Monday, December 3, 2012


ಗೋಡೆಕೆರೆ ಮಠದಲ್ಲಿ ತತ್ವಪದ, ಜಾನಪದ ನೃತ್ಯ ಸ್ಪಧರ್ೆ
                                          
ಚಿಕ್ಕನಾಯಕನಹಳ್ಳಿ,ಡಿ.03  : ತಾಲೂಕಿನ ಗೋಡೆಕೆರೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಲಕ್ಷದೀಪೋತ್ಸವದ ಅಂಗವಾಗಿ ಹಾಗೂ ಗೋಡೆಕೆರೆ ಸಂಸ್ಥಾನದ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ಚಂದ್ರಶೇಖರ ಭಾರತಿಸ್ವಾಮಿಯವರ 11ನೇ ವರ್ಷದ ಪುಣ್ಯಾರಾಧನೆಯ ಸ್ಮರಣಾರ್ಥ ಜಿಲ್ಲಾ ಮಟ್ಟದ ಧಾಮರ್ಿಕ ತತ್ವ ಪದಗಳ ಹಾಗೂ ಜಾನಪದ ನೃತ್ಯ ಸ್ಪಧರ್ೆಗಳನ್ನು ಇದೇ 10ರಂದು ಗೋಡೆಕೆರೆಯಲ್ಲಿ ಏರ್ಪಡಿಸಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಿವಯೋಗಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾಮರ್ಿಕ ತತ್ವಪದಗಳಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಲು ವಯೋಮಿತಿ ಇರುವುದಿಲ್ಲ, ಯಾವ ತತ್ವಪದವನ್ನಾದರೂ ಹಾಡಬಹುದಾಗಿದ್ದು ಸ್ಪಧರ್ೆಗೆ 50ರೂ ಪ್ರವೇಶ ಶುಲ್ಕವಾಗಿದೆ, ಸ್ಪಧರ್ೆಯು 5ಜನರನ್ನು ಮೀರಿರಬಾರದು, ತಮ್ಮ ಸಲಕರಣೆಗಳನ್ನು ತಾವೇತರುವುದು, ವೇಷ ಭೂಷಣಗಳಿಗೆ ಆದ್ಯತೆ ನೀಡಲಾಗುವುದು, ಪ್ರತಿ ತಂಡಕ್ಕೆ ಸಮಯವನ್ನು ನಿಗದಿ ಪಡಿಸಿದ್ದು ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ, ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಜಾನಪದ ನೃತ್ಯ ಸ್ಪಧರ್ೆಯಲ್ಲಿ ದೇವರ ನಾಮಗಳಿಗೆ ಆದ್ಯತೆ ನೀಡಿದ್ದು  ವೇಷ ಭೂಷಣಗಳಿಗೆ ಆದ್ಯತೆಯಿದೆ, ಜಾನಪದ ಗೀತೆ ಹಾಡುವವರನ್ನು ಸೇರಿ 5ಜನ ಮೀರಿರಬಾರದು, ನಗದು ರೂಪದಲ್ಲಿ ಬಹುಮಾನ ನೀಡಲಿದ್ದು ಸ್ಪಧರ್ೆಗೆ ಪ್ರವೇಶ ಶುಲ್ಕ 50ರೂ ಆಗಿದೆ ಎಂದು ತಿಳಿಸಿದ ಅವರು ಹೆಚ್ಚಿನ ಮಾಹಿತಿಗಾಗಿ ಮೊ. 9448709755, 96115436678, 9986904011 ಗೆ ಸಂಪಕರ್ಿಸಲು ಕೋರಿದ್ದಾರೆ. 
ಚಿ.ನಾ.ಹಳ್ಳಿ ರೋಟರಿಗೆ 'ಬೆಸ್ಟ್ ಕ್ಲಬ್'ಆವಾಡರ್್

ಚಿಕ್ಕನಾಯಕನಹಳ್ಳಿ,ಡಿ.3: ಇಲ್ಲಿನ ರೋಟರಿ ಕ್ಲಬ್, ತುಮಕೂರಿನಲ್ಲಿ ನಡೆದ ಇಂಟರ್ ಸಿಟಿ ಜನರಲ್ ಫೋರಂ ಸಮಾವೇಶದಲ್ಲಿ ಬೆಸ್ಟ್ ಕ್ಲಬ್ ಆವಾಡರ್್'' ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕ್ಲಬ್ ನಡೆಸುವ ಸರಾಸರಿ ದಿನಕ್ಕೊಂದರಂತೆ ಸೇವಾ ಕಾರ್ಯಕ್ರಮವನ್ನು ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿ ಫಲಕವನ್ನು ನೀಡಲಾಗಿದೆ, ಸ್ಥಳೀಯ ಕ್ಲಬ್ನ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮತ್ತು ಕಾರ್ಯದಶರ್ಿ ಎಂ.ದೇವರಾಜ್ರವರನ್ನು ರೋಟರಿ ಗವರ್ನರ್ ಆರ್.ಬದರಿ ಪ್ರಸಾದ್ ಅಭಿನಂದಿಸಿದ್ದಾರೆ. ಜಿಲ್ಲಾ 3190ರ 87 ಕ್ಲಬ್ಗಳ ಪೈಕಿ ಇಲ್ಲಿನ ಕ್ಲಬ್ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. 
ತಾ|ಕೃಷಿ ಬ್ಯಾಂಕ್ನಲ್ಲಿ ಲಾಕರ್, ಚಿನ್ನಾಭರಣ ಸಾಲ ಸೌಲಭ್ಯಕ್ಕೆ ಚಾಲನೆ.
ಚಿಕ್ಕನಾಯಕನಹಳ್ಳಿ,ಡಿ.03 : ಇಲ್ಲಿನ ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನಲ್ಲಿ ನೂತನ ಲಾಕರ್ ಸೌಲಭ್ಯ, ಚಿನ್ನಾಭರಣ ಸಾಲ ಮತ್ತು ಠೇವಣಿ ಸಂಗ್ರಹಣೆಗೆ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಚಾಲನೆ ನೀಡಿದರು.
ತಾಲೂಕಿನ ಎಲ್ಲಾ ರೈತಬಾಂಧವರು, ಸಾಲಗಾರರು, ಷೇರುದಾರರು ಈ ಸೌಲಭ್ಯವನ್ನು ಪಡೆಯಲು ಬ್ಯಾಂಕಿನ ವ್ಯವಸ್ಥಾಪಕರಾದ ಡಿ.ಚಿತ್ತಪ್ಪ ಮಾನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಅಹಲ್ಯ ಸಾಂಭವಮೂತರ್ಿ, ನಿದರ್ೇಶಕರಾದ ಎಂ.ಬಿ.ನಾಗರಾಜ್, ಎಂ.ಬಿ.ಆನಂದಕುಮಾರ್, ಪರಮೇಶ್ವರ, ಎಚ್.ಎಂ.ಸುರೇಂದ್ರಯ್ಯ, ಯಳ್ಳೇನಹಳ್ಳಿ ಬಸವರಾಜು ಹಾಜರಿದ್ದರು.

Friday, November 30, 2012



ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ನೂಕು ನುಗ್ಗಲಿನಲ್ಲಿ ಅಜರ್ಿ ಸಲ್ಲಿಸಿದ ಆಕಾಂಕ್ಷಿಗಳು
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯಥರ್ಿಗಳಾಗಿ ಕಣಕ್ಕಿಳಿಯಲು ಸುಮಾರು 24ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿ ಅಜರ್ಿ ಸಲ್ಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಮಹಿಮಾ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಜರ್ಿ ಸಲ್ಲಿಸಿರುವ ಪ್ರಮುಖರೆಂದರೆ ಕ್ಯಾಪ್ಟನ್ ಸೋಮಶೇಖರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಸಂತೋಷ್ ಜಯಚಂದ್ರ, ರಾಜೇಂದ್ರ, ಬಿ.ಲಕ್ಕಪ್ಪ, ಸತೀಶ್ ಸಾಸಲು, ಟಿ.ಆರ್.ವಾಸುದೇವ್, ಹೆಚ್.ಬಿ.ಎಸ್ ನಾರಾಯಣಗೌಡ, ತುಮಕೂರು ಶಿವಮೂತರ್ಿ, ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ವೈ.ಜಿ.ಸಿದ್ದರಾಮಯ್ಯ, ನಿಜಾನಂದಮೂತರ್ಿ, ಆರ್.ರಾಮಚಂದ್ರಯ್ಯ,  ಶಿವಣ್ಣ ಸೇರಿದಂತೆ ಹಲವು ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದಾರೆ ಎಂದರು.
ನಂತರ ಮಾತನಡಿದ ಅವರು,  ಪಕ್ಷ ಟಿಕೆಟ್ ನೀಡುವಲ್ಲಿ ಹೆಚ್ಚಿನ ಆದ್ಯತೆಯನ್ನು  ಸ್ಥಳೀಯ ಆಕಾಂಕ್ಷಿಗಳಿಗೆ ನೀಡುವುದಾಗಿ  ತಿಳಿಸಿದರಲ್ಲದೆ,  ಮತದಾರರು ಯಾವ ಆಕಾಂಕ್ಷಿಗೆ ಹೆಚ್ಚಿನ ಆದ್ಯ್ಯತೆ ನೀಡುತ್ತಾರೆಯೋ ಅಂತಹವರನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಮತದಾರರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ತಾಲ್ಲೂಕಿಗೆ ಆಗಮಿಸಿದ್ದು ಅಭಿಪ್ರಾಯದ ವರದಿಯನ್ನು ಕೆಪಿಸಿಸಿ ಹೈಕಮಾಂಡ್ ಕಛೇರಿಗೆ ನೀಡಲಿದ್ದೇವೆ, ಈ ವರದಿ ಸಲ್ಲಿಸಿದ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಆಗಮಿಸಿ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ವರದಿಯನ್ನು ಪಡೆದಿದ್ದು ಎಲ್ಲಾ ತಾಲ್ಲೂಕಿನಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅಭಿಪ್ರಾಯ ಬಂದಿದೆ ಎಂದು ತಿಳಿಸಿದರಲ್ಲದೆ ಕಾಂಗ್ರೆಸ್ ಪಕ್ಷ ಯಾವ ಪಕ್ಷದೊಂದಿಗೆ ಹೊಂದಣಿಕೆ ಮಾಡಿಕೊಳ್ಳದೇ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಕಾಂಗ್ರೆಸ್ ವೀಕ್ಷಕ ಮತ್ತು ಮಾಜಿ ಶಾಸಕ ಐವಾನ್ ನೀಕ್ಲಿ, ಕೆಪಿಸಿಸಿ ಕಾರ್ಯದಶರ್ಿ ನೂರ್ಜಾನ್ಷರೀಪ್, ಕಾರ್ಯದಶರ್ಿ ಶಿವಮೂತರ್ಿ, ವಿಧಾನಸಭಾ ಸಂಘಟನಾ ಉಸ್ತುವಾರಿ ಕ್ಯಾಪ್ಟನ್ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ನಗರ ಪ್ರಧಾನ ಕಾರ್ಯದಶರ್ಿ ಕೆ.ಜಿ.ಕೃಷ್ಣೆಗೌಡ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.


aPÀÌ£ÁAiÀÄPÀ£ÀºÀ½î ¥ÉÆÃmÉÆÃUÁæ¥sÀgï ¸ÀAWÀ¢AzÀ  PÀ£ÀßqÀ gÁeÉÆåÃvÀìªÀªÀ£ÀÄß DZÀj¸À¯Á¬ÄvÀÄ. F ¸ÀAzÀ¨sÀðzÀ°è ¸Á»w JA.«.£ÁUÀgÁeïgÁªï, ¸ÀAWÀzÀ CzsÀåPÀë ªÀÄÈAvÀÄåAdAiÀÄ, PÁAiÀÄðzÀ²ð eÉãÀÄPÀ¯ï ªÀÄAdÄ£Áxï, Pˤì®gï ¹.r.ZÀAzÀæ±ÉÃRgï ¸ÉÃjzÀAvÉ ¸ÀAWÀzÀ ¸ÀzÀ¸ÀågÀÄ ºÁdjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ°è ¸ÀĨsÁµï ZÀAzÀæ¨ÉÆÃ¸ï DmÉÆÃ ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀ ºÀ«ÄäPÉÆArzÀÝ 56£Éà PÀ£ÀßqÀ gÁeÉÆåÃvÀìªÀªÀPÉÌ ¥ÀlÖtzÀ J¯Áè DmÉÆÃZÁ®PÀgÀÄ ¥Á¯ÉÆÎAqÀÄ ¸ÀªÀiÁgÀA¨sÀ «dÈA©ü¹zÀgÀÄ.

aPÀÌ£ÁAiÀÄPÀ£ÀºÀ½îAiÀÄ ¸ÀĨsÁµï ZÀAzÀæ¨ÉÆÃ¸ï DmÉÆÃ ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀzÀ ªÀw¬ÄAzÀ 56£Éà PÀ£ÀßqÀ gÁeÉÆåÃvÀìªÀªÀ£ÀÄß DZÀj¸À®¬ÄvÀÄ. F ¸ÀAzÀ¨sÀðzÀ°è f¯Áè DmÉÆÃ ZÁ®PÀgÀ dAn QæAiÀiÁ ¸À«Äw CzsÀåPÀë «.¥ÀævÁ¥ï, vÁ.UËgÀªÁzsÀåPÀë ¹.©.gÉÃtÄPÀ¸Áé«Ä, PÀgÀªÉà CzsÀåPÀë ¹.n.UÀÄgÀĪÀÄÆwð ¸ÉÃjzÀAvÀ ºÀ®ªÀjzÀÝgÀÄ.


ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗಧಿ
ಚಿಕ್ಕನಾಯಕನಹಳ್ಳಿ,ನ.30: ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ಹಾಗೂ ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ 28ರಂದು ಹಂದನಕೆರೆಯಲ್ಲಿ ಏರ್ಪಡಿಸಲಗಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ ಅಬ್ದುಲ್ಹಮೀದ್ರವರನ್ನು ಆಯ್ಕೆಮಾಡಲಾಗಿದೆ. ಕಂದಿಕೆರೆ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 9ರಂದು ಕಂದಿಕೆರೆಯಲ್ಲಿ ಏರ್ಪಡಿಸಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಕೆ.ಎಂ.ನಂಜಪ್ಪರವರನ್ನು, ಶೆಟ್ಟಿಕೆರೆ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸಂಬರ್ 15ರಂದು ಗೋಡೆಕೆರೆಯಲ್ಲಿ ಏರ್ಪಡಿಸಿದ್ದು ಚಿಂತಕ ಶಿವನಂಜಪ್ಪ ಬಾಳೇಕಾಯಿರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ, ಚಿ.ನಾ.ಹಳ್ಳಿ ನಗರ ಕೇಂದ್ರಿತ ಕಸಬಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 22ರಂದು ಕೇದಿಗೆಹಳ್ಳಿಯ ರಾಘವೇಂದ್ರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದು ಮಾಜಿ ಕಾಸಪ ಅಧ್ಯಕ್ಷ ಹೆಚ್.ಎಸ್.ಶಿವಲಿಂಗಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, November 29, 2012


ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಿ :  ಲಕ್ಷಣ್ದಾಸ್
ಚಿಕ್ಕನಾಯಕನಹಳ್ಳ,ನ.29 : ರಂಗಭೂಮಿ ಹಾಗೂ ಪೌರಾಣಿಕ ನಾಟಕಗಳಲ್ಲಿ ಬಳಸುತ್ತಿದ್ದ ಪ್ರಾತಿನಿಧಿಕ ಶಬ್ದಗಳೆಲ್ಲವು ಸಿನಿಮಾ ಹಾವಳಿಗೆ ಸಿಲುಕಿ ಅಪಮೌಲ್ಯವಾಗಿದೆ ಎಂದು ರಂಗಭೂಮಿ ಕಲಾವಿದ ಲಕ್ಷಣ್ದಾಸ್ ವಿಷಾದಿಸಿದರು.
ಪಟ್ಟಣದ ರೋಟರಿ ಬಾಲ ಭಾವನದಲ್ಲಿ ರೋಟರಿ ಕ್ಲಬ್ ವತಿಯಿಂದ ರಂಗಕಲೆ ನಡೆದು ಬಂದ ಹಾದಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ರಂಗಗೀತೆಗಳನ್ನು ಹಾಡುವಂತಹ ದಾಸ್ಟ್ಯ ಇರುವಂತಹ ಕಲಾವಿದರು ವಿರಳವಾಗುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ ಇದ್ದಂತಹ ನಾಟಕದ ಹಾಡುಗಳನ್ನು ಬರೆಯುವವರಿಗೆ ಕಷ್ಠದ ಸ್ಥಿತಿ ನಿಮರ್ಾಣವಾಗಿದೆ ಎಂದು ತಿಳಿಸಿದರು.
ಪ್ರಾರ್ಥನ ಗೀತೆಗಳನ್ನು ಬರೆಯುವವರಿಗೆ ಈಗ ಪ್ರಾತಿನಿದ್ಯವೇ ಇಲ್ಲವಾಗಿದೆ, ಸಿನಿಮಾ ಹಾಡುಗಳನ್ನು ಬರಯುವವರಿಗೆ ಈಗ ಸ್ಥಾನಮಾನಗಳು ದೊರಕುತ್ತಿವೆ ಎಂದರಲ್ಲದೆ ರಾಜ್ಯದಲ್ಲಿ ಇದ್ದ ಎಲ್ಲಾ ರಂಗಭೂಮಿ ನಾಟಕ ಕಂಪನಿಗಳೂ ಸಿನಿಮಾ ಹಾವಳಿಯಿಂದ ಮುಚ್ಚಲ್ಪಟ್ಟಿದೆ, ನಾಟಕ ನೋಡುವವರೇ ಇಲ್ಲದಂತಾಗಿದ್ದಾರೆ ಈಗಲಾದರೂ ಸಕರ್ಾರ ಎಚ್ಚೆತ್ತುಕೊಂಡು ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಎಂಬ ಕಾರ್ಯಕ್ರಮ ಹಮ್ಮಿಕೊಂಡು ರಂಗಭೂಮಿ ಕಲಾವಿದರಿಗೆ  ಇದರ ಮುಂಚೂಣಿ ನೀಡಬೇಕು ಎಂದರು.
  ಸಮಾರಂಭದಲ್ಲಿ ರಂಗಗೀತೆಗಳನ್ನು ಹಾಗೂ ಮೇರು ನಟರು ಹಾಡುತ್ತಿದ್ದ ಹಾಡುಗಳನ್ನು ಅವರ ದಾಟಿಯಲ್ಲೇ ಹಾಡಿ ಸಭಿಕರನ್ನು ರಂಜಿಸಿದರು.
ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಲಕ್ಷಣ್ದಾಸ್ರವರ ನಾಲಿಗೆಯಲ್ಲಿ ಕಲಾಶಾರದೆ ನತರ್ಿಸುತ್ತಿದ್ದಾಳೆ, ಅವರ ರಂಗಕಲೆಯ ಜ್ಞಾನ ಭಂಡಾರ ಅಪಾರವಾಗಿದ್ದು ಇದನ್ನು ಗುರುತಿಸಿ ತುಮಕೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ಅವರ ಕಲೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಸಮಾರಂಭದಲ್ಲಿ ತುಮಕೂರು ಮಂಜು, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.




aPÀÌ£ÁAiÀÄPÀ£ÀºÀ½îAiÀÄ qÁ.CA¨sÉÃqÀÌgï ¥ËæqÀ±Á¯ÉAiÀÄ «zÁåyð vÀAqÀ ªÀÄrPÉÃjAiÀÄ°è £ÀqÀzÀ 20£Éà gÁ¶ÖçÃAiÀÄ ªÀÄPÀ̼À «eÁÕ£À ¸ÀªÀiÁªÉñÀzÀ°è ¨sÁUÀªÀ»¹ ±ÀQÛ C£Ééö¹ §¼À¹ ªÀÄvÀÄÛ G½¹ JA§ ¥ÀæzsÁ£À ²Ã¶ðPÉAiÀÄr ¸ÀgÀ¼À M¯É ±ÀQÛAiÀÄ ¸É¯É JA§ ¸ÀA±ÉÆÃzsÀ£Á ¥Àæ§AzsÀªÀ£ÀÄß ªÀÄAr¹ GvÀÛgÀ ¥ÀæzÉñÀ ªÁgÀuÁ¹AiÀÄ°è £ÀqÉAiÀÄĪÀ gÁµÀÖçªÀÄlÖzÀ ¸ÀªÀiÁªÉñÀPÉÌ DAiÉÄÌAiÀiÁVzÁÝgÉ.
ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನ
                                          
