗಬೇಕು ಆಗ ಮಾತ್ರ ಯೋಜನೆಗೆ ಬೆಲೆ ಬರುತ್ತದೆ ಎಂದರು. ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲಿ ಗುಡಿ ಕೈಗಾರಿಕೆಗಳು ನಂಬಿರುವ ಕುಟುಂಬಗಳಿಗೆ ಆಥರ್ಿಕ ಭದ್ರತೆ ಒದಗಿಸುವಂತಹ ಕಾರ್ಯಕ್ರಮಗಳನ್ನು ಸಕರ್ಾರ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಸಕರ್ಾರಿ ಸೌಲಭ್ಯ ಪಡೆಯುವುದು ಈ ಸಮಾಜದ ಪ್ರತಿಯೊಬ್ಬರ ಹಕ್ಕು ಎಂದರು. ಸಮಾರಂಭದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಲೋಕೇಶ್, ಬನಶಂಕರಿ ಸೊಸೈಟಿ ಅಧ್ಯಕ್ಷ ಕಿರಣ್ಕುಮಾರ್ ಕಂಬಳಿ ಸೊಸೈಟಿ ನಿದರ್ೇಶಕರುಗಳಾದ ಗೋವಿಂದಪ್ಪ, ಅಳವೀರಪ್ಪ, ಬೀರಪ್ಪ ಮುಂತಾದವರಿದ್ದರು.
ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 26ಸಾವಿರ ಸಂಘ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಚಿಕ್ಕನಾಯಕನಹಳ್ಳಿ,ಆ.25 : ಕೇವಲ ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 26ಸಾವಿರ ಸಂಘ ಸ್ಥಾಪಿಸಿ ಹಲವಾರು ಜನರಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿದರ್ೇಶಕ ಪುರುಷೋತ್ತಮ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದ ಗ್ರಾಮ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 1500 ಸಂಘ ಸ್ಥಾಪಿಸಿ ಪಟ್ಟಣದಲ್ಲಿ 180 ಸಂಘವನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸಾಲ ಹಾಗೂ ಅವರಿಗೆ ಆಥರ್ಿಕ ಸಹಾಯವನ್ನು ಯೋಜನೆಯ ವತಿಯಿಂದ ಮಾಡಲಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿದ್ದು ಸವಧರ್ಮ ಸಮಾನತೆಯಿಂದ ಚತರ್ುದಾನವನ್ನು ಕ್ಷೇತ್ರದಲ್ಲಿ ನೀಡಲಾಗುತ್ತಿದೆ ಎಂದರು.ಪುರಸಭಾ ಸದಸ್ಯೆ ಶಾರದ ಶಂಕರ್ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಡಾ.ವೀರೇಂದ್ರಹೆಗ್ಗಡೆರವರು ತಂದಿರುವ ಈ ಯೋಜನೆಯ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ ಅವರು ಸಂಘಟನೆಯ ಪ್ರತಿಯೊಬ್ಬರು ಸಂಘದ ಅಭಿವೃದ್ದಿಗಾಗಿ ಸಂಘದ ಒಗ್ಗಟ್ಟಾಗಿ ಸಂಘದ ಬೆಳವಣಿಗೆಯನ್ನು ಮುಂದುವರಿಸಲು ತಿಳಿಸಿದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಸಹಕಾರ್ಯದಶರ್ಿ ಸಿ.ಬಿ.ಲೋಕೇಶ್, ಮೇಲ್ವಿಚಾರಕರಾದ ರವಿಕುಮಾರ್, ಸೇವಾ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 26ಸಾವಿರ ಸಂಘ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಚಿಕ್ಕನಾಯಕನಹಳ್ಳಿ,ಆ.25 : ಕೇವಲ ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 26ಸಾವಿರ ಸಂಘ ಸ್ಥಾಪಿಸಿ ಹಲವಾರು ಜನರಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿದರ್ೇಶಕ ಪುರುಷೋತ್ತಮ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದ ಗ್ರಾಮ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 1500 ಸಂಘ ಸ್ಥಾಪಿಸಿ ಪಟ್ಟಣದಲ್ಲಿ 180 ಸಂಘವನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸಾಲ ಹಾಗೂ ಅವರಿಗೆ ಆಥರ್ಿಕ ಸಹಾಯವನ್ನು ಯೋಜನೆಯ ವತಿಯಿಂದ ಮಾಡಲಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿದ್ದು ಸವಧರ್ಮ ಸಮಾನತೆಯಿಂದ ಚತರ್ುದಾನವನ್ನು ಕ್ಷೇತ್ರದಲ್ಲಿ ನೀಡಲಾಗುತ್ತಿದೆ ಎಂದರು.ಪುರಸಭಾ ಸದಸ್ಯೆ ಶಾರದ ಶಂಕರ್ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಡಾ.ವೀರೇಂದ್ರಹೆಗ್ಗಡೆರವರು ತಂದಿರುವ ಈ ಯೋಜನೆಯ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ ಅವರು ಸಂಘಟನೆಯ ಪ್ರತಿಯೊಬ್ಬರು ಸಂಘದ ಅಭಿವೃದ್ದಿಗಾಗಿ ಸಂಘದ ಒಗ್ಗಟ್ಟಾಗಿ ಸಂಘದ ಬೆಳವಣಿಗೆಯನ್ನು ಮುಂದುವರಿಸಲು ತಿಳಿಸಿದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಸಹಕಾರ್ಯದಶರ್ಿ ಸಿ.ಬಿ.ಲೋಕೇಶ್, ಮೇಲ್ವಿಚಾರಕರಾದ ರವಿಕುಮಾರ್, ಸೇವಾ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
Wednesday, August 24, 2011
ಅರಸುರವರು ತಂದ ಮೀಸಲಾತಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ದಿ : ಸಿ.ಟಿ.ಮುದ್ದುಕುಮಾರ್ಚಿಕ್ಕನಾಯಕನಹಳ್ಳಿಆ.24: ದೇವಾರಾಜ್ ಅರಸರವರು ಅಂದು ಹಿಂದುಳಿದ ವರ್ಗಗಳ ಪರವಾಗಿ ನಿಂತು ಮೀಸಲಾತಿ ತರದೇ ಹೋಗಿದ್ದರೆ ಈಗಿರುವ ನೌಕರರ ಪೈಕಿ ಶೇ.10 ರಷ್ಟು ಹಿಂದುಳಿದ ಜನಾಂಗದವರು ಸಕರ್ಾರಿ ನೌಕರಿಯನ್ನು ಕಾಣಲಾಗುತ್ತಿರಲಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ. ಮುದ್ದುಕುಮಾರ್ ವಿಶ್ಲೇಷಿಸಿದರು. ಪಟ್ಟಣದ ಹಳ್ಳಿಕಾರ ಬೀದಿ ಸಕರ್ಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಿ.ಬಿ. ಎಸ್. ಅಭಿಮಾನಿ ಬಳಗ ಹಾಗೂ ತಾಲ್ಲೂಕು ಪತ್ರಕರ್ತರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸಕರ್ಾರಿ ಸವಲತ್ತುಗಳು ಸಿಗಬೇಕೆಂಬ ಆಶಯ ಅರಸುರವದಾಗಿತ್ತು ಎಂದರು. ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳು ಸಿಗುತ್ತಿದೆ, ದೇವರಾಜ್ ಅರಸ್ ನಿಗಮವು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಗಮನದಲ್ಲಿಟ್ಟು ಕೊಂಡು ಅವರಿಗೆ ಹೆಚ್ಚಿನ ಒತ್ತು ನೀಡಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು ಈ ಬಗ್ಗೆ ಹೆಚಿನ ಮಾಹಿತಿ ಪಡೆಯಲು ದೇವರಾಜ್ ಅರಸ್ ಅಭಿವೃದ್ಧಿ ನಿಗಮವನ್ನು ಸಂಪಕರ್ಿಸಲು ಕೋರಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಅರಸು ರವರು ತಮ್ಮ ಮಂತ್ರಿ ಮಂಡಲದಲ್ಲಿ ಮಾಜಿ ಶಾಸಕ ದಿ ಎನ್. ಬಸವಯ್ಯನವರನ್ನು ಕರೆದು ಮಂತ್ರಿ ಪದವಿಯನ್ನು ನೀಡಿದ್ದರು. ಅರಸುರವರು ಅಂದು ಬಸವಯ್ಯನರಿಗೆ ಮಂತ್ರಿ ಪದವಿ ಕೊಡದೆ ಇದಿದ್ದರೆ ಸ್ವತಂತ್ರಾ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿಗಿರಿ ಈ ತಾಲ್ಲೂಕಿಗೆ ಇಂದಿನ ವರೆಗೆ ದೊರಕದೆ ಗಗನ ಕುಸುಮವಾಗಿ ಉಳಿದಿರುವುದು ಎಂದರು. ದಿಬಸವಯ್ಯನವರೂ ಅರಸುರವರ ಮೇಲೆ ಅಷ್ಠೇ ನಿಷ್ಠೆಯನ್ನು ಇಟ್ಟಿದ್ದರು ಎಂದರು. ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ. ರೇಣುಕಸ್ವಾಮಿ ಮಾತನಾಡಿ ದೇವರಾಜ್ ಅರಸ್ ರವರನ್ನು ಚಿ.ನಾ.ಹಳ್ಳಿಗೆ ಕರೆಸಿದ್ದ ನಮ್ಮ ಸಂಘ, ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ ಅವಕಾಶ ನಮ್ಮ ಸಂಘಕ್ಕೆ ದೊರೆತಿತ್ತು ಎಂದು ಸ್ಮರಿಸಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ಸಿ ಎಲ್. ದೊಡ್ಡಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಬಿ.ಎಸ್. ಅಭಿಮಾನಿ ಬಳಗದ ಸಂಚಾಲಕ ಸಿ.ಎಸ್.ನಟರಾಜ್ ಕ.ರ. ವೇ. ಅಧ್ಯಕ್ಷ ಸಿ.ಟಿ. ಗುರುಮೂತರ್ಿ ತಾ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ ಹೆಚ್ ಚಿದಾನಂದ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲೆಯ ಬಡ ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.ಶಾಲೆಯ ಮು.ಶಿ. ಜಯಲಕ್ಷ್ಮಮ್ಮ ಸ್ವಾಗತಿಸಿದರೆ ಶಶಿಕಲಾ ನಿರೂಪಿಸಿ ಶಂಷದ್ ಉನ್ನೀಸ್ ವಂದಿಸಿದರು.
ಕೇಂದ್ರ ಸಕರ್ಾರವು ಮಸೂದೆ ಜಾರಿಗೆ ತರುವುದು ಅನಿವಾರ್ಯ : ಎಂ.ವಿ.ನಾಗರಾಜ್ರಾವ್ ಚಿಕ್ನಾಯಕನಹಳ್ಳಿ,ಆ.24: ಜನಲೋಕಪಾಲ್ ಮಸೂಸೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಇಟೀ ಭಾರತದ ಒಂದು ನೂರು ಕೋಟಿ ಜನ ಬೆಂಬಲಿಸಿರುವುದನ್ನು ಕೇಂದ್ರ ಸಕರ್ಾರ ಅರಿತು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು. ಪಟ್ಟಣದ ನೆಹರು ವೃತ್ತದಲ್ಲಿ ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ ಸಂಯುಕ್ತವಾಗಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಚಿತ್ರ ಬಿಡಿಸುವ ಮೂಲಕ ಧರಣಿ ಸತ್ಯಾತಗ್ರಹವನ್ನು ಏರ್ಪಡಿಸಿತ್ತು. ದೇಶದಲೆಲ್ಲಾ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ವೃತ್ತಿ ನಿರತರೂ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು ವಿದ್ಯಾಥರ್ಿಗಳ ಭಾಗವಹಿಸುವಿಕೆ ಉತ್ತಮವಾಗಿದೆ, ನಮ್ಮ ತಾಲ್ಲೂಕಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ನವರು ಭ್ರಷ್ಠಾಚಾರತೆಯನ್ನು ಖಂಡಿಸಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಬರೆದಿರುವ ಚಿತ್ರಗಳು ಮನೋಜ್ಞಾವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರದಿಂದ ಅನುಕೂಲ ಪಡೆಯುವ ಎಲ್ಲರನ್ನೂ ಈ ಕಾಯಿದೆ ಅಡಿ ಸೇರಿಸಬೇಕೆಂದರಲ್ಲದೆ ಇತ್ತೀಚಿಗೆ ಸಕರ್ಾರದಿಂದ ಮಠಗಳು ಪ್ರಯೋಜನ ಪಡೆಯುತ್ತಿದ್ದು ಮಠಾಧೀಶರನ್ನು ಈ ವ್ಯಾಪ್ತಿಗೆ ಒಳಪಡಿಸಬೇಕೆಂದರು. ಕಲಾವಿದ ಸಿದ್ದು ಜಿ.ಕೆರೆ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದ ಮನೆ ಮಾತನಾಡಿದರು.
ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸಿ
ಚಿಕ್ಕನಾಯಕನಹಳ್ಳಿ,ಆ.24 : ಅಧಿಕಾರಿಗಳು ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಿ ಎಂದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಸಲಹೆ ನೀಡಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾ.ವೀರಶೈವ ಸಮಾಜ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಾಸಲು ಗ್ರಾಮದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿ.ಸೌಮ್ಯ ಸುಧಾಕರ್ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ನೊಂದು, ಬೆಂದವರಿಗೆ ಧ್ವನಿಯಾಗಿ ಬದುಕಿ , ವ್ಯಕ್ತಿಗಳಿಗೆ ನಂಬಿಕೆ, ಕರ್ತವ್ಯ ಆತ್ಮವಿಶ್ವಾಸ ಸಮಯ ಪಾಲನೆ, ಪ್ರಾಮಾಣಿಕ ನಿಷ್ಠೆ ಆದರ್ಶಗಳ ಮೂಲಕ ಬಡವರಿಗೆ ತಮ್ಮ ಅಧಿಕಾರದಿಂದ ನೆರವಾದವರು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಧಿಕಾರ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಉನ್ನತದಜರ್ೆಗೆ ಏರಿದ ಸೌಮ್ಯರವರ ಪೋಷಕರು ಹಾಗೂ ಪತಿಯವರ ಪ್ರೋತ್ಸಾಹ ಮೆಚ್ಚುವಂತಹದು, ಶಕ್ತಿ ಇಲ್ಲದ ಹಿಂದುಳಿದವರ ಪೋಷಕರಿಗೆ ರಕ್ಚಣೆ ನೀಡಿದರೆ ಭಗವಂತನ ಸೇವೆ ಮಾಡಿದಂತೆ ಕಷ್ಠ ಇರುವವರು ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ತಮ್ಮ ಬಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಪ್ರಾಮಾಣಿಕತೆ ತೋರ್ಪಡಿಸಬೇಕು ಎಂದರು.
ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸಿ
ಚಿಕ್ಕನಾಯಕನಹಳ್ಳಿ,ಆ.24 : ಅಧಿಕಾರಿಗಳು ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಿ ಎಂದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಸಲಹೆ ನೀಡಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾ.ವೀರಶೈವ ಸಮಾಜ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಾಸಲು ಗ್ರಾಮದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿ.ಸೌಮ್ಯ ಸುಧಾಕರ್ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ನೊಂದು, ಬೆಂದವರಿಗೆ ಧ್ವನಿಯಾಗಿ ಬದುಕಿ , ವ್ಯಕ್ತಿಗಳಿಗೆ ನಂಬಿಕೆ, ಕರ್ತವ್ಯ ಆತ್ಮವಿಶ್ವಾಸ ಸಮಯ ಪಾಲನೆ, ಪ್ರಾಮಾಣಿಕ ನಿಷ್ಠೆ ಆದರ್ಶಗಳ ಮೂಲಕ ಬಡವರಿಗೆ ತಮ್ಮ ಅಧಿಕಾರದಿಂದ ನೆರವಾದವರು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಧಿಕಾರ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಉನ್ನತದಜರ್ೆಗೆ ಏರಿದ ಸೌಮ್ಯರವರ ಪೋಷಕರು ಹಾಗೂ ಪತಿಯವರ ಪ್ರೋತ್ಸಾಹ ಮೆಚ್ಚುವಂತಹದು, ಶಕ್ತಿ ಇಲ್ಲದ ಹಿಂದುಳಿದವರ ಪೋಷಕರಿಗೆ ರಕ್ಚಣೆ ನೀಡಿದರೆ ಭಗವಂತನ ಸೇವೆ ಮಾಡಿದಂತೆ ಕಷ್ಠ ಇರುವವರು ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ತಮ್ಮ ಬಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಪ್ರಾಮಾಣಿಕತೆ ತೋರ್ಪಡಿಸಬೇಕು ಎಂದರು.
Tuesday, August 23, 2011




ಆಥರ್ಿಕವಾಗಿ ಹಿಂದುಳಿದವರಿಗೆ ನೆರವಾಗಲು ಸಿದ್ದವಾಗಿರುವ ಡಿಸಿಸಿ ಬ್ಯಾಂಕ್ಚಿಕ್ಕನಾಯಕನಹಳ್ಳಿ,ಆ.23 :
ಆಥರ್ಿಕವಾಗಿ ಹಿಂದುಳಿದು ಬೇರೆಯವರ ಮನೆಯಲ್ಲಿ ಜೀತಕ್ಕಿರುವ ಬಡವರ್ಗದವರಿಗೆ ಬಡ್ಡಿರಹಿತ ಸಾಲನೀಡುವುದಾಗಿ ಕೆ.ಎನ್.ರಾಜಣ್ಣನವರು ತಿಳಿಸಿರುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು. ಪಟ್ಟಣದ ಮಾರುತಿ ನಗರದಲ್ಲಿ ನಡೆದ ದಿ.ದೇವರಾಜ ಅರಸು ನೆನಪು ದಿನದ ಹಾಗೂ ಸಾಲಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅರಸುರವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ದಾರ್ಶನಿಕರು ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಿಂದುಳಿದ ವರ್ಗವಾದ ದಕ್ಕಲಿಗರು, ಸುಡುಗಾಡು ಸಿದ್ದರು ಇಂತಹ ಜನಾಂಗದ ಅಭಿವೃದ್ದಿಗಾಗಿ ಜಿಲ್ಲಾ ಬ್ಯಾಂಕ್ ಶ್ರಮಿಸುತ್ತಿದೆ ಅಲ್ಲದೆ ಈ ಜನಾಂಗಗಳಿಗೆ ಸಂಘಗಳನ್ನು ರಚಿಸಿ ಸಾಲಸೌಲಭ್ಯ ನೀಡುವ ಮೂಲಕ ಈ ಜನಾಂಗದ ಸಂಘಟನೆಗೆ ಶ್ರಮಿಸುತ್ತಿರುವುದಾಗಿ ಹಾಗೂ ಈ ಜನಾಂಗದಲ್ಲಿ 24 ಕುಟುಂಬಗಳಿದ್ದು 2 ಸಂಘ ರಚಿಸಿ ಕುಟುಂಬಕ್ಕೆ ತಲಾ ಹತ್ತುಸಾವಿರದಂತೆ ನೀಡಿ ಅವರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವದಾಗಿ ತಿಳಿಸಿದ ಅವರು ತಾಲ್ಲೂಕಿನಾದ್ಯಂತ ಸುಮಾರು 6 ಕೋಟಿರೂಗಳಷ್ಠು ಸ್ವಸಹಾಯ ಸಂಘಗಳಿಗೆ ಜಿಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿರುವುದಾಗಿ ತಿಳಿಸಿದರು. ಅಲೆಮಾರಿ ಜನಾಂಗದ ಮುಖಂಡ ಡಾ.ರಘುಪತಿ ಮಾತನಾಡಿ ಭಾರತ ದೇಶದಲೆಲ್ಲಾ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ದೇವರಾಜು ಅರಸುರವರು ಧ್ವನಿ ಇಲ್ಲದ, ಹಿಂದುಳಿದ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದವರು ಎಂದ ಅವರು ಜಿಲ್ಲಾ ಬ್ಯಾಂಕ್ ಅಲೆಮಾರಿ ಮಹಿಳೆಯರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವುದು ಈ ಸಮಾಜದ ಸಂಘಟನೆಯ ಬಲವರ್ಧನೆಗೆ ಮೆಟ್ಟಿಲಾಗಿದ್ದು ಸಂಘಟನೆಯವರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಜ್ಞಾನಾರ್ಜನೆ ಮಾಡುವ ಮೂಲಕ ಸಂಘಟಿಸಬೇಕು ಎಂದರು. ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅಲೆಮಾರಿ ಜನಾಂಗಕ್ಕೆ ಶಾಸಕರು 40 ಮನೆ ನಿಮರ್ಿಸಲು ತಿಳಿಸಿದ್ದು ಮುಂದಿನ ದಿನಗಳಲ್ಲಿ ಅಲೆಮಾರಿ ನಿವೇಶನದ ಮನೆಗಳ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ, ಪುರಸಭಾ ಸದಸ್ಯ ರಾಜು, ಗೋ.ನಿ.ವಸಂತ್ಕುಮಾರ್, ಕೇಶವಮೂತರ್ಿ, ಶಾಮ್ ಮುಂತಾದವರಿದ್ದರು.
