Friday, July 16, 2010

ಟೈಗರ್ ಸೊಳ್ಳೆಯಿಂದ ಡೆಂಗ್ಯೂ ಜ್ವರ, ಸೊಳ್ಳೆನಿಯಂತ್ರಣಕ್ಕೆ ಮುಂದಾಗಿ: ಟಿ.ಎಚ್.ಓ.
ಚಿಕ್ಕನಾಯಕನಹಳ್ಳಿ,ಜು.16: ಜ್ವರ ಕಾಣಿಸಕೊಂಡ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು, ಡೆಂಗ್ಯೂಗೆ ಟೈಗರ್ ಮಸ್ಕಿಟೊ ಎಂಬ ಸೊಳ್ಳ ಕಾರಣವಾಗಿದ್ದು ಸೊಳ್ಳೆಯನ್ನು ನಿಂಯತ್ರಿಸಲು ಜನರು ಮುಂದಾಗಬೇಕೆಂದು ಡಾ.ಶಿವಕುಮಾರ್ ಮನವಿ ಮಾಡಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕೆ.ಸಿ.ಪಾಳ್ಯದಲ್ಲಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದರು, 1950ರಿಂದಲೇ ಡೆಂಗ್ಯೂ ಜ್ವರ ಕಾಣಿಸಿದ್ದು ಇದೇನು ಹೊಸರೋಗವಲ್ಲ, ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅನೈರ್ಮಲ್ಯ ಕೂಡ ಹೆಚ್ಚಾಗಿ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾ.ಪಂ.ಗಳು ಹೆಚ್ಚು ಗಮನ ಹರಿಸಬೇಕೆಂದರಲ್ಲದೆ, ಜೂನ್ ತಿಂಗಳಿಂದ ಮಳೆ ಆರಂಭವಾದ್ದರಿಂದ ಗುಂಡಿ ಗೊಟರುಗಳಲ್ಲಿ ಮಳೆ ನಿಂತು ಸೊಳ್ಳೆ ಉತ್ಪದನಾ ಕೇಂದ್ರವಾಗಿವೆ ಎಂದರು. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಮಾಸಾಚರಣೆ ಮೂಡುವ ಮೂಲಕ ಜನರಲ್ಲಿ ಸೊಳ್ಳೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ನಿಯಂತ್ರಿಸಬಹುದು, ತಾಲೂಕಿನಲ್ಲಿ ಈಗಾಗಲೇ ಮಲೇರಿಯಾ ಕಂಡು ಬಂದಂತ ಪ್ರದೇಶಗಳಲ್ಲಿ ಅಗತ್ಯ ಎಂದು ಕಂಡುಬಂದ ಪ್ರದೇಶದಲ್ಲಿ ಸೊಳ್ಳೆ ನಿರೋಧಕ ವಿಧಾನ ಮಾಡಲು ಫಾಗಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ತಾಲೂಕಿನ 25,059ಮಂದಿ ರಕ್ತ ಪರೀಕ್ಷೆಗೊಳಪಡಿಸಿದ್ದು ಇವುಗಳಲ್ಲಿ ಸಾಕಷ್ಟು ಜನರಿಗೆ ಮಲೇರಿಯ ಕಾಣಿಸಿಕೊಂಡಿದೆ ಎಂದರು.
ಚಿಕನ್ಗುನ್ಯಾ ಮಲೇರಿಯಾ ಡಂಗ್ಯೂ ನಿಯಂತ್ರಿಸಬೇಕಾದರೆ ಸ್ವಯಂ ಘೋಷಿತರಾಗಿ ಗ್ರಾಮಗಳ ಸ್ಚಚ್ಛತೆ ಮದ್ದು ಎಂದರು. ಡೆಂಗ್ಯೂ ಜ್ವರ ಮೂರು ಹಂತದಲ್ಲಿ ಜನರನ್ನು ಆಕ್ರಮಿಸಿಕೊಳ್ಳುವುದು, ಮೊದಲ ಹಂತದಲ್ಲಿರುವ ಜ್ವರವನ್ನು ನಿಯಂತ್ರಿಸಬಹುದು, ಆದರೆ ಎರಡು ಮತ್ತು ಮೂರನೇ ಹಂತಕ್ಕೆ ತಲುಪಿದ ಡೆಂಗ್ಯೂ ಜ್ವರಕ್ಕೆ ಯಾವುದೇ ತರಹದ ಚಿಕಿತ್ಸೆ ಇಲ್ಲ ಎಂದರು.
ಯಾವದೇ ವ್ಯಕ್ತಿಗೆ ವೈರಾಣುದಾಳಿಯಿಂದ ಜ್ವರ ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು ಆದ ನಂತರವೇ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜ್ವರ 15ದಿನಗಳಿಂದ ಇದ್ದರೆ ಡೆಂಗ್ಯೂ ಎಂದು ಭಾವಿಸಬಹುದು ಎಂದರು.