ಚಿಕ್ಕನಾಯಕನಹಳ್ಳಿ,ನ.29 : ದೇಶದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ಬಂದಾಗ ಮಾತ್ರ ನಗರ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಮಾನತೆ ಬರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಬಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ, ತಾಲ್ಲೂಕು ಪ್ರೌಡಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವೃತ್ತ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ.70ರಷ್ಟು ಸಾಕ್ಷರತೆಯಿದ್ದು ಇನ್ನು ಶೇ.30ರಷ್ಟು ಅನಕ್ಷರಸ್ಥರಿದ್ದಾರೆ, ಇವರನ್ನು ಸಾಕ್ಷರರನ್ನಾಗಿ ಮಾಡುವ ಜವಬ್ದಾರಿ ಸಕರ್ಾರ ಮತ್ತು ಶಿಕ್ಷಕರ ಮೇಲಿದೆ ಇಂದು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರ ನೀಡಲು ಕ್ಲಿಷ್ಟವಾಗುತ್ತಿದೆ, ಓದುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಉತ್ತರ ನೀಡಬಹುದು. ರಾಜ್ಯದ ವಾಷರ್ಿಕ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 15072 ಕೋಟಿ ರೂಪಾಯಿಗಳು ಸಕರ್ಾರ ತೆರೆದಿಡುತ್ತಿದೆ, ನಮ್ಮಲ್ಲಿ ಅಗಾಧ ಶಕ್ತಿ ಸಂಪನ್ಮೂಲ ವಿದ್ವತ್ ಶಿಕ್ಷರಲ್ಲಿದ್ದು ಇದನ್ನು ಮಕ್ಕಳ ಅಭಿವೃದ್ದಿಗೆ ಉಪಯೋಗಿಸಿ ಎಂದ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಶೇ.100ರಷ್ಟು ಪಲಿತಾಂಶ ಬರುವಂತೆ ಶ್ರಮಿಸಿ ಎಂದರು.
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಶಿಕ್ಷಕರು ಸಮಾಜವನ್ನು ಉತ್ತಮ ರೀತಿಯಲ್ಲಿ ಕರೆದೊಯ್ಯವುದರಲ್ಲಿ ಮುಂಚೂಣಿ ಪಾತ್ರ ವಹಿಸುತ್ತಾರೆ, ಅದಕ್ಕಾಗಿ ಮಕ್ಕಳ ಹಾಗೂ ಶಿಕ್ಷಕರ ಪಾತ್ರ ಉತ್ತಮವಾಗಿರಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಶಿಕ್ಷಕರು ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು, ಪ್ರಪಂಚ ಬದಲಾವಣೆಯಾಗುತ್ತಿದೆ, ಸಮಾಜಕ್ಕೆ ತಕ್ಕಂತೆ ಬೋಧನೆ ನೀಡಿದರೆ ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ನಗರ ಪ್ರದೇಶದ ವಿದ್ಯಾಥರ್ಿಗಳಿಗೆ ಸಿಗುತ್ತಿರುವ ಕಂಪ್ಯೂಟರ್ ಶಿಕ್ಷಣವು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೂ ದೊರಕಬೇಕು ಆ ಮೂಲಕ ಶಿಕ್ಷಕರು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳನ್ನು ಆಧುನಿಕ ಶಿಕ್ಷಣದತ್ತ ಕರೆದೊಯ್ಯಬೇಕು ಎಂದು ತಿಳಿಸಿದ ಅವರು ಅದಕ್ಕಾಗಿ ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳಸಬೇಕು, ರಾಮಾಯಣ, ಮಹಾಭಾರತ, ನೀತಿಕಥೆಗಳನ್ನು ವಿದ್ಯಾಥರ್ಿಗಳಿಗೆ ತಿಳಿಸುವ ಮೂಲಕ ಭಾರತದ ಸಂಸ್ಕೃತಿ ಪರಂಪರೆ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡಬೇಕು ಎಂದರು.
ಸಮಾರಂಭದಲ್ಲಿ  ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ಜಿ.ಹಾಲು ಒಕ್ಕೂಟ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾಗರಾಜು, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ತಾ.ಪ್ರಾ.ಶಾ.ಶಿ.ಸಂಘದ ಕಾರ್ಯದಶರ್ಿ ರಾಜಶೇಖರ್ ಉಪಸ್ಥಿತರಿದ್ದರು.


ಸತೀಶ್ ಸಾಸಲು ಜೆ.ಡಿ.ಎಸ್ಗೆ ವಿಧಾಯ, ಕಾಂಗ್ರೆಸ್ಗೆ ಸೇರ್ಪಡೆ
ಚಿಕ್ಕನಾಯಕನಹಳ್ಳಿ,ನ.29 : ಜೆ.ಡಿ.ಎಸ್ ಮುಖಂಡ ಹಾಗೂ ರಾಜ್ಯ ಅಹಿಂದ ಸಂಚಾಲಕ ಸತೀಶ್ಸಾಸಲು ಜೆ.ಡಿ.ಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.
ಶೆಟ್ಟಿಕೆರೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಜೆ.ಡಿ.ಎಸ್ನಿಂದ ಅಭ್ಯಥರ್ಿಯಾಗಿದ್ದ ಸತೀಶ್ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಯ ಆದರ್ಶವನ್ನು ಇಟ್ಟುಕೊಂಡಿರುವ ಪಕ್ಷಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಬಸವರಾಜುರವರ ಸಮ್ಮುಖದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇರಿರುವುದಾಗಿ ತಿಳಿಸಿದ್ದಾರೆ.
ಸತೀಶ್ರವರ ಜೊತೆ ತೀರ್ಥಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಡಿ.ಕೆ, ಸಾಸಲು ಶಶಿಧರ್, ನಿರುವುಗಲ್ ಬಸವರಾಜು ಗಾಂಧಿನಗರ, ಸೊಂಡೇನಹಳ್ಳಿ ಕೃಷ್ಣಮೂತರ್ಿ, ಮಾಕಳ್ಳಿ ಹೀರೇಗೌಡ, ಎಡೆ ಗೊಲ್ಲರಹಟ್ಟಿ ಹೀರಣ್ಣ, ದೊಡ್ಡಿಹಟ್ಟಿ ರಮೇಶ್, ಗದ್ದಿಗೆರ ಕೊಟ್ರೇಶ್, ದೊಡ್ಡರಾಂಪುರ ಕುಮಾರ್ ಸೇರಿದಂತೆ ಹಲವರು ತಮ್ಮ ಜೊತೆ ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. 

56ನೇ ಕನ್ನಡ ರಾಜ್ಯೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ನ.29 : ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ 30ರ ಶುಕ್ರವಾರ(ಇಂದು) 56ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುಮಕೂರು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ರಾಜ ರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಸಾಹಿತಿ ಎಂ.ವಿ.ನಾಗರಾಜ್ರಾವ್, ಸಿಪಿಐ ಪ್ರಭಾಕರ್, ಪಿ.ಎಸ್.ಐ ರವಿಕುಮಾರ್, ಸು.ಚ.ಬೋ.ಆ.ಚಾ.ಮಾ.ಸಂಘದ ಗೌರವಾಧ್ಯಕ್ಷ ರೇಣುಕಸ್ವಾಮಿ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಉಪಸ್ಥಿತರಿರುವರು.

Tuesday, November 27, 2012


ಎಪಿಎಂಸಿ ಜೆಸಿಎಂ ಬೆಂಬಲಿಗರಿಗೆ ಅಧಿಕ ಜಯ, 2ನೇ ಸ್ಥಾನದಲ್ಲಿ ಜೆಡಿಎಸ್, ಒಂದೊಂದು ಕ್ಷೇತ್ರಕ್ಕೆ ಸಮಾಧಾನ ಪಟ್ಟ ಬಿಜೆಪಿ, ಕಾಂಗ್ರೆಸ್
ಚಿಕ್ಕನಾಯಕನಹಳ್ಳಿ,ನ.27 : ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಾಗಿ ನಡೆದ 13ಕ್ಷೇತ್ರಗಳ ನಿದರ್ೇಶಕರ  ಚುನಾವಣೆಯಲ್ಲಿ ಸಹಕಾರ ಮಾರುಕಟ್ಟೆ ವ್ಯವಹಾರ ಕ್ಷೇತ್ರದಿಂದ ಎಸ್.ಆರ್.ರಾಜ್ಕುಮಾರ್ ಅವಿರೋದ ಆಯ್ಕೆಯಾಗಿದ್ದು ಜೆಸಿಎಂ ಬೆಂಬಲಿತ 8, ಜೆಡಿಎಸ್ ಬೆಂಬಲಿತ 2, ಕಾಂಗ್ರೆಸ್ ಬೆಂಬಲಿತ 1, ಬಿಜೆಪಿ ಬೆಂಬಲಿತ 1 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಗೆಲುವು ಸಾಧಿಸಿದ್ದಾರೆ.
ಯಳನಡು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ವೈ.ಸಿ.ಸಿದ್ದರಾಮಯ್ಯ(614 ಜಯ), ಲಕ್ಷ್ಮಯ್ಯ(485), ರಮೇಶ್ ಟಿ.ಕೆ(280), ಕರಿಯಪ್ಪ ಪೂಜಾರಿ(208).
ಹುಳಿಯಾರು ಕ್ಷೇತ್ರ : ಬಿಜೆಪಿ ಬೆಂಬಲಿತ ಆರ್.ಪಿ.ವಸಂತಯ್ಯ(842 ಜಯ), ರಾಜಶೇಖರಪ್ಪ(687), ಸಯ್ಯದ್ಜಲೀಲ್(287), ಹೆಚ್.ಆರ್.ರಂಗನಾಥ್(122). 
ಹೊಯ್ಸಳಕಟ್ಟೆ ಕ್ಷೇತ್ರ : ಜೆಡಿಎಸ್ ಬೆಂಬಲಿತ ರುದ್ರಪ್ಪ ಡಿ.ಆರ್(444 ಜಯ), ಡಿ.ಜಿ.ರಾಜಶೇಖರನಾಯ್ಕ(258), ಲಚ್ಚಾನಾಯ್ಕ(192), ರಾಮಾನಾಯ್ಕ(140), ಸೋಮಶೇಖರನಾಯ್ಕ(74).
ತಿಮ್ಮನಹಳ್ಳಿ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಣ್ಣಕರಿಯಪ್ಪ(473 ಜಯ), ರಾಮಚಂದ್ರಯ್ಯ (330), ಸ್ವಾಮಿನಾಥ್ಎಸ್.ಆರ್(288), ದಬ್ಬೇಘಟ್ಟ ಬಸವರಾಜು(25).
ತೀರ್ಥಪುರ ಕ್ಷೇತ್ರ : ಜೆ.ಸಿ.ಎಂ ಬೆಂಬಲಿತ ಅಭ್ಯಥರ್ಿ ದ್ರಾಕ್ಷಾಯಣಮ್ಮ(798 ಜಯ), ವಸಂತಲಕ್ಷ್ಮೀ(790), ಈ.ಲತಾ(258), ಈರಮ್ಮ(145).
ಕಂದಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಬಿ.ಸಣ್ಣಯ್ಯ(773ಜಯ), ಬಿ.ಕೆ.ಜಯಣ್ಣ(745), ಡಿ.ಪಂಚಾಕ್ಷರಯ್ಯ(116).
ಚಿಕ್ಕನಾಯಕನಹಳ್ಳಿ ಕಸಬಾ  ಕ್ಷೇತ್ರ : ಜೆಡಿಎಸ್ ಬೆಂಬಲಿತ ಅಭ್ಯಥರ್ಿ ಸಿ.ಎಂ.ರಂಗಸ್ವಾಮಯ್ಯ(679ಜಯ),ಲಿಂಗರಾಜು ದೇವರಮನೆ(310), ಸಿ.ಕೆ.ಶಾಂತಕುಮಾರ್(104), ಕೆ.ಶಿವಣ್ಣ(79), ಬಸವರಾಜು(51), ಸಿ.ಕೆ.ಗುರುಸಿದ್ದಯ್ಯ(39), ಶಾಂತಕುಮಾರ(12).
ಹಂದನಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸೋಮಶೇಖರಯ್ಯ(1050 ಜಯ), ಚಂದ್ರಣ್ಣ(895), ನೀಲಕಂಠಪ್ಪ(95), ಕಾಂತರಾಜ್ಅರಸ್(03).
ಮತಿಘಟ್ಟ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಹೆಚ್.ಬಸವರಾಜು(863 ಜಯ), ನಟರಾಜು(688), ಬರಗೂರು ಬಸವರಾಜು(467).
ಶೆಟ್ಟಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಕೆ.ಎಂ.ಈಶ್ವರಮೂತರ್ಿ(870 ಜಯ), ಕೃಷ್ಣಮೂತರ್ಿ(602), ಎನ್.ಬಿ.ಸಿದ್ದೇಗೌಡ(368), ಜೆ.ಸಿ.ಶಿವಕುಮಾರಸ್ವಾಮಿ(70).
ಜೆ.ಸಿ.ಪುರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಎಂ.ಎಸ್.ಶಿವರಾಜು(1094 ಜಯ), ಗಂಗಾಧರಯ್ಯ(389), ಎಸ್.ಜಿ.ಮಹೇಶ್(356), ಶಂಕರಣ್ಣ(93), ನಿಜಾನಂದಮೂತರ್ಿ(81).
ವರ್ತಕರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಿ.ಎಸ್.ಶಾಂತಕುಮಾರ್(52 ಜಯ), ಎಲ್.ಅರ್.ಬಾಲಾಜಿ(36), ವೈ.ಎ.ರಿಯಾಜ್ಅಹಮದ್(04), ಕೆ.ನಿಂಗರಜು(01) ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.

ಈ ಚುನಾವಣೆ ಉಮ್ಮಸ್ಸು ತುಂಬಿದೆ, ಮುಂದಿನ ಚುನಾವಣೆಗೆ ಸಿದ್ದರಾಗಿ : ಜೆಸಿಎಂ 
ಚಿಕ್ಕನಾಯಕನಹಳ್ಳಿ,ನ.27 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಮುಂದೆ ಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಹುಮ್ಮಸ್ಸು ಬಂದಂತಾಗಿದ್ದು ಈಗ  ಚುನಾವಣಾ ರಣರಂಗ ಆರಂಭವಾಗಿದೆ,  ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿಯೂ ನಮ್ಮ ಬೆಂಬಲಿತ ಅಭ್ಯಥರ್ಿಗಳು ಗೆಲುವು ಸಾಧಿಸುವಂತೆ ಕಾರ್ಯಕರ್ತರು ದುಡಿಯಬೇಕು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯಥರ್ಿಗಳನ್ನು ಅಭಿನಂದಿಸುವ ಸಲುವಾಗಿ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದರು. 
 8ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಉಳಿದ 4ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಬಗ್ಗೆ ಹೇಗೆ ಪ್ರಚಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ ಎಂದರಲ್ಲದೆ ಈಗ ಸೋತಿರುವವರನ್ನು ಮುಂದೆ ಬರುವ ಚುನಾವಣೆಗಳಲ್ಲಿ ಗೆಲ್ಲಿಸುವ ಮುಖೇನ ಸಂಘಟನೆ ಮಾಡಿರಿ ಎಂದು ಕರೆ ಕೊಟ್ಟ ಅವರು ಯುವ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಎಂದರು. 
ತಾಲ್ಲೂಕಿನಲ್ಲಿ ಹುಳಿಯಾರು ದೊಡ್ಡ ಹೋಬಳಿಯಾಗಿದ್ದು ಅಲ್ಲಿ ಪಕ್ಷ ಸೋತಿರುವುದರ ಬಗ್ಗೆ ಯೋಚಿಸಿ ಮುಂದೆ ಹೀಗಾಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದರು.
ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಶಿವಪ್ರಕಾಶ್ ಮಾತನಾಡಿ ಎಪಿಎಂಸಿ ಚುನಾವಣೆ ಮೂಲಕ ಮುಂಬರುವ ಚುನಾವಣೆಗಳಿಗೆ ಪ್ರತಿ ಗ್ರಾಮದಲ್ಲೂ ಇಂದಿನಿಂದಲೇ ಚುನಾವಣಾ ಪ್ರಚಾರ ಮಾಡಲು ಸಿದ್ದರಾಗೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಿಮ್ಮನಹಳ್ಳಿಯ ಸಣ್ಣಕರಿಯಪ್ಪ, ತೀರ್ಥಪುರ ದ್ರಾಕ್ಷಾಯಣಮ್ಮ, ಕಂದಿಕೆರೆ ಸಣ್ಣಯ್ಯ, ಹಂದನಕೆರೆ ಸೋಮಶೇಖರಯ್ಯ, ಮತಿಘಟ್ಟ ಹೆಚ್.ಬಸವರಾಜು, ಶೆಟ್ಟಿಕೆರೆ ಈಶ್ವರಮೂತರ್ಿ, ಜೆ.ಸಿ.ಪುರ ಎಮ್.ಎನ್.ಶಿವರಾಜು, ವರ್ತಕರ ಕ್ಷೇತ್ರ ಸಿ.ಎಸ್.ಶಾಂತಕುಮಾರ್ರವರಿಗೆ ಜೆ.ಸಿ.ಮಾಧುಸ್ವಾಮಿ, ತಾ.ಪಂ.ಸದಸ್ಯರಾದ ಶಶಿಧರ್, ನಿರಂಜನಮೂತರ್ಿ ಹಾಗೂ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
  1.  ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ

ಚಿಕ್ಕನಾಯಕನಹಳ್ಳಿ,ನ.27 : ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭ ಏರ್ಪಡಿಸಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಉಪನ್ಯಾಸ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿರುವರು.
ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ
                             
ಚಿಕ್ಕನಾಯಕನಹಳ್ಳಿ,ನ.27: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕ್ಯಾತನಾಯಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ ಮತ್ತು ಕಳಸ ಪ್ರತಿಷ್ಠಾಪನೆಯು ಗಾಮಸ್ಥರ ಸಮ್ಮುಖ ಹಾಗೂ ಗುಬ್ಬಿ ತಾಲ್ಲೂಕಿನ ಶ್ರೀ ದೊಡ್ಡಗುಣಿಯ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ಮುಂಜಾನೆ ಬ್ರಾಂಹ್ಮೀ ಮುಹೂರ್ತದಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ನೇತ್ರೋನ್ಮಿಲನ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸ ಸ್ಥಾಪನೆ, ಬಸವೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ಪೂಣರ್ಾಹುತಿ, ಮಹಾಮಂಗಳಾರತಿ ನೆರವೇರಿತು.
ಬೆಳಗಿನ ಜಾವ 4ರಿಂದಲೇ ಗ್ರಾಮಸ್ಥರು ದೇವಾಲಯದ ಬಳಿ ಆಗಮಿಸಿ, ಬಯಲು ಬಸವೇಶ್ವರಸ್ವಾಮಿ, ವೀರಭದ್ರಸ್ವಾಮಿ, ಬಸವೇಶ್ವರಸ್ವಾಮಿ, ಮುದ್ದೇನಹಳ್ಳಿ, ಶ್ರೀ ಹೊನ್ನವ್ಮರಡಿ ರಂಗನಾಥಸ್ವಾಮಿ, ಬೆಳಗುಲಿ ಕದರಿ ಲಕ್ಷ್ಮೀನರಸಿಂಹಸ್ವಾಮಿ, ಸೋರಲಮಾವು, ಶ್ರೀ ಉಡಸಲಮ್ಮದೇವಿ, ಹೊಸಕೆರೆ, ಓಬಳಲಿಂಗೇಶ್ವರ ಬ್ರಹ್ಮಲಿಂಗೇಶ್ವರಸ್ವಾಮಿ ಶ್ರೀ ಕಾಟಮ್ಮದೇವರು, ಹಾಗೂ ಕ್ಯಾತನಾಯಕನಹಳ್ಳಿ ದೇವತೆಗಳು ದೇವಾಲಯಕ್ಕೆ ಪ್ರವೇಶವಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು.