Monday, August 22, 2011





ತುತರ್ು ಪರಿಸ್ಥಿತಿ ಬೇಡ, ಜನ ಲೋಕ ಪಾಲ್ ಜಾರಿಯಾಗಲಿ: ಕೆ.ಎಸ್.ಕೆ.ಚಿಕ್ಕನಾಯಕನಹಳ್ಳಿ,ಆ.22 : ಪ್ರತಿಭಟನೆ, ಧರಣಿಗಳನ್ನು ತನ್ನ ಸ್ವತ್ತು ಎನಿಸಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಅಣ್ಣಾ ರವರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಪಕ್ಷದ ದಯಾನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು. ಪಟ್ಟಣದ ನೆಹರು ಸರ್ಕಲ್ನಲ್ಲಿ ಭಾಜಪ ತನ್ನ ಪ್ರತಿಭಟನೆಯನ್ನು ಭಜನೆ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುತರ್ು ಪರಿಸ್ಥಿತಿ ಜಾರಿಗೆ ಬರುವುದು ಬೇಡ, ಜನಲೋಕಪಾಲ ಮಸೂದೆ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿತ್ತಿದೆ ಎಂದರು. ಕೇಂದ್ರ ಸಕರ್ಾರದ ದ್ವಿಮುಖ ನೀತಿಯಿಂದ ಭ್ರಷ್ಠಾಚಾರ ನೀತಿ ಹೆಚ್ಚುತ್ತಿದೆ, ಬಾಬಾರಾಮ್ದೇವ್ರವರು ರಾಮಲೀಲ ಮೈದಾನದಲ್ಲಿ ಭ್ರಷ್ಠಾಚಾರ ನೀತಿ ವಿರೋಧಿಸಿ ಸತ್ಯಾಗ್ರಹ ನಡೆಸಿದಾಗ ಕೇಂದ್ರ ಸಕರ್ಾರ ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತಂದಿದ್ದು, ಅಣ್ಣಾ ಹಜಾರೆ ರವರು ಭ್ರಷ್ಠಾಚಾರ ವಿರೋಧಿಸಲು ಪ್ರತಿಭಟನಾಕಾರರಿಗೆ ಕರೆ ನೀಡಿದ ತಕ್ಷಣ ಕೇಂದ್ರ ಸಕರ್ಾರ ಬಂಧಿಸಿದ್ದು, ದೇಶದಲ್ಲಿ ಅನ್ಯಾಯದ ಕ್ರಾಂತಿ ಮೊಳಗುತ್ತಿದೆ ಎಂದ ಅವರು ಮಸೂದೆ ಜಾರಿಯಾಗುವ ಮೂಲಕ ಪ್ರದಾನಿ, ಪ್ರದಾನಿಯವರ ಕಾಯರ್ಾಲಯಮ, ನ್ಯಾಯಮೂತರ್ಿಗಳು ಸೇರಿದಂತೆ ಪ್ರತಿಯೊಬ್ಬರನ್ನೂ ಕಾನೂನಿನ ಕಾಯ್ದೆ ಒಳಗೆ ಬರುವಂತೆ ಒತ್ತಾಯಿಸುತ್ತಿದ್ದೇವೆ ಈ ಮೂಲಕ ಕೇಂದ್ರ ಸಕರ್ಾರ ಮಸೂದೆ ಜಾರಿಯಾಗಲು ಸ್ಪಂದಿಸಬೇಕು ಇಲ್ಲವಾದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸತ್ಯಾಗ್ರಹದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮ್ಯಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಕಾರ್ಯದಶರ್ಿ ಹಳೆಮನೆ ಸುರೇಶ್, ಪಕ್ಷದ ಕಾರ್ಯಕರ್ತರಾದ ಮೈಸೂರಪ್ಪ, ವಿ.ಆರ್.ಮೇರುನಾಥ್, ಶ್ರೀನಿವಾಸಮೂತರ್ಿ, ಶರತ್ ಕುಮಾರ್ ಲಕ್ಷ್ಮಯ್ಯ, ಈಶ್ವರ್ಭಾಗವತ್, ಹನುಮಂತಪ್ಪ, ವಸಂತಯ್ಯ, ಮಮತ ಮುಂತಾದವರಿದ್ದರು.
ಅಂದು ಅರಸು ತೆಗೆದುಕೊಂಡ ನಿಧರ್ಾರಗಳಿಂದ ಇಂದಿಗೂ ಅವರು ಅಜರಾಮರಚಿಕ್ಕನಾಯಕನಹಳ್ಳಿ,ಆ.22: ಇಂದಿರಾ ಗಾಂಧಿಯವರ 20 ಅಂಶಗಳ ಯಶಸ್ವಿ ಅನುಷ್ಠಾನ, ಭಾಗ್ಯಜ್ಯೋತಿ, ಮಲ ಹೊರುವ ಪದ್ದತಿ ರದ್ದು ಸೇರಿದಂತೆ ಬಡವರ ಏಳಿಗೆಗೆ, ತುಳಿತಕ್ಕೆ ಒಳಗಾದ ಜನರಿಗೆ ನೇರವಾಗಿ ನೆರವಾದ ಧೀಮಂತ ನಾಯಕ ದೇವರಾಜ್ ಅರಸು ರವರು ಅಜರಾಮರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂದನಕೆರೆ ಹೋಬಳಿ ಸೈಯದ್ ಸಾಬ್ ಪಾಳ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ರವರು ಉಳ್ಳವರ ಹಾಗೂ ಮೇಲ್ವರ್ಗಗಳ ವಿರೋಧ ಕಟ್ಟಿಕೊಂಡರು ಅಂಜದೇ ಅಂದು ತೆಗೆದುಕೊಂಡ ನಿಧರ್ಾರಗಳಿಂದಾಗಿ ಇಂದು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶತಮಾನಗಳಿಂದ ಸಮಾಜದಿಂದ ತುಳಿತಕ್ಕೆ ಒಳಗಾದ ಜನರು ಇಂದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರಲ್ಲದೆ, ಇಂದಿರಾಗಾಂಧಿಯವರು ಘೋಷಿಸಿದ 20 ಅಂಶಗಳ ಕಾರ್ಯಕ್ರಮವನ್ನು ಅರಸು ರವರು ಯಶಸ್ವಿಯಾಗಿ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು ಎಂದರು. ಇಂತಹ ನಾಯಕನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ನಮ್ಮ ವೇದಿಕೆ 1988 ರಿಂದಲೂ ಅರಸು ರವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ, ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. ಅರಸು ರವರಿಗೆ ನುಡಿ ನಮನ ಸಲ್ಲಿಸಿದ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಅರಸು ರವರು ತಮ್ಮ 21ನೇ ವರ್ಷದಲ್ಲಿ ಎಂ.ಎಲ್.ಎ ಆಗಿದ್ದಲ್ಲದೆ, ಒಮ್ಮೆ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತನ್ನ ಜನಪ್ರಿಯತೆಯನ್ನು ಇಡೀ ದೇಶಕ್ಕೆ ತಿಳಿಸಿದರು ಎಂದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅವರು ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ರಾಜಕೀಯದ ಕನಸನ್ನು ಕಾಣದ ಹಲವು ಜನಪರ ವ್ಯಕ್ತಿಗಳನ್ನು ಅಧಿಕಾರಕ್ಕೆ ತರುವ ಮೂಲಕ ತನ್ನ ಪ್ರಭಾವವನ್ನು ಬೆಳಿಸಿಕೊಂಡಿದ್ದಲ್ಲದೆ, ಯುವ ಸಮೂಹವನ್ನು ಮುಖ್ಯವಾಹಿನಿಗೆ ತಂದರು ಅವರು ಅಂದು ಬೆಳೆಸಿದ ಕುಡಿಗಳು ಇಂದಿಗೂ ಸಂಸತ್ತು, ವಿಧಾನ ಸಭೆಗಳಲ್ಲಿ ದೊಡ್ಡ ಶಕ್ತಿಯಾಗಿ ಕಾಣಸಿಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಹಂದನಕೆರೆ ಜಿ.ಪಂ.ಸದಸ್ಯ ಜಾನಮ್ಮ ರಾಮಚಂದ್ರಯ್ಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು, ತಾ.ಪಂ.ಸದಸ್ಯ ನಿರಂಜನಮೂತರ್ಿ, ತಾಲೂಕು ಅರಸು ಸಮಾಜದ ಅಧ್ಯಕ್ಷ ನಾಗರಾಜ್ ಅರಸ್, ಮತ್ತಿಘಟ್ಟ ಗ್ರಾ.ಪ. ಅಧ್ಯಕ್ಷ ಎಂ.ಎಸ್.ಉಮೇಶ್, ಗ್ರಾ.ಪಂ.ಸದಸ್ಯ ಸಿದ್ದರಾಮಯ್ಯ, ಉಪನ್ಯಾಸಕ ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾ.ಪಂ. ಸದಸ್ಯ ತಾತಯ್ಯ, ಶಿವಲಿಂಗಯ್ಯ, ಮಹಬೂಬ್ ಸಾಬ್, ನಿಂಗರಾಜ್, ಲಕ್ಷ್ಮಣ್, ಮನ್ಸೂರ್ ಪಾಷ, ರಾಮಚಂದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶಿವಮ್ಮ ಪ್ರಾಥರ್ಿಸಿದರೆ, ಗಾಂಧಿನಗರ ಅನಂತು ಸ್ವಾಗತಿಸಿ, ಶಿಕ್ಷಕ ಎ.ಸೋಮಶೇಖರ್ ನಿರೂಪಿಸಿ ಶಿಕ್ಷಕ ನಾಗರಾಜ್ ವಂದಿಸಿದರು.
