Friday, July 16, 2010


ಅಂತರ್ ರಾಷ್ಟ್ರೀಯ ಬಾಂಧವ್ಯ ಬೆಸೆಯುವಲ್ಲಿ ರೋಟರಿ ಪಾತ್ರ ಮಹತ್ವದ್ದು

ಚಿಕ್ಕನಾಯಕನಹಳ್ಳಿ,ಜು.15: ಸಮಾಜವನ್ನು ಕಟ್ಟುವ ಹಾಗೂ ದೇಶ ವಿದೇಶಗಳ ನಡುವೆ ಉತ್ತಮ ಬಾಂದವ್ಯ ಬೆಸೆಯುವಲ್ಲಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಗವನರ್್ರ್ ಎಚ್.ಕೆ.ವಿ.ರೆಡ್ಡಿ ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಸ್ವೀಕಾರ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಸಂಸ್ಥೆಯ ಸೇವಾ ವ್ಯಾಪ್ತಿಯು ವಿಶಾಲವಾಗಿದ್ದು, ಅತ್ಯಂತ ಬಡವರ ಬಳಿಗೆ ಬಂದಾಗ ಸಮಾಜಕಟ್ಟುವ ಕೆಲಸಕ್ಕೆ ಪ್ರೋತ್ಸಾಹಕರವಾಗಿರಬೇಕು ಎಂದರು ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದವರಿಗೆ ನೆರವಾಗುವುದು ಸಂಸ್ಥೆಯ ಧ್ಯೇಯ ಎಂದರಲ್ಲದೆ, ಈ ಕಾರ್ಯದಿಂದ ಸದಸ್ಯರ ಗೌರವವು ಹಿಮ್ಮಡಿಯಾಗಲಿದೆ ಎಂದರು. ಮಕ್ಕಳ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮತ್ತು ಪಲ್ಸ್ಪೋಲಿಯೋ ಕಾರ್ಯದಲ್ಲಿ ರೋಟರಿ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರು.

ನಮ್ಮ ಸಂಸ್ಥೆಯು ವಿಶ್ವದ ಬಹುತೇಕ ದೇಶಗಳಲ್ಲಿ ಈ ಸೇವೆಯನ್ನು ನಡೆಸುವ ಮೂಲಕ ಇದು ಅಂತರಾಷ್ಟ್ರೀಯ ಬಾಂದವ್ಯ ವೃದ್ದಿಗೆ ಸಹಕಾರಿ ಎಂದರು, ಉಳ್ಳವರು ತಮ್ಮ ಸಂಪಾದನೆಯಲ್ಲಿ ಸ್ವಲ್ಪಭಾಗ ಸಾಮಾಜಿಕ ಸೇವೆಗೆ ಮುಡುಪಾಗಿಟ್ಟರೆ ಸಮಾಜವು ಆಥರ್ಿಕವಾಗಿ ಮುಂದುವರಿಯಲಿದೆ ಎಂದರು.

ಜಿಲ್ಲಾ ಅಸಿಸ್ಟೆಂಟ್ ಗವನರ್್ರ್ ಸಿ.ಎನ್.ವೆಂಕಟರೆಡ್ಡಿ 'ನಾಯಕ' ಸಂದೇಶ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂತಹ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು ತಹಶೀಲ್ದಾರ್ ಟಿ.ಸಿ.ಕಾಂತರಾಜು 20ಮಂದಿ ರೈತರಿಗೆ ಸಾವಯುವ ಗೊಬ್ಬರ ಔಷಧಿ ಮತ್ತು ಪರಿಕರಗಳನ್ನು ವಿತರಿಸಿದರು ಮತ್ತು ಎಂ.ವಿ.ನಾಗರಾಜ್ರಾವ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಗ್ರಂಥ ಬಂಡಾರಕ್ಕೆ ಪುಸ್ತಕಗಳನ್ನು ದಾನವಾಗಿ ನೀಡಿದರು.

ಸಮಾರಂಭದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕಾರ್ಯದಶರ್ಿ ಅಶ್ವತ್ಥ್ನಾರಾಯಣ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ರೋಟರಿ ಸಂಸ್ಥೆ ಸದಸ್ಯ ಕೆ.ವಿ.ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಂ.ವಿ.ನಾಗರಾಜ್ರಾವ್ ಸ್ವಾಗತಿಸಿ, ಪರಮೇಶ್ ನಿರೂಪಿಸಿ ಭುವನಸುಂದರ್ ವಂದಿಸಿದರು.


No comments:

Post a Comment