Monday, November 26, 2012


ಚಿ.ನಾ.ಹಳ್ಳಿಗೆ ಯಡಿಯೂರಪ್ಪನವರನ್ನು ಕರೆಸಿ ಅವರ ಸಮ್ಮುಖದಲ್ಲಿ ಕೆ.ಜೆ.ಪಿ.ಗೆ ಸೇರ್ಪಡೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ನ.26: ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ಕನರ್ಾಟಕ ಜನತಾ ಪಕ್ಷ ಸೇರುವುದು ಶೇ.90ರಷ್ಟು ನಿಶ್ಚಿತವಾಗಿದೆ, ಡಿ.9ರಂದು ನಡೆಯುವ ಹಾವೇರಿ ಸಮಾವೇಶದ ಬಳಿಕ ಪಕ್ಷಕ್ಕೆ ಸೇರುವುದಾಗಿದ್ದು ಅಂದು ತಾಲ್ಲೂಕಿಗೆ ಯಡಿಯೂರಪ್ಪನವರನ್ನು ಕರೆಸಿ ಜನತೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಜೆ.ಸಿ.ಎಂ. ಅಭಿಮಾನಿಗಳ    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಯು ಪಕ್ಷವು ರಾಜ್ಯದಲ್ಲಿ ಆಥರ್ಿಕವಾಗಿ, ರಾಜಕೀಯವಾಗಿ  ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಪಕ್ಷದಿಂದ ಸಾಧ್ಯವಾಗದ ಕಾರಣ ಬದಲಿ ಪಕ್ಷ ಸೇರ್ಪಡೆಗೊಳ್ಳುವಂತೆ ಕಾರ್ಯಕರ್ತರು ಸೂಚಿಸಿದ್ದರು. ಆ ಸಂಬಂಧ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುವಂತೆ ಹಲವು ಬಾರಿ ಒತ್ತಡ ಹೇರಿದ್ದರು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ದೊರಕುವುದಿಲ್ಲ ಹಾಗೂ ರಾಮಕೃಷ್ಣ ಹೆಗ್ಗಡೆ, ಪಟೇಲ್ರು ಬೆಳಸಿದ ಜೆಡಿಯು ಪಕ್ಷವನ್ನು ಬಿಡಬಾರದು ಎಂಬ ಕಾರಣದಿಂದ ಪಕ್ಷ ಸೇರಲು ಹಿಂದೇಟು ಹಾಕಲಾಯಿತು ಎಂದರಲ್ಲದೆ, ಈಗ ಪಕ್ಷವು ರಾಜ್ಯದಲ್ಲಿ ನೆಲೆಯೂರಲು ಪರದಾಡುತ್ತಿದೆ, ಅಲ್ಲದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಆರಂಭವಾಗಲಿರುವ ಕನರ್ಾಟಕ ಜನತಾ ಪಕ್ಷ ಸೇರಲು ಪಕ್ಷದ ಮುಂದಾಳುಗಳು ಒತ್ತಾಯ ಮಾಡಿದ್ದಾರೆ, ಆದರೆ ಈ ಬಗ್ಗೆ ಕಾರ್ಯಕರ್ತರಲ್ಲಿ ಚಚರ್ಿಸಿ ಹಾಗೂ ಕೆಜೆಪಿ ಪಕ್ಷವು ಜಾತಿ ಸಂಕೋಲೆಯಿಂದ ಹೊರಗೆ ಬಂದರೆ ಅಲ್ಲದೆ ನಾವಿಟ್ಟಿರುವ ಬೇಡಿಕೆಗಳಲ್ಲಿ ಶೇ.10 ರಷ್ಟಾದರೂ ಬೇಡಿಕೆ ಈಡೇರಿದ ನಂತರ ಪಕ್ಷ ಸೇರುವುದಾಗಿ ತಿಳಿಸಿದರು.
ಚುನಾವಣೆಗೆ ತಯಾರಿ : ಮುಂದಿನ ಮೂರು ತಿಂಗಳಲ್ಲಿ ಯಾವಾಗ ಬೇಕಾದರೂ ವಿದಾನಸಭೆ ಚುನಾವಣೆ ನಡೆಯಬಹುದು, ಅದಕ್ಕಾಗಿ ಕಾರ್ಯಕರ್ತರೆಲ್ಲಾ ಈಗಿನಿಂದಲೇ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಪ್ರಚಾರ ನಡೆಸಿ ಎಂದು ಕರೆ ಕೊಟ್ಟ ಜೆ.ಸಿ.ಮಾಧುಸ್ವಾಮಿ ಅದಕ್ಕಾಗಿ ಕಾರ್ಯಕರ್ತರು ನನ್ನನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಚುನಾವಣಾ ಬಿರಿಸಿನಲ್ಲಿ ತೊಡಗಿಸಿಕೊಳ್ಳವಂತೆ ತಿಳಿಸಿದ ಅವರು ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಿ ಎಂದರು. ಪೋಲಿಸ್ ಇಂಟಲಿಜೆನ್ಸಿ ಹಾಗೂ ಮಾದ್ಯಮಗಳ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಜೆ.ಡಿ.ಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿದು ಬಂದಿದೆ ಎಂದರು.
ಕಾರ್ಯಕರ್ತರ ಅಭಿಪ್ರಾಯ : ಜೆ.ಸಿ.ಮಾಧುಸ್ವಾಮಿರವರು ಯಾವ ಪಕ್ಷಕ್ಕೆ ಹೋದರು ನಾವು ಅವರ ಹಿಂದೆ ಇದ್ದು ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು ಅಭಿಪ್ರಾಯ ತಿಳಿಸಿದರಲ್ಲದೆ, ಪಕ್ಷದಲ್ಲಿ ಯುವಕರ ಕೊರತೆ ಇದೆ ಅದಕ್ಕಾಗಿ ಪಕ್ಷಕ್ಕೆ ಯುವ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಬೇಕು ಎಂದರಲ್ಲದೆ ಕಳೆದ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುಕ್ಕಾಪಟ್ಟಣ ಸೇರಿದಂತೆ ಆ ಭಾಗದ ಕೆಲವು ಪ್ರದೇಶಗಳಲ್ಲಿನ ಮತಗಳು ಸಿಗದೆ ಸೋಲನ್ನು ಅನುಭವಿಸಲಾಯಿತು. ಈ ಭಾರಿ ಆ ಭಾಗದಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ತಾ.ಪಂ.ಸದಸ್ಯ ಶಶಿಧರ್, ನಿರಂಜನಮೂತರ್ಿ, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಲೋಕೇಶ್ ಮೂತರ್ಿ, ತಾ.ಪಂ.ಮಾಜಿ ಸದಸ್ಯ ಶಿವಣ್ಣ,  ಶಂಕರಣ್ಣ, ಕೆ.ಎಂ.ರಾಜಶೇಖರಪ್ಪ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕನಕ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಮಟ್ಟದ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಇದೇ 1ರ ಶನಿವಾರ ಬೆಳಗ್ಗೆ 9ಗಂಟೆಗೆ ತಾಲ್ಲೂಕು ಆಡಳಿತ ವರ್ಗದ ಪರವಾಗಿ ಕನಕದಾಸರ ವೈಭವದ ಉತ್ಸವವು ಪುರಸಭೆಯ ಮುಂಭಾಗದಿಂದ ನಗರದ ರಾಜಬೀದಿಗಳಲ್ಲಿ ನಡೆಯುವುದು.
ನಂತರ ಮಧ್ಯಾಹ್ನ 12.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಏರ್ಪಡಿಸಿದ್ದು, ಈ ಉತ್ಸವದೊಂದಿಗೆ
ಸಂಗೊಳ್ಳಿ ರಾಯಣ್ಣ ವೇಷಗಾರಿಕೆ, ಪಾಳೇಗಾರರ ವೇಷ, ಕನಕ ದೃಶ್ಯಾವಳಿ, ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ ಹಾಗೂ  ನಾಡಿನ ಹೆಸರಾಂತ ಕಲಾ ತಂಡಗಳು ಮತ್ತು ಸ್ಥಳೀಯ ಜಾನಪದ ತಂಡಗಳಾದ ದೊಳ್ಳು ಕುಣಿತ, ವೀರಭದ್ರನ ಕುಣಿತ, ನಾಸಿಕ್ಡೋಲು, ಹಾಗೂ ಗೊರಪ್ಪನವರ ತಂಡ, ದಾಸಪ್ಪನ ತಂಡ, ಹಕ್ಕ-ಬುಕ್ಕರು, ಒನಕೆ ಓಬವ್ವನ ಸ್ಥಬ್ದ ಚಿತ್ರಗಳೊಂದಿಗೆ ಮೆರವಣಿಗೆಗಳನ್ನು ಏರ್ಪಡಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಸಮಾವೇಶಕ್ಕೆ ಅಧಿಕ ಜನರು ಭಾಗವಹಿಸುವಂತೆ ಮನವಿ
ಚಿಕ್ಕನಾಯಕನಹಳ್ಳಿ,ನ.26 : ತುಮಕೂರಿನಲ್ಲಿ ಬೆಂಗಳೂರು ವಿಭಾಗ ಮಟ್ಟದ ಅಲ್ಪ ಸಂಖ್ಯಾತರ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಜನಾಂಗ ಸಮುದಾಯದ ಕ್ಷೇತ್ರ ವ್ಯಾಪ್ತಿಯ ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕ ಕ್ಯಾಪ್ಟನ್ ಸೋಮಶೇಖರ್ ಮನವಿ ಮಾಡಿದ್ದಾರೆ.
ತುಮಕೂರು ನಗರದ ಸಕರ್ಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಡಿಸೆಂಬರ್ 2ರ ಭಾನುವಾರ ನಡೆಯುವ ಸಮಾವೇಶಕ್ಕೆ  ಕೇಂದ್ರ ಸಚಿವ ರೆಹಮಾನ್ಖಾನ್ ಸೇರಿದಂತೆ ಕೇಂದ್ರ ಸಕರ್ಾರದ ಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಡೆಕೆರೆಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ
ಚಿಕ್ಕನಾಯಕನಹಳ್ಳಿ,ನ.26 : ತಾಲೂಕಿನ ಗೋಡೆಕೆರೆಯಲ್ಲಿ ಭಾರತ್ ನಿಮರ್ಾಣ್ ರಾಜೀವ್ಗಾಂಧಿ ರಾಷ್ಟ್ರೀಯ ಸೇವಾ ಕೇಂದ್ರದ ಕಟ್ಟಡದ ಉದ್ಘಾಟನಾ ಮತ್ತು ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಶಿಲನ್ಯಾಸ ಸಮಾರಂಭವು ಇದೇ 30ರ ಶುಕ್ರವಾರ ನಡೆಯಲಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮಿ, ಚಟಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮಿ ದಿವ್ಯ ಸಾನಿದ್ಯ
ವಹಿಸಲಿದ್ದಾರೆ.ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಶಿಲಾ ಫಲಕ ಅನಾವರಣಗೊಳಿಸಲಿದ್ದಾರೆ.

Thursday, November 22, 2012

november-2012

november -2012

november-2012

Saturday, November 17, 2012


ಚೌಡಿಕೆ ಎಲ್ಲಮ್ಮ ದೇವಾಲಯದ ಉದ್ಘಾಟನೆ, ಕಳಶಾರೋಹಣ
ಚಿಕ್ಕನಾಯಕನಹಳ್ಳಿ,ನ.16 : ಪಟ್ಟಣದ ಚೌಡಿಕೆ ಗುಡಿಕಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ನೂತನ ದೇವಾಲಯ ಉದ್ಘಾಟನೆ ಮತ್ತು ವಿಮಾನ ಗೋಪುರಕ್ಕೆ ಕಳಶಾರೋಹಣ ಮಹೋತ್ಸವವನ್ನು ಇದೇ ನವಂಬರ್ 18, 19, ಹಾಗೂ 20ರಂದು ಏರ್ಪಡಿಸಲಾಗಿದೆ.
18ರಂದು ಭಾನುವಾರ ಗೋಧೂಳಿ ಲಗ್ನದಲ್ಲಿ ಚೌಡಿಕೆ ಗುಡಿಗಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ದೇವಸ್ಥಾನದ ಮುಂಭಾಗದಲ್ಲಿ ಗಣಪತಿ ಪೂಜೆ, ಧ್ವಜಾರೋಹಣ ಹಾಗೂ ಗಂಗಾಪೂಜೆ ನಂತರ ಮಂಡಲ ಕಳಸ ಸ್ಥಾಪನೆ, ರಾತ್ರಿ 10ಕ್ಕೆ ದೇವಿಯೊಂದಿಗೆ ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಪಯಣ, 19ರಂದು ತೀರ್ಥರಾಮೇಶ್ವರ ವಜ್ರದ ಹೊಳೆಯಲ್ಲಿ ದೇವಿಯವರಿಗೆ ಪುಣ್ಯ ಜಲಗಂಗಾ  ಸ್ನಾನ, ಮಧ್ಯಾಹ್ನ 12.15ಕ್ಕೆ ನೂತನ ದೇವಾಳಯದ ಪ್ರವೇಶ ಮತ್ತು ಚೌಡಿಕೆ ರೇಣುಕಾ ಯಲ್ಲಮ್ಮ ದೇವಿಯವರ ಪ್ರತಿಷ್ಠಾಪನೆ, 20ರ ಮಂಗಳವಾರದಂದು ದೀಕ್ಷೆ ಪಡೆದ ಚೌಡಿಕೆ ಬಾಲಕರಿಂದ ಜೋಗಿ ಭೀಕ್ಷಾಸೇವೆ ನಂತರ ಕುಂಕುಮಾರ್ಚನೆ ಮಹಾಮಂಗಳಾರ ಕಾರ್ಯಕ್ರಮ ನಡೆಯಲಿದೆ.
ಮಾದಿಗರು ಹಾಗೂ ದಕ್ಕಲಿಗರ ಸಹಪಂಕ್ತಿ ಭೋಜನ
ಚಿಕ್ಕನಾಯಕನಹಳ್ಳಿ,ನ.16 : ಮಾದಿಗ ಜನಾಂಗ ದಕ್ಕಲಿಗ ಜನಾಂಗವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ ಎಂದು ಕೆಲವರು ತಾಳಿದ್ದ ಭಾವನೆಯನ್ನು ಹೋಗಲಾಡಿಸಲು ಮಾದಿಗ ಹಾಗೂ ದಕ್ಕಲಿಗ ಸಮುದಾಯ ಸೇರಿ ಸಹಪಂಕ್ತಿ ಭೋಜನ ಏರ್ಪಡಿಸಿರುವುದೇ ಉದಾಹರಣೆ ಎಂದು ಮಾದಿಗ ಜನಾಂಗದ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಪಟ್ಟಣದ ಗಾಂಧಿನಗರದ ದಕ್ಕಲಿಗ ವಾಸಸ್ಥಾನದಲ್ಲಿ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಮಾದಿಗ, ದಕ್ಕಲಿಗ ಸಮುದಾಯದ ಸಹಪಂಕ್ತಿ ಭೋಜನ ಮತ್ತು ಸಕರ್ಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾದಿಗ ಹಾಗೂ ದಕ್ಕಲಿಗ ಜನಾಂಗದವರ ಒಬ್ಬರಿಗೊಬ್ಬರ ಭಾಂದವ್ಯ ಉತ್ತಮವಾಗಿದೆ, ಈ ಭಾಂದವ್ಯವನ್ನು ಹೋಗಲಾಡಿಸಲು ಈ ಸಮುದಾಯದವರ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಅಸ್ಪೃಶ್ಯತೆಯಿಂದಾಗಿ ಸಮಾಜದಿಂದ ದೂರ ಉಳಿದಿರವು  ಜನಾಂಗದವರನ್ನು ಮುಖ್ಯವಾಹಿನಿಗೆ ಕರೆತರಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಎಂದರಲ್ಲದೆ ಯಾವೋದೋ ಒಂದು ಪಿ.ಎಚ್.ಡಿ ಮಾಡಲು ದಕ್ಕಲಿಗ ಜನಾಂಗವನ್ನು ಬಳಸಿ ಜನಾಂಗದ ಸ್ಥಿತಿಯನ್ನು ಕೆಳವರ್ಗಕ್ಕೆ ಕರೆದೊಯ್ಯುವುದು ಸರಿಯಲ್ಲ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಮಾದಿಗರು ಹಾಗೂ ದಕ್ಕಲಿಗ ಜನಾಂಗದವರು ಇರುವಂತಹ ಬಿನ್ನಾಭಿಪ್ರಾಯಗಳನ್ನು ತೊಡೆದು ಹಾಕಲು ಸಹಪಂಕ್ತಿ ಭೋಜನ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಆದರೆ ಸಹಪಂಕ್ತಿ ಭೋಜನ ಕಾರ್ಯಕ್ರಮ ಸ್ಥಳೀಯರೊಂದಿಗೆ ಆಗದೆ ಮೇಲ್ವರ್ಗದವರನ್ನು ಕರೆದು ಸಹಪಂಕ್ತಿ ಭೋಜನ  ಮಾಡಿದರೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಸಕರ್ಾರ ದಲಿತರನ್ನು ದೇವಾಲಯಗಳ ಪ್ರವೇಶಕ್ಕೆ ಅವಕಾಶ ನೀಡಿದರೂ, ಕೆಲವು ದೇವಾಲಯಗಳಲ್ಲಿ ಒಳಗೆ ಪ್ರವೇಶಿಸಲು ಅವಕಾಶ ನೀಡದೇ ಇರುವುದು ವಿಷಾದನೀಯ, ದಕ್ಕಲಿಗರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನ ಹೊಯ್ಸಲಕಟ್ಟೆ ಗ್ರಾಮಪಂಚಾಯ್ತಿಗೆ ಅಲೆಮಾರಿ ಜನಾಂಗದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅಲೆಮಾರಿ ಜನಾಂಗಕ್ಕೂ ರಾಜಕೀಯ ಪ್ರಾತಿನಿದ್ಯದ ಜೊತೆಯಲ್ಲಿ ಆಥರ್ಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರುವುದು ಮುಖ್ಯ ಎಂದರು. ದಕ್ಕಲಿಗ ಕಾಲೋನಿಯಲ್ಲಿ ಸಮುದಾಯ ಭವನ ನಿಮರ್ಿಸಲು ಸ್ಥಳಿಯ ಶಾಸಕರ ಅನುಧಾನದಲ್ಲಿ 2 ಲಕ್ಷ ರೂಪಾಯಿ ಬಿಡುಗಡೆಗೆ ಮಂಜೂರಾತಿ ನೀಡಿದರು.
ತಹಶಿಲ್ಧಾರ್ ಎನ್.ಆರ್. ಉಮೇಶ್ಚಂದ್ರ ಮಾತನಾಡಿ ದಕ್ಕಲಿಗ ಜನಾಂಗ ಅತಿ ಹಿಂದುಳಿದಿದ್ದು ದಲಿತ ಹಾಗೂ ದಕ್ಕಲಿಗ ಎಂಬ ಕೀಳು ಮೇಳು ಎಂಬ ಬಾವನೆ ಬರಬಾರದು ದಕ್ಕಲಿಗ ಜನಾಂಗ ವಾಸಿಸುವ ಸ್ಥಳದಲ್ಲಿ ಮನೆ ಹಾಗೂ ನಿವೇಶನ ವ್ಯವಸ್ಥೆಗೆ ಪುರಸಭೆ ಹಾಗೂ ತಾಲ್ಲೂಕು ಆಡಳಿತವತಿಯಿಂದ ಸಕರ್ಾರ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಕ್ಕಲಿಗ ಸಮುದಾಯದ ಬಬ್ಬೂರಯ್ಯ ಮಾತನಾಡಿ ನಾವೂ ಹಾಗೂ ಮಾದಿಗರು ಅನ್ಯೋನ್ಯದಿಂದಿದ್ದೇವೆ ಕಿಡಿಗೇಡಿಗಳಿಂದ ಜನಾಂಗ-ಜನಾಂಗಗಳ ಸಮಸ್ಯೆ ಏರ್ಪಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಡಿ.ಎಸ್.ಎಸ್ ಮುಖಂಡ ಲಿಂಗದೇವರು ಮಾತನಾಡಿ ದಕ್ಕಲಿಗ ಹಾಗೂ ಮಾದಿಗರಲ್ಲಿ ಬಿರುಕು ಮೂಡಿಸಲು ಗೊಂದಲ ಸೃಷ್ಠಿಸಿದ್ದಾರೆ ಆದರೆ ನಮ್ಮ ಜನಾಂಗಗಳಲ್ಲಿ ಯಾವುದೇ ರೀತಿಯ ಅಸ್ಪುಶ್ಯತೆ ಆಚರಣೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಟಿ.ವರದರಾಜು, ಸಿ.ಎಲ್.ದೊಡ್ಡಯ್ಯ, ಬಿ.ಇ.ಓ ಸಾ.ಶಿ.ನಾಗೇಶ್, ಗೋ.ನಿ.ವಸಂತಕುಮಾರ್, ಬಬ್ಬೂರಯ್ಯ, ಲಿಂಗದೇವರು, ಜೆ.ಸಿ.ಪುರ ಗೋವಿಂದರಾಜು, ಮಲ್ಲಿಕಾಜರ್ುನಯ್ಯ, ಅಶೋಕ, ಮತ್ತಿತರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಅಥ್ಲೆಟಿಕ್ಗೆ ಆಯ್ಕೆಯಾಗಿರುವ ಜಿ.ವಿ.ರೂಪೇಶ್ಗೆ ಎ.ಬಿ.ವಿ.ಪಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ, ಪಟ್ಟಣದ ಸಕರ್ಾರಿ ಸ್ವತಂತ್ರ್ಯ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಿ.ವಿ ರೂಪೇಶ್ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ ವಿಭಾಗದಲ್ಲಿ ಆಯ್ಕೆಯಾಗಿದ್ದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ನಮ್ಮರೂರಿನ ವಿದ್ಯಾಥರ್ಿರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುವದು ಸಂತಸದ ವಿಷಯ. ಸರಕಾರ ಪ್ರತಿ ತಾಲೂಕಿನಲ್ಲಿ ಅಥ್ಲೆಟಿಕ್ಸಗೆ ಸಂಭದಪಟ್ಟ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ಇಂತವರನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಬೇಕು, ನಗರದ ಕ್ರೀಡ ಅಭಿಮಾನಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಕ್ರೀಡ ಪಟುಗಳನ್ನು ಪ್ರೋತ್ಸಹ ನೀಡಬೇಕು. ಇದರಿಂದ ನಮ್ಮ ತಾಲ್ಲೂಕಿಗೂ ಹೆಸರು ಬರುತ್ತದೆ ಎಂದರೂ.
ಕ.ರ.ವೇ ಅಧ್ಯಕ್ಷ ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಯಾರು ಸಹ ರಾಷ್ಟ್ರಮಟ್ಟಕೆ ಆಯ್ಕೆಯಾಗಿಲ್ಲ ನಮ್ಮ ಊರಿನ ಹುಡುಗ ಆಯ್ಕೆಯಾಗಿರುವುದು ಸಂತಸ ತಂದಿದೆ. ಹೆಚ್ಚಿನ ಪ್ರೋತ್ಸಹ ಸಿಕ್ಕರೆ ಅಂತರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ, ಪರಿಶ್ರಮ ಮುಖ್ಯ ಎಂದರು.
ಈ ಸಂದರ್ಭದಲ್ಲಿ ರೂಪೇಶ್ನ ತಂದೆ,ತಾಯಿ, ಶರತ್, ವಾಸು ಹರೀಶ್, ಸುದಕರ್, ಮಾರುತಿ, ಅಕ್ರಂ ಉಪಸ್ಥಿತರಿದ್ದರು.