ಅಂದು ಅರಸು ತೆಗೆದುಕೊಂಡ ನಿಧರ್ಾರಗಳಿಂದ ಇಂದಿಗೂ ಅವರು ಅಜರಾಮರಚಿಕ್ಕನಾಯಕನಹಳ್ಳಿ,ಆ.22: ಇಂದಿರಾ ಗಾಂಧಿಯವರ 20 ಅಂಶಗಳ ಯಶಸ್ವಿ ಅನುಷ್ಠಾನ, ಭಾಗ್ಯಜ್ಯೋತಿ, ಮಲ ಹೊರುವ ಪದ್ದತಿ ರದ್ದು ಸೇರಿದಂತೆ ಬಡವರ ಏಳಿಗೆಗೆ, ತುಳಿತಕ್ಕೆ ಒಳಗಾದ ಜನರಿಗೆ ನೇರವಾಗಿ ನೆರವಾದ ಧೀಮಂತ ನಾಯಕ ದೇವರಾಜ್ ಅರಸು ರವರು ಅಜರಾಮರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂದನಕೆರೆ ಹೋಬಳಿ ಸೈಯದ್ ಸಾಬ್ ಪಾಳ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ರವರು ಉಳ್ಳವರ ಹಾಗೂ ಮೇಲ್ವರ್ಗಗಳ ವಿರೋಧ ಕಟ್ಟಿಕೊಂಡರು ಅಂಜದೇ ಅಂದು ತೆಗೆದುಕೊಂಡ ನಿಧರ್ಾರಗಳಿಂದಾಗಿ ಇಂದು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶತಮಾನಗಳಿಂದ ಸಮಾಜದಿಂದ ತುಳಿತಕ್ಕೆ ಒಳಗಾದ ಜನರು ಇಂದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರಲ್ಲದೆ, ಇಂದಿರಾಗಾಂಧಿಯವರು ಘೋಷಿಸಿದ 20 ಅಂಶಗಳ ಕಾರ್ಯಕ್ರಮವನ್ನು ಅರಸು ರವರು ಯಶಸ್ವಿಯಾಗಿ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು ಎಂದರು. ಇಂತಹ ನಾಯಕನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ನಮ್ಮ ವೇದಿಕೆ 1988 ರಿಂದಲೂ ಅರಸು ರವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ, ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. ಅರಸು ರವರಿಗೆ ನುಡಿ ನಮನ ಸಲ್ಲಿಸಿದ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಅರಸು ರವರು ತಮ್ಮ 21ನೇ ವರ್ಷದಲ್ಲಿ ಎಂ.ಎಲ್.ಎ ಆಗಿದ್ದಲ್ಲದೆ, ಒಮ್ಮೆ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತನ್ನ ಜನಪ್ರಿಯತೆಯನ್ನು ಇಡೀ ದೇಶಕ್ಕೆ ತಿಳಿಸಿದರು ಎಂದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅವರು ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ರಾಜಕೀಯದ ಕನಸನ್ನು ಕಾಣದ ಹಲವು ಜನಪರ ವ್ಯಕ್ತಿಗಳನ್ನು ಅಧಿಕಾರಕ್ಕೆ ತರುವ ಮೂಲಕ ತನ್ನ ಪ್ರಭಾವವನ್ನು ಬೆಳಿಸಿಕೊಂಡಿದ್ದಲ್ಲದೆ, ಯುವ ಸಮೂಹವನ್ನು ಮುಖ್ಯವಾಹಿನಿಗೆ ತಂದರು ಅವರು ಅಂದು ಬೆಳೆಸಿದ ಕುಡಿಗಳು ಇಂದಿಗೂ ಸಂಸತ್ತು, ವಿಧಾನ ಸಭೆಗಳಲ್ಲಿ ದೊಡ್ಡ ಶಕ್ತಿಯಾಗಿ ಕಾಣಸಿಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಹಂದನಕೆರೆ ಜಿ.ಪಂ.ಸದಸ್ಯ ಜಾನಮ್ಮ ರಾಮಚಂದ್ರಯ್ಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು, ತಾ.ಪಂ.ಸದಸ್ಯ ನಿರಂಜನಮೂತರ್ಿ, ತಾಲೂಕು ಅರಸು ಸಮಾಜದ ಅಧ್ಯಕ್ಷ ನಾಗರಾಜ್ ಅರಸ್, ಮತ್ತಿಘಟ್ಟ ಗ್ರಾ.ಪ. ಅಧ್ಯಕ್ಷ ಎಂ.ಎಸ್.ಉಮೇಶ್, ಗ್ರಾ.ಪಂ.ಸದಸ್ಯ ಸಿದ್ದರಾಮಯ್ಯ, ಉಪನ್ಯಾಸಕ ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾ.ಪಂ. ಸದಸ್ಯ ತಾತಯ್ಯ, ಶಿವಲಿಂಗಯ್ಯ, ಮಹಬೂಬ್ ಸಾಬ್, ನಿಂಗರಾಜ್, ಲಕ್ಷ್ಮಣ್, ಮನ್ಸೂರ್ ಪಾಷ, ರಾಮಚಂದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶಿವಮ್ಮ ಪ್ರಾಥರ್ಿಸಿದರೆ, ಗಾಂಧಿನಗರ ಅನಂತು ಸ್ವಾಗತಿಸಿ, ಶಿಕ್ಷಕ ಎ.ಸೋಮಶೇಖರ್ ನಿರೂಪಿಸಿ ಶಿಕ್ಷಕ ನಾಗರಾಜ್ ವಂದಿಸಿದರು.
Thursday, August 18, 2011



ಡಿ.ದೇವರಾಜು ಅರಸು ರವರ 96ನೇ ಜಯಂತಿ ಸಂಭ್ರಮೋತ್ಸವಚಿಕ್ಕನಾಯಕನಹಳ್ಳಿ,
ಆ.18 : ಡಿ.ದೇವರಾಜು ಅರಸು ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಇದೇ 20ರ ಶನಿವಾರ ಬೆಳಗ್ಗೆ 11 ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ತಾಲ್ಲೂಕಿನ ಹಂದನಕೆರೆ ಹೋಬಳಿ ಸೈಯದ್ಸಾಬ್ಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಉದ್ಘಾಟನೆ ನೆರವೇರಿಸಲಿದ್ದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ನುಡಿನಮನಗಳನ್ನಾಡಲಿದ್ದು ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯ ನಿರಂಜನಮೂತರ್ಿ ಸಮವಸ್ತ್ರ ವಿತರಣೆ ಮಾಡಲಿದ್ದು ತಾ.ಕಸಾಪ ಪ್ರಧಾನ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ , ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಪುಸ್ತಕ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಎಂ.ಎಸ್.ಮಹೇಶ್, ಸದಸ್ಯ ಸಿದ್ದರಾಮಯ್ಯ, ವಿಶ್ವಕರ್ಮ ಸಮಾಜದ ಯುವಮುಖಂಡ ಶ್ರೀಧರಚಾರ್, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಗ್ರಾ.ಪಂ.ಸದಸ್ಯರಾದ ತಾತಯ್ಯ, ಪರಮೇಶ್, ಅರಸು ಸಮಾಜದ ಅಧ್ಯಕ್ಷ ನಾಗರಾಜರಸು, ಶಿವಲಿಂಗಯ್ಯ, ಮಹಬೂಬ್ಸಾಬ್, ಹನುಮಂತಯ್ಯ, ಆನಂದ್ ಉಪಸ್ಥಿತರಿರುವರು.
