Monday, May 24, 2010

ವಿದ್ಯುತ್ ಸ್ಪರ್ಶ: ಇಬ್ಬರ ಸಾವು


ಚಿಕ್ಕನಾಯಕನಹಳ್ಳಿ,ಮೇ.24: ದೇವಾಲಯವೊಂದರ ಕಾರ್ಯಕ್ರಮಕ್ಕೆ ವಿದ್ಯುತ್ ಬಲ್ಪ್ಗಳನ್ನು ಅಳವಡಿಸುತ್ತಿದ್ದಾಗ ವಿದ್ಯುತ್ ಪ್ರಸಾರವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆದಿದೆ.


ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸುಧಾಕರ್ ಹಾಗೂ ಹರೀಶ್ ಮೃತಪಟ್ಟ ದುದರ್ೆವಿಗಳು. ಇವರು ಸಬ್ಬೆನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೀರಿಯಲ್ ಸೆಟ್ ಬಿಡುವ ಕಾರ್ಯದಲ್ಲಿ ಮಗ್ನರಾಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಅರಸೀಕೆರೆಯಿಂದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರೆನ್ನಲಾಗಿದೆ.


ಈ ಸಂಬಂದ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

No comments:

Post a Comment