ಡಾ.ರಾಜ್ ನೆನಪು : ಸಾರ್ವಜನಿಕರಿಂದ ಸಾಕ್ಷ್ಯಚಿತ್ರಗಳ ವೀಕ್ಷಣೆ
ಚಿಕ್ಕನಾಯಕನಹಳ್ಳಿ,ನ.16 : ಡಾ.ರಾಜ್ಕುಮಾರ್ರವರು ಅಭಿನಯಿಸಿರುವ 200ಕ್ಕೂ ಹೆಚ್ಚು ಚಿತ್ರಗಳ ಸಾಕ್ಷ್ಯ ಚಿತ್ರಗಳ ಪೋಟೋ, ಪುಸ್ತಕಗಳ, ಪ್ರದರ್ಶನ, ಹಾಗೂ ರಾಜ್ರವರು ಹಾಡಿರುವ ಹಾಡುಗಳ ಸಿ.ಡಿ.ಯನ್ನು ಪಟ್ಟಣದ ಸುಪ್ರೀಂ ಸೆಲೂನ್ನಲ್ಲಿ ಸಾರ್ವಜನಿಕವಾಗಿ ಪ್ರದಶರ್ಿಸಲಾಗಿತ್ತು. 
ಡಾ.ರಾಜ್ರವರು ಅಭಿನಯಿಸಿರುವ ಚಿತ್ರಗಳ ಸುಮಾರು 2000ಸಾವಿರಕ್ಕೂ ಹೆಚ್ಚು ಪೋಟೋಗಳನ್ನು ಪ್ರದರ್ಶನಕ್ಕಿಡಲಾಗಿದ್ದು ಈ ಚಿತ್ರಗಳಲ್ಲಿ ರಾಜ್ರವರು ಅಭಿನಯಿಸಿರುವ ಮೊದಲ ಚಿತ್ರಗಳಿಂದ ಕೊನೆಯ ಚಿತ್ರದವರೆವಿಗೂ ಪ್ರದರ್ಶನಕ್ಕಿಡಲಾಗಿತ್ತು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಡಾ.ರಾಜ್ರವರು ಪೌರಾಣಿಕ, ಸಾಮಾಜಿಕಗಳಲ್ಲಿನ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗವನ್ನು ಉತ್ತುಂಗದ ಮಟ್ಟಕ್ಕೆ ಕರೆದೊಯ್ದಿದ್ದಾರೆ ಅವರ ನೆನಪು ಸದಾ ಇರಬೇಕು, ಅಂತಹ ಕಾರ್ಯದಲ್ಲಿ ಸುಬ್ರಹ್ಮಣ್ಯರವರು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಈ ರೀತಿಯ ಕಾರ್ಯಕ್ರಮಗಳು ನಾಡಿನ ಎಲ್ಲೆಡೆ ನಡೆಯಬೇಕು ಎಂದರು.
ಸುಪ್ರೀಂ ಸೆಲೂನ್ನ ಮಾಲೀಕ ಸುಬ್ರಹ್ಮಣ್ಯ ಮಾತನಾಡಿ ಕಳೆದ 8ತಿಂಗಳಿನಿಂದಲೂ ಸೆಲೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ನಮ್ಮ ಕೆಲಸದ ಜೊತೆಗೆ ಸಾಹಿತ್ಯ ಸೇವೆ ಮಾಡುವ ಕಾರ್ಯಕ್ಕಾಗಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಾ.ರಾಜ್ರವರನ್ನು ನೆನಪಿಗಾಗಿ ರಾಜ್ರವರು ಅಭಿನಯಿಸಿರುವ ಹಾಗೂ ಅವರ ವಿವಿಧ ರೀತಿಯಲ್ಲಿ ಚಿತ್ರಗಳನ್ನು ಸಂಗ್ರಹಿಸಿ ಇಂದು ಪ್ರದರ್ಶನಕ್ಕಿಡಲಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಡಾ.ರಾಜ್ಕುಮಾರ್ ಅಭಿಮಾನಿ ರೂಪೇಶ್ ಮಾತನಾಡಿ ಸುಮಾರು 25-30 ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ ಚಿತ್ರಗಳು ಹಾಗೂ ಪುಸ್ತಕಗಳನ್ನು ಇಂದು ಪ್ರದರ್ಶನಕ್ಕಿಡಲಾಗಿದೆ ಅಲ್ಲದೆ ಸಾರ್ವಜನಿಕರು, ಡಾ.ರಾಜ್ರವರ ಅಭಿಮಾನಿಗಳು, ಕಲಾವಿದರು, ಗಾಯಕರು ಸಾಕ್ಷ್ಯಚಿತ್ರ ವೀಕ್ಷಿಸಿದರು.

9ಡಿಗ್ರಿಯಷ್ಟು ಕಡಿಮೆಯಾದ ಉಷ್ಣಾಂಶ, ಹೆಚ್ಚಿದ ಶೀತ, ಜನರಿಗೆ ನಡಕು
ಚಿಕ್ಕನಾಯಕನಹಳ್ಳಿ,ನ.17 : ರಾಜ್ಯದ ಹವಾಮಾನಕ್ಕೆ ಹೋಲಿಸಿದರೆ  ತಾಲೂಕಿನಲ್ಲಿ ಅತ್ಯಂತ ಕನಿಷ್ಟ ಉಷ್ಣಾಂಶ  ದಾಖಲಾಗಿದ್ದು, ಮಾಮೂಲಿಗಿಂತ 9ಡಿಗ್ರಿ ಉಷ್ಣಾಂಶಕಡಿಮೆ ಯಾಗಿದೆ, ಈ ಮೂಲಕ ವಾತಾವರಣ  ಇಲ್ಲಿನ ಜನಕ್ಕೆ ಭಾರಿ ಚಳಿಯನ್ನು ತಂದೊಡ್ಡಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ  ಜನ  ವಿಪರೀತ ಚಳಿಯಿಂದಾಗಿ ಮುಂಜಾನೆ ಹೊರಗೆ ಬರಲು, ಸ್ವಟರ್, ಟೋಪಿ ಹಾಗೂ ಜಕರ್ಿನ್ಗಳ ಮೊರೆ ಹೋಗುತ್ತಿದ್ದಾರೆ.   
ಮುಂಜಾನೆಯ ಶೀತವಾತಾವರಣದಿಂದ ಮೈ ಬಿಸಿ ಮಾಡಿಕೊಳ್ಳಲು ಜನರು ರಸ್ತೆಯಲ್ಲಿರುವ ಕೆಲ ಕಸದ ವಸ್ತುಗಳನ್ನು ಸೇರಿಸಿ ಬೆಂಕಿ ಹಾಕಿ ಬೆಚ್ಚಗಾಗುತ್ತಿದ್ದಾರೆ. 
21 ಡಿಗ್ರಿ ಸೆಲ್ಸಿಯಸ್ನಷ್ಟು ವಾತಾವರಣ ಕೂಡಿದ್ದು ಪ್ರತಿ ಗಂಟೆಗೆ 10 ಕಿ.ಮೀ ವೇಗದಂತೆ ಗಾಳಿ ಬೀಸುತ್ತಿದ್ದು  ರಾತ್ರಿ 8ರಿಂದ ಶುರುವಾಗುವ ಶೀತವಾತಾವರಣ ಬೆಳಗಿನ ಜಾವ 4ಗಂಟೆ ಸುಮಾರಿನಲ್ಲಿ ಹೆಚ್ಚುತ್ತದೆ. ಈ ಶೀತವಾತಾವರಣದಿಂದ ಶಾಲಾ ಮಕ್ಕಳಿಂದ ಹಿಡಿದು ವಯಸ್ಕ ವೃದ್ದರವರೆಗೂ ಆರೋಗ್ಯ ಹದೆಗಟ್ಟಿದೆ. ನೆಗಡಿ, ಕೆಮ್ಮು, ಗಂಟಲ ಕೆರೆತ, ಜ್ವರದಿಂದ ಜನರು ಆಸ್ಪತ್ರೆಗೆ ತೆರಳುತ್ತಿರುವುದು ಕಂಡುಬರುತ್ತಿದೆ.
ಎ.ಪಿ.ಎಂ.ಸಿ.ಚುನಾವಣೆ: ಚಳಿಯಲ್ಲಿ ಕಾವೇರುತ್ತಿರುವ ಸಮರ
ಚಿಕ್ಕನಾಯಕನಹಳ್ಳಿ,ನ.17 : ಚಿಕ್ಕನಾಯಕನಹಳ್ಳಿಯ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯ 13ಕ್ಷೇತ್ರಗಳಲ್ಲಿ 1ಕ್ಷೇತ್ರ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 12 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ.
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದಿಂದ ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಎಸ್.ಆರ್.ರಾಜ್ಕುಮಾರ್(ಸಿಂಗದಹಳ್ಳಿ) ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 12 ಕ್ಷೇತ್ರಗಳ ಅಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದಾರೆ. ಇದೇ 25ರಂದು ಬೆಳಗ್ಗೆ 8ರಿಂದ 4ರವರೆಗೆ ಮತದಾನ ನಡೆಯಲಿದೆ. ನವಂಬರ್ 27ರಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ನಡೆಯಲಿದೆ.
  ಹನ್ನೆರಡು ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಬ್ಯಾಥರ್ಿಗಳು, ಯಳನಡು ಕ್ಷೇತ್ರ :  ವೈ.ಸಿ.ಸಿದ್ದರಾಮಯ್ಯ, ಟಿ.ಕೆ.ರಮೇಶಯ್ಯ, ಲಕ್ಷ್ಮಯ್ಯ, ಕರಿಯಪ್ಪ, ಹುಳಿಯಾರು ಕ್ಷೇತ್ರ :  ಆರ್.ಪಿ.ವಸಂತಯ್ಯ, ಕೆ.ಎಮ್.ರಾಜಶೇಖರಪ್ಪ, ಹೆಚ್.ಆರ್.ರಂಗನಾಥ್, ಸೈಯದ್ ಜಲಾಲ್, ಹೊಯ್ಸಳಕಟ್ಟೆ ಕ್ಷೇತ್ರ : ರುದ್ರಪ್ಪ ಡಿ.ಆರ್, ರಾಮಾನಾಯ್ಕ, ಸೋಮಶೇಖರನಾಯ್ಕ, ಲಚ್ಚಾನಾಯ್ಕ, ತಿಮ್ಮನಹಳ್ಳಿ ಕ್ಷೇತ್ರ : ಸಣ್ಣಕರಿಯಪ್ಪ, ರಾಮಚಂದ್ರಯ್ಯ, ಎಸ್.ಆರ್.ಸ್ವಾಮಿನಾಥ್, ಬಸವರಾಜು, ತೀರ್ಥಪುರ ಕ್ಷೇತ್ರ : ವಸಂತಲಕ್ಷ್ಮೀ, ಲತಾ.ಇ, ದ್ರಾಕ್ಷಾಯಣಮ್ಮ, ಈರಮ್ಮ, ಕಂದಿಕೆರೆ ಕ್ಷೇತ್ರ : ಸಣ್ಣಯ್ಯ, ಬಿ.ಕೆ.ಜಯಣ್ಣ, ಬಿ.ಪಂಚಾಕ್ಷರಯ್ಯ, ಚಿ.ನಾ.ಹಳ್ಳಿ ಕಸಬಾ ಕ್ಷೇತ್ರ : ಸಿ.ಕೆ.ಶಾಂತಕುಮಾರ್, ರಂಗಸ್ವಾಮಿ, ಸಿ.ಕೆ.ಗುರುಸಿದ್ದಯ್ಯ, ಬಸವರಾಜು, ಶಾಂತಕುಮಾರ್, ಲಿಂಗರಾಜು ದೇವರಮನೆ, ಕೆ.ಶಿವಣ್ಣ, ಹಂದನಕೆರೆ ಕ್ಷೇತ್ರ : ಸೋಮಶೇಖರಯ್ಯ, ಕಾಂತರಾಜ್ ಅರಸ್, ಚಂದ್ರಣ್ಣ, ಆರ್.ಜಿ.ನೀಲಕಂಠಪ್ಪ, ಮತಿಘಟ್ಟ ಕ್ಷೇತ್ರ : ಹೆಚ್.ಬಸವರಾಜು, ನಟರಾಜು, ಬಸವರಾಜು, ಶೆಟ್ಟಿಕೆರೆ ಕ್ಷೇತ್ರ : ಎನ್.ಸಿದ್ದೇಗೌಡ, ಬಿ.ಸಿ.ಶಿವಕುಮಾರ್, ಕೆ.ಹೆಚ್.ಈಶ್ವರಮೂತರ್ಿ, ಕೃಷ್ಣಮೂತರ್ಿ, ಜೆ.ಸಿ.ಪುರ ಕ್ಷೇತ್ರ : ಆರ್.ಗಂಗಾಧರಯ್ಯ, ಎಮ್.ಎನ್.ಶಿವರಾಜು, ನಿಜಾನಂದಮೂತರ್ಿ, ಎಸ್.ಜಿ.ಮಹೇಶ್, ಬಿ.ಶಿವಶಂಕರಯ್ಯ, ವರ್ತಕರ ಕ್ಷೇತ್ರದಿಂದ : ಎಲ್.ಆರ್.ಬಾಲಾಜಿ, ಸಿ.ಎಸ್.ಶಾಂತಕುಮಾರ್, ವೈ.ಎ.ರಿಯಾಜ್ ಅಹಮದ್, ಕೆ.ನಿಂಗರಾಜು ಸ್ಪಧರ್ಿಸಿದ್ದಾರೆ. 
ವಿಶ್ವದಲ್ಲಿನ ಎಲ್ಲಾ ಕನ್ನಡಿಗರಿಗೆ ಡಾ.ರಾಜ್ ಎಂದೆಂದಿಗೂ ಅಣ್ಣ: 
ಚಿಕ್ಕನಾಯಕನಹಳ್ಳಿ,ನ.17 : ಡಾ.ರಾಜ್ಕುಮಾರ್ರವರು ಮೌಲ್ಯಾಧಾರಿತ ಜೀವನಕ್ಕೆ ಸಾಕ್ಷಿಯಾಗಿ ಬಾಳಿದವರು, ಚಿಂತನೆ, ಸಾಮಾಜಿಕ ಪ್ರಜ್ಞೆಯನ್ನು ಹೊಂದಿ ಸೂಕ್ಷ್ಮ ಸಂವೇದನಾಶೀಲ ಕಲಾವಿದರಾಗಿ ಯಾವುದೇ ಪಾತ್ರಕ್ಕೂ ತಕ್ಕ ಅಭಿನಯ  ನೀಡುತಿದ್ದರು ಎಂದು ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಅಭಿಪ್ರಾಯಪಟ್ಟರು.
ಪಟ್ಟಣದ ಸುಪ್ರೀಂ ಮೆನ್ಸ್ ಸೆಲೂನ್ನಲ್ಲಿ ಆಯೋಜಿಸಿದ್ದ ಡಾ.ರಾಜ್ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ರವರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಜಾತಿ ಮೀರಿ ಬೆಳೆದವರು, ಸಿಂಗಾನಲ್ಲೂರಿನ ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮರವರ ಪುತ್ರರಾದ ಡಾ.ರಾಜ್, ಗುಬ್ಬಿ ವೀರಣ್ಣ ಕಂಪನಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಗುಬ್ಬಿವೀರಣ್ಣ ಕಂಪನಿಯೂ ಅವರಿಗೆ ಶಾಲೆಯಾಗಿ, ವಿಶ್ವವಿದ್ಯಾಲಯವಾಗಿ, ನಟನಾ ಕೌಶಲ್ಯದ ತರಬೇತಿ ನೀಡಿ, ಕಲಾ ವಿಶಾರದನಾಗಿ ಹೊರಹೊಮ್ಮಿದರು ಎಂದರಲ್ಲದೆ,   ಅವರ ವಿನಯ, ಬೇರೆಯವರಿಗೆ ನೋಯಿಸದೇ ಇರುವುದು, ಸತ್ಯಜೀವನ, ಆದರ್ಶ ಪ್ರಾಯವಾದುದು ಎಂದರು. 
12ನೇ ಶತಮಾನದಲ್ಲಿ ಬಸವೇಶ್ವರರಿಗೆ ಅಣ್ಣ ಎಂದು ಪ್ರೀತಿಯಿಂದ ಕರೆದದ್ದು ಬಿಟ್ಟರೇ ಈಗ ಈ ಅಭಿದಾನವನ್ನು ಜನರು ಡಾ.ರಾಜ್ರವರಿಗೆ ಅಣ್ಣ ಎನ್ನುವ ಮೂಲಕ ಅಭಿಮಾತನದ ಉತ್ತುಂಗಕ್ಕೆ ಕೊಂಡ್ಯೋಯ್ದರು.  
ಸುಪ್ರೀಂ ಸುಬ್ರಹ್ಮಣ್ಯರವರು 8 ತಿಂಗಳಿದಲೂ ಸೆಲ್ಯೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ.ರಾಜ್ ಒಂದು ನೆನಪು ಚಿ.ನಾ.ಹಳ್ಳಿ ಪಟ್ಟಣದ ಜನರಿಗೆ ಸುಬ್ರಹ್ಮಣ್ಯರವರು ನೀಡಿದ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ತುಮಕೂರು ನಟರಾಜ್, ಡಾ.ರಾಜ್ರವರ ಸಹ ನಟರಾಗಿ ಅನೇಕ ಚಲನಚಿತ್ರದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾ, ಡಾ.ರಾಜ್ರವರು ಚಿತ್ರತಂಡದಲ್ಲಿನ ಎಲ್ಲಾ ವರ್ಗ ಕಲಾವಿದರೊಂದಿಗೆ ಬೆರತು ಯಾವುದೇ ತಾರತಮ್ಯ ಮಾಡದೇ ಸಹಪಂಕ್ತಿ ಭೋಜನ ಸವಿಯುತ್ತಿದ್ದರು. ಸಹ ನಟರಿಗೆ ಅನೇಕ ಹಿತವಚನ ಹೇಳುತ್ತಿದ್ದರು, ಅವರ ಸರಳ ಜೀವನ ನಮ್ಮೆಲ್ಲರಿಗು ಆದರ್ಶ ಪ್ರಾಯವಾದದೆಂದು ಹೇಳಿದರು.
ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಡಾ.ರಾಜ್ರವರು ಕನ್ನಡದ ಆಸ್ತಿ ಎಂದು ವಣರ್ಿಸಿದರು. ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಎಂದೇ ಖ್ಯಾತರಾದ ಎಂ.ಸಿ.ಕಲ್ಲೇಶ್ರವರ ಹಾಗೂ  ಮೈಸೂರು ಕುಮಾರ್ರ ಗಾಯನ ಅಭಿಮಾನಿಗಳನ್ನು ರಂಜಿಸಿತು. 
ಸಮಾರಂಭದಲ್ಲಿ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸ್ವಾಗತಿಸಿ, ಸಿ.ಎಚ್.ರೂಪೇಶ್ ನಿರೂಪಿಸಿ, ಸಿ.ಪಿ.ಗಿರೀಶ್ ವಂದಿಸಿದರು.