ಮುಂದುವರೆದ ಅಣ್ಣಾ ಹಜಾರೆರವರ ಬೆಂಬಲಿಗರ ಹೋರಾಟಚಿಕ್ಕನಾಯಕನಹಳ್ಳಿ,ಆ.18 :
ಕೇಂದ್ರ ಸಕರ್ಾರ ಅಣ್ಣಾ ಹಜಾರೆರವರಿಗೆ ಉಪವಾಸ ಸತ್ಯಾಗ್ರಹ ಮಾಡಲು ಅವಕಾಶ ನೀಡದಿರುವುದು ಖಂಡನೀಯವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ ಎಂದು ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಖಂಡಿಸಿದರು.ಪಟ್ಟಣದಲ್ಲಿ ಜನಪರ ವೇದಿಕೆ, ಕುಂಚಾಂಕುರ ಕಲಾ ಸಂಘ, ದಿವ್ಯಜ್ಯೋತಿ ಕಲಾ ಸಂಘ, ಕರವೇ ಸಂಘಗಳು ಅಣ್ಣಾ ಹಜಾರೆರವರ ಬಂಧನ ವಿರೋಧಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾಥರ್ಿಗಳೊಂದಿಗೆ ಸೈಕಲ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲಾ ಪಕ್ಷಗಳಲ್ಲಿ ಭ್ರಷ್ಠರಿದ್ದು ಜನಲೋಕ ಪಾಲ ಮಸೂದೆ ಜಾರಿಗೆ ಬಂದರೆ ಭ್ರಷ್ಠಚಾರವನ್ನು ರಾಷ್ಟ್ರಮಟ್ಟದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಇಲ್ಲದಿದ್ದರೆ ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿ ಬಡವರು ಬಡವರಾಗಿಯೇ ಉಳಿಯುತ್ತಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂಚಾಂಕುರ ಕಲಾ ಸಂಘದ ಸಿ.ಹೆಚ್.ಗಂಗಾಧರ್, ಕರವೇ ನಿಂಗರಾಜು, ಸುರೇಶ್ಸಾಲ್ಕಟ್ಟೆ, ಮನ್ಸೂರ್ಪಾಷ ಮುಂತಾದವರು ಭಾಗವಹಿಸಿದ್ದರು.
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು, ಏಜನ್ಸಿಯವರುಚಿಕ್ಕನಾಯಕನಹಳ್ಳಿ,ಆ.18 :
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು, ಏಜನ್ಸಿಯವರುಚಿಕ್ಕನಾಯಕನಹಳ್ಳಿ,ಆ.18 :
el.ಪಿ.ಜೆ ಗ್ಯಾಸ್ ವಿತರಣೆಯ ವ್ಯವಸ್ಥೆಯು ಸಮಪರ್ಕವಾಗಿಲ್ಲ, ಜನಸಾಮಾನ್ಯರು ಗ್ಯಾಸ್ ಮುಗಿದು ತಿಂಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ತಕ್ಷಣ ನೀಡದೆ, ಮುಂಚಿತವಾಗಿಯೇ ಗ್ಯಾಸ್ ಬುಕ್ ಮಾಡಿ 15ದಿನ ಕಳೆದು ಬನ್ನಿ ಎಂಬ ಬೇಜಾವಬ್ದಾರಿ ಸಬೂಬನ್ನು ಏಜನ್ಸಿಯವರು ನೀಡುತ್ತಾರೆಂದು ತಾ.ಪಂ.ಸದಸ್ಯ ಶಶಿಧರ್ ಆರೋಪಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಏಜನ್ಸಿಯವರು ಸಾಮಾನ್ಯ ಜನರಿಗೆ ಗ್ಯಾಸ್ ನೀಡಲು ಬೇಜಾವಬ್ದಾರಿತನ ತೋರುವುದಲ್ಲದೆ ಅವರೇ ಸುಪ್ರೀಂನಂತೆ ವತರ್ಿಸುತ್ತಾರೆ ಎಂದರು.ಆರೋಪಿಸುತ್ತಾ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚಚರ್ಿಸಿದ ಅವರು ಹೊನ್ನೆಬಾಗಿ ತಾಲ್ಲೂಕು ಪಂಚಾಯಿತಿ ಮೇಲನಹಳ್ಳಿ ವ್ಯಾಪ್ತಿಗೆ ಸೇರಿದ ಮಸಾಲ್ತಿಗುಡ್ಲು, ಕರಿಯಪ್ಪನಗುಡ್ಲು ಗ್ರಾಮಗಳಿಗೆ ನಗರದ ಕೊಳಚೆ ನೀರು ಹರಿದು ಅಲ್ಲಿನ ತೋಟಗಳ ಮೂಲಕ ಕೊಳವೆಬಾವಿಗಳಿಂದ ಕುಡಿಯುವ ನೀರಿಗೆ ಸೇರಿಕೊಂಡು ಇಲ್ಲದ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ, ಇದೇ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿವೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ತಮಗೆ ಸಂಬಂಧಿಸಿಲ್ಲವೆಂದು ಇಲಾಖೆಯಿಂದ ಇಲಾಖೆಗೆ ದೂರು ನೀಡಿದ ಗ್ರಾಮಸ್ಥರನ್ನು ತಿರುಗಿಸುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು. ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೇ ಖುದ್ದು ಸಭೆಗೆ ಅಭಿವೃದ್ದಿ ಬಗ್ಗೆ ಮಾಹಿತಿ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ ತಾ.ಪಂ.ಸಭೆಗೆ ಕರೆದರೂ ಸರಿಯಾಗಿ ಬರುವುದಿಲ್ಲ ಎಂದು ತಾ.ಪಂ.ಸದಸ್ಯರಾದ ನಿರಂಜನ್, ಜಗದೀಶ್ ಆರೋಪಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಪಂಚಾಯಿತಿಯ ಸದಸ್ಯರು ಸವರ್ಾನುಮತದಿಂದ ತಾಲ್ಲೂಕು ಪತ್ರಕರ್ತರ ಭವನ ನಿಮರ್ಾಣಕ್ಕೆ ಹಳೆಯ ಪ್ರವಾಸಿ ಮಂದಿರದ ಪಕ್ಕದಲ್ಲಿ ನಿವೇಶನ ನೀಡಲು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್, ಹಾಗೂ ತಾ.ಪಂ.ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರುಗಳು, ಇಲಾಖಾಧಿಕಾರಿಗಳು ಹಾಜರಿದ್ದರು.