ಟೈಗರ್ ಮಸ್ಕಿಟೋ ಎಂಬ ಆರೋಗ್ಯವಂತ ವ್ಯಕ್ತಿಯಮೇಲೆ ಸೋಂಕಿತವ್ಯಕ್ತಿಗೆ 2 ಮತ್ತು 3 ಬಾರಿ ದಾಳಿ ನಡೆಸಿ ಕಚ್ಚಿದಾಗ ಡಂಗ್ಯೂ ತೀವ್ರತರಕ್ಕೆ ಹೋಗಿ ವ್ಯಕ್ತಿ ಸಾಯುತ್ತಾನೆ ಎಂದರು.
ಇ.ಓ ಡಾ.ವೇದಮೂತರ್ಿ ಮಾತನಾಡಿ ಕೆ.ಸಿ ಪಾಳ್ಯಕ್ಕೆ ಭೇಟಿ ನೀಡಿ ಅಲ್ಲಿ ಜನತೆ ಚರಂಡಿಗಳನ್ನು ಕಸದ ತೊಟ್ಟಿಗಳಂತಿದ್ದು ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಸಿ ಎಲ್ಲಾ ಗ್ರಾಮದ ಸ್ವಚ್ಛತೆಗೆ ಆದೇಶಿಸಿದ್ದೇವೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು.
ಪಡಿತರ ಕಾಡರ್್ ಪಡೆಯಲು ಸೂಚನೆ
ಚಿಕ್ಕನಾಯಕನಹಳ್ಳಿ,ಜು.15: ಪಡಿತರ ಚೀಟಿದಾರರು ಹಳೆಯ ಪಡಿತರ ಚೀಟಿ ವಾಪಸ್ಸು ನೀಡಿ 15ರೂ ಪಾವತಿಸಿ ಹೊಸದಾದ ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಮೊದಲು ವಿತರಣೆ ಮಾಡಿದ್ದ ಪಡಿತರ ಚೀಟಿಗಳನ್ನು ನೀಡಿ ಉಳಿದಿರುವ ಶಾಶ್ವತ ಪಡಿತರ ಚೀಟಿಗಳು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದಶರ್ಿಸಲಾಗಿದ್ದು ಪಟ್ಟಿಯಲ್ಲಿರುವ ಕಾಡರ್ುಗಳನ್ನು ಜುಲೈ 15ರಿಂದ ತಾಲೂಕು ಕಛೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ಕುಸ್ತಿ ಪಂದ್ಯ
ಚಿಕ್ಕನಾಯಕನಹಳ್ಳಿ,ಜು.15: ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ಮಾರುತಿ ಗರಡಿ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪದರ್ೆಯನ್ನು ಇದೇ ಜುಲೈ 24ರ ಶನಿವಾರ ಏರ್ಪಡಿಸಲಾಗಿದೆ.
ಸ್ಪಧರ್ೆಯನ್ನು ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಮಧ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ಸ್ಪಧರ್ೆಯ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ರೀಡಾ ಮತ್ತು ಜವಳಿ ಸಚಿವ ಗೂಳಿಹಟ್ಟಿಶೇಖರ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಆಗಮಿಸಲಿದ್ದು, ಭೈರವ ಮಿನರಲ್ಸ್ ಮಾಲೀಕ ಸಿ.ಡಿ.ಸುರೇಶ್, ಮಾಜಿ.ಗ್ರಾ.ಪಂ ಅಧ್ಯಕ್ಷ ಹೆಚ್.ಬಿ.ಪಂಚಾಕ್ಷರಿ, ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಬಸ್ ಏಜೆಂಟ್ ವಸಂತ ಕುಮಾರ್, ಎಸ್.ಡಿ.ದಿಲೀಪ್ಕುಮಾರ್, ಚಂದ್ರಶೇಖರ್ ಗುಪ್ತ ಸ್ಪಧರ್ಿಗಳಿಗೆ ಬಹುಮಾನ ವಿತರಿಸಲಿದ್ದಾರೆ.

No comments:

Post a Comment