Thursday, November 15, 2012


ಎ.ಪಿ.ಎಂ.ಸಿ.ಚುನಾವಣೆ: 13 ಕ್ಷೇತ್ರಗಳಿಗೆ 85ಜನರ ನಾಮಪತ್ರ ಸಲ್ಲಿಕೆ
  • ಎಸ್.ಆರ್.ರಾಜ್ಕುಮಾರ್ ಅವಿರೋಧ ಆಯ್ಕೆ, ಅಧಿಕೃತ ಘೋಷಣೆ ಬಾಕಿ
  • ಹುಳಿಯಾರು ಕ್ಷೇತ್ರಕ್ಕೆ ಅತಿ ಹೆಚ್ಚು ನಾಮಪತ್ರಗಳು
  • ಅತಿ ಹೆಚ್ಚು ಎಂದರೆ 14, ಅತಿ ಕಡಿಮೆ 1 ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ನ.13: ತಾಲೂಕಿನ ಎ.ಪಿ.ಎಂ.ಸಿ.ಚುನಾವಣೆ 13 ಕ್ಷೇತ್ರಗಳಿಗೆ 85ಜನರು 99 ನಾಮಪತ್ರಗಳು ಸಲ್ಲಿಸಿದ್ದಾರೆ, ಈ ಪೈಕಿ ಹುಳಿಯಾರು ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ 14 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರಕ್ಕೆ 1 ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರಕ್ಕೆ ಟಿ.ಎ.ಪಿ.ಸಿ.ಎಂ.ಎಸ್ನ ಅಧ್ಯಕ್ಷ ಎಸ್.ಆರ್.ರಾಜ್ಕುಮಾರ್ ಸಿಂಗದಹಳ್ಳಿ ಆಯ್ಕೆ ಬಹುತೇಕ ಖಚಿತವಾಗಿದ್ದು ಎ.ಪಿ.ಎಂ.ಸಿ.ನಿದರ್ೇಶಕರಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ  ಅಧಿಕೃತ ವಾಗಿ ಘೋಷಿಸಿಬೇಕಿದೆ.
ಉಳಿದ 12 ಕ್ಷೇತ್ರಗಳ ಪೈಕಿ ಯಳನಡು ಕ್ಷೇತ್ರಕ್ಕೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ, ಹುಳಿಯಾರಿಗೆ 14, ಹೊಯ್ಸಳಕಟ್ಟೆ 5, ತಿಮ್ಮನಹಳ್ಳಿ 8, ತೀರ್ಥಪುರ 7, ಕಂದಿಕೆರೆ 7, ಚಿಕ್ಕನಾಯಕನಹಳ್ಳಿ ಕಸಬಾ 11, ಹಂದನಕೆರೆ 5, ಮತಿಘಟ್ಟ 7, ಶೆಟ್ಟೀಕೆರೆ 10, ಜೆ.ಸಿ.ಪುರ 8, ವರ್ತಕರ ಕ್ಷೇತ್ರಕ್ಕೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೆಲೂನ್ನಲ್ಲಿ ಸಾಹಿತ್ಯ:  ಡಾ.ರಾಜ್ ಒಂದು ನೆನಪು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ನ.13: ಡಾ.ರಾಜ್ ಒಂದು ನೆನಪು ಕಾರ್ಯಕ್ರಮವನ್ನು ಪಟ್ಟಣದ ಸುಪ್ರಿಂ ಮೆನ್ಸ್ ಸೆಲೂನ್ನಲ್ಲಿ ಇದೇ 16ರ ಸಂಜೆ 5ಕ್ಕೆ ವೈವಿಧ್ಯ ಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸೆಲೂನ್ನ ಮಾಲೀಕ ಹಾಗೂ ಸಾಹಿತ್ಯ ಪ್ರೇಮಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಪ್ಟಣದ ಮತಿಘಟ್ಟ ಗೇಟ್ನಲ್ಲಿ ಇರುವ ಸುಪ್ರಿಂ ಮೆನ್ಸ್ ಸೆಲೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮದಡಿಯಲ್ಲಿ ಡಾ.ರಾಜ್ರವರನ್ನು ಕುರಿತ ಸಾಕ್ಷ್ಯಚಿತ್ರ, ಅವರ ಜೀವನದ ಅಪರೂಪದ ಪೋಟೊ ಮತ್ತು ಪುಸ್ತಕಗಳ ಪ್ರದರ್ಶನ, ಅವರ ಕುರಿತಾದ ಮಾತುಕತೆ ಹಾಗೂ ಮೈಸೂರ್ ಕುಮಾರ್ರವರಿಂದ ರಾಜ್ರ ಹಾಡುಗಳ ಗಾಯನವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಡಾ.ರಾಜ್ರವರ ಜೊತೆ ನಟಿಸಿರುವ ನಟ ತುಮಕೂರು ನಟರಾಜ್ ಹಾಗೂ ಗಾಯಕ ಎಂ.ಸಿ.ಕಲ್ಲೇಶ್ರವರುಗಳಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು, ಪೊಲೀಸ್ ಅಧಿಕಾರಿ ಸಿ.ಆರ್.ರವೀಶ್, ಸಾಹಿತಿ ಎಂ.ವಿ.ನಾಗರಾಜ್ರವರು ಉಪಸ್ಥಿರಿರುವರು.
ಈ ಸೆಲೂನ್ನಲ್ಲಿ ಈಗಾಗಲೇ ಕವಿಗೋಷ್ಠಿ, ಡಿ.ವಿ.ಜಿ.ರವರ ಮಂಕುತಿಮ್ಮನ ಕಗ್ಗ ಮೇಲಿನ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿತ್ತು ಇದು ಮೂರನೇ ಕಾರ್ಯಕ್ರಮ.
ಕನಕ ಜಯಂತಿ: ನ.15ರಂದು ಪೂರ್ವಭಾವಿ ಸಭೆ:
ಚಿಕ್ಕನಾಯಕನಹಳ್ಳಿ,ನ.13: ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ರೂಪುರೇಷೆಗಳ ಬಗ್ಗೆ ಚಚರ್ಿಸಲು ಸಮಾಜ ಬಾಂಧವರ  ಪೂರ್ವ ಭಾವಿ ಸಭೆಯನ್ನು ಇದೇ15ರಂದು ಮಧ್ಯಾಹ್ನ 4 ಗಂಟೆಗೆ ಕರೆಯಲಾಗಿದೆ ಎಂದು ಕನಕ ಸೇವಾ ಸಮಿತಿ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಎಲ್ಲಾ ಜನಪ್ರತಿನಿಧಿಗಳು, ನೌಕರ ಬಾಂಧವರು, ವಿವಿಧ ಸಂಘಗಳ ಪದಾಧಿಕಾರಿಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯಮಾನ್ಯರು ಸೇರಿದಂತೆ ಸಮಾಜದ ಎಲ್ಲಾ ಬಂಧುಗಳ ಸಭೆಗೆ ಆಗಮಿಸಿ ಡಿ.1ರಂದು ನಡೆಯಲಿರುವ ಕನಕ ಜಯಂತಿ ಯಶಸ್ವಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕಣ್ಣಯ್ಯ ಕೋರಿದ್ದಾರೆ.
ನಿವೃತ್ತ ಸಂಘದ ಅಧ್ಯಕ್ಷ ಎನ್.ನರಸಿಂಹಯ್ಯನವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ನ.14: ನಿವೃತ್ತ ನೌಕರರ ಸಂಘದ ವತಿಯಿಂದ 19 ವರ್ಷಗಳ ಸುದೀರ್ಘ ಅವದಿಗೆ ಸಂಘದ ಅಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎನ್. ನರಸಿಂಹಯ್ಯನವರಿಗೆ ಸಂಘದ ಕಛೇರಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಅಪರ್ಿಸಿ, ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೃತರ ಗುಣಗಾನ ಮಾಡಿದ ಸಂಘದ ಪದಾಧಿಕಾರಿಗಳು, ಅವರ ಸೇವೆ, ಸಂಘಟನೆ, ಅವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಕೆ.ರಂಗನಾಥ್ 19 ವರ್ಷಗಳ ಕಾಲ ಸಂಘದಲ್ಲಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಕ್ರಿಯಾತ್ಮಕವಾಗಿ  ಮಾರ್ಗದರ್ಶನ ಮಾಡುತ್ತಾ  ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ಅಜೀವ ಅಧ್ಯಕ್ಷರಾಗಿದ್ದವರು ಎನ್.ನರಸಿಂಹಯ್ಯನವರು ಅವರ ಮರಣದಿಂದ ನಮಗೆ ತುಂಬಲಾರದ ನಷ್ಠವುಂಟಾಗಿದೆ ಎಂದರು.
ನಿವೃತ್ತ ಶಿಕ್ಷಕ ಜಿ.ಸಿದ್ದರಾಮಯ್ಯ ಮಾತನಾಡಿ ನರಸಿಂಯ್ಯನವರು ತಮ್ಮ ಜೀವಿತಾವಧಿಯಲ್ಲಿ ನೌಕರರ ಸಂಘಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ, ಕೌಟುಂಬಿಕ ಜೀವನದಲ್ಲಿ ಯಾವುದೇ ಎದುರಾದ ಸಂದರ್ಭದಲ್ಲಿ ಸಂಘದ ಏಳಿಗಾಗಿ ಶ್ರಮಿಸಿ ಸಂಘದ ಅಭಿವೃದ್ದಿಗೆ ಕಾರಣರಾಗಿದ್ದಾರೆ.
ಸಮಾರಂಭದಲ್ಲಿ  ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.  ಸಂಘದ ಕಾರ್ಯದಶರ್ಿ ಸಿ.ಡಿ.ರುದ್ರಮುನಿ, ಉಪಾಧ್ಯಕ್ಷ ನಂಜುಂಡಪ್ಪ,  ನರಸಿಂಹಯ್ಯನವರ ಪುತ್ರಿ ಎನ್.ಇಂದಿರಮ್ಮ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಣದ ದೇವರಹಟ್ಟಿಯಲ್ಲಿ ದೀಪೋತ್ಸವ
ಚಿಕ್ಕನಾಯಕನಹಳ್ಳಿ,.ನ.14 : ಶ್ರೀ ಬಾಣದರಂಗನಾಥಸ್ವಾಮಿ ಮತ್ತು ಬೇವಿನಹಳ್ಳಿ ಅಮ್ಮನವರ ದೀಪೋತ್ಸವವು ನವಂಬರ್ 17ರ ಶನಿವಾರದಂದು ಗೋಡೆಕೆರೆಯ ಬಾಣದೇವರಹಟ್ಟಿಯಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, 9ಕ್ಕೆ ಧ್ವಜಾರೋಹಣ, 12ಕ್ಕೆ ಗಂಗಾಪೂಜೆ, 1ಕ್ಕೆ ರುದ್ರಾಭಿಷೇಕ ಮತ್ತು ನಾಗಪ್ಪನ ಪೂಜೆ, 2ಕ್ಕೆ ಬಸವನ ಉತ್ಸವ, 3ಕ್ಕೆ ತುಳಸಿ ಪೂಜೆ, 4ಕ್ಕೆ ರಾಶಿ ಪೂಜೆ, 5ಕ್ಕೆ ಕಳಸಪೂಜೆ, ಹಾಗೂ ದೀಪೋತ್ಸವ, ರಾತ್ರಿ 12ಕ್ಕೆ ಭೂ ಕೈಲಾಸೋತ್ಸವ ನಡೆಯಲಿದೆ. ಸಂಜೆ 6ಗಂಟೆಗೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 10 ಗಂಟೆಗೆ ಆಕರ್ೆಷ್ಟ್ರ ಹಮ್ಮಿಕೊಳ್ಳಲಾಗಿದೆ.
ರಾತ್ರಿ 8ಗಂಟೆಗೆ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಯಾದವಾನಂದ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಶಾಸಕರುಗಳಾದ ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಬಿ.ಸಿ.ನಾಗೇಶ್, ಟ.ಬಿ.ಜಯಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಸಂಘಟಕರು ಮನವಿ ಮಾಡಿದರು.


Monday, November 5, 2012


ಸದಾಶಿವ ಆಯೋಗವನ್ನು ವಿರೋಧಿಸಿ ವಿವಿಧ ಸಮುದಾಯದವರ ಭಾರಿ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.5 : ಎ.ಜೆ.ಸದಾಶಿವ ಆಯೋಗ ಸಕರ್ಾರಕ್ಕೆ ನೀಡಿರುವ ವರದಿ ದೋಷಪೂರಿತವಾಗಿದೆ, ಕೆಲವರ ಸ್ವಾರ್ಥಕ್ಕಾಗಿ ಹಾಗೂ ರಾಜಕಾರಣದ ತಂತ್ರಗಾರಿಕೆಗಾಗಿ ಇಂತಹ ವರದಿ ಹೊರ ಬಂದಿದೆ, ಇದು ಜಾತಿ-ಜಾತಿಗಳಲ್ಲಿ ಕಿಚ್ಚನ್ನು ಹಚ್ಚಿ ಪರಸ್ಪರ ಕಾದಾಡುವುದಕ್ಕೆ ನಾಂದಿಯಾಗಿದ್ದು, ಸಕರ್ಾರ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಬಂಜಾರ, ಬೋವಿ, ಕೊರಚ, ಕೊರಮ, ಕುಳುವ, ಸಿಳ್ಳೇಕ್ಯಾತ, ಬುಡುಬುಡಿಕೆ, ಸಿದ್ದರು, ಜೋಗಿ, ದೊಂಬಿದಾಸ ಹಾಗೂ ಇತರೆ ಸಮುದಾಯದವರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕನಕ ಭವನದಿಂದ ತಾಲ್ಲೂಕು ಕಛೇರಿವೆರಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಮುದಾಯದ ಭಾರಿ ಸಂಖ್ಯೆಯಲ್ಲಿನ ಜನರು ಹಾಗೂ ಸಮಾಜದ ಮುಖಂಡರಗಳು  ಭಾಗವಹಿಸಿದ್ದರು.
ಪರಿಶಿಷ್ಟರಲ್ಲಿ ಒಳಮೀಸಲಾತಿಯ ವಗರ್ೀಕರಣಕ್ಕೆ ಉದ್ದೇಶ ಪೂರ್ವಕವಾಗಿ ಶಿಫಾರಸ್ಸು ಮಾಡಿರುವ ವರದಿಯು, ಈ ನೆಲದ ಕಾನೂನಿಗೆ ವ್ಯತಿರಿಕ್ತವಾಗಿದೆ, ಈ ವರದಿಯ ಪರಿಣಾಮವಾಗಿ ಪರಿಶಿಷ್ಠ ಜಾತಿಗಳಲ್ಲೇ ಶ್ರೇಣಿಕೃತ ಸಮಾಜದ ನಿಮರ್ಾಣವಾಗಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವ ಸ್ಥಿತಿ ನಿಮರ್ಾಣವಾಗುತ್ತದೆ. ಪರಿಶಿಷ್ಠರಲ್ಲಿ ವಿವಿಧ ಜಾತಿ ಜನಾಂಗಗಳು ಸೇರ್ಪಡೆಗೊಂಡಿರುವುದರಿಂದ ಇವರೆಲ್ಲ ಸಾಮಾಜಿಕ, ಆಥರ್ಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂಬ ವಿಶಾಲವಾದ ಪರಿಕಲ್ಪನೆ ಈಗಿನ ಪೀಳಿಗೆಯ ಜನರಲ್ಲಿದೆ. ಈ ವರದಿಯಾದಾರದ ಮೇಲೆ ಸ್ಪೃಶ್ಯ ಮತ್ತು ಅಸ್ಪೃಶ್ಯ ಪರಿಶಿಷ್ಠ ಜಾತಿ ವಗರ್ೀಕರಣವೇನಾದರೂ ಆದರೆ ಈ ವರ್ಗಗಳನ್ನು ಜನರ ನೋಡುವ ದೃಷ್ಠಿಕೋನವೇ ಬೇರೆಯಾಗಬಹುದು ಎಂದರು.
ಆದ್ದರಿಂದ ಈ ವರದಿಯ ತಯಾರಿಕೆಗಾಗಿ ಸಂಗ್ರಹಿಸಿರುವ ಎಲ್ಲಾ ಅಧಿಕೃತ ಮಾಹಿತಿಗಳನ್ನು ಬಳಕೆ ಮಾಡಿಕೊಂಡು ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅಂಕಿ ಅಂಶಗಳನ್ನು ಕಲೆಹಾಕಿ 1950ರಿಂದ ಇದುವರೆವಿಗೂ ಪರಿಶಿಷ್ಠ ಜಾತಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ 101 ಜಾತಿಗಳಿಗೆ ಮೀಸಲಾತಿ ಅನ್ವಯವಾಗುವ ಪ್ರತಿ ಕ್ಷೇತ್ರಗಳಲ್ಲಿ ಅವರವರ ಜನಸಂಖ್ಯೆಗನುಗುಣವಾಗಿ ಎಷ್ಟು ಪ್ರಯೋಜನ ಪಡೆಯಬೇಕಿತ್ತು ಮತ್ತು ಅದರಲ್ಲಿ ಎಷ್ಟು ಪರಯೋಜನ ಪಡೆಯಲಾಗಿದೆ ಎಂಬುದನ್ನು ಪರಮಾಶರ್ಿಸಿ, ಕಡಿಮೆ ಪ್ರಯೋಜನ ಪಡೆದಿರುವ ಜಾತಿ ಮತ್ತು ಜನಾಂಗಕ್ಕೆ ಹೆಚ್ಚು ಪ್ರಯೋಜನ ಪಡೆದವರ ಸಮಕ್ಕೆ ತರಲು ಕಾನೂನು ರೀತ್ಯಾ ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ವಾಸ್ತವಾಂಶದ ವರದಿ ತಯಾರಿಸಲು ಹಾಗೂ ಸಲಹೆ ಶಿಫಾರಸ್ಸನ್ನು ಮಾಡಲು ಒಂದು ಸಮಿತಿ ರಚಿಸಬೇಕು.
 ಈ ಆಯೋಗ ಸಮಗ್ರ ವರದಿಯೊಂದನ್ನು ನೀಡಬೇಕಾಗಿರುವುದರಿಂದ  ಹೆಚ್ಚಿನ ಜನಸಂಖ್ಯೆ ಇರುವ ಎಡ, ಬಲ, ಬಂಜಾರ ಮತ್ತು ಭೋವಿ ಜನಾಂಗದವರಿಎಗ ಸೂಕ್ತ ಪ್ರಾತಿನಿಧ್ಯ ನೀಡಿ ಇತರೆ ಜಾತಿಗಳ ಪರವಾಗಿ ಎರಡು ಜನ ಪ್ರತಿನಿಧೀಗಳನ್ನು ಸದಸ್ಯರನ್ನಾಗಿಸಿ ಎಲ್ಲರೂ ಒಪ್ಪಬಹುದಾದ ಒಂದು ಸಮಗ್ರವಾದ ವರದಿಯನ್ನು ತಯಾರಿಸಲು ಆಯೋಗಕ್ಕೆ ತಿಳಿಸಬೇಕೆಂದು ಸಕರ್ಾರಕ್ಕೆ ನೀಡಿರುವ  ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರಿಭಟನೆಯಲ್ಲಿ  ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಮಾತನಾಡಿ ಎ.ಜೆ.ಸದಾಶಿವ ಆಯೋಗವು ತಾನು ನಡೆಸಬೇಕಿದ್ದ ಅಧ್ಯಯನದಲ್ಲಿ ಭಾರತ ಸಂವಿಧಾನವು ನೀಡಿರುವ ಮೀಸಲಾತಿ ಸೌಲಭ್ಯವು 1950ರಿಂದ ಈವರೆವಿಗೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಎಲ್ಲಾ ಉಪಜಾತಿಯವರಿಗೆ ಎಷ್ಟರ ಮಟ್ಟಿಗೆ ತಲುಪಿದೆ, ಕೆಲವರಿಗೆ ತಲುಪದೆ ಅನಾನುಕೂಲವಾಗಿದೆಯೇ ಎಂಬುದನ್ನು ಪ್ರತಿಬಿಂಬಿಸಿ ಕಡಿಮೆ ಪ್ರಯೋಜನವಾಗಿರುವ ಜಾತಿಗಳಿಗೆ ಇತರೆಯವರು ಪಡೆದ ಪ್ರಯೋಜನಕ್ಕೆ ಸಮನಾಗಿ ಸರಿದೂಗಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಬೇಕಾಗಿತ್ತು, ಆದರೆ ಆಯೋಗವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೆಲವೇ ಉಪಜಾತಿಯ ಜನರಿಗೆ ಅನುಕೂಲವಾಗುವಂತಹ ಶಿಫಾರಸ್ಸು ಮಾಡಿರುವುದು ನ್ಯಾಯ ಸಮ್ಮತವಾದ ವರದಿಯಲ್ಲವೆಂಬುದನ್ನು ಸ್ಪಷ್ಟ ಪಡಿಸುತ್ತದೆ ಎಂದರು.
ಮಾಜಿ.ಜಿ.ಪಂ.ಉಪಾಧ್ಯಕ್ಷೆ ಚಂಪಕಮಾಲಾ ಮಾತನಾಡಿ ಎ.ಜೆ.ಸದಾಶಿವ ಆಯೋಗದ ವರದಿಯು ಮೀಸಲಾತಿಯನ್ನು ಪ್ರಕಟಿಸಿರುವುದನ್ನು ನೋಡಿದರೆ ಈ ಆಯೋಗವು ಸರಿಯಾದ ಸಮೀಕ್ಷೆ ನಡೆಸದೆ ಸಿದ್ದಪಡಿಸಿರುವ ಅವೈಜ್ಞಾನಿಕವಾದ ವರದಿಯಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕು ಅಧಿಕ ಜನರು ಜಮಾಯಿಸಿದ್ದರು. ತಾ.ಬಂಜಾರ ಸೇವಾ ಸಂಘದ ಕಾರ್ಯದಶರ್ಿ ರಾಮಚಂದ್ರನಾಯ್ಕ ಮನವಿ ಪತ್ರವನ್ನು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಭೋವಿ ಸಮಾಜದ ಅಧ್ಯಕ್ಷ ಕೆ.ಕೆ.ಹನುಮಂತಯ್ಯ, ಕಾರ್ಯದಶರ್ಿ ತಿಮ್ಮಾಭೋವಿ, ತಾ.ಪಂ.ಸದಸ್ಯೆ ಚೇತನಗಂಗಾಧರ್,  ಗುರುವಯ್ಯ, ಚಂದ್ರಾನಾಯ್ಕ,  ಲಕ್ಷ್ಮೀನಾಯ್ಕ, ಮೋತಿನಾಯ್ಕ, ವೇದಮೂತರ್ಿ ಸೇರಿದಂತೆ ವಿವಿಧ ಸಮುದಾಯದವರು ಭಾಗವಹಿಸಿದರು.
ಗ್ರಾಮ ಸಹಾಯಕರ ಸಂಘದ ಪಾದಯಾತ್ರೆಗೆ ಬೆಂಬಲ
ಚಿಕ್ಕನಾಯಕನಹಳ್ಳಿ,ನ.5: ಗ್ರಾಮ ಸಹಾಯಕರುಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿದ್ದಗಂಗಾ ಮಠದಿಂದ ವಿಧಾನ ಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಯಾತ್ರೆಗೆ ತಾಲೂಕು ಗ್ರಾಮ ಸಹಾಯಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