Wednesday, August 17, 2011
ಅಣ್ಣಾ ಹಜಾರೆ ಬಂಧನ ವಿರೋಧಿಸಿ ಬೀದಿಗಳಿದ ನಾನಾ ಸಂಘಟನೆಗಳು ್ಡ ವಕೀಲರ ಸಂಘ, ಬಿ.ಜೆ.ಪಿ, ಎ.ಬಿ.ವಿ.ಪಿ. ಕರವೇ, ದಿವ್ಯಜ್ಯೋತಿ ಕಲಾ ಸಂಘ, ಕುಂಚಾಕುರ ಸಂಘ, ಜನಪರ ವೇದಿಕೆಯ ಬೆಂಬಲ್ಡ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ ವಕೀಲರ ಸಂಘ್ಡ ಉಪವಾಸ ಕುಳಿತ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ (ಮಿಲ್ಟ್ರಿ)ಚಿಕ್ಕನಾಯಕನಹಳ್ಳಿ,ಆ.17 : ಅಣ್ಣಾ ಹಜಾರೆರವರು ಒತ್ತಾಯಿಸಿರುವಂತೆ ಪ್ರಧಾನಿಗಳು ಸೇರುವಂತಹ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಕರ್ಾರ ಹಜಾರೆರವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು.ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ, ವಕೀಲರ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ರಕ್ಷಣಾ ವೇದಿಕೆ ಹಾಗೂ ಭಾಜಾಪ ಪಕ್ಷದ ಮುಖಂಡರುಗಳು ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ಸಕರ್ಾರದ ವಿರುದ್ದ ಘೋಷಣೆಗಳನ್ನು ಕೂಗಿದರು.ವಕೀಲರ ಸಂಘ ನ್ಯಾಯಾಲಯ ಕಲಾಪವನ್ನು ಸ್ಥಗಿತಗೊಳಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿತು ಈ ಸಂದರ್ಭದಲ್ಲಿ ವಕೀಲ ಎಂ. ಮಹಾಲಿಂಗಯ್ಯ ಮಾತನಾಡಿ, ಮಹಾತ್ಮ ಗಾಂಧಿ ನಂತರ ದೇಶದ ಜನತೆಗೆ ಒಳ್ಳೆಯ ನಾಯಕತ್ವ ಅಣ್ಣಾ ಹಜಾರೆರವರಿಂದ ದೊರತಿದೆ, ಅವರು 2ನೇ ಗಾಂಧಿಯಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ ಇದಕ್ಕೆ ದೇಶದ ಎಲ್ಲಾ ಜನತೆಯ ಬೆಂಬಲ ಅವರಿಗೆ ಬೇಕು ಎಂದು ತಿಳಿಸಿದರು. ವಕೀಲ ಬಿ.ಕೆ.ಸದಾಶಿವಯ್ಯ ಮಾತನಾಡಿ ಎಲ್ಲಾ ರಾಜಕಾರಣಿಗಳು ಭ್ರಷ್ಠಾಚಾರದಲ್ಲಿ ಭಾಗಿಯಾಗಿದ್ದಾರೆ, ಇವರ ವಿರುದ್ದ ಸಿಡಿದೆದ್ದು ಶಾಂತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಹಜಾರೆರವರ ಬಂಧನ ಕ್ರೂರವಾಗಿದೆ ಎಂದು ತಿಳಿಸಿದ ಅವರು ಅಣ್ಣಾರವರು ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ದೇಶದ ಎಲ್ಲಾ ಸಂಘ ಸಂಸ್ಥೆಗಳು ಅಣ್ಣಾರವರಿಗೆ ಬೆಂಬಲಿಸಬೇಕು ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಸಕರ್ಾರಕ್ಕೆ ಮನವಿ ಪತ್ರವನ್ನು ಅಪರ್ಿಸಿದರು, ಶಿರಸ್ತೆದ್ದಾರ್ ಬೊಮ್ಮಣ್ಣ ಮನವಿ ಪತ್ರ ಸ್ವೀಕರಿಸಿದರು. ಅಣ್ಣಾ ಹೋರಾಟ ಬೆಂಬಲಿಸಿ ಉಪವಾಸ: ಸಂಕೇತಕವಾಗಿ ಒಂದು ದಿನ ಉಪವಾಸ ಕುಳಿತಿರುವ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ ಮಾತನಾಡಿ, ಅಣ್ಣಾರವರ ಜೊತೆ ಕೋಟ್ಯಂತರ ಭಾರತೀಯರು ಜನಲೋಕಪಾಲ ಮಸೂದೆ ಜಾರಿಯಾಗುವಂತೆ ಕೇಂದ್ರ ಸಕರ್ಾರದ ಮೇಲೆ ಒತ್ತಡ ಹೇರುತ್ತಿದ್ದು ಜನ ಲೋಕಪಾಲ ಮಸೂದೆ ಜಾರಿಯಾಗುವವರೆಗೆ ಎಲ್ಲಾ ಸಂಘಟನೆಗಳು ಭಾಗಿಯಾಗುವ ಮೂಲಕ ಅಣ್ಣಾ ರವರ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ಅಭಾವಿಪ ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಅಣ್ಣಾ ಹಜಾರೆ ಬಂಧನ ಮಾಡಿರುವ ಸಕರ್ಾರಕ್ಕೆ ದೇಶ ಹಾಳುವ ನೈತಿಕ ಹಕ್ಕಿಲ್ಲ, ಸ್ವಾತಂತ್ರ ಪೂರ್ವದಲ್ಲಿ ವಿದೇಶಿಗರೂ ದೇಶದ ಸಂಪತ್ತನ್ನು ಲೂಟಿ ಮಾಡಿದರು ಇಂದು ನಮ್ಮ ದೇಶದ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣ ಲೂಟಿ ಮಾಡಿ ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ ಇವುಗಳನ್ನೆಲ್ಲ ದೇಶಕ್ಕೆ ಹಿಂತಿರುಗಿಸಬೇಕು ಎಂದರು. ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭ್ರಷ್ಠ ಅಧಿಕಾರಿ, ಭ್ರಷ್ಠ ರಾಜಕಾರಣಿಗಳು ಇರಬೇಕಾದ ತಿಹಾರ್ ಜೈಲಿನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆರವರನ್ನು ಬಂದಿಸಿರುವುದು ಖಂಡನೀಯವಾಗಿದ್ದು ಹಜಾರೆರವರ ಜನಲೋಕಪಾಲ್ ಮಸೂದೆ ಜಾರಿಗೆ ತರಲು ನಾವೆಲ್ಲ ಜೊತೆಯಾಗಿರುತ್ತೇವೆ ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ವಕೀಲರಾದ ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ವೀವೇಕಾನಂದಸ್ವಾಮಿ, ಕೆ.ಆರ್.ಚನ್ನಬಸಪ್ಪ, ವೆಂಕಟೇಶ್, ರಾಜಶೇಖರ್, ಜ್ಞಾನಮೂತರ್ಿ, ಭಾಜಪ ಮುಖಂಡರಾದ ಶ್ರೀನಿವಾಸಮೂತರ್ಿ, ರವಿಕುಮಾರ್, ಬರಗೂರು ಬಸವರಾಜು, ಕುಂಚಾಕುರ ಕಲಾ ಸಂಘದ ಸಿ.ಎಚ್. ಗಂಗಾಧರ್, ಅಭಾವಿಪ ಕಾರ್ಯಕರ್ತರಾದ ರಾಕೇಶ್, ಮನು, ರವೀಂದ್ರ, ಮಧು, ಉಮೇಶ್, ನಂದನ್, ಗುರು ಮುಂತಾದವರಿದ್ದರು.