Tuesday, October 30, 2012


ಅಲ್ಲಿದೆ ನಮ್ಮನೆ, ಇಲ್ಲಿರಿವೆ ಸುಮ್ಮನೆ: ಸಚಿವ ಪುಟ್ಟಸ್ವಾಮಿ
ಚಿಕ್ಕನಾಯಕನಹಳ್ಳಿ,ಅ.30 : ಯಡಿಯೂರಪ್ಪ ನಮ್ಮ ನಾಯಕರು, ಅವರು ಎಲ್ಲಿರುತ್ತಾರೋ ನಾನು ಅಲ್ಲಿರುತ್ತೇನೆ, ಜಗದೀಶ್ ಶೆಟ್ಟರ್ ನಮಗೆ ಸಭಾ ನಾಯಕರು ಅವರ ಕ್ಯಾಬಿನೇಟ್ನಲ್ಲಿರುವವರೆಗೆ ಮಾತ್ರ ನಾನು ಅವರಿಗೆ ನಿಷ್ಠನಾಗಿರುತ್ತೇನೆ ಎಂದು ಸಹಕಾರ ಸಚಿವ ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪನವರ ಅಭಿಮಾನಿ, 24 ವರ್ಷಗಳಿಂದ ರಾಜಕೀಯವಾಗಿ ಅಜ್ಞಾತವಾಸವಾಗಿದ್ದ ನನ್ನನ್ನು ಮುಖ್ಯವಾಹಿನಿಗೆ ತರುವುದಷ್ಟೇ ಅಲ್ಲ, ನನ್ನ ಗಾಣಿಗ ಸಮಾಜ ಎಂದು ಮರೆಯಲಾರದಷ್ಟು ಸಹಾಯ ಮಾಡಿದ್ದಾರೆ, ಬೆಂಗಳೂರಿನಲ್ಲಿ 10 ಎಕರೆ ಜಾಗವನ್ನು ಕೊಟ್ಟಿದ್ದಾರೆ ಅದು ಈಗ 150 ಕೋಟಿ ರೂಗಳಷ್ಟು ಬೆಲೆ ಬಾಳುವಂತಹ ಜಾಗ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ 5 ಕೋಟಿ ರೂಗಳಷ್ಟು ಹಣವನ್ನು ನೀಡಿದ್ದಾರೆ, ನಮ್ಮ ಸಮಾಜ ಅಲ್ಲೊಂದು ಗುರುಪೀಠವನ್ನು ಸ್ಥಾಪಿಸಿ, ಶಾಲೆಗಳನ್ನು ತೆರೆಯುವುದಲ್ಲದೆ, ವಿದ್ಯಾಥರ್ಿಗಳಿಗೆ ವಸತಿ ನಿಲಯವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ನಮ್ಮ ಸಮಾಜದ ಹೆಸರನ್ನು ಹೇಳಿಕೊಂಡ ವೈಯಕ್ತಿಕ ಲಾಭ ಮಾಡಿಕೊಂಡ ಸುದರ್ಶನ್, ದೊಡ್ಡ ಮಟ್ಟದ  ಒಂದು ಸಮಾವೇಶವನ್ನು ಮಾಡಲಿಲ್ಲ ಎಂದರಲ್ಲದೆ, ಗಾಣಿಗ ಸಮಾಜ ಇತಿಹಾಸದಲ್ಲೇ ಕಂಡರಿಯದಷ್ಟು ಸಹಕಾರವನ್ನು ನೀಡಿರುವ ಯಡಿಯೂರಪ್ಪನವರನ್ನು ಸದಾ ಸ್ಮರಿಸುತ್ತದೆ ಎಂದರು.
ದೊಡ್ಡವರು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಿ:  ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಬಡ್ಡಿ ಇಲ್ಲದಂತೆ ಸಾಲ ನೀಡುತ್ತಿರುವುದನ್ನು ಇತರರು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಎಲ್ಲಾ ರೈತರು ಸಹಕಾರ ಕ್ಷೇತ್ರದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು  
ಇತ್ತೀಚೆಗೆ ಸಕರ್ಾರ ರೈತರು ಪಡೆದಿದ್ದ 25ಸಾವಿರ ಸಾಲವನ್ನು ಮನ್ನಾ ಮಾಡಿದೆ ಆದರೆ ಇದರಿಂದ ತೀರ ಹಿಂದುಳಿದ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಯಾವ ಉಪಯೋಗವೂ ಆಗಿಲ್ಲ ಎಂದರಲ್ಲದೆ ಈಗ ನೀಡುವ ಬಡ್ಡಿ ರಹಿತ ಸಾಲದ ಅನಕೂಲವನ್ನು ನಿಜವಾದ ಫಲಾನುಭವಿಗಳು ಪಡೆದುಕೊಳ್ಳಲು ಸದಸ್ಯತ್ವ ಪಡೆದುಕೊಳ್ಳಬೇಕೆಂದು ತಿಳಿಸಿದ ಅವರು 10 ಗುಂಟೆ ಜಮೀನು ಪಡೆದಿರುವ ಎಲ್ಲರು ರೈತ ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಹಾಗೂ ಇದರಿಂದ ಫಲಾನುಭವಿಗಳು ಸಾಲ ಪಡೆಯಬಹುದು ಎಂದರಲ್ಲದೆ, ಸಣ್ಣ ಹಿಡುವಳಿದಾರರಿಗೆ  ಸಾಲ ಕೊಡದಿದ್ದರೆ ನನಗೆ ದೂರವಾಣಿ ಮೂಲಕ ತಿಳಿಸಿ ಎಂದರು.
ಸಹಕಾರ ಇಲಾಖೆ ಬಡವರ ಪರವಾಗಿದೆ ಸಹಕಾರ ಬ್ಯಾಂಕ್ಗಳಲ್ಲಿ  ಸಾಲ ಪಡೆಯದವರು ಮೊದಲ ಸಂಘದ ಸದಸ್ಯರಾಗಿ ಎಂದ ಅವರು, ಯಾರಿಗೆ ಜಮೀನು ಇರುವುದಿಲ್ಲ ಅಂತಹವರು ಹೈನುಗಾರಿಕೆಗೆ ಮುಂದಾಗಿ ಅಂತಹವರಿಗೆ ಜಿಲ್ಲಾ ಕೋ ಆಪರೇಟಿವ್ನಿಂದ ಸಹಾಯ ಸಿಗಲಿದೆ ಎಂದರು.
ಈಗಾಗಲೇ ಹೈನುಗಾರಿಕೆಯ ಮೂಲಕ ಹಾಲಿನ ಉತ್ಪಾದನೆಯಲ್ಲಿ ತೊಡಗಿರುವವರಿಗೆ ನೇರವಾಗಿ ಪ್ರತಿ ವಾರ ಸಂಬಳ ಸಿಗುತ್ತಿದೆ, 2006-07ರಲ್ಲಿ ಹಾಲಿಗೆ 8.5ರೂ ಇತ್ತು 2012ರಲ್ಲಿ 22.5ರೂ ಆಗಿದ್ದು ಇದರಲ್ಲಿ ನೇರವಾಗಿ ರೈತರಿಗೆ 19.5ರೂ ಸಿಗುತ್ತಿದೆ ಅಲ್ಲದೆ 2ರೂ ಸಬ್ಸಿಡಿ ಹಣವಾಗಿ ಯಡಿಯೂರಪ್ಪನವರು ನೀಡಿದ್ದಾರೆ ಇದರ ಪರಿಣಾಮ ಜಮೀನು ಇಲ್ಲದವರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಆಥರ್ಿಕವಾಗಿ ಸುಧಾರಿಸುತ್ತಿದ್ದಾರೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಹಕಾರಿ ಮುಖಂಡ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರೇವಣ್ಣ ಶೆಟ್ಟಿ, ಗಾಣಿಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಮುದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Sunday, October 28, 2012



ಭೋವಿ ಸಮಾಜಕ್ಕೆ ಆದ್ಯತೆ ನೀಡಿದವರನ್ನು  ಬೆಂಬಲಿಸಿ: ಶಾಸಕ ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ,ಅ.27 : ಭೋವಿ ಜನಾಂಗವನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳನ್ನು ತಿರಸ್ಕರಿಸುವ ಮೂಲಕ ಅವರಿಗೆ  ಬುದ್ದಿ ಕಲಿಸಬೇಕೆಂದು ಪಾವಗಡ ಶಾಸಕ ವೆಂಕಟರಮಣಪ್ಪ ಹೇಳಿದ್ದಾರೆ.
ತಾಲ್ಲೂಕಿನ ಬಡಕೇಗುಡ್ಲು ಬೋವಿ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಪ್ರಾರಂಭೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಒಗ್ಗಟ್ಟು ನಮ್ಮ ಏಳಿಗೆಗೆ ರಹದಾರಿ, ನಿಮ್ಮ ಒಂದು ಕ್ಷಣದ ತಪ್ಪು ನಿಧರ್ಾರ ಐದು ವರ್ಷ ನೀವು ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ಲುವಂತೆ ಮಾಡುತ್ತದೆ ಎಂದ ಅವರು ಚುನಾವಣೆಯಲ್ಲಿ ಕೈ ಮುಗಿದು ನಿಮ್ಮ ಮತಗಳನ್ನು ಪಡೆದು ಆಯ್ಕೆಯಾದ ಮೇಲೆ ನಿಮ್ಮನ್ನು ನಿರ್ಲಕ್ಷಿಸುವವರರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕಿದೆ ಎಂದರಲ್ಲದೆ, ಜನಾಂಗದ ಶಕ್ತಿ ಏನೆಂಬುದನ್ನು ಮತಗಳ ಮೂಲಕ ತೋರಿಸಿ, ನನ್ನ ಕ್ಷೇತ್ರದಲ್ಲಿ ಎಲ್ಲಾ ವರ್ಗದ, ಜಾತಿಯ ಜನರ ದೇವಾಲಯಗಳಿಗೆ ನೆರವು ನೀಡುವ ಸಲುವಾಗು 3 ಕೋಟಿ ವಿನಿಯೋಗಿಸಿದ್ದೇನೆ ಎಂದಿದ್ದಾರೆ.
ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಮಾರು 30ಕಡೆ ಕಲ್ಯಾಣ ಮಂಟಪಗಳ ರೀತಿಯಲ್ಲಿ ಸಮುದಾಯ ಭವನಗಳನ್ನು ನಿಮರ್ಿಸಿದ್ದೇನೆ. ಇದರಿಂದ ಬಡ ಜನರ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತಿದೆ.
ಮೊದಲಿನಿಂದಲೂ ಕೊಕ್ಕರೆಗೊಂದು ಕೆರೆಯಿಲ್ಲ, ವಡ್ಡರಿಗೊಂದು ಊರಿಲ್ಲ ಎಂಬಂತೆ ನಮ್ಮ ಜನಾಂಗ ಎಂದೂ ಒಂದು ಕಡೆ ನೆಲೆ ನಿಂತಿಲ್ಲ. ಆದ್ದರಿಂದ ನಮ್ಮ ಜನಾಂಗ ಶೈಕ್ಷಣಿಕವಾಗಿ ಹಿಂದುಳಿದಿದೆ. ವಿದ್ಯವಾವಂತರಾಗದಿದ್ದರೆ ಬಡತನ ನಿವಾರಣೆಯಾಗುವುದಿಲ್ಲ. ಬೋವಿ ಜನಾಂಗ ಎಂದೂ ಕಷ್ಠಜೀವಿಗಳು. ವಿಧಾನಸೌಧ, ಕನ್ನಂಬಾಡಿ, ಅಷ್ಟೇ ಏಕೆ ಇಲ್ಲಿನ ಬೋರನಕಣಿವಯನ್ನು ಕಟ್ಟಿದಾರೆ. ಆದರೆ ಅದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.
ಇಂದು ಸಹ ಅವರು ಕೂಲಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ, ನೂರು ರೂಗೆ ದುಡಿದರೆ 150 ಖಚರ್ು ಮಾಡುವ ಮನೋಭಾವನೆಯಿಂದ ಹಿಂದುಳಿದಿದ್ದೀರಿ. ಮುಂದಾದರು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿ ಎಂದರಲ್ಲದೆ, ಮದುವೆಗೆ ಅದ್ದೂರಿ, ಆಡಂಬರ ಬೇಡ. ಮದುವೆಗೆ ಪ್ರೀತಿಯೊಂದೇ ಸಾಕು. ಮುಂದಿನ ನಿಮ್ಮ ಜೀವನ ಬಹಳ ದೂರಸಾಗಬೇಕಿದೆ. ಆದ್ದರಿಂದ ಯಾವುದನ್ನೇ ಆದರೂ ಯೋಚಿಸಿ ನಿಧರ್ಾ ಕೈಗೊಳ್ಳಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಿತರಲ್ಲೇ ಅದ್ದೂರಿ ವಿವಾಹಗಳು ಹೆಚ್ಚುತ್ತಿದ್ದು ಅದೇ ರೀತಿ ವಿಚ್ಛೇದನಗಳು ಸಹ ವಿದ್ಯಾವಂತರಲ್ಲೇ ಹೆಚ್ಚುತ್ತಿವೆ, ಇದು ಇಂದಿನ ನಮ್ಮ ಸಮಾಜಕ್ಕೆ ಆತಂಕಕಾರಿಯಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಇಲ್ಲಿನ ಜನರಿಗೆ ಬಡತನವಿದ್ದರು ಭಕ್ತಿಗೆ ಬಡತನವಿಲ್ಲ ಎಂಬುದಕ್ಕೆ ನೀವು ನಿಮರ್ಿಸಿರುವ ದೇವಾಲಯವೇ ಸಾಕ್ಷಿ. ಈ ಭಾಗದ ಜನರ ನೀರಿನ ಕೊರತೆಯನ್ನು ನೀಗಿಸುವುದಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ 102ಕೋಟಿ ಮೊತ್ತದ ಯೋಜನೆ ಮಂಜೂರಾಗಿದೆ ಎಂದರು,
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಬೋವಿ ಸಮಾಜದವರು ಶ್ರಮ ಜೀವಿಗಳು, ಪ್ರತಿ ಗ್ರಾಮಗಳ ಕೆರೆ,ಕಟ್ಟೆ, ದೇವಸ್ಥಾನಗಳನ್ನು ಕಟ್ಟಿದವರು ಬೋವಿ ಜನಾಂಗದವರೇ ಎಂದ ಅವರು, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಅವರ ಮುಂದಿನ ಭವಿಷ್ಯಕ್ಕೆ ದಾರಿಯಾಗಿ ಎಂದರಲ್ಲದೆ ಸಾಮೂಹಿಕ ವಿವಾಹದಿಂದ ಆಥರ್ಿಕ ಸಂಕಷ್ಟಗಳನ್ನು ನಿವಾರಿಸಬಹುದು ಎಂದರು.
ಸಮಾರಂಭದಲ್ಲಿ ತಿಮ್ಮನಹಳ್ಳಿ ಲೋಕೇಶ್ ಮಾತನಾಡಿದರು. ಜಿ.ಪಂ.ಸದಸ್ಯೆ ಲೋಹಿತಬಾಯಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಗ್ರಾ.ಪಂ.ಅಧ್ಯಕ್ಷೆ ಅನಸೂಯಮ್ಮ, ಬೋವಿ ಜನಾಂಗದ ಮುಖಂಡರಾದ ಕೆ.ಕೆ.ಹನುಮಂತಪ್ಪ, ನಾಗರಾಜು ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ ಅ.29ರಂದು ವಾಲ್ಮೀಕಿ ಜಯಂತಿ
ಚಿಕ್ಕನಾಯಕನಹಳ್ಳಿ,ಅ.27 : ಶ್ರೀ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದೇ 29ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್          ಮಹಷರ್ಿ ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಲಿದ್ದು ನಿವೃತ ಮುಖ್ಯೋಪಾಧ್ಯಾಯ ಸೋಮಶೇಖರಯ್ಯ ಮಹಷರ್ಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನದ ವಿಭಾಗದ ಮುಖ್ಯಸ್ಥ ಡಾ.ಸಿದ್ದಗಂಗಮ್ಮ,  ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪಿ.ಪರಮೇಶ್ವರ, ಕಲಾವಿದ ಶಂಕರಪ್ಪ,  ಸಮಾಜ ಸೇವಾಕರ್ತ ಶ್ರೀನಿವಾಸಶೆಟ್ಟಿರವರಿಗೆ ಸನ್ಮಾನಿಸಲಾಗುವುದು.

ಚಿ.ನಾ.ಹಳ್ಳಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ27 :    ಕನ್ನಡ ರಾಜ್ಯೋತ್ಸವ  ಸಮಾರಂಭವನ್ನು ಇದೇ ನವಂಬರ್ 1ರ ಗುರುವಾರ ಬೆಳಗ್ಗೆ 9-00 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್ಬಾಬು  ವಹಿಸಲಿದ್ದು ತಹಸೀಲ್ದಾರ್ ಎನ್.ಆರ್. ಉಮೇಶಚಂದ್ರ ಧ್ವಜಾರೋಹಣವನ್ನು ನೆರವೇರಿಸುವರು.
ಸಮಾರಂಭದಲ್ಲಿ ಜಾನಪದ ಕಲಾವಿದರಾದ ಕದುರಮ್ಮ,  ಹಾಮರ್ೋನಿಯಂ ಮಾಸ್ಟರ್ ಸಿ.ಎಸ್.ಗಂಗಾಧರಯ್ಯ ಮತ್ತು ರಂಗಭೂಮಿ ಕಲಾವಿದ ಶ್ರೀಬೋರಯ್ಯ ರವರಿಗೆ ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು,  ವಿಧಾನ ಪರಿಷತ್ ಮುಖ್ಯ ಸಚೇತಕ  ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ರಂ.ಆರ್.ಹುಲಿನಾಯ್ಕರ್, ವೈ.ಎ.ನಾಆಯಣಸ್ವಾಮಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿರುವರು.

Friday, October 26, 2012



ಕೃಷಿ ಇಲಾಖೆಯ ನಿರ್ಲಕ್ಷ್ಯ: ನೂರಾರು ಎಕರೆ ರಾಗಿ ಫಸಲು ಹುಳುಗಳ ಪಾಲು, ಬೆಳೆದವನ ಹೊಟ್ಟೆಗೆ ತಣ್ಣೀರು ಬಟ್ಟೆ.
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಸೆ.26 : ಬರದಿಂದ ಬದುಕು ಮೂರಾಬಟ್ಟೆಯಾಗಿದೆ, ಹೆಂಗೋ ಅಂಗದಲ್ಲಿ ಭಂಗದಲ್ಲಿ ಉಸಿರಿಟ್ಟಕೊಂಡು ಜೀವನಕ್ಕೆ ಅಂತ ಅಷ್ಟೊ ಇಷ್ಟೋ ರಾಗಿ ಬೆಳೆಕೊಳ್ಳುತ್ತಿದಿವಿ, ಅದನ್ನೂ ಈ ಹುಳುಗಳು ಮಣಪಾಲು ಮಾಡ್ಯಾಕ್ಯಾವೆ, ನಮಗೀಗ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ. ಇಷ್ಟಾದ್ರೂ ಕೃಷಿ ಇಲಾಖೆಯವರು ನಮ್ಮ ಹೊಲಗಳಿಗೆ ಬಂದು ನೋಡಿಲ್ಲ, ನಮ್ಮ ಕಷ್ಟ ಕೇಳಿಲ್ಲ. ನಾವೇ ಆಫೀಸ್ಗೆ ಹೋಗಿ ಹೇಳಿದ್ರೂವೇ ಎಂತಂದೊ ಒಂದಿಷ್ಟು ಔಷಧಿ ಕೊಟ್ಟು ಸಾಗ ಆಕ್ಯಾವರೇ, ನೋಡಿ ಸ್ವಾಮಿ ನಮ್ಮ ಜೀವನ ಹಿಂಗೆ ಬೀದಿ ಬಿದ್ದೋಗದೆ ಎಂದು ಗದ್ಗದಿತ ಧ್ವನಿಯಲ್ಲಿ ಹೇಳ್ತಾರೆ ಸಾಲ್ಕಟ್ಟೆ ಎ.ಕೆ.ಕಾಲೋನಿಯ ಸಣ್ಣ ಹಿಡುವಳಿದಾರ ಕರಿಯಪ್ಪ.
ಈ ನೊಂದ ಮಾತುಗಳು ಕೇವಲ ಒಬ್ಬರದ್ದಲ್ಲ, ತಾಲೂಕಿನ ಆಲದಕಟ್ಟೆ ಭಾಗದಿಂದ ಸಾಲ್ಕಟ್ಟೆವರೆಗಿನ ಸುಮಾರು 500 ಎಕರೆಗೆ ಹೆಚ್ಚು ಜಮೀನುಗಳ ನೂರಾರು ಬಡ ರೈತರ ಗೋಳು. ಮಳೆಯ ಅಭಾವದಿಂದಲೇ ಸುಮಾರು 2ತಿಂಗಳ ಹಿಂದಷ್ಟೇ ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿ  ಉಳುಮೆ ಮಾಡಿ ಬೆಳೆಯುತ್ತಿದ್ದ 500 ಎಕರೆಯಲ್ಲಿನ ರಾಗಿ ಬೆಳೆಯು ಹುಳುವಿನ ಹಸಿವಿಗೆ ನಾಶವಾಗಿ ರೈತರ ಹೊಟ್ಟೆಪಾಡಿನ ಬೆಳೆಗೆ ಕೊಡಲಿಪೆಟ್ಟು ಬಿದ್ದಿದೆ.
 ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮದ ಬಸವರಾಜು, ಶ್ರೀರಂಗಯ್ಯ ಹಾಗೂ ಅಕ್ಕಪಕ್ಕದಲ್ಲಿನವರ ಜಮೀನಿನವರು, ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಯವರ ಬಳಿ ತಮಗಾಗಿರುವ ನಷ್ಟವನ್ನು ವಿವರಿಸಿದರು. ಹೆಕ್ಟೇರ್ಗಟ್ಟಲೆ ರಾಗಿ ಬೆಳೆಗೆ ಹುಳುಗಳು ದಾಳಿ ಇಟ್ಟು ರಾಗಿ ಫಸಲನ್ನು ನಾಶಗೊಳಿಸಿ ರೈತರಿಗೆ ಸಿಗಬೇಕಿದ್ದ ಲಕ್ಷಾಂತರ ರೂಗಳಿಗೂ ಹೆಚ್ಚಿನ ಬೆಳೆಯನ್ನು ಹುಳು ನಾಶ ಮಾಡಿದೆ.
ರೈತಾಪಿ ವರ್ಗ ತಮ್ಮಲ್ಲಿರುವ ಅಲ್ಪ ಪ್ರಮಾಣದ ಸವಲತ್ತುಗಳಿಂದ ಬೆಳೆದ ಬೆಳೆಯು ನಾಶವಾಗಿರುವುದರಿಂದ ಬೆಳೆಯನ್ನೇ ನಂಬಿರುವ ರೈತರು ಮುಂದಿನ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದಾರೆ, ಅವರು ಹೇಳುವಂತೆ ಮುಂಜಾನೆ ಹೊತ್ತು ಇಂತಹ ಹುಳುಗಳು ರಸ್ತೆಯಲ್ಲೇ ಹರಿದುಕೊಂಡು ಹೋಗುತ್ತವೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ತಾಳದೆ ಹೊಲದ ಬದುಗಳಲ್ಲಿ ಹರಿದಾಟಿ ಅಲ್ಲಿರುವ ಹುಲ್ಲನ್ನು ತಿನ್ನುತ್ತಿವೆ, ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಹುಳುಗಳು ಬೆಳೆಯನ್ನು ನಾಶ ಮಾಡುತ್ತವೆ ಎಂದ ಅವರು ಈ ಬಗ್ಗೆ ಕೃಷಿ ಇಲಾಖೆಗೆ ತಿಳಿಸಿದರೂ ಅವರು ನಿರ್ಲಕ್ಷದಿಂದಿದ್ದಾರೆ  ಎಂದು ತಿಳಿಸಿದರಲ್ಲದೆ ಸಕರ್ಾರ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ ರೈತರ ಆಥರ್ಿಕ ಪರಿಸ್ಥಿತಿ ಸುಧಾರಿಸುವಂತೆ ಆ ಭಾಗದ ಮುಖಂಡ ಸಾಲ್ಕಟ್ಟೆ ಶ್ರೀನಿವಾಸ ಆಗ್ರಹಿಸಿದ್ದಾರೆ. 





ನೇಕಾರರ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಜನ ಹೊರಡಲು ದೇವಾಂಗ ಸಂಘದ ಮನವಿ.

                                  
ಚಿಕ್ಕನಾಯಕನಹಳ್ಳಿ,ಅ.26 :  ತುಮಕೂರಿನಲ್ಲಿ ಇದೇ 28ರ ಭಾನುವಾರದಂದು ನಡೆಯಲಿರುವ ಜಿಲ್ಲಾ ನೇಕಾರರ ಸಮಾವೇಶಕ್ಕೆ ತಾಲ್ಲೂಕಿನ ಎಲ್ಲಾ ನೇಕಾರ ಬಂಧುಗಳು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾಧ್ಯಕ್ಷ  ಹಾಗೂ ದೇವಾಂಗ ಸಮುದಾಯದ ಮುಖಂಡ ಸಿ.ಟಿ.ವರದರಾಜು ಮನವಿ ಮಾಡಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಲ್ಲಿ 27 ಒಳಪಂಗಡಗಳಿದ್ದು ಈ ಎಲ್ಲಾ ಪಂಗಡಗಳು ಸಕರ್ಾರಿ ಸವಲತ್ತುಗಳಿಂದ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾವೆ, ಈ ಸೌಲಭ್ಯಗಳನ್ನು ಪಡೆಯಲು ನೇಕಾರರ ಸಮುದಾಯ ಸಮಾವೇಶ ನಡೆಸುತ್ತಿದೆ, ಅದಕ್ಕಾಗಿ ನೇಕಾರ ಸಮುದಾಯದವರಾದ ದೇವಾಂಗ ಸಮಾಜ, ಪದ್ಮಶಾಲಿ ಸಮಾಜ, ತೊಗಟವೀರ ಸಮಾಜ, ಕುರುಹಿನಶೆಟ್ಟಿ ಸಮಾಜ, ಪಟ್ಟಸಾಲೆ ಸಮಾಜ ಸೇರಿದಂತೆ  ಎಲ್ಲಾ ನೇಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು, 
 ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯ ಸೌಲಭ್ಯಗಳಲ್ಲಿ ಹಿಂದುಳಿದಿರುವ ನಾವು ಈ ಸಮಾವೇಶದ ಮುಖಾಂತರ ಸಂಘಟನೆಗೊಂಡು ಸಕರ್ಾರದ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದ ಅವರು ಸಮಾವೇಶದ ದಿವ್ಯ ಸಾನಿಧ್ಯ್ಯವನ್ನು ದಯಾನಂದಪುರಿಸ್ವಾಮಿಜಿ, ಪ್ರಭುಲಿಂಗಸ್ವಾಮಿಜಿ, ದಿವ್ಯಜ್ಞಾನಾನಂದಪುರಿ ಸ್ವಾಮಿ, ಶಂಕರಶಿವಾಚಾರ್ಯಸ್ವಾಮಿ, 1008 ಜಗದ್ಗುರು ಬಸವರಾಜಪಟ್ಟದಾರ್ಯಸ್ವಾಮಿರವರು ವಹಿಸಲಿದ್ದು ಸಮಾಜದ ಮುಖಂಡ ಎಂ.ಡಿ.ಲಕ್ಷೀನಾರಾಯಣ ಸಮಾವೇಶದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ  ರಾಜ್ಯದಲ್ಲಿ 80ಲಕ್ಷ ಹಾಗೂ ಜಿಲ್ಲೆಯಲ್ಲಿ 2ಲಕ್ಷದಷ್ಟು ಜನರಿರುವ ನೇಕಾರ ಸಮುದಾಯ ಒಗ್ಗಟ್ಟಾಗಿ ಸಮಾವೇಶಗೊಂಡು ನೇಕಾರರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದ ಅವರು ಸಮಾವೇಶಕ್ಕೆ ತಾಲ್ಲೂಕಿನಿಂದ ಹತ್ತು ಜನಪದ ಕಲಾತಂಡಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದರು.
ದೇವಾಂಗ ಸಂಘದ ಮುಖಂಡ ಬನಶಂಕರಯ್ಯ ಮಾತನಾಡಿ ತಾಲ್ಲೂಕಿನಲ್ಲಿ 10ಸಾವಿರಕ್ಕೂ ಹೆಚ್ಚು ಜನರಿರುವ ಇರುವ ನೇಕಾರರು ಸಮಾವೇಶಕ್ಕೆ ಪಾಲ್ಗೊಂಡು ನೇಕಾರ ಸಮುದಾಯದ ಸಮಸ್ಯೆಗಳನ್ನು ತಿಳಿಸಬೇಕು ಎಂದ ಅವರು ಆ ಮೂಲಕ ನೇಕಾರರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಂಗ ಸಂಘದ ಅಧ್ಯಕ್ಷ ಕೋದಂಡರಾಮಯ್ಯ, ಸಹಕಾರ್ಯದಶರ್ಿ ಅಶೋಕ್, ಕುರುಹೀನಶೆಟ್ಟಿ ಸಮಾಜದ ನಾಗರಾಜು, ಪ್ರಮೋದ್, ನೇಕಾರ ಧನಪಾಲ್, ರಂಗನಾಥ್ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿ: ಕಾಂಗ್ರೇಸ್ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಅ.26 : ಕಾಂಗ್ರೆಸ್ನೊಂದಿಗೆ ಬನ್ನಿ-ಬದಲಾವಣೆ ತನ್ನಿ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ನವಂಬರ್ 6ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಇದೇ 29ರ ಸೋಮವಾರ ಮಧ್ಯಾಹ್ನ 12ಕ್ಕೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್.ನಾರಾಯಣ್, ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು  ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


Wednesday, October 24, 2012




ತಾಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಗಳ ದಿನಾಂಕಗಳ ನಿಗಧಿ
ಚಿಕ್ಕನಾಯಕನಹಳ್ಳಿ,ಅ.24 : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ 5ನೇ ಸಮ್ಮೇಳನವನ್ನು ಹಂದನಕೆರೆ ಹೋಬಳಿಯಲ್ಲಿ ನಡೆಸಲು ಹಾಗೂ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲೂ ಹೋಬಳಿ ಮಟ್ಟದ ಸಮ್ಮೇಳನ ನಡೆಸಲು ಸಮಿತಿ ತೀಮರ್ಾನಿಸಿದೆ ಎಂದು  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಸಮ್ಮೇಳನವನ್ನು ಹಂದನಕೆರೆಯಲ್ಲಿ ಮುಂದಿನ ಡಿಸೆಂಬರ್ 29 ರಂದು ಹಾಗೂ ನಗರ ಕೇಂದ್ರಿತ ಹೋಬಳಿ ಘಟಕ ಸಮ್ಮೇಳನವನ್ನು ಕೇದಿಗೆಹಳ್ಳಿ ಪಾಳ್ಯದಲ್ಲಿ ನವಂಬರ್ 24ರಂದು, ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆಯಲ್ಲಿ ಕಡೆ ಕಾತರ್ಿಕದ ಮುಂದಿನ ಶನಿವಾರದಂದು, ಹುಳಿಯಾರಿನ ಬೋರನಕಣಿವೆಯಲ್ಲಿ ನವಂಬರ್ 30ರಂದು, ಕಂದಿಕೆರೆಯಲ್ಲಿ ಡಿಸೆಂಬರ್ 8ರಂದು ಸಮ್ಮೇಳನಗಳನ್ನು ನಡೆಸಲಾಗುವುದು ಎಂದ ಅವರು, ಸಮ್ಮೇಳನದ ದಿನಾಂಕವನ್ನು ಈಗ ನಿಗಿಧಿ ಮಾಡಿದ್ದು ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಸಮ್ಮೇಳನಾಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು  ಎಂದರು.
ಸಮ್ಮೇಳನಕ್ಕಾಗಿ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ತಾಲೂಕಿನ  ಪ್ರಸ್ತುತ ಸಮಸ್ಯೆಗಳ ಬಗ್ಗೆ ಚಚರ್ಿಸಲಾಗುವುದು ಎಂದರಲ್ಲದೆ, ಸಮ್ಮೇಳನಗಳಲ್ಲಿ  ಯಾವುದೇ ರಾಜಕೀಯ ಸೇರಿಸದಂತೆ ಮನವಿ ಮಾಡಿದ ಅವರು ಸಮ್ಮೇಳನದಲ್ಲಿ ಮೂರು ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಹಾಗೂ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 6 ಜನ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮ್ಮೇಳನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಾ.ಚಿ.ರಾಜಕುಮಾರ್, ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರಾದ ಬೆಳಗುಲಿ ಶಶಿಭೂಷಣ್, ಹುಳಿಯಾರ್ ಷಬ್ಬೀರ್, ನಂದೀಶ್ಬಟ್ಲೇರಿ, ರವಿಕುಮಾರ್, ಎಸ್.ಬಿ.ಕುಮಾರ್ ಉಪಸ್ಥಿತರಿದ್ದರು.

Monday, October 22, 2012


ಉಮೇಶ್ಕತ್ತಿ ರಾಜೀನಾಮೆಗೆ ಆಗ್ರಹ 


ಚಿಕ್ಕನಾಯಕನಹಳ್ಳಿ,ಅ.22 :  ಸಚಿವ ಉಮೇಶ್ಕತ್ತಿ ರಾಜ್ಯವನ್ನು ಇಬ್ಭಾಗ ಮಾಡುವ ಹೇಳಿಕೆ ಖಂಡನೀಯ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಲ್ಲೂಕು ಕನ್ನಡಪರ ಸಂಘಟನೆಗಳು ಒತ್ತಾಯಿಸಿದವು.
ಪಟ್ಟಣದ ನೆಹರು ಸರ್ಕಲ್ ಬಳಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಸಚಿವ ಉಮೇಶ್ಕತ್ತಿ ನೀಡಿರುವ ಕನರ್ಾಟಕ ಇಬ್ಬಾಗ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ರಾಜ್ಯದ ಏಕೀಕರಣಕ್ಕಾಗಿ ಲಕ್ಷಾಂತರ ಜನ ಶ್ರಮಿಸಿ, ಕನರ್ಾಟಕ ರಾಜ್ಯ ರಚಿಸಿ ರಾಜ್ಯದ ಏಕತೆ, ಐಕ್ಯತೆಯನ್ನು ಎತ್ತಿ ಹಿಡಿದಿರುವ ಸಂದರ್ಭದಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡನೀಯವಾದುದು, ಆಲೂರು ವೆಂಕಟರಾಯರು, ಗಂಗಾಧರ್ರಾವ್ ದೇಶಪಾಂಡೆಯಂತಹ ಹಲವರು ರಾಜ್ಯದ ಏಕೀಕರಣಕ್ಕಾಗಿ ದುಡಿದು ಅಖಂಡ ಕನರ್ಾಟಕ ಸೃಷ್ಠಿಸಿದ್ದಾರೆ, ಆದರೆ ಸಚಿವರಾಗಿ ರಾಜ್ಯವನ್ನು ಇಬ್ಬಾಗ ಮಾಡುವ ಹೇಳಿಕೆ ಸರಿಯಲ್ಲ ಅವರ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕೆಂದು ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಘನತೆಯನ್ನು ಎತ್ತಿ ಹಿಡಿದು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇನೆಂದು ತಿಳಿಸಿ  ಈಗ ಪ್ರತ್ಯೇಕ  ರಾಜ್ಯದ ಕೂಗು ಹರಿಸಿರುವುದು ಅವರ ಮೂರ್ಖತನದ ಪರಮಾವಧಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ , ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್, ಕರವೇಯ ವಾಸು, ಎಸ್.ಬಿ.ಕುಮಾರ್, ಶಿವಣ್ಣ  ಮುಂತಾದವರಿದ್ದರು.