ಕ್ರೀಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲವು ಮುಖ್ಯಚಿಕ್ಕನಾಯಕನಹಳ್ಳಿ,ಆ.17 : ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಅದರ ಬಗ್ಗೆ ಗಮನಿಸದೆ ಎದುರಾಳಿ ಸ್ಪಧರ್ಿ ಜೊತೆಗೆ ಒಡನಾಡಿಯಾಗಬೇಕು ಹಾಗೂ ಆಟದಲ್ಲಿ ಯಾವುದೇ ಅನ್ಯಾಯವಾದರೆ ಆ ಕ್ಷಣದಲ್ಲಿಯೇ ನ್ಯಾಯ ಸಮಿತಿಯಲ್ಲಿ ಅಫೀಲ್ ಮಾಡಿಕೊಳ್ಳಿ ಎಂದು ಬಿ.ಇ.ಓ. ಸಾ.ಚಿ.ನಾಗೇಶ್ ಸಲಹೆ ನೀಡಿದರು.ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸ್ಪಧರ್ೆ ಆರೋಗ್ಯಕರವಾಗಿರ ಬೇಕೆಂದರಲ್ಲದೆ, ಸ್ಪಧರ್ೆಗಳು ನಡೆಯುವಾಗ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡಬಾರದು, ಈ ಬಗ್ಗೆ ಟೀಂ ಮ್ಯಾನೇಜರ್ ನೇರ ಹೊಣೆಯಾಗುತ್ತಾರೆ ಎಂದರು.ಸಾಹಿತಿ ಆರ್.ಬಸವರಾಜು ಮಾತನಾಡಿ ಕ್ರಿಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲ ಮುಖ್ಯವಾಗಿದೆ ಎಂದರು. ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಶಾರೀರವಾಗಿ ಹಾಗೂ ದೈಹಿಕವಾಗಿ ಸದೃಡರಾಗಬೇಕು ಅವರು ವ್ಯಾಯಾಮದ ಮೂಲಕ ದೇಹವನ್ನು ಗಟ್ಟಿಗೊಳಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲ ಹೊಂದಬೇಕು ಎಂದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ವಿದ್ಯಾರ್ಜನೆ ಜೊತೆಗೆ ಮಕ್ಕಳಿಗೆ ಕ್ರೀಡಾ ಸ್ಪೂತರ್ಿಯನ್ನು ಪೋಷಕರು ಬೆಳೆಸಬೇಕು, ಅವರಿಗೆ ಕ್ರೀಡೆಯ ಮೂಲಕ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಮಕ್ಕಳಿಗೆ ಬುದ್ದಿಶಕ್ತಿ ಜೊತೆಗೆ ದೈಹಿಕ ಶ್ರಮ ಮುಖ್ಯಾವಾಗಿದೆ ಇದರಿಂದ ಗೆಲುವು ಸಾಧಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪ್ರತಿಭೆಗಳು ಬೆಳೆಯಲಿ ಎಂದ ಆಶಿಸಿದರು. ಇ.ಓ ಎನ್.ಎಂ.ದಯಾನಂದ್, ಇ.ಸಿ.ಓ ಮರುಳಾನಾಯ್ಕ, ಶಿಕ್ಷಕರ ಸಂಘದ ಕಾರ್ಯದಶರ್ಿ ಶಶಿಧರ್ ಉಪಸ್ಥಿತರಿದ್ದರು.
Tuesday, August 16, 2011


ಸೆ.17ರಂದು ಚಿ.ನಾ.ಹಳ್ಳಿ ತಾ.4ನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಆ.16 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಟಂಬರ್ 17ರ ಶನಿವಾರದಂದು ಪಟ್ಟಣದಲ್ಲಿ ನಡೆಸಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.ಇತ್ತೀಚಿಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮತಿಯಲ್ಲಿ ಸಂತ ಜೋಸೆಫರ ಕಾಲೇಜು ಬೆಂಗಳೂರಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಿದ್ದು ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಾನ ಪ್ರಭುತ್ವವುಳ್ಳವರಾಗಿದ್ದು ಎರಡೂ ಭಾಷೆಯಲ್ಲಿ ಸುಮಾರು 26 ಕೃತಿಗಳನ್ನು ರಚಿಸಿದ್ದಾರೆ. ಕವಿ ಹೃದಯದ ದಯಾನಂದರವರು 10 ಕವನ ಸಂಕಲನಗಳಲ್ಲದೆ, ಅನುವಾದ ಮತ್ತು ಮೂಲ ಜೀವನ ಚಿತ್ರಣವನ್ನು ರಚಿಸಿ ಖ್ಯಾತರಾಗಿದ್ದು ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮೇಜರ್ ಡಿ.ಚಂದ್ರಪ್ಪರವರು ಉಪಸ್ಥಿತರಿದ್ದು ಇವರನ್ನು ಆಯ್ಕೆಗೆ ಅನುಮೋದಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,ಆ.16 : ರಾಷ್ಟ್ರದ ಮುಂದಿರುವ ಸವಾಲುಗಳನ್ನು ಎದುರಿಸುವಲ್ಲಿ ಸತ್ಯ ಅಹಿಂಸೆ ಮತ್ತು ನ್ಯಾಯ ಪ್ರತಿಪಾದಿಸಬೇಕೆಂದು ಪ್ರೊ.ಸಿ.ಚನ್ನಬಸಪ್ಪ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇನಲ್ಲಿ 64ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಪ್ರಾಂಶುಪಾಲ ಕೆ.ಸಿ.ಬಸಪ್ಪರವರು ಮಾತನಾಡಿ ಸ್ವಾತಂತ್ರದ ಅಗತ್ಯತೆ ಮತ್ತು ಅದರ ಪ್ರಭಾವವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದಿಂದ ವಿದ್ಯಾಥರ್ಿಗಳು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಕಾರ್ಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಸಿ.ಚನ್ನಬಸಪ್ಪ, ಡಿ.ಎಸ್.ಲೋಕೇಶ್ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.
Monday, August 15, 2011


ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆ ಸಮಾರಂಭಚಿಕ್ಕನಾಯಕನಹಳ್ಳಿ,ಆ.15 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 18ರ ಗುರುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣ ವಿವೇಕಾನಂದಾಶ್ರಮದ ಮುಖ್ಯಸ್ಥರಾದ ವೀರೇಶಾನಂದ ಸರಸ್ವತಿ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ(ಮೈನ್ಸ್) ಆಗಮಿಸುವರು.ಈ ಸಂದರ್ಭದಲ್ಲಿ ಪಾಂಡವಪುರ ವಿಜ್ಞಾನ ಕೇಂದ್ರದ ಜೆ.ಬಿ.ಸಂತೋಷ್ಕುಮಾರ್ ಪವಾಡ ರಹಸ್ಯ ಬಯಲು ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.15 : ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಡಶಾಲೆಗಳ ಕ್ರೀಡಾಕೂಟ ಸಮಾರಂಭವನ್ನು ಇದೇ 17 ಮತ್ತು 18 ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣ ಹಾಗೂ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದು ಇ.ಓ ಎನ್.ಎಂ.ದಯಾನಂದ್ ವಂದನಾ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾ.ಶಿ.ಇ ಉಪನಿದರ್ೇಶಕ ಬಿ.ಮೋಹನ್ಕುಮಾರ್, ಜಿ.ಪಂ.ಸದಸ್ಯರಾದ ಮಂಜುಳ ಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾರಂಗಸ್ವಾಮಿ, ನಿಂಗಮ್ಮರಾಮಯ್ಯ, ಎಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತಿಮ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಪ್ರೌ,ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಸಿ.ಪಿ.ಐ ಕೆ.ಪ್ರಭಾಕರ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಶೋಭಾ ಸಿ.ಬಸವರಾಜು, ಉಪಸ್ಥಿತರಿರುವರು.
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.15 : ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಡಶಾಲೆಗಳ ಕ್ರೀಡಾಕೂಟ ಸಮಾರಂಭವನ್ನು ಇದೇ 17 ಮತ್ತು 18 ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣ ಹಾಗೂ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದು ಇ.ಓ ಎನ್.ಎಂ.ದಯಾನಂದ್ ವಂದನಾ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾ.ಶಿ.ಇ ಉಪನಿದರ್ೇಶಕ ಬಿ.ಮೋಹನ್ಕುಮಾರ್, ಜಿ.ಪಂ.ಸದಸ್ಯರಾದ ಮಂಜುಳ ಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾರಂಗಸ್ವಾಮಿ, ನಿಂಗಮ್ಮರಾಮಯ್ಯ, ಎಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತಿಮ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಪ್ರೌ,ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಸಿ.ಪಿ.ಐ ಕೆ.ಪ್ರಭಾಕರ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಶೋಭಾ ಸಿ.ಬಸವರಾಜು, ಉಪಸ್ಥಿತರಿರುವರು.
Subscribe to:
Posts (Atom)