Saturday, October 20, 2012


ಚಿಕ್ಕನಾಯಕನಹಳ್ಳಿ,ಅ.16 : ತಾಲ್ಲೂಕಿನ ಹಂದನಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಮೀನಿನ ಸಂಬಂಧ ಪ್ರಕರಣದ ನಡೆದಿದ್ದ ಗಲಾಟೆಯಲ್ಲಿ ಕೆಂಪಣ್ಣ ಎಂಬ ವ್ಯಕ್ತಿಗೆ ಇಲ್ಲಿನ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ.ಎನ್ರವರು ಒಂದು ವರ್ಷ ಜೈಲುವಾಸ ಮತ್ತು ಐದುನೂರು ರೂಪಾಯಿ ದಂಡ ವಿಧಿಸಿ ತೀಪರ್ು ನೀಡಿದ್ದಾರೆ.
  2010, ಜೂನ11ರಂದ ದಾಖಲಾಗಿದ್ದ ಪ್ರಕರಣದ ಆರೋಪಿಗಳಾದ ಕೆಂಪಣ್ಣ, ಈತನ ಹೆಂಡತಿ ಸುಶೀಲಮ್ಮ, ಇವರ ಮಗಳು ಗೌರಮ್ಮ, ಹಾಗೂ ಗೌರಮ್ಮನ ಗಂಡ ಕೆಂಪಯ್ಯ ಇವರುಗಳು ಜಮೀನಿನ ದ್ವೇಷದಿಂದ ಸರೋಜಳಮ್ಮನನ್ನು ಹೊಡೆಯಬೇಕೆಂಬ ಉದ್ದೇಶದಿಂದ ಅವ್ಯಾಚ್ಯಾ ಶಬ್ದಗಳಿಂದ ಬೈದು, ಆರೋಪಿ ಕೆಂಪಣ್ಣ ದೊಣ್ಣೆಯಿಂದ ಆಕೆಯ ಬಲಗೈಗೆ ಹೊಡೆದು ಬಲಗೈ ಮುರಿದಿದ್ದು ಸುಶೀಲಮ್ಮ, ಗೌರಮ್ಮ, ಸರೋಜಳಮ್ಮನ ಮೇಲೆ ಆರೋಪಿತರು ಹಲ್ಲೆ ಮಾಡಿ ಸರೋಜಮ್ಮಳಿಗೆ ಪ್ರಾಣ ಬೆದರಿಕೆ ಹಾಕಿದ್ದರ ಮೇರೆಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರಿಗೆ ಭಾರತೀಯ ದಂಡ ಸಂಹಿತಿ ಕಲಂ 504, 506, 324ರ ಅಡಿಯಲ್ಲಿ ತಲಾ 6ತಿಂಗಳು ಜೈಲುವಾಸ ಇಲ್ಲವೇ 500ರೂ ದಂಡ ವಿಧಿಸಿ ನ್ಯಾಯಾಲಯ ತೀಪರ್ು ನೀಡಿದೆ.
ರಾಜ್ಯ ಸಕರ್ಾರದ ಪರವಾಗಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ ವಾದಿಸಿದ್ದರು.
ತೆಂಗು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನಿಗಧಿಗೆ ಒತ್ತಾಯ: ಸಂಸದ ಜಿ.ಎಸ್.ಬಿ.
ಚಿಕ್ಕನಾಯಕನಹಳ್ಳಿ,ಅ.14 : ತೆಂಗು ಬೆಳೆಯು ದೇಶದಲ್ಲಿ ಶೇ. 47ರಷ್ಟು ಮಾತ್ರ ಉತ್ಪಾನೆಯಾಗುತ್ತಿದೆ, ಉಳಿದ ಶೇ.53ರಷ್ಟು ತೆಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಇದರಿಂದ ಕೊಬ್ಬರಿ ಬೆಲೆಗಿಂತ ಪಾಮಾಯಿಲ್(ತಾಳೆ ಎಣ್ಣೆ)ನ ಬೆಲೆ ಹೆಚ್ಚುತ್ತಿದೆ ಇದನ್ನು ತಡೆಗಟ್ಟಲು ತೆಂಗು ಬೆಳೆಗಾರರು ಒಗ್ಗಟ್ಟಾಗಿ ಬೆಳೆಯನ್ನು ಹೆಚ್ಚಿಸಿ ಕೊಬ್ಬರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಬೇಕು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ತೆಂಗು ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಂಗು ಬೆಳೆಗಾರರ ಅಭಿವೃದ್ದಿಗಾಗಿ ಕೇಂದ್ರ ಸಕರ್ಾರ ನೀಡುತ್ತಿರುವ ಸವಲತ್ತನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಆದರೆ ಬೆಳೆಗಾರರು ಸವಲತ್ತನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದರೆ ಎಂದ ಅವರು ಕೇರಳ, ಕನರ್ಾಟಕ, ಆಂದ್ರಪ್ರದೇಶ, ತಮಿಳುನಾಡಿನ ರೈತರಿಗೆ ತೆಂಗು ಬೆಳೆ ಉತ್ಪಾದಿಸಲು ಅಲ್ಲಿನ ಸಕರ್ಾರಗಳು ಉತ್ತಮ ಅವಕಾಶ ಕಲ್ಪಿಸುತ್ತಿವೆ ಎಂದರು.
ಬೆಳೆಗಾರರು ಉತ್ತಮ ತೆಂಗನ್ನು ಬೆಳೆಯಲು  ತಾವು ಮಾಡುವ ಪರಾಂಪರಿಕ ಕೃಷಿಯೊಂದಿಗೆ ಸಾವಯುವ ಕೃಷಿ, ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡಿದರೆ ಹೆಚ್ಚು ಬೆಳೆ ಬೆಳೆಯಬಹುದು ಎಂದರಲ್ಲದೆ ತೆಂಗಿನ ಬೆಳೆಯಲ್ಲಿ ರಸಸೋರುವ ರೋಗ, ಕೆಂಪುಮೂತಿ ರೋಗವನ್ನು ತಡೆಗಟ್ಟಬೇಕು, ಇಲ್ಲವಾದರೆ ಈ ರೋಗದಿಂದ ಬೆಳೆಗೆ ಹೆಚ್ಚು ತೊಂದರೆಯಾಗುತ್ತದೆ, ರಾಜ್ಯದಲ್ಲಿ ತೆಂಗುಬೆಳೆಯಲ್ಲಿ ರಸಸೋರುವ ರೋಗ ಹೆಚ್ಚಾಗಿ ಕಂಡ ಬರುತ್ತಿದೆ ಆದ್ದರಿಂದ ರೈತರು ಈ ರೋಗ ತಡೆಗಟ್ಟಲು ಕಾಳಜಿವಹಿಸಬೇಕು ಎಂದರು.
 ಹುಳಿಯಾರಿನಲ್ಲಿ ನೆಫೆಡ್ ಕೇಂದ್ರ ಇರುವಂತೆ ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ   ಇತರೆಡೆಗಳಲ್ಲೂ  ಕೊಬ್ಬರಿ ನೆಫೆಡ್ ಕೇಂದ್ರ ತೆರೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಈಡೀ ರಾಜ್ಯಾದ್ಯಾಂತ ತೆಂಗು ಬೆಳೆಗಾರರು, ತೆಂಗು ಮಾರಾಟಗಾರರಿಗೆ ಹಲವಾರು ಸ್ಫಧರ್ಿಗಳಿದ್ದಾರೆ ಇಂತಹ ಸಂದರ್ಭದಲ್ಲಿ ಉತ್ಪಾದನೆ, ಮಾರಾಟ ಮಾಡುವಾಗ ಮೋಸ ಮಾಡುವ ವರ್ತಕರಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ವ್ಯವಹಾರ ನಡೆಸಬೇಕು ಎಂದರು.
ಸಮಾರಂಭದಲ್ಲಿ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು, ತೆಂಗು ಬೆಳೆಗಾರರ ಜಿಲ್ಲಾ ಸಂಚಾಲಕ ಎಂ.ಬಿ.ಸಿದ್ದಪ್ಪ, ತಿಪಟೂರು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಸ್ವಾಮಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ರೈತ ಮುಖಂಡ ಸತೀಶ್ಕೆಂಕೆರೆ ಮತ್ತಿತರರು ಉಪಸ್ಥಿತರಿದ್ದರು.


ತಾ.ಪಂ. ಗದ್ದುಗೆಗೆ ಚುನಾವಣೆ: ಬಿ.ಜೆ.ಪಿ.ಯ.ಜಗದೀಶ್ ಅಧ್ಯಕ್ಷ, ಜೆ.ಡಿ.ಯು.ನ.ಲತಾ ಉಪಾಧ್ಯಕ್ಷೆ
ಚಿಕ್ಕನಾಯಕನಹಳ್ಳಿ,ಅ.19: ತಾ.ಪಂ. ಅಧ್ಯಕ್ಷರಾಗಿ ಬಿ.ಜೆ.ಪಿ.ಯ ಜೆ.ಸಿ.ಪುರ ಕ್ಷೇತ್ರದ ಸದಸ್ಯ ಎಂ.ಎಂ.ಜಗದೀಶ್ 12 ಮತಗಳನ್ನು ಪಡೆದು ಆಯ್ಕೆಯಾದರೆ, ತೀರ್ಥಪುರ ಕ್ಷೇತ್ರದ ಎಂ.ಇ.ಲತಾ ಕೇಶವಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಿಲ್ಪ ತಿಳಿಸಿದರು.
ಒಟ್ಟು 19 ಸದಸ್ಯ ಬಲವಿರುವ ತಾ.ಪಂ.ಸಮಿತಿಯಲ್ಲಿ ಜೆ.ಡಿ.ಎಸ್.ನ 7ಸದಸ್ಯರು  ಬಿ.ಜೆ.ಪಿ.6 ಹಾಗೂ ಜೆ.ಡಿ.ಯು 6 ಸಂಖ್ಯಾಬಲಹೊಂದಿದೆ, ಅಧ್ಯಕ್ಷರ ಹುದ್ದೆಗೆ ಇಬ್ಬರು ಸ್ಪಧರ್ೆಗಿಳಿದಿದ್ದರು, ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಅಧ್ಯಕ್ಷರ ಹುದ್ದೆಗೆ ಬಿ.ಜೆ.ಪಿ.ಯಜಗದೀಶ್ 12 ಮತಗಳನ್ನು ಪಡೆದರೆ, ಜೆ.ಡಿ.ಎಸ್.ನ ಎ.ಜಿ.ಕವಿತ 7 ಮತಗಳಿ ತೃಪ್ತಿ ಪಡೆದುಕೊಳ್ಳಬೇಕಾಯಿತು.
ಹೊಂದಾಣಿಕ ಸೂತ್ರದಂತೆ ಅಧ್ಯಕ್ಷ ಹುದ್ದೆ:  ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಎಂ.ಎಂ.ಜಗದೀಶ್, ಈ ಚುನಾವಣೆಯಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಯು ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ಪ್ರಕಾರ ನಾನು 6 ತಿಂಗಳ ಅವಧಿಗೆ ಅಧ್ಯಕ್ಷನಾಗಿರುವುದಾಗಿ ತಿಳಿಸಿದರಲ್ಲದೆ, ಮುಂದಿನ ಆರು ತಿಂಗಳನಂತರ  ಅಧ್ಯಕ್ಷ ಗಾಧಿಯನ್ನು  ಜೆ.ಡಿ.ಯು.ಗೆ ಬಿಟ್ಟುಕೊಡಲು ಸಿದ್ದ ಎಂದರು.
ಉಪಾಧ್ಯಕ್ಷೆ ಲತಾ ಕೇಶವಮೂತರ್ಿ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ರವರ ಸಹಕಾರದಿಂದ ನಾನು ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು ಎಂದ ಅವರು, ಈ ಮೂಲಕ ಕಾಡು ಗೊಲ್ಲ ಸಮಾಜದ ಮಹಿಳೆಯೊಬ್ಬಳು ಪ್ರಥಮ ಬಾರಿಗೆ ತಾ.ಪಂ. ಉಪಾಧ್ಯಕ್ಷರ ಹುದ್ದೆ ಅಲಂಕರಿಸಿದಂತಾಗಿದೆ ಎಂದರು.
ರಸ್ತೆಗಿಳಿದ ಜೆ.ಡಿ.ಎಸ್. ಸದಸ್ಯರು: ಬಿ.ಜೆ.ಪಿ. ಸದಸ್ಯರು ಮೋಸ ಮಾಡಿದ್ದಾರೆ, ಕೆ.ಎಸ್.ಕಿರಣ್ಕುಮಾರ್ ವಚನ ಭ್ರಷ್ಟರಾಗಿದ್ದಾರೆ ಎಂಬ ಘೋಷಣೆಗಳ ಮೂಲಕ ರಸ್ತೆಗಿಳಿದ ಜೆ.ಡಿ.ಎಸ್.ನ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಅವರ ಬೆಂಬಲಿಗರು ಐ.ಬಿ.ಮುಂಭಾಗದಲ್ಲಿ ರಸ್ತೆಗಿಳಿದು ಪ್ರತಿಭಟಿಸಲು ಮುಂದಾದರು, ಕಳೆದ ಅವಧಿಯಲ್ಲಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡ ಬಿ.ಜೆ.ಪಿ.ಯವರು  ಅಧ್ಯಕ್ಷರಾಗಿ ಮೆರೆದು, ಈಗ ನಮ್ಮ ಕಡೆಯವರು  ಅಧ್ಯಕ್ಷರಾಗುವ ಹಂತದಲ್ಲಿ ನಮ್ಮಿಂದ ದೂರವಾಗಿ ಜೆ.ಡಿ.ಯು ಸದಸ್ಯರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೆಲಕಲ ರಸ್ತೆ ಮಧ್ಯೆ ಕುಳಿತುಕೊಂಡರಾದರೂ ಪೊಲೀಸರ ಮಧ್ಯೆ ಪ್ರವೇಶದಿಂದ ಜೆ.ಡಿ.ಎಸ್.ನವರು ರಸ್ತೆಯನ್ನು ತೆರವುಗೊಳಿಸಿ ವಾಹನಗಳು ಓಡಾಡಲು ಅನವು ಮಾಡಿದರು.
ಹಲವು ಕುತೂಹಲಗಳನ್ನಿಟ್ಟುಕೊಂಡಿದ್ದ ಬಿ.ಜೆ.ಪಿ, ಜೆ.ಡಿ.ಎಸ್ ಹಾಗೂ ಜೆ.ಡಿ.ಯು ಪಕ್ಷದ ಬೆಂಬಲಿಗರು, ಭಾರಿ ಸಂಖ್ಯೆಯಲ್ಲಿ ತಾ.ಪಂ.ಯ ಸುತ್ತಾಮುತ್ತಾ ಸೇರಿದ್ದರು. ಹಲವು ಗೊಂದಲಗಳಿಗೆ ಕಾರಣವಾಗಿದ್ದ ಚುನಾವಣೆಯ ಫಲಿತಾಂಶವನ್ನು ತಿಳಿಯಲು ಸೇರಿದ್ದ ಜನರನ್ನು ಸಮರ್ಥರೀತಿಯಲ್ಲಿ ಹತೋಟಿಗೆ ತೆಗೆದುಕೊಂಡಿದ್ದ ಪೊಲೀಸರು,  ಶಾಂತರೀತಿಯಿಂದ ಚುನಾವಣೆ ನಡೆಯುವಂತೆ ನೋಡಿಕೊಂಡರಲ್ಲದೆ, ವಿಜಯೋತ್ಸವದ ಮೇರವಣಿಗೆಯನ್ನು ದಕ್ಷರೀತಿಯಲ್ಲಿ ನಿಭಾಯಿಸಿದರು.   

ಮಾತಿಗೆ ತಪ್ಪಿದ ಬಿ.ಜೆ.ಪಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಪಂಚಾಯಿತಿ ಚುನಾವಣೆಯ ಅಧಿಕಾರಕ್ಕಾಗಿ ತಾಲೂಕು ಬಿ.ಜೆ.ಪಿ. ಮಾತಿಗೆ ತಪ್ಪಿ, ವಚನ ಭ್ರಷ್ಟತನವನ್ನು ಪ್ರದಶರ್ಿಸುವ ಮೂಲಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ರವರು ಒಂದು ಸಮಾಜಕ್ಕೆ ಸೀಮಿತವೆಂಬುದನ್ನು ಪ್ರದಶರ್ಿಸಿದ್ದಾರೆ ಶಾಸಕ ಸಿ.ಬಿ.ಸುರೇಶ್ ಬಾಬು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ಜೆ.ಡಿ.ಎಸ್.ನೊಂದಿಗೆ ಒಪ್ಪಂದ ಮಾಡಿಕೊಂಡ ಬಿ.ಜೆ.ಪಿ.ಯವರು ಅವರು ಅಧ್ಯಕ್ಷ ಪದವಿ ಇಟ್ಟುಕೊಂಡು ನಮಗೆ ಉಪಾಧ್ಯಕ್ಷ ಪದವಿಯನ್ನು ಕೊಟ್ಟರು. ಬಿ.ಜೆ.ಪಿಯವರ ಒಪ್ಪಂದಂತೆ ಈ ಅವಧಿಯಲ್ಲಿ ಜೆ.ಡಿ.ಎಸ್.ಗೆ  ಅಧ್ಯಕ್ಷ ಪದ ವಿ ಕೊಡಬೇಕಾಗುತ್ತದೆ ಎಂಬ ಧೋರಣೆಯಿಂದ ಜೆ.ಡಿ.ಯು.ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮತ್ತೇ ಬಿ.ಜೆ.ಪಿ.ಯವರು ಅದರಲ್ಲೂ ಅವರ ಸಮಾಜದವರೇ ಅಧ್ಯಕ್ಷರಾಗುವಂತೆ ನೋಡಿಕೊಳ್ಳುವ ಮೂಲಕ ಬಿ.ಜೆ.ಪಿ.ಯವರ ಕೋಮುವಾದಿತನವನ್ನು ಮತ್ತೇ ಪ್ರದಶರ್ಿಸಿದ್ದಾರೆ, ಇದಕ್ಕೆ ಮುಂದಿನ ಚುನಾವಣೆಗಳಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಜನರೇ ಕಲಿಸಲಿದ್ದಾರೆ ಎಂದರು.
ತಾ.ಪಂ.ಚುನಾವಣೆ ಸಂಬಂಧ ಹಿಂದಿನ ಒಪ್ಪಂದದ ಬಗ್ಗೆ ನೆನಪಿಸಲು ನಾನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಅವರ ಮೊಬೈಲ್ನ ಸ್ವಿಚ್ ಆಫ್ ಮಾಡಿಕೊಳ್ಳುವ ಮೂಲಕ ತಮ್ಮ ಅಸಹಕಾರವನ್ನು ಪ್ರದಶರ್ಿಸಿದರು ಎಂದರು.
ಇನ್ನು ಮುಂದೆ ಜೆ.ಡಿ.ಎಸ್ ಯಾವುದೇ ಸಂದರ್ಭದಲ್ಲೂ ಬಿ.ಜೆ.ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟ ಪಡಿಸಿದ ಅವರು, ಈ ವಿಷಯವನ್ನು ನಮ್ಮ ಕಾರ್ಯಕರ್ತರು ಜನರ ಮುಂದಿಟ್ಟು ಮುಂದಿನ ಚುನಾವಣೆಗಳಿಗೆ ಹೋಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್.ನ ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, ಜೆ.ಡಿ.ಎಸ್.ಮುಖಂಡ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾ.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಅ.19 : ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ 15ವರ್ಷಗಳ ಕಾಲ ಹಾಗೂ ಕಾರ್ಯದಶರ್ಿಯಾಗಿ 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಎಂ.ನರಸಿಂಹಯ್ಯನವರು(86) ವಿಧಿವಶರಾಗಿದ್ದಾರೆ.
ಎಂ.ನರಸಿಂಹಯ್ಯನವರು ಬಿ.ಎ.ಪಧವೀದರರಾಗಿದ್ದು, ಇವರು ಶಿಕ್ಷಕ ವೃತ್ತಿಯನ್ನು ತಿಮ್ಮನಹಳ್ಳಿಯಿಂದ ಪ್ರಾರಂಭಿಸಿ, ಚಿಕ್ಕನಾಯಕನಹಳ್ಳಿ, ಕಿಬ್ಬನಹಳ್ಳಿಯಲ್ಲಿ ವೃತ್ತಿ ನಿರ್ವಹಿಸಿ ಚಿಕ್ಕನಾಯಕನಹಳ್ಳಿಯ ಕುರುಬರಶ್ರೇಣಿಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ನಂತರ ಚಿಕ್ಕನಾಯಕನಹಳ್ಳಿಯ ತಾಲ್ಲೂಕು ನಿವೃತ್ತಿ ಶಿಕ್ಷಕರ ಸಂಘದಲ್ಲಿ ಸೇವೆ ಸಲ್ಲಿಸಿ ಅವರ ಅವಧಿಯಲ್ಲಿ ಸಂಘಕ್ಕೆ ಕೆಳ ಮತ್ತು ಮೊದಲ ಅಂತಸ್ಥಿನ ಕಟ್ಟಡ ನಿಮರ್ಾಣ ಮಾಡಿದ್ದಾರೆ.
ಮೈಸೂರಿನಲ್ಲಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಲಾಗಿತ್ತು. ಇವರು ಕಳೆದ  ಹದಿನೈದು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಇವರು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಾದ ವಿಜ್ಞಾನ ಸಂಘದ ಅಧ್ಯಕ್ಷೆ ಹಾಗೂ ತೀರ್ಥಪುರ ಸಕರ್ಾರಿ ಕಾಲೇಜ್ನ ಪ್ರಾಚಾಯರ್ಾರಾದ  ಎನ್.ಇಂದಿರಮ್ಮ ನವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಕಂದಿಕೆರೆಯ ಅವರ ಜಮೀನಿನಲ್ಲಿ ಮಾಡಲಾಯಿತು.
ಪಾಥರ್ೀವ ಶರೀರಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಮುಷ್ಕರ
ಚಿಕ್ಕನಾಯಕನಹಳ್ಳಿ,ಅ.19 : ಖಾಯಮಾತಿ, ಕನಿಷ್ಟಕೂಲಿ, ಪಿಂಚಣಿ ಹಾಗೂ ಉಪಧನ(ಗ್ರಾಚ್ಯುಯಿಟಿ) ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿಯವರೆಗೆ ಹೊರಟ ಪ್ರತಿಭಟನಾ ಮೆರವಣಿಯಲ್ಲಿ ಅಂಗನವಾಡಿ ನೌಕರರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಬೊಮ್ಮಾಯ್ಯರವರಿಗೆ ಮನವಿ ಪತ್ರ ಸಲ್ಲಿಸಿದರು.
ಮಿನಿ ಅಂಗನವಾಡಿ ಕೇಂದ್ರದಲ್ಲಿರುವ ಕಾರ್ಯಕತರ್ೆಯರಿಗೂ ಮೈನ್ ಅಂಗನವಾಡಿ ಕಾರ್ಯಕತರ್ೆಯರ ಸೌಲಭ್ಯ ನೀಡಬೇಕು, ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಅಂಗನವಾಡಿ ಕಾರ್ಯಕತರ್ೆರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಲ ಕಿರುಕುಳ ನಿಲ್ಲಬೇಕು. ಗ್ರಾಮ ನೈರ್ಮಲ್ಯ ಸಮಿತಿಯಲ್ಲಿ ಆಶಾ ಕಾರ್ಯಕತರ್ೆ ಇಲ್ಲದ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಕಾರ್ಯದಶರ್ಿಯಾಗಿ ಸಮಿತಿ ನಡೆಸುತ್ತಿದ್ದು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಕಾರ್ಯಕತೆರ್ಯರಿಗೆ ಕಿರುಕುಳ ನೀಡುವುದು ತಪ್ಪಬೇಕು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರಿಗೆ ಕೊಟ್ಟಿರುವ ಸಮವಸ್ತ್ರ ಸರಿ ಇಲ್ಲದಿರುವುದರಿಂದ ಕ್ಷೇತ್ರ ಮಟ್ಟದ ಸಭೆ ಮತ್ತು ವೃತ್ತ ಮಟ್ಟದ ಸಭೆ ಹಾಕಬಾರೆಂದು ಅನುಮತಿ ನೀಡಬೇಖು, ಅಂಗನವಾಡಿ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಮುಜೀಬ್, ಅಧ್ಯಕ್ಷೆ ಪೂರ್ಣಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದಶರ್ಿ ಶಾರದ ಕೆ.ಜಿ, ಖಜಾಂಚಿ ಯಶೋಧ, ಸಾವಿತ್ರಮ್ಮ, ಲಕ್ಷ್ಮಮ್ಮ, ಸುನಂದ ಹಾಗೂ ಕಾರ್ಯಕತರ್ೆಯರು ಉಪಸ್ಥಿತರಿದ್ದರು.